Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಹೆಜ್ಜೆ ಅರಿಯಲಾರೆ

ಮನದೊಳಗಿನ ಕನಸುಗಳು
ಕಮರಿ ಹೋಗುತ್ತಿವೆ
ನೆನಪುಗಳು ಬತ್ತಿ
ಬರಿದಾಗುತ್ತಲಿವೆ
ಸರಿದ ಹೋದ
ದಿನದ ಕ್ಷಣಗಳು
ಮರೆಯಾಗುತ್ತಿವೆ
ಬದುಕು ವರ್ತಮಾನಕ್ಕೆ
ತಲುಪಿದಾಗ
ಕನಸಿನಿಂದ ವಾಸ್ತವಕ್ಕೆ
ಎಳೆದು ತರುತ್ತಲಿದೆ
ಎದುರು ಕಾಣುತ್ತಿರುವದನ್ನು
ಬಿಟ್ಟು
ಮತ್ತೆ ಹಿಂದೆ ಸರಿಯುತ್ತಿದೆ
ಸ್ವಂತಕ್ಕೆ ಅಲ್ಲಾ ಬಾಡಿಗಾಗಿ
ಬಗ್ಗುತ್ತಿದೆ
ಬೆನ್ನು ಕಣ್ಣುಗಳ ಎದುರು
ತೆರೆದು ನಿಲ್ಲವ
ಜೀಕುವ ಉಯ್ಯಾಲೆ
ಬೆಸೆದು ಬಿಡುತ್ತಿದೆ
ಹಿಂದಿನ ಅನುಭವ
ಬಳಸಿಕೊಂಡು
ಉಳಿದಿಷ್ಟು ಮನಸ್ಸನ್ನು
ಬಾಡಿಗೆಗಾಗಿ ಮೈ ಅರಳಿಸುತ್ತಿದೆ
ತಪ್ಪುಮಾಡಿ
ಮುಖ ಮುಚ್ಚಿಕೊಳ್ಳುವ
ಮುಂದಿನ ಭವಿಷ್ಯವಿದೆ

- mallikarjun sonnad

01 May 2022, 05:16 pm

ಪ್ರೇಮ ನಿವೇದನೆ

ನನ್ನ ಒಲವೇ
ಜೀವನ ಪೂರ್ತಿ ನಿನ್ನೆ ಪ್ರೀತಿಸಬೇಕೆಂದು ಅನಿಸಿದೆ.
ನೀ ನಿಲ್ಲದೆ ನಾನು ಹೇಗಿರುವೆ ತಿಳಿದಿಲ್ಲ
ಬಂದೆ ನನ್ನ ಜೀವನದಲ್ಲಿ ನೀನು ಬಯಸದೆ.
ಈ ಪ್ರೀತಿ ಕುರುಡು ಸುಲಭವಾಗಿ
ಬಿಡಿಸಲಾಗದ ಒಗಟು ಪ್ರಾರಂಭವಾಯಿತು.
ನಿ ನಿನ್ನ ಮೇಲೆ ಪ್ರೀತಿ ನನಗೂ ಅರಿಯದೆ.
ನನ್ನ ಕಲ್ಪನೆಯ ಲೋಕಕ್ಕೆ ನೀನಾಗಿರುವೆ
ಜೀವಂತ ಸಾಕ್ಷಿ .
ಸದಾ ಬರುವೆ ನನ್ನ ಕನಸಲ್ಲಿ ಮರೆಯದೆ
ಮಾತನಾಡು ಒಮ್ಮೆಯಾದರೂ ಮೌನವ ತೊರೆದು
ನಿನಗೆ ಹೇಳಬೇಕೆನಿಸಿತು ನನ್ನ ಪ್ರತಿ ಎದೆಬಡಿತ
ಈಗಲೂ ನಿನ್ನ ಸ್ಮರಿಸಿದೆ.
ಕೈಯಿಡಿದು ಮಾತನಾಡುತ್ತಿದ್ದರು ನನ್ನ ಮರೆಯದಿರು
ನಿನ್ನ ಪ್ರೀತಿಯಲ್ಲಿ ನನ್ನ ಉಸಿರೇ ಅಡಗಿದೆ ಓ..ನನ್ನ ಮನವೇ

