Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಆತ್ಮ ವಿಶ್ವಾಸ

ಓಡುವವರು ಓಡಲಿ
ಗೆಜ್ಜೆ ಕಟ್ಟಿ ಕುಣಿದು ಕುಪ್ಪಳಿಸಿ
ಎದ್ದು ಬಿದ್ದು ಓಡಲಿ

ಕಲ್ಲು ಮುಳ್ಳು ಚುಚ್ಚಿದರು
ನೀನು ಇಡುವ ಹೆಜ್ಜೆಯೂ
ಎಂದೆಂದಿಗೂ ನಿಲ್ಲದ
ಗೆಲುವಿನ ನಡೆಯಾಗಿರಲಿ
ಸಾಧನೆಯ ಹೆಜ್ಜೆಯಾಗಿರಲಿ


ಚಿಂತೆ ಇಲ್ಲದ ಮನವಿಲ್ಲ
ಚಿತೆ ಇಲ್ಲದೆ ಕೂಳು ಇಲ್ಲ
ಚಿಂತೆ ಇರಲಿ ಹಿತವಾಗಿ
ಚಿತೆ ಇರಲಿ ಮಿತವಾಗಿ
ಚಿಂತೆ ಚಿತೆಯೂ ಅತೀಯಾದರೆ
ಮನ ಮನೆ ಚಿತಗಾರವಾಗುವುದು






















- ರಾಜು ಹಾಸನ

25 Jul 2022, 10:08 pm

ನನ್ನವಳು...!!

ಕಣ್ಣಿನಲ್ಲೇ ಕೊಲ್ಲುವ ಚೆಲುವೆ,
ನೋಡಿ ಮರುಳಾದೆ ಒಲವೆ...!!
ಕೋಮಲವಾದ ಮುಖದ ಚೆಲುವು,
ಸೌಂದರ್ಯಕ್ಕೆ ಇವಳೇ ನಿಲವು...!!
ಬಾನಚಂದಿರನು ಸೋತಿಹನು,
ಬಣ್ಣಿಸಲಾಗದೆ ಕಳೆದೋದನು...!!
ನಗುವ ಗುಲಾಬಿಯ ನಗು ಇವಳು,
ಚಂದಿರನ ಗೆದ್ದ ಚೆಂದುಳ್ಳಿ ಇವಳು...!!
ತಾರೆಗಳಂತೆ ಮಿನುಗುವಳು,
ಬಲು ಬೇಗ ತನ್ನತ್ತ ಸೆಳೆಯುವಳು...!!
ಕನಸಲ್ಲಿ ಕಾಡುವ ಕಳ್ಳಿ ಇವಳು,
ಕಲ್ಪನಾ ಲೋಕದ ಮಹಾರಾಣಿ ಇವಳು...!!
ಎಮ್.ಎಸ್.ಭೋವಿ....✍️

- mani_s_bhovi

23 Jul 2022, 09:47 pm

ಮನ ಮೆಚ್ಚುವಳ

ಕೈ ಬೆರಳು ಖಾಲಿ ಇದೆ ನೀ ಇಡುವ ಉಂಗುರಕ್ಕಾಗಿ,
ಈ ನನ್ನ ಹೃದಯ ಸಿಂಹಾಸನವು ಕಾಯುತ್ತಿದೆ,
ಮನ ಮೆಚ್ಚುವ ನಿನ್ನ ಆಗಮನಕ್ಕಾಗಿ,
ಮನದ ಭಾವನೆಗಳ ಒಡತಿ ನಿನು,
ನಿನ್ನ ಕಾಣದೆಯೇ ಕನಸ ಕಟ್ಟಿರುವೆ ನಾನು,
ನನಗಾಗಿಯೇ ಹುಟ್ಟಿರುವ ನೀನು,
ಆದಷ್ಟು ಬೇಗಾ ನನ್ನ ಕಣ್ಣ ಮುಂದೆ ಬಂದೆ ಬರುವೆ,
ನಿನ್ನ ಎಂದು ಕಾಯುತ್ತಿರುವೆ ನಾನು,
ಕನಸಿನ ಕೋಟೆಯನೇ ಕಟ್ಟಿದೆ ಈ ಮನ,
ನನ್ನ ಮನ ಮೆಚ್ಚುವಳ ಆಗಮನಕ್ಕಾಗಿ
ಕಾಯುತ್ತಿದೆ ಪ್ರತಿ ಕ್ಷಣ.......
ಎಮ್.ಎಸ್.ಭೋವಿ....✍️

- mani_s_bhovi

21 Jul 2022, 11:03 pm

ನನ್ನವರು

ಮೊದಲು ಸಿಕ್ಕಾಗ ಸಮುದ್ರದ
ಚಿಪ್ಪಿನ ಮುತ್ತಾದೆ,
ಸ್ನೇಹದಲ್ಲಿ ಬೆರೆತಾಗ ನನ್ನನ್ನೇ ನಾನು
ಮರೆತುಹೋದ,
ನೀವು ಬಿಟ್ಟು ಹೋದಾಗ ಏನು
ತಿಳಿಯದೇ ಮೂಕನಾದೆ;
ಈ ರೀತಿ ಪ್ರೀತಿಸಿದ ಜೀವವನ್ನು
ಸಪ್ತಸಾಗರ ಮುತ್ತಿಗೆ ಹೋಲಿಸಿದೆ;
ನನ್ನ ಬಿಟ್ಟು ಬದುಕಲು ,
ಸಿದ್ದವಿದ್ದರೆ ದೇವರು ನಿನ್ನನ್ನು ;
ಚೆನ್ನಾಗಿ ಇಡು ಎಂದು ಹರಸಿದೆ.

