Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ವಾಲ್ಮೀಕಿ ಒಬ್ಬ ಬೇಡ

ವಾಲ್ಮೀಕಿ ಒಬ್ಬ ಬೇಡ
ದಾಸೀಮಯ್ಯನೊಬ್ಬ ಜಾಡ
ಕನಕನೊಬ್ಬ ಕುರಿಗಾಯಿ
ಎಂದನೊಬ್ಬ ಮೂಢ
ಹೌದು ಹೌದು ಎಂದು ಮನದಿ
ಹೇಳುತಿಹರು ಹಲವರು
ಅವರು ಜಾಣ ಕುರುಡರು
ಮಹನೀಯರ ತತ್ವವನ್ನು ಎಂದೂ ಹರಡರು

ಜಾತಿ ಜಾಡ ಹಿಡಿದುಕೊಂಡು
ಹೊರಟಿಹರು ಹಲವರು
ಜಾಡಿನಲ್ಲಿ ಮೂಢರಾಗಿ
ಸಮಾಜದಲ್ಲಿ ಕೇಡ ಹೋತ್ತಿಸಿಹರು
(ಬಿತ್ತಿದರು)

ಗಾಳಿ ನೀರು ಬುವಿಯಲ್ಲಿ
ಭೇದವಿಲ್ಲ ಜಗದಲಿ
ತಾಯ ಗರ್ಭದಲ್ಲಿ ನಾವು ನೀವು
ಒಂದೇ ಎಂಬುದು ಅರಿಯಲಿ

ಬಾಳ ಮಾವು ಸವಿದು
ಒಂದೇ ಭಾವ ಹರಡಲಿ

- ಈರಪ್ಪ ಸೊರಟೂರ

04 Dec 2014, 03:29 am

ಮಂಜಿನ ಹನಿ

ಹಿಂದಿರುಗಿ ನೋಡದೆ
ಆ ದಾರಿಯಲಿ ನೀನಂದು
ಮುನ್ನಡೆಯಲು…
ಎಸಲಿಲ್ಲದ ಹೂವಿನ ಮೇಲೆ
ಜಾರಿಬಿದ್ದ ಮಂಜಿನ ಹನಿಯಂತೆ
ಒಡೆದು ಹೋದದ್ದು
ನನ್ನ ಕನಸುಸಗಳಾಗಿದೆ
'
ಅಶ್ವತ್ ,ಬಿ. ಎನ್

- ಅಶ್ವತ

04 Dec 2014, 02:52 am

*-ಪ್ರಯತ್ನ-*

ಯತ್ನಿಸು ಯತ್ನಿಸು ಗೆಳಯ ಪ್ರಯತ್ನಿಸು ,
ಯತ್ನಿಸು ಯತ್ನಿಸು ಗೆಳಯ ಪ್ರಯತ್ನಿಸು ,
ಸಾಧನೆ ಸಾವಿರ. ಮೆಟ್ಟಿಲೇನಲ್ಲ,
ಅಡಿ ಅಡಿಗಳನಿಡೆ ಮೆಟ್ಟುವೆವೆಲ್ಲ, .
ಯತ್ನಿಸು ಯತ್ನಿಸು ಗೆಳಯ ಪ್ರಯತ್ನಿಸು ,
ಯತ್ನಿಸು ಯತ್ನಿಸು ಗೆಳಯ ಪ್ರಯತ್ನಿಸು ,

//ಶ್ರೀ ವತ್ಸ//

- ಶ್ರೀವತ್ಸ

03 Dec 2014, 04:58 pm

ನೇಚರ್ -ಟೀಚರ

ನೇಚರನಲ್ಲಿ ಟೀಚರ್
ನೋಡಿದ ನಾನು ಪಾಪರ್
ಯಾತಕೆ ಆದೆನು ಪಾಪರ್
ನೇಚರ ಅಲ್ಲಿ ಸೂಪರ್

ನೇಚರ್ ತುಂಬಾ ಗ್ರೀನು
ಟೀಚರ ಪೌಡರ್ ಶೈನು
ಹತ್ತಿಸ ಬೇಕು ಮೇಡಮ್ಮನಾ ಟ್ರೈನು
ಜಿಟಿ ಜಿಟಿ ಬಂತು ರೇನು

