Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

೧೦೦೦%

ಮೋಸ ಮಾಡುವ
ಜನಗಳ ನಂಬಿದರು
ದೇವರನ್ನ ನಂಬಬೇಡ
ಏಕೆಂದರೆ ಮೋಸ
ಮಾಡಿದವನು
ಒಂದಲ್ಲ ಒಂದು ದಿನ
ಸಿಗುತ್ತಾನೆ ಆದರೆ
ದೇವರು ಮಾತ್ರ
ಸತ್ತರು ಸಿಗೋದಿಲ್ಲ

- ರಾಜು ಹಾಸನ

22 Apr 2021, 10:25 pm

ನಂಬು

ನಾ ದೇವರನ್ನ
ನಂಬುವುದಿಲ್ಲ
ಜನರನ್ನ ನಂಬುವೇ
ಏಕೆಂದರೆ
ನಾ ಸತ್ತಾಗ ಬಂದು
ಹೊರುವುದು ದೆವರಲ್ಲ
ನಾಲ್ಕೇ ನಾಲ್ಕು
ಜನರು ಬಂಧು ಮಿತ್ರರು
********ರಾಜು ಹಾಸನ********

- ರಾಜು ಹಾಸನ

22 Apr 2021, 12:51 pm

ಬದಲಾಗಿರುವುದು ನೀಜಾನೆ!

ನೀವು ಹೇಳುತ್ತಿರುವುದು ನಿಜಾನೆ
ನಾನು ಬದಲಾಗಿದ್ದೇನೆ.
ಅದ್ಯಾರೋ ತೀರಿಹೋದರು ಮರಗುತ್ತಿದ್ದೆ
ಹೀಗೀಗಾ ಹೆಚ್ಚು ಮರೆಯುತ್ತಿದ್ದೇನೆ,
ಎಲ್ಲಾ ನಮ್ಮದು, ನಮ್ಮವರು ಎಂಬ ಭ್ರಮೇಲಿ ಬದುಕುತ್ತಿದ್ದೆ..
ಹೀಗಿಗಾ ಎಲ್ಲವೂ ಕ್ಷಣಿಕ ಅನ್ನೋ ಸತ್ತ್ಯವನ್ನು ಅರಿತಿದ್ದೇನೆ..

ನಾನು ಬದಲಾಗಿರೋದೂ ನಿಜಾನೆ!
ಹಾಗಾಗ ಮೂಡುತ್ತಿದ್ದ ನೋವಿನ ಕಂಬನಿಯನ್ನ..
ಮುಗುಳುನಗೆಯೊಂದಿಗೆ ಮರೆಮಾಚಿರುವೆ..
ನೋವನ್ಯಾರು ಕೇಳುವರು ಹೇಳಿ! ನಗುವಿದ್ದರೆ ಮುಖದಲ್ಲಿ ..

ಪರಿಚಿತವಾದರು ಅಪರಿಚಿತ
ನನ್ನದೇ ಇದ್ದರೂ ನನ್ನದಲ್ಲದ ಭಾವ..
ದಾರಿ ಗೊತ್ತಿದ್ದರೂ ನಕ್ಷೆಯ ಹುಡುಕಾಟ
ನನ್ನದೇ ಬದುಕು ನನ್ನದಲ್ಲದ ಪಯಣ
ಗುರಿಯಿದ್ದರೆ ಗುರು ಹುಡುಕುವ ಯತ್ನ
ಗುರು ಸಿಕ್ಕರೂ ಗುರಿಯನ್ನೆ ಬದಲಾಯಿಸುವ ಆತುರ
ಬದುಕಿನ ದಾಹಕ್ಕೆ ಮನಸ್ಸಿನ ಕುಣಿತಕ್ಕೆ
ಬೇಕೇನಿಸುವುದು ಬೇಡಗಳೆಲ್ಲವೂ
ಮರುಭೂಮಿಯಲ್ಲಿ ನೀರು ಇದ್ದಂತೆ/ಸಿಕ್ಕಂತೆ..
ಕಾಲಾ ಎಲ್ಲವನ್ನೂ ಎಲ್ಲರಿಗೂ ಕಲಿಸುತ್ತದೆ
ಕಾಯಬೇಕಷ್ಟೇ...

ಏನೇ ಹೇಳಿ
ನಾ ಬದಲಾಗಿರುವುದು ನಿಜಾನೆ!
ಇದು ನಿಮಗೂ ಗೊತ್ತು
ಯಾಕಂದ್ರೆ ಬದಲಾವಣೆಗೆ
ಕಾರಣ ನೀವೇ ತಾನೇ!..

