Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಕಂದಾಚಾರ

ಖರ್ಚು ವೆಚ್ಚವಿರುವ
ಬದುಕಿನ ಬಂಡಿ ಇರುವ
ಮನುಷ್ಯನಿಗೆ ಇಲ್ಲದ ಹುಂಡಿ
ಖರ್ಚು ವೆಚ್ಚವೇ ಇಲ್ಲದ
ಬದುಕಿನ ಬಂಡಿಯೇ ಇಲ್ಲದ
ದೇವರಿಗೆ ಏಕೆ ಬೇಕು
ದೇವರು ಹುಂಡಿ ಹುಂಡಿ

ತಿನ್ನದ ದೇವರಿಗೆ
ಹಣ್ಣು ತುಪ್ಪದ ಗೋಪುರ
ತಿನ್ನುವ ಮಾನವನ ಕೈಗೆ
ತೆಂಗಿನ ಕಾಯಿ ಚಿಪ್ಪು

ದೇವರು ಇರಲಿ
ದೇವಾಲಯವಿರಲಿ
ಶಾಂತಿಯ ತಾಣವಾಗಿರಲಿ
ಕಂದಾಚಾರದ
ಕಂದಕವಾಗದಿರಲಿ







- ರಾಜು ಹಾಸನ

06 Jan 2022, 11:50 pm

ಶಿಕ್ಷಣ

ದೇವರು ದೇವರೆಂದು
ದೇವರ ದೇವಲಾಯಕೆ
ಹೋದವನು ಮೂಢನಾದ

ಓದು ಬರಹವೆಂದು
ಶಾಲೆಗೆ ಹೋದವನು
ಜಾಣನಾದ ಜ್ಞಾನಿಯಾದ

ಮಂತ್ರ ತಂತ್ರ ಕಲಿತವನು
ಪರಾವಲಂಬಿಯಾಗುವನು
ಓದು ಬರಹ ಕಲಿತವನು
ಸ್ವಾವಲಂಬಿಯಾಗುವನು


ಮಂತ್ರ ತಂತ್ರ ತಲೆಯ ಕೆಡಿಸಿತು
ಮನೆಯ ಸುಟ್ಟಿತು
ಓದು ಬರಹ ತಲೆಯ ಜ್ಞಾನ ಹೆಚ್ಚಿಸಿತ್ತು
ಮನೆಯ ಬೆಳಗಿಸಿತು

- ರಾಜು ಹಾಸನ

06 Jan 2022, 11:26 pm

ಪ್ರೀತಿಯ ಗೆಳತಿ

ಕಾಯುತ್ತೀರುವೆ ನಾ ನಿನ್ನ ದಾರಿ
ಎದುರಿಗೆ ಬಾ ನೀನು ಒಂದು ಸಾರಿ
ನೋಡಿದರು ನೋಡದಂಗೆ ಇರುವೆ1
ನೀ ಎಷ್ಟು ಕ್ರೂರಿ
ನಿನ್ನ ಹಿಂದೆ ಬಿದ್ದು ಹಾಳಾಯಿತು ನನ್ನ ದಾರಿ

ಶಿವರಾಜ್ ಬುನ್ನಟ್ಟಿ

- ಶಿವರಾಜ ಬುನ್ನಟ್ಟಿ

31 Dec 2021, 11:39 pm

ಚಿಂತಿಸಿ ಯೋಚಿಸಿ

ಪೂಜೆ ಪುನಸ್ಕಾರ ಇಲ್ಲವೆಂದು
ಅಳುವುದಿಲ್ಲ ಕಲ್ಲು ಬಂಡೆಯ ದೇವರು
ಒಂದು ಹೊತ್ತು ಕೂಳು ಇಲ್ಲದಿದ್ದರೆ
ಅಳುವುದು ಒಡಲ ಚೀಲ

ಹಣ್ಣು ಕಾಯಿ ನೈವೇದ್ಯ ಇಲ್ಲದಿದ್ದರೂ
ಸಾಯುವುದಿಲ್ಲ ದೇವರು
ಮೂರು ಹೊತ್ತು
ದೇವರ ಉಪವಾಸವೆಂದು
ಉಪವಾಸಬಿದ್ದರೆ
ಬಾಳಲಿ ಸಾಯುವುದು
ಬಡಪಾಯಿ ಮನುಜನ ಜೀವ

ಹುಂಡಿ ಇಲ್ಲದಿದ್ದರೂ
ನೆಡೆಯುವುದು ದೇವರ ಜಾತ್ರೆ
ದುಡ್ಡಿಲ್ಲದಿದ್ದರೆ ನೆಡೆಯುವುದಿಲ್ಲ
ಮಾನವನ ಶವ ಯಾತ್ರೆ


