Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ರಕ್ತದಾನ

ಬಳಲಿದ ದೇಹಕ್ಕೆ ನೀರಾಗಿ ನಗುವೇ ಚಿಗುರಿದ ನರಗಳ ಕುಶಲದಲಿ
ಅಳಿವುದೆ ನನ್ನದು ಹರಸಿದ ಜೀವಕ್ಕೆ ಚೇತನ ತುಂಬುವ ಅವಕಾಶದಲ್ಲಈ?
ನೆತ್ತರರಿಸುವ ನೇಪದಲಿ ಸಿಗುವುದು ನನಗೆ
ಸಣ್ಣ ಸೇವೆಯ ಭಾಗ್ಯ
ನನ್ನ ರಕ್ತವ ಪಡೆದ ಜೀವಕ್ಕೆ ಲಭಿಸುವುದು
ಲೋಕದಿ ಬದುಕುವ ಆರೋಗ್ಯ
ಹೃದಯ ಬಡಿತದಿ ನದಿಯಂತೆ ಹರಿಯುವ ನನ್ನ ರಕ್ತ
ಉಸಿರನುಳಿಸುವ ದೇಹಕ್ಕೆ ಕಣದಲ್ಲಿ ತೃಣವಾಗಿ
ನೆರವಾಗುವ ತೀರ್ಥ.
ಹತಾಶೆಯದಿ ನರಳಿ ನೊಂದಿರುವ ಜೀವ
ಕಣ್ಣಲ್ಲೇ ತೋರಿತ್ತು ನನಗೆ ಕೃತಜ್ಞತೆಯ ಭಾವ.
ಪುನರ್ಜೀವ ಪಡೆಯುವ ರಕ್ತದ ಹನಿಯ
ದಾನ ವಿತರೆ ಮನುಕುಲಕ್ಕೆ
ನಾನೆಂಥ ಧನ್ಯ!
ಸಾರ್ಥಕ ಬದುಕಿನ ಪಯಣಕೆ ಇದುವೇ ಅನನ್ಯ.

- nagamani Kanaka

14 Jun 2021, 11:31 pm

ಹನಿ ಮುತ್ತು

೧.ನಡುವಳಿಕೆ ಆಚಾರ
ತಿಳುವಳಿಕೆ ವಿಚಾರ
ಇವೇ ಬದುಕಿಗೆ ಉಪಚಾರ

೨.ಚಳಿ
ಮಳಿ
ಬೇಸಿಗೆ ನಿಸರ್ಗದ ಬಳುವಳಿ

೩.ಯೌವ್ವನ
ಸಂವಹನ
ಎರಡೂ ಇದ್ದರೆ ಜೀವನ
೪.ನಾನು ಎನ್ನುವುದು ಬೇಡ
ನಾವು ಎಂದು ನೋಡ
ನಾವೆಲ್ಲರೂ ಒಂದು ನೋಡ

೫.ಸಾಧು ಸಂತರ ಅನುಭಾವ
ಹಿರಿಯರ ಅನುಭವ
ಅರಿತು ಬಾಳಿದರೆ ಬಾಳು ಚಂದಾವ
- ಮಗು ಪಾಟೀಲ
ಕವಿಗಳು ರಾಯಬಾಗ
೧೩.೦೬.೨೦೨೧



- Mahaveer G Patil

13 Jun 2021, 07:02 am

ಹನಿಗವನಗಳು

೧.ಏಳು ಎದ್ದೇಳು
ನಿನ್ನ ಮಡದಿ ಮಲಗಿಹಳು
ರಾತ್ರೆಯ ಪಾತ್ರೆಗಳನು ತಿಕ್ಕಲು ಇಟ್ಟಿಹಳು
೨.ನನ್ನ ಹೆಂಡತಿ
ಬಾಳ ಸಂಗಾತಿ
ಇದೇ ದೊಡ್ಡ ಸಂಗತಿ
೩.ಮಾಡಬೇಡ ಕೋಪ
ಆಗುತಿದೆ ತಾಪ
ಕೊಟ್ಟು ಬಿಡುವೆ ಶಾಪ
೪.ಮನೆಯಲ್ಲೇ ಇರೋಣ
ಮಾಸ್ಕ ಧರಿಸೋಣ
ಕೊರೋನಾ ಓಡಿಸೋಣ
೫.ಆ ವರ್ಷ ಪರೀಕ್ಷೆ ಬರೆದೆ ನಪಾಸ
ಈ ವರ್ಷ ಓದಲೇ ಇಲ್ಲ ಪಾಸ್
ಮುಂದಿನ ವರ್ಷ ಬೇಡವೇ ಬೇಡ ಪಾಸ್
ನಪಾಸ್
- ಮಗು ಪಾಟೀಲ
ಕವಿಗಳು ರಾಯಬಾಗ
೧೩.೦೬.೨೦೨೧

