Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಜೈ ಭೀಮ್

ಭೀಮನ ಮಕ್ಕಳುಗಳು ನಾವುಗಳು
ಜೈ ಭೀಮನ ಮಕ್ಕಳುಗಳು ನಾವುಗಳು
ಸಾವಿರಾರು ಕಷ್ಟಗಳಿಂದ್ದರು
ನೂರೆಂಟು ಕನಸು ಕಟ್ಟಿ
ನ್ಯಾಯ ನೀತಿ ಸಮಾನತೆಗೆ
ಪ್ರಾಣ ಬಿಟ್ಟವರು ನಾವು
ಭೀಮನ ಮಕ್ಕಳುಗಳು ನಾವುಗಳು
ಜೈ ಭೀಮನ ಮಕ್ಕಳುಗಳು ನಾವುಗಳು

ಬಡತನದಲ್ಲಿ ಸುಟ್ಟು ಬೆಂದು
ನಿಟ್ಟುಸಿರು ಬಿಟ್ಟು ಜೀವ ಬಿಟ್ಟು
ಬೂದಿಯಾದರು
ಛಲಬಿಡದ ಛಲವಾದಿಗಳು ನಾವು
ಭೀಮನ ಮಕ್ಕಳುಗಳು ನಾವುಗಳು
ಜೈ ಭೀಮನ ಮಕ್ಕಳುಗಳು ನಾವುಗಳು

ಚಿಂದಿ ಹಾಯ್ದು ಚಿಂದಿ ಬಟ್ಟೆ ತೊಟ್ಟು
ಗಂಜಿ ಕುಡಿದರು ಸ್ವಾಭಿಮಾನ ಬಿಡದ
ಸ್ವಾಭಿಮಾನದ ಕಲಿಗಳು ನಾವು
ಭೀಮನ ಮಕ್ಕಳುಗಳು ನಾವುಗಳು
ಜೈ ಭೀಮನ ಮಕ್ಕಳುಗಳು ನಾವುಗಳು

ಹಸಿವಿನಿಂದ ಸೋತು ಸತ್ತು
ಪ್ರಾಣ ಬಿಟ್ಟರು
ಮನುವಾದಿಗಳ ಕರಿ ನೆರಳಿಗೆ
ತಲೆಬಾಗದವರು ನಾವು
ಭೀಮನ ಮಕ್ಕಳುಗಳು ನಾವುಗಳು
ಜೈ ಭೀಮನ ಮಕ್ಕಳುಗಳು ನಾವುಗಳು

ಮನುವಾದಿಗಳ ಕಲ್ಲಿನ ಏಟಿಗೆ
ಜಾತಿ ಧರ್ಮದ ಚಾಟಿ ಏಟಿಗೆ
ಹೆದರಿ ಓಡಿದೆ ಅಸಮಾನತೆಯನ್ನು
ಮಟ್ಟಿನಿಂತವರು ನಾವು
ಭೀಮನ ಮಕ್ಕಳುಗಳು ನಾವುಗಳು
ಜೈ ಭೀಮನ ಮಕ್ಕಳುಗಳು ನಾವುಗಳು


- ರಾಜು ಹಾಸನ

21 Mar 2022, 02:32 pm

ದ್ರೋಹ ಮುರಿದ ಮನಸುಗಳು

ಮತ್ತೊಬ್ಬರೊಂದಿಗೆ ಕಣ್ಣೇದುರಿಗೆ ನೋಡ ನೋಡುತ್ತಾ ಹೇಗಿರಲಿ ನಾ ಹೇಳು,
ಕಲಿತು ಒಂದಾಗಲಿಲ್ಲ ಪ್ರೀತಿ ಮನಸುಗಳು

ಹೃದಯದ ಕೂಗು ತಿಳಿಯದೆ ಹೋಯ್ತಾ ಪ್ರೀತಿಸಿದ ಮನಸ್ಸಿಗೆ
ನಿನ್ನ ಪ್ರೀತಿಯೇ ಸುಳ್ಳ.

ಕಂಡು ಕಾಣದಂತ ಪ್ರೀತಿ ಮಾಯೆಯಾ ಅರ್ಥೈಸಿಕೊಳ್ಳಲಾಗದೆ ನರಳಾದುತ್ತಿರುವ ಮನಸಿನ ಸಂಕಟ ನಿನ್ಗೆ ಗೊತ್ತಾ? No


ಪ್ರೀತಿ ಅರ್ಥ ನಿನ್ಗೆ ಗೊತ್ತಿದ್ರೆ ನೀನು ನನ್ ಪ್ರೀತಿಗೆ ಮಾಡ್ತಿರ್ಲಿಲ್ಲ

by. harshini/asu

- harshini

20 Mar 2022, 09:13 am

ಅಂಕವಿಲ್ಲದ ಪ್ರಶ್ನೆ

ಮಂದಿಯೊಳಗ ಅವಮಾನ ಆಗದಿದ್ದರೆ..
ಮಾನ-ಸನ್ಮಾನದ ಕಲ್ಪನೆ ಎಲ್ಲಿ??

