Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಜೈ ಭಾರತ

ಯಾವ ದೇಶದಲ್ಲಿ
ಅಂಬುಲೆನ್ಸ್ ಬರುವ ಮುನ್ನ
ಪಿಜ್ಜ ಮನೆಗೆ ತಲುಪಿರುತ್ತದೋ

ಯಾವ ದೇಶದಲ್ಲಿ
ದೇವತೆಗಳ ಪೂಜಿಸಿದರೂ
ಹೆಣ್ಣಿಗೆ ರಕ್ಷಣೆ ಇಲ್ಲವೋ

ಯಾವ ದೇಶದಲ್ಲಿ
ಚಪ್ಪಲಿಯನು ಎಸಿ ರೂಮಲ್ಲಿಟ್ಟು
ತರಕಾರಿಯನು ರಸ್ತೆ ಬದಿಯಲಿ ಮಾರುತ್ತೇವೋ

ಯಾವ ದೇಶದಲಿ
ಬ್ಯಾಟನಿಡಿದು ಚೆಂಡನೊಡೆಯವಗೆ ಕೋಟಿ ಕೊಟ್ಟು
ಗನ್ನನಿಡಿದು ದೇಶ ಕಾಯುವವನ ನೋಯಿಸುತ್ತೆವೆಯೋ

ಯಾವ ದೇಶದಲಿ
ಹಾಲು ಮೊಸರನು ಕುಡಿದು
ಬೆಣ್ಣೆ ತುಪ್ಪ ವನು ತಿಂದು
ಕೊನೆಗೆ ಅವಳನೆ ಕೊಂದು ತಿನ್ನುತ್ತೆವೆಯೋ

ಯಾವ ದೇಶದಲಿ
ಭಿಕ್ಷೆ ಪಡೆದು ಓಟನು ಒತ್ತಿ
ಗುಲಾಮರಂತೆ ಬದುಕುತ್ತಿದ್ದೆವೆಯೋ

ಆ ದೇಶವೇ ನನ್ನದು
ಜೈ ಭಾರಂತಾಬೆ....

- ಚೇತನ್ ಬಿ ಸಿ

22 Apr 2015, 01:45 am

ನನ್ನವಳು

ಹೇಳದ ಮಾತು ನನ್ನೊಳಗೆ ಉಳಿದಿರಲು
ಕಾಣದೇ ಹೋದಳು ನನ್ನವಳು ಇಂದು
ಶಿವನ ಮುಂದೆ ಓಂಕಾರದ ನಾದ
ನನ್ನವಳ ಮುಂದೆ ಪ್ರೇಮಂಕುರದ ಬಾವ

ಬಾನಂಗಳದಿ ಚಂದಿರನು ಹೊಳೆದಿರಲು
ನನ್ನೆದೆಯ ಅಂಗಳದಲಿ ನನ್ನವಳ ನಗುವಿರಲು
ಕಾಲ್ಗೆಜ್ಜೆಯ ನಿನಾದ ನನ್ನನು ಕಾಡಿರಲು
ಬಾರದೆ ಹೋದಳು ನನ್ನವಳು ಇಂದು
:- ಸಂತೋಷ್

- santhosh

21 Apr 2015, 04:24 pm

ಬಯಕೆ

ಅಂಬರದ ತುಂಬೆಲ್ಲ
ಚಿತ್ತಾರ ಬಿಡಿಸೆಂದು
ಬೆಳ್ಳಕ್ಕಿ ಕೂಗೈತೆ
ನಕ್ಕು ನಲಿದಾಡ್ಕೊಂಡು

ಮುಂಬೆಳಕೆ ಸಾಕೆಂದು
ಮುಂಗಾರು ಬೇಕೆಂದು
ದುಂಬಾಲು ಬಿದ್ದೈತೆ
ಪೈರು ಪರ್ದಾಡ್ಕೊಂಡು

ಬಂಗಾರಿ ಬಾಳ್ನಾಗೆ
ಮಂದಾರ ಕನಸೊಂದು
ಚಿಗುರೊಡೆದು ಕೂಗೈತೆ
ಚೆಲುವಯ್ಯ ಬಾ ಎಂದು

ಸಿಂಗಾರಿ ನೀನೇಯ
ಸಂಗಾತಿ ನನಗೆಂದು
ನಗುನಗುತಾ ಬತ್ತಾವ್ನೆ
ಕುಡಿ ಮೀಸೆ ತೀಡ್ಕೊಂಡು

..........ಮಧುಗಿರಿ ಬದರಿ

- K.Badarinatha

21 Apr 2015, 08:23 am

ದಾರಿ

ನಾರಿ
ಮುನಿದರೆ
ಮಾರಿ
ಬೇಕಿಲ್ಲ
ಅವಳಿಗೆ
ನಿಮ್ಮ
ಸ್ವಾರಿ
ತೃಪ್ತಿ
ಪಡಿಸುವುದೊಂದೇ
ಉಳಿದ
ದಾರಿ

- ishak

21 Apr 2015, 06:47 am

ರಾಧಾ ಪ್ರಲಾಪ :



