Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಚಿಂತೆ ಏಕೆ

ಎಲ್ಲೆಯನ್ನು ಮೀರಿ "ಅಲ್ಲ"ನೇನಿಸಿಕೋಳುವುದೇಕೆ
ಇಲ್ಲ ಎನ್ನುವ ಚಿಂತೆಲಿ "ಗೊಲ್ಲ"ನಾಗುವೆಯಾಕೆ?

ವಿಶ್ವವನ್ನೇ ಗೆದ್ದ ಅಲೆಕ್ಸಾಂಡರ್ ಮಣ್ಣಗಿದಾನೆ
ಲೋಕವನ್ನೇ ಹೆದರಿಸಿದ ಲಾಡೆನ್ ಕರಕಲಾಗಿದನೆ
ಖಂಡವನ್ನೇ ದಂಡೆತ್ತಿದ ಖಿಲ್ಜಿ ಸೋತು ಸುಣ್ಣವಾದ
ಜಗತ್ತನ್ನೇ ನಿಬ್ಬೆರಗಾಗಿಸಿದ ಹಿಟ್ಲರ್ ನೇಣಿಗೇರಿದ

ಹಸಿರಿನಿಂದ ಕಂಗೊಳಿಸುವ ಎಲೆಗಳು ಒಣಗ್ತವೆ
ನುಣ್ಣಗೆ ಬಾಚಿದ ಕೂದಲುಗಳು ಉದರತವೆ
ಆಡಂಬರಡಿ ಮೆರೆದವ ಆಸ್ಪತ್ರೆ ಸೇರ್ತಿದಾನೆ
ಮೈಮಾಟದಿ ರಂಬೆಯಾದವಳೂ ಕನ್ನಡಿ ಹಿಡಿತಾಳೆ

ಧಮ್ ಇದೆ ಎಂದವನು ಟೊಳ್ಳು ಬಂಬ್ ಆಗ್ತಿದ್ದಾನೆ
ತಾಕತ್ ತೊಳಲ್ಲಿದೆ ಅಂದವನು ಹುಂಬ ಆಗ್ತಿದ್ದಾನೆ
ನೋಡಿಕೊಳ್ತಿನಿ ನಿಂನೆಂದವನು ಸುಂದ ಆಗ್ತಿದಾನೆ
ಸಿಗ್ತಿಯಾ ನೀನು ಎಂದವನು ಚೊಂಬು ಆಗ್ತಿದಾನೆ

ಅಕ್ಕರೆಯ ಮಾತಿನಲ್ಲಿ ಸಕ್ಕರೆಯ ಕೊಟ್ಟು
ಅಕ್ಕ-ಪಕ್ಕದವರನು ಬಿಕ್ಕದಂತೆ ಇಟ್ಟು
ನೆತ್ತಿಯ ಕೊಂಬನು ಬಿಂಬದಿ ಹೊತ್ತಿ
ಬಿದ್ದೋಗುವ ಮುನ್ನ ಇದ್ದನೆಂದಿನಿಸಿಕೊ!!!

ಸುಗ್ಗಿ..







- ಆರ್ ಎಸ್ ಸುಗ್ಗಿ.

27 Jun 2021, 09:54 pm

ಬದುಕು

ಆಗೆಲ್ಲಾ ಇರಲಿಲ್ಲ ಚಿಂತೆ..!!
ದೊಡ್ಡವರು ಆದಂತೆಲ್ಲಾ ಮಾಡಲು ಕಂತೆ ಕಂತೆ..!!
ದುಡಿಯುತ್ತಿರುವರು ಎಲ್ಲರು ಕತ್ತೆಯಂತೆ..!!
ಸಮಯವು ಮುನ್ನುಗ್ಗುತ್ತಿರಲು ಜಿಂಕೆಯಂತೆ..!!
ಜೀವನದ ಸ್ವಾದ ಸವಿಯದಂತೆ..!!
ವಯಸ್ಸಾದಂತೆ ನುಂಗುವರು ಬಿಪಿ ಸುಗರ್ ಮಾತ್ರೆ ಕಂತೆ ಕಂತೆ!!
ಇದು ಒಂದು ಬದುಕಂತೆ..?

