ಕನ್ನಡಿ ಹೇಳಿದ ಸತ್ಯ
ಮನದ ಕನಸ್ಸಿನ ಸತ್ಯ
ಮುನ್ನುಡಿ
ನುಡಿಯಿತು ಹೃದಯದ ಸತ್ಯ
ಕನ್ನಡಿ
ಮನದ ಮಾತುಗಳು
ಮೌನವೇ ಸತ್ಯ
ಮುತ್ತಿನಂತದೊಂದು
ಹಂಬಲ ನುಡಿ ಸತ್ಯ
ಕನ್ನಡಿ ತೋರುವ ದೇಹದ
ಸೌಂದರ್ಯಸತ್ಯ
ಕನ್ನಡಿಯ ತನುವಿನದು
ಮರಳಾಗಿಸ ಬಿಂಬವೇ ಸತ್ಯ
ಮನವೇ ಮರುಳಾಗದಿರು
ಮನವೇ ಪ್ರತಿಬಿಂಬದ ಸತ್ಯ
ಸೊಗಸಿಲ್ಲದ ಸೊಲಿಸಿದ
ಕನ್ನಡಿಯ ಸತ್ಯ ಹೊಳಪಿದೆ
ಉಸಿರಿನ ಸತ್ಯ.
ಮೌನ ಕವಿತೆ
ಮೌನ ನನ್ನ ಮನದ ಪ್ರೀತಿ
ಮಾತು ಪದಗಳ ಹೃದಯ
ತುಂಬುವ ಕವಿತೆ ಮೌನವೇ?
ಮೌನದ ಪದಗಳೇ ಇಲ್ಲದ
ಮನದೊಳಗಿನ ಪ್ರೀತಿ
ಮುಗಿಯುವುದಿಲ್ಲ
ಮನಸ್ಸು ಇರುವುದಿಲ್ಲ
ಕವಿತೆಯ ಸಾಲುಗಳೊಳಗೆ
ಅರ್ಥ ಒಂದಂತೂ ಪ್ರೀತಿ
ಸತ್ಯದೊಳಗೆ ಅರ್ಥಪೂರ್ಣ
ಮೌನ ಪ್ರೀತಿ ಕವಿತೆ ಮೌನದಲ್ಲೇ
ಹುಟ್ಟುವ ಉಸಿರಿನ ತನಕ
ಮೌನದ ಹಂಬಲವೇ ಪ್ರೀತಿ
ಕವಿತೆಗಳೇ ಕನಸಿನ
ಮಾತಿಲ್ಲದ ಮೌನ
#ಚುಟುಕುಗಳು
#ದೀಪ
ಪ್ರೀತಿ ದೀಪದ ಬೆಳಕು
ದ್ವೇಷ ಬೆಂಕಿಯ ಜ್ವಾಲೆ
ಭುಗಿಲೆದ್ದು ಸುಟ್ಟು
ಬೂದಿಯಾಗಿರಲಿ
#ಬೆಳಕು
ಬೆಳಗಲು ಪ್ರೀತಿ ದೀಪ
ಅಸೂಯೆ ಸುಡುವ ಬೆಂಕಿ
ಬೆಳಗುವ ಹೊತ್ತಿನಲಿ
#ಪ್ರೀತಿ
ಪ್ರೀತಿಗೆ ನಿನ್ನ ಬೆಳಕು
ಅರಿವು ನಿನ್ನ ದಾರಿಗಿರಲಿ
ಮುಳ್ಳಾಗದಿರಲಿ
#ದಾರಿ
ಮುಸುಕಿನ ದಾರಿ ನಿನ್ನೆದೆಯಲಿ
ಹಾಳಾಗಿದೆ ದಾರಿ ನಿನ್ನೆದೆ ಜೀವನ
ಮರುಗಬಾರದೆಂದು
#ಬೆಂಕಿ
ನಾನು ಬೆಂಕಿ ನೀನು ದೀಪ
ನಿನ್ನ ಬಾಳ ದೀಪ ಬೆಳಗಲು
ಬೆಂಕಿಯಾದೆ
#ಗಾಳಿ
ಗಾಳಿ ಬಿರುಗಾಳಿಯಲಿ
ಬದುಕು ಸುಡುಗಾಡಿನಲಿ
ಹುಟ್ಟು ಸಾವಿನಲಿ