ಕಾದು ಕಾದು ಹಾದಿ ಕೊರಗಿದೆ


ಹೊತ್ತು ಹೋಗದೆ ಸಮಯ ಸೊರಗಿದೆ

ನೀ ಬಾರದೆ ಮನ ನೊಂದು ಬಳಲಿದೆ
ಕ್ರಿಷ್ಣಾ.......


ನಾಟ್ಯ ಮಯೂರಿ ಗರಿ ಮುಚ್ಚಿ ಮಲಗಿದೆ
ಗಾನ ಕೋಗಿಲೆಯ ಗಂಟಲು ಉಬ್ಬಿದೆ
ಚಂದಿರನ ಕಾದ ಚಕೋರಿಯಂತೆ
ಬ್ರುಂದಾವನದ ಬಾಗಿಲಿಗೆ ತಲೆಯಿಟ್ಡು ಮಲಗಿರುವೆ
ಶ್ಯಾಮ ನೀ ಬೇಗ ಬರಬಾರದೆ

ಕಾದು ಕಾದು ಹಾದಿ ಕೊರಗಿದೆ ಕ್ರಿಷ್ಣಾ.....

ಸಪ್ತ ಸಾಗರಗಳು ಸುಪ್ತವಾದಂತೆ
ಪಂಚಭೂತಗಳು ಗುಪ್ತವಾದಂತೆ
ಪಂಚೇಂದ್ರಿಯಗಳು ನಿರ್ಲಿಪ್ತವಾದಂತೆ
ಸಂಯಮ ಮೀರಿದೆ ಸಂತೋಷ ಕಾಣದೆ
ಗೋಪಾಲ ನೀ ಬೇಗ ಬರಬಾರದೆ

ಕಾದು ಕಾದು ಹಾದಿ ಕೊರಗಿದೆ ಕ್ರಿಷ್ಣಾ.....

.........ಮಧುಗಿರಿ ಬದರಿ

- K.Badarinatha

17 Apr 2015, 04:32 am

ದುಡುಕಿದ ಪ್ರೇಮಿ

ನನ್ನತ್ತ ನಾ ಹೊರಟಾಗ
ಅರಳಿದ ಗುಲಾಬಿ ಒಂದು ಕಾಡಿತು
ಆ ಅರಳಿದ ಗುಲಾಬಿಗೆ ಮನಸೊತು
ನನ್ನ ಮೈ ಮನಗಳೆಲ್ಲವು ಗರಿ ಬಿಚ್ಚಿ ಕುಣಿದವು
ಆದರೆ ಆ ಗುಲಾಬಿ ಸುತ್ತಲೂ ಮುಳ್ಳಿರುತ್ತವೆ ಎಂಬುದನ್ನ ಲೆಕ್ಕಿಸದೆ ಮನಜಾರಿ ಬಿದ್ದು ಆ ಮುಳ್ಳಿನ ಪ್ರತಿ ನೋವಿಗು ಉತ್ತರ ನಿಡದೇ ಮುಖನಾಗಿ
ಸುಮ್ಮನ ಕುಳಿತಿರುವೆ ಸುಮ್ಮನೆ ಕುಳಿತಿರುವೆ..............?

- ಬಾಲು ಶಿರಗುಂಪಿ

12 Apr 2015, 10:36 am

ಇಬ್ಬರೂ ನೀರಾದ ಬಗೆ

ನೆರೆ ಬಂದ ಕಾಲಕ್ಕೆ ನೀರ ತರಲು ಹೋದ ನೀರೆ ಬಾರದಿರೆ

ನೊಂದು ಬೆಂದು ಬಳಲಿ ಬಿಸಿಲಿಗೆ ಹಿಮ ಕರಗಿ ನೀರಿನಂತಾದ ನಲ್ಲ

ನೆರೆ ನಿಂತು ಪರರ ನೆರೆವಿನಲಿ ತನ್ನ ಮನದ ಅರಮನೆಯ ದೊರೆಯ ಬೆರೆಯಲು ಓಡೋಡಿ ಬಂದು

ದೊರೆಯ ಕರ ಪಿಡಿಯೆ ನಾಚಿ ನೀರಾದಾಳು ನಲ್ಲೆ

.........ಮಧುಗಿರಿ ಬದರಿ

- K.Badarinatha

11 Apr 2015, 02:05 pm

ಅವಳ ಪ್ರೇಮದ ￿ಅಲೆಮಾರಿ ನಾ...

