Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಅಮ್ಮ

ಅಮ್ಮಯೆಂದರೆ ಎನೊ ಹರುಷವು ನನ್ನ ಪಾಲಿಗೆ ಅವಳೇ ದೈವವು, ಶತಕೋಟಿ ದೇವರು ಹಾರೈಸಿದರೆನು ಅಮ್ಮನ ಹಾರೈಕೆಗೆ ಸರಿಸಾಟಿ ಅಗುವುದೆನು,
ಅಮ್ಮ ನೀನು ನಮಗಾಗಿ ಸಾವಿರ ವರ್ಷ ಸುಖವಾಗಿ ಭಾಳಲೇಬೇಕು ನಮ್ಮನೆ ಬೆಳಕಾಗಿ

- ಸಿದ್ದು

10 May 2015, 09:01 am

ಅಮ್ಮ

ನಡು ರಾತ್ರಿಯಲಿ ಮಳೆರಾಯ
ಆರ್ಭಟಿಸಲು
ಆ ಸಣ್ಣ ಹಂಚಿನ ಜೋಪಡಿಯು
ಸೋರುತ್ತಿರಳು
ನಿದ್ರೆ ಬಿಟ್ಟು ನೀ ನನ್ನ
ಕಾಪಾಡಿದವಳು

ನಾ ನಡೆವ ದಾರಿಗಳಿಗೆ
ಪ್ರಾರ್ಥಿಸಿದವಳು
ಅಕ್ಷರಗಳಿಲ್ಲ ತ್ಯಾಗಾಮಹಿಯ
ವರ್ಣಿಸಲು

ಅದೆಷ್ಟೊ ವ್ರದ್ದಾಶ್ರಮಗಳು
ಹರಿಯುತ್ತಿವೆ ಹೆತ್ತವ್ವಳ
ಕಣ್ಣೀರುಗಳು
ದೇವರ ಶಾಪವಿದೆ ಉದ್ದಾರವಾಗಲ್ಲ
ಆ ನೀಚ ಮಕ್ಕಳು
ಅಳುತ್ತಿರುವರು ತಾಯಿಲ್ಲದ
ಮಕ್ಕಳು
ದೇವರು ನೆರವೇರಿಸಲಿ ಅವರ
ಆಸೆಗಳು

ನೆನಪಾಗುತ್ತಿದೆ ತಾಯಿ ನನಗೆ
ಆ ನಿನ್ನ ತ್ಯಾಗಗಳು
ಕಣ್ಣೀರ ಪ್ರಾರ್ಥನೆ ಯಿದೆ ನೀ
ಆರೋಗ್ಯವಾಗಿರಳು
ಬರುವೆನು ಅತೀ ಶೀಘ್ರದಲಿ ಮಡಿಲಲ್ಲಿ
ತಲೆಯಿಟ್ಟು ನಿದ್ರಿಸಲು
ಮರಿಬ್ಯಾಡ ಅವ್ವ ಈ ನಿನ್ನ ಕಂದನ
ಹಣೆಗೆ ಪ್ರೀತಿಯ ಮುತ್ತಿಕ್ಕಳು

ನಿನಗಿದೋ ಶತಕೋಟಿ ಶುಭಾಶಯಗಳು


ಮ.ಅಲಿ

- ma.ali

10 May 2015, 08:37 am

ಇಂದು ಪ್ರೀತಿಸಬಹುದು.

ಮನವ ನೊಡು ಮಿಡಿಯುತಿಹುದು
ನಿನಗಾಗಿ ತುಡಿಯುತಿಹುದು
ನೊವನೆಲ್ಲ ಮರೆಸುತಿಹುದು
ವರ್ಷಗಳಿಂದ ಕಾದಿಹುದು
ಹೇಳುತ್ತಾ ||
ಇಂದು ನೀ ನನ್ನ ಪ್ರೀತಿಸಬಹುದು ......
ಇಂತಿ ನಿನ್ನ
❤ಅನುಭವಿ❤

