Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಮೌನಿ

ಕೇಳಿದ್ದೊಂದು ಕರುನಾಡು
ಕಾಣುತಿಹುದೊಂದು ಸುಡುಗಾಡು.....

ಇದೆಂಥ ವಿಪರ್ಯಾಸ,
ಹೇಳಲೂ ಕೂಡಾ ಪ್ರಯಾಸ,
ಮಣ್ಣಾಗಿಸಿದರು ಮತ ನೀಡುವಾಗ ಕಾಣಿಸಿದ್ದ ಕನಸ........

ಬದಲಾದ ಧ್ಯೇಯ
ಇವರಲ್ಲ ವಿಧೇಯ
ಅಪಹಾಸ್ಯದಲ್ಲಿದೆ ರಾಜಕೀಯ....

ನಾಲ್ಕು ಜನಕಾದರೂ ಉಪಕಾರಿ ಎಮ್ಮೆಗಳು
ಮತ ಹಾಕಿದ ಜನಕಾದರು ಮಾರಿ ಈ ಎಮ್ಮೆಲ್ಲೆಗಳು......

ಮಾತಲ್ಲೇ ಮುಗಿಯಿತು ದೇಶೋದ್ಧಾರ
ಇವರಿಗೆ ಸೀಟು ಸಿಗುವುದೇ ಹರ್ಷೋದ್ಘಾರ.......

ಹೊಲಸು ತಿನ್ನುವ ಎಮ್ಮೆ ಕೊಡುವವು ಹಾಲ
ಹೊಲಸು ಎಮ್ಮೆಲ್ಲೆಗಳಿಂದ ಕೋಲಾಹಲ......

ಕಳೆದು ಹೋಗಿದೆ ಪ್ರಜಾಪ್ರಭುತ್ವ
ಇದಕೆ ಕಾರಣ ಅಂದೇ ಹೇಳಿದ ಪ್ರಜೆಗಳ ನೋಟಿಗೆ ಓಟೆಂಬ ತತ್ವ............

-ಮೌನಿ

- Naresh Poojari

15 Jul 2021, 11:44 am

ಸಾಂಗತ್ಯ

ಮನಸ್ಸಿಗಾದ ಗಾಯಕ್ಕೆ ಮುಲಾಮು ಸಿಗೋದಿಲ್ಲ,
ನುಚ್ಚು ನೂರಾದ ಕನಸಿಗೆ ಮರು ಜೋಡನೆ ಸಾಧ್ಯವಿಲ್ಲ,
ಮಾತು ನಡುವಳಿಕೆಗಳು ಕತ್ತಿಗಿಂತ ಹರಿತ,
ತಪ್ಪು ನುಡಿದರೆ ಆಗುವುದು ಮನಸ್ಸಿಗೆ ಇರಿತ,
ನಂಬಿಕೆಯನ್ನೊ ಪದಕ್ಕೆ ಇರುವುದು ಅಪಾರವಾದ ಶಕ್ತಿ,
ಯಾರನ್ನೂ ನಂಬಬೇಕು ಎಂದು ತಿಳಿಯಲು ಇರಬೇಕು ತುಂಬಾ ಯುಕ್ತಿ,
ಮೋಸ ಮಾಡುವ ಜನರೇ ತುಂಬಿಹರು ಈ ಜಗತ್ತಿನಲ್ಲಿ,
ನಮ್ಮವರೇ ನಮಗೆ ಮೋಸ ಮಾಡುವರಿಲ್ಲಿ,
ನಮ್ಮ ತನವ ನಾವು ಎಂದಿಗೂ ಬಿಡಬಾರದು,
ನಮ್ಮ ಸಾಂಗತ್ಯಕ್ಕಿಂತ ಒಳ್ಳೆಯ ಸಾಂಗತ್ಯ ಬೇರೆ ಸಿಗಲಾರದು...

