Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಕಂದ

ಪುಟ್ಟ ಪುಟ್ಟ
ಹೆಜ್ಜೆ ಇಟ್ಟು
ಬಾರೋ ನನ್ನ ಕಂದ
ಈ ಮನೆಯ ಆನಂದ

ತೊದಲು ನುಡಿಯಲ್ಲಿ
ಅಂಬೆಗಾಲು ಇಡುತ್ತ
ಕೇಕೆ ಹಾಕುತ್ತ
ಜೋಲಿ ಹೊಡೆಯುತ
ಆಡುವ ನನ್ನಪುಟ್ಟ ಕಂದ
ಈ ಮನೆಯ ಅಂದ

ದುಂಡನೆ ಮೊಗದಲ್ಲಿ
ಪಳ ಪಳ ಹೊಳೆಯುವ
ಕವಳೆಯ ಕಣ್ಣಿನ ಚಂದಿರ
ಬೆಳದಿಂಗಳ ನಗುವಲ್ಲಿ
ಅರಳುವ ಗಲ್ಲದ
ಚುಕ್ಕೆಯ ಸುಂದರ

ಮುಗ್ಧ ಮನಸ್ಸಿನ
ನನ್ನುಡಿಯ ಸಿರಿಯೆ
ಈ ಮಡಿಲ ಕರುಳೆ
ಈ ಮನೆಯಂಗಳದ
ಹೂವಿನ ಹೂನಲೆ
ಈ ಬದುಕಿನ ಮೂಗ ಸಿರಿಯೇ






- shankar gargi

08 Aug 2021, 09:21 pm

ದೂರ ದೂರ ತೀರಾ

ಸಾಗರದಾಚೆಯ ಪಯಣದಲ್ಲಿಂದು,
ಒಬ್ಬಂಟಿಯಾಗಿ ದೂರ ತೀರಾಚೆ,
ಗಡಿಯಾಚೆಗಿನ ಭುವಿಯೊಳಗೆ,
ಕವಲೊಡೆದ ದಾರಿಗಳೆಷ್ಟೋ,

ಹೆಜ್ಜೆ ಹೆಜ್ಜೆಗೂ ನೀರಿಕ್ಷೆಯಿಟ್ಟ ಕನಸಿನೊಳಗೆ,
ಮುಳುಗುವ ಭಾವನೆಗಳೆಷ್ಟೋ,
ಕೈ ಜಾರಿ ಹೋಗುವ ಬಚ್ಚಿಟ್ಟ ಮಾತುಗಳೆಷ್ಟೋ,
ಮೌನವಾಗಿ ಕುಳಿತ ಭಾವ ಬಂಧಗಳೆಷ್ಟೋ,
ಎಲ್ಲವೂ ಹಿಂದೆ ಸರಿದು
ಜಾರು ಬಂಡೆಯಾಗಿ ಹೋಗುತ್ತಿವೆ ದೂರ ದೂರ ತೀರಾ..!!

- Megha

08 Aug 2021, 11:30 am

ಕಣ್ಮರೆ..

ಕಣ್ಮರೆಯಾಗಿಬಿಟ್ಟೆ ನೀ, ಯಾವುದೋ ನೆಪದಲ್ಲಿ,
ನನ್ನ ನೆನಪೇ ನಿನಗೆ ಕಾಡುತ್ತಿಲ್ಲ ಏತಕೆ??
ನಾಟಕದ ಬದುಕೇ ಸಾಕಾಗಿದೆ ನನಗಿಲ್ಲಿ,
ಬಂದು ಸೇರಿಬಿಡು ಈ ಹೃದಯವ ಮರಳಿ,
ಕಳೆದುಹೋದ ನೆನಪುಗಳೇ ಕಾಡುತಿವೆ ನನಗಿಲ್ಲಿ,
ನೀನಿರದ ನನ್ನ ಬಾಳೇ ಮರೀಚಿಕೆ ಇಲ್ಲಿ,
ಮನ ಕರಗಿ ಹೋಗುತ್ತಿದೆ ನಿನ್ನದೇ ಕನವರಿಕೆಯಲ್ಲಿ,
ಕಾಯುತ್ತಿದೆ ನೀ ಬರುವ ಶುಭದಿನಕೆ,
ಕೇಳಲು ಬಯಸುತಿದೆ ನಿನ್ನ ಯ ಬಯಕೆ,
ಮುಡಿಪಿಡುವೆ ನಿನಗಾಗಿ ಈ ನನ್ನ ಬದುಕೇ..!

