Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಮಾತು ಮಾತಿಗೂ
ಪರಿಸರ ಎನ್ನುತಿದ್ದ
ನಮ್ಮ
ಪರಿಸರ ವಾದಿಯ ತಮ್ಮ;
ಮನೆ ಹಿತ್ತಿಲ
ಮರ
ಕದಿದು ತಂದುಕೊಟ್ಟ
ನಲ್ಲೆಗೆ
ಪರಿ ಪರಿಯಾಗಿ ಸರ......
- ಸುಪಿಕಾ.ಕಿನ್ನಿಮೇರು
31 Mar 2015, 12:29 pm
ಓ ನನ್ನ ನಲ್ಲೆ
ನಮ್ಮಿಬ್ಬರ ಅಗಲುವಿಕೆಯ ಮೊದಲ ನೋಟ,
ನಾನೇಕೆ ಮಡ್ಲಿಲ್ಲ ಎನ್ನುವಿಯೆ ಟಾಟ...
ಮೊದಲೊಮ್ಮೆ ಟಾಟ ಮಡಿ ಕಲಿತಿದ್ದೆ
ಅದರ ಪಾಠ.......
...
- ಸುಪಿಕಾ.ಕಿನ್ನಿಮೇರು
31 Mar 2015, 12:15 pm
ಮೊದಲ ಬಾರಿ ನೀನು ನನ್ನ ನೋಡಿ
ನಕ್ಕಾಗ ನನ್ನನ್ನೇ ನಾ ಮರೆತಿದ್ದೆ,
ಏರಡನೇ ಬಾರಿ ನಾನು ನಿನ್ನ ನೋಡಿ
ನಕ್ಕಾಗ ನನ್ನನ್ನೇ ನೀ ಮರೆತಿದ್ದೆ.....
- ಸುಪಿಕಾ.ಕಿನ್ನಿಮೇರು
31 Mar 2015, 12:09 pm
ಓ ನನ್ನ ನಲ್ಲ,
ನೀ ನೋಡಿ ಸೆಳೆದಾಗ ನನ್ನ ಮನ,
ನಾ ಸಲ್ಲಿಸಿ ಆಗಿತ್ತು ನಿನ್ನ ಗೆಳೆಯನಿಗೆ
ನನ್ನ ತನು.
- ಸುಪಿಕಾ.ಕಿನ್ನಿಮೇರು
31 Mar 2015, 11:11 am
ದೊಡ್ಡ ದೊಡ್ಡ ಕವಿಗಳನ್ನು ನೋಡಿ ಕವಿತೆ ಬರೆಯಬೇಕೆನಿಸಿತು
ದೊಡ್ಡ ದೊಡ್ಡ ಕವಿಗಳನ್ನು ನೋಡಿ ಕವಿತೆ ಬರೆಯಬೇಕೆನಿಸಿತು
ತಪ್ಪೇನಿಲ್ಲ
ಅವರಂತೆ ಕೋಟು ನಿಲುವಂಗಿ ಧರಿಸಿದೆ
ಕವಿತೆ ಬರಲಿಲ್ಲ
ಅರೆ ಅವರು ಚಷ್ಮಾ ಧಾರಿಗಳು ನನಗಿಲ್ಲವಲ್ಲಾ ಎಂದು ಚಷ್ಮ ಧರಿಸಿದೆ
ಕವಿತೆ ಬರಲಿಲ್ಲ
ಛೆ ಅವರೆಲ್ಲಾ ಗಡ್ಡಧಾರಿಗಳು ಎಂದು ಕ್ಷೌರ ಮಾಡುವುದ ಬಿಟ್ಟೆ
ಕವಿತೆ ಬರಲಿಲ್ಲ
ನನ್ನ ವ್ಯಥೆ ನೋಡಿ ನನ್ನಾಕೆ ಎಂದಳು ರೀ ನಿಮ್ಮ ತಲೆಯೆಂಬ ಮೊಬೈಲ್ನಲ್ಲಿ ಸಿಮಕಾರ್ಡೆ ಇಲ್ಲ
ಇರುವುದೆಲ್ಲ ಬರಿ ಮಂಡ್ಯದ ಮುದ್ದೆ ಬೆಲ್ಲ
...........ಮಧುಗಿರಿ ಬದರಿ
- K.Badarinatha
31 Mar 2015, 09:53 am
ಅಂಜಿದಿರಿ ಅಳುಕಿದಿರಿ ಧೋನಿ ಪಡೆ
ನಾವೇ ಗೆಲುವಿನ ರೂವಾರಿಗಳು ಎಂಬ ನಿಮ್ಮ ಈ ಜಂಭದ ನಡೆಯಿಂದ
ಗೆಲುವಿನ ಹ್ರುದಯಾಘಾತವಾಗಿದ್ದರೆ ಸಂತಸದ ಅಮರ ಲೋಕ ಸೇರುತಿದ್ದೆವು
ಸೋಲಿನ ಮರ್ಮಾಘಾತ ದಖ:ದ ಮಡುವಿನಲ್ಲಿ ಮುಳುಗಿಸಿದೆ
ಕಾಪಾಡು ಮಧುಗಿರಿಯ ಮಲ್ಲೇಶ್ವರಾ.