- Naresh Poojari

15 Jul 2021, 11:42 am

ಧ್ವನಿ

ಗಡಚಿಕ್ಕುವಂತೆ ಕಿವಿಗೆ ಅಪ್ಪಳಿಸುತಿದೆ ಸಮುದ್ರದ ಅಲೆಗಳ ಶಬ್ದ,
ಕತ್ತಲ ಕರಾಳ ನೋಟಕೆ ಆಗಿವೆ ಹಕ್ಕಿಗಳು ಮೂಕ ಸ್ತಬ್ಧ,
ತಂಗಾಳಿ ಬೀಸುತ್ತಿರಲು ಮನಸಿನಲ್ಲೆನೋ ತಳಮಳ,
ಯಾರನ್ನೋ ಕಳೆದುಕೊಂಡತಹ ಕಳವಳ,
ಸುತ್ತಲೂ ಆವರಿಸಿತು ನೀರವ ಮೌನ,
ಆಲೋಚನೆಗಳ ಸುಳಿಯಲ್ಲಿ ಮುಳುಗಿ ಹೋದೆ ನಾ,
ಉತ್ತರ ಸಿಗದ ಪ್ರಶ್ನೆಗಳಿಗೆ ದಿಕ್ಕು ತೋಚದಾದೆ,
ಜೀವನದ ಸವಾಲುಗಳ ಎದುರು ಸೋತು ಜೀವನಕೆ ಶರಣಾದೆ ....

- Naresh Poojari

15 Jul 2021, 11:41 am

ಸಾಧನೆ ಎಂದರೇನು?

ಸಾಧಿಸುವ ಚಲವೊಂದಿದ್ದರೆ ಎಲ್ಲವು ಸುಲಭ,
ಗುರಿಯಿಲ್ಲದೆ ಮುನ್ನಡೆದರೆ ದಾರಿಯು ದುರ್ಲಭ,
ಮುಂದಿಟ್ಟ ಹೆಜ್ಜೆಯನ್ನು ಎಂದು ಹಿಂದಿಡಬಾರದು,
ಮುನ್ನುಗ್ಗಿ ನಡೆದರೆ ಯಾರು ತಡೆಯಲಾರರು,
ಸಾಗುವ ದಾರಿಯಲ್ಲಿ ಅಡೆತಡೆಗಳು ನೂರಾರು,
ಹಿಮ್ಮೆಟ್ಟಿಸಿ ನಡೆಯಲು ದಾರಿಗಳು ಸಾವಿರಾರು,
ಎಷ್ಟು ಸಲ ಸೋತರು ಪ್ರಯತ್ನಿಸುವೆ ಮತ್ತೊಂದು ಬಾರಿ,
ಸಾಧನೆಯ ಶಿಖರವನ್ನೆರುವೆ ಎಂದಾದರೊಂದು ಸಾರಿ..

- Naresh Poojari

15 Jul 2021, 11:31 am

ಓಕೆನಾ.....

ನಂದು ಪಾಳುಬಿದ್ದ ಮನೆ

ಆಗುವೆಯಾ ನೀ ಯಜಮಾನಿ ನೀನು....

ನಂದು ನೊಂದ ಹ್ರದಯ ಕಣೆ

ಒಮ್ಮೆ ಅಪ್ಪಿ ಮನವ ನಗಿಸುವೆಯಾ ನನ್ನನ್ನು....

ನನ್ನ ಪುಟ್ಟ ಹ್ರದಯದ ಅರಮನೆಯ ಪಟ್ಟದರಸಿ ನೀನು...

ನಿನ್ನ ಪುಟ್ಟ ಹ್ರದಯದ ಅರಮನೆಯ ದೊರೆಯು ನಾನು......

ಇದು ನನ್ನ ಜೀವನದ ಕನಸು.......
msbhovi.....✍️

- mani_s_bhovi

14 Jul 2021, 08:12 pm

ರಚನೆ ಇಂತಿ ನಾನ್ಯರು...?

