ಮೊದ ಮೊದಲು ಮುಗಿಯುತ್ತಿರಲಿಲ್ಲ ನನ್ನ ನಿನ್ನ ಮಾತಿನ ಚಕಮಕಿ....
ಅರೆಘಳಿಗೆಯೂ ಬಿಡದೆ ಪಟಾಕಿಯಂತೆ ಸಿಡಿಯುತ್ತಿದ್ದೆ....
ಮಾತಲ್ಲೆ ಎಲ್ಲವನ್ನು ಹೇಳಿ ಅರ್ಥಮಾಡಿಸುತ್ತಿದ್ದೆ....
ಏನಾಯಿತೋ ನಾ ಅರಿಯೇ ಒಮ್ಮಲೆ ತಂತಿ ಮುರಿದ ವೀಣೆಯಂತಾದೆ....
ಈಗೀಗ ಅರ್ಥವಾಗುತ್ತಿಲ್ಲ ನಿನ್ನ ಮೌನ....
ಒಮ್ಮೆಯಾದರೂ ಮೌನ ಮುರಿದು ಅರ್ಥೈಸು ನನ್ನಿಂದಾದ ತಪ್ಪನ್ನು...........
msbhovi......✍️
ಕಸಾಪ ಅದ್ಯಕ್ಷನಾಗುವ ಕನಸೊಂದಿತ್ತು
ವಿದಿಯಾಟಕ್ಕೆ ಜೀವ ಬಲಿಯಾಯ್ತು
ಚಿಕ್ಕ ಚಿಕ್ಕ ಕವನ ಸಂಕಲನ ಪ್ರಕಟವಾಗಿ
ಕರುನಾಡಿನ ಜನರ ಮನಗೆಲ್ಲುವ ಕನಸು
ಮಣ್ಣಾಗಿ ಹೋಯ್ತು ಕರೋನ ಮಾರಿಗೆ
ಜೀವನದ ಜೊತೆಗೆ ಸಪ್ತಪದಿ ತುಳಿದ
ಹೆಂಡತಿ ಮಗುವನ್ನು ಬಿಟ್ಟು ಹೋದಾಯ್ತು
ನನ್ನ ಕನಸಿನ ಜೊತೆ ಅವರ ಕನಸು ಮಣ್ಣು ಪಾಲಾಯ್ತು
ಚಿಂದಿಚಿಂದಿ ಬಟ್ಟೆಯನ್ನು ಉಟ್ಟು ನಿಂತಿರುವಳು ಬಡತನ ಹೊತ್ತು ನೂರಾರು ಕಾಮುಕರು ಕಣ್ಣುಗಳು ಬಯಸುತಿವೆ ಅವಳ ಸೌಂದರ್ಯವನ್ನು ಆಶ್ರಯ ಕೊಡಲು ಹೊರಟಿರುವ ವೀರಾಧಿವೀರರು ಶೂರರು, ಕಾಮದ ಮುದಿಗೂಬೆಗಳು ಹಣದಾಸೆ ತೋರಿಸಿ ಕಚ್ಚಾಡುತ್ತಿಹರು ಕ್ಷಣ ತೃಪ್ತಿಗಾಗಿ ಬಡೆದಾಡುತಿಹರು ಕಾಮದ ರಣರಂಗದಲ್ಲಿ ಹೋರಾಡಿ ಪ್ರಾಣ ಗೈಯುತಿಹರು. ಹಸಿದ ಹೊಟ್ಟೆಗೆ ಅನ್ನದಾಸೆ ಹಚ್ಚಿ ನಾರುತಿರುವ ಅವಳ ಮೈ ಸುಖವುಂಡು ನಾಯಿಗಳು ಅವಳನು ಬಿಸಾಕಿ ಹೊರಟು ಗೆದ್ದೆವು ಎಂಬ ವಿಜಯ ಪತಾಕಿ ಹಾರಿಸುತ್ತಿಹರು ಆ ಕಾಮುಕರು ನೆಟ್ಟ ಬೀಜ ಮೊಳೆತು ಮರಿಯಾದಾಗ ಮಗುವಿನ ಕೂಗು ಅಪ್ಪಾ ಎಂದು ಬಾಯಿ ತೆರೆದಾಗ ಆ ಬಡಜೀವ ಕೈಮಾಡಿ ತೋರಿಸುತ್ತಿತ್ತು ಈ ಪ್ರಪಂಚವ
ಅವ್ವ ಕಳಿಸಿದ ಬಿಸಿ ಬಿಸಿ ರೊಟ್ಟಿ,
ಇದೆಲ್ಲ ಅಮ್ರತಗಳಿಗೂ ತುಟ್ಟಿ,
ಹೊಲದಲ್ಲಿ ಕೈ ತುಂಬಾ ಕೆಲಸ,
ಕನ್ನಡ ಹಾಡೊಂದು ತಣಿಸಲು ಮನಸ,
ನೈಸರ್ಗಿಕ ತಂಪುಕಾರಕ ವಾಯು,
ಮಣ್ಣಿನ ಗುಣಕ್ಕೆ ಗಟ್ಟಿ ಈ ಸ್ನಾಯು,
ಕರುನಾಡ ಜಲ ಕುಡಿದಿರಲು ನಾನೆಂದೂ ಚಿರಾಯು ಚಿರಾಯು.........