- Megha

08 Aug 2021, 11:24 am

ಯಾರಿವಳು ಚೆಲುವೆ

ಯಾರಿವಳು
ಚೆಲುವೆ
ನನಗೆ ಒಲಿದವಳೆ
ಹಾಲು ಗೆನ್ನೆಯ
ಚೆಲುವೆ
ಈ ಹೃದಯದ ಒಲವೇ

ಧ್ವನಿಯಲ್ಲಿ
ಕೋಗಿಲೆ ಕಂಠ
ಹೊಳಪಲ್ಲಿ
ಮುತ್ತಿನ ಹಾರ
ಕಂಪಿನಲಿ
ಮಲ್ಲಿಗೆ ಹೂವು

ಸುಖದಲ್ಲಿ
ಸಾಗರದಂತೆ
ಹೃದಯದಲ್ಲಿ
ದೇವತೆಯಂತೆ
ಚೆಲುವಿನಲಿ
ಅಪ್ಸರೆಯಂತೆ

ಸವಿ ಜೇನು
ಸಿಹಿಯು ನೀನು
ಈ ಬಾಳ ಬದುಕಿನ
ಶೃಂಗಾರ ನೀನು
ಈ ಒಕ್ಕಣೆಯ
ಕವಿ ಕನ್ನಿಕೆ ನೀನು



- shankar gargi

07 Aug 2021, 09:37 pm

ಪರಿಶುದ್ಧ

ಶುದ್ದ ದೇಹವಿದರೇನು ಬಂತು
ಪರಿಶುದ್ಧ ಮನಸ್ಸು ಇಲ್ಲದಿದ್ದ ಮೇಲೆ
ಓ ಮಂಕು ತಿಮ್ಮ

ಮೈ ಶುದ್ದವಿದ್ದರು
ಒಂದಲ್ಲ ಒಂದು ದಿನ
ಮಣ್ಣಗುವುದು
ಉಸಿರು ನಿಂತಮೇಲೆ

ಮನಸು ಇದ್ದರು
ಸತ್ತರು ಮಣ್ಣಾಗದು
ಮನದ ನೆನಪಾಗುವುದು

ಸುಟ್ಟರೆ ಬೂದಿಯಾಗುವುದು
ಮಾಂಸ ಖಂಡಗಳ ಈ ದೇಹ
ಇದ್ದರು ಸತ್ತು ಸುಟ್ಟರು
ಬೂದಿಯಾಗದಿರುವುದು
ಈ ಮನದ ಮನಸು

***ರಾಜು ಹಾಸನ***

- ರಾಜು ಹಾಸನ

06 Aug 2021, 11:25 pm

ಜಗ ಮೆಚ್ಚಿದ ನಾಯಕ

ಜೀವನದಲ್ಲಿ ನೋವು
ನಲಿವು ಏನೇ ಇರಲಿ
ಬರಲಿ ಹೋಗಲಿ
ದುಡಿಯುವ ಛಲ ಇರಬೇಕು
ಮುನ್ನುಗ್ಗುವ ಮನಸ್ಸಿರಬೇಕು
ಗುರಿ ಮುಟ್ಟುವ ನಂಬಿಕೆ ಇರಬೇಕು

ಹುಟ್ಟಿದ ಮೇಲೆ
ಸಾಯುವುದು ಸತ್ಯ
ಆದರೆ ಹುಟ್ಟಿ ಸಾಯುವುದರ ಮಧ್ಯೆ
ಸಾಧಿಸಿ ನಿಲ್ಲಬೇಕು ಜಗ ಮೆಚ್ಚಿದ ನಾಯಕ
ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹಾಗೆ

- ರಾಜು ಹಾಸನ

04 Aug 2021, 01:15 am

ಕಾರ್ಮೋಡದ ನಡುವಲಿ

ಕಾರ್ಮೋಡದ ಕತ್ತಲೆಯಲ್ಲಿ,
ಕಾಯುತಿರುವೆ. ಕಾಣದ ಕಾನನದ ದಾರಿಯಲ್ಲಿ,
ನೀ ಬರುವೆ ಎಂಬ ಆಸೆಯಲ್ಲಿ,
ಬೆಳಕ ಹುಡುಕುತ್ತಿರುವೆ ನಿನ್ನ ನಿರೀಕ್ಷೆಯಲ್ಲಿ.