ಹೇಳಲು ಗಳಿಗೆ ಸರಿ ಇರಲಿಲ್ಲ
ಕೇಳಲು ನನ್ನ ಮನಸು ನಿನ್ನ ಬಳಿ ಇರಲಿಲ್ಲ...! ಈ ಕಲ್ಪನೆಯ ಪ್ರೀತಿಯನ್ನ ಹಚ್ಚಿ ಕೊಂಡ ಹುಚ್ಚ ನಾನು...! ಅದರ ವಾಸ್ತವ ತಿಳಿಸಿದ್ದು ನೀನು....! ♥️❤
ನಿನ್ನ ಬಾಳಿಗೆ ನಾನು ತಾತ್ಕಾಲಿಕ ಪರಿಚಯವಾದರೆ...! ನನ್ನ ಬದುಕಿನಲ್ಲಿ ನೀನು ಮರೆಯಲಾರದ ನೆನಪುಗಳಾದೆ...! ♥️❤

- vijay

13 Jul 2021, 11:16 pm

ಜೀವನ ಪಾಠ ಹಾಗೆ ನನ್ನ ಮನದ ಮಾತು

ಹುಡುಕುತ್ತಿರುವ ದಾರಿ ಯಾವುದೋ
ಸಾಗಿ ಬಂದ ಹಾದಿ ಯಾವುದೋ
ಆರಂಬಭದ ಅರಿವಿಲ್ಲ
ಅಂತ್ಯದ ಸುಳಿವಿಲ್ಲ
ಜೊತೆಯಲ್ಲಿ ಸಾಗುವರು ಯಾರೋ
ನಡುವೆ ನೂಕಿ ಹೋಗುವರು ಯಾರೋ
ಬರುವಾಗ ಯಾರಿರಲಿಲ್ಲ
ಹೋಗುವ ಬಗ್ಗೆ ತಿಳಿದಿಲ್ಲ
ಇಲ್ಲಿ ಬಂದಿರುವುದು ಯಾಕೋ
ಹಾಗೆಯೇ ನಿಂತಿರುವುದು ಯಾಕೋ
ಬೇಕೆಂದರೂ ಖುಷಿ ಇಲ್ಲ
ಸಾಕೆಂದರೆ ನೋವು ನಿಲ್ಲಲ್ಲ
ಮುಂದೆ ಬದುಕಿನ ಬಂಡಿ ಹೇಗೋ
ನಾಳೆ ಕೂಡ ಈ ದಿನದ ಹಾಗೋ
ನಂಬಿಕೆ ಬಿಟ್ಟರೆ ಇಲ್ಲೇನಿಲ್ಲ
ಅದ ನಂಬಿಯೇ ಸಾಗಿದೆ ಜಗವೆಲ್ಲಾ......
msbhovi....✍️



- mani_s_bhovi

13 Jul 2021, 07:38 pm

"ದೇವ ಮಾಯ, ಗುರು ಭಾರತ"

ತಮ್ಮ ದೇಹ-ವೇಷವೆ ಭಾರತ ನಮ್ಮ ದೇಶವೆ ಭಾರತ,
ಜನಮ ನೀಡಿದ ಜನನಿಯೆ, ಆಕಾರ ನೀಡಿದ ಜನಕನೆ,
ತಮ್ಮ ಪ್ರಥಮ ದೇವರು ಹೆಮ್ಮೆ ರಾಷ್ಟ್ರ ವೆ ಭಾರತ.

ಸನಮಾಗ೯ದ ಸನಮಂಗಳ ತೋರುವ
ಅರು- ಗುರುವೆ,
ಸ್ತಂಭಲಾಂಛನ ಸಂಸ್ಕಾರ ಎರೆವ
ವರ- ಗುರುವೆ,
ನಮ್ಮ- ನಿಮ್ಮೆಲ್ಲರ ದ್ವಿತೀಯ ದೇವರು
ಸವ೯-ರಾಷ್ಟ್ರವೆ ಭಾರತ.

ಪ್ರಕೃತಿ-ಪ್ರಕಾಶಿಸುವ, ದಿನ-ಚರಿ,
ಅವಲೋಕಿಸುವರು ,
ಬಾನ- ಭಾಸ್ಕರ ಹುಣ್ಣಿಮೆ-ರಜನಿಕರ ಹಗಲಿರುಳಿಸುವರು,
ಜೀವ-ಸಂಕುಲ,ನಿಸರ್ಗ ಪ್ರಜ್ಞೆಯ ತೃತೀಯ ದೇವರು ,
ಭರತ ಹೆಸರೆ ಭಾರತ ಸೌಹಾರ್ದ ಶುಭಾಶಯ ಭಾರತ.