- saahithi

19 Apr 2021, 09:56 pm

ಅಮ್ಮನ ನೋವು

ನನ್ನ ಅಮ್ಮ ಕೇಳಿದಳು
ಎಲ್ಲರ ನೋವು-ನಲಿವು,ಆಸೆಗಳನ್ನ
ಆದರೆ ಹೇಳಲಿಲ್ಲ ಯಾರಲ್ಲೂ
ತನ್ನ ಆಸೆ ನೋವುಗಳನ್ನ.

ಮನಸ್ಸಿನ ತುಂಬಾ ಇದ್ದರೂ ನೋವು,
ತೋರಿಸುವಳು ಮುಖದ ತುಂಬಾ ನಗು.
ತನ್ನ ಜೀವನವು ಆಗಿದೆ ಚಿಂದಿಬಟ್ಟೆ
ಅದನ್ನು ಲೆಕ್ಕಿಸದೆ ಹೊಲಿದು ಕೊಡುವಳು ನಮೂನೆಯ ಬಟ್ಟೆ.

ಅವಳು ಜೀವನದ ಪೆಡಲ್ಲನ್ನು ತುಳಿಯುತ್ತ,
ಸಾಗಿಸುತ್ತಿದ್ದಾಳೆ ಬದುಕನ್ನ,
ಊರುಳಿಸುತ್ತಿದ್ದಾಳೆ ಇತಿಹಾಸದ ಚಕ್ರವನ್ನ.

ಅಮ್ಮನನ್ನು ನಂಬಿ ಬದುಕುತ್ತಿರುವ ಮಕ್ಕಳು,
ಅವರನ್ನು ನೋಡಿ ನೋವನ್ನು ಮರೆತು ನಕ್ಕಳು.
ಆದರೆ ಆ ಮಕ್ಕಳ ಬಗ್ಗೆ ಹುಟ್ಟಿತು ಚಿಂತೆ
ಮುಂದೆ ಅವರ ಬದುಕು ಹೇಗೆ ನಾ ಸತ್ರೆ.

ಅಮ್ಮನೇ ಕುಟುಂಬದ ಕಣ್ಣು.
ಎಲ್ಲರಿಗೂ ದೊರೆಯುವ ಹಲಸಿನ ಹಣ್ಣು.
ಮರಭೂಮಿಯಲ್ಲು ಸಿಗುವ ಹಸಿರು ಮಣ್ಣು.

- saahithi

19 Apr 2021, 09:55 pm

ಮನಕ್ಕೊಂದು ಪತ್ರ

Hey ಹುಚ್ಚು ಮನವೇ
ಯಾಕಿಷ್ಟು ನೊಂದಿರುವೆ...
ನೀ ಆಸೆಪಟ್ಟಿದ್ದೆಲ್ಲ ಸಿಗೋದಿಲ್ಲ,
ಕಾಣೋ ಕನಸ್ಸುಗಳೆಲ್ಲ ನನಸಾಗೊಲ್ಲ,
ಅವನ ಕೈ ಮೀರಿ ಏನು ನಡೆಯೊಲ್ಲ.

ಈ ಬದುಕ ಪಯಣದಲ್ಲಿ,
ನೋವು-ನಲಿವು ಕಾಳಗದಲ್ಲಿ....
ಸೋಲೇನೋ- ಗೆಲುವೇನೋ,
ಆಸ್ತಿನೋ-ಪಾಸ್ತಿನೋ,
ನೆಮ್ಮದಿ ಹೊರತು ಎನಿದ್ದರೇನು...?

ನಗುತಿರು ನೋವೇ ಇಲ್ಲ ಅನ್ನೋ ತರ
ಜೀವಿಸು ಕಷ್ಟಗಳೇ ಇಲ್ಲ ಅನ್ನೋತರ...
ಅವರವರ ಕಷ್ಟಗಳೇ ಅವರಿಗೆ ಅಪಾರ,
ನಿನ್ನ ನೋವು ಕೇಳುವವರು ಯಾರ....?

ನೊಂದ ಮನ, ಸೋತ ಮನ ಅದಷ್ಟೇ ನಿನ್ನದು!!
ತಿಳಿದುಕೊಂಡು ತಿಳಿಸಿಕೊಂಡು ಸಾಗುತಿರು....
ನಗುವುದ, ನಗಿಸುವುದ ಮರೆಯದಿರು!!!!!!