- vikas ಅನುಭವಿ

10 May 2015, 02:36 am

ಹೆತ್ತವರ ದಿಕ್ಕರಿಸಿದ ಹೆಣ್ಣು

ಹೊರಟು ಹೊದಳು ಹೆತ್ತವರ ಬಿಟ್ಟು
ಕೇಳಿದರು ಯಾಕೋದೆ ಮಾನ ಹರಾಜಿಗಿಟ್ಟು
ಹೋದಳವಳು ಕಪಟ ಪ್ರೀತಿಯ ಮುಂದಿಟ್ಟು
ಕೈ ಕೊಟ್ಟಾಗ ಗೊತ್ತಾಗಿತ್ತು ತನ್ನ ಎಡವಟ್ಟು
ತಲೆ ತಗ್ಗಿಸಿ ನಿಂತಳು ಬಾಗಿಳಲಿ ಕಣ್ಣೀರಿಟ್ಟು.


ಮ.ಅಲಿ

- ma.ali

09 May 2015, 10:08 pm

ವಿದ್ಯಾಬ್ಯಾಸ

ಸ್ಕೂಲು ಚಲೋ

ನೋಡಯ್ಯ ಕಡು ಬಡವರ ಮಕ್ಕಳನ್ನ
ತೊಳೆಯುತ್ತಿರುವರು ಹೋಟೆಲೊಂದರ
ತಟ್ಟೆಗಳನ್ನ
ಉಣ್ಣಲು ಅನ್ನವಿಲ್ಲ ದೂಡುವರು ಕಷ್ಟದಲಿ
ದಿನವನ್ನ
ಯಾಕೆಂದರೆ ಇವರು ಹತ್ತಿಲ್ಲ ಶಾಲಾ
ಮೆಟ್ಟಿಲನ್ನ
ಪ್ರತಿಭೆ ಇದೆ ಇವರಲ್ಲು ಕಲಿತಿಲ್ಲ
ವಿದ್ಯೆಯನ್ನ
ಕಡುಬಡವರಿವರು ಎಲ್ಲಿಂದ ಕೊಡಲಿ
ಹಣವನ್ನ
ನೀಡಬೇಕಿದೆ ನಾವು ಹಣದ ನೆರವನ್ನ
ಕಟ್ಟಬೇಕಿದೆ ಪ್ರತಿಭೆಗಳ ಭವಿಷ್ಯವನ್ನ.


ಮ.ಅಲಿ

- ma.ali

09 May 2015, 10:00 pm

ತಾಂತ್ರಿಕ

ಹೊರಟಿದ್ದೆ ಆಯುಧಗಳ ಜೊತೆ ಕೆಲಸಕ್ಕಂದು
ಕೆಟ್ಟು ಹೋಗಿತ್ತು ಶೀತಲೀಕರಣದ ಯಂತ್ರವೊಂದು
ಹುಡುಕುತ್ತಿದ್ದೆ ಸ್ತಭ್ದಗೊಲ್ಲಳು ಕಾರಣವೇನೆನೆಂದು
ನಿಯಂತ್ರಣದ ವಯರೊಂದ ಕಚ್ಚಿ ನ್ರತ್ಯ ಮಾಡುತ್ತಿತ್ತು ಇಲಿಯೊಂದು.

- ma.ali

09 May 2015, 09:58 pm

ಕೂಲಿ ಕಾರ್ಮಿಕ

ಕಷ್ಟದಿ ಸಾಗಿಸುವನು
ಜೀವನ ಬಂಡಿಯನ್ನು
ದಿನಕೂಲಿ ಕಾರ್ಮಿಕನು
ದೇಹದ ಬೆವರಿಳಿಸಿರುವನು
ರೂಪಿಸಲು ಭವಿಷ್ಯವನು
ಧನಿಕನೇ ಸತಾಯಿಸದಿರು
ನೀಡು ನೀ ಸಮಯಕ್ಕೆ ಕೂಲಿಯನು
ಯಾಕಂದರೆ ನಮ್ಮನ್ನು ನೋಡುತ್ತಿರುವನು
ಭೂಮಿಯ ಸ್ರಿಷ್ಟಿಕರ್ತನು


