Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
"ನಿನ್ನ ನಗುವೆ ಸಾಕು ನನಗೆ..
ತಳ್ಳೋದಕ್ಕೆ ಬದುಕ !
ನಿನ್ನ ಅಂದ_ಚೆಂದಕೊಂದು..
ಹೋಲಿಕೆ ಹುಡುಕೋ ತವಕ !
ಕಣ್ಣಂಚಲ್ಲೆ.. ಮಾತನಾಡೋ ಚೆಲುವೆ !
ನಿನ್ನ ಸನ್ನೆಯಲ್ಲೆ.. ನಾ_ಅರಿತಿರುವೆ !
ಜೊತೆಯಾಗಿ ! ಹಿತವಾಗಿ !
ಸಾಗಬೇಕು_ಸದಾ_ನಿನ್ನೊಡನೆ !!"
"ಉಹೆಗೂ ಬೇಡವದು..
ನೀ_ಇಲ್ಲದ ಜೀವನ !
ಸಂಬಂಧವೇ ಇಲ್ಲ ನನಗೆ..
ನಿನ್ನ_ಹೊರೆತ ಸ್ವಪ್ನ !
ಕಾಯುವೆನೆ ! ಬಾಳುವೆನೆ !
ನಿನಗಾಗಿ.. ನಾ_ಸದಾ ಎಂದು !!"
ಎಮ್.ಎಸ್.ಭೋವಿ...✍️
- mani_s_bhovi
10 Dec 2022, 10:34 pm
ಕಂಬನಿಯ ಮಿಡಿತ ಸೇರಲು
ನನ್ನ ಒಡಲಲ್ಲಿ
ಅಯ್ಯೋ ಏನೋ ತಳಮಳ
ಒಳಗೆ ಓಡಿದೆ ಆಗ
ಬೀಳಲು ಹಲ್ಲಿ ರಾಯ
ಅಪಶಕುನ ಎಂದು
ಬಾಗಿಲ ಮುಚ್ಚಿದೆ .
ಬಾಗಿಲಲ್ಲೇ ನನ್ನ ವಿಧಿ ಯ
ಅಲಿಸೆದಂತೆ ಎನಿಸಿ ಒಳ ಓಡಿದೆ
ಹೊರಗೆ ಏನೋ ಶಬ್ದ
ಜೋರಾಗಿ ಹಾಡು ಹಾಡಿದೆ ಭಯದಿಂದ
ಮುಂಜಾವು ಹುಂಜದ ಕೂಗು
ಕೇಳಿದ ನನ್ನ ಕಿವಿ
ತೆರೆಯಲು ಬಾಗಿಲು
ಬಾಗಿಲಲ್ಲಿ ಬಿದ್ದಿದೆ ನನ್ನ ಶ್ವಾನದ
ಸುಂದರ ಪ್ರೀತಿಯ ಶವ
ಅಪಶಕುನವೇ ನನ್ನ ಕಣ ಕಣದಲ್ಲೂ
ಮನದಲ್ಲೂ ಮನೆ ಮಾಡಿ
ಕೊಂಡಿದೆ ನನ್ನ ಪ್ರೀತಿಯ....!
- Nisha anjum
08 Dec 2022, 06:21 pm
ನಮ್ಮಕನ್ನಡವೇ ಸುಂದರ
ಸುಮಧುರ ಮಂದಾರ
ಯಶಸ್ಸಿನ ಕಂದರ
ಒಲವಿನ ಮಮಕಾರ ನಯನ ಮನೋಹರ
ಮಾನವ ಮುಚ್ಚುವ ಖಾದಿ ಬಟ್ಟೆಯೂ
ಮಾನವನೇ ಮೆಚ್ಚುವ ವೀಣೆಯ ನಾದವೂ
ಶೌರ್ಯ ವ ಕಲಿಸೋ ವನಿತೆಯರು
ಹುಳಿಗು ಮಣಿಸುವ ಕಲಿ ಶೂರರೂ||ನಮ್ಮ||
ಶಿಲ್ಪವೇ ತುಂಬಿರೋ ಬೇಲೂರು ಹಳೆಬೀಡು
ಕಲ್ಪಕು ನಿಲುಕದ ಜೋಗದ ಬಂಡಿ
ಮೈಸೂರು ಮಂಡ್ಯ ಉತ್ತರ ಕನ್ನಡ
ಬೆಂಗಳೂರು ಬೆಳಗಾವಿ ದಕ್ಷಿಣ ಕನ್ನಡ || ನಮ್ಮ||
ಹೆಣ್ಣುಗಳಲ್ಲ ಅಕ್ಕ ಅಮ್ಮ
ಗಂಡುಗಳೆಲ್ಲ ಅಣ್ಣ ತಮ್ಮ
ಸೋದರ ಸೋದರಿ ನಾವೆಲ್ಲ
ಇಂತಹ ಬೀಡು ಜಗದಲೆ ಇಲ್ಲ.||ನಮ್ಮ||
- Nisha anjum
08 Dec 2022, 06:21 pm
ನಿನ್ನ ಮೇಲಿನ ಆಕರ್ಷಣೆಯಲ್ಲ
ನಿನ್ನಲ್ಲಿನ ಸೌಂರ್ದಯ ನೋಡಿ
ಉಕ್ಕಿ ಬಂದ ಭಾವನೆಯಲ್ಲ.
