Kannada Poems
Deprecated: Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ರೆಕ್ಕೆ ಕಟ್ಟಿ ಬಾನೆತ್ತರಕ್ಕೆ ಹಾರಿದ್ದೆ ಅಂದು
ರೆಕ್ಕೆ ಮುರಿದು ಕೂತಿಹೆ ನಾನಿಂದು
ನನಸಾಗದೇ ನನ್ನಲ್ಲೇ ಉಳಿದಿದೆ ಕನಸೊಂದು
ಒಡೆದೋಗುತಿದೆ ಕನಸ್ಸು
ಜವಾಬ್ದಾರಿಯು ಹೆಗಲೇರಿ
ಧೈರ್ಯ ಮಾಡುತಿಲ್ಲ ಮನಸ್ಸು
ಕಾಲು ಚಾಚಲು ಹಾಸಿಗೆ ಮೀರಿ
✍? ಯಕ್ಷ
- pavan
18 Jan 2025, 10:16 am
"ಕೊಟ್ಟಾದರು ಕೋಡು ಶಿವನೇ..
ಅವಳ ಸೂಚನೆಯೆನ್ನೆ.!
ಎಷ್ಟು ಕಾಯೋದು ನಾ_ಅವಳನ್ನ.!
ಇನ್ನೆಷ್ಟು ಪರೀಕ್ಷೆ ಮಾಡ್ತಿಯಪ್ಪ..
ನನ್ನ ತಾಳ್ಮೆಯನ್ನ.!
ಆದಷ್ಟು ಬೇಗನೆ ಕರಣಿಸೋ ಶಿವನೇ..
ನನ್ನವಳನ್ನ.!
ಅವಳಿಗೂ ತಿಳಿಸೋ ಶಿವನೇ..
ನಾ_ಅವಳ ಆಗಮನವ
ನಿರೀಕ್ಷಿಸುತ್ತಿರುವುದನ್ನ.!!"
ಎಮ್.ಎಸ್.ಭೋವಿ...✍️
.
.
.
.
.
.
- mani_s_bhovi
18 Jan 2025, 12:07 am
ಅಡಿ ಇಡಲು ನೀ ಚುಂಬಿಸುವುದು ಭೂತಾಯ ಮಡಿಲು
ನಗುತಾ ನನ್ನೆಡೆ ಬರುತಿರೆ ನಾಚುವುದು ಬೆಳ್ಮುಗಿಲು
ಕೋಪದಲ್ಲಿರೇ ನೀ ಕಾರ್ಮೋಡ ಸೀಳುವ ಬೆಂಕಿ ಸಿಡಿಲು
ಮೌನ ಮಾತಾಗಲು ಸದಾ ಭೋರ್ಗರೆವ ನೀಲಿ ಕಡಲು
✍? ಯಕ್ಷ
- pavan
17 Jan 2025, 08:01 pm
ಹೊತ್ತಾಗಲು ಕಾಫಿ ಹೀರಿ
ಮತ್ತೆ ಕೆಲಸ ಮಾಡಲು ಮತ್ತೇರಿ
ಕೆಳಗಿಳಿಸಲು ಜವಾಬ್ದಾರಿ
ದುಡಿವುದಾಗಿದೆ ದಿನಚರಿ
✍? ಯಕ್ಷ
- pavan
17 Jan 2025, 10:09 am
ಎತ್ತ ಸಾಗುತ್ತಿದೆ ಈ ಯಂತ್ರದ ಜೀವನ
ಕೋನೆಯಾಗುತ್ತಿದೆ ಸುಖಕರ ಪಯನ
ಚಿಕ್ಕಮಕ್ಕಳಲ್ಲಿ ಹೆಚ್ಚುತ್ತಿದೆ ಮೊಬೈಲ್ ಗೀಳು
ಕೇಳುವರಿಲ್ಲ ತಂದೆ ತಾಯಿಗಳ ಗೋಳು
ಯುವಕರು ದಾಸರಾಗಿದ್ದಾರೆ ಪಬ್ಬು
ಡಾನ್ಸ್ ಗಳಿಗೆ
ಅಟೆಂಡೆನ್ಸ ಕಡಿಮೆಯಾಗುತ್ತಿದೆ ಕಾಲೇಜುಕ್ಲಾಸಗಳಿಗೆ
ಎಲ್ಲೆಲ್ಲೂ ತಾಂಡವಾಡುತ್ತೀದೆ ಹಿಂಸೆ
ಪುಸ್ತಕದಲ್ಲಿ ಮಾತ್ರ ಉಳಿದಿದೆ ಅಹಿಂಸೆ
ಪರಿಸರದಲ್ಲಿ ಹೆಚ್ಚುತ್ತಿದೆ ಕಾಡ್ಗಿಚ್ಚು
ಮನುಷ್ಯರಲ್ಲಿ ಕಡಿಮೆಯಾಗುತ್ತಿದೆ ಬಾಂಧವ್ಯದ ಕಿಚ್ಚು
ಅಂತ್ಯದ ಹತ್ತಿರವಾಗುತ್ತಿದೆ ಯುಗದ ಪಯನ
ಸಾಕಾರಗೊಳಿಸಿ ಈ ಸಂತೋಷದ ಜೀವನ
ವಿಶಾಲಾ ಮಂಜುನಾಥ
- laxmi
16 Jan 2025, 11:15 pm
ಬತ್ತಿದ ಭಾವಕೆ ಕೊಳಲ ನಾದವಾದೆ,
ಔಷಧಿ ಇರದ ಗಾಯಕ್ಕೆ ಮುತ್ತಿನ ಹನಿಯಾದೆ.
