ಜೀವನದಲ್ಲಿ ಯಾರೇ ಬರಲಿ ಹೋಗಲಿ
ನಿಂತಲ್ಲೇ ನಿಲ್ಲದೆ ಇರುವ ಈ ಜೀವನದಲ್ಲಿ
ಎಷ್ಟೇ ಆಸೆ ಕನಸುಗಳು ಇದ್ದರೂ
ಒಂದಲ್ಲ ಒಂದು ದಿನ
ಎಲ್ಲ ಬಿಟ್ಟು ಹೋಗಬೇಕು
ಈ ಮೂರು ದಿನದ ಬದುಕು
ಹುಟ್ಟಿ ಸಾಯುವ ನಡುವೆ
ಬಡಿದಾಡಿ ಗುದ್ದಾಡಿ
ಚಿಂತೆಯ ಚಿತೆಯಲ್ಲಿ
ಬೆಂದು ಮಣ್ಣಾಗುವ
ಈ ಮಾನವ ಜನ್ಮಕ್ಕೆ
ಯಾವ ಜಾತಿ ಧರ್ಮವಾದರೇನು
ಇದ್ದಷ್ಟು ದಿನ
ಪ್ರೀತಿ ಸ್ನೇಹ ಸೌಹಾರ್ದತೆ
ಸಮಾನತೆಯಿಂದ ಬದುಕಿದ್ದವನೇ
ಈ ಮಾನವ ಕುಲಕ್ಕೆ ನಿಜವಾದ
ರಾಜ ಮಹಾರಾಜ
ಏನ್ ಹೇಳಲಿ ಹುಡಗಿ ನಿನ್ನ ಬಗ್ಗೆ...
ನನ್ನಲ್ಲೇ ನಾ ಕಳೆದು ಹೊಗಿರುವೆ,
ಕಂಡು ನಿನ್ನ ಮುಗುಳುನಗೆ...
ಆಗಾಗ ಕೋಪಿಸಿಕೊಳ್ಳಬೇಕು ನಿನು ಬೇಕಂತಲೇ...
ತುಂಬಾ ನಗಿಸಬೇಕು ನಿನ್ನ ನಾನು,ಬರೀ ಮುತ್ತಲೇ...
ಕನ್ನಡಿ ಎದುರು ನೀ ನಿಂತಾಗ,ಬೆನ್ಹಿಂದೆ ನಾ ನಿಂತು
ಮುದ್ದಿಸೋ ಹಾಗೆ ನಿನಗೆ ಭಾಸವಾಗಲಿ....
ನಿನ್ನ ಒಂಚೂರು ದಯೆಯಿಂದ ಇಂತಹ ಪೋಲಿ
ಹಗಲು ಕನಸೆಲ್ಲವೂ ನನಸಾಗಲಿ....
ಎಮ್.ಎಸ್.ಭೋವಿ...✍️
ಯುವತಿಯೊಬ್ಬಳು ಹಿಗೆ ಬರೆದಿದ್ದಳು
"ತಂದೆ ತಾಯಿಯನ್ನು ನೋಡಿಕೊಳ್ಳುವ ಅಧಿಕಾರ
ಪುತ್ರಿಯರಿಗೆ ದೊರೆತರೆ ಇಡಿ ದೇಶದಲ್ಲಿ
ಒಂದೇ ಒಂದು ವ್ರುದ್ಧಾಶ್ರಮ ಇರಲಾರದು."
ಅದಕ್ಕೆ ಯುವಕನೊಬ್ಬ ಈ ರೀತಿ ಪ್ರತಿಕ್ರಯಿಸಿದನು:
"ಒಂದು ವೇಳೆ ಇದೆ ಪುತ್ರಿಯರು ಮದುವೆಯ
ನಂತರ ತಮ್ಮ ಅತ್ತೆ-ಮಾವಂದಿರನ್ನು
ತಮ್ಮ ತಂದೆ-ತಾಯಿಯಂತೆ ಕಂಡರೆ
ದೇಶದಲ್ಲಿ ಮಾತ್ರವಲ್ಲ ಇಡಿ ಜಗತ್ತಿನಲ್ಲಿ
ಒಂದೇ ಒಂದು ವ್ರುಧ್ಧಾಶ್ರಮ ಕಾಣಲಾರದು.."
ಎಮ್.ಎಸ್.ಭೋವಿ....✍️