ಕೇಳಿಸಿಕೊ.....
ನೀನಿಲ್ಲದ ಈ ಸಮಯವೇ ಹೋಗುತ್ತಿಲ್ಲ
ನಿನ್ನನ್ನೇ ಕಾಣಲು ಮನಸ್ಸು ಮತ್ತೆ ಮತ್ತೆ
ಹಾತೊರೆಯುತ್ತಿದೆ...
ನೀ ಹೀಗೆ ಕಾಡಿದರೆ ಹೇಗೆ ಗೆಳತಿ...??
ಎಮ್.ಎಸ್.ಭೋವಿ....✍️
..
..
...
..
.
- mani_s_bhovi
07 Dec 2022, 02:24 pm
ಹೇ ದಿನಕರ ಏನು ನಿನ್ನ ನೀತಿ
ನಿನ್ನ ಉದಯಕ್ಕಾಗಿ ಕಾಯುವುದು ಪ್ರಕೃತಿ
ಯಾರ ಹಂಗಿಲ್ಲ ನಿನಗೆ
ನೀನೇ ಬೆಳಕು ಬದುಕಿಗೆ
ನೀ ಬಂದರೆ ಜಗವು ಬೆಳಗುವುದು
ಅಜ್ಞಾನ ಸರಿದು ಜ್ಞಾನ ಮೂಡುವುದು..
ಏನು ನಿನ್ನ ಸಮಯ ಪಾಲನೆ
ಎಲ್ಲವೂ ಇಲ್ಲಿ ಕಾಲ ಗಣನೆ
ಯಾರಿಲ್ಲದಿದ್ದರು ಬರುವೆ ನೀನು
ಬದುಕಿನುದ್ದಕ್ಕೂ ಜೊತೆಗಾರ ನೀನು..
ಸಮಯಕ್ಕೆ ತಕ್ಕ ಬದಲಾವಣೆ ನಿನ್ನದು
ನಿನ್ನ ಕರ್ತವ್ಯ ಮಾತ್ರ ನಿಲ್ಲದು
ಕಾಲಗರ್ಭದಲಿ ಎಲ್ಲವು ಸೇರುವುದು
ಏಕಾಂಗಿಯದರು ನಿನ್ನ ದಿನಚರಿ ನಿಲ್ಲದು...
- Tanuja.K
03 Dec 2022, 10:41 pm
ನಲ್ಮೆಯ ಮನಸಿನ ಚಂದದ ನಾಯಕ
ನನ್ನ ಜೀವನದ ಅನಾಮಿಕ..
ದಿನಗಳು ಕಳೆದವು
ಕನಸುಗಳು ಕಾಲ ಗರ್ಭದಲಿ ಅಳಿದವು
ವರುಷಗಳು ಉರುಳಿದವು
ಜವಾಬ್ದಾರಿಗಳು ಬೆನ್ನೇರಿ ಬಂದವು...
ಎಲ್ಲಿರುವೆಯೋ ತಿಳಿದಿಲ್ಲ ನೀನಿನ್ನು
ಕಾಲಕ್ಕೂ ಕಾಯಿಸುವ ಆಸೆ ನನ್ನನ್ನು
ದೂರದೂರಿನ ಗೆಳೆಯ ನನ್ನವನು
ಸಮಯದ ಬೊಂಬೆ ನಾನಿನ್ನು....
