Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

(ಸೋಲೇ ಗೆಲುವಿನ ಮೆಟ್ಟಿಲು)

ಮರುಕಳಿಸುವ ಮಧುರ
ಸಿಹಿ ನೆನಪುಗಳು,..
ಕಮರಿಹೋದ ನಿನ್ನೆಯ
ಕಹಿ ಕನಸುಗಳು...

ಎಲ್ಲವೂ ಈಗ ಮರೆತು
ಹೋಗುವ ಹೊತ್ತು..
ಮತ್ತೆ ನೆನಪಾಯ್ತು ನನಗೆ..
ಸೋಲೇ ಗೆಲುವಿನ ಮೆಟ್ಟಿಲು
ಎನ್ನುವ ನುಡಿಮುತ್ತು...

ಕೃಷ್ಣ ಬಿಲ್ಲಾಡಿ ಮೇಲ್ ಬೈಲು

- krishna Billadi melbailu

21 Jan 2021, 11:36 pm

ಜನುಮದಿನದ ಶುಭಾಶಯ

ಶುಭಾಶಯ ನಮ್ಮ ಹೃದಯದಿಂದ
ನಿಮ್ಮ ಜನುಮದಿನದ ಶುಭಾಶಯ
ನೂರಾರು ವರುಷ ಸುಖವಾಗಿ ನೀವು
ನಗು ನಗುತ ಇರಿರೆಂದು ಶುಭಾಶಯ //ಪ//

ಮೃದು ಮನಸು ಸಿಹಿ ಮಾತು ಆಡ್ವ
ಮಂಜುನಾಥ ಗುರುವೆ ಶುಭಾಶಯ
ಪ್ರಾಣಿಗಳನು ಸಾಕಿ ಪೋಷಿಸುವಂತ
ಮಹಾಪುರುಷ ನಿಮಗೆ ಶುಭಾಶಯ //೧//

ಅಸಹಾಯಕ ಜನಗಳ ಸಲಹುತಲಿ
ಅನ್ನದಾನ ಮಾಡಿ ದೀನದಲಿತರಿಗೆಲ್ಲಾ ಆಶಾಕಿರಣವಾಗಿ ನಿಂತ ಮಹಾಗುರುವೆ
ನಿಮಗೆ ನಾವು ಕೋರುವ ಶುಭಾಶಯ //೨//

ದಲಿತೋದ್ದಾರಕರಾಗಿ ಬಂದ ಗುರುವೆ
ಸಮಾಜದ ಸೇವೆಯಲ್ಲಿ ಮುಂದೆ ನೀವೆ
ಆದಿ ಕರ್ನಾಟಕ ಮೂಲ ದೊಡೆಯ ನೀವು
ಅನ್ನದಾನ ಗುರುವೆ ನಿಮಗೆ ಶುಭಾಶಯ //೩//

ಶುಭಾಶಯ ನಿಮಗೆ ಶುಭಾಶಯಗಳು
ನಿಮ್ಮ ಜನುಮದಿನದ ಹಾರ್ಧಿಕವಾದ
ನೂರು ನೂರಾರು ಶುಭಾಶಯಗಳು
ಮತ್ತೊಮ್ಮೆ ನಿಮಗೆ ಶುಭಾಶಯಗಳು //೪//

ಕಲ್ಮೇಶ ಬಡಿಗೇರ
.........ಬಾದಾಮಿ.......
...........9743539657........

- Kalmesh Badiger

20 Jan 2021, 08:05 pm

ಕವನ

ಕವನದ ಸಾಲುಗಳು
ಕಲ್ಪನೆಯಾದರೆ ಕೇವಲ
ಕನಸು ಮನಸ್ಸಿಗೆ
ಅಂದ ಚಂದವಷ್ಟೇ
ಕವನದ ಸಾಲುಗಳು
ಅಂಧಕಾರ ಮೂಢನಂಬಿಕೆ
ಕಡೆಗಣಿಸಿ ಕೊನೆಗಾಣಿಸಿ
ಉಳುಕು ತಳುಕು ಇಲ್ಲದ
ತಿರುಳು ತುಂಬಿದ
ಜ್ಞಾನದ ಸಾರವಾದರೆ
ಸಮಾಜ ತಿದ್ದುವ
ಆಯುಧವಾಗುವುದು

- ರಾಜು ಹಾಸನ

19 Jan 2021, 11:17 am

ವಿಜಯೋತ್ಸವ

ಮೂರು ಹೊತ್ತಿನ ಅನ್ನಕ್ಕಾಗಿ
ಹಸಿದ ಹೊಟ್ಟೆಯ ಹಿಟ್ಟಿಗಾಗಿ
ದುಡಿದು ತಿನ್ನುವ
ಗಂಜಿ ಗೀರಕಿಗಳು ನಾವಾದರೂ
ಚಿಲ್ಲರೆ ಕಾಸಿಗೆ ಭಿಕ್ಷೆ ಬೇಡುವ
ಚಿಲ್ಲರೆ ಮನಸ್ಸಿನ ಗುಲಾಮರು
ಮನುವಾದಿ ಸಂತತಿಗಳು
ಅನ್ನ ತಿನ್ನುವ ಬಾಯಿಗೆ ಗಂಗ ಜಲವೆಂದು
ಪಂಚಮೃತವೆಂದು
ಗಂಜಲ ಕುಡಿಯುವ ಗಂಜಲ ಗೀರಕಿಗಳು
ಮನುವಾದಿ ಸಂಘಿಗಳು
ಮನುವಾದಿಗಳೇ ಏನಾದರೂ
ತಿಂದು ಕುಡಿದು ಸಾಯಿರಿ
ಮನುವಾದಿಗಳು ದೇಶ ಬಿಟ್ಟು ತೊಲಗಿ
ಮಸಣದ ಕಾಡಲು ಸೇರಿದರೆ
ಈ ದೇಶಕ್ಕೆ ಬಂದ ನಿಜವಾದ ವಿಜಯೋತ್ಸವ

