ಮನದ ತುಂಬಾ
ಆವರಿಸಿದೆ
ಕಾರ್ಮೋಡ
ಎದೆಯೊಳಗೆ
ಹೇಳಲಾಗದ
ದುಗುಡ ಇಬ್ಬನಿ
ಕಳೆದ ಎಳೆಯ
ಚಿಗುರಿನಲಿ
ಹೊಸ ರಾಗ
ಮಿಡಿದ ಸುಳಿವಲಿ
ಮರೆತು ಹೋದ
ಮಾತೊಂದು
ಮಂಜಾಗಿ ಇಳಿದಿದೆ
ಗರಿಕೆಯಂಚಲಿ
ಹಿತವಾಗಿ ಬೀಸುತ್ತಿರುವ
ಗಾಳಿಯಲಿ
ಕಲಕುತ್ತಿದೆ ಏಕಾಂತವು
ಮೌನದ ಮರೆಯಲಿ
ಹೆಪ್ಪುಗಟ್ಟಿದ
ಬೇಸರವ ಕಂಡು
ಕರೆ ಕೊಟ್ಟಿದೆ
ತುಂತುರು ಹನಿ
ನೇಸರನ ಜೊತೆ ಸೇರಿ
ನಲಿವಿನಲಿ
ಜಗದ ನಿಯಮ
ಯಾವುದು ಇಲ್ಲಿ
ಇರುವುದಿಲ್ಲ
ನಿಯಮ ಮೀರಿ
ಎಲ್ಲರೂ
ಇರುವವರು
ಇಲ್ಲಿ ಎಲ್ಲವನ್ನು
ತಿಳಿದುಕೊಳ್ಳುವ
ಅವಶ್ಯಕತೆ ಇಲ್ಲ
ಎಲ್ಲರಿಗೂ
ಎಲ್ಲದಕ್ಕೂ
ಪ್ರತಿಕ್ರಿಯಿಸುವ
ಅವಶ್ಯಕತೆ ಇಲ್ಲ
ಎಲ್ಲರನ್ನು
ಮೆಚ್ಚಿಸುವ
ಅವಶ್ಯಕತೆ ಇಲ್ಲ
ಎಲ್ಲರನ್ನು
ಅರ್ಥಮಾಡಿಕೊಳ್ಳುವ
ಅವಶ್ಯಕತೆ ಇಲ್ಲ
ಎಲ್ಲರಿಗಾಗಿಯೂ
ಕಾಯುವ
ಅವಶ್ಯಕತೆ ಇಲ್ಲ
ಸಿಂಪತಿಗಾಗಿ ಬದುಕುವ ಮನುಷ್ಯ ನಾನಲ್ಲ
ಬದುಕಿಗಾಗಿ ಬುದುಕುವ ಮನುಷ್ಯ ನಾ
ಶ್ರೀಮಂತಿಕೆಗಾಗಿ ದುಡಿಯುವ ಮನುಷ್ಯ ನಾನಲ್ಲ
ಜೀವನಕ್ಕಾಗಿ ದುಡಿಯುವ ಮನುಷ್ಯ ನಾ
ಆಸೆಯಿದೆ ಅತಿಯಾಸೆ ಪಡುವ ಮನುಷ್ಯ ನಾನಲ್ಲ
ಹಾಸಿಗೆ ಇದ್ದಷ್ಟು ಕಾಲ್ ಚಾಚುವ ಮನುಷ್ಯ ನಾ
ನೀರಾಭಿಮಾನಕ್ಕೆ ತಲೆ ಬಾಗುವ ಮನುಷ್ಯ ನಾನಲ್ಲ
ಸ್ವಾಭಿಮಾನಕ್ಕೆ ತಲೆಬಾಗುವ ಮನುಷ್ಯ ನಾ
ಕೈ ಗೆ ಸಿಕ್ಕ ಚಿಟ್ಟೆ ಕೈಯಿಂದ
ಹಾರಿ ಹೋಗ ಬಾರದೆಂದು
ಅಂತ ಗಟ್ಟಿ ಯಾಗಿ ಹಿಡಿದರೆ
ಅದು ಅಂಗೈಯಲ್ಲೇ
ಪ್ರಾಣಬಿಡುತ್ತೆ
ತನ್ನ ಪಾಲಿನ ಪ್ರೀತಿ ತನ್ನಿಂದ
ದೂರಾಗ ಬಾರದೆಂದು
ಅಂತ ಅತಿ ಪ್ರೀತಿ ತೋರಿದರೆ
ಆ ಪ್ರೀತಿ ಹಿಂಸೆಯಾಗಿ
ತನ್ನಂತಾನೇ ಸತ್ತ ಹೋಗುತ್ತದೆ
ಚಿಟ್ಟೆಗೆ ಅತಿ ಬಂಧನ
ಉಸಿರು ನಿಲ್ಲಿಸುವುದು
ಪ್ರೀತಿಗೆ ಅತಿ ಸಲುಗೆ
ಉಸಿರು ಕಟ್ಟಿಸುವುದು
ಅತಿ ಯಾದರೆ ಅಮೃತವೂ
ವಿಷವಾಗುವುದಂತೆ
ಪ್ರೇಮಿಸುವ ಜೀವಕೆ
ಪ್ರೇಮಾಮೃತ ವಿಷವೆನಿಸುವುದೇ
ಚಿಟ್ಟೆಗೇನೋ ಮೊದಲೇ
ಆಯುಷ್ಯ ಕಡಿಮೆ
ಪ್ರೀತಿಯೇಕೆ ಕೊನೆಯಾಗೋದು
ಹೀಗೆ ಅರ್ಧದಲೇ?