....ಮಧಿಗಿರಿ ಬದರಿ
- K.Badarinatha
31 Mar 2015, 09:22 am
ಹಿಂದೊಮ್ಮೆ ಹುಡುಗರ ಪ್ರೇಮ ನಿವೇದನೆಗೆ ಪ್ರೇಮಕವಿತೆಗಳೇ ಬ್ರ್ಯಾಂಡ್ ಅಂಬ್ಯಾಸಿಡರ್ಸ್
ಹಿಂದೊಮ್ಮೆ ಹುಡುಗರ ಪ್ರೇಮ ನಿವೇದನೆಗೆ ಪ್ರೇಮಕವಿತೆಗಳೇ ಬ್ರ್ಯಾಂಡ್ ಅಂಬ್ಯಾಸಿಡರ್ಸ್
ಅದರೆ ಇಂದೀಗ
ಸ್ಕೋಡ , ಆಡಿ , ರೇಂಜ್ ರೋವರ್ಸ್, ಲ್ಯಾಂಡ್ ಕ್ರೂಸ್ನರ್ಸ್...
.....ಮಧುಗಿರಿಯ ಬದರಿ
- K.Badarinatha
31 Mar 2015, 09:17 am
ಹನಿಗವನಗಳನ್ನು ಹೆಚ್ಚಾಗಿ ಸ್ಟೋರ್ ಮಾಡಬೇಡಿ
ಹನಿಗವನಗಳನ್ನು ಹೆಚ್ಚಾಗಿ ಸ್ಟೋರ್ ಮಾಡಬೇಡಿ
ಮಾಡಿದರೆ ಒದ್ದೆಯಾಗಿ ಕೆಟ್ಟು ಹೋಗಿ
ಕಂಬನಿಗವನ ಕಳಿಸುವಂತಾದೀತು
ಹರಹರಾ ಮಧುಗಿರಿಯ ಮಲ್ಲೇಶ್ವರಾ.
.......ಮಧುಗಿರಿಯ ಬದರಿ
- K.Badarinatha
31 Mar 2015, 09:10 am
ಕಣ್ತುಂಬಿಕೊಳ್ಳಲು ಆಗದಷ್ಟು ಸೊಬಗು,
ನಿನ್ನ ಅಂದವನ್ನು ಕಂಡು ಆದೆವು ಬೆರಗು,
ಸುಳ್ಳನ್ನೆ ಸುಡುವ ಶಕ್ತಿ ನಿನ್ನಲ್ಲಿದೆ,
ಎಲ್ಲರನ್ನು ಒಂದಾಗಿ ಕಾಣುವ ಗುಣ ನಿನಗಿದೆ,
ನಿನಗಾಗಿ ಸೃಷ್ಟಿಸಬಹುದು ಕ್ಷಣಕೊಂದು ಹೊಸ ಕಾವ್ಯ,
ಭರತ ಮಾತೆ, ನಿನ್ನ ಮಡಿಲಲ್ಲಿ ಜನಿಸಿದ ನಾನೆ ಧನ್ಯ....
- ವಸಂತ್ ಕುಮಾರ್
26 Mar 2015, 11:28 am
ಹೊಂಗಿರಣ ಮೂಡಿರಲು ಆಗಸದಲ್ಲಿ,
ಅರಳಿತು ಇಂಪಾದ ರಾಗ ಮನದಲ್ಲಿ.
...ಸವಿಯಲು, ನಾ ಮತ್ತೆ ಕವಿಯಾದೆ.
ಮನವು ಹೇಳಿತು,
"ಜೇನಿನ ದನಿಯನ್ನೊಮ್ಮೆ ಕೇಳು, ಯಾವ ನಾದವಿದೆ ಅದರಲ್ಲಿ ನೀ ಹೇಳು".
.....ಕೇಳಲು, ನಾ ಮತ್ತೆ ಕವಿಯಾದೆ.
ಮೌನದ ಮುಖದಲ್ಲು ಮಾತೊಂದು ಕೇಳಿಸಿತು,
ನಾ ಮತ್ತೆ ನಗಬೇಕೆಂದು ಅದು ಹೇಳಿತು.
......ನಗಿಸಲು, ನಾ ಮತ್ತೆ ಕವಿಯಾದೆ.
ಬಂಧಿಸಿದ್ದ ನೂರಾರು ಮತುಗಳು ಮುಕ್ತವಾಗಿ ಹೊರ ಬರಲು,
ಮತ್ತೆ ಜಗವನ್ನು ನನ್ನಿಂದ ಕಾಣಲು.
......ಪರಿವರ್ತನೆಯಾಗಲು, ನಾ ಮತ್ತೆ ಕವಿಯಾದೆ....!!!!!
- ವಸಂತ್ ಕುಮಾರ್
25 Mar 2015, 03:15 pm