- mallikarjun sonnad

30 Apr 2022, 04:50 pm

ಬದುಕಿನಮಾತು

ಬದುಕಿನಮಾತು
ಬದಲಾಗುವ ಮನುಜನೇ
ಜಗದ ನಿಯಮ ಮೀರಲು ಅಸಾಧ್ಯ
ಕಷ್ಟದಲ್ಲಿ ಬಂದು ನಿಂತವರನ್ನು ಎಂದಿಗೂ ಮರೆಯಬೇಡ ಅವರಿಗಿದದ್ದು ನಿನಗಿಲ್ಲ ನಿನಗಿಲ್ಲದು ಅವರಿಗಿಲ್ಲ ಅನ್ನಹಾಕಿ ಹಸಿವು ಸಲುವಿದ ನೀಗಿಸಿದವರನ್ನು ಋಣ ತೀರಿಸಲಾಗದು ನಿನ್ನ ಜನ್ಮಕ್ಕೆ ಅವರೇ ನಿನ್ನ ಬಳಿ ಋಣ ತೀರಿಸಲು ಬಂದು ನಿಂತಿರುವಾಗ ಹದವ ಮೀರಿದ ಮೇಲೆ ಕಾಲಕಸವ ಮಾಡಿ ಪಾಪಿಯಾಗಿ ಸಾಯಬೇಡ ಕಂಡವರನ್ನು ಕಂಡು ಅವರಂತೆ ಕುಣಿಯಬೇಡ ಅಂತರಂಗ ಬಹಿರಂಗ ನಿತ್ಯ ನಮ್ಮ ಬೆನ್ನುಹಿಂದೆ ಇರುವತ್ತವೇ ಅರಿಯದೆ ತಿಳಿಯದೇ ಮೌಢ್ಯತೆಯಿಂದ ಹಾಳಾಗಬೇಡ ನಿನಗಾಗಿ ಬದುಕುವರಿಗಾಗಿ ಬದುಕು ನಿತ್ಯ ಸುಂದರ ಸುಖದ ನೆಲೆ ನಿನ್ನಲ್ಲಿದೆ ಕಳೆದುಕೊಳ್ಳಬೇಡ ಉಳಿಸಿಕೋ.@ಸೊನ್ನದ

- mallikarjun sonnad

29 Apr 2022, 08:58 pm

ಕಿವಿಯಲ್ಲಿ ಸಂಗೀತದ ಮುತ್ತು

ಮೊದಲ ಭಾರೀ ನೀ ನಕ್ಕ ಆ ಗಳಿಗೆ
ಪ್ರತಿನಿತ್ಯವೂ ನೀಡುತ್ತಿದೆ ನನಗೊಂದು ಪ್ರೀತಿಯ ಗುಳಿಗೆ !
ಮೊದಲ ಭಾರೀ ನೀ ನಾಡಿದ ಆ ಮಾತು
ಇಂದಿಗೂ ಪೋಣಿಸಿದಂತಿದಿ ನನ್ನ ಕಿವಿಯಲ್ಲಿ ಸಂಗೀತದ ಮುತ್ತು !
ಮೊದಲ ಬಾರಿ ನೀ ಅತ್ತ ಆ ಕ್ಷಣ
ಇಂದಿಗೂ ಕಲಕುವಂತೆ ಮಾಡಿತು ಈ ಮನ!
ಮೊದಲ ಬಾರಿ ನಿನ್ನ ಮೊಗದಲ್ಲಿ ಕಂಡ ಆ ಮುನಿಸು
ನೆನೆದು ನೆನೆದು ನಗಿಸುವಂತ ಆ ಸೊಗಸ್ಸು!
ಮೊದಲ ನಿನ್ನಲ್ಲಿ ಕಂಡಂತ ಆ ಮೌನ
ಮಾಡಿತು ನನ್ನನ್ನು ಮೌನಿಯ ಆ ಮೌನಕೆ!
ನೀನೆ ನನ್ನ ಮೊದಲ ಕನಸಿನ ಹುಡುಗಿ
ನೀನೆ ನನ್ನ ಕೊನೆಯ ನನಸಿನ ಕನಸು!

- Hanumantharaju G N

29 Apr 2022, 05:21 pm

ಕಣ್ಣೀರಿನ ನೋವಿನ ಕಂಬನಿ

ಜಾರಿದ ಕಂಬನಿ ಪ್ರೀತಿಯ
ಮನಸ್ಸಿನ ನೋವು
ಕನಸ್ಸಿನೊಳಗೆ
ಕಣ್ತುಂಬಿ ಕೊಂಡಿದೆ
ಹಂಬಲಿಸಿ ಕಂಬನಿಯಾಗಿ
ನೋವಿ ನೆನಪಿಂದ
ನೀ ನನಗಾಗಿ ಬಂದೇ
ಜೀವವು ಕರಗಿ ಕೊರಗುವ
ಮುನ್ನ ಬರುವೆ ಜೀವ ಹಿಡಿದು
ಉಸಿರಿಲ್ಲದೆ ಕಾದಿರುವೆ ಬಂದು
ಪ್ರತಿ ಕ್ಷಣ ಮನ ತುಂಬಿಸು
ಮನದ ಮಾತು ಪ್ರೀತಿಯ
ನುಡಿಯ ಸವಿ ಜೇನು ನೀಡು
ನಾಳೆ ನನ್ನದಾದರೆ
ಈ ಜೀವಕ್ಕೆ ನಾಳೆಯು ನನ್ನದೇ
ನಿನ್ನೊಂದಿಗೆ ಕಳೆದ
ಮಧುರ ಕ್ಷಣಗಳ ನೆನೆಯುತ್ತಾ
ನೆನಪುಗಳ ನೆಮ್ಮದಿಯಲ್ಲಿ
ಕಾದು ಕುಳಿತ ಮನಸ್ಸು
ನೀನಿಲ್ಲದೇ ಬದುಕಿನ ಉಸಿರು
ನಿಂತ ಹಾಗೇ ಬದುಕಿದೆ ಕತ್ತಲಲ್ಲಿ
ಬಾಳು ಬೆಳಕಾಗಿಸು
ಜೀವಕಿಷ್ಟು ಋಣದ ಭಾವ
ಕಂಬನಿಯೊಳಗೆ ಹಂಬಲಿಸಿದೆ