- Veena

03 Aug 2021, 08:36 pm

ಮಿಸ್ ಕಾಲ್

ನಾನು ಬರೆಯುವ
ಈ ಕವನ ನಿನಗೆಂದು
ನೀನು ಯಾರು ಅಂತ
ನನಗೆ ಇನ್ನು ತಿಳಿದಿಲ್ಲ
ನೀನು ಎಲ್ಲಿ ಇರುವೆ ಅಂತ ಗೊತ್ತಿಲ್ಲ
ನಿನ್ನ ಹೆಸರು ಮಾತ್ರ ನೆನಪು
ಕಪ್ಪು ಬಿಳಿಯ ನಗುವ
ನಿನ್ನ ಭಾವಚಿತ್ರ ನನ್ನ ಮನದಲ್ಲಿ
ಹಾಗೆ ಉಳಿದಿದೆ
ನಾನು ಯಾರು ಅಂತ ನಿನಗೆ
ಈಗ ಗೊತ್ತಾಗಬಹುದು
ನಿನಗಾಗಿ ಈ ಕವನ ಬರೆದೆ
ನಿನಗೆ ನಾನು ಯಾರು ಅಂತ
ನಿನಗೆ ಗೊತ್ತಾದರೆ
ಈ ಚರ ಸಂಖ್ಯೆಗೆ ಒಂದು
ಮಿಸ್ ಕಾಲ್ ಮಾಡಿ ಅಷ್ಟೇ

- shankar gargi

03 Aug 2021, 08:01 pm

ಜೈ ಭೀಮ್

ವಿಶ್ವಕ್ಕೆ ಒಬ್ಬನೇ
ಸೂರ್ಯನೋಬ್ಬನೇ
ಜೈ ಭೀಮ್

ಈ ದೇಶದ ಉಸಿರು
ನಮ್ಮಯ ಜೀವ
ಜೈ ಭೀಮ್

ಬಡವರ ಬಂಧು
ದುಷ್ಟರ ಶತ್ರು
ಜೈ ಭೀಮ್

ದಿನ ದಲಿತರ ನಾಯಕ
ಮನುವಾದಿಗಳ ಸಂಹಾರಕ
ಜೈ ಭೀಮ್

ಶೋಷಿತರ ರಕ್ಷಕ
ಮನುವಾದಿಗಳ ಭಕ್ಷಕ
ಜೈ ಭೀಮ್

ಹಸಿದವರ ಶಕ್ತಿ
ಉಳ್ಳವರ ವಿರೋಧಿ
ಜೈ ಭೀಮ್

ಸಮಾನತೆಯ ನೇತಾರ
ಶಾಂತಿದೂತನ ಅವತಾರ
ಜೈ ಭೀಮ್

ವಿಶ್ಷ ಜ್ಞಾನದ ಹರಿಕಾರ
ಸಂವಿಧಾನದ ಹರಿಕಾರ
ಜೈ ಭೀಮ್



- ರಾಜು ಹಾಸನ

02 Aug 2021, 04:19 pm

ಮಧುರ‌ವೀ ಸ್ನೇಹ...

ಮಧುರವೀ‌ ಸ್ನೇಹ ಎಂದಿಗೂ ನಿಮ್ಮ ನೆನಪಲಿ
ಹೇಗೆ ಮರೆಯಲಿ ಆ ದಿನಗಳನು ಅನುರಣಿಸಿವೆ ಪ್ರತಿ ಕ್ಷಣಗಳ ಧ್ವನಿಯು...
ಈ ಸ್ನೇಹವೇ ಒಂದು ಸುಮಧರ ಭಾವವಾಗಿದೆ.
ಈ ಮನಸುಗಳ ನಡುವಿನ ಸಮನ್ವಯತೆಯೇ ನಮ್ಮ ಭಾಷೆಯಾಗಿದೆ...
ನಿಮ್ಮ ಪ್ರೀತಿಯೇ ನನ್ನ ಆಸ್ತಿ ಗೆಳೆಯರೆ...
ಈ ಸ್ನೇಹಕೆ ಮತ್ತೊಂದು ಅರ್ಥವೆ ನೀವು...

- Deenu Adi

01 Aug 2021, 07:35 pm