Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಗುಲಾಮ

ಸುಡುವ ಬಿಸಿಲು
ಮೈ ಸುಟ್ಟರು
ಸುರಿಯುವ ಮಳೆ
ಕಣ್ಣೀರ ಮಳೆಯಾಗಿ
ಸುರಿದರು
ಕೊರೆಯುವ ಚಳಿ
ಮೈ ಕೊರೆದರೂ
ಮೂರು ಹೊತ್ತಿನ
ತುತ್ತುಗೆ ತಲೆಬಾಗಿದರು
ಸ್ವಾಭಿಮಾನಕ್ಕೆ
ತಲೆಬಾಗಲಾರ

ಗುಲಾಮ ಗುಲಾಮ
ಎನ್ನುವ ಉಳ್ಳವರು
ತಿಳಿಯಬೇಕು ಅರಿಯಬೇಕು
ಬಡವನ ನಿಜವಾದ
ಗುಲಾಮ ಗುಲಾಮ
ಉಳ್ಳವರೆಂದು

ಉಳ್ಳವರ ಬುಡ ಬಡವರೇ
ಹೋರೆತು ಬಡವರ
ಬುಡ ಉಳ್ಳವರಲ್ಲ
ತಿಳಿಯೋ ಮೂಢ






- ರಾಜು ಹಾಸನ

29 Nov 2021, 01:11 am

ರಾಜ ಮಹಾರಾಜ

ಜೀವನದಲ್ಲಿ ಯಾರೇ ಬರಲಿ ಹೋಗಲಿ
ನಿಂತಲ್ಲೇ ನಿಲ್ಲದೆ ಇರುವ ಈ ಜೀವನದಲ್ಲಿ
ಎಷ್ಟೇ ಆಸೆ ಕನಸುಗಳು ಇದ್ದರೂ
ಒಂದಲ್ಲ ಒಂದು ದಿನ
ಎಲ್ಲ ಬಿಟ್ಟು ಹೋಗಬೇಕು
ಈ ಮೂರು ದಿನದ ಬದುಕು

ಹುಟ್ಟಿ ಸಾಯುವ ನಡುವೆ
ಬಡಿದಾಡಿ ಗುದ್ದಾಡಿ
ಚಿಂತೆಯ ಚಿತೆಯಲ್ಲಿ
ಬೆಂದು ಮಣ್ಣಾಗುವ
ಈ ಮಾನವ ಜನ್ಮಕ್ಕೆ
ಯಾವ ಜಾತಿ ಧರ್ಮವಾದರೇನು
ಇದ್ದಷ್ಟು ದಿನ
ಪ್ರೀತಿ ಸ್ನೇಹ ಸೌಹಾರ್ದತೆ
ಸಮಾನತೆಯಿಂದ ಬದುಕಿದ್ದವನೇ
ಈ ಮಾನವ ಕುಲಕ್ಕೆ ನಿಜವಾದ
ರಾಜ ಮಹಾರಾಜ

- ರಾಜು ಹಾಸನ

28 Nov 2021, 12:26 am

ಮನುವಾದ

ಯಾವ ಕುಲವಾದರೇನು
ಯಾವ ಜಾತಿಯಾದರೇನು
ಯಾವ ಮತವಾದರೇನು
ಯಾವ ಧರ್ಮವಾದರೇನು
ಮನದೋಳಗೆ ಮಾನವಿಯತೆ
ಮನೆ ಮಾಡದ ದೇಹ
ಸ್ಮಶಾನದ ಗೂಡಲ್ಲವೇ
ಜೀವಂತ ಶವವಲ್ಲವೇ

ಬಡವನ ಬೆವರಿನ ಫಲ ಅನ್ನ
ಎಲ್ಲಾರ ಮನೆ ಮನೆಯ ದೇವರಾದರೆ
ಬ್ರಾಹ್ಮಣ್ಯ ಹೊತ್ತ ತಿರುಗುವ
ಪರದೇಶಿ ಮನುವಾದಿಗಳಿಗೆ
ಸಗಣಿ ಗಂಜಲವೇ ಮನೆಯ ದೇವರಯ್ಯ




- ರಾಜು ಹಾಸನ

27 Nov 2021, 11:52 pm

ಮನಸ್ಸ ಅರಿತ ಸ್ನೇಹಿತೆ

ನೀ ದೂರೆತೆ ನನ್ನ ಸ್ನೇಹಿತೆ
ಇನ್ನೂ ನನಗೆ ನಿನ್ನ ಚಿಂತೆ
ನಿನ್ನ ಮಾತಿಲ್ಲದೆ ದಿನ ಮುಗಿಯಲ್ಲ
ನಿನ್ನ ಮನಸ ನಾ ಅರಿಯಬಲ್ಲ...

ನನ್ನ ಮನಸ ನೀ ಅರಿಯಬಲ್ಲಳು
ನನ್ನ ನೋವ ನೀ ಮರೆಸಬಲ್ಲಳು
ನಿನಿದ್ದರೆ ನನ್ನೊಡನೆ ಎಂದೆಂದೂ
ಖುಷಿಯ ಜೀವನ ನನ್ನದಿಂದೂ....

