ಹೀಗೆಂದು ಆಗುತ್ತದೆಂದು ತಿಳಿದಿರಲಿಲ್ಲ
ನಾನೇಕೆ ಹೀಗಾದೆ..
ಕಾಯುವಿಕೆಯು ನನ್ನಲ್ಲೂ ಇರುವುದೇ.....??
ಪ್ರೀತಿ ಇರದೆ ಸ್ನೇಹ ಬರುವುದೇ...??
ಕನಸಿನ ಕನವರಿಕೆಗೆ ಕಾರಣ ನೀನು
ಮನಸಿನ ಮಾತಿಗೆ ಮಂದಾರ ನೀನು
ಕಾಲ ಕಳೆಯುವುದು ಬೇಡವೆಂದರೂ..
ನಿನ್ನ ಜೊತೆಗಿರುವೆ ನಾ ಎಲ್ಲಿದ್ದರೂ..
ನಿನ್ನ ಮನದಲ್ಲೊಂದು ಪುಟ್ಟ ಜಾಗ ಕೊಡು ನನಗೆ..
ನಾ ಅಲ್ಲೆ ಬಂಧಿಯಾಗುವೆ ಬೆಚ್ಚಗೆ...
ನಿದಿರೆಯಲಿ ಕಾಡುವೆ ಏಕೆ ನೀರೆ
ಕಣ್ಣೆದುರಿದ್ದರು ಯಾಕೀ ಮೌನ ಒಲವೆ...??
ಬೇಡವಾಯಿತೆ ನನ್ನೀ ಪ್ರೀತಿ
ಬದುಕಲಾರೆ ನಿನ್ನ ರೀತಿ
ಹೇಗಿರುವೆ ನೀನು ನನ್ನನಗಲಿ
ಕಲಿಸಿಕೊಡು ನೀನಿರುವ ಪರಿ
ಮನಬಿಚ್ಚಿ ಮಾತಾಡು ಒಮ್ಮೆ
ಅಪ್ಪುಗೆಯಲಿ ಬಂಧಿಸುವೆ ಸುಮ್ಮನೆ
ಸಾಕು ಗೆಳತಿ ಈ ದೂರ
ನೀ ಬೇಕು ಇನ್ನೂ ಹತ್ತಿರ
ನನ್ನ ಮನದ ದೇವತೆ ನೀನು
ಕಾಯುವೆ ಪ್ರತಿ ಜನುಮ ನಾನು...
ಹಣೆಬರಹಕ್ಕೆ ಹೊಣೆ ಯಾರು...?? ಆತನು ಆಡಿಸಿದಂತೆ ಆಡುವ ಗೊಂಬೆಗಳು.. ಇದ್ದ ಷ್ಟು ದಿನ ಇರುವವರ ಜೊತೆಗೆ ನಗು ಮೊಗದಿಂದ ಬದುಕುವುದೇ ಜೀವನ ಆಗಿದೆ... ಮನದೊಳಗಿನ ಸಂತಸದ ದಿನಗಳು ದೂರವಾಗಿವೆ ಎಲ್ಲೋ ಮರೆತು... ಕಣ್ಮುಚ್ಚಿ ಕರೆದರೂ ಬಾರದ ಲೋಕಕ್ಕೆ ಜಾರಿವೆ ನೆನಪುಗಳು... ಮತ್ತೆ ಮತ್ತೆ ನೋಡುವ ಆಸೆ ನಿನ್ನ ಮೊಗದಲ್ಲಿನ ನಗುವನ್ನು.. ಮತ್ತೊಂದು ಬಾರಿ ಕೂಗಿ ಹೇಳುವೆ ನೀ ನಡೆವ ದಾರಿಯಲ್ಲಿ ,ನಿನ್ನೆಲ್ಲ ನೆನಪುಗಳನ್ನು ಮೆಲುಕಿಸುತ್ತ....
-- ಶ್ಯಾನು...
ಕೊಂಚ ನನ್ನಿಂದ ದೂರ ಸರಿದು ಬಿಡು
ಇಲ್ಲಾಂದರೆ, ನಿನ್ನ ಗುಂಗಲ್ಲಿ
ಹುಚ್ಚನಾದರೂ ಅನುಮಾನವಿಲ್ಲ..
ಯಾಕೆ ಇಷ್ಟು ಆಳವಾಗಿ ನನ್ನ ಹೃದಯದೊಳಗೆ
ಬೇರೂರಿದೆ, ಅದಕ್ಕೆ ಅನಿಸುತ್ತೆ ಪ್ರತಿ ಬಡಿತವು
ನಿನ್ನನ್ನೇ ಜಪಿಸುತ್ತಿರುವುದು..
ಬೇಕಾದರೆ ಒಮ್ಮೆ ಬಂದು ಎದೆಗೆ ಕಿವಿ ಇಟ್ಟು
ಆಲಿಸು, ನನ್ನ ಹೃದಯಬಡಿತ ನಿನ್ನನ್ನೇ
ಜಪಿಸುತ್ತಿರುವುದನ್ನು...
ಎಮ್.ಎಸ್.ಭೋವಿ...✍️
ಮುಸ್ಸಂಜೆಯ ಇಳಿ ಹೊತ್ತಿನಲ್ಲಿ..
ಮಬ್ಬುಕವಿದ ವಾತಾವರಣದಲ್ಲಿ..
ಮಂಕು ಕವಿದ ಮನಸ್ಸಿಗೆ ನೆನಪಾಯಿತು ನಿನ್ನ ಜೊತೆ ಕಳೆದ ಆ ಮಧುರ ಕ್ಷಣಗಳು ಈ ಸ್ವಚ್ಚಂದದ ಕನಮಡಿ ಪ್ರೌಢಶಾಲೆ ಅಂಗಳದಲ್ಲಿ .....
ಮತ್ತೆ ಮೂಡಿ ಬಂತು ಮುಗುಳು ನಗೆ ಈ ನನ್ನ ತುಟಿಗಳ ಅಂಚಲಿ...