Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ದುನಿಯಾ

ದುನಿಯಾ ಮೇಲೆ
ಜೇನು ತುಂಬಿದ
ಜೇನು ಗೂಡು
ನೀನಾದರೆ
ಪ್ರೀತಿ ಪ್ರೇಮ
ಸಂಬಂಧಗಳು
ಜೇನು ಹುಳುಗಳಿದಂತೆ

ಸವಿ ಜೇನು ಇರುವ ತನಕ
ಜೇನು ಹುಳುಗಳ ಝೇಂಕಾರ
ಸವಿ ಜೇನು ಖಾಲಿಯಾದ ನಂತರ
ನೊಣಗಳ ಅಬ್ಬರ
ಈ ಪ್ರೀತಿ ಪ್ರೇಮದ ಕಥೆ ವ್ಯಥೆ ಇಷ್ಟೇ

- ರಾಜು ಹಾಸನ

25 Mar 2021, 07:23 pm

ಮನುಜ

ಜಿಂದಗಿ ಮೇಲೆ
ಬದುಕಲು ಬೇಕು
ನಯ ವಿನಯ
ಪ್ರೀತಿ ಪ್ರೇಮ ಸ್ನೇಹ ಹೋರೆತು
ಕರಗಿ ನೀರಾಗುವ
ಸಿರಿ ಸಂಪತ್ತು ಅಲ್ಲ
ಕೊಳೆತು ಮಣ್ಣಾಗುವ
ಹಣ ಅಂತಸ್ತು ಅಲ್ಲ
ಗುಡಿ ಗೋಪುರದೋಳಗಿನ
ಆಚಾರ ವಿಚಾರವಲ್ಲ
ಮನುವಾದಿಗಳ
ಗೊಡ್ಡು ಸಂಪ್ರದಾಯಗಳಲ್ಲ

- ರಾಜು ಹಾಸನ

17 Mar 2021, 05:28 pm

ಅಣ್ಣನ ಮನ ಚಿನ್ನ

ಅಣ್ಣನೆಂದರೆ ಅಣ್ಣ , ಅವನೇ ನಮ್ಮಣ್ಣ,
ನನ ಮನಸ್ಸಿಗೆ , ಇವನೇ ನಿಜವಾದ ದೊರೆಯಣ್ಣಾ,
ಅಣ್ಣನಿಲ್ಲದ ಒಂದು ಕ್ಷಣ , ಕಣ್ಣಿಲ್ಲದಂತಾಗುವುದು ನನ್ನ ಮನ ,
ಎಲ್ಲೆಲ್ಲೋ ದುಡುವನು , ಕಾಂಚಾಣ ತರುವನೋ ,
ಒಳಗೊಳಗೆ ಅಳುವನು , ನಮ್ಮನ್ನೊತ್ತು ಮೆರೆವನು,
ಅಣ್ಣನೆಂದರೆ ಅಣ್ಣ , ಅವನ ಮನ ಚಿನ್ನ.

ಅಣ್ಣನೆಂದರೆ ಅಣ್ಣ , ಅವನೇ ನಮ್ಮಣ್ಣ ,
ತಂದೆಯಂತೆ ಮನೆಯ ಕಾಯ್ದು ,
ಅಮ್ಮನಂತೆ ಮನಸ ನೇಯ್ದು ,
ಗುರುವಿನಂತೆ ಬುದ್ಧಿ ಕಲಿಸಿ ,ಎಲ್ಲ ಶಕ್ತಿ ಇಲ್ಲೆ ಸುರಿಸಿ,
ನನ್ನ ಕಾಯೋ ಸೈನಿಕ ,ಅದುವೇ ಅವನೇ ಕಾಯಕ,
ಅಣ್ಣನೆಂದರೆ ಅಣ್ಣ , ಅವನ ಮನ ಬಲು ಚನ್ನ .