ಜಿಟಿ ಜಿಟಿ ಮಳೆಯಲಿ ನೇಚರ್
ನೋಡಲು ತುಂಬಾ ಸೂಪರ್

ಮಳೆಯಲಿ ನೆನೆದರು ಟೀಚರ್
ಹೋಯಿತು ಪೌಡರ್ ಸರ್ಸರ್
ನೇಚರ್ ಇನ್ನೂ ಸೂಪರ್
ಆದರೂ ಟೀಚರ್ ಪಾಪರ್

- ಈರಪ್ಪ ಸೊರಟೂರ

03 Dec 2014, 04:45 pm

ಕರ್ಮಜ್ಞ

ಮುಸ್ಸಂಜೆಯೊಳ್ಕರೆಂಟಿಲ್ಲದಿರೆ. ಗುಂಯಿಗುಡುತಲೀ...ಕೈಗೆಟುಕದಾಜಾಗದೊಳ್ ಕುಳಿತುತನುವ ಕೊರೆಕೊರೆದು. ಗಟಗಟನೆ ನೆತ್ತರ ಹೀರಿನುಸಿಗಳ್ ಸುಖಿಸುತಿರೆ,ನನ್ನೇ ನಾನದೆಷ್ಟು. ಹೊಡೆದುಕೊಳ್ಳಲೀ .... ಕರ್ಮಜ್ಞ

ಅಶ್ವತ್...

- ಅಶ್ವತ

03 Dec 2014, 04:38 pm

ಕಿನಾರೆ

ಆಳ ಅಳೆಯಲಾರದ ಸಮುದ್ರದಲ್ಲಿ..
ಆಯ ತಪ್ಪಿ ಬಿದ್ದಾಗ,
ಅವರಿವರ ಸಹಾಯದಿಂದ
ಹೇಗೋ ದಡ ಸೇರಿದೆ......
ಹೃದಯದಾಳದಿಂದ ಬಂದ ಭಾವವೆಂದು ನಂಬಿ,
ಅವನ ಪ್ರೀತಿಯ ಅಲೆಯಲ್ಲಿ ತೇಲಿ ಹೋದಾಗ....
ಎಷ್ಟು ಕೈಚಾಚಿದರೂ...ಸಿಗದಾಗಿದೆ,
ಎಷ್ಟು ಕಣ್ಣರಳಿಸಿದರೂ....ಕಾಣದಾಗಿದೆ,
ಬದುಕಿನ ಕಿನಾರೆ.

- ನಿಮ್ಮಿ

02 Dec 2014, 04:20 pm

ತಡ

ಅಮವಾಸ್ಯೆಯ ರಾತ್ರಿಯಲ್ಲಿ
ಕಂಡ ಕನಸುಗಳೆಲ್ಲ
ಬೆಳದಿಂಗಳ ಬೆಳಕಲ್ಲಿ
ನನಸಾಗಲು ಸಜ್ಜಾಗುತಿವೆ..
ಮೋಡ ಬಿಟ್ಟು ಹೊರಬರಲು
ಚಂದಿರ ಯಕೋ
ತಡ ಮಾಡುತ್ತಿದೆ.

- ನಿಮ್ಮಿ

02 Dec 2014, 04:11 pm

ಬಲೆ

ಎಂದೋ ಒಮ್ಮೆ ಕಂಡ
ನಿನ್ನ ಮೋಹಕ ನೋಟದ
ಬಲೆಗೆ ಸಿಲುಕಿಕೊಂಡು....
ಇಂದಿಗೂ ಅದರಿಂದ ಹೊರಬರಲಾರದೆ...
ಅದರೊಳಗೆ ಇರಲಾರದೆ.......
ವಿಲಿ ವಿಲಿ ಒದ್ದಡುವಂತಾಗಿದೆ,
ಮೈ ಛಳಿ ಬಿಟ್ಟು ಈಜದಂತಾಗಿದೆ.

