ಇದೇ ನಾನು ನಿಮ್ಮೊಟ್ಟಿಗೆ ಕಳೆಯುತ್ತಿರುವ ಕೊನೆ ಕ್ಷಣ;
ಮುಂದೆ ಸಿಗುವಿರಾ ಎಂದೂ ಯೋಚಿಸಿದಾಗ ಅಸಮಾಧಾನ ಮನ,
ಏಕೆ ಈ ಅಳು ಎಂದು ಕೇಳಿದಾಗ ಕಣ್ಣಲ್ಲಿ ಧೂಳು ಬಿದ್ದಿರುವ ಸುಳ್ಳಿನ ಗಾನ
ಕೊನೆ ಉಸಿರಿರೋವರೆಗೂ ನಿಮ್ಮನ್ನೆಂದು ಮರೆಯದ ಈ ನನ್ನ ಮನ
ಅಮ್ಮ ಎಂಬ ಎರಡಕ್ಷರದ ಪದವು ಲೋಕವೆಲ್ಲ ಹಬ್ಬಿದೆ ಅಮ್ಮ ಎಂದರೆ ಅ-ಎಂದರೆ ಅಮ್ಮ ಮ-ಎಂದರೆ ಮಕ್ಕಳು ಅ ಎಂಬ ಅಕ್ಷರ ಮಕ್ಕಳ ಬಾಯಲ್ಲಿ ಬಂದರೆ ಅಮ್ಮನ ಕರುಳು ಚುರುಕ್ ಎನ್ನುತ್ತದೆ ಅದು ಮ ಅನ್ನು ಬಯಸುತ್ತದೆ ಅಂದರೆ ಮಕ್ಕಳನ್ನು ಬಯಸುತ್ತದೆ.
ಹೇ ಗೆಳತಿಯೇ
ನಾ ಕಂಡಾಗ ಮುಗಳ್ನಗೆಯ ಚಲ್ಲತಿಯೇ
ನಿನ್ನ ಮುಖ ಅಂಬುಜ ದೊಳಗೊಂದು ಬಿಂದು
ಆ ಬಿಂದು ಏಳು- ಏಳು ಜನ್ಮಕ್ಕೂ ಆಗಿರಲಿ ನಂದು.....!
ನಿನ್ನ ನೊಟವು ಅಮೃತವ ಉಣಬಡಿಸಿದೆ!
ಕಾಲ್ಗೆಜ್ಜಯ ಸದ್ದಿಗೆ ಮನ ಉಧೋ ಎಂದು ನಮಿಸಿದ
ಮನಸ್ಸು ನೀನೇಕೆ ಬಯಸಿದೆ..
ನಿನ್ನ ನೆನಪುಗಳೇ ನನ್ನ ಹೃದಯದ ವ್ಯಾಪ್ತಿಯ ವ್ಯಾಪಿಸಿದೆ..
ಒಂದು ಘಳಿಗೇನು ಯೋಚಿಸದೆ .
ನನ್ನ ಮನಸ್ಸಿಗೆ ನಿನ್ನ ಮೇಲೆ ಒಲವಾಗಿದೆ ಎಂದು ಅನಿಸುತ್ತಿದೆ..
ನೀ ದೂರಾದಲ್ಲಿ ಇದ್ದರು ಹತ್ತಿರ ಅನಿಸಿದೆ.
ಆಗಸ ಎತ್ತರದಲಿದ್ದರು ಕೈ ತಾಕುವಹಾಗಿದೆ..
ಮನಸ್ಸಿನ ಭಾವನೆ ನಾಚಿಕ್ಕೆ ತಂದಿದ್ದೆ.
ಮೌನದ ಭಾಷೆಲಿ ನೂರೆಂಟು ಮಾತಿದೆ...
ನೀ ಬೈಯುವ ಮಾತ್ತೆಲ್ಲಾ ನಿಶಬ್ಧವಾಗಿದೆ.
ಮನಸ್ಸು ಆ ಮಾತುಗಳ ಕೇಳಿ ಸಭ್ರಮಪಡುತ್ತಿದೆ..
ಬೈಯುವ ನೆಪದಲ್ಲಾದರು ನನ್ನ ಮಾತಾಡಿಸಿದೆ.
ನೀ ಬೈದು ತಿರುಗುವ ಭರದಲ್ಲಿ ನಿನ್ನ ಇಂಗುರುಳು ತಾಕಿದೆ....
