Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಕಳ್ಳಕಾಕರು ಅಪರಿಚಿತರಿಗೆ
ಸಿಂಹಸ್ವಪ್ನ ......ನಾಯಿ!
ಸ್ವಾಮಿನಿಷ್ಠೆ ನಿಯತ್ತಗೆ
ಹೆಸರುವಾಸಿ.....ನಾಯಿ!
ಮನೆಕಾಯಲು ಸುತ್ತಮುತ್ತ
ಕಾವಲುಗಾರ.....ನಾಯಿ!
ಸಾಕಿ ಸಲಹುವ ಮಾಲಕನಿಗೆ
ನೆರವಾಗುವ.....ನಾಯಿ!
ಕೊಲೆ ಸುಲಿಗೆ ದರೋಡೆಗಳಿಗೆ
ಪತ್ತೇದಾರಿ.....ನಾಯಿ!
ಉಂಡಮನೆಗೆ ಕನ್ನಹಾಕುವ
ಮನುವಿಗೆ ಮಾದರಿ.....ನಾಯಿ!
ಹಾಗಾದರೆ..... ಬನ್ನಿ ಆಚರಿಸೋಣ
Work like a DOG DAY, "
- santoshBP
05 Aug 2015, 12:34 pm
ಮನಸೆಂಬ ಕನಸಿನಲಿ
ಕನಸುಕಂಡು
ಮನದಲ್ಲೇ ಕನಸಾದ
ನನ್ನ ಕನಸುಗಾತಿ ನೀನೆ
ನನ್ನ ಕನಸಿನ ಗೆಳತಿ ...
- madhu cb swamy
05 Aug 2015, 11:50 am
ಒಂಭತ್ತು ತಿಂಗಳು ಹೊತ್ತಿರುವೆ
ಹೆತ್ತು ಸಾಕಿ ಸಲಹುವೆ
ಕೆಲಸದ ಒತ್ತಡಗಳ ನಡುವೆ
ಸ್ತನ್ಯಪಾನ ಕನಿಕರಿಸುವೆ//
ಬರೀ ಹಾಲಲ್ಲ ಅಮ್ೃ್್ತವುಾ
ನಿನ್ನ ಎದೆಯಾಳದ ಜೀವವು
ನಿಸ್ವಾರ್ಥದಿಂದ ನೀ ಕೊಡುವೆ
ನವಜಾತ ಶಿಶು ನಾ ಕುಡಿವೆ//
ಹೊಟ್ಟೆ ತುಂಬಿಸಲು ಹಾತೊರೆವೆ
ರೋಗನಿರೋಧಕ ಶಕ್ತಿ ತುಂಬಿವೆ
ನಿಸ್ವಾರ್ಥ. ಮಾತಾಯಿ ನೀನು
ಸ್ತನ್ಯಪಾನ ಪಡೆದ ನಾ ಧನ್ಯ//
ಊಟ ಬಟ್ಟೆಗಾಗಿ ನಿರಂತರ ಕಲಹ
ಬಂದಿದೆ ಸ್ತನ್ಯಪಾನ ಸಪ್ತಾಹ
ಅಮ್ಮ ಉಣ್ಣಿಸು ಎದೆಹಾಲು
ನಮಿಸುವೆ ಸ್ಪರ್ಶಸಿ ಕೈಕಾಲು
- santoshBP
05 Aug 2015, 03:07 am
ಸ್ನೇಹಿತರ ಸಂಕೋಲೆ , ಬಿಡಿಸಲಾರದ ಅನುಬಂಧ
ಹಣದ ಅಹಂಕಾರವಿಲ್ಲ
ಗುಣದ ಝೇಂ ಕಾರ
ನೋವು ನಲಿವುಗಳ ಸಂಗಮೇ ಈ ಸ್ನೇಹ ಜೊತೆಗಿದ್ದಾಗ ನಲಿದ ಕ್ಷಣಗಳನ್ನು
ಬಿಚ್ಚಿದರೆ ಸಾಕು ಅರಳುವ ಮನಸ್ಸು
ದೂರವಾದರು ಮರೆಯಲಾಗದ ನೆನಪುಗಳು
ಮುನಿಸು ತಮಾಷೆಯಗಳು ಇಲ್ಲದ ಸ್ನೇಹವಿಲ್ಲ,
ಆ ಸ್ನೇಹವಿಲ್ಲದೇ ಬಾಳಲಾರವೇ ಈ ಜಗದೊಳಗೆ
ಪರಿಚಯವಾಗುವರು ಸ್ನೇಹಿತರು ಸಾವಿರಾರು ,
ನಮಗೆ ಇಷ್ಟವಾಗುವರು ನೂರಾರು ,
ಆ ಸ್ನೇಹಿತರ ಸಂಬಂಧ ಇರಲಿ ಜೀವನ ಪೂರ್ತಿ ,
ಎಲ್ಲರ ಬಾಳಲ್ಲಿ ಬೆಳಗುವ ಸ್ನೇಹ , ನೀ ಎಂದಿಗೂ ಚಿರನೂತನ.