- ರಾಜು ಹಾಸನ

31 Dec 2021, 11:34 pm

ದೇವರು

ನಾ ಹುಟ್ಟಿ
ನಾ ಸಾಯುವ
ದಿನಗಳು
ಹತ್ತಿರ ಬಂದರು
ನಾ ಕಾಣಲಿಲ್ಲ
ನನ್ನ ನೋವು ನಲಿವು
ಸುಖ ದುಃಖಗಳಲ್ಲಿ
ಒಂದೆ ಒಂದು ದೇವರು
ಆದರೆ
ನನ್ನ ಪ್ರತಿಯೊಂದು
ಸುಖ ದುಃಖ
ನೋವು ನಲಿವಿನಲ್ಲಿ
ನಾ ಕಂಡಿದ್ದು
ನನ್ನ ಹೆತ್ತವರು
ಎಂದಮೇಲೆ
ನಾ ಪೂಜಿಸುವ ದೇವರು
ನನ್ನ ಹೆತ್ತವರೇ
ಅಲ್ಲವೇ ಅಲ್ಲವೇ

ಈ ಪ್ರಪಂಚದಲ್ಲಿ
ಯಾರೇ ಏನೇ ಹೇಳಿದರೂ
ಏನೇ ಪೂಜಿಸಿದರು
ನಾ ಪೂಜಿಸುವ ದೇವರು
ತಂದೆ ತಾಯಿಯೇ ದೇವರು
ಈ ಪ್ರಪಂಚದಲ್ಲಿ
ತಂದೆ ತಾಯಿಗಳಿಗಿಂತ
ಮಿಗಿಲಾದ ದೇವರಿಲ್ಲ

- ರಾಜು ಹಾಸನ

31 Dec 2021, 12:33 am

ಬಾನಾಡಿಗಳು

ಸೂರ್ಯನುದಯಕೆ
ಗೂಡಿನಿಂದ ಹೊರಬಂದ ಹಕ್ಕಿಗಳು,
ಚ್ಯುಂಯಿಗುಟ್ಟುತ್ತಾ ಬಾನಂಗಳಕ್ಕೆ ನೆಗೆದು,
ಹೊರಟಿವೆ ನೋಡು ನಾಳಿನ ಚಿಂತೆಯಿಲ್ಲದೆ,
ಇಂದಿನ ಉದರವ ತುಂಬುವ ತವಕದಿ.

- ಅರುಣಕುಮಾರ ಮ ಜೇವರಗಿ

22 Dec 2021, 05:08 pm

ರಕ್ತ ಸಂಬಂಧಿಯಾದರೂ ನೀ
ನಾ ಯೋಚಿಸಲಿಲ್ಲ ನೀ ಯಾರೆಂದು
ಅದರ ಅವಶ್ಯಕತೆ ಇರಲಿಲ್ಲ ನನಗಂದು..
ನಾ ನನ್ನವನು ಯಾರೋ ಎಲ್ಲೋ ಇಹನು
ಎಂಬಂತೆ ನನ್ನ ಪಾಡಿಗೆ ನಾ ಇರಲು,,
'ನಿನಗೆ ನಾನು ' ಎಂದು ಸರಿದೂಗಿ ಜೀವನದ ಮಹತ್ತರ ನಿರ್ಧಾರ ಹೆತ್ತವರು ಹೇಳಲು !!!!!
ಅಂದು ನೂರೆಂಟು ಪ್ರಶ್ನೆ, ಒಂದಿಷ್ಟು ಗೊಂದಲ,
ಹೇಗೋ!ಏನೋ!ಎಂತೋ! ನಿನ್ನ ಮನದಾಳ ಎಂಥದ್ದು? ನನ್ನ ಗುಣಕ್ಕೆ ಜೊತೆಯಾಗುವನೇ ??
ನನ್ನ ಭಾವನೆಗಳಿಗೆ ಸ್ಪಂದಿಸುವನೇ ??
ನನ್ನಾಸೆಗಳಿಗೆ ನೀರೆರೆದು ಪೋಷಿಸುವನೆ ??
ಹೀಗೆ ಪ್ರಶ್ನೆಗಳ ಗುಂಪು ಸಾಲು ಸಾಲು ನಿಂತಿತ್ತು.
ಬೇಡವೆಂದೇ ನಿನ್ನ ಆಗಮನ ನನ್ನ ಜೀವನದಲೀ
ಆದರೆ ಕಾಲ ಕಟ್ಟಿತ್ತು ನಿನ್ನ ನನ್ನ ಸೆರಗಲೀ
ಅಂತೂ ಬೇಕೋ ಬೇಡವೋ ಮಾತಿನಿಂದ ಶುರುವಾದ ಈ ನಮ್ಮ ಸ್ನೇಹ!!
ಇಂದು "ನಾವಿಬ್ಬರೂ" ಎಂಬ ಪವಿತ್ರ ಬಂಧಕ್ಕೆ ತಲೆದೂಗಿದೆ
ಅಂದು ನೀನ್ಯಾರು ಎನ್ನುತ್ತಿದ್ದ ಮನಸು
ಇಂದು ನಾ ನಿನ್ನ ಜೊತೆಯಾಗಿ ಎನ್ನುತಿದೆ
ಕ್ಷಮಿಸು ತಪ್ಪಾಗಿದ್ದರೆ ಪ್ರೀತಿಸು ವ್ಯಕ್ತಿತ್ವ ಇಷ್ಟವಾದರೆ!