ಮ.ಅಲಿ

- ma.ali

09 May 2015, 09:56 pm

ಮೈಸೂರಿನ ಹುಲಿ

ದೇಶಕ್ಕಾಗಿ ರಣರಂಗದಲ್ಲೆ ಅಂತ್ಯಗೊಂಡ
ಟಿಪ್ಪುಸುಲ್ತಾನ್ ಶಹೀದಾದ ದಿನವಿಂದು
ಬ್ರಿಟೀಷರ ಜೊತೆ ಕೆಳ ದೇಶದ್ರೋಹಿಗಳು
ಕೇಕೆ ಹಾಕಿದ ದಿನವಿಂದು
ದೇಶಕ್ಕಾಗಿ ರಾಜರೊಬ್ಬರು ಆರ್ಭಟಿಸಿದ
ದಿನವಿಂದು
ಮರೆತು ಬಿಟ್ಟೆವು ನಾವೆಲ್ಲ ನೆನಪಿಸಬೇಕು
ಈ ದಿನವನ್ನು.

ಅಷ್ಟದಿಕ್ಕುಗಳಲ್ಲೂ ಬಿಳಿಯನ ಬಂದೂಕಿನ
ಘರ್ಜನೆ
ಇತ್ತ ದೇಶವ ಕಾಪಾಡಲು ಹುಲಿಯೊಂದರ
ಘರ್ಜನೆ
ಶರಣಾದರು ಕೆಲವು ಅರಸರು
ಆಸೆಯಿತ್ತು ಬದುಬೇಕು
ಐಷಾರಾಮಿ
ಎದೆ ಗುಂದಲಿಲ್ಲ ಮೈಸೂರಿನ ಹುಲಿ
ಹೋರಾಟದ ಹಾದಿ ಹಿಡಿದ
ದೇಶಪ್ರೇಮಿ

ಕಾಪಾಡಬೇಕಿತ್ತು ಬಿಳಿಯನಿಂದ ತನ್ನ
ದೇಶವನ್ನು
ಅದಕ್ಕಾಗಿ ತ್ಯಾಗ ಮಾಡಿದ್ದು ತನ್ನ
ಮಕ್ಕಳನ್ನು
ಬ್ರಿಟೀಷ್ ಸಾಮ್ರಾಜ್ಯವೆ ಟಿಪ್ಪುವಿನಿಂದ
ನಿದ್ದೆಗೆಟ್ಟಿತ್ತು
ಮೈಸೂರಿನ ಕತೆಯನ್ನು ಬಿಳಿಯನಿಗೆ
ಮುಗಿಸಬೇಕಿತ್ತು
ಅದಾಕ್ಕಾಗಿ ಕೆಲವು ದೇಶ ದ್ರೋಹಿಗಳು
ಸಿದ್ದವಿತ್ತು

ಅದೊಂದು ಯುದ್ದದ ರಣಕಹಳೆ
ಊದಲ್ಪಟ್ಟಿತು
ಎತ್ತನೋಡಿದರತ್ತ ಬ್ರೀಟೀಷ್ ಸೇನೆಗಳೆ
ಕಾಣುತ್ತಿತ್ತು
ಎದೆಗುಂದದೆ ಮೈಸೂರಿನ ಸೇನೆ
ಹೋರಾಟಕ್ಕಿಳಿಯಿತು

ಶಸ್ತ್ರ ಸಜ್ಜಿತ ಬ್ರೀಟೀಷರ ಎದೆಯೂ
ನಡುಗಲಾರಂಬಿಸಿತು
ಯಾಕಂದರೆ ಹುಲಿಯೊಂದು ರಣರಂಗದಲಿ
ಘರ್ಜಿಸುತ್ತಿತ್ತು
ಕ್ಷಣಮಾತ್ರದಲ್ಲಿ ರಣರಂಗ ರಕ್ತದ
ಹೊಳೆಯಾಯಿತು
ಬಿಳಿಯನ ಮೋಸದ ಬಾಣವೊಂದು
ಹುಲಿಯ ದೇಶ ಪ್ರೇಮದ ಘರ್ಜನೆಗೆ
ನಾಂದಿ ಹಾಡಿತು.