- Harish Gowda

25 Jun 2021, 09:04 pm

ಸಿರಿ ರಕ್ಷೆ

ಹಕ್ಕಿಗಳ ಕೂಟದಲ್ಲಿ ನಾ ಮೈಮರೆತು ಕುಳಿತಿರಲು ಹಸಿರೆಲೆಯ ಮೇಲಿಂದ ಇಬ್ಬನಿಯ ಹನಿಯೊಂದು ನನ್ನ ಕೈಮೇಲೆ ಇಳಿದಿರಲು ನನ್ನ ಮನದ ಪರದೆ ಸರಿಸಿ ಹೃದಯ ಹುಡುಕಿತು ನಿಮ್ಮ ತೇಜಸ್ವಿ ಅಂತ ಮನವ ಸಿಗಲಿಲ್ಲ ಅಂದು ನೀವು ನನಗೆ ತಿಳಿಯಲಿಲ್ಲ ನಾ ಯಾರೆಂದು ನಿಮಗೆ ಶ್ರೀ ರಕ್ಷೆ ದಿನದಂದು ಪ್ರಣತಿಯ ಹಿಡಿದು ನಾ ಕಾಯಿ ದಿರಲು ಹೂವಂತ ಮನದ ವನು ಸಜ್ಜನಿಕೆ ಗುಣದವನು ಅಣ್ಣ ಎದುರಲ್ಲಿ ನಿಂತಿರಲು ಆರತಿಯ ಬೆಳಗಿದೆ ನೋ ಸಿಹಿ ತುತ್ತ ನೀಡಿದೆನು ಅಣ್ಣ ನನ್ನ ಶ್ವಾಸ ದಲ್ಲಿ ಉಸಿರಾಗಿ ನೆಲೆಸೆಂದು ಬೇಡಿದೆನು ಮನಸಿನ ಪ್ರವಾಹದ ಅಲೆಗಳ ದಾಟಿ ಶುದ್ಧ ಪ್ರೇಮದ ಹೃದಯ ತಂತಿಯ ಮೀಟಿ ರವಿಯ ಕಿರಣದ ಕಾಂತಿ ಅಣ್ಣನಲ್ಲಿ ಇರಲು ತಂಗಿಯ ಹೃದಯದ ನೆನಪು ಅದರೊಳಗೆ ಬೆಳಗುತಿರ ಲೂ ಅಮ್ಮ ಹಾರೈಸಿದರು ನಮಗೆ ವಾತ್ಸಲ್ಯಕ್ಕೆ ಸಸಿಯಾಗಿ ಪ್ರಶಂಸೆಗೆ ಹೆಸರಾಗಿ ಯುಗವು ಸ್ಮರಿಸಲಿ ನಿಮ್ಮ ತವರಿನ ಸ್ಪೂರ್ತಿಯಾಗಿ.

Download Kannada Kavana app : https://goo.gl/9ZnKGJ

- nagamani Kanaka

24 Jun 2021, 08:16 pm

ದುಡ್ಡು

ದುಡಿಯುವವನಿಗೆ
ದುಡಿದು ಬದುಕುವ ಚಿಂತೆ
ದುಡಿದು ತಿನ್ನುವ ಚಿಂತೆಯಾದರೆ
ದುಡ್ಡು ಇದ್ದವನಿಗೆ ದುಡಿಮೆಯ
ಚಿಂತೆಯಿಲ್ಲ ದುಡ್ಡು ಗಳಿಸಿ
ಉಳಿಸಿ ಸಾಯುವ ಚಿಂತೆ

