ಮಾಧುರ್ಯದ ಆ ನಿನ್ನ ಮಾತು
ನನ್ನ ಬಾಳಲ್ಲಿ ಮಂದಹಾಸವ ತಂದಿದೆ...
ಚಂದ್ರನನ್ನು ತಂದು ಕೈಗೆ ಇಡೆಲೇ ಎನ್ನಲಾರೆ
ಆ ಬೆಳದಿಂಗಳ ಕತ್ತಲಲ್ಲಿ ನಿನ್ನ ಕೈ ತುತ್ತು ತಿನ್ನುವಾಸೆ..
ಕತ್ತಲೆ ಆವರಿಸಿದ ನನ್ನೀ ಬಾಳಲ್ಲಿ
ಮಿಂಚಾಗಿ ಬಂದು ದೀವಿಗೆಯಂತೆ ಮನವ ಬೆಳಗಿಸಿದೆ...!
ಮೌನದಲ್ಲೆ ನನ್ಮನವನ್ನ ನಿನ್ನೆಡೆಗೆ ಸೆಳೆದೆ
ಮನ ಪೂರ ನೀ ಆವರಿಸಿ ನೆಲೆಯಾಗಿ ಕುಂತೆ.!
ಅದೇ ಎಷ್ಟೇ ಕಷ್ಟ ಬರಲಿ ನಮ್ಮ ನಡುವಿನ
ಪ್ರೀತಿಗೆ ಕೊನೆಯಾಗದಿರಲಿ...!
ಕಷ್ಟವೋ ಸುಖವೋ ನೆಮ್ಮದಿಯ ಜೀವನ
ಸಾಗಿಸಿಬಿಡುವ ನಿನಗೆ ನಾನು ನನಗೆ ನೀ ಎಂದು...!
ಮನದ , ಮನೆಯ ಒಡೆತಿಯಾಗಿ ಆಯ್ಕೆಯಾದೆ
ನನ್ನ ಆಯ್ಕೆ ಸರಿಯಾಗಿದೆ ಇಂದೂ ಎಂದೂ ಎಂದೆಂದಿಗೂ ನೀನೇ ನನ್ನ ಬಾಳ ಸಂಗಾತಿಯೆಂದೂ...!
ನಾವಾಗಬೇಕು ಸತಿ ಪತಿಯಾಗಿ ಎಂದೆಂದಿಗೂ
ಬರೆದೆ ನಾ ಇಂದೂ ನನ್ನೊಲವಿನ ಜೀವಕ್ಕೊಂದು
ನನ್ನೀ ಒಲವ ವರ್ಣಿಸಲು ಪದಗಳು ಸಾಲದು ಪುಟಗಳು ಎಣಿಸಲಾಗದು
ನನ್ಮನದ ಒಲವಿಗೆ ಪುಟ್ಟ ಉಡುಗೊರೆಗೆ ನಿನಗೆಂದು..!
ಇಂದಿಗೆ ಮಾತ್ರ ಸೀಮಿತವಲ್ಲ ಈ ಉಡುಗೊರೆ ಜೀವನ ಪೂರ ನೆನೆಪಿನ ಅಂಗಳದಲ್ಲಿ ನಮ್ಮ ಜೋಡಿ ರಾರಾಜಿಸಬೇಕು...
ಹೇ ಒಲವೇ ಹಿಡಿಸಿತೆ ನನ್ನೀ ಪುಟ್ಟ ಕವನ....!!