- mallikarjun sonnad

29 Apr 2022, 01:11 pm

ಕಂಬನಿಯ ಹಂಬಲ

ಕೆನ್ನೆಜಾರಿದ ಕಂಬನಿ
ಎದ್ದಾಗ ಮನಸ್ಸಿನ ಅಶಾಂತಿ ಕಮ್ಮಿಯಾಗಿತ್ತು
ಚೆನ್ನಾಗಿಯೇ ಹಸಿವಾಗಿತ್ತು ಮನಸ್ಸು ಸತ್ತರೂ ಕನಸ್ಸು ಅತ್ತರೂ ಎಲ್ಲವೂ ಸಾಂಗವಾಗಿ ಸಾಗಿತ್ತು ಅವಳಿಗೆ ಕೆನ್ನೆಯ ಮೇಲೆ ಅರಿವಿನ ಮನಸ್ಸು ಚುಚ್ಚಿ ಚುಚ್ಚಿ ಮುಳ್ಳಿನಂತೆ ತುಟಿಗೆ ಮುರಿದು ತೇಗಿತ್ತು ಕೆಳಗೆ ಬಿದ್ದು ಬಿದ್ದು ದುಬಾರೊಯ ದುನಿಯಾ ಕುಕ್ಕಿತು ಕಂಡವ ಕಂಡು ಕಂಡು ನೆಕ್ಕುತ್ತಾ ಅಡ್ಡ ದಿಡ್ಡ ಬಿಳುತ್ತಲೇ ಮೌನದೊಳಗೆ ಮರಗುತ್ತಿತ್ತು ಇನ್ನೊ ಬಾಕಿ ಉಳಿದಿದ್ದು ಜಾರಿದ ಕಣ್ಣೋರಿನೊಳಗೆ ಕಂಬನಿ ಕಟ್ಟುತ್ತಲೆ ಕಂಗಾಲತನ ಬೆನ್ನುಬಿದ್ದಿತ್ತು ಕೊರಗಿದಿದ್ದು ಮರಗಿದ್ದು ಕೊಳೆತಿಹೋಗಿತ್ತು ಉಳಿದ್ದು ಕಂಬನಿಯ ಧಾರೆ ಸುರಿಯುತ್ತಲಿತ್ತು. @ಸೊನ್ನದ

- mallikarjun sonnad

29 Apr 2022, 01:09 pm

ಕನಸು ಮನಸು

ಕನಸು
ಅಳಿಯೋಕಾಗೊಲ್ಲಾ
ನೆನಪು
ಮರಿಯೋಕಾಗೊಲ್ಲಾ
ಹೇಳಿ ಕೇಳಿ
ಪ್ರೀತಿ ಹುಟ್ಟಲ್ಲಾ
ನಂಬಿಕೆಯನ್ನೊ
ಆಯಸ್ಸು
ಮುಗಿಯಾವರೆಗೂ
ಪ್ರೀತಿ ಗೆ
ಸಾವಿಲ್ಲಾ…
ಯಾರೋ ಹೇಳಿದ್ರು
ಜೀವಕ್ಕೆ ಜೀವಾ ಕೊಡುವ
ಪ್ರೀತಿನಾ
ಸೇರಿ ಅಂತಾ
ಅದಕ್ಕೆ ನಾನು
ನಿಮ್ಮನ್ನು ಆಯ್ಕೆ
ಮಾಡಿಕೊಂಡೆ
ಅದಕ್ಕೆ ಜೀವಾ
ಇರುವವರೆಗೂ ಮರೆಯದೆ
ನಿಮ್ಮ ಪ್ರೀತಿನಾ ಕೊಡುವ ಮುನ್ನ

