Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಮನಸ್ಸಿಲ್ಲದ ಮನಸ್ಸನ್ನು ಮನಸಾರೆ ಪ್ರೀತಿಸಿದವನು...

ಬರೆಯುವ ಮನಸ್ಸಿಲ್ಲ....
ಹುಡುಕಲು ಪದವಿಲ್ಲ....
ನನ್ನಲ್ಲಿ ಉಳಿದಿರುವು
ನಿನ್ನ ನೆನಪುಗಳಿಗೆ ಸಾವಿಲ್ಲ...
ನಾನೇಕೆ ಹಿಗಾದೆ ಎಂದು ನನಗೆ ಅರಿವಿಲ್ಲ....
ನನ್ನಷ್ಟು ನಿನ್ನ ಪ್ರೀತಿಸು ಭಗ್ನ ಪ್ರೇಮಿ
ನಿನಗೆ ಸಿಗುವುದಿಲ್ಲ....
ನನ್ನ ಪ್ರೀತಿಗೆ ಎಂದೂ ಕೋನೆಯಿಲ್ಲ....
ನಿನ್ನ ಮರೆಯುವ ಮಾತಿಲ್ಲ...
ನಿನ್ನ ಬಿಟ್ಟು ಬೇರೇನೂ ಬೇಕಿಲ್ಲ....
ಈಗ ಸಾವು ನನ್ನೆದುರೂ ಬಂದರು
ನನಗೆ ಭಯವಿಲ್ಲ...
" ಕೊನೆಯದಾಗಿ ಕೇಳಿಕೊಳ್ಳುವೆ
ಹೇಳಿ ಹೋಗು ಕಾರಣ "
ಎಮ್.ಎಸ್.ಭೋವಿ.....✍️

- mani_s_bhovi

14 Sep 2021, 10:37 am

ಇರಲಿ - ಇಲ್ಲದಿರಲಿ

ಜ್ಞಾನವಿರಲಿ ಶಿರದೊಳಗೆ
ಶುದ್ಧವಿರಲ್ಲಿ ಮನದೊಳಗೆ
ಸಂಸ್ಕಾರವಿರಲಿ ಸಂಸಾರದೊಳಗೆ

ಆಚಾರಣೆ ಇದ್ದರು ಇರಲಿ
ಮನುಜನ ಮನೆಯೊಳಗೆ
ಮೂಢ ನಂಬಿಕೆ ಇಲ್ಲದಿರಲಿ
ಮನುಜನ ಮನದೊಳಗೆ
ಅನ್ಯಾಯ ಅನಾಚಾರಗಳಿಗೆ
ಜಾಗವೇ ಇಲ್ಲದಿರಲಿ
ಈ ಜಗದ ಜಗದೊಳಗೆ

ಶ್ರದ್ಧೆ ಇರಲಿ ಕಾಯಕದಲ್ಲಿ
ಕರುಣೆ ಇರಲಿ ಹೃದಯದಲ್ಲಿ
ಸಹನೆ ಇರಲಿ ಜೀವದಲ್ಲಿ

- ರಾಜು ಹಾಸನ

13 Sep 2021, 10:34 pm

ಪ್ರಾಸ ತ್ರಾಸ

ಗುಣವಿಲ್ಲದ ದೇಹಕ್ಕೆ ಅಲಂಕಾರವೇತಕೆ
ಜೀವವಿಲ್ಲದ ದೇಹಕ್ಕೆ ಸಿಂಗಾರವೇತಕೆ
ಜೀವನದ ಗಂಧ ಗಾಳಿ ತಿಳಿಯಾದ
ಕಲ್ಲಿಗೆ ಪೂಜೆ ಪುನಸ್ಕಾರವೇತಕೆ

ಸಂಸಾರದ ಅರಿವಿಲ್ಲದ ಸನ್ಯಾಸಿಗೆ
ಸಂಸಾರವೇತಕೆ
ಗುರಿ ಇಲ್ಲದವನಿಗೆ ಗುರು ಏತಕೆ
ಛಲವಿಲ್ಲದವನಿಗೆ ಜ್ಞಾನವೇತಕೆ

