Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಹೃದಯ ತೀರದಿ

ಹೃದಯ ತೀರದಿ ಹರೆಯ ನವಿಲು
ಗರಿಯ ಬಿಚ್ಚಿ ಕುಣಿಯುತಿರಲು!!
ಒಲವ ಸುರಿದ ನೀಲಿ ಮುಗಿಲು
ಸೇರಿತು ತನು ಮನದ ಕಡಲು!!

ಒಂಟಿ ಜೀವದ ಜಂಟಿ ಬಾವಕೆ
ಆಗಿ ಬಂದೆ‌ ನೀ ಒಲವ ಕಾಣಿಕೆ!!
ನಿನ್ನ ಮೋಹದ ಮೋಡಿ ಆಟಕೆ
ಉದಯವಾಯಿತು ನಾಚಿಕೆ!!

ಉಸಿರಿನಲ್ಲಿ ಹಸಿರ ಜೀವವು
ಹೆಸರ ಕೂಡಿ ಕರೆದ ಬಾವವು!!
ಅದರದಲ್ಲಿ ಕೊಂಚ ಮೌನವು
ಹೃದಯದಲ್ಲಿ ಪ್ರೇಮ ವಾದ್ಯವು!!

ಮಳೆಯ ರವಿಯ ಮಿಲನವಾಗಲು
ಏಳು ಬಣ್ಣದ ಜನನವಾಯಿತು!!
ಮನದಿ ನಿನ್ನ ರೂಪ ಮೂಡಲು
ಬದುಕ ಬಣ್ಣ ಹೊಸತೇ ಆಯಿತು!!




- ಪಿ.ಜಿ.ಜ್ಯೋತಿ

01 Aug 2021, 06:02 pm

ಮೊಗ್ಗಿನ ಜಡೆಯ ಬಯಕೆಯ ತಂಪು

ಹಿತ್ತಲಿನಲ್ಲಿತ್ತು ಒಂದು ಗೋವೆ ಮರವು
ಬಲು ಎತ್ತರವಾಗಿತ್ತು ಅದರ ಆ ನಿಲುವು!!
ಚಿತ್ತ ಸೆಳೆಯುವ ದುಂಡು ಮಲ್ಲಿಗೆ ಬಳ್ಳಿ
ಸುತ್ತಿಕೊಂಡಿತ್ತು ಮರದ ಕೊಂಬೆಗಳಲ್ಲಿ!!

ಮುತ್ತಿನ ಮೊಗ್ಗಲಿ ಬಾಲ್ಯದ ಮುಗ್ಧತೆ
ಅರಳಿದ ಹೂವಲ್ಲಿ ಬಯಕೆಯ ಪರಿಮಳ!!
ಬೀಸುವ ತಂಗಾಳಿ ಹೊತ್ತು ತಂದಿಹ ಘಮಕೆ
ಬೇಕೆನ್ನುವ ಬಯಕೆ ನನ್ನ ಎಳೆ ಮನಕೆ!!

ಅರಳಿದ ಹೂ ಬಳ್ಳಿ ಎಟುಕದ ಮರದಲ್ಲಿ
ಮುಡಿದುಕೊಳ್ಳುವ ಬಯಕೆ ನನ್ನ ಹೆರಳಲ್ಲಿ!!
ಅಪ್ಪನ ಕೈಯಲ್ಲಿ ಕಿರುಏಣಿಯ ಮಾಡಿಸಿ
ಬಿಡಿಸಿದ ಮೊಗ್ಗನ್ನು ಮಡಿಲಲಿ ತುಂಬಿಸಿ!!

ಚಿಗುರೆಲೆಗೆ ಹಸಿ ಸುಣ್ಣದ ಬೊಟ್ಟನ್ನು ಇಟ್ಟು
ಒಣಅಡಿಕೆ ಹೊಗೆಸೊಪ್ಪು ಸೇರಿಸಿ ಕುಟ್ಟು!!
ಕುಟ್ಟಾಣಿ ಹಿಡಿದಿರುವ ಅಜ್ಜಿಯ ಎದುರಲ್ಲಿ
ಮಡಿಲಲ್ಲಿ ತುಂಬಿದ ಮಲ್ಲಿಗೆಯ ನಾ ಚೆಲ್ಲಿ!!