- ನಿಮ್ಮಿ

02 Dec 2014, 04:07 pm

ದಿಗಂತ

ಭೂಮಿಯ ನದಿ ನಾನಾದರೆ...
ನಾ ಸಾಗಿದೆಡೆಯೆಲ್ಲಾ ಕಾಣುವ ಆಗಸ ನೀ..
ಆವಿಯಾಗಿ ನಿನ್ನ ಸೇರಬೇಕೆಂದೆ..
ಮಳೆಹನಿಯಾಗಿ ನಿನ್ನ ಪಡೆಯಬಯಸಿದೆ..
ನಾ ಆವಿಯಾಗುವ ಮುನ್ನ,
ನೀ ಮಳೆ ಹನಿಯಾಗಿ ಧರೆಗಿಳಿದೆ.
ನಿನ್ನ ಸೇರುವ ಕನಸು,ನಿನ್ನ ಪಡೆಯುವ ಆಸೆ..
ಮಳೆನೀರಾಗಿ ನದಿಯಲಿ ಕೊಚ್ಚಿ ಹೋಗಿದೆ..
ನೀರಿಲ್ಲದ ನದಿಯಾಗಿ ನಾ ಬರಿದಾಗಿರುವೆ,
ದಾಹ ತಣಿಸಲಾರದ ಬರೀ...ನೆಲವಾಗಿರುವೆ,
ನಾನಿಂದು ಭುವಿಯಾದರೇ....
ನೀನದೇ ಅಂಬರವಾಗಿರುವೆ.
ನಿನ್ನ ಪಡೆಯುವ ಮಾತೇ ಇಲ್ಲ.....
ನಾವಾಗಲೇ ಒಂದಾಗಿದ್ದೆವೆ....
ಅಂತ್ಯವೇ ಇಲ್ಲದ ದಿಗಂತದಂತೆ.
ಎಂದೆಂದೂ ಸೇರಿದಂತಿದ್ದರೂ,
ಎಂದೆಂದಿಗೂ ಒಂದಾಗಲಾರದಂತೆ.........

- ನಿಮ್ಮಿ

02 Dec 2014, 04:01 pm

ಹಂಬಲ

ನಿನ್ನ ಕುಡಿನೋಟಕ್ಕಾಗಿ
ಕಾದು ಕಾದು ಕವಿತೆಯಾಗಿ
ಅಕ್ಷರಗಳಲ್ಲಿ ಅಡಗಿ ಹೋಗಿ
ಪುಸ್ತಕ ಸೇರಿರುವೆ....
ನೀ ಪುಟ ತೆರೆದು ನೋಡಲೇ ಇಲ್ಲ

ನಿನ್ನ ಸವಿ ಸ್ಪರ್ಶದ
ಸೆಳೆತಕ್ಕೆ ಸಿಲುಕಿ
ಸೋತು ನಿಂತಿರುವೆ....
ನೀ ಕೈಹಿಡಿದು ಕರೆದೋಯ್ಯಲೇ ಇಲ್ಲ

ನಿನ್ನ ಪ್ರೀತಿಯ ಬೆಚ್ಚಗಿನ ಭಾವದಲ್ಲಿ
ಮಿಂದೇಳಬೇಕೆಂದು
ಧರೆಯಾಗಿ ಕಾದೆ.....
ನೀ ಮೋಡ ಬಿಟ್ಟು ಹೊರಬರಲೇ ಇಲ್ಲ

ನನ್ನಿಂದ ತಪ್ಪಿಸಿಕೋಬೇಡ...
ನಾ ಬೇಡವಾದರೇ ಹೇಳಿಬಿಡು.
ಕವಿತೆಯಾಗಿ ಕಾಡದೇ..ನಿನ್ನೆಡೆಗೆ ಕೈಚಾಚದೇ...
ಧರೆಯಾಗಿ..ನಿನಗಾಗಿ ಬಾಯಿಬಿಡದೆ...

ನೀನು ಬದುಕಲು ಬೇಕಾಗಿರುವ
ಪಂಚಭೂತಗಳಲ್ಲಿ ಲೀನವಾಗಿ...
ನಿನ್ನ ಪ್ರತಿ ಉಸಿರಿಗೇ...ಕಾರಣವಾಗಿಬಿಡುವೆ...
ನೀ ಕೊನೆ ಉಸಿರೆಳೆಯುವವರೆಗೆ..
ನನಗಾಗಿ ಹಂಬಲಿಸುವಂತಾಗುವೆ.

- ನಿಮ್ಮಿ

01 Dec 2014, 04:01 pm