ಅಣ್ಣನೆಂದರೆ ಅಣ್ಣ , ಅವನೇ ನಮ್ಮಣ್ಣ ,
ಹಿರಿಯರ ಬೇರು , ಒಲುಮೆಯ ತೇರು ,
ಕಷ್ಟಗಳ ಅಂಗಿ , ಸದಾ ನಗುವ ಭಂಗಿ ,
ಶಾಂತಿಯ ಹೊಲದಲ್ಲಿ, ಬೆವರಿನ ಮಳೆ ಹರಸಿ ,
ಬಂಗಾರದ ಬೆಳಕು ಚೆಲ್ಲುವ ಮುಖ ಬಣ್ಣ ,
ಇರುವೆಯಂತೆ ಮನೆಯ ಮಾಡಿ , ನೆರೆಯವರೆಗೆ ಅದನ ನೀಡೊ ದಾನಿಗ ...
ಅವನೇ ನನ್ನ ತಾಯಿಯ ಹಿರಿಮಗ....
----- ಜಿ.ವೀರೇಶ ಸಿರಿಗೇರಿ








- VEERESHAG

17 Mar 2021, 01:14 pm

ಮಭಕ್ತಿಯಲ್ಲ

ಬದುಕಿದ್ದಾಗ ತಂದೆ ತಾಯಿಗೆ
ಒಂದು ಬೊಗಸೆ ನೀರು
ಒಂದು ಹಿಡಿ ಅನ್ನ ಕೊಡದೆ
ಗುಡಿಯ ಮುಂದೆ
ನಿಂತು ಕುಂತು ಬೆಡಿದರೆ
ಸಿಗುವುದೇ ಮೂಢ ನಿನಗೆ ಮುಕ್ತಿ
ನಿನ್ನ ಹಸಿದ ಒಡಲಿಗೆ
ಹಾಲೆರೆದ ಬೆಳೆಸಿ ಸಲಹಿದ
ತಂದೆ ತಾಯಿಯ ಒಡಲಿಗೆ
ಹಸಿವಿನ ವಿಷವನ್ನು ಉಣಬಡಿಸಿ
ದೇವರೆಂದು ಕಲ್ಲು ಗೊಂಬೆಗೆ
ರಾಶಿ ರಾಶಿ ಹಾಲು ಸುರಿದರೆ
ಫಲಿಸುವುದೇ ಓ ಮೂಢ ನಿನಗೆ
ಬಂಗಾರದ ಬಾಳು
ಮೂಢ ಜನಗಳು
ಓ ಮೂಢ ಜನಗಳೇ
ಮುಕ್ತಿ ಎಂಬುದು
ಕಾಯಕದ ಭಕುತಿಯೇ ಹೊರೆತು
ಮೂಢನಂಬಿಕೆಯ ಮಂತ್ರಚಾರಣೆಯ
ಅಂಧಕಾರದ ಮಭಕ್ತಿಯಲ್ಲ
ತಂದೆ ತಾಯಿಯ ಸೇವೆಯೇ ದೇವರು ಸೇವೆ
ತಿಳಿಯೋ ಮಂಕುತಿಮ್ಮ
*********ರಾಜು ಹಾಸನ**********

- ರಾಜು ಹಾಸನ

09 Mar 2021, 12:06 am

ಆರಾಧಿಸಿ

ಮೂಢರು ಪೂಜಿಸಿ ಆರಾಧಿಸಿಲಿ
ಚಿನ್ನ ಬೆಳ್ಳಿ ಕಲ್ಲು ಕಂಬದ ಮರದ
ಗೊಂಬೆಯ ಮೆರವಣಿಗೆ
ಹೊತ್ತು ಸಾಗಲಿ ಊರೂರು ಬೀದಿ ಬೀದಿ
ಘರನೆ ಘರಘರನೆ ಸುತ್ತಿ ತಿರುಗಿಲಿ
ಗುಡಿಯ ಮುಂದೆ ಬಿದ್ದು ಬೇಡಲಿ
ನಾ ಇಂದು ಮುಂದು ಎಂದೆಂದಿಗೂ
ಪೂಜಿಸಿ ಆರಾಧಿಸುವ ದೇವರು
ನನ್ನ ಹೆತ್ತು ಹೊತ್ತು ಬೇಳಸಿದ
ನನ್ನ ತಂದೆ ತಾಯಿ ನನ್ನ ದೇವರು
***********ರಾಜು ಹಾಸನ************

- ರಾಜು ಹಾಸನ

08 Mar 2021, 10:52 pm

ಹೆಣ್ಣು ಮನೆಯ ಕಣ್ಣು

ಹೆಣ್ಣು ಮಗುವಾಗಿ ಜನಿಸುವಳು
ಕುಟುಂಬದ ಮನದಲ್ಲಿ ನೆಲೆಸುವಳು
ಸದಾ ನಕ್ಕು ನಲಿಸುವಳು
ಮನೆಯ ಜ್ಯೋತಿಯ ಬೆಳಗಿಸುವಳು
ಹೆಣ್ಣು ಬರೀ ಹೆಣ್ಣಲ್ಲ ಅವಳು ಮನೆಯ ಕಣ್ಣು

