ಮುಸ್ಸಂಜೆಯ ತಂಪಲ್ಲಿ
ಆಕಾಶ ಸೂರ್ಯ ಒಂದಾದಂತೆ ಇಲ್ಲಿ,
ಸಾಗರದ ದಡದಲ್ಲಿ ಕುತಿರುವೆ ನಾನು.
ನೆನೆಯುತ್ತ ನಿನ್ನನ್ನು ನನ್ನ ಮನದಲ್ಲಿ.
ಸಮುದ್ರದ ಅಲೆಗಳು ಬರಲು,
ಮೆಲ್ಲನೆ ತಂಗಾಳಿ ಬೀಸಲು,
ಪುಟ್ಟ ಪುಟ್ಟ ಮೀನುಗಳು ನೀರಲ್ಲಿ ಇರಲು,
ಬಂದಂತ್ತಿದೆ ನನ್ನ ಸ್ಪರ್ಶಿಸಲು.
ಮರಳಲ್ಲಿ ಸಿಗುತ್ತಿದೆ ಚಿಕ್ಕ ಚಿಕ್ಕ ಶಂಖಗಳು,
ದೂರದ ತುಧಿಯಲ್ಲಿ ಕಾಣುತ್ತಿದೆ ಒಂದೆರಡು ತೆಂಗಿನ ಮರಗಳು,
ಹೆಜ್ಜೆ ಹೆಜ್ಜೆಗೂ ಮತ್ತೆ ಹಿಂತಿರುಗಿ,
ನಾನೂ ನೋಡಲು
ಹಿಂಬಾಲಿಸಿದಂತೆಯೇ ಇದೆ ನನ್ನಾ ಈ ಘಳಿಗೆಗೆ, ಸೂರ್ಯ ಮುಳುಗಲು.
ಭಾರತಾಂಬೆಯ ಸುತನಾಗಿ ಜನಿಸಿದ ನೀವು,
ರಕ್ತ ಸಿಕ್ತದ ಮಣ್ಣ ಪೂಜಿಸಿ ಕ್ರಾಂತಿಯ ಕಿಡಿಯಾಗಿ
ಯುವಕರ ಹೃದಯದೊಳಗೆ ಬೆಳಗುತ್ತಿರುವ ಭಾಗ್ಯವಂತರೆ ನೀವು ನಮಗೆ.
ಅಂದರ ಭವಿಷ್ಯದ ಉದ್ದೀಪನಕ್ಕೆ ಹಗಲಿರುಳು
ಶ್ರಮಿಸಿದ ಲೂಯಿಸ್ ಬ್ರೈಲರಂತೆ ದಿವ್ಯ ಚೇತನರಾಗಬೇಕು ನೀವು ನಮ್ಮ ಪಾಲಿಗೆ.
ನೊಂದವರ ಕಷ್ಟಗಳ ಕಂಡು
ನಿಸ್ವಾರ್ಥ ಸೇವೆಗೆ ಸಿದ್ಧರಿರುವಿರಿ ಸದಾ ನೀವು
ತಥಾಗತರ ಶಿಷ್ಯರಂತೆ.
ಸಮಾಜದ ದುಸ್ಥಿತಿಗೆ ನಿವೇದಿಸೋ,
ಮನಸಿರುವ ನಿಮ್ಮ ವ್ಯಕ್ತಿತ್ವ,
ಸತ್ ಕಾರ್ಯವೆಸಗುವ ನರೇಂದ್ರರ ಕುಡಿಯಾದ ನಿಮಗೆ,
ಸಾಕ್ಷಿಯಾಗಲಿದೆ ಶರಧಿಯ ಪರದೆಗಳು ಮುತ್ತಿಟ್ಟು ನಿಮ್ಮ
ಪಾದ ತೊಳೆಯುವ ಅನುಕ್ಷಣದ ಮಹೋತ್ಸವಕ್ಕೆ.
ನನ್ನೊಳಗೆ ಮೂಡುವ ವೀರರ ಚಿತ್ರವ,
ನಿಮ್ಮೊಳಗೆ ಕಂಡಿರುವೆ ಅವರ ಸಿಂಹ ಸ್ವಪ್ನ ದಂತಹ ಪ್ರತಾಪವ.
ಸಾವಿನ ಖಚಿತತೆಯ ಅರಿತ ನೀವು,
ಇತಿಹಾಸದ ಪುಟದೊಳಗೆ ಸ್ಪಟಿಕದಂತೆ ಹೊಳೆಯಬೇಕೆಂಬ ಹೆಬ್ಬಯಕೆ ನನಗೆ.
ನಿಮ್ಮ ಅಮರತ್ವ ಕಾಯಕದ ಪತದೊಳಗೆ,
ಅವಕಾಶವ್ವಿತ್ತರೆ ನೀವು,
ನಶ್ವರದ ಆಶಯಗಳ ತೊರೆದು ನನ್ನ ಅಳಿಲು ಸೇವೆಯನರ್ಪಿಸುವೆ ನಿಮ್ಮ ಕೃತಿಗೆ.
