Kannada Poems
Deprecated: Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ನಕ್ಕು ಬಿಡು
ನಯವಂಚಕರ ನಡುವೆ.
ನಡೆಯದು ನಿನ್ನ ನಿಯತ್ತು
ನಕ್ಕು ಬಿಡು
ನೆಮ್ಮದಿ ಇರದ ಜಾಗದಲ್ಲಿ.
ದೇಹ ರಚಿ ಕಾಣದು
ನಕ್ಕು ಬಿಡು
ನಾನು ನನ್ನದು ಎನ್ನುವರ ಮುಂದೆ.
ನಾವು ಅವರ ಅಂದಕಲ್ಲ
ನಕ್ಕು ಬಿಡು
ನೆರಳನ್ನ ಅಳಿಸುವವರ ಹಿಂದೆ.
ನುಕುವರು ಮುಳ್ಳಿನ ಮೇಲೆ
ನಕ್ಕು ಬಿಡು
ನಾಲಿಗೆಗೆ ಮೋಸ ಮಾಡುವರ ಮಾತಲ್ಲಿ.
ನಿನ್ನ ಚರ್ಮ ಚಪ್ಪಲಿ ಯಾದಿತು
ನಕ್ಕು ಬಿಡು
ನಿದ್ರೆಸುವಂತೆ ಗೊರಕೆ ಹೊಡೆಯುವರ ಉಸಿರಿಗೆ.
ನಿದ್ರೆ ಇಲ್ಲದಂತೆ ಮಾಡಿಯಾರು
ನಕ್ಕು ಬಿಡು
ನನ್ನಿಂದ ಬೆಳದಿದ್ದು ನೀನು ಎಂದಾಗ.
ಬೆಳೆಗೆ ಬೆಂಕಿ ಇಟ್ಟಾರು
ನಕ್ಕು ಬಿಡು
ಬೇಕೆಂದಾಗ ಹೊಗಳಿ ಬೇಡವಾದಾಗ.
ಕಥೆ ಕಟ್ಟಿ ಹರಿಕಥೆ ಮಾಡವರು.
ನಕ್ಕು ಬಿಡು
ದಾರಿ ತಪ್ಪಸಿ ದೊರೆಯಾದವರೆದರು.
ಕೊನೆಯ ದಾರಿಯೊ ಮುಚ್ಚಿಯಾರು.
-ಈಶ, ಎಂ.ಸಿ.ಹಳ್ಳಿ
- ಈಶ, ಎಂ.ಸಿ.ಹಳ್ಳಿ
04 Jan 2015, 08:42 am
ಯಾವಾಗ ಬರೆಯುತ್ತಾನೆ
ಈ ಅಪ್ಪ ವಿಲ್ಲು
ಎಂದು ಕಾಯುತ್ತಿರುವ ಮಗನೇ
ಅಪ್ಪನ ಪಾಲಿಗೆ ಡೆವಿಲ್ಲು
- ಶ್ರೀನಿವಾಸ ಮೂರ್ತಿ ಎಸ್ ವಿ
29 Dec 2014, 04:35 pm
ಹಿಂದೆ ತುಂಡುಡುಗೆಯಲ್ಲಿ ದೇಶ ಸುತ್ತಿದರು
ದೇಶಭಕ್ತ ಮೋಹನದಾಸರು
ಇಂದು ತುಂಡುಡುಗೆ ಬೆಡಗಿಯರ ಹಿಂದೆ
ಸುತ್ತುತ್ತಿದ್ದಾರೆ ಮೋಹದ ದಾಸರು
- ಶ್ರೀನಿವಾಸ ಮೂರ್ತಿ ಎಸ್ ವಿ
29 Dec 2014, 04:31 pm
ಪ್ರತಿಯೊಂದು ಕ್ರಿಕೆಟ್ ತಂಡದಲ್ಲೂ
ಇರುವಂತೆ ಒಬ್ಬಿಬ್ಬರು ಸ್ಪಿನ್ನರು
ಪ್ರತಿಯೊಂದು ರಾಜಕೀಯ ಪಕ್ಷದಲ್ಲೂ
ಇರುತ್ತಾರೆ ನೂರಾರು ಭಿನ್ನರು
- ಶ್ರೀನಿವಾಸ ಮೂರ್ತಿ ಎಸ್ ವಿ
29 Dec 2014, 01:51 am
ಸರ್ಕಾರಿ ಕೆಲಸಕ್ಕಾಗಿ ಶ್ರೀಮಂತರು
ತೋರಿಸುತ್ತಾರೆ ಹಣದ ಆಮಿಷ
ಆದರೆ ಮುಂದೊಂದು ದಿನ
ಬಡವರನ್ನು ಸುಡುತ್ತದೆ ಆ ವಿಷ
- ಶ್ರೀನಿವಾಸ ಮೂರ್ತಿ ಎಸ್ ವಿ
29 Dec 2014, 01:46 am
ಮಾಡಿದ ಅಡುಗೆಯಲ್ಲಿ ಪ್ರತಿದಿನ ಆತನಿಗೆ
ಸಿಂಹಪಾಲನ್ನು ಎತ್ತಿಡಬೇಕು
ಪರಿಣಾಮ ಈಗ ಅವನನ್ನು ಕುಳಿತಲ್ಲಿಂದ
ನಾಲ್ವರು ಸೇರಿ ಎತ್ತಿಡಬೇಕು...