ಮನುಜನೇ ತಿದ್ದಿ ತೀಡಿದ ಗೊಂಬೆಗೆ
ಬಿದ್ದು ಬೇಡುವನಯ್ಯ ಮನುಜ
ಇವನೇನು ಮುಗ್ಧನೋ ಮೂಢನೋ
ಒಂದು ತಿಳಿಯಾದಯ್ಯ

ಆತ್ಮವಿಲ್ಲದ ಮಣ್ಣು ಕಲ್ಲಿನ ಗೊಂಬೆ
ಪರಮಾತ್ಮನಾಗುವುದದಾರೇ
ಅದೇ ಗೊಂಬೆಗಳನ್ನು ಸೃಷ್ಟಿಸಿದ
ಮನುಜ ದೇವಾತ್ಮನಲ್ಲವೇ






- ರಾಜು ಹಾಸನ

12 Sep 2021, 11:57 pm

ಆಚರಣೆ

ಜ್ಞಾನಕ್ಕಿಲ್ಲ ಅಂತರ ತಾರತಮ್ಯ
ಜಾತಿಗೆ ಇರುವುದು ನಿರಂತರ ಅಂತರ
ಜ್ಞಾನವೆಂಬುದು ಜಾತಿಯ ಜಗುಲಿಯಲ್ಲ
ಜನರ ಮನದಲ್ಲಿನ ಬೇಳಕಯ್ಯ

ಜಾತಿ ಎಂಬುದು ಕರಿನೆರಳಾದರೆ
ಜ್ಞಾನ ಎಂಬುದು ದಿವ್ಯಜ್ಯೋತಿಯಯ್ಯ
ಸಿರಿವಂತಿಕೆ ಸಿರಿವಂತರ ಸಿರಿತನವಲ್ಲ
ಶ್ರಮಿಕರ ಶ್ರಮದ ಫಲವಯ್ಯ

ಜಾತಿ ಮತಗಳ ಆಚರಣೆ
ಮೂಢ ಜನಗಳಿಗೆ ಸಂಭ್ರಮಾಚರಣೆ
ಮುಗ್ಧ ಜನಗಳ ಹಸಿವಿನ ಆಚರಣೆ
ಮನುವಾದಿಗಳಿಗೆ ವಿಜೃಂಭಣೆಯ ಆಚರಣೆ




- ರಾಜು ಹಾಸನ

12 Sep 2021, 12:14 am

ನನ್ನ ಇನಿಯ

ನಿನ್ನ ಒಂದು ಕರೆಗಾಗಿ ಕಾಯುವ ಶಬರಿಯಂತಾಗಿರುವೆ,
ನಿನ್ನ ಧ್ವನಿ ಕೇಳಲು ಕಾತುರದಿ ಕಾಯುತಿರುವೆ,
ಬಂದರೆ ನಿನ್ನ ಕರೆ,
ಮೂಡುವುದು ನನ್ನ ಮುಖದಲ್ಲಿ ಮಂದಹಾಸದ ಗೆರೆ.

- Veena

10 Sep 2021, 07:25 pm

ಬಲ್ಲವರು ಉಂಟೆ

ಕುದಿಯುವ ನೀರಿನೊಳಗಿನ
ಕುಳ್ ಮುಟ್ಟಿ ತಿಳಿದವರುಂಟಯ್ಯಾ
ಮನುಜನ ಮನದ ಮರ್ಮವ
ತಿಳಿದವರು ಯಾರ್ ಉಂಟಯ್ಯಾ
ದೇವರ ಗುಡಿಯಲ್ಲಿ
ದೇವರು ಇರುವುದೋ ಇಲ್ಲ
ದೆವ್ವವು ಇರುವುದೋ
ಕಂಡು ಬಲ್ಲವರು
ಯಾರ್ ಇರುವರಯ್ಯ ಈ ಜಗದಲ್ಲಿ