- Laxmi Dabbanavar

20 Jul 2022, 08:53 pm

ನನ್ನ ಕಥೆ

ಕೆಲಸ ಇದೆ ಆದರೆ ಸಮಾಧಾನ ಕೊಡುತ್ತಿಲ್ಲ
ಕನಸು ದೊಡ್ಡದಾಗಿದೆ,
ಆದರೆ ದಾರಿ ತಿಳಿದಿಲ್ಲ
ಹಣ ಇದೆ,
ಆದರೆ ಯಾವುದಕ್ಕೂ ಸಾಲಲ್ಲ
ಸ್ನೇಹಿತರು ತುಂಬಾ ಇದ್ದರು,
ಆದರೆ ಈಗ ಯಾರು ಜೊತೆಗಿಲ್ಲ
ಪ್ರೀತಿಸುವವರು ಇದ್ದರು,
ಆದರೆ ಉಳಿಸಿಕೊಳ್ಳಲು ಆಗಿಲ್ಲ
ಬದಕು ನಡಿತಾ ಇದೆ,
ಆದರೆ ನೆಮ್ಮದಿ ಸಿಗುತ್ತಿಲ್ಲ
ಹೌದು ಸೊಲುತ್ತ ಇದ್ದೇನಿ,
ಆದರೆ ಪ್ರಯತ್ನ ಬಿಡುವುದಿಲ್ಲ....
ಎಮ್.ಎಸ್.ಭೋವಿ....✍️

- mani_s_bhovi

19 Jul 2022, 02:47 pm

ಅಮ್ಮ

ಮಾತೆಯ ಮಡಿಲಲ್ಲಿ;
ಮಮತೆಯ ಪಡೆದೆ,
ಯೋಜನೆ ಇಲ್ಲದ;
ಭೋಜನ ಪಡೆದೆ,
ಸ್ವಾರ್ಥವೇ ಇಲ್ಲದ ;
ಪ್ರೀತಿಯ ಪಡೆದೆ,
ಜೀವನವೆಲ್ಲ ಪಡೆದೆ;
ಅವಳಿಗೆ ನೀಡುವ ಅಂತದ್ದು ಏನಿದೆ
ಯಾರಿಲ್ಲ ನಿನ್ನ ವಾತ್ಸಲ್ಯಕ್ಕೆ
ಸರಿಸಮ ಅಮ್ಮಾ......*.

ಅಮ್ಮನ ಮಡಿಲು ಸ್ವರ್ಗ
ಈ ದೇವರ ಪುಟ್ಟ ಆಲಯ ದಲ್ಲಿ
ನನ್ನ ಜೀವನ ದಾರಿ

- Laxmi Dabbanavar

18 Jul 2022, 12:59 pm

ಕವನ"ಪರಿಸರ"

ಪರಿಸರದಲ್ಲಿ ಅಂದ ಗಿಡಗಳು
ಗಾಳಿಯಿಂದ ತಂಪು ನಮ್ಮ ಕಂಗಳು
ಪ್ರಕೃತಿಯೇ ಹಸಿರು
ಗಿಡ ಮರಗಳಿಂದ ಉಸಿರು

ಪರಿಸರದ ಸ್ವಚ್ಛ ಸುಂದರ
ಆರೋಗ್ಯಕ್ಕೆ ಲಾಭಕರ
ಗಿಡ ಉಳಿದರೆ ಜಗ ನಗುವುದು
ಗಿಡ ಕಡಿದರೆ ಜಾಗ ಅಳುವುದು

ಪರಿಸರ ಸ್ವಚ್ಛವಿಲ್ಲದಿದ್ದರೆ ಭಯಂಕರ
ಪರಿಸರ ಸ್ವಚ್ಛವಿದ್ದರೆ ಸಡಗರ
ಗಿಡ ಮರಗಳಿಗೆ ನೀರು
ಮರ-ಗಿಡಗಳಿಂದ ಉಸಿರು

ಸುತ್ತಮುತ್ತಲಿನ ವಾತಾವರಣವೇ ಪರಿಸರ
ಪರಿಸರವನ್ನು ನೋಡಿದರೆ ಸಡಗರ
ವನದಿಂದಲೇ ಮಳೆ
ಮಳೆಯಿಂದಲೇ ಬೆಳೆ