ಸರ್ವ ಧರ್ಮ ಸಮನ್ವಯದ ಜಾಗೃತಿ ದೀಪ, ಗಡಿಯಾಚೆ
ಬೆಳಗುತಿರಲಿ ಕನ್ನಡ ಧೀರರ ಪ್ರತಾಪ.
ಯಾತ್ರಿಕರನ್ನು ಆಕರ್ಷಿಸುವ ಮಲೆನಾಡ ಪ್ರಕೃತಿ,
ನಡೆನುಡಿಯಲ್ಲಿ ಮೆರೆಯುತ್ತಿದೆ ನಮ್ಮ ನಾಡ ಸಂಸ್ಕೃತಿ.
ಸಾಧುಸಂತರ ಪಾಠ ಮೌಢ್ಯವಳಿಸಿ ಮೂಡಿಸಿದೆ ನಮ್ಮೊಳಗೆ ವಿಶ್ವಪ್ರೇಮದ ಭ್ರಾತೃತ್ವ,
ವಚನಾಮೃತ ಭಕ್ತಿ ಸಾರ ಮಕ್ಕಳ ಮೊಳಗಿಸಿದೆ ಮಾತೆಯ ರಕ್ಷಣೆಗೆ.
ಜನಮನಗಳು ನೆನಪಿಡುವ ಸಾಧಕರ ಸಾಧನೆಯ ಸಾಲುಗಳ ಹೆಸರು,
ಒಂದಾಗಿ ಶ್ರಮಿಸಲು ತಿಳಿಸಿವೆ ನಮ್ಮ ನಾಡ ಪ್ರಗತಿ ಕೀರ್ತಿಗೆ.
ಅಂಧರ ಬಾಳಿನ ಬೆಳಕಾಗಿ ಲೂಯಿ
ಫ್ರಾನ್ಸ್ ದೇಶದಿ ಜನಿಸಿದರು.
ಅವರ ಶಿಕ್ಷಣಕ್ಕೆ ಬ್ರೈಲ್ಲಿಪಿ ಸೃಷ್ಟಿಸಿ
ವಿಶ್ವ ಮಾನವರೇನಿಸಿದರು.
ಸಾಮಾನ್ಯ ಮಗುವಾಗಿ ಜನಿಸಿದ ಲೂಯಿ
ಸದಾ ಚಟುವಟಿಕೆಯಿಂದಿರಲು
ಮೂರೂ ವರ್ಷ ತುಂಬಿದ ಮುಗ್ಧ ಬಾಲಕ
ತಂದೆಯ ಕೆಲಸವ ನೋಡಿದನು.
ಚರ್ಮವ ತಾ ಹದ ಮಾಡಲು ಹೋಗಿ
ಕಬ್ಬಿಣ ಹಾರಿತು ಕಣ್ಣಿನಲ್ಲಿ,
ಉಳಿದೊಂದು ಕಣ್ಣಿಗೂ ಸೋಂಕು ತಗುಲಿ
ಸಂಪೂರ್ಣ ಅಂಧತ್ವ ಪಡೆದರು ಲೂಯಿ.
ತಂದೆಯು ಮಗನಿಗೆ ಮೊಳೆಗಳ ಜೋಡಿಸಿ
ಸ್ಪರ್ಶದಕ್ಷರ ಜ್ಞಾನವ ನೀಡಿದರು.
ಚಲ ಬಿಡದ ಲೂಯಿ ವಿಶೇಷ ಶಾಲೆ ಸೇರಿ
ಬಾರ್ಬಿಯರ್ ಲಿಪಿ ಕಂಡು ಮನದಲ್ಲಿ ಚಿಂತನೆ ನಡೆಸಿದರು.
ಇವರ ಹಗಲು ರಾತ್ರಿಗಳ ಪರಿಶ್ರಮದಿಂದ
ರೂಪಗೊಂಡ ನವ ಲಿಪಿ ಎಂತ ಚಂದ,
ಅಂಧರ ಕಲಿಕೆಗೆ ಕನ್ನಡಿಯಾಗಿದೆ 6 ಚುಕ್ಕಿಗಳ
ಲೂಯಿಸ್ ಬ್ರೈಲ್ಲಿಪಿ ಕೊಡುಗೆ.
ನಿನ್ನನ್ನು ನೋಡದೆ...
ನಿನ್ನ ಅಂದ ಚೆಂದ ವೈಯಾರವನ್ನು ಬಿಡಿಸಬಲ್ಲೆನು...
ನಿನ್ನನ್ನು ಕೇಳದೇ...
ನಿನ್ನ ನೋವು ಏನೆಂದು ಹೇಳಬಲ್ಲೆನು...
ಕೇಳಬೇಡ ಗೆಳತಿ ನನ್ನ ಪ್ರೀತಿಗೆ ಇಂತಹ ಶಕ್ತಿ ಇದೆಯಂದು...