ಶಹೀದೆ ಮಿಲ್ಲತ್ ಟಿಪ್ಪು ಸುಲ್ತಾನ್(ರ.ಅ) ಮರಣವು ದೇಶಪ್ರೇಮಕ್ಕೆ ಸಾಕ್ಷಿಯಾಯಿತು.


ಮ.ಅಲಿ

- ma.ali

09 May 2015, 09:54 pm

ಮೋಡದ ಅಸೂಯೆ

ಹುಣ್ಣಿಮೆಯ ಚಂದಿರನ ಚಂದವ
ಕಂಡು ಮುತ್ತಿಡಲು ಕಾಯುತ್ತಿದ್ದೆ
ಕಾಣಿಸದ ಕಡು ಕತ್ತಲೆ
ಛಾವಣಿಯಲ್ಲಿ
ಹುಡುಕಿಬಿಟ್ಟವು ಮೋಡಗಳು
ಅಸೂಯೆ ಅವುಗಳಿಗೂ ನನ್ನಲ್ಲಿ
ಮರೆಮಾಚಿತು ಚಂದಿರನ
ಆ ನೀಲಿ ಬಾನಿನಲಿ

ಮ.ಅಲಿ

- ma.ali

09 May 2015, 09:52 pm

ನ್ಯಾಯ ವಂಚಿತ ಸಹೋದರಿ

ಕ್ಷಮಿಸಿ ಸಹೋದರಿಯರೆ

ಹೇಳವ್ವ ತಂಗಿ ಸೌಜನ್ಯ
ಅದೆಷ್ಟು ನೋವ ಸಹಿಸಿರುವೆ
ಆ ಕ್ರೂರಿ ಪಾಪಿಗಳಿಂದ.
ಸ್ವಲ್ಪ ಗೋರಿಯ ಮೇಲೆದ್ದು
ನೋಡುವೆಯ ತಂಗಿ
ಸುತ್ತುತ್ತಿರುವರು ರಾಜ ಬೀದಿಯಲಿ
ನಿನ್ನ ಕೊಂದ ಪಾಪಿಗಳು
ನಾನೇನು ಮಾಡಲಿ ತಂಗಿ
ನ್ಯಾಯಲಯವನ್ನು ಗುತ್ತಿಗೆ
ಕೊಟ್ಟಿದೆ ನಮ್ಮ ಸರಕಾರಗಳು

ನಿನ್ನ ಕಥೆಯ ಹ್ಯಾಗ್ ಹೇಳಲಿ
ತಂಗಿ ನಿರ್ಭಯ
ನಿನ್ನ ಹಿಂಷಿಸಿದವನಿಗೆ ಇಲ್ಲವೆ ಇಲ್ಲ
ಒಂಚೂರು ಭಯ
ಕೋಪಿಸಬೇಡ ನಾನು ಹಿಡಿದಿರುವೆನು
ಪಲಕಗಳ ನ್ಯಾಯ ಬೇಕೆಂದು ತಂಗಿ
ನಿರ್ಭಯ
ನ್ಯಾಯವ ಪಡೆದಿರುವರು ನೀಡಿ ಕೇವಲ
ಹಣವ
ನಾನೇನು ಮಾಡಲಿ ಹಣವಿಲ್ಲ ನಾನೊಬ್ಬ
ಬಡವ
ಬಿಡಲಾರೆನು ಎಬ್ಬಿಸಿವೆನು ಎಲ್ಲರನು
ಅಕ್ಷರಗಳಲ್ಲಿ ನಿಮಗಾಗಿ
ಈ ತಲೆಯು ಪದಗಳ ಮರೆಯುವವರೆಗು
ಬರೆಯುವೆನು ನಿಮಗಾಗಿ


ಮ.ಅಲಿ

- ma.ali

09 May 2015, 09:50 pm