- Mahaveer G Patil

13 Jun 2021, 05:22 am

ಹನಿಗವನಗಳು

೧.ಸೊಸೆ ಹೋಗಿದ್ದಳು ಸಂತೆಗೆ
ಗೊತ್ತಿಲ್ಲ ಅವಳ ಅತ್ತೆಗೆ
ಇದನ್ನೇ ಹೇಳೊ ಮೆತ್ತಗೆ

೨.ನನ್ನವಳು
ನನ್ನ ಕೈ ಹಿಡಿದವಳು
ನನ್ನ ಕಾಲು ಮುರಿದವಳು

೩.ನನ್ನವಳ ಹಲ್ಲು
ಉದ್ದನೆಯ ಕೋರೆ ಹಲ್ಲು
ಬೇಡ ಬೆಲ್ಲ ಒಡೆಯಲು ಕಲ್ಲು

೪.ನೀನು ಹಾಡಿದರೆ ಸರಿಗಮ
ನೀನು ಅಡುಗೆ ಮಾಡಿದರೆ ಗಮಗಮ
ನೀನು ನಡೆದರೆ ನೆಲ ಸಮ ಸಮ

- Mahaveer G Patil

13 Jun 2021, 04:53 am

ಮಳೆ ಆಗಮನ

ಸಾಕಷ್ಟು ದಿನದ ಮೇಲೆ ಬಂದ ಮಳೆ
ಎಲ್ಲರ ಮುಖದಲ್ಲೂ ತಂದಿತು ಹೊಸ ಕಳೆ
ಗಿಡ-ಮರಗಳಿಗೆ ಮಳೆ ಹನಿಯ ಚುಂಬನ
ಜೀವ-ಜಂತುಗಳ ಮನದಲ್ಲೇನೋ ಹೊಸ ಕಂಪನ

ಗರಿಬಿಚ್ಚಿ ನರ್ತಿಸಿದವು ನವಿಲುಗಳು
ಎಲ್ಲರಲ್ಲೂ ಉದಯಿಸಿದವು ಹೊಸ ಕನಸುಗಳು
ಸಸ್ಯ ಪ್ರಾಣಿ ಕುಲಕ್ಕೆ ಈಗ ಬಂದಿತು ಜೀವ
ಸುಖದಿ ಮರೆತವು ಎಲ್ಲ ನೋವ

ಮಳೆ ಹನಿ ಬಿದ್ದ ಮಣ್ಣಿನ ವಾಸನೆ
ಆಹಾ !ಎಂತಾ ಚಂದ ಅದರ ಸುವಾಸನೆ
ಇದೀಗ ಆರಂಭ ಭೂಮಿಯ ಮೇಲೆ ಚಿಗುರು
ರೈತರ ಜೀವನ ಸುಖದಿ ಶುರು

ಅಪರೂಪದ ಮಳೆಯ ಆಗಮನ
ಜೀವ-ಜಂತುಗಳ ಮನದಲ್ಲಿ ಹೊಸ ಚೇತನ
ಎಲ್ಲರಲ್ಲೂ ಸುಖ-ಸಂತಸದ ಉದಯ
ಮಳೆ ಬಂದ ಈ ಸಮಯ