ಅಪ-ಪ್ರಚಾರದ ಬಾಯಿಗೆ ತುತ್ತಾಗದಿದ್ದರೆ..
ಸುವಿಚಾರದ ಪ್ರಚಾರಕ್ಕೆನು ಮರ್ಯಾದೆ?

ಒಬ್ಬರ-ಇನ್ನೊಬ್ಬರಿಗೆ ಎತ್ತಿ ಕಟ್ಟದೆ ಇದ್ದರೆ..
ಚಪ್ಪರಸಿ ತಿಂದ ಅನ್ನ ಕರಗೋದ್ಯಾಂಗ??

ಒಣ-ಹಿರಿತನ ಮಾಡೋರು ಇರದೇ ಇದ್ದರೆ
ಊರು-ಉಸಾಬರಿ ಯವರ ಬಾಣಿತನ ಹೆಂಗೆ??

ಸಿಟ್ಟು-ಅಸುಹೆಗಳು ಬಿದ್ದು ಬಿಕ್ಕುತ್ತಿದ್ದರೆ..
ಮಲಗಿರುವ-ಗೋರಕಿಗೆ ಗಂಟೆ ಕಟ್ಟೋದ್ಯಾಂಗ??

ಅಂಕವಿರದ ಪ್ರಶ್ನೆಗಳಿಗೆ ಉತ್ತರ?????
ಅತಿಯಾದರೆ "ಮಹಾಭಾರತ" !!!
ಮಿತವಾದರೆ "ರಾಮಾಯಣ"!!!


ಸುಗ್ಗಿ...





- ಆರ್ ಎಸ್ ಸುಗ್ಗಿ.

17 Mar 2022, 03:34 am

ಯಾರಿದ್ದರೇನು ಫಲ ..??

ಚಿನ್ನದ ಆನೆಯ ಮೇಲೆ ಮೆರೆಯುವಾಗ
ತಂದೆಯ ಹೆಗಲಿನ ಸಾತು ಇಲ್ಲದಿರುವಾಗ!

ಸಂಪತ್ತಿನ ಹಾಸಿಗೆಯ ಮೇಲೆ ಮಲಗುವಾಗ
ತಾಯಿಯ ಮಡಿಲಿನಲ್ಲಿ ಮಲಗುವ ಪುಣ್ಯ ಇಲ್ಲದಿರುವಾಗ!

ಆಸ್ತಿಯ ಬೇರೊಂದು ನೀ ನೆಡುರುವಾಗ
ಸಹೋದರರ ಜೊತೆ ಕೂಂಬೆ ಹಂಚಿಕೊಳ್ಳದಿರುವಾಗ .!

ಯಾರಿದ್ದರೇನು ಫಲ...???

ಅಕ್ಷರ ಕಲಿತು ನಾ ನಡೆಯುವಾಗ
ಗುರಿಮುಟ್ಟಲು ಗುರುವಿಲ್ಲದೆ ಇರುವಾಗ!

ಅಂಗದ ಮೇಲೆ ಲಿಂಗವ ಕಟ್ಟಿ
ಅಂಗದ ಒಳಗೊಂದು ಮಂಗನ ಸಾಮ್ರಾಜ್ಯ ಕಟ್ಟಿ ಇರುವಾಗ!

ಘನ ನೀತಿ ಪುಸ್ತಕಗಳನ್ನು ನೀ ನಂಬಿ
ನಂಬಿ ನಡೆದವರ ಹಿಂಬ ಕಾಯುವ!

ದೇವರನ ಮಾರಿ ಬದುಕುವಾಗ
ನಿನ್ನ ನಿನ್ನ ಸಲಹುವ ಆರಿದೆ ಚಲ!

ಯಾರಿದ್ದರೇನು ಫಲ...???

,,ಅನಾಮಿಕ....?



- ದೇವರಾಜ ಪೂಜಾರಿ

13 Mar 2022, 09:16 pm

ಮೌನ....

