ನೀನೆಂದರೆ ಆಸೆಯಲ್ಲ..ಆಕರ್ಷಣೆಯೂ ಅಲ್ಲ. ನೀನೆಂದರೆ ಮೋಹವಲ್ಲ..ವ್ಯಾಮೋಹವೂ ಇಲ್ಲ ನೀನೆಂದರೆ ಮನದಲ್ಲಿ ಮೂಡಿದ ಮಧುರ ಭಾವನೆ ಆತ್ಮದಲ್ಲಿ ಒಂದಾದ ದಿವ್ಯ ಕಲ್ಪನೆ
ಪಡೆಯುವ ಹಂಬಲವಿಲ್ಲ..ಕಳೆದು ಕೊಳ್ಳುವ ಭಯವಿಲ್ಲ..
ಆದರೂ ಹೊಳಪ್ಪಿಲ್ಲದ ಬೆಳಕಾಯಿತು ..
ನಿರಾಸೆಗು ಚಿಗುರಾಯಿತು ...
ಹಣತೆ ಹಚ್ಚಬೇಕೆಂದು ಕೊಂಡೆ
ಹುಡುಕಾಡಿದೆ ಮನೆಯ ತುಂಬೆಲ್ಲಾ
ಪರಿಕರಗಳು ಬೇಕಾದವು ಒಂದೇ? ಎರಡೇ?
ಕತ್ತಲಿಲ್ಲದೆ ಬೆಳಕಿಗೆ ಮಹತ್ವವಿಲ್ಲ;
ಮನದೊಳ ಅಂಕಣದಲ್ಲಿ
ನೂರು ದೀಪಗಳ ಬೆಳಕಿದೆ
ಆದರೂ ನಿನ್ನ ಒಂದು ಬಯಕೆ ......
ತೋಟದಲ್ಲಿನ ಹಕ್ಕಿ ಬಾರದ ಮರವಾದ ಜೀವಕೆ
ನಿನ್ನ ಒಂದು ಸ್ಪರ್ಶ ಸ್ಪೂರ್ತಿ ಆಯಿತು ...
ಅಂದು ಕನಸು ಕಂಡೆ ನಾ .... ಇಂದು ನನಸಾಗಬಹುದೆಂಬ ಆಸೆ ಹೊತ್ತು
ನಾ ಅರಿಯದಾದೇ ಆ ಕನಸು ಇಂದು ಆಗದೇ ಹೋಗುವ ನೀರಾಸೇ ಹುಟ್ಟಿಸುತ್ತದೆ ಎಂದು...
ಅದಂತು ನೀಜ ಅಂದು ಕಂಡ ಕನಸು ಅಂದು ನೀರಿಕ್ಷೆಗೂ ಮೀರಿದ ಖುಷಿ ಕೊಟ್ಟು ಬದುಕುವ ಆಸೇ ಹುಟ್ಟಿಸಿತು ಆ ದಿನ ನಾ ಕಂಡ ಕನಸು. ......
ಅಂಬರದಲ್ಲಿನ ನೇಸರ ನೀನು
ಆ ನೇಸರನ ಬರುವುವಿಕೆ ಕಾದು ಕುಳಿತ ಕಲ್ಪವೃಕ್ಷ ನಾನು ..
ನೀ ಬಂದು ಹೋದರು ಮತ್ತೆ ಮರಳಿ ಬರುವೆ ಹೊಸ ಚೇತನವಾಗಿ ನೀನು ....
ಆ ಚೇತನದ ಚಿಲುಮೆ ನಾನಾಗುವಆಸೆ..
ನಿನ್ನ ನೆನಪೆ ಬದುಕಲು ಬಯಕೆ
ತಿನ್ನಲಾಗದ ಹಣ್ಣು ನೀನು
ನೋಡಿದರೂ ಮುಟ್ಟಲಾಗದ ಹೂವು ನೀನು
ಆಗದ.. ಹೋಗದ... ನೆನಪಾದೆ ನೀನು..
ಆದರೂ ನನ್ನವನು ನೀನು..
ಆಕಾಶ ಭೂಮಿಗೆ ಹೋಲಿಸಲು
ಕವಿ ನಾನಲ್ಲ..
ಕವಿಯಾಗಲು ನಿನಗೆ ಸರಿ ಹೊಂದುವ
ಪದಗಳೇ ಇಲ್ಲ..
ನನ್ನ ಬಾಳಿನ ದೇವತೆ
ನೀನಾಗಿರಲು ಕವಿಯ ಬದಲು
ಓದುವ ಪ್ರೇಮಿಯಾಗಿದ್ದೇನೆ...
ಎಮ್.ಎಸ್.ಭೋವಿ...✍️
.
.
.
.
.
.
.
.
.
.
.