Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಯಾವ ದೇಶದಲ್ಲೆ ದುಡಿ
ಯಾವ ಮಣ್ಣಿನಲ್ಲೆ ಮಡಿ
ನಿಂತ ನೆಲವು ಹಿಡಿದ ಹುಡಿ
ಭರತ ಭೂಮಿಯೆಂದು ತಿಳಿ
- ಉಮೇಶ ಶಿವಪ್ಪ ಲಮಾಣಿ
20 Jul 2015, 05:30 pm
ಏಳಿ ಎಚ್ಚರಗೊಳ್ಳಿ ಕೆಚ್ಚೆದೆಯ ರೈತರೆ
ನೆತ್ತರೋಕುಳಿಯಲ್ಲಿ ನಾಟ್ಯವಾಡಿ
ತಾಯೆದೆಯ ರಂಗದಲಿ ಬಾಳ ನೆತ್ತವನಾಡಿ
ಕರುಣೇ ಇಲ್ಲದ ಸರಕಾರದೆದುರು ಮೆಟ್ಟಿ ನಿಲ್ಲಿ
ಎತ್ತಿ ಹಿಡಿಯಿರಿ ಹೊಸ ಕಹಳೆಯನ್ನು
ನಾಡ ನರನಾಗಳೆಲ್ಲಾ ಮಿಡಿಯುವಂತೆ
ನೂತನ ಚೇತನ ಉಕ್ಕಲಿ ಹರಿಯಲಿ
ಸತ್ತ ರೈತನ ಆತ್ಮಕ್ಕೆ ಶಾಂತಿ ಸೀಗುವರೆಗೆ
ಸರಕಾರಕ್ಕೆ ಮೇಟ್ಟಿ ನಿಲ್ಲಿರಯ್ಯಾ ಮೇಟ್ಟಿ ನಿಲ್ಲಿರಯ್ಯಾ,........
- ಉಮೇಶ ಶಿವಪ್ಪ ಲಮಾಣಿ
20 Jul 2015, 04:57 pm
ಎಲ್ಲಲ್ಲೂ ನಮ್ಮವರೆ ಕೆಲಸಕ್ಕಾಗಿ ಕಾಯ್ದವರು
ಮನೆಯ ಮನಗಳಿಗೆ ಹೊರೆಯಾಗಿ,
ಮನಸು,ಭಾವನನೆಗಳ ಬಿರಿಗೊಳಿಸಿ,
ನರಳಾಡಿ,ಹೊರಳಾಡಿ ಜೀವ ತೇಯ್ದವರು.
ಎಲ್ಲೇಂದರಲ್ಲಿ "ವೃತ್ತಿಶಿಕ್ಷಣದ್ದೆ"ಹೆದ್ದಾರಿ
ಕಲಿತ "ಕಲಾ"ವಿಭಾಗ ಬರಿಮುಳ್ಳುದಾರಿ.
ನೈತಿಕತೆ,ಭಾವಕತೆ ತುಂಬಿತುಳಿಕಿದ್ದರು
ಕೇಳುವವರಾರಿಲ್ಲ,ಅಣಿಕಿಸುವವರೆ ಇಲ್ಲೆಲ್ಲ
ಕಲಯುವಿಕೆಯಲಿ ಕಲ್ಮಷವಿಲ್ಲ ಬೆರಗಾಗದಿರಿ
ಕಲಿತರೂ ಕೈಯಲ್ಲಿ ಕಾರ್ಯವಿಲ್ಲ ಮಂಕಾಗದಿರಿ,
ಸರ್ಕಾರಿ,ಅರೆಸರ್ಕಾರಿ,ಅನುದಾನಿತ,ಅನುದಾನರಹಿತ
ಬೇಕು,ಬೇಕುಗಳೆ ಎಲ್ಲ ಕೊಡುವವರಾರಿಲ್ಲ.
ಕಣ್ಣಿರು ಕಂಬನಿಗಳೆ ನಮ್ಮ ಸ್ನೆಹಿತರು
ಬದುಕಿನಾ ನಿಜ ತಿಳಿಯುವಾ ದಾರಿಯಲಿ.
ನನಸಾಗದಿರುವ ಕನಸುಗಳೆ ನಮ್ಮೊಡನಾನಾಡಿಗಳು
ನೆಲೆಯ ಹುಡುಕವ ಪ್ರಯಾಸದ ಈ ಪ್ರಯಾಣದಲಿ.
ಡಿ.ಎಸ್
- Dharmu.s.m
18 Jul 2015, 09:12 am
ಹಾರ ತುರಾಯಿಗಳು ಸರಳು ಸರಪಣಿಯಂತೆ
ಭವ್ಯದರಮನೆಯು ಅರಗಿನರಮನೆಯಂತೆ
ನೀನಿಲ್ಲದ ನನ್ನಬಾಳು ಹಗ್ಗ ಜಗ್ಗುವ ನಾಯಿಯಂತೆ
ತವರೆಂಬ ತಾಣವು ನನಗೆ ಸವತಿಯ ಸೆರಗಂತೆ
ಮತ್ತೆ ಮತ್ತೆ ತವರ ಸೆರಗಿನ ಹಿಂದೆ
ನೀ ಹೀಗೆ ಸುತ್ತಿ ಸುತ್ತಿ
ಮಿತಿ ಮೀರಿದರೆ ಎಲ್ಲೆ
ನಾನಾವ ಸೆರಗ ಸುತ್ತಲಿ ನಲ್ಲೆ ?