ಕಾಣದ ಮುಖಚಾರಿಯೊಂದು ಕಾಡುತಿದೆ ಕನಸಲಿ
ಎದುರಿಗೆ ಬರದೇ ಕೆಣಕುತಿದೆ ಮನಸಲಿ
ಇದ್ದು ಎರದ ಹಾಗೆ ಗೋಚರಿಸುತ್ತಿದೆ ಕಲ್ಪನೆಯಲಿ
ಎಂದು ಬರುವಳೋ ಏನೋ ಎದುರಲಿ
ಅವಳಿಗಾಗಿ ಕಾಯುವೆನು ಉಸಿರಿಡಿದು ನಾ ನನ್ನಲಿ
ನಾ ಆಗಿರುವೆ ಕನಸುಗಾರ ಅವಳ ಪ್ರೀತಿಯಲಿ
ಆ ಕನಸನ್ನು ನನಸು ಮಾಡಿ ರಾಣಿ ಆಗುವಳೇ
ನನ್ನ ಜೀವನದಲಿ
ಇಂತಿ ನನ್ನ ಪ್ರೀತಿಯ ಹುಡುಗಿ
ಆವಾಳ್ಯಾರೋ...
ಆವಾಳ್ಯಾರೋ....

- Raju Raju

05 Mar 2022, 12:06 pm

ಹಾಗೆ ಸುಮ್ಮನೆ...!

ಕನಸಿನ ಜೊತೆಗೆ ಭಾವನೆಗಳ ಹೂರಣ
ನಿಲ್ಲದೆ ಸಾಗಲಿ ನಿನ್ನೀ ಈ ಪಯಣ
ಗೆದ್ದರು ಬೀಗದೆ ಸುಮ್ಮನಿರು
ನಿನ್ನ ಮೌನವೇ ಕೊಡುವುದು ಉತ್ತರ

ಯಾವುದೇ ಅಪೇಕ್ಷೆ ಬಯಸಬೇಡ
ಬಯಸಿ ಬಂದವರ ಕೈ ಬಿಡಬೇಡ
ಕಾಲದ ಜೊತೆಗೆ ನೀ ಸಾಗು
ಎಲ್ಲರೊಳಗೂ ನೀ ಒಂದಾಗು

ಸ್ನೇಹಕ್ಕೆ ನೀ ಬೆಲೆಕೊಡು
ಸಂಬಂಧಕ್ಕೆ ಆಸರೆಯಾಗು
ಒಲವಿಗೆ ನೀ ದಾರಿ ಕೊಡು
ಪ್ರೀತಿಗೆ ನೀ ಸಮ್ಮತಿಯಾಗು

- Maruthi

09 Feb 2022, 09:44 pm

ನಿನಗಾಗಿ

ಅವಳು ನನಗೆ ಬರೆದ ಕವನ
ಈ ದಿನ ನನಗ ವಿಶೇಷವಾದ ದಿನ
ನಾಳೆ ಏನೆಂಬುದು ಗೊತ್ತಿಲ್ಲ.
ಈ ದಿನ ನೀ ನನ್ನೊಡನಿರುವೆ
ನಾಳೆ ನೀ  ನನ್ನೊಡನಿರದಿರಬಹುದು.

ಹಲವು ಬಾರಿ ನೀ ನನ್ನೊಡನಿದ್ದು
ನನ್ನ ಬದುಕಿನ ಸಂಪತ್ತು ಹೆಚ್ಚಿತು.
ನಾನು ಶ್ರೀಮಂತಳಾದೆ
ಬದುಕಿನ ಅರ್ಥ ನಿನ್ನಿಂದ ತಿಳಿದೆ.

ಮಾತನಾಡುತ್ತಾ ನಾವು ನಮ್ಮನ್ನ ಮರೆತೆವು
ನಮ್ಮ ಸುತ್ತಲು ಹೊಸ ಜಗತ್ತು ಕಟ್ಟಿದೆವು.
ನೀನಾಡಿದ ಮಾತುಗಳು ಈಗಲೂ ಕೇಳುತ್ತಿವೆ
ಮತ್ತು ಅವುಗಳನ್ನು ಕೊನೆಯವರೆಗೂ ಮರೆಯುವುದಿಲ್ಲ.

ಕನಸುಗಳನ್ನು ಹಂಚಿಕೊಂಡೆವು
ನಮ್ಮ ಮುಂದಿನ ಜೀವನವನು ಕಂಡೆವು.
ಹೊಸ ಹಾಡನ್ನು ಹಾಡುತ್ತ
ನಮ್ಮ ನಮ್ಮ ನೋವುಗಳನು ಮರೆತೆವು.

ಹಾಡು ಹಾಡುತ್ತಿರುವಾಗಲೇ
ಅಯ್ಯೋ  ಹಾಡಿನ ಶೃತಿ ಹಾಳಾಯಿತು.
ಕಣ್ಣೊಳಗಿದ್ದ ಕನಸುಗಳೆಲ್ಲವು
ಅಯ್ಯೋ ನೆನಪು ಬಾರದೆ ನಾಶವಾದವು.

ನಾಳೆ ಎನ್ನುವುದರಲ್ಲಿ ಎಲ್ಲವು ಅಡಗಿರುವುದು.
ಇಂದಿನಂತಿಲ್ಲದಿದ್ದರು ನಾಳೆ
ಜೀವನ ಸಾಗುವುದು ಕೊನೆಯವರೆಗೆ.
ಆದರೆ....
ಕಣ್ಗಳಿಂದ ಹರಿಯುವ ನೀರಿಗೆ ಕೊನೆಯಿಲ್ಲ.