- mallikarjun sonnad

27 Apr 2022, 10:58 pm

ಮಧುರ ಮೌನವೇ

ಮೌನಕೆ ಸೆರೆಯಾದ
ಮಧುರ ಮಾತುಗಳ
ಅರ್ಥ ನಿನಗೆ ಹೇಳಲಿ
ನಾ ಹೇಗೆ..??
ಎದೆಯಾಳದ
ಬಡಿತದ ಆ ಸುಂದರ
ಭಾವನೆಗಳ ನಿನಗೆ ತಿಳಿಸಲಿ
ನಾ ಹೇಗೆ..??
ಕಣ್ಣುಗಳು ಕಟ್ಟಿದ
ಆ ಕನಸುಗಳ
ಕೋಟೆಯಲಿ
ನಿನ್ನನು ನಿನಗೆ ತೋರಿಸಲಿ
ನಾ ಹೇಗೆ..??
ಮನಸಿನ ನೋವನ್ನು
ನಿನ್ನ ನೆನಪಲ್ಲಿ
ಮರೆಯುತ
ನಗುತ ಮುಂದೆ ಸಾಗಲಿ
ನಾ ಹೇಗೆ..??

- mallikarjun sonnad

27 Apr 2022, 10:53 pm

ಬದುಕು ಸುಂದರ

ಬದುಕು ಸುಂದರ ಉದ್ಯಾನವನದ ಹಾಗೆ. ಇಲ್ಲಿ ವಾತ್ಸಲ್ಯ, ಕರುಣೆ, ಪ್ರೀತಿ, ದಯೆ, ಸಮಾಧಾನ, ಶಾಂತಿ ಮುಂತಾದ ಗಿಡಗಳಿವೆ. ಅದನ್ನು ನಾವು ನೀರು, ಗೊಬ್ಬರ ಹಾಕಿ ಪೋಷಿಸಬೇಕು. ಮನೆ ಸುಂದರವಾಗಿದ್ದರೆ ಸಾಲದು, ಕಾಣದ ಮನಸ್ಸು, ಮಾಡುವ ಯೋಚನೆಗಳು ವಿಶಾಲವಾಗಿರಬೇಕು. ಹಣವಿದ್ದರೆ ಫ‌ಲವಿಲ್ಲ, ಗುಣವಿದ್ದರೆ ಮಾತ್ರ ಪಡೆದ ಜನ್ಮ ಸಾರ್ಥಕ. ಒಪ್ಪೊತ್ತಿಗೆ ಕಷ್ಟ ಪಡುವ ಕೂಲಿಯವನು ಪ್ರೀತಿ ಎಂಬ ಪ್ರಕಾಶದಿಂದ ಬೆಳಗುವ ಜ್ಞಾನ ಹೊಂದಿದ್ದರೆ ಸಾಕು. ಹಣದೊಂದಿಗೆ ಅಂಟಿಕೊಂಡಿರುವ ದುರಂಹಕಾರ ನಮ್ಮನ್ನು ತಾಕದಂತೆ ಓಡಿಸಬೇಕು.


- mallikarjun sonnad

27 Apr 2022, 10:21 pm

ಚೆಲುವೇ ನಿನ್ನ ಮಡಿ

ಜಾಜಿ ಮಲ್ಲಿಗೆಗೆಚೆಲುವೆಯ ಮುಡಿ ಸೇರುವಾಸೆ
ಕೆಂಪು ಗುಲಾಬಿಗೆ ಪ್ರೇಯಸಿಯ ಕೈಸೇರುವ ಆಸೆ
ನವಿಲಿಗೆ ಮುಸಂಜೆಯ ತಂಗಾಳಿಯಲ್ಲಿ,
ಕೋಗಿಲೆ ರಾಗಕ್ಕೆ ಗರಿ ಬಿಚ್ಚಿ ನರ್ತಿಸುವ ಆಸೆ


ಚೋರನಿಗೆ ಇತರರ ಧನ ಧಾನ್ಯದ ಆಸೆ
ಅಧಿಕಾರಿ ಗೇ ದರಿದ್ರ ಲಂಚದ ಆಸೆ
ರಾಜಕಾರಣಿಗೆ ಅದಿಕಾರದ ಜೊತೆಗೆ ಗಂಟ್ಟಿನ ಆಸೆ
ಹಸಿದ ಹೊಟ್ಟೆಗೆ ತುತ್ತು ಅನ್ನದ ಆಸೆ
ಈ ಬದುಕಿನಲ್ಲಿ ಪ್ರತಿಯೊಬ್ಬರಿಗೂ ಒಂದು ಒಂದು ಆಸೆ
ಅದರೆ ಆ ಆಸೆಗೆ ಆಸೆ ಈ ನಿರಾಸೆ..
ಹುಟ್ಟಿನ ಜೊತೆಗೆ ಸಿಗುವುದು ಒಂದೇ ಈ ಆಸೆ ಜೊತೆಗೆ ನಿರಾಸೆ...

- mallikarjun sonnad

27 Apr 2022, 10:20 pm