Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಚೆಲುವೇ ನೀ....ಒಲವಂತೆ

ಚೆಲುವೇ ನೀ....ಕಪ್ಪುಮೋಡದಲ್ಲಿ
ಎಷ್ಟು ಚಂದ ಅಂಬರ .....ದಂತೆ,

ಸುಂದರಿ ನೀ...ಕಡು ಕತ್ತಲಲ್ಲೂ
ಮಿಂಚುತಾನೆ ಚಂದಿರ..... ನಂತೆ,

ಅಕ್ಕರೆಯ ರಾಶಿ ತಾರೆಗಳು
ಬೆಳಗುತ್ತಾವೆ ಅಂಗಳಾ .....ನಿನಂತೆ,

ಒಲವೇ ನೀ...ಭೂಮಿಗಂಚುತಾವೆ
ತಿಳಿ ಬೆಳದಿಂಗಳಾ ....ದಂತೆ,

ಸ್ವಾತಿ ಮಳೆ ನೀ...ಮುತ್ತಾಗಿ ಸುರಿಯಲಿ
ಮಂಜಿನಹನಿ.... ಯಂತೆ,

ಭಾವ ಹಂಬಲ ನೀ...ಧರೆ ಮೇಲೆ ತುಂತುರು
ಮಳೆ ಇಬ್ಬನಿ ...ಹನಿಯಂತೆ.
@ಮಲ್ಲಿಕಾರ್ಜುನ ಸೊನ್ನದ










...

- mallikarjun sonnad

25 Apr 2022, 09:19 am

ಒಳ್ಳೆಯ ಮನುಷ್ಯನಿಗೆ.

ಮನುಷ್ಯ ಒಳ್ಳೆಯ ದಾರಿಯಲ್ಲಿ
ನಡೆಯಲು ದೊಡ್ಡ ಅನುಭವ
ಮಹಾ ಪ್ರವಚನಗಳೇ ಬೇಕಿಲ್ಲ
ತನ್ನ ಬದಲಾವಣೆಗೆ ಚಿಕ್ಕದೊಂದು
ಸಂದರ್ಭ ಮಾತು ಸಿಕ್ಕಿದರೂ
ಬದಲಾಗುತ್ತಾನೆ ಮೂರ್ಖರು
ಎಂದೂ ಬದಲಾಗಲಾರರು
ಹಾಗಾಗಿ ಬುದ್ದಿವಂತರಿಗೆ
ಕೆಟ್ಟ ಅನುಭವ ಬೇಕಿಲ್ಲ
ಮೂರ್ಖರಿಗೆ ಹೇಳುವುದು
ತಿಳಿಯಲ್ಲ ಮಹಾರಾಜನಾದ
ಸಿದ್ದಾರ್ಥ ಬುದ್ಧನಾಗಲು
ನಾಲ್ಕು ನೋಟ ಸಾಕಾಯ್ತು
ಆದರೆ ಅಂತಹ ಶವ ರೋಗಿ
ಬಡವ ಇಂತಹವನ್ನು ದಿನಾ
ನೋಡುವ ನಾವ್ಯಾರು
ಬುದ್ಧನಾಗಿಲ್ಲ ಕೊನೆ ಪಕ್ಷ
ಯಾರಿಗೂ ವಂಚಿಸದೇ
ಮೋಸ ಮಾಡದೇ ಸಾರ್ಥಕ
ಬದುಕು ಸಾಗಿಸಿದರೆ ಸಾಕು
@ಮಲ್ಲಿಕಾರ್ಜುನ ಸೊನ್ನದ