ಅಪ್ಪನ ಪ್ರೀತಿಯ ಸುತೆಯು
ಅಮ್ಮನ ಮುದ್ದಿನ ಮಗಳು
ಸಹೋರತೆಯ ಅಕ್ಕರೆಯ ಅರಗಿಣಿಯು
ಊರಿನ ಹೆಮ್ಮೆಯ ಗರಿಯು
ಹೆಣ್ಣು ಬರೀ ಹೆಣ್ಣಲ್ಲ ಅವಳು ಮನೆಯ ಕಣ್ಣು

ಭೂಮಿ ತೂಕದ ಸಹನೆ ಇವಳದು
ಕಷ್ಟದಲೂ ಸದಾ ನಗುವವಳು
ಗಂಡನ ಎರಡನೇ ತಾಯಿಯೇ ಪತ್ನಿಯು
ಮಗುವಿನ ಪಾಲಿನ ಜೀವಂತ ದೇವರು
ಹೆಣ್ಣು ಬರೀ ಹೆಣ್ಣಲ್ಲ ಅವಳು ಮನೆಯ ಕಣ್ಣು

ಮನೆಯ ಏಳಿಗೆಗಾಗಿ ಬೆಳುಗುವಳು ಆರುತಿ
ಹಬ್ಬುವುದು ಎತ್ತರಕ್ಕೆ ಎಲ್ಲೆಡೆಯೂ ಕಿರುತಿ
ಕಾಪಾಡುವಳು ಮನೆತನದ ಸಂಸ್ಕೃತಿ
ಇದುವೇ ಹೆಣ್ಣಿನ ಸಹಜ ಪಕೃತಿ
ಹೆಣ್ಣು ಬರೀ ಹೆಣ್ಣಲ್ಲ ಅವಳು ಮನೆಯ ಕಣ್ಣು

ಚಿವುಟದಿರಿ ಪ್ರಪಂಚ ಕಾಣದ ಹೆಣ್ಣು ಭ್ರೂಣವ
ಕಸಿಯದಿರಿ ವಿವಾಹದಿಂದ ಅವಳ ಬಾಲ್ಯವ
ಎಸಗದಿರಿ ಹೆಣ್ಣಿನ ಮೇಲೆ ಅತ್ಯಾಚಾರವ
ನೀಡದಿರಿ ವರದಕ್ಷಣೆಯ ಕಿರುಕುಳವ
ಹೆಣ್ಣಿಗೆ ತಲೆಬಾಗಿರಿ ಗೌರವದಿಂದ
ಹೆಣ್ಣು ಬರೀ ಹೆಣ್ಣಲ್ಲ ಅವಳು ಮನೆಯ ಕಣ್ಣು

- Pooja k s

08 Mar 2021, 12:56 am

ನನ್ನವಳು

ಕೊಂಚ್ ಮಾತಿಗೂ ಕೋಪಗೂಳುವವಳು..
ಮತ್ತೆ ಸಿಹಿ ನಗೆ ಬೀರುವವಳು..
ಕನಸಲ್ಲಿ ಬಂದು ಕಾಡುವವ‌ಳು..
ಅವಳೇ ನನ್ನವಳು..

- Badboydevil Manju

06 Mar 2021, 11:35 am

ನಾ ಹೋಗುತಿದ್ದೆ ನನ್ನ ಪಾಡಿಗೆ

ನಾ ಹೋಗುತಿದ್ದೆ ನನ್ನ ಪಾಡಿಗೆ
ಬಂದಳವಳು....
ಬರುತಿದ್ದಳು ನನ್ನ ಕಡೆಗೆ...
ಕೊಟ್ಟಳವಳು ಒಂದು ಸಿಹಿ ನಗೆ..
ನಾ ತಿಳಿದೇ ಅದು ನನಗೆ...
ಆದರೆ
ಅವಳು ಕೊಟ್ಟಿದ್ದು ನನ್ನ ಹಿಂದೆ ಬರುವ ಅವಳ ತಂಗಿಗೆ.....!