ಗಿಡ ಮರಗಳನ್ನು ಕಡಿದು ನಾಶ ಮಾಡದಿರಿ
ಕಸ ಕಡ್ಡಿಗಳನ್ನು ಎಲ್ಲೆಂದರಲ್ಲಿ ಎಸೆಯದಿರಿ
ಅರಣ್ಯವಿಲ್ಲದೆ ಮಳೆ ಇಲ್ಲ
ಮಳೆ ಇಲ್ಲದೆ ಬೆಳೆ ಇಲ್ಲ


ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ

"ತ್ರಿಶಾ ೮ ನೇ ತರಗತಿ"





- Deepa Sudhakar

17 Jul 2022, 12:06 pm

1) ಮೌನ ಏಕೆ ಸಿದ್ಧರೂಢ


ಹಣ ಇದರೆ ಶ್ರೀಮಂತನ ಹತ್ತಿರ
ಇರತೈತಿ, ಜ್ಞಾನ ಇದರೆ ಅವನಲ್ಲಿ
ಇರತೈತಿ, ಇವೆಲ್ಲವೂ ಇದ್ದರು ಏನು
ಪ್ರಯೋಜನ, ಒಂದು ಒಳ್ಳೆಯ
ಗುಣ ಇಲ್ಲದ ಮೇಲೆ ಇಂತಹ
ಮನುಜರನ ತೆಗೆದುಕೊಂಡು,
ಏನು ಮಾಡಬೇಕು
ಶ್ರೀ ಸದ್ಗುರು ಸಿದ್ಧರೂಢ
ಇನ್ನೂ ಏಕೆ ನೀನಲ್ಲಿ ಮೌನ
ಕಣ್ಣು ತೆರೆದು ನೋಡು ನೀ
ಒಮ್ಮೆ ಯಾದರೂ
ಈ ಜಗ್ಗದ ಮಹಿಮೆಯನ್ನು...

ರಚನೆ
ಬಿ. ಎಸ್. ಬಾಗೇವಾಡಿಮಠ.

- Basavaraj S. B.

17 Jul 2022, 09:08 am

ಕವಿತೆಗಳೇ ನೀವ್ ಹೇಳಿ !

"ಕವಿತೆಗಳೇ ನೀವ್ ಹೇಳಿ !
ನಾ ಏಕೆ ಗೀಚುವೆ ನಿಮ್ಮ...
ಮನಬಂದ ಹಾಗೆಲ್ಲ !
ಖುಷಿಯಲ್ಲಿ.. ಮೂಡೋರು ನೀವೇ !
ನೋವಲ್ಲಿ.. ಜೊತೆ ಅದು ನೀವೇ !
ಯಾಕಿಷ್ಟು ಹತ್ತಿರ ನೀವು ?
ನನ್ನ ಅಂತರಾಳಕೆ !!"
"ಹೇಳ_ಬಯಸುವ ಮಾತೆಲ್ಲಕ್ಕೂ...
ನೀವೇನೆ ವೇದಿಕೆಯು !
ನನ್ನ ಕಲ್ಪನೆ ಕಲೆಯಾಗಲು..
ನೀವೇನೆ ಸದಾ ಜೊತೆಯು !
ಆತ್ಮಸ್ಥೈರ್ಯವೋ..?
ಆಪ್ತ ಬಂಧುವೋ..?
ನೀವ್ ಅದರಿ ನನಗೆ..
ಹುಚ್ಚನಂತೆ ಹಚ್ಚಾಗಿ !
ನನ್ನೊಳಗಿನ ಕಿಚ್ಚಾಗಿ !
ಜೊತೆ ಅದಿರಿ ಹೀಗೆ...
ನನ್ನ ಅಂತರಾಳಕೆ !!"
ಎಮ್.ಎಸ್.ಭೋವಿ....✍️

- mani_s_bhovi

16 Jul 2022, 10:12 pm

ನೆನಪು

ನನಪುಗಳೆ ಹಾಗೆ....!
ಥೇಟು
ಮಡಚಿಟ್ಟ ಬಣ್ಣದ ಕೊಡೆ ಹಾಗೆ....!

ಮಳೆಗಾಲಕ್ಕೆ ಹೊರ ಬಂದ ಹಾಗೆ..!



ನನಪುಗಳೆ ಹಾಗೆ....!
ಥೇಟು
ಮಡಚಿಟ್ಟ ಬಣ್ಣದ ಕೊಡೆ ಹಾಗೆ....!

ಮಳೆಗಾಲಕ್ಕೆ ಹೊರ ಬಂದ ಹಾಗೆ..!

ನನಪುಗಳೆ ಹಾಗೆ....!
ಥೇಟು
ಮಡಚಿಟ್ಟ ಬಣ್ಣದ ಕೊಡೆ ಹಾಗೆ....!

ಮಳೆಗಾಲಕ್ಕೆ ಹೊರ ಬಂದ ಹಾಗೆ..!


✍️ಎಸ್ ಎಲ್ ✍️ ಕಟ್ಟೆ ಬೇಳಗುಲಿ ✍️

- ಸೃಜನ್

16 Jul 2022, 05:04 am