Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಮನ ಸೇರಲಂಬಲ

ಓ ಮುಗ್ಧ ಮಗು ಮನಸ್ಸೇ
ಎಲ್ಲವಿತಿರುವೆನೀ ನಿನ್ನದೇ ಇಹದಲಿ
ಎನ್ನ ಮನವನು ಸೆಳೆದುಕೋ ನಿನ್ನ ಮನ ರಕ್ಷಕಿಯಾಗಿ
ಒಬ್ಬೊoಟಿ ಎನಿಸದೇ ಇಹವದು ನಾನಿರದೆ

ಕಾದಿದೆ ಮನ ನಿನ್ನ ಹುಡುಕಾಟದಲಿ
ಜಗದ ಜಂಗುಳಿ, ಮನದ ಕಲ್ಮಶತೆ,
ನಾಟಕೀಯ ನಿಸ್ವಾರ್ಥ, ದೇಹದಲ್ಲೆಲ್ಲ ವಿಷರಕ್ತ,
ಮಾತಿನಲ್ಲೆಲ್ಲ ತಾನೆಂಬ ಆಡಂಬರದ ಅಹಂ

ತನುಮನ ಎಂಬುದು ಸ್ವಾರ್ಥದಲಿ ಕಳೆದೋಗಿ
ಕ್ಷಣಿಕ ಸುಖ ಭೋಗದಾಸೆಗೆ ಅವುಗಳನು ಪಣಕ್ಕಿಟ್ಟು
ಕೀಳು ದಟ್ಟಕ್ಕೆಳೆಯುತ್ತಿಹರಲ್ಲದೆ ದರ್ಪವೆಸಗುತ್ತಿರುವರು
ಈ ಕಟುಕ ಅಹಂ ರಾಕ್ಷಸರು

ತನುವೇಳಿತೇ ಮೋಹದಲಿ ತೇಲಿಸೆಂದು
ಮನವೇಳಿತೇ ಪಾಪಕರ್ಮದಲಿ ಉಲ್ಲಾಸವಿದೆಯೆಂದು
ಸದೆಬಡೆಯುತ್ತಿರುವರಲ್ಲೋ ಸಂಕೋಲೆಯಲಿ ತನು-ಮನವ
ದೂಡುತ್ತಿರುವರಲ್ಲೋ ತಾವೆಸಗಿದ ಪಾಪದಲಿ ಪಾಲೆಂದು

ಮನಕ್ಕಿರೊವಾಸೆ ನಿರ್ಮಲ ಇಹದಲ್ಲಿರುವುದಲ್ಲವೇ
ಸತ್ಕಾರ್ಯ, ಪ್ರಾಮಾಣಿಕತೆ, ಬುದ್ಧಿಯಲಿ ತೇಲುತ
ಕೆಡುಕಂಟದ ನಿಜದೊಳೆಯಲಿ ಈಜಾಡುತ
ಮೋಹವರಿಯದ ದೇಹವನು ಸಂಗಾತಿಯಾಗಿಸಿ ಕ್ಕೊಳ್ಳುವುದಲ್ಲವೇ

ಸದಾ ಸನ್ನಡತೆ, ಸನ್ಮಾರ್ಗದ ಸ್ಪರ್ಶ ಬಯಸುತ
ಗುರುಹಿರಿಯರ ಅಪ್ಪಣೆಯಲಿ ಆನಂದಿಸುತ
ಜಗವೆಲ್ಲವನು ಸೌಹಾರ್ದದಿಂದ ಸ್ವಚ್ಛಗೊಳಿಸುತ
ಪಯಣ ಮುಗಿಸಿ ಮುಕ್ತಿ ಬಯಸುವ ತನುಮನ ವಲ್ಲವೇ

ಇದನರಿತು ಜೀವಿಸುತ್ತಿರುವ ನಿನ್ನ ಮನದ
ಸಂಗಾತಿಯಾಗಿ, ಸ್ನೇಹಿತೆಯಾಗಿ, ಸೇವಕಿಯನ್ನಾಗಲು ಒಪ್ಪುವೆಯಾ?
ನೀನರಿತಿರುವ ಇಹವನು ಕೊಂಚ ಅರಿತಿರುವೆನಾ
ಸೆಳೆದುಕೋ ಬೇಗೆನ್ನ ಮನವ ನಿನ್ನಲ್ಲಿಗೇ..