- Badboydevil Manju

06 Mar 2021, 11:05 am

ದೂಷಿಸಿ ಜರಿಯದಿರು ನನ್ನ

ಮಣ್ಣಿನಲಿ ಬಿದ್ದಿರುವ
ಭತ್ತದ ಕಣವೆಂದು
ದೂಷಿಸಿ ಜರಿಯದಿರು
ನೀ ನನ್ನ....

ಮಣ್ಣನಲೇ ನಾ ಮೊಳೆತು
ಸಸಿಯಾಗಿ ತೆನೆದೂಗಿ
ನೀಡುವೆನು ನಿನಗೆ
ನಾ ಅನ್ನ....

- ಪಿ.ಜಿ.ಜ್ಯೋತಿ

02 Mar 2021, 02:01 pm

ಬದಲಾಗುತ್ತದೆ ಜನ ಮನ,

ಕಾಲ ನಿಯಮ



ಬದಲಾಗುತ್ತದೆ ಜನ ಮನ,ಜಗತ್ತಲ್ಲ ನಡೆದು ಬಂದ ಹೆಜ್ಜೆಗಳು ಮಾಸಿವೆ,ಪಾದಗಳು ಹೊಸ ಉರುಪಿನಿಂದ ಬಹುದೂರ ಸಾಗಿವೆ.

ಈಗ ಮಾಸಲು ನೆನಪುಗಳಷ್ಟೇ ಓಡುತ್ತಿರುವ ಯೋಚನೆ ವಿವೇಚನೆ ಒಂದೊಂದೇ ಹೆಜ್ಜೆ ದೂರವಾಗುತ್ತಿವೆ, ಕೈ ಚಾಚಿ ಕರೆದೊಯ್ಯಲು ಮನಸ್ಸಿಲ್ಲ,ಸದಾ ಮನಸಲ್ಲೇ ಇದ್ದೀರಿ ಅನ್ನುತ್ತಿದೆ ಜನವೆಲ್ಲಾ.

ಹೂ ಅರಳಿದಾಗ ಇದ್ದ ಮೊಬತ್,ಈಗ ಬರವಣಿಗೆಯಲ್ಲಿ ಮೂಡಿ ಬರುತ್ತಿದೆ ಹಂತ ಹಂತವಾಗಿ ಖಾಸಾ ಬಾತ್,ಉಪ್ಪು ಹುಳಿಯಿರದ ಸಪ್ಪೆ ಊಟದಂತೆ,ಕಾಡುತ್ತಿವೆ ಹಲವಾರು ಚಿಂತೆ.

ಓದಲಷ್ಟೇ ಚೆಂದ ಪ್ರೇಮ ಕಹಾನಿ,ನಾವೇ ಅದರ ಪಾತ್ರಗಳೆಂದು ಗೊತ್ತಾದಾಗ ಆಗುತ್ತಿದ್ದೇವೆ ಮೌನಿ,ಕಾರಣ ಪ್ರೇಮ ಮೂರ್ತಿ ಮಸಕು ಮಸುಕಾಗಿ ಕಾಣುತ್ತಿದೆ ದೂರ ಸಾಗಿ ಬಂದ ನಮಗೆ.

ಈಗಷ್ಟೇ ಬಂದ ಸುದ್ಧಿ ಹಲವಾರೋಗಗಳಿಗೆ ತುತ್ತಾಗಿದ್ದಾನೆ ಪಾಗಲ್ ಪ್ರೇಮಿ, ಪರೀಕ್ಷಿಸಲು ರಕ್ತವೆ ಇರದ ಅನಾಮಿ,ಬಸಿದು ಬರೆದ ರಕ್ತದ ಪ್ರೇಮ ಪಾತ್ರಗಳೇ ಇವನ್ನೆಬ್ಬಿಸಿದ ಸುನಾಮಿ.

ಮತ್ತದೇ ನೆಲ ಹಲವು ಹೃದಯಗಳಿಗೆ ಜನನ, ಅರಳಿ ನರಳುವವು ಎಷ್ಟೋ,ನಗುವವು ಎಷ್ಟೋ ಲೆಕ್ಕವಿಡಲಾಗದ ನೆಲದವ್ವ ಮತ್ತೆ ಮೌನಿ, ಮರಳಲ್ಲಿ ಮರೆಯಾದ ಹೆಜ್ಜೆ ಗುರುತುಗಳಂತೆ.

- ನಂದು

01 Mar 2021, 04:19 pm