ಹುಡುಗಿಯರ ಹುಡುಕಿದ್ದು ಸಾಕಪ್ಪ ಸಾಕು..!!
ಬ್ರೋಕರ್ ಗಳಿಗೆ ಹಣಕೊಟ್ಟು ಹೆಕ್ಕುಟ್ಟೊಗಿದ್ದು ಸಾಕು..!!
ನಮಗಿರಬೇಕು ಸರಿಯಾದ ಬ್ಯಾಕ್ ಗ್ರೌಂಡು...!!
ಇಲ್ಲವೆ ಸುತ್ತಿಸ್ತಾರೆ ಊರ್ ತುಂಬಾ ರೌಂಡು...!!
ಇದ್ದರೆ ಸರ್ಕಾರಿ ಕೆಲಸ...!!
ಹುಡುಗಿಯರು ಅಂಕಲ್ ಗಳನ್ನು ಮದುವೆಯಾಗುತ್ತಾರೆ ಈ ದಿವಸ..,!!
ನಾವು ಆಡಿ ಬೆಳೆದಂತ ಅರಳಿಕಟ್ಟೆ..!!
ನೀ ಇದ್ದಾಗ ಪಶುಪಕ್ಷಿಗಳಿಗೆ ಆಶ್ರಯ ಕೊಟ್ಟೆ..!!
ಇಂದು ರಸ್ತೆ ಅಗಲಿಕರಣಕ್ಕೆ ನೀ ಧರೆಗುರಳಿ ಬಿಟ್ಡೆ..!!
ಅರಳಿಮರವೆ ನಿನ್ನ ನೋಡುತ್ತಿದ್ದರೆ ಹೊಡೆವುದು ನನ್ನ ಕಣ್ಣೀರ ಕಟ್ಟೆ..!!
ಅರಳಿಮರವಿಲ್ಲದೆ ನಮ್ಮೂರು ಬನಘಟ್ಟ...!!
ಬದಲಾಗಿದೆ ಈಗ ನಮ್ಮೂರಿನ ವೃತ್ತದ ಕಾಲಘಟ್ಟ...!!!
ಎದೆಯ ತುಂಬೆಲ್ಲ ಅವಳ ನಾದ.ದನಿ.ಮೋಸದ ನಗುವಿನ ಹಂಚಿನಲ್ಲಿ ಕಗ್ಗ ಕತ್ತಲೆ ಯ ವಿಷಕಾರಿ ಹಾವೊಂದು ಪಿಸುಗುಡುತ್ತಿತಂದು ಮೊದಲೆ ಎಚ್ವರಿಕ್ಕೆ ಇತ್ತು.....
ನನ್ನ ಪ್ರೀತಿಯ ಹೂವೆಂದು ಕೈಗೆತ್ತಿಕೊಂಡ ಹೂ ಹಿಂದೆ ವಿಷಕಾರಿ ಜೇನೊಂದು ಮುತ್ತು ಕೊಡುತ್ತೆಂದು ಭಾವಿಸಿಯೆ ಇರಲ್ಲಿಲ್ಲ....
ಕನಸ್ಸುಗಳ ಲೋಕದಲ್ಲಿ ಮರೆಯಾಗಿ ಮೌಢ್ಯದ ಒಳಗೆ ನಾನಗಿಯೇ ಜಾರಿ ಬೀಳುವೆನೆಂದು ಪರಿವಿಲ್ಲ ..ಮನವೇ ಪ್ರೀತಿಸಿ ಮನಸದೊಳಗೆ ಸ್ಮಶಾನವ ಕಟ್ಟಿ ಕೊರಗದಿರು ಹಳೆಯ ಪಾತ್ರೆ ಹಂಚಿನಂತೆ ಅಲಂಕಾರವಿಲ್ಲದಿದ್ದರೂ ಅಹಂಕಾರ ತೋರುವ ಹೆಣ್ಣನು ತೊರೆದು ....
ನನಗೂ ತಾಯಿ ಬೇಕು
ನನ್ನ ಎತ್ತಿ ಮುದ್ದಾಡುವ
ತಿಂಡಿ ತಿನ್ನಿಸಿ ಊಟ ನೀಡಿ
ನೀರು ಕುಡಿಸಿ ಸಂತೃಪ್ತಿ ಪಡುವ
ನನ್ನನ್ನು ನೋಡಿ ಆನಂದಿಸುವ ತಾಯಿ ಬೇಕು ಎನಿಸುತ್ತದೆ.
ನೀನಿಲ್ಲದ ಮೂರುದಶಕಗಳ
ಬದುಕು ಬರಡು ಎನಿಸುತ್ತಿದೆ
ಅಸಾಯಕತೆ, ಏಕಾಂಗಿತನಗಳ
ಸವಾಲುಗಳನ್ನು ಎದುರಿಸಿ
ಬದುಕು ಸಾಕೆನಿಸುತ್ತಿದೆ.
ನೀನಿಲ್ಲದ ಬದುಕಿನಲ್ಲಿ
ತಪ್ಪಿತಸ್ಥ ಎಂಬ ಭಾವದಲ್ಲಿ
ಬದುಕುತ್ತಿರುವೆ, ನೀನಿದ್ದರೆ ತಪ್ಪು ಮಾಡಿದಾಗ ಕಿವಿ ಹಿಂಡುತ್ತಿದ್ದೆ
ಸಲಹೆನೀಡಿ ಸಲುಹುತ್ತಿದ್ದೆ.