#ಬೆಲ್ಲ
ಬೆಲ್ಲದಂತೆ ಕಹಿಯಾಗಿ
ಜೀವನವೇ ಕಷ್ಟಕ್ಕೆ ನೋವಿದೆ
ಕಣ್ಣೀರಿನ ಒಡಲಿದೆ
@ಸೊನ್ನದ
ಜಗತ್ತಿನಲ್ಲಿ ತನ್ನ ಮಕ್ಕಳನ್ನು ಎಲ್ಲರಿಗಿಂತ ಹೆಚ್ಚು ಪ್ರೀತಿಸುವ ತ್ಯಾಗಮಯಿ ಅಮ್ಮಂದಿರಿಗೆ ಇಂದು ಶುಭಾಶಯ ಹೇಳುವ ಸುದಿನ
ತಾಯಿ ಎನ್ನುವ ಪದಕ್ಕೆ ಇರುವ ಗೌರವ ಬೆಲೆ ಮತ್ಯಾವ ಪದಕ್ಕೂ ಇರದು. ನಮ್ಮ ಜೀವನ ಆಕೆ ಕೊಟ್ಟ ಭಿಕ್ಷೆ. ಪ್ರಪಂಚದಲ್ಲಿ ಕೆಟ್ಟ ಮಕ್ಕಳಿರಬಹುದು, ಆದರೆ ಅಮ್ಮಂದಿರು ಇರಲ್ಲ ಎಂಬ ಮಾತಿನಂತೆ ಮಮತೆ, ತ್ಯಾಗ, ಕರುಣೆಯ ಪ್ರತಿರೂಪ ತಾಯಿ
ಈ ದಿನದ ಅಂಗವಾಗಿ ತಾಯಂದಿರಿಗೆ ಗೌರವ ಸಲ್ಲಿಸಿರಿ ನೀವೂ ನಿಮ್ಮ ತಾಯಿಗೆ ಋಣದ ಭಾರವೇ ಆಕೆಗೊಂದು ಗೌರವ ಸಲ್ಲಿಸಿ.ಅಮ್ಮ ಎನ್ನುವ ಪದದಲ್ಲಿ ಏನೋ ಒಂದು ಅದ್ಬುತ
ಅಮ್ಮ ನೀನು ನನ್ನ ಅಮ್ಮ
ನನ್ನವ್ವಎಂದರೆ ಬದುಕು
ನೀಡಿದ ದೇವತೆ
ಕೈ ಹಿಡಿದು ಮುನ್ನಡೆಸಿದ
ಮಹಾಮಾತೆ
ಪ್ರತಿಯೊಬ್ಬರ ಬಾಳಿನಲ್ಲೂ
ಅಮ್ಮನಿಗೆ ವಿಶೇಷ ಸ್ಥಾನ ಇದೆ
ಪ್ರತಿಯೊಬ್ಬರ ಅಭಿವೃದ್ಧಿಯ
ಹಿಂದೆ ಅಮ್ಮನ ಪಾತ್ರ ಬಹಳ
ಹಿರಿದು ಅಮ್ಮ ಎಂದರೆ ನಿಸ್ವಾರ್ಥ
ಪ್ರೀತಿಯ ಸಂಕೇತ
ಮಕ್ಕಳ ಖುಷಿಯಲ್ಲಿಯೇ
ತನ್ನ ಖುಷಿಯನ್ನು ಕಾಣುವವರು
ಅಮ್ಮ ತನ್ನ ಮಕ್ಕಳಿಗಾಗಿ
ಎಂತಹ ಅಪಾಯವನ್ನು
ಬೇಕಾದರೂ ಎದುರಿಸಲು
ಯಾವ ತ್ಯಾಗಕ್ಕೂ ಅಮ್ಮ
ಸಿದ್ಧರಿರುತ್ತಾರೆ ಎಂಬುದು ಸತ್ಯ
ಪೂಜನೀಯ ಸ್ಥಾನದಲ್ಲಿರುವ
ಅಮ್ಮನನ್ನು ಎಷ್ಟು ಹೊಗಳಿದರೂ
ಅವರ ತ್ಯಾಗಮಮತೆಗೆ ಎಷ್ಟು ಕೃತಜ್ಞತೆಯ ಋಣ ತೀರದು@ಸೊನ್ನದ
ಆಮ್ಮನೆಂಬ ಅದ್ಬುತ