- mallikarjun sonnad

23 Apr 2022, 11:10 pm

ಮುಸ್ಸಂಜೆಯ ಮಾತು

ಪ್ರೀತಿಯ ಹೃದಯದ ಮೂಲೆಯಲ್ಲಿ
ಅವಿತಿರುವ ಭಾವನೆಗಳ ಒಡತಿ
ಒಂದೊಂದೇ ಪ್ರೀತಿಗೂ ಆಸೆಗಳು
ಹೂ ಅರಳುವಂತೆ
ಪ್ರೀತಿ ನಗುತಲೇ ಇರಲಿ ಅರಳಿ
ನಲಿಯುವ ಹೊಸತು
ಕನಸನ್ನು ಕಟ್ಟಿ ಪ್ರೀತಿಗೆ ಮನಸ್ಸಿದೆ
ಹೊಸೆಯುತಿರುವ ಮನದ ಬಯಕೆಗೆ
ನನಸಾಗಲೆಂದು ಮಾನದ ಪಿಸು ಮಾತಿದೆ
ಹರಡಿವೆ ಹರಕೆ ಹೊತ್ತು ಭಾವ ತುಂಬಿಸುವ
ಸಮಯದಲ್ಲಿಯೇ ಕವನದ ಪ್ರೀತಿ ಹಂಚಿಕೊಳ್ಳಲು
ಬರೆಯಲು ಈ ಮುಸ್ಸಂಜೆಯ ಕವನದಲ್ಲಿ ಮೌನದ ಪಿಸು ಮಾತು
@ಮಲ್ಲಿಕಾರ್ಜುನ ಸೊನ್ನದ


- mallikarjun sonnad

23 Apr 2022, 10:26 pm

ನಿತ್ಯ ಸತ್ಯದೊಳಗೆ ಹೋರಾಟ

ನಿತ್ಯವೂ ಒಂದು ಹೋರಾಟ,.
ಬದುಕೆಂಬರಣರಂಗದಲ್ಲಿ ಭಾವನೆಗಳಹೋರಾಟ,.
ಬಣ್ಣ ಬಣ್ಣದ ಕನಸುಗಳ ಮಾರಾಟ,,,,
ಒಂದು ತುತ್ತು ಅನ್ನಕ್ಕಾಗಿ ಪರದಾಟ,,,.
ಇಟ್ಟ ಗುರಿ ತಲುಪಲು ಅಲೆದಾಟ,,,,.
ಪ್ರೀತಿ ದ್ವೇಷಗಳ ನಡುವೆ ಕಿತ್ತಾಟ,,,,
ಮದುವೆ ಮೋಹಗಳ ರಂಗಿನಾಟ,,,,
ಮಕ್ಕಳ ಪೋಷಣೆಗಾಗಿ ರಂಪಾಟ,,,,
ವಯಸ್ಸಾದ ಮೇಲೆ ಮಕ್ಕಳಂತೆ ಕಿರುಚಾಟ,,,
ಈ ಜೀವನವೇ ನಿತ್ಯವೂ ಒಂದು ಹೋರಾಟ,,,,,. ಸೋತರೂ ಗೆದ್ದರೂ ಸಾಗುತ್ತಿರಲಿ ಬದುಕಿನ ಆಟ,,.
@ಮಲ್ಲಿಕಾರ್ಜುನ ಸೊನ್ನದ

- mallikarjun sonnad

23 Apr 2022, 12:03 am

ನೀ...ನನ್ನ ಚಿನ್ನ

ಹೂವಿಗಿಂತ ಮಿಗಿಲಾದ ನಗು ನಿನ್ನದು
ಚಿನ್ನಕ್ಕಿಂತ ಅಸಲಾದ ಗುಣ ನಿನ್ನದು
ಮುತ್ತಿಗಿಂತ ಮಧುರವಾದ ಮಾತು ನಿನ್ನದು
ಚಂದಕ್ಕಿಂತ ಸೊಗಸಾದ ರೂಪ ನಿನ್ನದು
ಇದೆಲ್ಲವನ್ನು ಪ್ರೀತಿಸುವ ಹೃದಯ ನನ್ನದು
ಹೃದಯವನ್ನು ಪ್ರೀತಿಸುವ ಕರ್ತವ್ಯ ನಿನ್ನದು
ಆಕೆ ನನ್ನ ಮನದ ಮಹಾರಾಣಿ
ನಾ ಹೇಳಬೇಕಾಗಿಲ್ಲ ಅವಳಿಗೆ ಬುದ್ಧಿವಾಣಿ
ಪದೇ ಪದೇ ಅವಳೇ ಹೇಳ್ತಾಳೆ ಕಹಾನಿ
ಮುನಿದಾಗ ಆಕೆ ಆವೇಶದ ಅಗ್ನಿ
ಆದರೆ ಅವಳೇ ನನ್ನ ಮುದ್ದಿನ ಅರಗಿಣಿ
ನಿನ್ನ ಮೊಗದಲ್ಲಿ ಯಾವಾಗಲೂ
ನಗು ತುಂಬಿರಲಿ ಆ ನಗುವಿಗೆ
ಯಾವಾಗಲೂ ನಾ ಕಾರಣ ವಾಗಿರಲಿ.
@ಮಲ್ಲಿಕಾರ್ಜುನ ಸೊನ್ನದ