- ಶ್ರೀನಿವಾಸ ಮೂರ್ತಿ ಎಸ್ ವಿ
28 Dec 2014, 02:01 pm
ಆತ ಸಭೆಯಲ್ಲಿ ಭಾಷಣ ಬಿಗಿಯುತ್ತಿದ್ದ
'ಹೋರಾಡಬೇಕು ನಾವು ನಮ್ಮ ಸ್ವಾತಂತ್ರ್ಯದ ಹಕ್ಕಿಗಾಗಿ'
ಮನೆಗೆ ಬಂದೊಡನೆ ಮಾಡಿಸಿದ
ಒಂದು ಬಂಗಾರದ ಪಂಜರ ಹಾಡುವ ಹಕ್ಕಿಗಾಗಿ
- ಶ್ರೀನಿವಾಸ ಮೂರ್ತಿ ಎಸ್ ವಿ
28 Dec 2014, 01:36 pm
ಹುಡುಗ ಕೇಳಿದ 'ಪ್ರಿಯೆ, ನನ್ನ ಪ್ರೀತಿಗೆ
ಸಾಟಿ ಯಾವುದು ಹೇಳು, ಮುಗಿಲೆ? ಕಡಲೆ?'
ಹುಡುಗಿ ಹೇಳಿದಳು 'ನಿಲ್ಲಿಸು ನಿನ್ನ ಬಡಾಯಿ,
ಕೊಡಿಸಲಿಲ್ಲ ನೀನು ತಿನ್ನಲು ಎಂಟಾಣೆ ಕಡಲೆ'
- ಶ್ರೀನಿವಾಸ ಮೂರ್ತಿ ಎಸ್ ವಿ
28 Dec 2014, 01:18 pm
ಕಾಯುತ್ತಿರುವೆ ಕೆಂಪಿ
ನಿನಗಾಗಿ ನಾ ಹೀಗೆ
ಹತಾಶ ಹೃದಯವ
ಹೊತ್ತುಕೊಂಡು
ಕವಾಟದ ಬಿಸಿ ರಕ್ತಕೆ
ಮಂಜು ಮೆತ್ತಿಕೊಂಡು
ನಿನ್ನ ಗೆಜ್ಜೆಕಾಲಿನ
ಹೆಜ್ಜೆ ಗುರುತಿನ ಮೇಲೆ
ಕೈಯಿಟ್ಟು ಕಣ್ಣೀರಿನ
ಮುತ್ತಿನ ಹನಿಗಳಿಂದ
ಸಿಂಗರಿಸಿಕೊಂಡು
ಆ ದರಿದ್ರ ಬಾಗಿಲು ಯಾಕೋ
ನನ್ನನ್ನೇ ಮೋಹಿಸುತ್ತಿದೆ
ಪದೇ ಪದೆ ನಾನಿಟ್ಟ ನೋಟಕೆ
ಭೂಗರ್ಭದಲ್ಲಿ ಅಲ್ಲೆಲ್ಲೋ
ಇದೆಯಂತೆ ಲಾವಾ
ಅದಕ್ಕೇನು ಕೆಲಸ ಅಲ್ಲಿ?
