Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಒಲವೇ...

ಕೆನ್ನೆ ಮೇಲೆ ಒತ್ತಿದ ಮುತ್ತಿನ
ಬಿಸಿ ಆರುವ ಮುನ್ನ ನೀನೆನ್ನ
ಬಿಟ್ಟು ಹೋದೆಯಾ ಒಲವೆ.

ಬತ್ತಿದ ಕೊಳದ ತಳದಿ ನೀರಿಲ್ಲದೆ
ಮಿಡಿವ ಮೀನ ಮರೆವ
ಮುನಿಸೇತಕೆ ಚೆಲುವೆ ?

- ಶ್ರೀಗೋ.

09 Mar 2015, 01:57 pm

ಕೊರಳ ಸುತ್ತಿಗೆ...

ಕೊರಳ ಸುತ್ತಿಗೆ ...



ಕೊರಳಲ್ಲಿ ಸುತ್ತಿಕೊಂಡ

ಅದೆಷ್ಟು ದಾರಗಳು ಕಳಚಿದ್ದೇನೆ

ಈಗ ಮಾಲೆಯೊಂದಿದೆ

ಮನುಷ್ಯನಾದ ಮೇಲೆ.



ಹಿಂದಿನ ದಾರಗಳು

ರೂಪಾಂಕುರವಿತ್ತು

ಆದರೆ ಅವುಗಳು

ಗಂಟ್ಟಲು ಬಿಗಿವ ದಾರಗಳಾಗಿದ್ದವು.



ಒಂದೊಂದು ಸಹ

ಪಡೆಯುವಾಗ ಚಿನ್ನದಂತೆ

ಅಂದುಕೊಂಡೆ, ಕಾಲ ಕಳೆದಂತೆ

ಚಿನ್ನ ಹೊದ್ದ ಕಬ್ಬಿಣವಾಗಿತ್ತು.



ಕಬ್ಬಿಣವಾದರು ಪರವಾಗಿಲ್ಲ ಅನ್ನಿಸಿದಾಗ

ಮಸೆದ ಖಡ್ಗವಾಗಬೇಕೆ ?

ಕುತ್ತಿಗೆಗೆ ಸಂಚಕಾರ ಬಂದಾಗ

ಕೊಂಚವು ಅಂಜದೆ ಮಂಡ ಮಾಡಿದೆ.



ಇನ್ನು ನನ್ನ ಕಪಾಟ್ಟಿನಲ್ಲಿ ಒಂದಾಷ್ಟು ದಾರಗಳಿವೆ

ಜಾಗ್ರತೆಯಿಂದ ಖರೀದಿಸಿದ್ದು

ಜಾರುವ ಕುರವುಗಳಿಲ್ಲ..!

ಆದರೂ ಮಾಲೆಯಲ್ಲಿದ್ದೆನೆ ಮನಷ್ಯನಾದ ಮೇಲೆ.....



-ಈಶ, ಎಂ.ಸಿ.ಹಳ್ಳಿ

- ಈಶ, ಎಂ.ಸಿ.ಹಳ್ಳಿ

08 Mar 2015, 01:57 pm

ಬಿಸಿಲು

ಬಾಯಾರಿದಾಗ
ಬಿಸಿಲೇರಿ
ಮನಸ್ಸೆನ್ನುವುದು
ಆಹಾ ಏನ್ ಬಿಸ್ಲೂ ರೀ..
ಕಾಸಿದ್ದರೆ
ಬಿಸ್ಲೆರಿ
ಇಲ್ಲದಿದ್ದರೆ
ನೆನಪಾಗುವುದು
ತುಂಗಾ ಕಾವೇರಿ.

ಕ್ರಷ್ಣಮೂರ್ತಿ ಚಿತ್ರಶೆಟ್ಟಿಹಳ್ಳಿ

- ಕ್ರಷ್ಣಮೂರ್ತಿ ಚಿತ್ರಶೆಟ್ಟಿಹಳ್ಳಿ

07 Mar 2015, 02:21 pm

ಮೀಸೆ

ಮೀಸೆ ಚಿಗುರಿದಾಗ ಖುಷಿ ಖುಷಿ
ಬಲಿತಾಗ ಕಸಿವಿಸಿ
ಹಣ್ಣಾದಾಗ ಬಳಿಯುವಿರೇಕೆ
ಕಪ್ಪು ಮಸಿ?