- saahithi

19 Apr 2021, 09:51 pm

ವ್ಯತ್ಯಾಸ

ಸಾರಾಯಿ ಕುಡಿದ ಕುಡುಕ
ಕುಡಿದ ಮತ್ತಿನಲ್ಲಿ ಹಾರಾಡಿ
ತೂರಾಡಿ ಪಲ್ಟಿ ಹೊಡೆದರೆ
ಅಂಧ ಭಕ್ತರು ಮೂಢ ಜನಗಳು
ದೇವರೆಂಬ ಭ್ರಮೆಯಲ್ಲಿ
ಕಂಡ ಕಂಡಲ್ಲಿ ಕಲ್ಲು ಕಂಡಲ್ಲಿ
ಪಲ್ಟಿ ಹೊಡೆಯುವರಯ್ಯ

- ರಾಜು ಹಾಸನ

19 Apr 2021, 10:23 am

ಇದು ನಿಜನಾ

ಕುಡುಕರು ನೈಂಟಿ ಬಿಟ್ಟರೆ
ವಾಲಾಡುವರಯ್ಯ
ದೇವರು ಪೀಪಿ ತಮ್ಮಟೆ ಸದ್ದಿಗೆ
ತೇಲಾಡುವುದಯ್ಯ
ಅಂಧ ಭಕ್ತರು ಶಂಖು ಜಾಗಟೆ
ಸದ್ದಿಗೆ ತಲೆದೂಗುವರಯ್ಯ

- ರಾಜು ಹಾಸನ

18 Apr 2021, 02:52 pm

ವಾಸ್ತವ

ಒಂಟಿಯಾಗಿ ಬಂದಿರುವೆ
ಒಂಟಿಯಾಗಿ ಹೋಗುವೆ ...

ನಡುವೆ ಬಂದು ಹೋಗುವವರು ಆಡುವ ಮಾತಿಗೆ
ಕಿವಿ ಯಾಕೆ ಕೊಡುವೆ ?!

ನಿನಗೆ ಸರಿ ಅನಿಸಿದು ನೀ ಮಾಡು
ತಪ್ಪುಯೆನಿಸಿದ್ದನು ಯಾರು ಎಷ್ಟೇ ಹೇಳಿದರು ಮಾಡಬೇಡ!!


ಇಲ್ಲಿ ಯಾರು ನಮ್ಮವರಲ್ಲ
ನಮ್ಮವರು ಅಂದುಕೊಳುವವರೆಲ್ಲ
ಸಮಯಕೆ ತಕ್ಕಂತೆ ಬದಲಾಗುವವರೆ ಇಲ್ಲಿ ಎಲ್ಲ

- Kusuma N

16 Apr 2021, 10:43 pm

ಜೀವನ

ಅಂದುಕೊಂಡಾಗೆ ಆಗಬೇಕು
ಅನೋದು ಕನಸು
ಬಂದಿದನು ಒಪಿಕೊಳೋದು
ವಾಸ್ತವ
ಅಂದುಕೊಳೋದು ಒಂದು
ಆಗೋದೆ ಇನೊಂದು

ಅಂದುಕೊಳ್ಳುವುದು ಜೀವನವಲ್ಲ ..
ಹೊಂದಿಕೊಳ್ಳುವುದು
ಜೀವನ

- Kusuma N

16 Apr 2021, 10:26 pm

ವಿಸ್ಮಯ

ಖುಷಿಯ ಸಮಯಗಳು ಎಷ್ಟಿದ್ದರು ಸಾಲದು
ದುಃಖದ ಸಮಯಗಳು ಸಾಕೆಂದರು ಮುಗಿಯದು

ಖುಷಿಯಗಳಿಗೆಯಲ್ಲಿ
ಸಮಯವನ್ನು ತಡ್ದೆದಿಡಲಾಗದು
ದುಃಖದ ಪರಿಸ್ಥಿತಿಯಲ್ಲಿ
ಸಮಯವನ್ನು ನೂಕಿ ತಳ್ಳಲಾಗದು

ಸಂದರ್ಭ ಯಾವುದೇಬರಲಿ
ಸಮಯ ಸಾಗುವ ಗತಿಯಲ್ಲೆ ಸಾಗುವುದು

ಸಮಯ ನಮಗೆ ಬೇಕಾದಂತೆ ಬದಲಾಗುವುದಿಲ್ಲ
ಸಮಯದ ಗತಿಯಲ್ಲಿ ಸಾಗುತ ನಾವು
ಸಮಾದಾನದಿಂದ ಕಾಯಬೇಕು

ಕಾಲಕ್ರಮೇಣ ಎಲವೂ ಚಲಿಸಲೇಬೇಕು !

ತಾಳಿದವನು ಬಾಳಿಯಾನು ...

- Kusuma N

16 Apr 2021, 09:27 pm