ಮೊಗ್ಗಿನ ಮಾಲೆಯ ಮುಡಿಯಲ್ಲಿ ಮುಡಿದು
ಕುಣಿದಾಡಿದೆ ಅಂದು ಸಂತಸದಿ ನಲಿದು!!
ಹಬ್ಬದ ಹಾಗಿದೆ ಬಾಲ್ಯದ ಆ ನೆನಪು
ಮೊಗ್ಗಿನ ಜಡೆಯು ಬಯಕೆಯ ತಂಪು!!


- ಪಿ.ಜಿ.ಜ್ಯೋತಿ

01 Aug 2021, 05:59 pm

ಆಸೆ

ಏನೋ ಆಸೆ
ಅದು ಕಾಣುತ್ತಿಲ್ಲ
ಬೇಡಿದರೆ ಸಿಗುತ್ತಿಲ್ಲ
ಕೇಳಿದರೆ ಕೊಡುತ್ತಿಲ್ಲ
ಬಯಸಿದರೆ ಬರುತ್ತಿಲ್ಲ
ಅದೊಂದು ಹುಚ್ಚಾಸೆ

ಆ ಮಾತು
ನನ್ನ ಮನದ
ಸುಂದರ ಹೂವೆ
ನನ್ನ ನೋಡಿ
ನಗುವೆಯಾ ಏಕೆ
ತಿಳಿಯದಾಗಿದೆ
ನಿನ್ನ ಮನದ ಆಸೆ
ಸಾಕಾಗಿದೆ ಈ
ಕಂಗಳ ಮಾತು
ಬಯಸುತ್ತಿದೆ
ನಿನ್ನ ಸೇರುವ ಆಸೆ
ಸೋತಿದೆ ಮನವು
ನುಡಿಯದ ಮಾತು
ಪ್ರೀಯೆ ಹೇಗೆ
ಹೇಳಲಿ ನಿನಗೆ
ನನ್ನ ಮನದ ಮಾತು

- shankar gargi

01 Aug 2021, 09:23 am

ಸವಿ ಜೇನು

ಯಾವ ಶಿಲ್ಪಿಯ
ಕಥೆಯು ನೀನು
ಯಾರ ಮುಡಿಯ
ಹೂವು ನೀನು
ಯಾವ ದೇವನ
ಸೃಷ್ಟಿ ನೀನು

ಯಾರ ಬಾಳಿನ
ಹೊಂಗನಸು ನೀನು
ಯಾರ ಬದುಕಿನ
ಸವಿ ಜೇನು ನೀನು
ಯಾರ ಒಲವಿನ
ಉಡುಗರೆ ನೀನು

ಯಾರು ಕಣ್ಣಿನ
ಸೊಬಗು ನೀನು
ಯಾರ ಚೆಲುವಿನ
ಮೈಮಾಟ ನೀನು
ಯಾರ ಕನಸಿನ
ಶೃಂಗಾರವು ನೀನು

ಯಾರ ನುಡಿಯ
ಮುತ್ತು ನೀನು
ಯಾರ ಉಡಿಯ
ಸೊಬಗು ನೀನು
ಯಾರ ಜೀವದ
ಜೀವ ನೀನು

- shankar gargi

31 Jul 2021, 01:39 pm

ದಾಸ

ಕುಡಿ ಕುಡಿ
ನೀ ಸೆರೆ ಕುಡಿ
ಹೊಡಿ ಹೊಡಿ
ನೀ ಜೋಲಿ ಹೊಡಿ

ಹೊತ್ತು-ಗೊತ್ತುಇಲ್ಲದೆ ಕುಡಿ
ಊಟ ಗೀಟಾ ಬಿಟ್ಟು ಕುಡಿ
ಕಂಠಪೂರ್ತಿ ಕುಡಿ ಕುಡಿ
ಇರುವತನಕ ಕುಡಿ ಕುಡಿ

ಪ್ರೀತಿ ನಿನಗೆ ಕೈಕೊಟ್ಟತಾ
ನಂಬಿದವರು ನಿನ್ನ ಕೈ ಬಿಟ್ರಾ
ನನ್ನ ತನ್ನವರು ದೂರಾದ್ರಾ
ಮನಸ್ಸು ನಿನ್ನದು ಕೆಟ್ಟೋಹ್ಹಿತಾ