ನನ್ನ ತಿದ್ದುವ ಹಕ್ಕಿದೆ ನಿನಗೆ
ನೋವಲ್ಲಿ ಜೋತೆಯಾಗಿರು ಹೀಗೆ
ನನ್ನ ದಿನದ ಪಯಣದಲ್ಲಿ ನೀನಿರು
ನನ್ನ ಬಿಟ್ಟು ಎಂದು ಹೊಗದಿರು....

ದಿನ ನಿನ್ನ ಕರೆ ಇರದೆ ಇರಲಾರೆ
ನಿನ್ನ ಸ್ನೇಹ ಎಂದಿಗೂ ಮರೆಯಲಾರೆ
ಮನದಾಳದಿಂದ ನಾ ಹೇಳುವೆ ಇಂದು
ನನ್ನ ಜೀವನದ ಪುಟದಲ್ಲಿ ನೀ ಎಂದೆಂದೂ

ನಮ್ಮ ಸ್ನೇಹ ಪಯಣವಿಂದು ಆರಂಭ
ನಗು ತುಂಬಿರಲಿ ನಿನ್ನ ಮನದ ತುಂಬ
ನನ್ನ ಸ್ನೇಹ ಎಂದು ಮರೆಯದಿರು
ಕೊನೆವರೆಗೂ ನನ್ನ ಜೋತೆಯಾಗಿರು.....


- vijay kumar

27 Nov 2021, 07:30 pm

ಅರೆಹುಚ್ಚು..

ಏನ್ ಹೇಳಲಿ ಹುಡಗಿ ನಿನ್ನ ಬಗ್ಗೆ...
ನನ್ನಲ್ಲೇ ನಾ ಕಳೆದು ಹೊಗಿರುವೆ,
ಕಂಡು ನಿನ್ನ ಮುಗುಳುನಗೆ...
ಆಗಾಗ ಕೋಪಿಸಿಕೊಳ್ಳಬೇಕು ನಿನು ಬೇಕಂತಲೇ...
ತುಂಬಾ ನಗಿಸಬೇಕು ನಿನ್ನ ನಾನು,ಬರೀ ಮುತ್ತಲೇ...
ಕನ್ನಡಿ ಎದುರು ನೀ ನಿಂತಾಗ,ಬೆನ್ಹಿಂದೆ ನಾ ನಿಂತು
ಮುದ್ದಿಸೋ ಹಾಗೆ ನಿನಗೆ ಭಾಸವಾಗಲಿ....
ನಿನ್ನ ಒಂಚೂರು ದಯೆಯಿಂದ ಇಂತಹ ಪೋಲಿ
ಹಗಲು ಕನಸೆಲ್ಲವೂ ನನಸಾಗಲಿ....
ಎಮ್.ಎಸ್.ಭೋವಿ...✍️

- mani_s_bhovi

26 Nov 2021, 09:38 am

ಸಂಜೆ

ದಣಿದ ಕಡಲ ತಣಿಸಲು
ಅಲೆಯು ಬಂದಿತು ಉಕ್ಕಿ....

ಕುಣಿದು ರೆಕ್ಕೆಯ ಬಡಿದು
ಒಡಲ ಸೇರಿತು ಹಕ್ಕಿ....

ತೂಗಿ ಆಡಿತು ಗಿಡಗಳು
ಸಂಜೆಯ ಮೋಹಕೆ ಸಿಕ್ಕಿ....

ಸಾಗಿ ಮುಳುಗಲು ಸೂರ್ಯನು
ನಗುವ ಬೀರಿತು ಚುಕ್ಕಿ....



.....

- sharin rao

23 Nov 2021, 10:40 am

ನಿತ್ಯ ಕನ್ನಡ

ಕಲಿತು ಕಲಿಯೋ ಕನ್ನಡ
ಕಲಿತು ಕಲಿಸೋ ಕನ್ನಡ
ಮೆಚ್ಚಿಕೋ ನೀ ಕನ್ನಡ
ಅಪ್ಪಿಕೋ ನೀ ಕನ್ನಡ.

ಭೇದವಿಲ್ಲದ ಕನ್ನಡ
ಬವ ಭಕ್ತಿ ತುಂಬುವ ಕನ್ನಡ
ಬವ ಭಾಷೆ ಮೀರಿದ ಕನ್ನಡ
ಕರುನಾಡ ನುಡಿಯೇ ಕನ್ನಡ.

ಕರುನಾಡ ಕೀರ್ತಿ ಕನ್ನಡ
ಕರುನಾಡ ಸೂಬಗು ಕನ್ನಡ
ಕರುನಾಡ ಹಿರಿಮೆ ಕನ್ನಡ
ಕರುನಾಡ ಜ್ಯೋತಿ ಕನ್ನಡ.