ನಿನಗೆ ಅಳು ಬಂದರೇ...
ನಿನ್ನ ಕಣ್ಣೀರನ್ನು ನನ್ನ ಕಣ್ಣಲ್ಲಿ ಭರಿಸಬಲ್ಲೆನು...
ಎಲ್ಲಿರುವೆ ಪ್ರೇಯಸಿ ಬೇಗ ಬಂದು ಸೇರು ನನ್ನನ್ನೂ....
ಪ್ರೀತಿ ಹುಟ್ಪಿತ್ತು ನನಗೆ ಅವಳ ಮೇಲೆ
ಪ್ರೀತಿಯಿಲ್ಲವೆಂದು ಹೇಳಿದ್ದಳು ನನ್ನ ಮೇಲೆ..!
ಶುರುವಾಗಿತ್ತು ನಮ್ಮಿಬ್ಬರ ಒಡನಾಟ
ಹೆಚ್ಚಾಗುತ್ತಿತ್ತು ನನ್ನ ಪ್ರೀತಿಯ ಹುಚ್ಚಾಟ..!
ಹುಟ್ಟಿತ್ತು ಪ್ರೀತಿ ಅವಳಿಗೂ ನನ್ನ ಮೇಲೆ
ಜೊತೆಯಾಗಿರುವ ಆಣೆ ಮಾಡಿದಳು
ಪ್ರೀತಿಯ ಮೇಲೆ...!
ತುಂಬಾ ಸಂತೋಷದಿಂದ ಇದ್ದೆವು
ಎರಡು ದೇಹ ಒಂದು ಜೀವದಂತೆ,
ದಿನ ಕಳೆದಂತೆಲ್ಲಾ, ತೋರಿದ ಪ್ರೀತಿ,
ಕಾಳಜಿಯನ್ನು ಅನುಮಾನಿಸಿದಳು
ಅಮ್ರತದಲ್ಲಿ ವಿಷ ಹಾಕಿದಂತೆ.....!
ಎಮ್.ಎಸ್.ಭೋವಿ.....✍️
ಓ ಮೂಢ
ದೇವಾಲಯದಲ್ಲಿ
ನಿನ್ನ ಕಿವಿ ಮುಡಿಗೆ ಇಟ್ಟ
ಹೂವಿನ ಎಸಳೇ
ನಿನಗೆ ಮುತ್ತಿನ ಹಾರ
ಬಂಗಾರದ ಕಿರೀಟವಾದರೆ
ನನಗೆ ನನ್ನ
ಹೆತ್ತವರ ಪ್ರೀತಿಯೇ
ನನಗೆ ಮುತ್ತಿನ ಹಾರ
ಬಂಗಾರದ ಕಿರೀಟ
ದೇವರ ಗುಡಿಯಲ್ಲಿ ಕೊಡುವ
ತೆಂಗಿನ ಕಾಯಿ ಚಿಪ್ಪೇ
ನಿನಗೆ ಪ್ರಸಾದವಾದರೆ
ನನ್ನ ಹಡೆದವಳು
ನನ್ನಗೆ ಕೊಟ್ಟ
ಕೈ ತುತ್ತಿನ ಅನ್ನವೇ
ನನಗೆ ಪಂಚಾಮೃತ
ಓ ಮೂಢ
ದೇವರು ದೇವರೆಂದು
ಓಡಾಡಿ ಸುತ್ತಾಡಿ
ಉರುಳಾಡಿ ಉರುಳು
ಸೇವೆ ಮಾಡಿದರೂ
ವ್ರಥ ಜಪ ಮಾಡಿ
ಉಪವಾಸ ಬಿದ್ದರು
ವರವ ಕೊಡುವುದು ಇಲ್ಲವೋ
ಯಾರು ಬಲ್ಲವರುಂಟು
ನಾ ಯಾವ ದೇವರ
ಗುಡಿಗು ಓಡುವುದಿಲ್ಲ
ಸುತ್ತುವುದಿಲ್ಲ ಉರುಳಾಡಿ
ಉಪವಾಸ ಮಾಡುವುದಿಲ್ಲ
ನನ್ನ ಎದೆಯ ದೇವರು
ನನ್ನ ಹಡೆದವರು ಅವರಿರುವ
ಜಾಗವೇ ನನ್ನ ದೇವಾಲಯ
ಅವರ ಪ್ರೀತಿ ಮಮತೆಯೆ
ನನಗೆ ಮುತ್ತಿನ ಹಾರ ವರ
ಕಲ್ಲು ಕಂಬದ ದೇವರಿಗೆ
ಕೈ ಮುಗಿದು ನಿಲ್ಲುವ
ಗುಲಾಮ ನಾ ಅಲ್ಲ
ನನ್ನ ಹಡೆದವರ
ಸೇವೆ ಮಾಡುವ ಸೇವಕ ನಾ
ನನ್ನ ಹಡೆದವರ ಸೇವೆಯೇ
ನನ್ನ ನಿರಂತರ ಕಾಯಕ