ಸತ್ತವನು ಸಾವವಾಗುವನೆ ಹೋರೆತು
ಮಾಯವಿಯಾಗಲಾರ ಹಾಗೆಯೇ
ಸತ್ತ ಕಲ್ಲು ಕೆತ್ತಿದ್ದಾರೆ
ಮೂರ್ತಿಯಾಗುವುದೇ ಹೋರೆತು
ದೇವರಾಗಲಾರದಯ್ಯ

ಸಮಾನತೆ ಇಲ್ಲದ ಸಮಾಜಕ್ಕಿಂತ
ನೆಮ್ಮದಿ ಇಲ್ಲದ ಊರಿಗಿಂತ
ಜಾತಿ ಮತದ ಮಂತ್ರ ತಂತ್ರದ
ಕುತಂತ್ರದ ದೇವರ ಗುಡಿಗಿಂತ
ನಿಶ್ಯಬ್ಧದ ಗೂಡು ಸಮಾನತೆಯ ಸುರು
ಆತ್ಮಗಳ ತವರೂರು ಸ್ಮಶಾನವು
ದೇವಾ ಲೋಕಕ್ಕಿಂತ ಮಿಗಿಲ್ಲಲ್ಲವೇ

- ರಾಜು ಹಾಸನ

10 Sep 2021, 12:34 am

ಸಿದ್ದಲಿಂಗಯ್ಯ

ಕಟ್ಟುವರಯ್ಯ ಕಟ್ಟುವರು
ಗಲ್ಲಿ ಗಲ್ಲಿಗೊಂದು
ಕಲ್ಲು ಕಲ್ಲಿಗೊಂದು
ಗುಡಿ ಗೋಪುರಗಳ
ಆಲಯ ದೇವಲಾಯ
ಕಟ್ಟಿ ಕೆಡಗುವರಯ್ಯಾ
ಉರುಳಿಸುವರಯ್ಯಾ
ಮನೆ ಮನೆಗೊಂದು
ಹಾದಿ ಬೀದಿಯ ಕಲ್ಲಿಗೊಂದು
ಪ್ರಾಣಿ ಪಕ್ಷಿ ಬಲಿ ಜೀವ ಬಲಿ

ನೆಲೆ ಉಂಟು ಬೆಲೆ ಉಂಟು
ಮುಕ್ಕೋಟಿ ದೇವರಿಗೆ
ಆಲಯವು ಉಂಟಯ್ಯಾ
ಛಲ ಉಂಟು ಬಲ ಉಂಟು
ಕಲೆ ಉಂಟು ಬದುಕಲು
ಬದುಕಿ ಬಾಳಲು
ಮೂಲ ನೆಲೆ ಎಲ್ಲೊಂಟಯ್ಯ
ಮುಗ್ಧ ಜನಗಳ ಜೀವನವೇ
ಅಲೆ ಅಲೆ ಅಲೆದಾಟವಯ್ಯ

ಅಲೆಮಾರಿ ದೇವರಿಗೆ
ಇರುವುದಯ್ಯ
ಹೆಜ್ಜೆ ಹೆಜ್ಜೆಗೊಂದು
ಸಾಗರದಷ್ಟು ಆಲಯ
ಅಲೆದಾಡಿ ದುಡಿದು ತಿನ್ನುವ
ಮುಗ್ಧ ಜನಗಳಿಗೆ
ಇಲ್ಲವೇ ಇಲ್ಲವಯ್ಯ
ಒಂದೇ ಒಂದು ನಿಲಯ
ಈ ಮೂಢ ಮನುವಾದಿಗಳ
ಸಂತೆಯಲ್ಲಿ