ಉದರದ ಕಿಚ್ಚಿಗೆ ತುಂತುರು ಮಳೆಯಾದವನೆ,
ಅಮ್ಮನ ಕರುಳ ದನಿ ನೀನೇ ಮಗನೆ.
ಬಡತನದ ಸೂರಿಗೆ ಬಂದ ಚಂದ್ರನೇ ಬಹುಮಾನ,
ದುಃಖವ ಮರೆಸುತ್ತಿತ್ತು ನಿನ್ನ ಕಿಲಕಿಲ ನಗೆಯ ನರ್ತನ.
ಸೋರುವ ಕುಂಭದಂತೆ ನಿಲ್ಲದ ಕಷ್ಟಗಳು,
ಕರುಳ ಬಳ್ಳಿಯನಗಲಿಸಿದವು ಆ ದಿನಗಳು.
ಬಿಡುಗಾಸಿರದ ಸಮಯದಲ್ಲಿ ಬೆಳೆದಿರುವಿರಿ ನೀವ್,
ನೆರೆಹೊರೆಯವರ ಪ್ರೀತಿಯ ಆಶ್ರಯದಲ್ಲಿ.
ಪೋಷಿಸಿರುವೆ ಕಂದಮ್ಮ ಹಸಿವಿದ್ದರೂ ಕೈಚಾಚದೆ,
ನೀವ್, ಸಾಧಿಸುವ ಛಲದಿ ಸಾಗಬೇಕು ಸ್ವಾಭಿಮಾನ ಬಿಡದೆ.
ದಿಟ್ಟ ನೋಟವು ಪ್ರಾರ್ಥಿಸುವ ಮಗು ನೀನಾಗು,
ಮುಪ್ಪಾದವರ ಸಲಹೋ ಸರದಾರನಾಗು.
ನ್ಯಾಯ ಮಾರ್ಗದಿ ನಡೆದು ನಿಸ್ವಾರ್ಥಿಯಾಗು,
ದುರ್ಗುಣಗಳ ದೂರವಿಟ್ಟು ನೃಪತುಂಗನಾಗು.
ಧನ ಕನಕಾದಿಗಳ ಅಧಿಪತಿಯಾದರು ನೀ ಮಾನವನಾಗಿರು,
ಸದಾ ಸಹಕರಿಸಿ ಹಾರೈಸಿದವರ ಮರೆಯದಿರು.
ಸೌರಭದ ಸುಮದಂತೆ ಸೂಕ್ಷ್ಮವಾಗಿರು ಕಂದ,
ನಿನ್ನ ಬಾಳ ಪಯಣದ ಸುಪ್ರಭಾತವೆ ಕೊಡುವುದು ನನಗೆ ಆನಂದ.
- nagamani Kanaka
14 Jan 2025, 09:16 pm
ಉತ್ತರಾಯನದ ಮಕರ ರಾಶಿಗೆ ಪ್ರವೇಶಿಸುವ ಭಾಸ್ಕರ,
ಕೊರೆಯುವ ಚಳಿಯ ಮಾಯ ಮಾಡಿ ಪೊರೆಯುವನು ನೇಸರ.
ಸತ್ಕಾರ್ಯಗಳಿಗೆ ಶುಭ ಮುಹೂರ್ತ ಕಾಲವಿದು,
ದವಸ ಧಾನ್ಯಗಳ ರೈತ ಮನೆಗೆ ಸ್ವಾಗತಿಸಿ ಸಂಭ್ರಮಿಸುವ ಹಬ್ಬವಿದು.
ವಿವಿಧ ಹೆಸರುಗಳಿಂದ ಆಚರಿಸುವರು ಸಂಕ್ರಮಣವನ್ನ,
ದನಕರುಗಳ ಸಿಂಗರಿಸಿ ಸೌಹಾರ್ದದಿ ಆಯೋಜಿಸುವರು ಸ್ಪರ್ಧೆಗಳನ್ನ.
ನಾರಿಯರು ಮನೆ ಮನೆಗೆ ಹಂಚುವರು ಎಳ್ಳು ಬೆಲ್ಲ,
ವಿನಿಮಯದ ಹಾರೈಕೆಗಳಿಂದ ತಿಳಿಗೊಳವಾಗುವುದು ಮನವೆಲ್ಲ.
ಕಬ್ಬಿನ ರಸದಂತಿದ್ದರೆ ಎಲ್ಲರ ಮನಸ್ಸು,
ಶರದಂತೆ ಬರುವ ಸಿಹಿ ನುಡಿಗಳದ್ದೇ ಸೊಗಸು.