"ವಿಶ್ವಕ್ಕೆ ನೀವು ಒಬ್ಬ ವ್ಯಕ್ತಿ ಮಾತ್ರ"
ಆದರೆ ಒಬ್ಬರು ವ್ಯಕ್ತಿಗೆ ಮಾತ್ರ ನೀವೇ
ಇಡೀ ವಿಶ್ವ ಅದೇ ತಾಯಿ"
ಅಮ್ಮನ ಮಹತ್ವವನ್ನು ಅರಿಯಲು ಈ ಒಂದು ಮಾತುಸಾಕು
ಮಗು ಹುಟ್ಟುವ ಸಂದರ್ಭ ಅಮೃತಘಳಿಗೆ ಎನ್ನುತ್ತೇವೆ ತಾಯಿಗೆ ಅದು ಅವಿಸ್ಮರಣೀಯ ಕ್ಷಣ ಜನ್ಮ ನೀಡಿ ಮರುಜನ್ಮ ಪಡೆಯುವ ನಿಸ್ವಾರ್ಥ ಹೃದಯಕ್ಕೆ ಋಣ ಮಾತ್ರನಮ್ಮದು ನಮ್ಮನ್ನೆಲ್ಲ ಕಣ್ಣ ರೆಪ್ಪೆಯಂತೆ ಸಲಹಿ ಹೃದಯದಲ್ಲಿ ಬೆಚ್ಚಗೆ ಉಸಿರು ಇರುವತನಕ ಕಾಳಜಿ ಮಾಡುವ ಬರೀ ನಿಷ್ಕಲ್ಮಶ ಪ್ರೀತಿಯನ್ನೇ ಧಾರೆ ಯೆರೆಯುವ ಕರುಣಾಮೂರ್ತಿ ಅಮ್ಮ ಮಾತೃ ಹೃದಯವೇ ಅಂಥದ್ದು ಎಲ್ಲ ಕಡೆಯೂ ಪ್ರಕೃತಿ ತಾಯಿ ಮಡಿಲಿನಂತೆ@ಸೊನ್ನದ
#ಅಹಸ್ತ್ಯ @ದೇವಿಸುಮಲಾ
ಬೆಳೆಸಿದಂತೆ ಬೆಳೆಯುವ ಅಕ್ಷಯ ಪಾತ್ರೆ ನಮ್ಮರೈತ"
"ದೇಶದ ಬೆನ್ನೆಲುಬು ನಮ್ಮ ರೈತ "
"ಮನುಜ ಜೀವಕಿಷ್ಟು ಅನ್ನ ನೀಡುವ ಅನ್ನದಾತ ನಮ್ಮ ರೈತ" "ನಮ್ಮ ರೈತನೇ ಕಂಗಾಲಾದರೆ ದೇಶಕ್ಕೆ ಕಂಟಕ ಗಂಡಾಂತರ ಅಧೋಗತಿ " "ರೈತ ನಕ್ಕರೆ ದೇಶ ನಗುವುದು" ರೈತನ ಕಣ್ಣೀರು ದೇಶಕ್ಕೆ ಬಹುದೊಡ್ಡ ಶಾಪ" ರೈತ ಮುನಿದರೆ ಸರಕಾರವೇ ದಿಕ್ಕು ಪಾಲು "ಇನ್ನು ರೈತರಿಗೆ ಬೆಳೆ ವಿಮೆ ಸಿಕ್ಕದಿದ್ದರೆ ವಿಷಾದನೀಯ. ಸರಿಯಾದ ಸಮಯಕ್ಕೆ ವಿಮೆ ನೀಡುವುದಿಲ್ಲ ಎಂದ ಮೇಲೆ ವಿಮೆ ಮಾಡಿಸುವುದು ಏತಕ್ಕೆ? ಬೆಳೆ ನಷ್ಟ ಅನುಭವಿಸಿದ ರೈತರ ಕಥೆಯೇನು? ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ರೈತರಿಗೆ ಬೆಂಬಲವಾಗಿ ನಿಲ್ಲಬೇಕಿದೆ ಅಷ್ಟೆ