ಎ ಜಿ ಶರಣ್
- ಎ ಜಿ ಶರಣ್
04 Aug 2015, 04:39 am
ಬಾ.......
ಕಾವ್ಯದ ಕನ್ನಿಕೆ ಕರೆದಳು
ಇಂದು ಮರಳಿ ಬಾ.
ಹೃದಯದ ಕುಲುಮೆ ಕಾಯುತ್ತಿದೆ
ಮಿಂದು ಅರಳಿ ಬಾ.
ಮನೆ ಮನೆಯ ಕೆಂಡದ
ಬಿಂದು ಹೊತ್ತಿಸಿ ಬಾ.
ಬಿಡಿಯಾದ ಮನದ ಮಣಿಗಳ
ಸಂದಿನಲ್ಲಿ ದಾರ ಪೋಣಿಸಿ ಬಾ.
ಹೂವಿನ ವಾಸನೆ ಸವೆಯುವ ನಾಸಿಕನ
ಬಂಧುವ ವರಸಿ ಬಾ.
ಕನ್ನಡಕದ ಕಣ್ಣಿಗೆ ಗಾಜಿನ
ಅಂಶ ಸವರಿ ಬಾ.
ಮುಗಿಸಿ ಬಾ ನಗಿಸಿ ಬಾ
ಎಂದೆನ್ನ ಕರೆದು.
ವರದಿಗೆ ವರದಿಯೇ ಪೆನ್ನು
ಕಾವ್ಯದ ಕನ್ನಿಕೆಯೇ ಇನ್ನು ...
- ಈಶ,ಎಂ.ಸಿ.ಹಳ್ಳಿ......
- ಈಶ, ಎಂ.ಸಿ.ಹಳ್ಳಿ
02 Aug 2015, 10:25 am
ಮಧು
ಮರೆತು
ಮರೆಯಂಗೇನಾದರೂ
ಮರೆಸಿದ್ದರೆ
ಮರೆವೆಂದುಕೊಂಡು
ಮರೆತುಬಿಡು
ಮರೆತಂಗೆ
ಮರೆಸಿದವನ
ಮರೆಯದೆ
ಮರೆ
ಮರೆಯದಿದ್ದರೆ
ಮರದೆಲೆಯಲ್ಲಿ
ಮರೆಯಾಗಿರು
ಮರೆಯುವವರಿಗೂ
ಮರೆಮಾಡದೆ ಮರೆಮಾಚದೆ
ಮರೆಯದೆ ಮರೆಯದೇಳು ಮರೆತವ ಮರವನ್ನು ಮರೆಯುವವನು ಮರದಂತವನು!
- ಮಧು
02 Aug 2015, 07:37 am
ಹೊರಗೆ ಸುರಿವ ಧೋ ಮಳೆ
ಒಳಗೆ ಹರಿಯಲಿಲ್ಲ ಪದಗಳ ಹೊಳೆ
ಎಷ್ಟು ಮುಳುಗಿದರೂ ಕಲ್ಪನಾ ಬಾವಿಯೊಳಗೆ
ತುಂಬುತ್ತಲೇ ಇಲ್ಲ ಕವನದ ಕೊಡ
ಬರಿದೇ ತುಳುಕಾಡಿದೆ, ಅದಕ್ಕೇನೋ ಜಡ!
