ಕವನ ಹುಟ್ಟುಹಬ್ಬ.
ಸುಜ್ಞಾನದಿ ಹೊಳೆಯುತ್ತಿರುವ ನಕ್ಷತ್ರವು ನೀವು,
ನಿಮ್ಮ ಅನುಭೂತಿಯ ಸಹಕಾರವು ಬೇಕೆನಿಸಿದೆ ನನ್ನ ಕೊನೆಯವರೆಗೆ.
ಕಾಠಿಣ್ಯಕೆ ಉದ್ಗರಿಸದೆ ಮೌನಕ್ಕೆ ಶರಣಾಗೋ ನಿಮ್ಮ ಮನವು,
ಮುದುಡಿದ ಹಕ್ಕಿಗಳ ಸಂತೈಸುತ ಅವರ ಕೆಂದುಟಿಯಲಿ ಮೂಡಿಸುವುದು ಚಂದದೊಂದು ನಗುವ.
ನೊಂದ ಹೃದಯಕ್ಕೆ ಗೂಡಾಗಿದೆ ನಿಮ್ಮೆದೆಯ ಮಹಲು,
ಅಲ್ಲಿ ನಾ ಕಾಣದ ಪ್ರೀತಿಯ ಆಹ್ಲಾದಿಸುತ್ತ ನಿರಾಳ ಭಾವದಿ ನಾ ನಮಿಸುವೆ ದೇವರೇ ನನಗೆ ನಿಮಗಿಂತ ಯಾರಿಲ್ಲ ಮಿಗಿಲು.
ನಿಮ್ಮ ಅರಿವಿನ ಸಿಡಿಲು ಮನುಜರೆದೆಯಲಿ ಸಿಡಿದು,
ಸನ್ಮಾರ್ಗ ಚಿಗುರೊಡೆಯಲಿ ನವಿಲಂತೆ ನರ್ತಿಸುತ
ಗಗನದಿಕ್ತರಕ್ಕೆ ನಿಮ್ಹೆಸರ ಬರೆದು.
ನೋಟದಲೇ ನನ್ನ ನಿವೇದನೆಗೆ ಸ್ಪಂದಿಸೋ ನಿಮ್ಮ ಔದಾರಿಯ,
ವಸಂತ ಮಾಸದ ಕೋಗಿಲೆಯ ಮಾರ್ಧ್ವನಿಯೊಳಗೆ ಮೆರೆಯಬೇಕೆಂಬ ಆಸೆ ಮಹಾಶಯ.
ಕಳೆದ ಸಮಯವ ನೆನೆಯದೆ ಜೊತೆಗಿರುವ ಗಳಿಗೆಯ ತೋರೆಯದೆ,
ಸಂತಸದ ದಿನದಂದು ಸಂಭ್ರಮದ ಸಿಹಿಯಾಗಿ ನೀವ್ ಪೋರೆಯಿರಿ ನಿಮ್ಮವರ ಕೈತುತ್ತ ಮರೆಯದೆ.
ತಂಗಾಳಿ ಹೊತ್ತು ತರಲಿ ಶ್ರೀ ತಂಧದಂತ ನಿಮ್ಮ ವ್ಯಕ್ತಿತ್ವದ ಸಾರವ,
ಮಹತ್ವದ ಕನಸೊಂದ ನನಸಾಗಿಸೊ ಸಂಕಲ್ಪಕ್ಕೆ ಸಾಕ್ಷಿಯಾಗಲಿ
ಇಂದಿನ ನಿಮ್ಮ ಹುಟ್ಟು ಹಬ್ಬದ ಮಹೋತ್ಸವ.
ನನ್ನದೊಂದು ಪುಟ್ಟ ಹೃದಯ
ಅದರೊಳಗೆ ದೊಡ್ಡ ದೊಡ್ಡ ಕನಸುಗಳು,
ಆ ಕನಸುಗಳಿಗೆ ರೆಕ್ಕೆ ಕಟ್ಟಿ ಹಾರಿಸಿರುವೆ.
ನನ್ನ ಖುಷಿಯಲ್ಲಿ ತನ್ನ ಖುಷಿಯನ್ನು ಕಾಣುವೆ.
ನನ್ನ ಇಷ್ಟ ಕಷ್ಟಗಳನ್ನು ನಿನ್ನಮೇಲೆ ಹೇರಿರುವೆ.
ವರ್ಷಗಳು ಉರುಳಿದಂತೆ ನಮ್ಮಿಬ್ಬರ ಬಂಧ
ಬಿಗಿಯಾಗುತ್ತಿರಲೆಂದು ಆಶಿಸುವೆ.........