- madhu

04 Jun 2021, 01:42 pm

ಮಳೆ

ಮಳೆ
ಮಳೆ ಇದ್ದರೆ ನಿಸರ್ಗದ ಕಳೆ
ಮಳೆಯಾದರೆ ಧರೆ ತಂಪು
ಎಲ್ಲೆಲ್ಲಿಯೂ ಹಸುರಿನ ಸೋಂಪು
ಮಳೆಯಾದರೆ ಬೆಳೆ ರೈತನಲ್ಲಿ ತುಂಬುವುದು ಜೀವ ಕಳೆ
ಮಳೆಯಾದರೆ ಕಾಡು ಮೇಡು
ನೀಗುವುದು ಜೀವಿಗಳ ಬೇಕು ಬೇಡು
ಮಳೆಯೇ ಮೂಲ ಜಲ ರಾಶಿಗೆ
ಜಲವೇ ಜೀವ ಜೀವ ರಾಶಿಗೆ

- Mahaveer G Patil

30 May 2021, 03:31 pm

ನಾನಾದೆ ಕವಿ

ನಾನಾದೆ ಕವಿ
ನನಗೆ ಕವಿತೆ ರಚನೆಯ ಸವಿ
ನಿತ್ಯ ಜೀವನದ ಘಟನೆಗಳು
ನನ್ನಯ ಕವಿತೆಯ ಸಾಲುಗಳು
ವೇದ ಸಮಾನದ ಗಾದೆ
ಅರಿತರೆ ಜೀವನಕ್ಕಿಲ್ಲ ಬಾದೆ
ಹಿರಿಯರ ಅನುಭವ
ಬದುಕಿನ ಅನುಭಾವ
ಪ್ರಕೃತಿಯ ಪ್ರತಿ ವಸ್ತು
ಬರಹಕ್ಕೆ ಮಸ್ತು
ಖಗ ಮ್ರಗಗಳ ಒಡನಾಟ
ಕವಿಗೆ ಸಂತಸದ ಆಟ
ಬಾನಂಗಳದ ಸೂರ್ಯ ಚಂದ್ರರು
ಕವಿಯ ನಿಜವಾದ ಗೆಳೆಯರು
ಮಿನುಗುವ ನಕ್ಷತ್ರಗಳು
ಮಿರುಗುವ ಆಕಾಶ ಕಾಯಗಳು
ಕವಿ ಕಾರಣದ ಮೂಲಗಳು
ಬೆಳ್ಳಿ ಮೋಡಗಳ ಕುಣಿತ
ಕಾವ್ಯತೆಯ ಹೊಳೆತ
ಸುರಿವ ಮಳೆ
ಕಾವ್ಯದ ಬೆಳೆ
ಹರಿವ ನೀರ ಝರಿ
ಕವಿಯ ಕಾವ್ಯ ಲಹರಿ
ದೂರದ ಗುಡ್ಡ ಬೆಟ್ಟ
ಕವಿಗೆ ಸಮೀಪದ ಅಟ್ಟ
ನದಿ ಕಣಿವೆಗಳ ಸಂಗಮ
ಕವಿತೆಯ ಸರಿಗಮ
ಜಲರಾಶಿಯ ಸಾಗರವೋ
ಕವಿ ಹ್ರದಯದ ಸೆಳೆತವೋ
ನಿಸರ್ಗದ ಪ್ರತಿ ಗೋಚರವೂ
ಕವಿ ಪ್ರಿಯನಿಗೆ ರುಚಿಕರವೋ!