- Tanuja.K
03 Dec 2022, 10:26 pm
ವಿಶ್ವಸಂಸ್ಥೆಯ ಧೇಯವಾಗಿರುವ ಐಕ್ಯತೆ ಮಂತ್ರ,
ಮನುಜರೆದೆಯಲಿ ಮೂಡಬೇಕಿದೆ ಸಮಾನತೆ ಸೂತ್ರ.
ಪ್ರಕೃತಿ ಕೊಡುವ ನ್ಯೂನ್ಯತೆಗಳಿಗೆ ತಡೆ ಇದೇ ಏನು?
ಸಂಭವಿಸಿರುವ ಘಟನೆಗೆ ಸಿಲುಕಿ ಕೊರಗುವ ನಾವು
ಮಾಡಿದ ತಪ್ಪೇನು?
ಮಗುವು ಸ್ನೇಹದಿ ನಲಿಯಲು ಸಿಗಬೇಕು ತನ್ನವರಿಂದ ಸಹಕಾರ,
ವಿಕಲತೆಯ ಮರೆತು ಮಗು ಪಡೆಯುವಂತಾಗಬೇಕು
ಸಮನ್ವಯ ಶಿಕ್ಷಣದ ಸಾಕ್ಷಾತ್ಕಾರ.
ನಮಗಿಂದು ಉಲ್ಬಣಿಸೋ ಭೀಷ್ಮನಂತ ಕಷ್ಟಗಳ
ಚೈತನ್ಯದಿಂದ ಚಿವ್ತುವ ಬನ್ನಿ ಸಮಾಜದೊಳು ನಾವು ಬೆಲ್ಲದ ಸಿಹಿಯಾಗಿ.
ಸಮುದಾಯದಿ ಹರಡಿರೋ ನ್ಯೂನ್ಯತೆ ಮೇಲಿನ ಸಂದೇಹದ ಕಿಡಿಯ
ಸ್ವಾವಲಂಬನೆ ಬೆವರ ಹನಿಗಳಿಂದ ಆರಿಸಿ
ನಾವ್ ಕಿತ್ತೊಗೆಯುವ ಬನ್ನಿ ಅಸಮಾನತೆ ಕಳೆಯ.
ಎಲ್ಲರಿಂದ ಸಿಗಬೇಕು ನಮ್ಮ ಪ್ರಗತಿಗಾಗಿ ಪ್ರೇರಣೆ,
ಅಂತಹ ಸಮಗ್ರ ಸಮಾಜ ಸೃಷ್ಟಿಸುವುದು ನಮ್ಮೆಲ್ಲರ ಹೊಣೆ,
ಜಾಗೃತಿಗೊಂಡ ಜನತೆಯಿಂದ ಬಯಸದೆ ಲಭಿಸುವುದು
ವಿಕಲಚೇತನರಿಗೆ ಸಾಂವಿಧಾನಿಕ ರಕ್ಷಣೆ.
- nagamani Kanaka
03 Dec 2022, 09:59 pm
ತಿನ್ನಲು ಅನ್ನವ ಇಲ್ಲದವರಿಗೆ ಹೊಟ್ಟೆಯ ಹಸಿವು..!
ಹೊಟ್ಟೆ ತುಂಬಿಸಲು ಕಾಡುವುದು ಹಣದ ಹಸಿವು..!
ಹಣವಂತರಿಗೆ ಮೈ ಮನ ಕಾದಿದ ಪ್ರೇಮದ ಹಸಿವು..!
ಪ್ರೇಮದಲ್ಲಿ ಮೈ ಮರೆತವನಿಗೆ ದುಡಿಮೆಯ ಹಸಿವು..!
ಮಕ್ಕಳಿಲ್ಲದ ದಂಪತಿಗಳಿಗೆ ಕರುಳ ಬಳ್ಳಿಯ ಹಸಿವು..!
ಅನಾಥ ಮಗುವಿಗೆ ಹೆತ್ತವರ ಪ್ರೀತಿಯ ಹಸಿವು..!
ಹಗಲಿರುಳು ದುಡಿಯುವರಿಗೆ ನಿದ್ದೆಯ ಹಸಿವು..!
ಅಷ್ಟ ಐಶ್ವರ್ಯ ಗಳಿಸಿದವರಿಗೆ ನೆಮ್ಮದಿಯ ಹಸಿವು..!
ಓದಬೇಕೆಂಬ ವಿದ್ಯಾರ್ಥಿಗಳಿಗೆ ಜ್ಞಾನದ ಹಸಿವು..!