ನಮ್ಮನ್ನು ಏಕೆ ಬಿಟ್ಟು
ಹೋಗಿರುವೆ ಅಮ್ಮ,
ನೀ ಮಾಡಿದ ಬಿಸಿಯೂಟದ
ಕೈ ತುತ್ತು ತಿನ್ನುವಾಸೆ,
ನಿನ್ನ ಮಮತೆಯ ಮಡಿಲಲ್ಲಿ
ಮಲಗುವ ಆಸೆ,
ನನ್ನನ್ನು ಬರಸೆಳೆದು ಮುದ್ದಾಡಿದೊಡೆ ರೋಮಾಂಚನಗೊಳ್ಳುವ ಆಸೆ,
ನಿನ್ನ ಭಾವ ಬೆಸುಗೆಯ ಬಂಧನದಲ್ಲಿ ಕನಸು ಕಾಣುವ ಆಸೆ.
ನೀನು ಇಲ್ಲದಿದ್ದರೂ ನಿನ್ನ ಪರಿಶ್ರಮದ ಹೋರಾಟದ ಬದುಕಿಗೆ ಜಯ ತಂದುಕೊಟ್ಟವರು ನಾವು.
ನಿನ್ನ ಹೆಸರು ಉಳಿಸಿದವರು
ನಿನ್ನ ಕೀರ್ತಿ ಬೆಳೆಸಿದವರು,
ನೀ ಜೀವಂತವಾಗಿದ್ದರೆ ನಮ್ಮ ಜಯವ ನೋಡಿ ಖುಷಿ ಪಡುತ್ತಿದ್ದೆ
ಸಂಭ್ರಮದಿ ಸಡಗರಪಡುತ್ತಿದ್ದೆ.
ನನಗೂ ತಾಯಿ ಬೇಕೆನಿಸುತ್ತಿದೆ.
✍️✍️ಮಹೇಶ್... ಶಿಕ್ಷಕರು
ಕಾಲ್ ಎಳೆಯುತ್ತಿದೆ ಯವನವು
ಮನಸು ಕರುಗುವ ರೀತಿಯಲಿ
ಸುಮ್ ಸುಮ್ ನೇ ನಗುವುದು ಸುಮ್ ಸುಮ್ ನೇ ಅಳುವುದು
ಯಾರಬಳಿ ತಿಳಿಸಲಿ ಇದು ನನ್ನ ವ್ಯಥೆ ಉಂಟು
ಕೆರೆದು ಕೆರೆದು ಗಾಯವದಂತೆ ಕಿರಿಚುವುದು ಹೃದಯ
ನಾ ಕಂಡ ಕನಸಲ್ಲೆ ಮಾನಸಿಕ ಅಸ್ವಸ್ಥ ನಗಿರುವೆ
ಅವಳ ಮುಖದಲ್ಲಿ ನಾಚಿಕೆ
ಮರ ಸುತ್ತುವ ಆಸೆಯೂ ತಂದಿದೆ
ಬೆವರಿಳಿಸಿ ಬೆನ್ಮುರಿದು ನೆಂಗಡ್ಲೆ ಬೆಳೆದಂತೆ
ನನ್ನ ಪ್ರೀತಿಯ ಬೆಳೆಸಬೇಕೆಂಬ ಆಸೆಯೂ ಹೆಚ್ಚಿದೆ ಮನಸಲಿ
ಅವಳ ಮುಖದಲ್ಲಿ ಚಂದಿರನನ್ನು ಕಂಡು ನನ್ನ ಹೆದೆಯಲಿ ಅವಳ ಮಂದಿರವುಕಟ್ಟಿ ಪೂಜಿಸುವ ಸಂದರ್ಭ ನನ್ನದು
ಉಳಿಯುವುದೋ ಈ ಪ್ರೇಮ ಅಳಿಯುವುದೋ ಈಪ್ರೇಮ
ಮರಭೂಮಿಯಲ್ಲಿ ತಾವರೆಯ ಬಳ್ಳಿಯು ಚಿಗೂರಿರಲು
ಮನಸುಂಟು ಕನಸುಂಟು ಅದೇ ದಾರಿಯಲಿ ಚುಚ್ಚುವ ಮುಳುಂಟು
ಯಾರಿಗೂ ತಿಳಿಸದೆ ಕಾಣೆಯಾದಂತ್ತೆ ಮನಸು ಕಾಣೆಯಾಗಿರಲು...
ಎಲ್ಲೆಲ್ಲೂ ಕೊರೋಣ...!!
ಜೀವನ ನಡೆಸಲು ತುಂಬಾ ಕಠಿಣ...!!
ಪ್ರತಿದಿನವು ಸಾವಿರ ದಾಟುತ್ತಿದೆ ಮರಣ...!!
ಹೀಗೆ ಮುಂದುವರೆದರೆ ಕ್ರಮೇಣ..!!
ಇಂದಲ್ಲಾ ನಾಳೆ ನಮ್ಮದು ಹೋಗಬಹುದು ಪ್ರಾಣ..!!
ಅದಕ್ಕೆ ಯಾವಾಗಲೂ ಹಾಕಿರಿ ಮಾಸ್ಕು..!!
ಇಲ್ಲವೆ ನಮ್ಮ ಜೀವಕೆ ತುಂಬಾ ರಿಸ್ಕು..!!