ದೇವಾಲಯ ಸುತ್ತಿ
ಮೂರ್ಖನಾಗಬೇಡ
ಶಾಲೆಗೆ ಕಲಿತು
ಜಾಣನಾಗು
ಕಲ್ಲು ಪೂಜಿಸುವ
ಮೂಢ ಮನುವಾದಿಯಾಗಬೇಡ
ಎಲ್ಲರನ್ನೂ ಗೌರವಿಸುವ
ಮಾನವತಾವಾದಿಯಾಗು
ನೀ ಯಾರನ್ನು ಯಾವ
ಜಾತಿ ಧರ್ಮ ಅನುಸರಿಸಬೇಡ
ನಿನ್ನನೇ ಅನುಸರಿಸುವಂತ
ದೊಡ್ಡ ಜ್ಞಾನಿಯಾಗು
ಗುಡಿ ಗೋಪುರಕ್ಕೆ
ದೇಣಿಗೆ ಕೊಟ್ಟು ದಡ್ಡನಾಗಬೇಡ
ದಣಿದವನಿಗೆ ಅನ್ನ
ಕೊಡುವ ಧಣಿಯಾಗು
ಭಾವನೆಯೇ ಬದುಕಿನ ಬಣ್ಣ...
ತಂಪು ಗಾಳಿಯ ದಾಳಿಗೆ,
ಮಾತನಾಡುತ್ತಿದೆ ಕಣ್ಣರೆಪ್ಪೆಯು
ಕೂದಲಿನ ಜೊತೆಗೆ,
ನಿದ್ದೆಯು ಬರುತ್ತಿಲ್ಲ ನನ್ನ ಕಣ್ಣಿಗೆ,
ಮುತ್ತಿಡಬೇಕಾಗಿದೆ ನೀ
ನನ್ನಯ ತುಟಿಯೆಂಚಿಗೆ,
ನಿದ್ದೆಯಲ್ಲೂ ಈ ಹೃದಯಕ್ಕೆ
ನಿನ್ನದೆ ಹೊಚ್ಚಿಗೆ,
ಮನಸ್ಸಿನಲ್ಲೂ ಮೌನ ಆವರಿಸಿದೆ
ಕಾರಣ ನೀ ಬಂದೆ ನನ್ನಯ ಕನಸಿಗೆ,
ಜೀವನದ ಅದ್ಯಾಯದಲ್ಲಿ ನನ್ನನ್ನ
ಮೊದಲನೇಯ ಪುಟವಾಗಿಟ್ಟುಕೋ,
ಇದೆ ನೀ ನನಗೆ ನೀಡುವ ಸಲುಗೆ...
ರೋಹಿಣಿ M....
ಚಿಲ್ಲರೆ ಕಾಸಿಗೆ
ಚಿಲ್ಲರೆ ನೋಟಿಗೆ
ವೋಟು ಕೊಟ್ಟು
ಬೂಟು ನೆಕ್ಕಬೇಡಿ
ಮುಂದೊಂದು ದಿನ
ಬೀಳುವುದು ಮೆಟ್ಟಿನೆಟ್ಟು
ಅಂದು ಬಿಡಬೇಕಾಗುವುದು
ಕಣ್ಣು ಬಾಯಿ ಎಚ್ಚರ ಎಚ್ಚರ
ಜಾತಿ ಧರ್ಮದ
ಕಥೆಯ ಕಟ್ಟಿ ಜುಟ್ಟು ಹಿಡಿದು
ತಲೆಯ ಕಡಿಯುವರು
ಹೆಂಡ ಖಂಡ ಕೊಟ್ಟು
ಮಂಗನಾಟ ಆಡಿಸುವರು
ಮನುವಾದಿ ಕಮಂಗಿಗಳು
ಎಚ್ಚರ ಎಚ್ಚರ ಎಚ್ಚರ
ಮುಗ್ಧ ಜನಗಳೇ
ಮಂಗನ ಕೈಗೆ
ಮಾಣಿಕ್ಯ ಕೊಟ್ಟರು ಒಂದೇ
ಹೆಂಡ ಕೊಟ್ಟರು ಒಂದೇ
ಹಾಗೆಯೇ ಮನುವಾದಿ