@ಮಲ್ಲಿಕಾರ್ಜುನ ಸೊನ್ನದ
ಮೊದಲ ನೋಟದಲೇ
ಸೆಳೆದೆ ನೀನು
ಮೊದಲ ನಗುವಿನಲೇ
ಕಳೆದೋದೆ ನಾನು
ಬೆಚ್ಚನೆಯ ತೋಳ್ತೆಕ್ಕೆಯಲ್ಲಿ
ಕರಗಿಬಿಟ್ಟೆ
ಪ್ರೀತಿ ಬೆಳೆದಂತೆ
ಹುಚ್ಚಿಯಾಗಿಬಿಟ್ಟೆ
ನನಗಿನ್ನೂ ತಿಳಿಯುತಿಲ್ಲ
ಇದೆಂತಾ ಮಾಯೆಯೋ
ಅರೆಕ್ಷಣ ಬಿಟ್ಟಿರಲಾರದ
ಸೆಳೆತ ಜಗವನೇ ಮರೆಸುವೆ
ಪ್ರತಿನಿತ್ಯ ತನು,ಮನ,ಕಣದಲೂ
ಅಂಟಿಕೊಂಡ ಮೋಹ
ಗಾಳಿಗಿಂತಲೂ ತಣ್ಣನೆಯ
ಅನುಭವ
ಎಲ್ಲಾ ನೀನೇ ಎಂಬ ಭಾವ
ಆ ಭಾವದಲೇ ಮರೆಯುವೆನು ನೋವ
ಆತ್ಮಾತ್ಮಗಳೂ ಸೇರಿರುವ ಪ್ರೇಮವಿದು
ಒಂದು ಸಲ ನಿಜ ಹೇಳಿಬಿಡು.
@ಮಲ್ಲಿಕಾರ್ಜುನ ಸೊನ್ನದ
ಮನುಷ್ಯ ಒಳ್ಳೆಯ ದಾರಿಯಲ್ಲಿ
ನಡೆಯಲು ದೊಡ್ಡ ಅನುಭವ
ಮಹಾ ಪ್ರವಚನಗಳೇ ಬೇಕಿಲ್ಲ
ತನ್ನ ಬದಲಾವಣೆಗೆ ಚಿಕ್ಕದೊಂದು
ಸಂದರ್ಭ ಮಾತು ಸಿಕ್ಕಿದರೂ
ಬದಲಾಗುತ್ತಾನೆ ಮೂರ್ಖರು
ಎಂದೂ ಬದಲಾಗಲಾರರು
ಹಾಗಾಗಿ ಬುದ್ದಿವಂತರಿಗೆ
ಕೆಟ್ಟ ಅನುಭವ ಬೇಕಿಲ್ಲ
ಮೂರ್ಖರಿಗೆ ಹೇಳುವುದು
ತಿಳಿಯಲ್ಲ ಮಹಾರಾಜನಾದ
ಸಿದ್ದಾರ್ಥ ಬುದ್ಧನಾಗಲು
ನಾಲ್ಕು ನೋಟ ಸಾಕಾಯ್ತು
ಆದರೆ ಅಂತಹ ಶವ ರೋಗಿ
ಬಡವ ಇಂತಹವನ್ನು ದಿನಾ
ನೋಡುವ ನಾವ್ಯಾರು
ಬುದ್ಧನಾಗಿಲ್ಲ ಕೊನೆ ಪಕ್ಷ
ಯಾರಿಗೂ ವಂಚಿಸದೇ
ಮೋಸ ಮಾಡದೇ ಸಾರ್ಥಕ
ಬದುಕು ಸಾಗಿಸಿದರೆ ಸಾಕು
@ಮಲ್ಲಿಕಾರ್ಜುನ ಸೊನ್ನದ