- ರಾಜು ಹಾಸನ

23 Jun 2021, 12:16 pm

ನನ್ನವಳು

ಪ್ರೀತಿ ಕೊಟ್ಟ ಗೆಳತಿ
ವಿಷವಾ ಕೊಟ್ಟರು
ಕುಡಿದು ಮಲಗಬಹುದು
ಕಣ್ಣ್ ಮುಚ್ಚಿ
ಆರಡಿ ಮೂರಡಿ
ಗುಂಡಿಯೋಳಗೆ ಕನಸು ಕಾಣುತ್ತಾ
ಪ್ರೀತಿ ತುಂಬಿದ ಎದೆಗೆ
ಚೂರಿ ಚುಚ್ಚಿದರು
ತೆಡೆದುಕೊಳ್ಳಬಹುದು
ಎದೆಯ ಮೇಲಿನ
ಗಾಯದ ನೋವು ಆದರೆ
ಪ್ರೀತಿ ಪ್ರೇಮದ ರೆಕ್ಕೆ ಕಟ್ಟಿ
ಆಗಸದಲ್ಲಿ ಹಾರಾಡಿ
ಕುಣಿದು ಕುಪ್ಪಳಿಸಿದ
ಮನಸು ಹೃದಯದ
ನೋವು ತಡೆದುಕೊಳ್ಳುವುದು
ಬಹಳ ಕಷ್ಟ

- ರಾಜು ಹಾಸನ

22 Jun 2021, 09:56 pm

ಯೋಚನೆ

ಅವರು ಹಾಂಗೇ
ಇವರು ಹಿಂಗೇ ಅಂತಾ
ಯೋಚಿಸುವ ಬದಲು
ನಾವು ಹೇಂಗೆ ಅಂತಾ
ಆಲೋಚಿಸಿದರೆ
ಸಾಗುವುದು
ನಮ್ಮ ಜೀವನ
ಮುಂದೆ ಮುಂದೆ
ಇಲ್ಲದಿದ್ದರೆ
ನಿಂತ ನೀರಿನಂತೆ
ನಮ್ಮ ಜೀವನ
ಮುಗಿದು ಹೋಗುವುದು

- ರಾಜು ಹಾಸನ

21 Jun 2021, 09:58 pm

ನೀನು ನನ್ನ ಅಮ್ಮ
ನಿತ್ಯವು ಕೊಡುವೆ ಉಮ್ಮ
ಹೊಡೆದು ಓಡಿಸುವೆ ಗುಮ್ಮ
ನೀ ನನ್ನ ಪ್ರೀತಿಯ ಅಮ್ಮ
ನಿನ್ನ ಕೈ ತುತ್ತು ಬೇಕಮ್ಮ
ಲಾಲಿ ಹಾಡು ಹೇಳಮ್ಮ
ಪ್ರೀತಿಯ ಮುತ್ತು ನೀಡಮ್ಮ
ನಿನ್ನ ಮಡಿಲಲ್ಲಿ ನಾ ಮಲಗ ಬೇಕಮ್ಮ
ನಿ ನಾ ಪೂಜಿಸೊ ದೇವಿಯಮ್ಮ
ನನ್ನೆ೦ದು ಕೈ ಹಿಡಿದು ನಡೆಸಮ್ಮ
ನೀನೆ ನನ್ನ ಗುರುವಮ್ಮ
ನಿ ನನ್ನ ಹಡೆದ ಅಮ್ಮ