- ರಾಜು ಹಾಸನ

06 Sep 2021, 10:43 pm

ಮಾಯಾವಿ

ಅಕ್ಕ ಸತ್ತಳು ಎಂದು ಮಮಕಾರ ತುಂಬಿ ಮೈ ಮರೆತು ಅತ್ತರೆ ಎಂತಣ ಮಾಯ ಲೋಕದಲಿ ಬರೀ ನಶ್ವರವಯ್ಯ

- ms

06 Sep 2021, 09:27 pm

ಓ ಚೆಲುವೆ

ಕಣ್ಣಂಚಿನ ಮಿಂಚಲ್ಲಿ
ಮನದಾಳದ ಮಡಿಲಲ್ಲಿ
ಮಿಂಚಾಗಿ ಬಂದೆ ಓ ಚೆಲುವೆ

ಹುಣ್ಣಿಮೆಯ ಚಂದಿರನ
ಬೆಳದಿಂಗಳ ಬೆಳಕಲ್ಲಿ
ಮಿಂದು ಬಂದೆ ಓ ಚೆಲುವೆ

ದುಂಡನ ಮೊಗದವಳೆ
ಮೀನಂತ ಕಣ್ಣವಳೆ
ಹಾಲುಗೆನ್ನೆಯ ಓ ಚೆಲುವೆ

ಮನದಾಳದ ಬೆಳಕಲ್ಲಿ
ಹೊಸ ಬೆಳಕು ಸೂಸುತ್ತಾ
ಬಾಳ ಬೆಳಕಿನ ಓ ಚೆಲುವೆ

ವನಸಿರಿಯ ಹಸಿರಲ್ಲಿ
ಹೊಸತನವ ತಂದವಳೇ
ಹಸಿರು ಸಿರಿಯ ಓ ಚೆಲುವೆ

ಮುಂಜಾವಿನ ಮಂಜಲ್ಲಿ
ಇಬ್ಬನಿಯ ಹನಿಯಲ್ಲಿ
ನೀರಾಗಿ ಬಂದೆ ಓ ಚೆಲುವೆ

ಹೂವಿನ ಹಾಸಿಗೆಯಲ್ಲಿ
ಪರಿಮಳ ಸೂಸುವ
ಮುದ್ದಾದ ಹೂವೇ ಓ ಚೆಲುವೆ

ದುಂಬಿಯ ಗಾನದಲ್ಲಿ
ಹೊಸ ರಾಗ ಹಾಡುವ
ಪ್ರೇಮದ ಗಿಣಿಯೆ ಓ ಚೆಲುವೆ


- shankar gargi

04 Sep 2021, 11:28 am

ಕಷ್ಟ ಅಸಾಧ್ಯವಾದದ್ದು

ಜೀವವಿಲ್ಲದ ಕಲ್ಲಗೆ
ಮಂತ್ರ ತಂತ್ರ ಪಠಿಸಿದರೆ
ಜೀವವಿಲ್ಲದ ಕಲ್ಲಿಗೆ
ಜೀವ ಬರುವುದಾದರೆ
ಕಲ್ಲು ದೇವರಾಗುವುದದಾರೆ
ಸತ್ತವರಿಗೆ ಚಟ್ಟ ಕಟ್ಟವುದು ಏತಕೆ
ಅತ್ತು ಕರೆದರು
ಮರಳಿ ಬಾರದಿರುವುದು
ಹೋದ ಜೀವ
ಮರಳಿ ಗೂಡಿಗೆ ಏತಕೆ

ಜೀವವಿಲ್ಲದ ಕಲ್ಲು
ಉಸಿರು ನಿಂತ ಹೆಣ
ಎರಡು ಒಂದೇ
ಜೀವವಿಲ್ಲದ ಕಲ್ಲಿಗೆ
ಜೀವ ತುಂಬುವುದು ಒಂದೇ
ಉಸಿರು ನಿಂತ ಹೆಣಕ್ಕೆ
ಉಸಿರು ತುಂಬುವುದು ಒಂದೇ
ಇದು ಕಷ್ಟ ಅಸಾಧ್ಯವಾದದ್ದು

- ರಾಜು ಹಾಸನ

04 Sep 2021, 12:18 am