ತುತ್ತು ಕೊಟ್ಟವಳು ನೆನಪಿಲ್ಲ
ಹೆತ್ತು ಹೊತ್ತವರ ಅರಿವಿಲ್ಲ
ನನ್ನ ತನ್ನವರ ಮರೆತೆಲ್ಲಾ
ಮುಗಿದಂಗಾತು ನಿಂದೆಲ್ಲಾ

ಬೀದಿಬೀದಿಗಳೆ ನಿನ್ನ ಅಂಬಾರಿ
ಗುಡಿ ಗುಂಡಾರಗಳು ನಿನ್ನ ಮನೆ
ಏನಿದು ನಿನ್ನ ನಾಯಿಪಾಡು
ಹಾಳಾಗಿ ಹೋಯಿತು ನಿನ್ನ ಬಾಳು


- shankar gargi

31 Jul 2021, 01:25 pm

ಮಣ್ಣಿನ ಮಡಿಕೆ

ಉಟ್ಟ ಹೊದಿಕೆಯ ಬಿಚ್ಚಿ
ಬರಿ ಬೆತ್ತಲೆಯಾಗಿ
ಮಣ್ಣಲ್ಲಿ ಮಣ್ಣಾಗಿ ಹೋಗುವ
ಈ ಜೀವಕ್ಕೆ ಬದುಕುವ ಹಂಬಲವೇಕೆ

ಬರಿಗೈಯಲ್ಲಿ ಬಂದೆ
ಬರಿಗೈಯಲ್ಲಿ ಹೊರಟೆ
ಆಡಿಸುವವನು ಆತ
ಆಡುವವರು ನಾವು
ಮೂರು ದಿನದ ಸಂತೆಯಲಿ
ಬದುಕುವ ಹಂಬಲವೇಕೆ

ಪ್ರಾಣ ಇರುವ ತನಕ
ಪ್ರಯಾಣಿಕರು ನಾವು
ಮುಗಿದ ಬಳಿಕ ಇನ್ನಾರು
ಮಸಣದ ಹಾದಿಯಲ್ಲಿ
ಬೆಂದು ಹೋಗುವ ದೇಹಕ್ಕೆ
ಬದುಕುವ ಹಂಬಲವೇಕೆ

ಮಣ್ಣಿನ ಮಡಿಕೆಗೆ
ಜೀವವ ತುಂಬಿ
ಬದುಕಿನ ಬಂಡಿಯ
ಜೀವಂತ ಓಡಿಸಿ
ನನ್ನ ತನ್ನವರ ಗಾಳಿಗೆ ತೂರಿ
ಹೋಗುವ ಜೀವಕ್ಕೆ
ಬದುಕುವ ಹಂಬಲವೇಕೆ

- shankar gargi

31 Jul 2021, 01:04 pm

ನನ್ನಾ ಕೀ

ನನ್ನಾಕೀ ನೀ ಸಣ್ಣಾಕೀ
ಏನು ತಿಳಿಯದಾಕೀ
ಗಪ್ಪನೆ ಬಂದು ಹತ್ತಿರ ಕುಂತು
ಮುದ್ದನು ಕೊಡುವಾಕೀ

ಹುಚ್ಚು ಮರೆಯಲಿ
ನನ್ನ ನೋಡಿ ನಕ್ಕು ನಗುವಾಕೀ
ಮಾತು ಮಾತಿಗೆ ನನ್ನ ನಕ್ಕುನಗಿಸುವಾಕೀ
ಕಣ್ಣ ಸನ್ನಿಲೆ ನನ್ನ ಪ್ರೀತಿ ಮಾಡಿದಾಕೀ
ನಾ ಕಂಡರ ಬೆಳಕ್ಕಿಯಂಗ ಹಾರಿ ಬರುವಾಕೀ

ಸಿಟ್ಟು ಸಿಡಿವು ನನ್ನ ಎದೆಯಾಗ
ತುಂಬಿ ತುರುಕಿದಾಕೀ
ಪ್ರೀತಿ ಪ್ರೇಮ ಹಂಚಿ ನನ್ನ ಬೆಚ್ಚಿ ಬೀಳಿಸಿದಾಕೀ
ಗತ್ತು ಇಲ್ಲದಾಕೀ ನೀ ಸ್ವಚ್ಛ ಮನಸ್ಸಿನಾಕೀ