ಬಾನ-ಭೂಮಿ ಬೆಂಕಿ-ತಂಗಾಳಿ,
ಜಲ ಸೃಷ್ಟಿಸಿದ ಕತ೯ವೆ,
ಶಕ್ತಿ-ಯುಕ್ತಿ ಶೌರ್ಯ-ಧೈರ್ಯ,
ಅಂಶ ನಂಬಿದ ವಿಸ್ಮಯವೆ,
ತಮ್ಮ ಚತುಥಿ೯ ದೇವರು ನಾವಿರುವ ತಾಣವೆ ಭಾರತ.

ದೇವ ಮಾಯ, ಗುರುವೆ ಭಾರತ,
ಪೌರತ್ವ ನೆಲ-ವಾಸಿ ದೇಶವೆ ಭಾರತ.

"ರಾಜಕುಮಾರ್ "aim is a Reader Writer.

- rajkumar

13 Jul 2021, 07:25 pm

ನನ್ನ ಪ್ರೀತಿಯ ಪಯಣ....

ತುಂಬಾ ಕಷ್ಟ ಪಟ್ಟು ಕಾಡಿ ಬೇಡಿ ಪಡೆದುಕೊಂಡ
ಪ್ರೀತಿ ಕಣೆ ನನ್ನದು.....
ಸಿಂಪಲ್ ಇಗಿ ನಿನ್ನ ಬಿಟ್ಟು ಹೋಗ್ತಿನಿ ಅಂತ
ಅಂದುಕೊಳ್ಳಬೇಡ.....
ಎಷ್ಟೆ ಕಷ್ಟ ಬಂದರೂ ನಿನ್ನ ಜೊತೆಯಾಗಿ ನಿಲ್ಲುವೆನು...
ಒಂದು ವೇಳೆ ನಾ ನಿನ್ನ ಬಿಟ್ಟು ಹೊದರೆ ಅದು ನಿನು
ಮೋಸ ಮಾಡಿದರೆ ಮಾತ್ರ ಅಥವಾ ನನಗೆ ಈ ಭೂಮಿಯ ಋಣ ತೀರಿದ ಮೇಲೆ...

- mani_s_bhovi

13 Jul 2021, 04:10 pm

ಭೀಮ ಗೀತೆ

ಜೈ ಜೈ ಜೈ ಭೀಮ್
ಈ ನಾಡಿನ ಸೂರ್ಯ
ನನ್ನ ಎದೆಯ
ಸ್ವಾಭಿಮಾನದ ಜ್ಯೋತಿ
ಜೈ ಜೈ ಜೈ ಭೀಮ್

ಹಸಿದವರ ಕೈ ಹಿಡಿದು
ಮನುವಾದಿಗಳ
ಮೆಟ್ಟಿ ನಿಂತ ಒಂಟಿ ಸಲಗ
ಜೈ ಜೈ ಜೈ ಭೀಮ್

ನೊಂದವರಿಗೆ ಸೂರಾಗಿ
ದುಷ್ಟರಿಗೆ ಸಿಂಹ ಸ್ವಪ್ನವಾಗಿ ಕಾಡಿದ
ನನ್ನ ಒಡೆಯ
ಜೈ ಜೈ ಜೈ ಭೀಮ್

ಬಡವರಿಗೆ ಬಂಧುವಾಗಿ
ಮನುವಾದಿಗಳಿಗೆ ಶತ್ರುವಾಗಿ
ಹೋರಾಡಿದ ಧೀರ
ಜೈ ಜೈ ಜೈ ಭೀಮ್

ಮನುವಾದಿಗಳ
ಸೊಕ್ಕು ಅಡಗಿಸಿ
ದಿನ ದಲಿತರ ಉಸಿರಾದ
ಭಾರತ ರತ್ನ ಬಾಬಾಸಾಹೇಬ
ಜೈ ಜೈ ಜೈ ಭೀಮ್

- ರಾಜು ಹಾಸನ

12 Jul 2021, 12:02 am