- Ravi

08 Feb 2022, 04:58 pm

ಮರಳಿ ಬಾ ಗೆಳತಿ

ಮತ್ತೆ ಮರಳಿ ಬಾ ಗೆಳತಿ...
ಇಂದು ಎನದಿರಲಿ ಕ್ಷಮೆ ಕೇಳುವ ಸರತಿ.....

ಆಳವಾಗಿ ಕಾಡುತಿದೆ ಇಂದೇಕೋ ನಿನ್ನ ನೆನಪು..
ಜೊತೆಯಲ್ಲಿಯೇ ಆ ನಿನ್ನ ಕೆನ್ನೆಯ ಹೊಳಪು..

ಒಮ್ಮೆ ನಗುವೆಯಾ ನೀ ಎನ್ನ ಗೆಳತಿ..
ತೋರಲಿ ಆ ನಿನ್ನ ಗೂಳಿಯ ಕೆನ್ನೆ ರೀತಿ ನೀತಿ..

ಇಂದು ಚಂದ್ರನಿಲ್ಲ ಆಗಸದಲ್ಲಿ ಖಾಲಿ ಖಾಲಿ
ಆಗಸಕೆ ಚಂದ್ರನಂತೆ ನನ್ನೊಂದಿಗೆ ನೀ ಇಲ್ಲದಂತೆ.
.
ಇನ್ನೂ ಮುನಿಸೇಕೆ ಮುತ್ತಿನೊಡತಿ..
ಬೇಗ ಬಾ.. ಇನ್ನೊಮ್ಮೆ ಕೂಡಿ ನುಡಿಸುವ ಆ ಮಧುರ ತಂತಿ ...

ಮತ್ತೆ ಮರಳಿ ಬಾ ಗೆಳತಿ..
ಇಂದು ನನದಿರಲಿ ಕ್ಷಮೆ ಕೇಳುವ ಸರತಿ.....
"ಕಿಚ್ಚ ಶಶಿ"

- Shashi Kumar K

07 Feb 2022, 10:27 pm

....

ಕಣ್ಣಲ್ಲಿ ಕಣ್ಣಿಟ್ಟು ಹೊಗಳುವೆ,
ಪೂರ್ತಿ ಕೇಳು ಕೈಕಟ್ಟಿ ನಿಂತು..
ಹೇಳದೇ ಕೇಳದೆ ಕನಸಿಗೆ ಬಂದರೆ,
ಕೊಟ್ಟು ಕಳಿಸು ನಿನ್ನಷ್ಟೇ
ಸಿಹಿಯಾದ ಮುತ್ತು....
ಹೊಸದಾದ ನಗು ಚೆಲ್ಲು,
ಎಲ್ಲೇ ನಾ ಕಂಡಲ್ಲಿ....
ಕಂಬನಿ ತಡೆದು ಜೊತೆಲಿರುವೆ,
ನಿನ್ನ ಕಣ್ಣಲ್ಲಿ.....
ಬೇರೆ ಎಲ್ಲದಕ್ಕಿಂತ ನನ್ನ ಜಾಸ್ತಿ ಪ್ರೀತಿಸು
ಅರೆಹುಚ್ಚನಾದ ನನ್ನ,
ತುಸು ಪೂರ್ತಿ ಹುಚ್ಚನಾಗಿಸು.........
ಎಮ್.ಎಸ್.ಭೋವಿ....✍️


- mani_s_bhovi

05 Feb 2022, 09:32 pm

ಸಾಕು

ಜೀವನದಲ್ಲಿ ನಾವು ನಮಗೆ
ನಾವು ಕೆಟ್ಟವರು ಆದ್ರು
ಬೇರೆಯವರಿಗೆ ಬಣ್ಣ ಬಣ್ಣದ ತರ
ಇದ್ದಾರೆನೇ ಜನ ನಮ್ಮ ಮೆಚ್ಚುವುದು
ಆದರೆ ಯಾರೇ ಮೆಚ್ಚಲಿ ಮೆಚ್ಚದೆ ಇರಲಿ
ಹಾಗೆಯೇ ಬೇರೆಯವರ ಪಾಲಿಗೆ
ಮುಳ್ಳಾಗದೆ ಕೆಟ್ಟವನು ಆದರು
ನಮಗೆ ನಾವು ನಮ್ಮ ಮನಸಿಗೆ
ಒಳ್ಳೆಯವನು ಆದರೆ ಸಾಕು ಏನಂತೀರಾ

- ರಾಜು ಹಾಸನ

04 Feb 2022, 12:46 am