ಸಿಡಿದು ಕಾರಂಜಿಯಾಗಬಾರದೇ ಇಲ್ಲಿ?
ನಿನ್ನ ವಿರಹದುರಿಯಿಂದ
ಕೊಂಚ ತಂಪು ಕಂಡೇನು...
ಬದುಕುವಾಸೆ ಕಳೆದುಬಿಟ್ಟೆ ನೀನು
ಸಾಯೋಣವೆಂದರೆ ಇನ್ನೂ
ಬದುಕಿರುವೆ ನೀನು
ಮಲ್ಲಿಗೆಯ ಹಾರ ಹಿಡಿದು
ಇಂದು ಸಂಜೆ ಕರೆಮಾಡು
ನಾ ಬದುಕಿದ್ದರೆ
ಮುಡಿದು ಕೊಂಡುಬಿಡು
ಇಲ್ಲದಿದ್ದರೆ ನನ್ನ
ಭಾವಚಿತ್ರಕ್ಕೆ ಹಾಕಿಬಿಡು
ಆ ಮಲ್ಲಿಗೆಯಾದರೂ
ನೆಮ್ಮದಿ ಕಾಣಲಿ
ನಿನ್ನ ಸನಿಹದಲಿ
-ಸೂರ್ಯಸಾರಥಿ
- ಅರುಣ್ ಜಾವಗಲ್
27 Dec 2014, 04:28 am
* ಹಸಿವನ್ನು ವರ್ಣಿಸುವ ನಾನು *
ಹಸಿವನ್ನು ವರ್ಣಿಸುವ ನಾನು!
ಓಲೆಯ ಬೆಂಕಿ ಹಚ್ಚಲಿಲ್ಲ
ಮಾಷಣದಲ್ಲಿ ಬೆಂಕಿ ಇಟ್ಟೆ
ಮಡಿಕೆಯಲಿ ಬೂದಿ ಕೊಟ್ಟೆ.
ನಿರ್ಗತಿಕರ ಹಾಡು ಹೇಳುವ ನಾನು!
ನೆರಳಿನ ಪಾಯ ಹಾಕಲಿಲ್ಲ
ವರುಣನಾ ನೆತ್ತಿ ಮೇಲೆ ಬಿಟ್ಟೆ
ಕರುಳಿಗೆ ಕೊಚ್ಚೆ ನೀರ ಕೊಟ್ಟೆ.
ತತ್ವ ಸಿದ್ಧಾಂತ ಬೋಧಿಸುವ ನಾನು!
ಸಿದ್ಧಾಂತದ ಮಂಟಪ ಕಟ್ಟಲಿಲ್ಲ
ಪುಸ್ತಕದ ಅಳೆ ಖಾಲಿ ಬಿಟ್ಟೆ
ಹತ್ತು ಬೆರಳ ಅತಂತ್ರ ಕಾಲು ಕೊಟ್ಟೆ.
ಹೆಣ್ಣನ್ನು ಪೂಜಿಸುವ ನಾನು!
ಹೆತ್ತವಳ ಜಗನ್ಮತೆಯಂತೆ ಕಾಣಲಿಲ್ಲ
ಕಾಮದ ಕಣ್ಣಿನ ಬಾಣ ಬಿಟ್ಟೆ
ಶೋಷಣೆಯ ಸೆರಮನೆ ಕಟ್ಟಿ ಇಟ್ಟೆ.
ಎಲ್ಲವು ನನ್ನದಲ್ಲ ಎಂದು ಹೇಳುವ ನಾನು
ಮನೆ ಮಠ ಮಣ್ಣ ಬಿಡಲಿಲ್ಲ
ಭೋಗದ ಬಾಗಿಲ ಬಡಿಗಿಯಾಗಿ ಬಿಟ್ಟೆ
ನಾನು ನನ್ನದೆಂಬ ಬಾವಿಯ ತೆಗೆದುಕೊಂಡೆ....
-ಈಶ, ಎಂ.ಸಿ.ಹಳ್ಳಿ
- ಈಶ, ಎಂ.ಸಿ.ಹಳ್ಳಿ
23 Dec 2014, 03:16 am