ಎಲ್ಲಿ ಹೋದರು ನೀ ಬಿಡದೆ ಇರುವಾಕೀ
ಬೆನ್ನುಹತ್ತಿದ ದೆವ್ವಿನ್ಹಾಂಗ ನನ್ನ ಹುಡುಕುವಾಕೀ
ಮಾತು ಮಾತಲಿ ನನ್ನ ಮರಳು ಮಾಡುವಾಕೀ
ಸೋಗು ಹಾಕುವಾಕೀ ನನ್ನ ಬಿಟ್ಟು ಇರುದಾಕೀ



- shankar gargi

30 Jul 2021, 11:50 am

ಪ್ರೀತಿ ಜೀವನ

ಪ್ರೀತಿನೇ ಜೀವನವೆಲ್ಲಾ
ಜೀವನವೇ ಪ್ರೀತಿ
ಪ್ರೀತಿ ಹಿಂದೆ ಓಡಿ
ಮರುಳಾಗಬೇಡ
ಜೀವನದ ಹಿಂದೆ ಓಡಿ
ಮಣ್ಣಾಗಬೇಡ
ಆಸೆಗೆ ಬಿದ್ದು
ಬಲಿಯಾಗಬೇಡ
ತಳಕ್ಕೆ ಗಾಳಕ್ಕೆ ಸಿಕ್ಕಿ
ಒದ್ದಾಡಬೇಡ
ಇದ್ದಷ್ಟು ದಿನ
ನಿನ್ನ ಇಷ್ಟದಂತೆ ಬದುಕು
ಆದರೆ ನಿನ್ನ ಇಷ್ಟ
ಕಂಡವರಿಗೆ ಕಷ್ಟವಾಗದಿರಲಿ
******ರಾಜು ಹಾಸನ******

- ರಾಜು ಹಾಸನ

29 Jul 2021, 11:45 pm

ಮನುಜ

ಹುಟ್ಟಿ ಬಂದ ಮೇಲೆ
ನೀ ಬದುಕಬೇಕು ಮನುಜ
ಸೋಲು ಗೆಲುವಿನ ಹಾದಿಯಲ್ಲಿ
ನೀ ಸಾಗಬೇಕು ಮನುಜ

ದೀಪದಂತೆ ಬೆಳಕು
ಬೆಳಗಬೇಕು ಮನುಜ
ಪ್ರೀತಿ ಪ್ರೇಮ ಹಂಚಿ
ನೀ ಬಾಳಬೇಕು ಮನುಜ

ಸುಖ-ದುಃಖ ಹಂಚಿ
ನೀ ನಡೆಯಬೇಕು ಮನುಜ
ಮೂರು ದಿನದ ಸಂತೆ
ನೀ ಮಾಡಬೇಕು ಮನುಜ

ತಿಳಿದು ನೋಡು ಮನುಜ
ತಿರು ತಿರುಗಿ ನೋಡು ಮನುಜ
ಬಾಳ ಪುಟದ ಬದುಕು
ಹಸನಾಗಬೇಕು ಮನುಜ


- shankar gargi

29 Jul 2021, 10:20 pm

ಬಾನಿನ ಹಾಸಿಗೆ

ಬಾನಿನ ಹಾಸಿಗೆ‌
ಆ ಚಂದಿರನ ಊರಿಗೆ!!
ಭುವಿಯ ಹಾಸಿಗೆ
ಇದು ನಮ್ಮ ಪಾಲಿಗೆ!!

ರಾತ್ರಿ ಕಳೆದ ಮೇಲೆ
ಹಗಲು ಬರುವುದಿಲ್ಲಿ ನಿತ್ಯ!!
ರವಿಯ ಕಿರಣ ಧರೆಗೆ
ಬೆಳಕ ನೀಡುವುದು ಸತ್ಯ!!

ಬದುಕು ಎಂಬ ಮಲ್ಲಿಗೆಯ
ಪರಿಮಳ ದಳ ಮಧ್ಯೆ!!
ತನ್ನ ನಂಬಿ ಬಂದವರಿಗೆ
ದಾರಿ ತೋರಿಸುವ ವಿದ್ಯೆ!!

ಸುತ್ತಲಿರುವ ಕತ್ತಲಲ್ಲೇ
ಬೆಳಗುವುದು ಹಣತೆ!!
ಸತ್ಯ ನಿಷ್ಠೆ ಯಿಂದ ನಡೆಯೆ
ಬೆಳೆಯುವುದು ಘನತೆ!!


- ಪಿ.ಜಿ.ಜ್ಯೋತಿ

29 Jul 2021, 06:45 pm