ಇರುವುದನ್ನು ಬಿಟ್ಟು
ಇಲ್ಲದನ್ನು ಹಿಡಿದು
ನಾಳೆ ನಮ್ಮದು ಇಂದು
ನನ್ನದಲ್ಲವೇ ಕಾರಣವಿಲ್ಲದ
ಬದುಕಿನೊಳಗೆ ಹುಟ್ಟಿನಿಂದ
ಸಾವಿನ ತನಕ ಅಪಾರ ಬಡಿತ
ನಿಲ್ಲುವ ತವಕ ಗಾಳಿಗೊಂದಾಸೆ
ದಡದಾಟಿಸುವ ತಲ್ಲಣ ಹೃದಯ
ಕದಡಿದರೂ ಮನಸ್ಸುಗಳು
ಗಿರಿಕಿ ಹೊಡೆದು ಬಿಡುವ ಕನಸುಗಳೆ
ಕಮರಿಹೋಗುವ ಜೀವಕ್ಕಿಷ್ಟು ರೋಚಕತೆಗೆ
ಸಾಗುವ ನೆಲಕ್ಕೆ ಒಗ್ಗಿರುವ ಮನುಜನೇ
ನೀ ನೀನೆ ...ತಾನೇ.
@ಮಲ್ಲಿಕಾರ್ಜುನ ಸೊನ್ನದ
ಗಕಾಮನಿಸಿ ಜನ್ಮ ನೀಡಿದ
ತಾಯಿಯ ಒಡಲಿನಿಂದ
ಬಂದು ಪ್ರಕೃತಿಯ
ಮಡಿಲಿನಲಿ ಅರಳುವ
ನಾವುಗಳು ಹುಟ್ಟಿನಿಂದ
ಇದ್ದಂತೆ ನಾಳೆ ಇರುವುದಿಲ್ಲ
ನಾಳೆ ಇದ್ದಂತೆ ಇಂದು
ಇರುವುದಿಲ್ಲ ಕೊಂಚ
ಬೆಳೆದು ಅಳಿದು ಉಳಿದು
ಬಿಡುವ ಬದುಕು
ನಿಚ್ಛಳ ನಿಷ್ಠುರ ತಾರ್ಕಿಕ
ಕ್ರಿಯೆಯ ಮೂಲಕ ಹೆಮ್ಮದಂತೆ
ವಂಶವಾಹಿಗಳ ಅಭಿವ್ಯಕ್ತಿಯ
ನಿಯಂತ್ರಣ ವ್ಯವಸ್ಥೆ ನಾನೇ ನೀನೇ ಕಾರಣ
@ಮಲ್ಲಿಕಾರ್ಜುನ ಸೊನ್ನದ
ನಿನ್ನ ನೆನಪಿನ ಮೌನ
ನನ್ನ ಕನಸಿನ ಪ್ರೀತಿ
ಹೃದಯದೊಳಗೆ ಸ್ವಾಗತಿಸು
ನನ್ನನ್ನು ನೋವಿನಿಂದ ಬಿಡಿಸು
ಒಲವಿತ್ತು ಹಂಬಲಿಸು
ಕನಸಿನಕುಣಿಕೆಗೆ ಬದುಕನೊಪ್ಪಿಸು
ಕರಗಿದ ರಾತ್ರಿಗಳು ನಿದ್ದೆಗಳು ಹೆದರಿವೆ
ಹೂತಿಟ್ಟ ಪ್ರೀತಿಯ ಬಯಕೆಗಳು ಬೆಂಡಾಗಿವೆ
ಅಳಿದು ಉಳಿಸಿದ ಬದುಕು ಮಸುಕಾಗಿದೆ
ಮೌನದ ಪ್ರತಿ ಪ್ರೀತಿಗೂ ಒಂದು ಕಲ್ಪನೆ
ಪ್ರೀತಿಯ ಮೌನಕ್ಕೆ ಪಿಸು ಮಾತಿದೆ
@ಮಲ್ಲಿಕಾರ್ಜುನ ಸೊನ್ನದ
ಹೊಸತು ಬದುಕು ಹೊಸದು ಜೀವನ
ನೆಮ್ಮದಿಯ ನಾಳೆ ನಮ್ಮದು
ನಿನ್ನೆಯ ಅನುಭವ ನಾಳೆಯ ಅವಕಾಶ
ಬದುಕು ಭವಿಷ್ಯ ರೂಪಿಸುವ ಋಣದೊಳಗೆ
ನಿನ್ನೆಯ ಘಳಿಗೆ ಬದಕು ಬದಲಿಸಬಹುದು
ಇಂದಿನ ಘಟನೆ ಕಲಿಯಬೇಕು ಬದುಕಿನೊಳಗೆ
ಆಕರ್ಷಣೆ ಜೀವನ ಆಕ್ರೋಶ ಬದುಕು
ಹುಟ್ಟಿಸುವ ಬಲತ್ಕಾರದ ಭಯವಿಲ್ಲ
ಸಾವಿನ ನಂಬಿಕೆ ಸಹಜವಲ್ಲ.