ಮಿಂಚ ಬೆಳಕಿಗೆ ಹೊಳೆದ ಬೆಟ್ಟ ಸಾಲು
ಆದರೂ ಹೊಳೆದಿಲ್ಲ ಒಂದಾದರೂ ಕವನ ಸಾಲು
ಮಳೆ ತೊಳೆಯಿತು ಇಳೆಯ ಕೊಳೆ
ಕವಿ ಗೀಚಿ ಗೀಚಿ ಸಾಹಿತ್ಯದ ಕೊಲೆ
ಮಳೆಯ ಹೊಡೆತಕ್ಕೆ ತುಡಿವ ಹೃದಯದ ಗೋಳು
ಪದಕ್ಕೆ ತಡಕಾಡಿ ಸತ್ತ ಕವನವಿದು
ಕವಿಯ ನಿರಂತರ ಸೋಲು.
- ಶ್ರೀಗೋ.
01 Aug 2015, 06:10 am
ಅಂದು
ಅವಳು ನನ್ನೊಡನಿದ್ದಾಗ
ಕನಸುಗಳ ಅರಮನೆ
ಕಣ್ಣೀರಿಗೆ ಗಡಿಪಾರು.....||
ಇಂದು
ಅವಳು ನನ್ನೊಡನಿಲ್ಲ
ಇದು ಕಣ್ಣೀನ ಸೆರೆಮನೆ
ಕನುಸುಗಳೇ ಗಡಿಪಾರು....||
ಅನುಭವಿ
- vikas ಅನುಭವಿ
31 Jul 2015, 01:11 am
ಭವದಿಂ ಬಸವಳಿದ
ಅನ್ನದಾತ
ಏಕಿಷ್ಠು ದುಖ್ಖೀಭವ?
ಹುಬ್ಬೇರಿಸುವಷ್ಟು
ಕಬ್ಬು ಬೆಳೆದರು
ಹಬ್ಬ ಮಾಡುವಷ್ಟು
ಹಣ ಬರಲಿಲ್ಲ
ಬಂದಷ್ಟು ಹಣ
ಕೊರಳಿನ ಕುಣಿಕೆಗೆ
ಸಾಕಾಯ್ತಲ್ಲ
ಬೇಡಿಕೊಂಡರು ಬಿಡಿಗಾಸು
ಕೊಡದ ಜನ
ಸತ್ತಾಗ ಸಾಲವಿತ್ತು ಎಂದಾಡಿಕೊಂಡರು
ಪರಿಹಾರದ ಬಿಡಿಗಾಸಿಗೆ
ಬಡಿದಾಡಿಕೊಂಡರು.
ಆಪತ್ಭಾಂದವ ಮತೀಭವ
ಆತ್ಮಹತ್ಯೇ ರೋಕೊಭವ
ಆತ್ಮಸ್ಥೈರ್ಯ ಭರೋಭವ
ಅನ್ನದಾತೋ ಸುಖೀಭವ
..........ಮಧುಗಿರಿ ಬದರಿ
- K.Badarinatha
30 Jul 2015, 03:04 pm
ನಿಸರ್ಗದ ಮಡಿಲಲ್ಲಿ
ಅಮ್ಮನ ಮಮತೆಯಲ್ಲಿ
ಬಂದು-ಭಾಂದವರಒಡನಾಟದಲ್ಲಿ
ಕರುನಾಡ ತಾಯ್ನಾಡಲ್ಲಿ
ಕಾವೇರಿಯ ತಾಣದಲ್ಲಿ
ಕನ್ನಾಡಂಭೆಯ ಕಣ್ಣರೆಪ್ಪೆಯ
ಕರುನಾಡ ಕುಡಿನೋಟವನ್ನು
ಪಸರಿಸೋಣ,ಹಾಡಿ ಹೋಗೋಳನ.
- Lohith kumar uppara
27 Jul 2015, 04:01 pm