ಹಸಿರು ಹಸಿರಲಿ ಕನ್ನಡ
ಕಣ ಕಣದ ಮಣ್ಣಲೂ ಕನ್ನಡ
ಹೃದಯ ಹೃದಯದಲಿ ಕನ್ನಡ
ಸ್ವಚ್ಛ ಕನ್ನಡ, ನಿತ್ಯ ಕನ್ನಡ
ಎಂದಿಗೂ ಕನ್ನಡವಾಗಲಿ.


ಶಂಕರ ಗಾರ್ಗಿ

- shankar gargi

22 Nov 2021, 02:39 pm

.......

ಯುವತಿಯೊಬ್ಬಳು ಹಿಗೆ ಬರೆದಿದ್ದಳು
"ತಂದೆ ತಾಯಿಯನ್ನು ನೋಡಿಕೊಳ್ಳುವ ಅಧಿಕಾರ
ಪುತ್ರಿಯರಿಗೆ ದೊರೆತರೆ ಇಡಿ ದೇಶದಲ್ಲಿ
ಒಂದೇ ಒಂದು ವ್ರುದ್ಧಾಶ್ರಮ ಇರಲಾರದು."

ಅದಕ್ಕೆ ಯುವಕನೊಬ್ಬ ಈ ರೀತಿ ಪ್ರತಿಕ್ರಯಿಸಿದನು:
"ಒಂದು ವೇಳೆ ಇದೆ ಪುತ್ರಿಯರು ಮದುವೆಯ
ನಂತರ ತಮ್ಮ ಅತ್ತೆ-ಮಾವಂದಿರನ್ನು
ತಮ್ಮ ತಂದೆ-ತಾಯಿಯಂತೆ ಕಂಡರೆ
ದೇಶದಲ್ಲಿ ಮಾತ್ರವಲ್ಲ ಇಡಿ ಜಗತ್ತಿನಲ್ಲಿ
ಒಂದೇ ಒಂದು ವ್ರುಧ್ಧಾಶ್ರಮ ಕಾಣಲಾರದು.."
ಎಮ್.ಎಸ್.ಭೋವಿ....✍️



- mani_s_bhovi

20 Nov 2021, 10:42 pm

ಇನ್ನೇಕೆ ಬದುಕು

ಬರತಾವ ಕಣ್ಣಾಗ ನೀರ
ನಿನ್ನ ನೆನೆಸಿ, ನಿನ್ನ ನೆನಸಿ
ಒಡೆದೈತಿ ಹೃದಯ ನಂದ
ನಿನ್ನ ನೆನೆಸಿ, ನಿನ್ನ ನೆನಸಿ.

ಮರೆಯದ ಜೀವ ನಿನ್ನ
ಹಿಂಡೈತಿ ನನ್ನ ಮನಸ್ಸನ್ನ
ಹ್ಯಾಂಗಿರಲಿ ಬಿಟ್ಟು ನಾ ನಿನ್ನ
ಬಿಡದ ಚಿಂತೆ ನನಗಿನ್ನ.

ಕೂಡಿ ಆಡಿದ ನೆನಪಲ್ಲಿ
ಮರೆತಿದ್ದೆ ನನ್ನ ನಾನು
ನೀ ಇರದ ಜೀವ ಇನ್ನೇನು
ಸಾಕು ಬದುಕು ಮುಂದೆನು.

ಬದುಕಿನ ದಾರಿಯಲ್ಲಿ ನೂರೆಂಟು ಕನಸು
ಹಸನಾದ ಬದುಕಿಗೆ ನಿನ್ನ ಈ ನಂಟು
ಕಣ್ಣು ಮುಚ್ಚಲು ಬರುತಾವ ನೆನಪು
ಕರುಣೆ ಇಲ್ಲದ ಅವನಿಗೆ ಇನ್ನೇಕೆ ಬದುಕು.

ಶಂಕರ ಗಾರ್ಗಿ

- shankar gargi

19 Nov 2021, 10:34 pm

ಮೌನ

ಮೌನ ಏಕೆ ನಿನಗೆ
ಈ ಸುಂದರ ಮೊಗಕೆ
ಈ ಮೌನ ನಿನಗೆ ಸರಿಯೇ
ನೀ ಹೇಳಬಾರದೆ.

ಮಾತು ಮೌನವಾಗಿ
ಪ್ರೀತಿ ಕಲ್ಲಾಯಿತೆ
ಮನಸು ಕರಗದ ಮೌನ
ನೀ ಹೇಳಬಾರದೆ.

ಸಾಕು ಇನ್ನು ಈ ಮೌನ
ತಾಳಲಾರದೆ ಸಾಕಾಗಿದೆ
ಎಂತೂ ಆಡದ ಮಾತು
ನೀ ಹೇಳು ಬಾರದೆ.

ಮೌನರಾಗದ ಪ್ರೀತಿ
ಹಾಡು ಬಾರದೆ ಗೆಳತಿ
ಸಾಕು ಇನ್ನು ಈ ಮೌನ
ನೀ ನುಡಿಯ ಬಾರದೆ.


ಶಂಕರ ಗಾರ್ಗಿ

- shankar gargi

18 Nov 2021, 09:02 pm