ಮಂಗಗಳ ಕೈಗೆ
ರಾಜ್ಯ ಕೊಟ್ಟರು ಒಂದೇ
ದೇಶ ಕೊಟ್ಟರು ಒಂದೇ
ರಾಜ್ಯ ದೇಶ ಅಳಿಯಾದೆ
ಉಳಿಯುವುದೇ
ಮನುವಾದಿಗಳು ಪಠಿಸುವುದು
ಮಂತ್ರವಲ್ಲ
ಜನರ ಉರುಳಿಸುವ ತಂತ್ರ
ಇದ್ದನ್ನು ಅರಿಯದ
ಮುಗ್ಧ ಜನರು ಅತಂತ್ರ ಅತಂತ್ರ
ಬಗ್ಗೆ ಬಗ್ಗೆಯ
ತಿಂಡಿ ತಿನಿಸುಗಳು ಬೇಕು
ಬಕಾಸುರ ರಾಕ್ಷಸ
ಮನುವಾದಿಗಳ ಹೊಟ್ಟೆಗೆ
ಬಗ್ಗೆ ಬಗ್ಗೆಯ
ಬೆಳೆ ಬೆಳೆಯುವ
ರೈತರ ಗೋಳು
ಕಂಡು ಹಾಕಿಕೊಂಡರೆ
ಮನುವಾದಿಗಳು
ಬಾಯಿಗೆ ಮಣ್ಣು
ಜನರ ಮತ ಪಡೆದು
ಕೊಂದಿದ್ದು ಆಯ್ತು ಜನರ ಬದುಕು
ಊರು ರಾಜ್ಯ ದೇಶದ
ಆಸ್ತಿ ಪಾಸ್ತಿ ಕೊಳ್ಳೆ ಹೊಡೆದು
ಮಾರಿದ್ದು ಆಯ್ತು
ಬಡ ಜನರ ಬದುಕು ಮೂರಾಬಟ್ಟೆ
ಮಾಡಿದ್ದು ಆಯ್ತು
ದೇಶದ ಬೆನ್ನೆಲುಬು ರೈತರ
ಬೆನ್ನು ಮೂಳೆ ಮುರಿದಿದ್ದು ಆಯ್ತು
ಸುಳ್ಳು ಹೇಳಿ ಕಥೆಯ ಕಟ್ಟಿ
ಜನರ ನಂಬಿಸಿ
ಜನರ ದಿಕ್ಕು ತಪ್ಪಿಸಿದ್ದು ಆಯ್ತು
ರಾಜ್ಯ ದೇಶವೇ ಬಂಡವಾಳ
ಶಾಹಿಗಳ ಕೈ ಸೇರಿದ್ದು ಆಯ್ತು
ಬಡವನ ಉದ್ಯೋಗದ
ಕನಸಿಗೆ ತಣ್ಣೀರು ಹಾಕಿದ್ದು ಆಯ್ತು
ದೇಶವನ್ನೇ ದೇವರು
ಧರ್ಮವೆಂದು ಹೊಡೆದು
ಸಾಯಿಸಿದ್ದು ಆಯ್ತು
ಇನ್ನು ಉಳಿದಿರುವುದು ಒಂದೇ
ಈ ದೇಶದ ಜನರ
ಕಂಡವರ ದೇಶಕ್ಕೆ ಮಾರುವುದು
ಒಂದು ಬಾಕಿಯಿದೆ
ಎಚ್ಚರ ಎಚ್ಚರ ನನ್ನ ಜನಗಳೇ
ಮನುವಾದಿ ಗುಲಾಮಗಿರಿಗೆ
ಬುದ್ದಿ ಕಲಿಸಿ ಊರು ದೇಶದಿಂದ
ಒದ್ದು ಓಡಿಸಿದರೇ
ಈ ದೇಶದ ಮೂಲ ನಿವಾಸಿಗಳಿಗೆ
ಉಳಿಗಾಲ ಇಲ್ಲದಿದ್ದರೆ
ಮೂಲ ನಿವಾಸಿಗಳಿಗೆ ಕೊನೆಗಾಲ