ಸಾಗರದಾಚೆಯ ಪಯಣದಲ್ಲಿಂದು,
ಒಬ್ಬಂಟಿಯಾಗಿ ದೂರ ತೀರಾಚೆ,
ಗಡಿಯಾಚೆಗಿನ ಭುವಿಯೊಳಗೆ,
ಕವಲೊಡೆದ ದಾರಿಗಳೆಷ್ಟೋ,
ಹೆಜ್ಜೆ ಹೆಜ್ಜೆಗೂ ನೀರಿಕ್ಷೆಯಿಟ್ಟ ಕನಸಿನೊಳಗೆ,
ಮುಳುಗುವ ಭಾವನೆಗಳೆಷ್ಟೋ,
ಕೈ ಜಾರಿ ಹೋಗುವ ಬಚ್ಚಿಟ್ಟ ಮಾತುಗಳೆಷ್ಟೋ,
ಮೌನವಾಗಿ ಕುಳಿತ ಭಾವ ಬಂಧಗಳೆಷ್ಟೋ,
ಎಲ್ಲವೂ ಹಿಂದೆ ಸರಿದು
ಜಾರು ಬಂಡೆಯಾಗಿ ಹೋಗುತ್ತಿವೆ ದೂರ ದೂರ ತೀರಾ..!!
ಕಣ್ಮರೆಯಾಗಿಬಿಟ್ಟೆ ನೀ, ಯಾವುದೋ ನೆಪದಲ್ಲಿ,
ನನ್ನ ನೆನಪೇ ನಿನಗೆ ಕಾಡುತ್ತಿಲ್ಲ ಏತಕೆ??
ನಾಟಕದ ಬದುಕೇ ಸಾಕಾಗಿದೆ ನನಗಿಲ್ಲಿ,
ಬಂದು ಸೇರಿಬಿಡು ಈ ಹೃದಯವ ಮರಳಿ,
ಕಳೆದುಹೋದ ನೆನಪುಗಳೇ ಕಾಡುತಿವೆ ನನಗಿಲ್ಲಿ,
ನೀನಿರದ ನನ್ನ ಬಾಳೇ ಮರೀಚಿಕೆ ಇಲ್ಲಿ,
ಮನ ಕರಗಿ ಹೋಗುತ್ತಿದೆ ನಿನ್ನದೇ ಕನವರಿಕೆಯಲ್ಲಿ,
ಕಾಯುತ್ತಿದೆ ನೀ ಬರುವ ಶುಭದಿನಕೆ,
ಕೇಳಲು ಬಯಸುತಿದೆ ನಿನ್ನ ಯ ಬಯಕೆ,
ಮುಡಿಪಿಡುವೆ ನಿನಗಾಗಿ ಈ ನನ್ನ ಬದುಕೇ..!
ನಾನು ಬರೆಯುವ
ಈ ಕವನ ನಿನಗೆಂದು
ನೀನು ಯಾರು ಅಂತ
ನನಗೆ ಇನ್ನು ತಿಳಿದಿಲ್ಲ
ನೀನು ಎಲ್ಲಿ ಇರುವೆ ಅಂತ ಗೊತ್ತಿಲ್ಲ
ನಿನ್ನ ಹೆಸರು ಮಾತ್ರ ನೆನಪು
ಕಪ್ಪು ಬಿಳಿಯ ನಗುವ
ನಿನ್ನ ಭಾವಚಿತ್ರ ನನ್ನ ಮನದಲ್ಲಿ
ಹಾಗೆ ಉಳಿದಿದೆ
ನಾನು ಯಾರು ಅಂತ ನಿನಗೆ
ಈಗ ಗೊತ್ತಾಗಬಹುದು
ನಿನಗಾಗಿ ಈ ಕವನ ಬರೆದೆ
ನಿನಗೆ ನಾನು ಯಾರು ಅಂತ
ನಿನಗೆ ಗೊತ್ತಾದರೆ
ಈ ಚರ ಸಂಖ್ಯೆಗೆ ಒಂದು
ಮಿಸ್ ಕಾಲ್ ಮಾಡಿ ಅಷ್ಟೇ
ಮಧುರವೀ ಸ್ನೇಹ ಎಂದಿಗೂ ನಿಮ್ಮ ನೆನಪಲಿ
ಹೇಗೆ ಮರೆಯಲಿ ಆ ದಿನಗಳನು ಅನುರಣಿಸಿವೆ ಪ್ರತಿ ಕ್ಷಣಗಳ ಧ್ವನಿಯು...
ಈ ಸ್ನೇಹವೇ ಒಂದು ಸುಮಧರ ಭಾವವಾಗಿದೆ.
ಈ ಮನಸುಗಳ ನಡುವಿನ ಸಮನ್ವಯತೆಯೇ ನಮ್ಮ ಭಾಷೆಯಾಗಿದೆ...
ನಿಮ್ಮ ಪ್ರೀತಿಯೇ ನನ್ನ ಆಸ್ತಿ ಗೆಳೆಯರೆ...
ಈ ಸ್ನೇಹಕೆ ಮತ್ತೊಂದು ಅರ್ಥವೆ ನೀವು...