- mallikarjun sonnad

22 Apr 2022, 08:39 pm

ಬಯಕೆ

ಬಯಸಿದೆಲ್ಲಾ
ಸಿಕ್ಕರೆ
ಬಯಕೆಗೆ ಬೆಲೆ ಎಲ್ಲಿ....?
ಅನಿಸಿದೆಲ್ಲಾ
ಹೇಳಿದ್ದರೆ
ಮೌನಕ್ಕೆ ಅರ್ಥವೆಲ್ಲಿ....?
ತಪ್ಪುಗಳೆ
ಆಗದಿದ್ದರೆ
ಪ್ರಯತ್ನಕ್ಕೆ ಪ್ರಾರಂಭವೆಲ್ಲಿ...?
ಅಳುವೆ
ಬರದಿದ್ದರೆ
ನಗುವಿಗೆ ಖುಷಿಎಲ್ಲಿ...?
ಕಷ್ಟಗಳೆ
ಇರದಿದ್ದರೆ
ಜೀವನಕ್ಕೆ ಮೌಲ್ಯಎಲ್ಲಿ....?
ಭಾವನೆಗಳೆ
ಇಲ್ಲದಿದ್ದರೆ
ಸಂಬಂಧಗಳಿಗೆ ಬೆಲೆ ಎಲ್ಲಿ
ನೀಮ್ಮೆಲ್ಲರ ಪ್ರೀತಿಯ ನಲ್ಲ...!!
@ಸೊನ್ನದ

- mallikarjun sonnad

21 Apr 2022, 11:24 pm

ನೆನಪಿನ ಪ್ರೀತಿಗೆ


ನೆನಪಾಗುವುದು ನಿನ್ನ ಸವಿ ಸ್ಪರ್ಶ
ಈ ತಂಗಾಳಿ ಸೋಕಿದಾಗ.....
ನೆನಪಾಗುವುದು ನಿನ್ನ ಕಂಗಳು
ಆ ಚುಕ್ಕಿಗಳ ನಾ ನೋಡಿದಾಗ....

ನೆನಪಾಗುವುದು ನಿನ್ನ ನಗುವು
ಅರಳುವ ಹೂವನ್ನು ಕಂಡಾಗ....
ನೆನಪಾಗುವುದು ನಿನ್ನ ತುಂಟತನ
ಪುಟ್ಟ ಮಗುವನ್ನು ನೋಡಿದಾಗ...

ನೆನಪಾಗುವುದು ಆ ಕ್ಷಣಗಳು
ಪ್ರತಿಸಾರಿ ಈ ಹೃದಯ ಮಿಡಿದಾಗ..
ಮಧ್ಯರಾತ್ರಿಯಲ್ಲಿ ನಿದ್ದೆ ಗೆಡಿಸುವುದು
ಆ ನಿನ್ನ ಮಂದಹಾಸದ ಮುಗುಳು ನಗು.
@ಮಲ್ಲಿಕಾರ್ಜುನ ಸೊನ್ನದ

- mallikarjun sonnad

21 Apr 2022, 11:24 pm

ಮುನಿಸಿದೆ ಮನಸ್ಸಿಗೆ


ಮುನಿಸು ತರವೇ ಮುಗುದೇ
ಹಿತವಾಗಿ ನಗಲು ಬಾರದೇ
ನನಗೂ ಗೊತ್ತು ನಿನ್ನ ಮುಖದಲ್ಲಿ
ನಗು ಕಾಣದು ನಾ ರೇಷ್ಮೆ ಸೀರೆ ತಾರದೇ...

ಸೀಟ್ಯಾಕೆ ಸಿಡುಕ್ಯಾಕೆ ನನ್ನ ಬಂಗಾರಿ
ತರಲಿಲ್ಲವೆಂದು ನೀ ಹೇಳಿದ ತರಕಾರಿ
ಬೆಲೆ ಏರಿ ನಿಂತಿವೆ ಗಗನಕ್ಕೇ
ಗಂಜಿ ಜೊತೆ ಉಪ್ಪಿನಕಾಯಿ
ಸಾಕು ಊಟಕ್ಕೆ

ನಗಿಸು ಅಳಿಸು
ಆದರೆ ತೋರದಿರು ಮುನಿಸು
ಕಾಡಿಸು ಪೀಡಿಸು
ನಾ ಮುನಿದರೆ ನೀ ರಮಿಸು
@ಮಲ್ಲಿಕಾರ್ಜುನ ಸೊನ್ನದ