ಗುಸುಗುಟ್ಟಲಿ ಪುರಾಣ ಕಥೆಗಳ ಸಾರ ಹೃದಯದಲ್ಲಿ,
ಉತ್ತರಾಯನದ ಪುಣ್ಯವೆಲ್ಲ ಸರ್ವರಿಗೂ ಲಭಿಸಲಿ.
ರಚನೆ ಶ್ರೀಮತಿ ನಾಗಮಣಿ h b
GHPS Dharmapur.
- nagamani Kanaka
14 Jan 2025, 08:43 am
ಕುವೆಂಪು ಯಂತೆ ಪ್ರೀತಿಸುವೆ
ನೀ ಪ್ರೀತಿಸು...
ಬೇಂದ್ರೆ ಯಂತೇ ಬಣ್ಣಿಸುವೆ
ಒಲವ ಬಾವಿಸು...
ಮಾಸ್ತಿಯಂತೆ ಆಸ್ತಿ ಇಟ್ಟಿರುವೆ
ನೀ ಮನ್ನಿಸು...
ಕನ್ನಡಕ್ಕಿನ್ನೊಂದು ಜ್ಞಾನಪಿಠ ತರುವೆ
ಜೊತೆ ಜೀವಿಸು...!!
ಎಮ್.ಎಸ್.ಭೋವಿ...✍️
.
.
.
.
.
.
.
.
.
.
- mani_s_bhovi
14 Jan 2025, 12:31 am
ಸೀರೆ ಉಟ್ಟು ಬರಬೇಡ
ಹುಡುಗಿ ನೀ ಹೋರಗೆ...
ಕಂಡು ನನ್ನ ಹೃದಯ ಜಾರಿಬಿದ್ದಾತು
ನಿನ್ನ ಸೆರಗ ಒಳಗೆ...
ನಮ್ಮವ್ವ ಅಂತಾಳೆ,
ಜಾರದಿರು ಯಾವ ಹೂವಿಗೆ...
ಗೊತ್ತಿಲ್ಲ ಕೊನೆಗೆ,
ಆ ಹೂವು ಯಾರ ಮುಡಿಗೆ...
ಎಮ್.ಎಸ್.ಭೋವಿ...✍️
.
.
.
.
.
.
- mani_s_bhovi
14 Jan 2025, 12:00 am
ಕಣ್ಮರೆಯಲ್ಲಿ ಕೈ ಹಿಡಿದವರು,
ಬೆನ್ನೆಲುಬಾಗಿ ನಿಂತು ಸಲಹಿದರೂ.
ಸದ್ಗುಣಗಳ ಐಸಿರಿಗೆ ಸೋತು,
ಮಾತಿನ ಮಾಧುರ್ಯಕ್ಕೆ ಮನ ಒಂದಾಯಿತು.
ವಾತ್ಸಲ್ಯದ ಸೆಳೆತ,
ಹೆಚ್ಚಿಸುವುದು ಹೃದಯ ಬಡಿತ.
ಕಣ್ಣಂಚ ನೀರು,
ನೆನಪುಗಳೊಳಗೆ ಸುರಿಯುವ ಪನ್ನೀರು.
ಕರುಳೊಳಗೆ ಕರಗಿರುವ ಕವಿಯೂ,
ಒಡಲ ತಾಪದಿ ಹೊರಹೊಮ್ಮುವ ಹೊಗೆಯು.
ಆರ್ಭಟಿಸೋ ಅಂತರಾಳದ ಸ್ನೇಹ,
ಕೇಳದೆ ಕೊಡುವುದು ವಿರಹ.
ಸಮತೆ ಇರದೆ ಕೂಡಿದ ನಂಟು,
ಬಿಡಿಸುವುದು ಬಾಂಧವ್ಯದ ಗಂಟು.
ಹಸುಳೆಯಂತೆ ಚಿಗುರೋಡೆದ ಪ್ರೀತಿ,
ಮರವಾಗಿ ಬಿರಿಯುವುದೆಂಬ ಭೀತಿ.
ವಾಸ್ತವಕ್ಕೆ ಸಿಲುಕದ ವಿಷಯ,
ಸ್ತುತಿಸುವ ನೋವಿಗೆ ಹೇಳದು ವಿದಾಯ.
ನಮ್ಮವರೊಂದಿಗೆ ಇರಲಾಗದ ಕ್ಷಣ,
ಜಿಗಣೆಯಂತೆ ನರಳಿಸುವುದು ಪ್ರತಿದಿನ.
ಅವರಿಗೆ ಇರದ ಕನವರಿಕೆ,
ನಮ್ಮೆದೆಯ ಚಿವುಟುವುದು ಏಕೆ?
ಸಂತಸದ ಹೊನಲು ಮರೆಯಾದಾಗ,
ಪುಟಿಯದು ಪ್ರೀತಿಯ ಅನುರಾಗ.
ಕೋಟಿ ಜನರ ಮಧ್ಯೆಯೂ ಸಿಕ್ಕರೆ ಒಲವು,
ಆಗ ಕಾಣಬಹುದು ಮಂದಹಾಸದ ಚೆಲುವು.
- nagamani Kanaka
13 Jan 2025, 07:44 am