ಪ್ರೀತಿ ಅಂದರೆ ನಂಬಿಕೆ
ಪ್ರೀತಿಯಲ್ಲಿ ಇಬ್ಬರು ಪ್ರೀತಿ ಮಾಡಬೇಕು ಅಂತ ಏನು ಇಲ್ಲ
ಒಬ್ಬರು ಒಬ್ಬರ್ ಪ್ರೀತಿಗೋಸ್ಕರ ಕಾಯುವುದೆ
ನಿಜವಾದ ಪ್ರೀತಿ
ಅವರಿಗೋಸ್ಕರ ಎಷ್ಟು ವರುಷ ಬೇಕಾದರು ಕಾಯುವುದು ನಿಜವಾದ ಪ್ರೀತಿ
ಅವಳ ಪ್ರತಿ ಒಂದು ನೋವು ನಲಿವಿನಲ್ಲಿ ಭಾಗಿ ಆಗುವದೆ ನಿಜವಾದ ಪ್ರೀತಿ
ಒಂದು ಸಲ ಒಬ್ಬರನ್ನ ಇಷ್ಟ ಪಟ್ಟರೆ ಅವರ್ ಕೊನೆ ಉಸಿರ ವರೆಗೂ ಅವರಿಗಾಗಿ ಕಾಯುವುದೇ
ನಿಜವಾದ ಪ್ರೀತಿ
one side lover SDtalakeri
ನಿಮ್ಮ ಶರೀರವು ಹೂವಿನಂತೆ
ಹೂವು ಎಂಬುದು ಸೂರ್ಯನಂತೆ
ಸೂರ್ಯ ಮತ್ತು ಹೂವು ಬೇಗ ಮುಗಿಯುತ್ತದೆ
ನಮ್ಮ ಜೀವನ ಸಿಹಿಕಹಿ ತಿಳಿದು ಮುಗಿಯುತ್ತದೆ
ಪುಷ್ಪವು ತನ್ನ ಅವಧಿಯಲ್ಲಿ ಸುಗಂಧ ನೀಡುತ್ತದೆ
ಭಾಸ್ಕರನು ತನ್ನ ಸಮಯದಲ್ಲಿ ಬೆಳಕು ಚೆಲ್ಲುವನು
ಸೂರ್ಯ ಮತ್ತು ಪುಷ್ಪವು ಅನಾದಿಕಾಲದಿಂದಲೂ
ತನ್ನ ಕಾರ್ಯ ನಿರಂತರವಾಗಿ ನಡೆಸುತ್ತಿವೆ
ಸೂರ್ಯನು ಸದಾ ಒಳ್ಳೆಯ ಕೆಲಸದ ಕೇಂದ್ರ ಬಿಂದುವಾಗಿದ್ದಾನೆ
ಪುಷ್ಪವು ಸಹ ದೇವರಿಗೆ ಅನಾದಿಯಿಂದಲೂ ಸುಗಂಧ ಬೀರಿದೆ
ಆದರೆ ಇವುಗಳನ್ನು ಅನುಭವಿಸುವ ಮಾನವನಾದ ನೀನು
ಏನು ಮಾಡುತ್ತಿರುವೆ ಅನಾದಿಯಿಂದಲೂ
ಮಾನವನು ಯಾವಾಗಲೂ ಸೂರ್ಯನಂತೆ,
ಪರಿಮಳ ಬೀರುವ ಪುಷ್ಪದಂತೆ
ಎಲ್ಲರಿಗೂ ಒಳಿತನ್ನು ಹಾರೈಸಬೇಕು
ಮುಂದಿನ ಕಾರ್ಯಕ್ಕೆ ಸ್ವಾಗತ ತೋರಬೇಕು
ಹೂವಿನ ಕಾಲಾವಧಿ ಕಡಿಮೆ
ಆದರೆ ಸೌಂದರ್ಯ ಹೆಚ್ಚು
ಅದು ಮುಸ್ಸಂಜೆ ಬಾಡುವೆನೆಂದುಕೊಂಡರು
ಬೀರುತ್ತದೆ ಪರಿಮಳ
ಸೂರ್ಯನು ದಿನದಲ್ಲಿ ಇರುವುದು ಕಡಿಮೆ
ಆದರೆ ಅವನ ಬೆಳಕು ಹೆಚ್ಚು
ಮಾನವ ಇರುವುದು ಹೆಚ್ಚುಕಾಲ
ಆದರೆ ಅವನ ಸಾಧನೆಯ ಕಾರ್ಯ ಕಡಿಮೆ
ಶರೀರವು ಹೂವಿನಂತೆ ಬಾಡುತ್ತದೆ
ಸೂರ್ಯ ಮುಳುಗುವಂತೆ ಮಣ್ಣಿನಲ್ಲಿ ಸೇರುತ್ತದೆ
ಇವು ಮುಳುಗುವುದರಲ್ಲಿ ಒಳ್ಳೆಯ ಕಾರ್ಯ ಮುಗಿಸುವಂತೆ
ಮಾನವನು ತಾನು ಬಾಡುವುದಕ್ಕೂ ಮುಂಚೆ ಮಾಡಬೇಕು ಸಾಧನೆಯ....