ವಿರಹದ ಕಾಡಲ್ಲಿ ಅಲೆಯುತ್ತಾ..
ನೆನಪಿನ ಗೂಡಲ್ಲಿ ಬದುಕುತ್ತಾ..
ಸುತ್ತುತ್ತಿರುವೆ ಅಲೆಮಾರಿಯಂತೆ..
ನಾ ಮೆಚ್ಚಿದ ಹುಡುಗಿ...
ಅಕ್ಷತಾಳ ಸುತ್ತಾ-ಮುತ್ತಾ..
~ಅಭಿಅಕ್ಷತ~

- AbhiAksh

11 Apr 2015, 09:03 am

ಅವಳು ನನಗೆ ಬರೆದ ಕವನ

ಈ ದಿನ ನನಗ ವಿ಼ಶೇಷವಾದ ದಿನ
ನಾಳೆ ಏನೆಂಬುದು ಗೊತ್ತಿಲ್ಲ.
ಈ ದಿನ ನೀ ನನ್ನೊಡನಿರುವೆ
ನಾಳೆ ನೀ ನನ್ನೊಡನಿರದಿರಬಹುದು.

ಹಲವು ಬಾರಿ ನೀ ನನ್ನೊಡನಿದ್ದು
ನನ್ನ ಬದುಕಿನ ಸಂಪತ್ತು ಹೆಚ್ಚಿತು.
ನಾನು ಶ್ರೀಮಂತಳಾದೆ
ಬದುಕಿನ ಅರ್ಥ ನಿನ್ನಿಂದ ತಿಳಿದೆ.

ಮಾತನಾಡುತ್ತಾ ನಾವು ನಮ್ಮನ್ನ ಮರೆತೆವು
ನಮ್ಮ ಸುತ್ತಲು ಹೊಸ ಜಗತ್ತು ಕಟ್ಟಿದೆವು.
ನೀನಾಡಿದ ಮಾತುಗಳು ಈಗಲೂ ಕೇಳುತ್ತಿವೆ
ಮತ್ತು ಅವುಗಳನ್ನು ಕೊನೆಯವರೆಗೂ ಮರೆಯುವುದಿಲ್ಲ.

ಕನಸುಗಳನ್ನು ಹಂಚಿಕೊಂಡೆವು
ನಮ್ಮ ಮುಂದಿನ ಜೀವನವನು ಕಂಡೆವು.
ಹೊಸ ಹಾಡನ್ನು ಹಾಡುತ್ತ
ನಮ್ಮ ನಮ್ಮ ನೋವುಗಳನು ಮರೆತೆವು.

ಹಾಡು ಹಾಡುತ್ತಿರುವಾಗಲೇ
ಅಯ್ಯೋ ಹಾಡಿನ ಶೃತಿ ಹಾಳಾಯಿತು.
ಕಣ್ಣೊಳಗಿದ್ದ ಕನಸುಗಳೆಲ್ಲವು
ಅಯ್ಯೋ ನೆನಪು ಬಾರದೆ ನಾಶವಾದವು.

ನಾಳೆ ಎನ್ನುವುದರಲ್ಲಿ ಎಲ್ಲವು ಅಡಗಿರುವುದು.
ಇಂದಿನಂತಿಲ್ಲದಿದ್ದರು ನಾಳೆ
ಜೀವನ ಸಾಗುವುದು ಕೊನೆಯವರೆಗೆ.
ಆದರೆ....
ಕಣ್ಗಳಿಂದ ಹರಿಯುವ ನೀರಿಗೆ ಕೊನೆಯಿಲ್ಲ.

ಚೇತನ್ ಬಿ ಸಿ

- ಚೇತನ್ ಬಿ ಸಿ

10 Apr 2015, 05:17 pm

ಜೀವನ

ಮೂಡಿದ ಕನಸುಗಳ ಹಾರಿಬಿಡಲು ಏಕೋ ಮನಸ್ಸಾಗಲ್ಲಿಲ್ಲ, ಭಾವಗಳೊಂದಿಗೆ ಹೊರಟ ಜೀವಕ್ಕೆ ನೋವ ಬರೆಗಳ ಭಾರ, ಒಣತತ್ವಗಳ ಬೆನ್ನೆರಿ ಬದುಕು ಬರಿದಾಯಿತು.ಅಂದುಕೊಂಡಂತಾಗದು ಜೀವನ, ಅರಿತು ನೆಡೆವುದೇ ಒಳಿತಿಗೆ ದಾರಿ..

- ಸುನಾಗ್

10 Apr 2015, 04:38 pm