ಸ್ನೇಹ ಎಂದರೆ ಯಾವಾಗಲೂ
ನಮ್ಮ ಕಾಲುಗಳಂತಿರಬೇಕು.
ಯಾವ ಕಾಲು ಮುಂದೆ ಹೋಗಲಿ,
ಅಥವಾ ಯಾವ ಕಾಲು ಹಿಂದೆ ಉಳಿಯಲಿ,
ಸಂಬಂಧದಲ್ಲಿ ಎಂದಿಗೂ
ಅಂತರ ಬರಬಾರದು, ಹೊಂದಾಣಿಕೆ
ಅಳಿಯದೆಯೇ ಉಳಿಯಬೇಕು...!!
ಜೊತೆಗೂಡಿ ಮುಂದೆ ಸಾಗುವ
ಗುರಿಯೊಂದೇ ಪ್ರಬಲವಾಗಿರಬೇಕು...!!
ಎಮ್.ಎಸ್.ಭೋವಿ...✍️
.
..
...
....
ಕೆಚ್ಚೆದೆಯ ವೀರರು ತಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ
ಕಂಬನಿಯ ಮಿಡಿದರು
ಜೋರು ಬೊಬ್ಬಿತ್ತರು
ಬಿಲ್ಲನ್ನು ಎತ್ತಿದರು
ಬಾಣವನ್ನು ಬಿಟ್ಟರು
ಬ್ರಿಟಿಷರ ವಿರುದ್ಧ ಹೋರಾಡಿದರು
ಸೆರೆಮನೆ ಅನುಭವಿಸಿದರು
ಬಂದೂಕ ಎತ್ತಿದರು
ಕ್ರಾಂತಿಕಾರಿ ಗಳಾದರು
ಪ್ರಾಣ ತ್ಯಾಗ ಮಾಡಿದರು
ನಮಗೆ ಸ್ವತಂತ್ರ ತಂದು ಕೊಟ್ಟರು
ಅವರನ್ನು ಮತ್ತೆ ಮಗು ನೀ ನೆನಪಿಗೆ ತರು
ಮರೆಯಬೇಡ ಅವರ ಚಿನ್ನ ವಜ್ರ ಕಿಂತಲೂ ಹೆಚ್ಚು ಅವರು
ಬೆಂಕಿ ತಾಗಿಸಿಕೊಂಡು ದೀಪ ಕಿಚ್ಚಿಗೆ ಅಂಜಿದೆಂದೆಂತಯ್ಯ
ಅಂತಾದರೆ ಊರ ಬೆಳಗುವವರಾರು?
ಶಾಖಕೆ ಅಂಜಿ ಸೂರ್ಯ ಅತ್ತರೆ
ಲೋಕ ಬೆಳಗುವವರಾರು.?
ಚಳಿ ತಾಳದೆ ಶಶಿಯೆ ಕಂಬನಿ ಮಿಡಿದು ಬಿಟ್ಟರೆ
ತಾರೆಗಳಿಗೆ ಜೊತೆಗಾರರು ಯಾರು
ನನ್ನ ತಪ್ಪಾ ಕಂಡು ನನ್ನ ನೀನು ಕೈ ಬಿಟ್ಟರೆ
ನನ್ನ ಮನವ ಬೇಳಗುವವರರು ದೇವ?
ಬುದ್ಧಿವಂತಿಕೆ ಯಲ್ಲಿ ಶಶಿಯಲ್ಲಿ ಪಾದವಿತ್ತು
ಸಮುದ್ರ ರಾಜನ ಭೇದಿಸಿ ಪಳೆಯುಳಿಕೆ ಪಡೆದ
ವಾಯುವನ್ನು ಬಂಧಿಸಿ ಅಡುಗೆ ಮಾಡಿದ
ವರುಣನ ಕಲುಷಿತ ಮಾಡಿದ
ಆಧುನಿಕ ಮಾನವ ಮತ್ತೆ ಏಕೆ ಎನಿಸುವೆ ಆ ಸತ್ಯಾಯುಗದಕತೆಯನ್ನ
ಇದ್ದರೆ ನೀನು ಅಲ್ಲಿ ನಿರ್ಮಿಸುತ್ತಿದೆ
ಮತ್ತೊಂದು ಕಲಿಯುಗವ ನ್ನು ನನ್ನಾತ್ಮಾ ಲಿಂಗ