- Asha

19 Dec 2021, 11:45 pm

ಈ ಬಂಧನ

ನೀ ಇರದ ಬದುಕು
ನನಗೇಕೆ ಬೇಕು
ನೀ ಇರುವ ತನಕ
ನಾ ಬದುಕಬೇಕು.

ಯಾವ ಜನುಮದ ಮೈತ್ರಿ
ನನ್ನ ನಿನ್ನದು ಗೆಳತಿ
ಏನು ಅಂದ,ಏನು ಚಂದ
ನಾವು ಕಳೆದ ದಿನಗಳು

ಕಣ್ಣು ಕಣ್ಣಲಿ ನುಡಿದ ಮಾತು
ಹೃದಯ ಹೃದಯಗಳ
ಮಿಡಿತದ ಬಾಷೆ
ಎನು ಪ್ರೀತಿ, ಎಂಥ ಪ್ರೀತಿ
ನಾವು ಕಳೆದ ಕ್ಷಣಗಳು.

ಬಿಟ್ಟು ಇರದ ಈ ಜೀವ
ನಿನ್ನ ಕಾಣದೆ
ಬದುಕಲಾರೆ ನಿನ್ನ ಬಿಟ್ಟು
ನೀ ನೀರದೆ
ಜನಮ ಜನುಮದ
ಈ ಬಂಧನ.















- shankar gargi

17 Dec 2021, 03:51 pm

ಜನ್ಮ

ಏನಿದು ಮಾನವ ಜನ್ಮ
ಏನೂ ಅರಿಯದ ಮರ್ಮ
ಮುಂದೇನು ಇದರ ಕರ್ಮ
ತಿಳಿಯದು ಆ ದೇವನ ಮರ್ಮ.

ಏನುಂಟು ಏನಿಲ್ಲ
ಈ ಜನುಮದ ನಂಟು
ಸಾವು-ಬದುಕಿನ ಸವೆಯದ ನಂಟು
ಗೊತ್ತಿಲ್ಲ ಗುರಿಯಿಲ್ಲದ ಈ ಬದುಕು.

ಮೂರು ದಿನದ ಸಂತೆಯಲಿ
ನೂರು ಚಿಂತೆಯ ಮಾಡಿ
ಬದುಕಿನ ದಾರಿಯ ಕಾಣದ ಜನ್ಮ
ನಿನಗ್ಯಾಕೋ ಅದರ ಹಂಗ್ಯಾಕೋ.

ಸುಖ ದುಃಖದ ಸಾಗರವ ಮಾಡಿ
ಹುಟ್ಟು-ಸಾವು ಅದರಲ್ಲಿ ಮಡಗಿ
ನೋವು-ನಲಿವಿನ ಆಟವ ಆಡಿ
ಸಾಗುವುದು ನಾಲ್ಕುಹೆಗಲ ಜೋಡಿ.


ಶಂಕರ ಗಾರ್ಗಿ










- shankar gargi

14 Dec 2021, 08:50 pm

ಒಲ್ಲೇ ಎನ್ನದಿರು.

ಒಲ್ಲೇ ಎನ್ನದಿರು ಗೆಳತಿ
ಈ ಗೆಳೆಯನ
ನೆನಪು ಬಂದರೆ ಸಾಕು
ಕುಣಿಯುವುದು ಈ ಮೈಮನ.

ಕಣ್ಣಲ್ಲಿ ನಿನ್ನ ಆ ಚಿತ್ರಣ
ಹೆಂಗ ಮರೆಯಲಿ ನಿನ್ನ
ಆ ನಗು ಚುಂಬನ
ಮಾತು ಮುತ್ತೀನ ಮಲ್ಲೇ
ನೀ ಮೌನವಾಗದಿರು ನಲ್ಲೇ.

ಈ ಬದುಕಿನ ಸಾಗರ ನೀನು
ಸಾಗುವ ದಾರಿಯ ಸಂಗಮ ನೀನು
ಈ ಹೃದಯದ ಬಡಿತ ನೀನು
ನನ್ನ ಪ್ರೀತಿಯ ಕಡಲು ನೀನು.

ಸುಖ ದುಃಖದ ಸಂಗಾತಿ ನೀನು
ಬಾಳಪಯಣದ ಜೊತೆಗಾತಿ ನೀನು
ನೀ ಇರಲು ಸಾಕು ಎನಗೆ
ಈ ಬಾಳು ಸ್ವರ್ಗದಂತೆ

ಒಲ್ಲೇ ಎನ್ನದಿರು ಗೆಳತಿ
ಈ ಗೆಳೆಯನ.

ಶಂಕರ ಗಾರ್ಗಿ


- shankar gargi

12 Dec 2021, 05:30 pm