- ರಾಜು ಹಾಸನ

19 Jan 2021, 12:27 am

ಹುಚ್ಚು ದೊರೆ

ಹುಚ್ಚು ದೊರೆಯ ಹೆಸರು
ಇತಿಹಾಸ ಪುಸ್ತಕದ ಪುಟಗಳಲ್ಲಿ
ಓದಿದ್ದೆ ಕೇಳಿದ್ದೆ ಅಷ್ಟೇ
ಇಂದು ಕಂಡು ನೋಡಿದ್ದು ಆಯ್ತು
ಹುಚ್ಚು ದೊರೆ ಹುಚ್ಚಾಟಕ್ಕೆ
ದೇಶದ ಆರ್ಥಿಕತೆ ಕೊಚ್ಚಿಕೊಂಡು
ಹೋಗಿದ್ದು ಆಯ್ತು
ಮನುವಾದಿಗಳ ಮಂಗನ ಆಟಕ್ಕೆ
ದೇಶವೇ ಹೊತ್ತಿ ಉರಿದಿದ್ದು ಆಯ್ತು
ಹುಚ್ಚು ದೊರೆ ಹುಚ್ಚಾಟ್ಟ ಹೆಚ್ಚಾಗಿ
ದೇಶದ ಬಡತನ ಹೆಚ್ಚಾಗಿದೆ
ಸನಿಹವೇ ಬಂದಿದೆ ಅಂತ್ಯದ ಕಾಲ
ವಿನಾಶದ ಕೊನೆಗಾಲ
ಹುಚ್ಚು ದೊರೆಯ ಹುಚ್ಚಾಟಕ್ಕೆ
ತಿಲಾಂಜಲಿ ಹಾಡುವ ಕಾಲ
ಮಣ್ಣು ಮುಕ್ಕಿಸುವ ಕಾಲ

- ರಾಜು ಹಾಸನ

19 Jan 2021, 12:04 am

ಗೋವು

ದುಡ್ಡಿಗೆ ಬೆಲೆ ಇದ್ದರು
ಮಾನವಿಯತೆಗೆ ಬೆಲೆ
ಕಟ್ಟಲಾಗದು
ದುಡ್ಡು ದುಡಿದು
ದೊಡವನಾದರು
ದುಡ್ಡು ದೊಡ್ಡವನನ್ನು
ಉಳಿಸಿ ಬೆಳಸಿದ ದೇವರು
ದುಡಿಮೆಯ ದೇವರು
ಕಾರ್ಮಿಕ ದೇವರು
ಈ ದೇಶದ ಆಸ್ತಿ

ಆಸೆ ಕನಸುಗಳಿಗೆ
ಅಂತ್ಯವಿಲ್ಲದಿದ್ದರೂ
ಅಂತ್ಯವಿರುವ
ಅತ್ಮ ಜೀವಕ್ಕೆ ಹಣದ
ಮದಬೇಡ
ಸಿರಿ ಸಂಪತ್ತಿನ
ಜಂಬ ಬೇಡ
ಶಾಶ್ವತವಲ್ಲದ
ಹಣ ಗಂಟ್ಟಿದ್ದರು
ಬೆಲೆ ಕಟ್ಟಲಾಗದಯ್ಯಾ
ದುಡಿದು ಕೂಡಿಟ್ಟು
ಕೊಳ್ಳಲಾಗದಯ್ಯಾ
ಮನುಷ್ಯತ್ವದ ಗುಣ
ಮಾನವಿಯತೆ ಗುಣ




ಯಾರ ಖುಷಿಗೆ ಯಾರ ಒಲವಿಗೆ
ಗೋವು ಹತ್ಯೆ ನಿಷೇಧ ಕಾಯ್ದೆ
ಗೋವು ನಂಬಿ ಬದುಕು ನೆಡೆಸುವ
ಬಡ ಜನರ ರೈತ ಜನರ ಬಾಳು
ಗೋಳಾಗಿಸಿದ ಹುಚ್ಚು ಕಾಯ್ದೆ
ಮನುವಾದಿಗಳ ಮನ ಮೆಚ್ಚಿದ ಕಾಯ್ದೆ
ದೇಶಕ್ಕೆ ಬಂದು ಒದಗಿದ ದೊಡ್ಡ ಕಾಯಿಲೆ

ಧನ ಕಾಯುವವನಿಗೆ ಗೊತ್ತು
ಗೋವಿನ ಬಾಳು ಗೋಳು
ಜಾತಿ ಧರ್ಮದ ಕೊಚ್ಚೆ ಗುಂಡಿಗೆ
ಬಿದ್ದವನಿಗೇನು ಗೋತ್ತು
ಗೋವಿನ ಬದುಕು ಬಾಳು ಗೋಳು

ಗೋವಿನ ಹಾಲು ಕುಡಿದು
ವಿಷ ಕಕ್ಕವು ವಿಷ ಕಾರುವ
ಮನುವಾದಿಗಳಿಗೇನು ಗೋತ್ತು
ಗೋವು ಸಾಕುವ ಗೊಲ್ಲನ ಪಾಡು
ಬಡ ಜನರ ಹೊಟ್ಟೆ ಬಟ್ಟೆ
ಬದುಕು ಬಾಳಿನ ