Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಅಂಬೇಡ್ಕರ್

ದಿನ ದಿನಗಳು ಉರುಳಿ
ವರು ವರುಷಗಳು ಬಂದರು
ಬೀಸೊ ಗಾಳಿಯ
ದಿಕ್ಕು ಬದಲಾದರೂ
ಕ್ಷಣ ಕ್ಷಣಕ್ಕೂ ಜನರ
ಮನಸ್ಸು ಬದಲಾದರು
ಸೂರ್ಯ ಚಂದ್ರರು
ಇರುವ ತನಕ
ಅಚ್ಚಳಿಯದೆ ಉಳಿಯುವ
ಈ ದೇಶದ ಉಸಿರು ಬಡ ಜನರ
ಜೀವ ಬಾಬಾಸಾಹೇಬ
ಭೀಮ್ ರಾವ್ ಅಂಬೇಡ್ಕರ್

- ರಾಜು ಹಾಸನ

29 Jul 2021, 12:08 am

ಮನ ಮೆಚ್ಚುವವ

ಕೈ ಬೆರಳು ಖಾಲಿ ಇದೆ ನೀ ಇಡುವ ಉಂಗುರಕ್ಕಾಗಿ,
ಈ ನನ್ನ ಹೃದಯ ಸಿಂಹಾಸನವು ಕಾಯುತ್ತಿದೆ,
ಮನ ಮೆಚ್ಚುವ  ನಿನ್ನ ಆಗಮನಕ್ಕಾಗಿ,

ಮನದ ಭಾವನೆಗಳ ಒಡೆಯ ನೀನು,
ನಿನ್ನ ಕಾಣದೆಯೇ ಕನಸ ಕಟ್ಟಿರುವೆ ನಾನು,
ನನಗಾಗಿಯೇ ಹುಟ್ಟಿರುವವ ನೀನು,
ಆದಷ್ಟು ಬೇಗಾ ನನ್ನ ಕಣ್ಣಾ ಮುಂದೆ ಬಂದೆ ಬರುವೆ ನೀ ಎಂದು ಕಾಯುತ್ತಿರುವೆ ನಾನು.

   ಕನಸಿನ ಕೋಟೆಯನೇ ಕಟ್ಟಿದೆ ಈ ಮನ,
ನನ್ನ ಮನ ಮೆಚ್ಚುವವನ ಆಗಮನಕ್ಕಾಗಿ ಕಾಯುತ್ತಿದೆ
ಪ್ರತಿ ಕ್ಷಣ. 

- Veena

27 Jul 2021, 12:54 pm

ಪಯಣದ ಹಾದಿ

ಯಾರನ್ನೂ ನಂಬಿಯೂ
ನೆಡೆಯಬೇಡ ನುಡಿಯಬೇಡ
ಹೋಗಬೇಡ ಕೂರಬೇಡ
ಜೀವನ ಜೀವಂತವಾಗಿರುವಾಗ
ನಿಲ್ಲದೆ ನಿರಂತರವಾಗಿರುವಾಗ
ಜೀವ ಬಿಟ್ಟು ಹೋಗಬೇಡ
ಮನಸಿನ ಚಿಂತೆಯನ್ನು
ಛಲದ ಚಿತೆಯಲ್ಲಿಟ್ಟು
ಜ್ಞಾನದ ಬೆಳಕು ಹಚ್ಚಿ
ಗುರಿ ಮುಟ್ಟುವ ತನಕ
ಸಾಗಲಿ ಸಾಗಲಿ ಮುಂದೆ
ಮುಂದೆ ಸಾಗಿ ನೆಡೆಯಲಿ
ಪಯಣದ ಹಾದಿ

- ರಾಜು ಹಾಸನ

27 Jul 2021, 12:05 am

ಮನದ ಮಾತು

ನನ್ನ ಮನದ
ಸುಂದರ ಹೂವೆ
ನನ್ನ ನೋಡಿ
ನಗುವಿನ ಏಕೆ
ತಿಳಿಯದಾಗಿದೆ
ನಿನ್ನ ಮನದ ಆಸೆ
ಸಾಕಾಗಿದೆ ಈ
ಕಂಗಳ ಮಾತು
ಬಯಸುತ್ತಿದೆ
ನಿನ್ನ ಸೇರುವ ಆಸೆ
ಸೋತಿದೆ ಮನವು
ನುಡಿಯದ ಮಾತು
ಪ್ರಿಯೆ ಹೇಗೆ
ಹೇಳಲಿ ನಿನಗೆ
ಈ ಮನದ ಮಾತು

- shankar gargi

26 Jul 2021, 10:45 am

ಕುಣಿಯೋನು ಬಾರೆ

ಕುಣಿಯೋನು ಬಾರೆ
ಗೆಳತಿ ಕುಣಿಯೋನು ಬಾರೆ

ನಿನ್ನಂತೆ ನಾನಾಗಿ
ನನ್ನಂತೆ ನೀನಾಗಿ
ನಲಿಯೋಣ ಬಾರೆ

ಹೆಜ್ಜೆಗೆ ಹೆಜ್ಜೆ ಇಟ್ಟು
ತಾಳಕ್ಕೆ ತಕ್ಕಂತೆ
ಕುಣಿಯೋಣ ಬಾರೆ

ದುಃಖವ ಮರೆಯುತ
ಸಂತೋಷ ಪಡೆಯುತ
ಈ ಸಂಸಾರ ದುಡೋಣ ಬಾರೆ

ಕಣ್ಣಲ್ಲಿ ಕಣ್ಣಿಟ್ಟು
ಮನದಲ್ಲಿ ಮನವಿಟ್ಟು
ಮೈ ಮರೆಯೋಣ ಬಾರೆ

ತೆಂಗಿನ ವನದಾಗ
ಎಳೆನೀರು ಕುಡಿಯುತ
ತಂಪು ಗಾಳಿಯ ಜೊತೆಗೆ ಹಾರೋಣ ಬಾರೆ

ಹಸಿರು ಸಿರಿಯಲಿ
ಹೊಸತನವ ಕಾಣುತ
ಸಿರಿ ಹಿಗ್ಗಿ ಕುಣಿದಂತೆ ಕುಣಿಯೋನು ಬಾರೆ

ಕುಲ ಕುಲ ನಕ್ಕೊಂತ
ಸುಖ-ದುಃಖ ಹಂಚುತ
ಹಾಲ್ಜೇನು ಸವಿಯೋಣ ಬಾರೆ




- shankar gargi

26 Jul 2021, 10:38 am

ಸಂಕ್ರಾಂತಿ

ಹೊಸ ಚೈತನ್ಯ
ಮೂಡುತ್ತ
ರವಿಯು ಪಥವನು
ಬದಲಿಸುತ
ಮಾಗಿಯ ಚಳಿಯ
ಮರೆಸುತ
ಮತ್ತೆ ಬಂತು ಸಂಕ್ರಾಂತಿ

ಹೊಸ ಬಾಳಿಗೆ
ಹೊಸ ಬೆಳಕನು
ಹೊಸ ಜೀವಕ್ಕೆ
ಹೊಸ ಕಳೆಯನು
ಹೊಸ ವರುಷದಲ್ಲಿ
ಶುಭ ಕೋರುತ
ಮತ್ತೆ ಬಂತು ಸಂಕ್ರಾಂತಿ

ಎಳ್ಳು-ಬೆಲ್ಲದ
ಸವಿಯಿಲಿ
ಪ್ರೀತಿ-ಪ್ರೇಮ
ಹಂಚುತ
ಸವಿ ಮಾತಿನ
ಹಿತನುಡಿಯಲಿ
ಮತ್ತೆ ಬಂತು ಸಂಕ್ರಾಂತಿ

ಸುಗ್ಗಿ ಹಿಗ್ಗಿನಲ್ಲಿ
ಎಳ್ಳು ಬೆಲ್ಲವ ಹಂಚಿ
ಜಾತಿ ಮತವ ತೋರೆದು
ದ್ವೇಷ ಭಾವ ಮರೆತು
ಸ್ನೇಹ ಪ್ರೀತಿಯಲಿ
ಸುಖ-ದುಃಖವ ಹಂಚುತ
ಮತ್ತೆ ಬಂತು ಸಂಕ್ರಾಂತಿ