- Shakuntala Shakuntala

28 May 2022, 05:15 pm

ಸಾಲದ ಹೊರೆ

ಮುಂದಿನ ಸಂತೋಷ ತಿಳಿದು
ಆಗುವ ದುಃಖ ಮರೆತು
ಹಾಕುವುದು ಕೈ ಸಾಲಕ್ಕೆ
ಪಡೆಯುವುದು ಹಣವ ಸಂತೋಷಕ್ಕೆ

ಆದರೆ ಪಡದು ಸಂತೋಷವು
ದೊರೆಯುವುದು ದುಃಖವು
ತಿಳಿಯದೆ ಹೋಯಿತು ಮನಸ್ಸು
ಈ ಕಷ್ಟದ ಪರಿಸ್ಥಿತಿಯ

ಕೊನೆಯಲ್ಲಿ ಆಯಿತು ನೋವು
ತಿಳಿಯಿತು ಸಾಲದ ಹೊರೆ
ಅರಿಯಿತು ಬಡ್ಡಿಯ ಭಾರ
ತಡೆಯದೆ ಕೊರಗಿತು ಈ ಸುಪ್ತ

ಮಾಡದಿರು ಸಾಲ
ಪಡೆಯದಿರು ನೋವ
ಮುಂದಿನ ಮಿಂಚಿನ ಸುಖಕ್ಕೆ
ಬಲಿಯಾಯಿತು ಇಡೀ ಸಂಸಾರ...

- Shakuntala Shakuntala

28 May 2022, 04:36 pm

ಹನಿಗವನ

ಬಡವರ ಮೇಲಿದೆ ಸಾಲದ ಹೊರೆ
ಒಡೆಯನ ಕಣ್ಣಿಗೆ ಕಾಣದ ಪೊರೆ
ಬಡವನ ಕಷ್ಟಕೆ ಇಲ್ಲದ ಕೊನೆ
ಒಡೆಯನ ಭೋಗಕೆ ಇರುವುದು ಗೊನೆ

- Shakuntala Shakuntala

28 May 2022, 04:23 pm

ಹನಿಗವನ

ಒಳಿತು ಬಲ್ಲವ ಕೆಡಕು ಬಲ್ಲವ
ಆ ಸೂರ್ಯ
ಒಳಿತು ಬಯಸುತ ಕಿರಣ ಬಿಡುವನು
ಜಗಕೆಲ್ಲ ಹಾರೈಸುತ.

- Shakuntala Shakuntala

28 May 2022, 04:12 pm

ಸಂತಸ ಕಾಣದ ರೈತ

ತಿಳಿಯದು ಯಾರಿಗೂ ರೈತನ ಮಹಿಮೆ
ಅವನು ಪೂಜಿಸುವನು ತನ್ನ ಕಾಯಕವನ್ನು
ಬಯಸುವನು ಎಲ್ಲರ ಒಳಿತನ್ನು
ಅವನಿಗೆ ತೋರುವರು ಕೀಳಿರಿಮೆಯನ್ನು

ಒಳ್ಳೆಯ ಫಲವನ್ನು ಪಡೆಯುವೆನೆಂದು
ಭವಿಷ್ಯದ ಕನಸ್ಸು ಈಡೇರುವುದೆಂದು
ಮಾಡುವನು ರಾತ್ರಿಯೆಲ್ಲ ಕೆಲಸವ
ದಣಿಸುವನು ಶರೀರದ ತೂಕವ

ಕಾಣುವನು ಸಂತೋಷದ ಕನಸನ್ನು
ಪಡುವನು ಬಿಡುವಿಲ್ಲದೆ ಶ್ರಮವನು
ಯಾರಿಗು ತೋರನು ತನ್ನ ನೋವನ್ನು
ಹೇಳುವನು ಮನೆಯಲ್ಲಿ ಸಂತಸದ ಕನಸನ್ನು

ತೆಗಳುವರು ಅರಸರು ಈ ಮುಗ್ಧ ಮಾನವನ
ಪಡುವರು ಸಂತಸ ಅವನ ನೋವಲ್ಲಿ
ಮಾಡುವರು ಮೋಸ ಅವನ ಫಲದಲ್ಲಿ
ತಿಳಿಯದು ಕೃಷಿಕಗೆ ಈ ಪರ್ವ

ದೌರ್ಜನ್ಯ ಅರಿತ ರೈತ
ಕನಸನ್ನು ಸಾಧಿಸಲು ಸೋತ
ಅವನಿಗೆ ನೆನೆಯಿತು ಹಗ್ಗ
ಕಾಣದೆ ಹೋಯಿತು ಅವನ ಸ್ವರ್ಗ

ರೈತನ ಅನ್ನವ ಕದಿಯುವ ಭೂಪನು
ಆಡುವನು ಬಣ್ಣಗಾರಿಕೆಯ ಮಾತನು
ಅನ್ನವ ನೀಡುವ ಅನ್ನಧಾತನು
ಕೊನೆಗೆ ಕೊಡುವನು ಆತ್ಮಹತ್ಯೆಗೆ ಕೊರಳನು

ರೈತರಿಗೆ ಯಾವಾಗ ಸಿಗುವುದು ನ್ಯಾಯ
ದಲ್ಲಾಳಿಗೆ ದೊರೆಯುವುದು ಸದಾ ಆದಾಯ
ದಲ್ಲಾಳಿ ಸತ್ತರೆ ಉಳಿವನು ರೈತ
ಆದರೆ ರೈತ ಸತ್ತರೆ ಅಳಿಯುವುದು ಮಾನವ ಸಂಕುಲ...