- Mahaveer G Patil

30 May 2021, 03:04 pm

ಕೊರೋನಾ

ಕರುಣೆ ಇಲ್ಲದ ಕೊರೋನಾ
ಮಮತೆ ಇಲ್ಲದ ಮರಣ ಮುಗಿದಾಯಿತು ಕೊರೋನಾದ ಮೊದಲ‌‌‌‌‌ ಅಲೆ
ಶುರುವಾಯಿತು ಕೊರೋನಾದ ಎರಡನೇ ಅಲೆ
ಬಂದರೆ ಮೂರನೇ ಅಲೆ
ನಮಗಿಲ್ಲ ಇಲ್ಲಿ ನೆಲೆ
ಬೀಸುತಿದೆ ಸಾವಿನ ಬಲೆ
ವಿಸ್ತರಿಸುತಿದೆ ಭಯದ ಅಲೆ
ಎಲ್ಲೆಂದರಲ್ಲಿ ಸಾವು ನೋವು
ಮರೆಯಾಗುತಿದೆ ನಗು ನಲಿವು
ಯಾರೋ ಮಾಡಿದ ತಪ್ಪಿಗೆ
ಇನ್ಯಾರೋ ಏರುತಿರುವರು ಸಿದಿಗೆ
ಕೇಳಲಾಗುತ್ತಿಲ್ಲ ಸಾವಿನ ಸುದ್ದಿ
ಜನ ಕಲಿಯುತ್ತಿಲ್ಲ ಬುದ್ದಿ
ಮತ್ತೆ ಜನತೆಯ ಓಡಾಟ
ಸಾವಿನೊಂದಿಗಿನ ಹುಡುಗಾಟ
ಬೇಡ ವಿನಾಕಾರಣ ಜನ ಸಂಚಾರ
ಸಿಗುತ್ತಿಲ್ಲ ಸರಿಯಾದ ಉಪಚಾರ
ಸಾವಿಗೆ ಸಾವಿರಾರು ನೆಪಗಳು
ಕೊರೋನಾಗೆ ನೂರೆಂಟು ರೂಪಗಳು
ಕೊರೋನಾಗೆ ಸಣ್ಣವರೂ ಸಾಕಾಗುತ್ತಿಲ್ಲ
ದೊಡ್ಡವರೂ ಸಾಕಾಗುತ್ತಿಲ್ಲ
ಹಿರಿಯರಿರಲಿ ಕಿರಿಯರಿರಲಿ
ಎಲ್ಲರು ಮನೆಯಲ್ಲೇ ಇರಲಿ
ಮನೆಯೇ ಮಂತ್ರಾಲಯ
ಮನೆಯೇ ಅಲ್ಲವೇ ಔಷಧಾಲಯ
ಗುರು ಮುನಿದರೆ ಹರ ಕಾಯ್ವನು
ಹರ ಮುನಿದರೆ ಯಾವನು ಕಾಯ್ವನು
ಮಾನವ ಜನ್ಮ ದೊಡ್ಡದು
ಅದನು ಹಾಳು ಮಾಡಿಕೊಳ್ಳೋದು ದೊಡ್ಡ ತಪ್ಪದು
ಅರ್ಥ ಮಾಡಿಕೊಂಡರೆ ಚೆಂದಾದ ಬದುಕು
ಇಲ್ಲವಾದರೆ ಕ್ಷಮೆ ಇಲ್ಲ ಯಾವುದಕ್ಕು

ರಚನೆ-
ಮಗು ಪಾಟೀಲ
ಕವಿಗಳು,ರಾಯಬಾಗ
೩೦.೦೫.೨೦೨೧

- Mahaveer G Patil

30 May 2021, 02:03 pm

ಯಾವುದು ಅಸಲಿ ಬಣ್ಣ ??

ಸೃಷ್ಟಿಕರ್ತ ಬ್ರಹ್ಮನೇ ಹಚ್ಚಿರುವ ಬಣ್ಣ,
ಇಲ್ಲ ಪೋಷಕರ ತದೃಪಿಯೇ ಈ ಬಣ್ಣ.., ಕಣ್ ಬಿಟ್ಟ ಕ್ಷಣಕ್ಕೆ ಕಾಣುವ ಸ್ವಾರ್ಥ ಬಣ್ಣ,
ಕಣ್ ಮುಚ್ಚಿದಾಗ ಕಾಣುವ ನಿಸ್ವಾರ್ಥ ಬಣ್ಣ..,
ತಿಳಿಯದೇ ಹೋಗಿದೆ ಯಾವುದು ಅಸಲಿ ಬಣ್ಣ??

ಬೆಳೆಯುತ್ತಾ ತಂದೆ-ತಾಯಿ ತುಂಬುವ ಪ್ರೀತಿಗೊಂದು ಬಣ್ಣ..,
ಗೆಳೆಯರೊಂದಿಗೆ ಬೆರೆತಾಗ ಮೂಡುವ ಬಾವನಗೆ ಇನ್ನೊಂದು ಬಣ್ಣ..,
ತಿಳಿಯದೇ ಹೋಗಿದೆ ಯಾವುದು ಅಸಲಿ ಬಣ್ಣ??