- shankar gargi

26 Jul 2021, 09:51 am

ಮನ ಮಂದಿರ

ನಮ್ಮ ಮನ ಮಂದಿರದ
ಗುರುವೇ
ನೀ ಎದ್ದು ಬಾರೊ
ಪ್ರಭುವೇ

ಸತ್ಯಮಾರ್ಗದಲ್ಲಿ
ನಿತ್ಯ ನಡೆಯುವ
ಶಕ್ತಿ ತುಂಬುವ ದೈವವೇ

ಜಾತಿ ಮತ
ಭೇದವಿಲ್ಲದೆ ವಿದ್ಯೆ
ಎಮಗೆ ನೀಡಿದೆ

ಅಜ್ಞಾನದ ಕತ್ತಲೆಯಿಂದ
ಸುಜ್ಞಾನದ ಬೆಳಕಿನೆಡೆಗೆ
ಎಮ್ಮನು ಕಳುಹಿದೆ

ಶುದ್ಧ ಮನಸ್ಸಿನ ಅಂತರಾಳದಿ
ಬೀಜಾಕ್ಷರವ ಬಿತ್ತಿದೆ
ಅಕ್ಷರದ ದಾಸೋಹದಿ
ಉಣಿಸಿ ಎಮ್ಮನು ಬೆಳೆಸಿದೆ

ನಿಮ್ಮ ನುಡಿಯ
ವಾಣಿಯಲ್ಲಿ ಬದುಕಿನ
ಮಾರ್ಗವ ಕಲಿಸಿದೆ

ಗುರುಪೂರ್ಣಿಮೆಯ
ಪೂರ್ಣಚಂದ್ರರು ನೀವು
ಬೆಳಕಿನಡೆಗೆ ನಡೆಸುವ
ಜ್ಞಾನದೇವರು ನೀವು

- shankar gargi

26 Jul 2021, 09:25 am

ನಿನಗೊಂದು ಮನವಿ ಸಲ್ಲಿಸಬೇಕಿದೆ ದೇವಾ.....

" ನಿನಗೊಂದು ಮನವಿ ಸಲ್ಲಿಸಬೇಕಿದೆ ದೇವಾ...

ನನಸಾಗದ ಕನಸುಗಳ ಕಾಣಿಸದಿರು,

ಸಿಗದ ವ್ಯಕ್ತಿಗಳ ಪರಿಚಯಿಸದಿರು,

ನೆನಪಾಗಿ ಉಳಿಯುವ ಸಂಬಂದಗಳ ನೀಡದಿರು

ಕಷ್ಟಗಳೊಂದಿಗೆ ಮರೆಯಾಗೊ

ಸಂಬಂದಗಳು ಬೆಸೆಯದಿರು,

ಸಂಬಂದಗಳ ಸುಳಿಯಲ್ಲಿ ಸಿಲುಕಿಸದಿರು.

ಕೊಟ್ಟು ಕಿತ್ತು ಕೊಳ್ಳುವುದಕ್ಕಿಂತ

ಒಬ್ಬಂಟಿಯಾಗಿಯೇ ಇರಿಸಿಬಿಡು "

_ಪದಗಳಿಲ್ಲದ ಕವನ...
msbhovi.....✍️

- mani_s_bhovi

25 Jul 2021, 09:45 am

ನಿನ್ನ ನೆನಪಲ್ಲೇ

ನಾನು ಬರೆಯುವ
ಪ್ರತಿಯೊಂದು ಅಕ್ಷರ
ನಿನ್ನ ನೆನಪಲ್ಲೇ ಗೆಳತಿ

ನಾನು ನೋಡುವ
ನೋಟವೆಲ್ಲ
ನಿನ್ನ ನೆನಪಲ್ಲೇ ಗೆಳತಿ

ನಾನು ಹಾಡುವ
ಪ್ರತಿಯೊಂದು ನುಡಿಯು
ನಿನ್ನ ನೆನಪಲ್ಲೇ ಗೆಳತಿ

ನಾನು ಇಡುವ
ಪ್ರತಿಯೊಂದು ಹೆಜ್ಜೆಯೂ
ನಿನ್ನ ನೆನಪಲ್ಲೇ ಗೆಳತಿ

ಈ ಹೃದಯಬಡಿತದ
ಪ್ರತಿಯೊಂದು ಮಿಡಿತ
ನಿನ್ನ ನೆನಪಲ್ಲೇ ಗೆಳತಿ

ನನ್ನ ಉಸಿರಿನ
ಕೊನೆಯ ಉಸಿರು
ನಿನ್ನ ನೆನಪಲ್ಲೇ ಗೆಳತಿ





- shankar gargi

23 Jul 2021, 01:49 pm

ಮನಸ್ಸು

ಹುಚ್ಚು ಮನಸ್ಸು
ಹರಿದಾಡುತ್ತಿದೆ
ನೂರೆಂಟು ಕಡೆ
ದಾರಿ ಕಾಣದೆ
ಸಾಗುತ್ತಿದೆ ಬದುಕಿನಡೆ
ಬಯಸಿದ್ದೆಲ್ಲ
ಬೇಕು ಅಂತ
ಹುಡುಕಾಡುತ್ತಿದೆ
ಹುಚ್ಚು ಮನಸ್ಸಿನ
ಕಿಚ್ಚಿನಲ್ಲಿ ತೇಲಾಡುತ್ತಿದೆ
ಹುಚ್ಚು ಆಸೆಗೆ
ಕೊಚ್ಚಿ ಹೋಗುವ
ಈ ಮನಸ್ಸಿಗೆ ನೆಮ್ಮದಿ
ಎಂತೋ ಕಾಣದಾಗಿದೆ
ಕರಿನೆರಳಿನ ಅಡಿಯಲ್ಲಿ
ಬೆಳಕು ಕಾಣದೆ
ಮಣ್ಣಾಗಿ ಹೋಗಿದೆ

- shankar gargi

23 Jul 2021, 01:33 pm