ಪುಟ್ಟ ಕಂದನ ನೆನಪು
ನಿನ್ನ ನಗುವಿನ ಒನಪು
ವಿರಹದ ಅರಗಿನ
ಅರಮನೆಯ ತೊರೆದು
ನನ್ನೆದೆಯ ಅರಮನೆಯಲ್ಲರಳಿದೆ
ಹೊತ್ತು ಜಾರುವ ಮುನ್ನ
ಹಕ್ಕಿ ಗೂಡು ಸೇರುವ ಮುನ್ನ
ಗೋಧೂಳಿ ಹಾರುವ ಮುನ್ನ
ಮನೆಗೆ ಬಾ ಚಿನ್ನ ...
..........ಮಧುಗಿರಿ ಬದರಿ
- K.Badarinatha
15 Jul 2015, 04:56 am
ನಿನ್ನ ಸ್ನೇಹಿತ ಎಷ್ಟೇ ಕೆಟ್ಟವನಾದರು, ಅವನ ಜೊತೆ ಸ್ನೇಹವನ್ನು ಮುರಿಯ ಬೇಡ......
ಏಕೆಂದರೆ, ನೀರು ಎಷ್ಟೇ ಕಲುಷಿತವಾದರು ಬೆಂಕಿನಿಂದಿಸಲು ಉಪಯೋಗಿಸಬಹುದು.
✒ಶಾಕೀರ್ ಅಕ್ಕರಂಗಡಿ ���
- ಶಾಕೀರ್ ಅಕ್ಕರಂಗಡಿ
14 Jul 2015, 03:34 pm
ಜನನವು ಒಂದೆ,
ಜೀವನವು ಒಂದೆ,
ಮತ್ತೆಕೆ ಹುಟ್ಟಿದಾ ಮೆಲೆ ಬೆನ್ನೆರಿದ
ಈ ಜಾತಿ ಬೆಗೆ .
ಬೆಳಕ ಸೂರ್ಯನು ಒಂದೆ
ಇರುಳ ಚಂದ್ರಮನು ಒಂದೆ
ಇವರನಾಶ್ರಯಸಿದ ನಮ್ಮೊಳಗೆ
ಎಕಿದು ಜಾತಿ ಬೆಗೆ.
ಕಣ್ಣು ಎರಡಾದರು ನೊಟ ಒಂದೆ,
ಕುಡಿವ ನೀರು,ಉಸಿರ ಗಾಳಿ ಒಂದೆ
ನಮ್ಮವರನೆ ಹೊರಗೆ ತಳ್ಳವ
ಇ ಹೊಲಸು ಜಾತಿ ನಮಗೆ ಬೆಕೆ.
ಅಂತರಾಳದ ಮನದ ಚಹರೆಯು ಒಂದೆ
ಜನನ ಜನ್ಮ ನಿಡಿದ ಸ್ಥಳ ಒಂದೆ,
ನಮ್ಮಂತಿರುವವರನು ಮುಟ್ಟಸಿರುವ ಇ ಹೊಲಸು ನಿತಿ
ನಮಗೆ ಬೆಕೆ ನಮಗೆ ಬೆಕೆ...
ಎಮ್. ಎಸ್.ದರ್ಮು.
- Dharmu.s.m
11 Jul 2015, 02:18 pm
ಕನಸ್ಸಿನಲ್ಲಿ ಬಂದು ಕಣ್ತುಂಬಾ ಓಡಾಡಿ ಕರಗಿ ಹೋದೆ ಚಲುವೆ ನಿನ್ಯಾರು ಎಲ್ಲಿರುವೆ?
- ravikiran
11 Jul 2015, 11:39 am
ಯಾಕೋ ಅಮವಾಸೆಯೆ ಚಂದವೆನಿಸುತ್ತೆ
ತಾರೆಗಳೆಲ್ಲ ಪಿಸು ಮಾತಡುತ್ತವೆ
ಗೆಳಯರೆಲ್ಲ ಕೂಗಿದ ಅನುಭವ
ಹುಣ್ಣಿಮೆಯ ಚಂದ್ರ ನಿದ್ದಾಗ ತಾರೆಗಳೆಲ್ಲ ಮೌನ.
ಚಂದ್ರನ ಬೆಳಕು ಪ್ರೇಯಸಿ ಹಾಗೆ ಬಂದು ಮಾಯವಾಗಿತು
ಏಕಾಂತದ ಮನಸ್ಸಿಗೆ ಅಮವಾಸ್ಯೆ ತಾರೆಗಳೆಲ್ಲ ಬೆಳಕ ಚೆಲ್ಲುವ ಭರವಸೆ
ಸವಿರಾತ್ರಿ
ರವಿ ಕನ್ನಡಿಗ
- ರವಿಕುಮಾರ
09 Jul 2015, 09:12 am
ಬದುಕುವುದಾದರೆ ಬದುಕಿಬಿಡು
ಸಾಯುವುದಾದರೆ ಸತ್ತುಬಿಡು
ಬದುಕಿ ಸಾಯಬಬೇಡ
ಸತ್ತು ಬದುಕಬೇಡ
- Raj
29 Jun 2015, 02:32 pm
ಬಾಹ್ಯ ನಡವಳಿಕೆಯನ್ನು ನಿಯಂತ್ರಿಸುವುದು,
ಸ್ನೇಹ..........
ಆಂತರಿಕ ನಡವಳಿಕೆಯನ್ನು ನಿಯಂತ್ರಿಸುವುದು,
ಪ್ರೀತಿ.........
- Virupaksh
29 Jun 2015, 04:37 am