- Shakuntala Shakuntala

28 May 2022, 01:52 pm

ಪ್ರೀತಿಸು...

ಬೇಡಿದ ದಿನದಲಿ ಪ್ರೀತಿಯ ಕೊಡದೆ ನೀನು
ನನಗೆ ಬೇಡದ ದಿನದಲಿ ಕಾಡಿ ಬೇಡುವೆಯ ನೀನು, ಪ್ರೀತಿ ಮೂಡಿದಾಗ ನನಗೆ ಪ್ರೀತಿಯ ಕೊಡದೆ ಹೋದೆ ನೀನು...
ಮರೆತೇ ನಿನ್ನ ಪ್ರೀತಿಯ ನಾನು... ಪ್ರೀತಿಸು.. ಪೀಡಿಸಬೇಡ...

- bhanuprakash

27 May 2022, 10:18 am

ಗುರಿ

ಕುಗ್ಗದಿರು ಮನಸ್ಸೇ ಕನಸ್ಸು ಈಡೇರದೇ
ಕೊರಗದಿರು ಮನವೇ ಗುರಿ ತಲುಪದಲೇ
ಬರುವುದೊಂದು ದಿನ ನನ್ನದೇ ವೇಳೆ
ಸಹನೆಯಿಂದಿರು ಮನವ ಕದಡದಲೇ....
by ಶಕುಂತಲಾ

- Shakuntala Shakuntala

25 May 2022, 06:51 pm

ಕವನ

ಚಂದಿರನು ಚಂದವಾಗಿ ಕಾಣಬಲ್ಲ
ಅಂತೆಯೇ ಇರುಳಲ್ಲಿ ಬೆಳಕು ನೀಡಬಲ್ಲ
ಅಂತಹ ಸ್ವಭಾವದ ಬೆಳಕು ನೀನಾಗು
ಎಲ್ಲರ ಮನವ ಬೆಳಗಿಸುವಂತಾಗು...

- Shakuntala Shakuntala

25 May 2022, 06:39 pm

ನಿಜ

ಈ ಪ್ರಪಂಚದಲ್ಲಿ ಎಲ್ಲಾರು ಸರಿ ಇರ್ತಾರೆ ಯಾರು ಯಾರು ಕೂಡ ಕೆಟ್ಟವರಲ್ಲ ಆದ್ರೆ ಸಮಯಾನು ಕೆಟ್ಟಿದ್ದಲ್ಲ ಪರಿಸ್ಥಿತಿ ಅನ್ನೋದು ಇದೆಯಲ್ಲಾ ಅದು ನಿಜವಾಗಿಯು ಕೆಟ್ಟದ್ದು ಏಕೆಂದರೆ ನಾನು ನೀನು ಎಲ್ಲಾರೂ ಈ ಪರಿಸ್ಥಿತಿಯ ಕೈ ಗೊಂಬೆ ಹೋರೆತು ದೇವರ ಕೈ ಗೊಂಬೆ ಅಲ್ಲಿ ದೇವರು

- ರಾಜು ಹಾಸನ

24 May 2022, 09:37 pm

ವೃದ್ಯಾಪ

1 ಅಜ್ಜ ಅಜ್ಜಿಯರಿಗೆ ಮೊಮ್ಮಕ್ಕಳು ಕನ್ನಡಿಗಳಿದ್ದಂತೆ
ಆ ಮುಗ್ದ ಮುಖಗಳಲ್ಲಿ ತಮ್ಮನ್ನೇ
ಗುರುತಿಸಿಕೊಳ್ಳುವ ಅವರು ತಮ್ಮ ಎಲ್ಲ
ಶ್ರಮ ನೋವು ಸಂಕಟಗಳನ್ನು ಮರೆಯುವರು

2 ವೃದ್ದ್ಯಾಪ ದಲ್ಲಿ ಮಕ್ಕಳಿಂದ ಅತಿಯಾದ
ನಿರೀಕ್ಷಣೆ ದುಃಖಕ್ಕೆ ಕಾರಣವಾಗಬಲ್ಲುದು

3 ನೆಮ್ಮದಿಯ ವೃದ್ದ್ಯಾಪ ಹಿರಿಯರ ಹಕ್ಕು
4

- Kumara m Kumara

24 May 2022, 03:09 pm