ಕ್ರಷ್ಣಮೂರ್ತಿ ಚಿತ್ರಶೆಟ್ಟಿಹಳ್ಳಿ

- ಕ್ರಷ್ಣಮೂರ್ತಿ ಚಿತ್ರಶೆಟ್ಟಿಹಳ್ಳಿ

07 Mar 2015, 02:18 pm

ಅವಶೇಷ

ಧನ ಧನ ಧನ
ಕನಕ ಕನಕ
ಭಕ್ತಿ ಮುಕ್ತಿ
ಎಲ್ಲಾದಕ್ಕು ಸೂಚನೆ
ಕಾರಣವಿಲ್ಲದ ಯಾತನೆ
ಅದೇ ಕಲ್ಪನೆಯ
ಅಂತರಂಗದ ಅಧ್ಯಯನ
ಮತ್ತದೇ ಚಪ್ಪಲಿ
ಅದೇ ಪಂಚೆ
ತೂರಿ ಎಸೆದ ದಿಂಬು ಹಾಸಿಗೆ
ಇವೇ ಉಳಿಯೋದು

- ಗುರು

03 Mar 2015, 11:34 am

ಮಂಥನ

ಗಳಿಗೆಗಳ ಕೊಂದ
ಮನದ ಇಂಗಿತ
ಬನಗಳ ತೂರಿದ
ಕಾವಿದ ಸಾಂಗತ
ತೋರೆದ ಗತಕಾಲ
ತೂರಿ ಹೋದ
ಮಂದ ಬುಧ್ಧಿ
ಬದುಕೀಗೇ ದೀಘ್ರ
ಮಂಥನ.,

- ಗುರು

03 Mar 2015, 11:06 am

ನಾವೆಷ್ಟು ಮೂರ್ಖರು

ನರಕ ಪಾಪಿಯ ಬೀಡೆಂದು
ಅರಿತೂ ಮಾಡುತಿದ್ದೇವೆ
ಕೆಡುಕನ್ನು

ಮಾಡದೆ ಒಳಿತ
ಬೇಡುತಿದ್ದೇವೆ ಸ್ವರ್ಗದ
ಸುಖವನ್ನು

ಎಂ.ಐ.ಕೆ

- ishak

03 Mar 2015, 10:35 am

ನೆನಪು

ಮರೆಯೋದು ಮರೆಸೋದು ಮಾತುಗಳನ್ನು ಮಾತ್ರ, ಮರೆಯದೇ ಮನಸ್ಸಲ್ಲಿ ಮನೆ ಮಾಡೋದು ಮರೆಯಲಾಗದ ನೆನಪುಗಳನ್ನು
ಮಾತ್ರ.

- ಸುನಾಗ್

02 Mar 2015, 02:36 pm

ಮರೆತರೆ?

ಸೌಭಾಗ್ಯದಿ
ಬಂದ ಹಾದಿಯ
ಅಧಿಕಾರದಿ
ಸ್ವಂತ ಜನರ
ಕಂಡವಳಿಗಾಗಿ
ಕಟ್ಟಿಕೊಂಡವಳ
ಯವ್ವನದಿ ಹೆತ್ತವ್ವಳ
ಕಷ್ಟದಿ ಕೈ ಹಿಡಿದವರ
ವಿದ್ಯೆ ಕಲಿಸಿದ ಗುರುವ
ಮರೆತರೆ
ನೀ ಹೇಗೆ ಮಾನವನಾಗುವಿ

ಎಂ.ಐ.ಕೆ

- ishak

02 Mar 2015, 05:20 am

ಮಾತೇ

ಮಾತೇ....

ಕತ್ತಲೆಯಲ್ಲಿದ್ದವರು
ಬೆಳಕ ಬೇಡಲು.
ಕಿರಣ ಬೀರಲು
ಕದವ ತೆರೆದಳು
ಕರುಣಮಾಯಿ ಅಮ್ಮ...

ಮಮತೆಯ ಮರೆತ
ಮನುಜನ ಕೊರೆತೆ
ಅಮೃತವೆಲ್ಲ ವಿಷವಾಗಿರಲು
ವಿಷಾದಾವೆಲ್ಲ ವಿದ್ಯೆಯಂತೆ
ಪ್ರೇಮವನ್ನಿತ್ತ ಅಮ್ಮ...

ಜಗದ ನಾಲಿಗೆ
ಕಹಿಯಾಗಿದೆ ಇಂದು
ರುಚಿಕಾಣದ ಮನಸ್ಸು
ರೋಚ್ಚಿನಲ್ಲಿದ್ದ ಕಣ್ಣುಗಳಿಗೆ
ಶಾಂತಿಸಿದಳೀ ಅಮ್ಮ...

ಬೇದಭಾವದ ಬದುಕಿನಲಿ
ಬೇಧಿಸಲಾಗದೀ ನಾಲಿಗೆಗೆ
ಬಂಧಿಯಾದ ಅತ್ಮಗಳಿಗೆ
ಭಾವೈಕತೆಯ ಸಮಸ್ಯೆಯನ್ನು
ಭಾವುಗಳಿಂದ ಬೇಸೆದಳೀ ಅಮ್ಮ...

ಲೋಕನಾಯಕಿ ಲೇಪದಲಿ
ಲೋಕಾಮೃತೆ ಪ್ರೀತಿಯಲಿ
ಗೋಮಾತೆ ತ್ಯಾಗದಲಿ
ಆನಂದಮಾಯಿ ಆರ್ದ್ರತೆಯಲಿ
ಅದೆಲ್ಲವು ಈ ಅಮ್ಮನಲಿ....

-ಈಶ, ಎಂ.ಸಿ.ಹಳ್ಳಿ

- ಈಶ, ಎಂ.ಸಿ.ಹಳ್ಳಿ

01 Mar 2015, 03:46 am