ಆಮ್ಮ ನನ್ನ ಪ್ರೀತಿಯ ಅಮ್ಮ ಈ ಕವನ ಜಗತ್ತಿನ ಎಲ್ಲ ಅಮ್ಮ೦ದಿರಿಗಾಗಿ ಐ ಲವ್ ಯು ಅಮ್ಮ

- Manju Rayanna

19 Jun 2021, 10:54 pm

ರಕ್ತದಾನ

ಬಳಲಿದ ದೇಹಕ್ಕೆ ನೀರಾಗಿ ನಗುವೇ ಚಿಗುರಿದ ನರಗಳ ಕುಶಲದಲಿ
ಅಳಿವುದೆ ನನ್ನದು ಹರಸಿದ ಜೀವಕ್ಕೆ ಚೇತನ ತುಂಬುವ ಅವಕಾಶದಲ್ಲಈ?
ನೆತ್ತರರಿಸುವ ನೇಪದಲಿ ಸಿಗುವುದು ನನಗೆ
ಸಣ್ಣ ಸೇವೆಯ ಭಾಗ್ಯ
ನನ್ನ ರಕ್ತವ ಪಡೆದ ಜೀವಕ್ಕೆ ಲಭಿಸುವುದು
ಲೋಕದಿ ಬದುಕುವ ಆರೋಗ್ಯ
ಹೃದಯ ಬಡಿತದಿ ನದಿಯಂತೆ ಹರಿಯುವ ನನ್ನ ರಕ್ತ
ಉಸಿರನುಳಿಸುವ ದೇಹಕ್ಕೆ ಕಣದಲ್ಲಿ ತೃಣವಾಗಿ
ನೆರವಾಗುವ ತೀರ್ಥ.
ಹತಾಶೆಯದಿ ನರಳಿ ನೊಂದಿರುವ ಜೀವ
ಕಣ್ಣಲ್ಲೇ ತೋರಿತ್ತು ನನಗೆ ಕೃತಜ್ಞತೆಯ ಭಾವ.
ಪುನರ್ಜೀವ ಪಡೆಯುವ ರಕ್ತದ ಹನಿಯ
ದಾನ ವಿತರೆ ಮನುಕುಲಕ್ಕೆ
ನಾನೆಂಥ ಧನ್ಯ!
ಸಾರ್ಥಕ ಬದುಕಿನ ಪಯಣಕೆ ಇದುವೇ ಅನನ್ಯ.

- nagamani Kanaka

14 Jun 2021, 11:31 pm

ಹನಿ ಮುತ್ತು

೧.ನಡುವಳಿಕೆ ಆಚಾರ
ತಿಳುವಳಿಕೆ ವಿಚಾರ
ಇವೇ ಬದುಕಿಗೆ ಉಪಚಾರ

೨.ಚಳಿ
ಮಳಿ
ಬೇಸಿಗೆ ನಿಸರ್ಗದ ಬಳುವಳಿ

೩.ಯೌವ್ವನ
ಸಂವಹನ
ಎರಡೂ ಇದ್ದರೆ ಜೀವನ
೪.ನಾನು ಎನ್ನುವುದು ಬೇಡ
ನಾವು ಎಂದು ನೋಡ
ನಾವೆಲ್ಲರೂ ಒಂದು ನೋಡ

೫.ಸಾಧು ಸಂತರ ಅನುಭಾವ
ಹಿರಿಯರ ಅನುಭವ
ಅರಿತು ಬಾಳಿದರೆ ಬಾಳು ಚಂದಾವ
- ಮಗು ಪಾಟೀಲ
ಕವಿಗಳು ರಾಯಬಾಗ
೧೩.೦೬.೨೦೨೧



- Mahaveer G Patil

13 Jun 2021, 07:02 am

ಹನಿಗವನಗಳು

೧.ಏಳು ಎದ್ದೇಳು
ನಿನ್ನ ಮಡದಿ ಮಲಗಿಹಳು
ರಾತ್ರೆಯ ಪಾತ್ರೆಗಳನು ತಿಕ್ಕಲು ಇಟ್ಟಿಹಳು
೨.ನನ್ನ ಹೆಂಡತಿ
ಬಾಳ ಸಂಗಾತಿ
ಇದೇ ದೊಡ್ಡ ಸಂಗತಿ
೩.ಮಾಡಬೇಡ ಕೋಪ
ಆಗುತಿದೆ ತಾಪ
ಕೊಟ್ಟು ಬಿಡುವೆ ಶಾಪ
೪.ಮನೆಯಲ್ಲೇ ಇರೋಣ
ಮಾಸ್ಕ ಧರಿಸೋಣ
ಕೊರೋನಾ ಓಡಿಸೋಣ
೫.ಆ ವರ್ಷ ಪರೀಕ್ಷೆ ಬರೆದೆ ನಪಾಸ
ಈ ವರ್ಷ ಓದಲೇ ಇಲ್ಲ ಪಾಸ್
ಮುಂದಿನ ವರ್ಷ ಬೇಡವೇ ಬೇಡ ಪಾಸ್
ನಪಾಸ್
- ಮಗು ಪಾಟೀಲ
ಕವಿಗಳು ರಾಯಬಾಗ
೧೩.೦೬.೨೦೨೧

- Mahaveer G Patil

13 Jun 2021, 05:22 am