@ಮಲ್ಲಿಕಾರ್ಜುನ ಸೊನ್ನದ
ಊರೆಲ್ಲ ಸುತ್ತಿ ಬರುವೆ ನೀನು...... ನೀ ಬರುವ ದಾರಿಯ ಕಾಯುವೆ ನಾ ... ನೆಮ್ಮದಿಯ ಊಟ ಮಾಡುವೆ ನೀನು................................ ನೀ ಬಿಟ್ಟ ಹಳಸಲು ತಿನ್ನುವೆ ನಾ................... ಬೆಚ್ಚನೆಯ ಕಂಬಳಿ ಹೊದ್ದು ಮಲುಗುವೆ ನೀ......................... ಚಳಿ ಗಾಳಿ ಮಳೆಯಲಿ ರಾತ್ರಿ ಕಳೆಯುವೆ......ನಾ .... ಕಳ್ಳರನ್ನು ಓಡಿಸಿ.... ಕಾಗೆ ಸುಳಿವೇ ಇಲ್ಲದಂತೆ ಮಾಡುವೆ.................... ನೀ ಕಂತ್ರಿ ಕುನ್ನಿ... ನಾಯಿ...ಎಂದು ಬೈಯುವೆ.............. ಸಾವಿರ ತಪ್ಪು ಮಾಡುವೆ ನೀ..... ಒಂದು ತಪ್ಪು ಮಾಡಿದರೆ ಊರ ಆಚೆ ಹಾಕಿ ಉಪವಾಸ ಕೆಡುಗುವೆ...... ಸಾವಿರ ಬೈದರು........ ನೀ ಬಂದಾಗ ಎದೆಗೆ ಅಪ್ಪಿ ಬರಮಾಡಿಕೊಳ್ಳುವೆ....ನಾ.... ನಾ ಒಬ್ಬ ಅಮಾಯಕ.... ಪ್ರಾಣಿ....
ಸುರಿಯುವ ಮಳೆಯಲಿ
ನೀ ನಡೆದು ಬಾ ಹಾದಿಯಲಿ
ಕಾಯುತ ಕುಳಿತಿಹೆ
ನಾ ಹ್ರದಯದ ಬೀದೀಲಿ
ಬೀಸೀದೆ ತಂಗಾಳಿ
ಆಗಿದೆ ಜೋರು ದಾಳಿ
ಬರ ಸಿಡಿಲು ಬಡಿವ ಮುನ್ನ
ನೀ ಬಾ.........
ಹನಿಗಳ ಹಬ್ಬವಿದು
ಇನಿದನಿಗಳ ಸುಗ್ಗಿಯಿದು
ಕನಸಲ್ಲಿಯು ಕಾಣದಂತ
ಸುಂದರ ಭಾವವಿದು
ನೀ.. ಬರದೆ ಇಲ್ಲಿ
ಎಲ್ಲಾ ಖಾಲಿ ಖಾಲಿ
ಕಾದಿರುವೆ ನಿನ್ನನೆ
ಒಮ್ಮೆ ಬಾ.....
ಹಾಡುತಿದೆ ಮನಸೀಗ
ಕೇಳಲು ಬಾ ಬೇಗ
ಕೇಳುವ ಧನಿಯಲ್ಲೆ
ಹಿಡಿದು ನೀ ದಾರಿಯ
ಒಲವೇ ಹುಡುಕು ನೀ ಪ್ರೀತಿಯ
ಕಣ್ಣೇ ಅರಸು ನೀ ಕಾಂತಿಯ
ಉಸಿರೇ ಮರೆಸು ನೀ ಭೀತೀಯ
ಭೀಮನ ಮಕ್ಕಳುಗಳು ನಾವುಗಳು
ಜೈ ಭೀಮನ ಮಕ್ಕಳುಗಳು ನಾವುಗಳು
ಸಾವಿರಾರು ಕಷ್ಟಗಳಿಂದ್ದರು
ನೂರೆಂಟು ಕನಸು ಕಟ್ಟಿ
ನ್ಯಾಯ ನೀತಿ ಸಮಾನತೆಗೆ
ಪ್ರಾಣ ಬಿಟ್ಟವರು ನಾವು
ಭೀಮನ ಮಕ್ಕಳುಗಳು ನಾವುಗಳು
ಜೈ ಭೀಮನ ಮಕ್ಕಳುಗಳು ನಾವುಗಳು
ಬಡತನದಲ್ಲಿ ಸುಟ್ಟು ಬೆಂದು
ನಿಟ್ಟುಸಿರು ಬಿಟ್ಟು ಜೀವ ಬಿಟ್ಟು
ಬೂದಿಯಾದರು
ಛಲಬಿಡದ ಛಲವಾದಿಗಳು ನಾವು
ಭೀಮನ ಮಕ್ಕಳುಗಳು ನಾವುಗಳು
ಜೈ ಭೀಮನ ಮಕ್ಕಳುಗಳು ನಾವುಗಳು
ಚಿಂದಿ ಹಾಯ್ದು ಚಿಂದಿ ಬಟ್ಟೆ ತೊಟ್ಟು
ಗಂಜಿ ಕುಡಿದರು ಸ್ವಾಭಿಮಾನ ಬಿಡದ
ಸ್ವಾಭಿಮಾನದ ಕಲಿಗಳು ನಾವು
ಭೀಮನ ಮಕ್ಕಳುಗಳು ನಾವುಗಳು
ಜೈ ಭೀಮನ ಮಕ್ಕಳುಗಳು ನಾವುಗಳು