- mallikarjun sonnad

21 Apr 2022, 11:24 pm

ಕೊರಗದಿರು ಮನವೇ

ಒಂಟಿಯಾದೆ ಎಂದು ಕೊರಗ ಬೇಡ
ಸೂರ್ಯನು ಒಂಟಿ,
ಚಂದ್ರನು ಒಂಟಿ,
ಆದರೂ ಜಗಕ್ಕೆ ಬೆಳಕು ನೀಡುತಿದ್ದಾರೆ, ಒಂಟಿಯಾದಗಲೆ ನೀನು
ಏನು ಎಂದು ನಿನಗೆ ಅರ್ಥವಾಗುವುದು,
ನಿನ್ನ ಸಾಮರ್ಥ್ಯ ಎಷ್ಟು ಎಂದು
ನಿನಗೆ ತಿಳಿಯುವುದು,
ಸೂರ್ಯ, ಚಂದ್ರರಂತೆ
ನೀನು ಜಗತ್ತಿಗೆ ಬೆಳಕು
ನೀಡುವುದು ಬೇಡ
ನಿನ್ನ ಬದುಕಿಗೆ ನೀನು
ಬೆಳಕಾಗು ಸಾಕು,
ಆಗ ನಿನ್ನ ಬದುಕು ಧನ್ಯತಾ ಭಾವ
@ಸೊನ್ನದ.

- mallikarjun sonnad

21 Apr 2022, 05:50 pm

ಗುರುವೆ ನಮಃ

ತ್ರಿಮೂರ್ತಿ ಸ್ವರೂಪಿ ಗುರು ದೇವನೆ
ಜ್ಞಾನಜ್ಯೋತಿ ಬೆಳಗಿಸುವಂತ ಗುರುವೆ
ವಿದ್ಯೆ ಬುದ್ಧಿ ಚಿತ್ತ ಮಸ್ತಕದಿ ತುಂಬಿಸಿ
ಶಿಸ್ಯವೃಂದವ ಶೃಷ್ಠಿಸಿದ ಗುರುವೆ ನಮಃ

ಆಕಾಶದಿಂದ ದಿಗಂತದೊರೆಗು ತೋರಿ
ಜೀವಶೃಷ್ಠಿ ಜಲಜ ನಾಗರಿಕತೆಯ ಕಲಿಸಿ
ನಾದ ಬಿಂದು ಕಲೆ ವಿಜ್ಞಾನವನ್ನು ತಿಳಿಸಿ
ಲೋಕಕಲ್ಯಾಣ ತಿಳಿಸಿಕೊಟ್ಟೆ ಗುರುವೆ

ಗುರಿ ಮುಟ್ಟುವ ತನಕ ದುಡಿಯುತ್ತಿರು
ಗೆದ್ದ ಮೇಲೆ ಛಲ ಬಿಡದಿರೆಂದು ಹೇಳ್ದೆ
ಗುರು ಪಾದವ ನಂಬಿ ನಡೆ ನಿ ಮುಂದೆ
ಹರನು ಇರುವನು ಬೆನ್ನ ಹಿಂದೆ ಎಂದೆ

ಅಕ್ಷರ ಜ್ಞಾನದ ಜೊತೆ ಜೊತೆಗೆ ತಂದೆ
ಬದುಕು ಬದಲಿಸುವ ಆಟ ಹೇಳಿಕೊಟ್ಟೆ
ಆಡಂಬರ ಅಸೂಯೆ ಹೊಟ್ಟೆಕಿಚ್ಚು ಕಿತ್ತು
ಜಾತಿ ಧರ್ಮ ಮೀರಿ ಎಂದು ಹರಸಿದೆ

ದೇವರನ್ನು ನಾನು ಕಾಣಲಿಲ್ಲ ಗುರುವೆ
ದೈವತ್ವವನ್ನು ಕಂಡೆ ನಿನ್ನಲ್ಲಿಯೆ ನಾನು
ದಾನವ ಗುಣಗಳನ್ನು ಸುಟ್ಟು ಗುರುವೆ
ಗುರುಮೂರ್ತಿಯೆ ನಾನ್ ನಮೋ ಎಂದೆ

ಡಾ. ಕಲ್ಮೇಶ ಬಡಿಗೇರ
ಬದಾಮಿ
9743539657


- Kalmesh Badiger

21 Apr 2022, 06:31 am