ಸಮಾಜಕ್ಕೆ ನಿನ್ನ ಪ್ರತಿಯೊಂದು ಪ್ರಗತಿಯಲ್ಲಿ ಎಲ್ಲರಿಗೂ ಕಾಣುವ ಬಣ್ಣ,
ಸಮಾಜದ ಕಟ್ಟಪಾಡುಗಳಿಗೆ
ನಿನ್ನೊಳಗೆ ಅವಿತಿದೆ ಮತ್ತೊಂದು ಬಣ್ಣ..,
ತಿಳಿಯದೇ ಹೋಗಿದೆ ಯಾವುದು ಅಸಲಿ ಬಣ್ಣ??

ಮುಗ್ದ ಮಗುವಿನ ಮನಸಿನಲ್ಲಿ ಪ್ರೀತಿ ಪ್ರೇಮ,ಸಹನೆ,ತಾಳ್ಮೆ ಎಂಬ ಕನಸಿನ ಕಲ್ಪನೆಯಲ್ಲಿ ಕಳೆವ ಜೀವನದಲ್ಲಿದೆ ಒಂದು ಬಣ್ಣ..,
ಸುತ್ತ ಮುತ್ತಲಿನ ಪರಿಸರದಲ್ಲಿ ಕಾಮ ಕ್ರೋಧ, ಮದ,ಮತ್ಸರ ಎಂಬ ಉಸಿರು ಕಟ್ಟಿಸುವ ಗಾಳಿಯಲ್ಲಿ ಜೀವನದಲ್ಲಿದೆ ಇನ್ನೊಂದು ಬಣ್ಣ..,
ತಿಳಿಯದೇ ಹೋಗಿದೆ ಯಾವುದು ಅಸಲಿ ಬಣ್ಣ??

ಮೂರೇ ಮೂರು ದಿನಗಳ ಜೀವನ,
ಅರಿತು-ಬೆರೆತು ಕೂಡಿ ಬಾಳೋಣ..,
ಹುಟ್ಟುವಾಗ ಒಂದು ಬಣ್ಣ,
ಸಾಯುವಾಗ ಇನ್ನೊಂದು ಬಣ್ಣ..,
ಹುಟ್ಟು- ಸಾವುಗಳ ನಡುವೆ ಎಲ್ಲರಿಗೂ ಕಾಡುವ ಪ್ರಶ್ನೆ ಯಾವುದು ನಿಜವಾದ ಬಣ್ಣ???
- ದರ್ಶನ್ ಶಶಿಧರ

- Darshan S

24 May 2021, 07:13 pm

ಕಣ್ಮರೆಯಾದೇ ನನ್ನ ಎದುರಲಿ

ನೂರು ಸಾವಿರಾರು ಜನರು ನನ್ನ ಮುಂದೆ ನಿಂತರು..,
ನಿನ್ನ ಜೊತೆ ಕಳೆದ ನಾಲ್ಕು ದಿನಗಳದೆ ಸದಾ ಮಂಪರು..,

ಹಸಿ ಮುನಿಸು ಮೂಗಿನ ತುದಿಯಲಿ,
ಮಗು ಮನಸು ತೊಳ ಬಂದಿಯಲಿ..,
ನೀ ಬರುವ ನಿತ್ಯದ ಹಾದಿಯಲಿ
ನವಿಲುಗಳು ಜೊತೆ ನಡೆಯಲಿ..,

ತಂಪಾದ ಗಾಳಿ ನನ್ನ ಜೊತೆಯಲಿ,
ನಿನ್ನದೇ ಕನವರಿಕೆಗಳು ತಲೆಯಲಿ..,
ಹಾಗೆಯೇ ನಾ ನಿನ್ನ ನೆನೆದು ನೀ..,
ಕಣ್ಮರೆಯಾದೇ ನನ್ನ ಎದುರಲಿ...,

- Darshan S

24 May 2021, 10:28 am