ಛಲದಿಂದ ಗೆಲುವಿನ ಮೆಟ್ಟಿಲು ಏರುವವರಿಗೆ ಸಾಧನೆಯ ಹಸಿವು.....!
ಸ್ವಾತಿ S......
- Swati S
01 Dec 2022, 08:11 pm
"ಹೋಗೆಂದರೇ ಹೋದೆಯ..
ಕೋಪಕ್ಕೆ ಕಿವಿಕೊಟ್ಟು !
ಬಾ_ಎಂದರೇ ಬರುವೆಯ ?..
ತಂಗಾಳಿಲಿ ದ್ವನಿ_ಕೇಳ್ಬಿಟ್ಟು !
ನೀ ಇಲ್ಲದೆ.. ನಾ_ಎಲ್ಲುಂಟು !
ಅದರ ಕಲ್ಪನೆ ಆದ್ರು.. ನಿನಗೆ ಎಲ್ಲುಂಟು !
ನನ್ನ ಕಣ್ಣುಗಳು..
ನೀ ಬರುವ ದಾರಿಯೇ ಕಾಯುತ_ಉಂಟು !
ನನ್ನ ಮನ..
ಸದಾ ನಿನಗಾಗೆ ಪರಿತಪಿಸುತ_ಉಂಟು !
ಬಂದು_ಬಿಡೇ..
ಇರಲಾರೆ_ನಾ ನಿನ್ನ ಬಿಟ್ಟು !
ಓ_ಗೆಳತಿ_ಬಂದು_ಬಿಡೇ..
ಕಾಯಿಸಬೇಡ ನೀ_ಇನ್ನಷ್ಟು !!"
ಎಮ್.ಎಸ್.ಭೋವಿ...✍️
- mani_s_bhovi
30 Nov 2022, 07:21 pm
ಉಳಿದು ಹೋದವರು ನಾವು ಕಳೆದು ಹೋದವರು
ಅವರ್ ಬಿಟ್ ಇವರ್ ಬಿಟ್
ಮಧ್ಯೆ ತುಳಿದು ಅಳಿದು ಹೋದವರು
ಒಹೋ ದೊಂಬರಾಟ ಇದೆ ರಾಜತಂತ್ರದಾಟ ಬಿತ್ತಿ ಕುಳಿತಿಹರು ಹತ್ತಿ ಇಳಿಯುವರು ಇಳಿಸಿದವರ್ ಹತ್ತುವರು
ಕುರುಡು ಕಣ್ಣು ನೋಟ ಆಟ ನೊಡ್ ಆಟ
ನೋಟ ನೋಡುವವರ ನಾವು ನೋಡುವವರ ಇದು ಯುದ್ಧವಲ್ಲ ಮನುಜ ಇದರ ಅಸ್ತ್ರ ಕುರುಕ್ಷೇತ್ರವಲ್ಲ ರಂಗಸ್ಥಳವಾಯ್ತ್
ರಾಜಕೀಯದ್ ಆಟ
ಬಲದಲಿ ಎಡದಲಿ ಬಿಲದಲಿ ಪಣದಳಿ ರಾಜಕೀಯದಾಟ ಮೂರು ಬಿಟ್ಟವರ ನೋಡು ಏಣಿಯಾಟ
ಗುಲಾಮಗಿರಿಯು ಅಲ್ಲ ಆದರಿಲ್ಲಿ ಗುಲಾಮರೇ ಎಲ್ಲ ಇದು ಮುಗಿಯದ ನೋಟ ಬಗೆಯದ ಆಟ
ಬಡಿಸುವ ಮುನ್ನ ಎಲೆಯು ಎಂಜಲಲ್ಲ
ಆದರಿಲ್ಲಿ ಎಲೆಯೆ ಎಂಜಲಯ್ಯ
ಎಂಜಲು ನುಂಗಿದ ನುಂಗುವ ರಕ್ಕಸರೆ ಏಲ್ಲಾ..
ಶೂನ್ಯವೆಲ್ಲ ...
ಈ ರಾಜಕೀಯದ್ ಆಟ...ನೋಡ್ ದೊಂಬರಾಟ
ರಾಜಕೀಯದಾಟ
ವರ್ಷಾ ರಾಕೇಶ್ ಬಿಳಿನೆಲೆ
- Varsha Rakesh Bilinele
27 Nov 2022, 03:59 pm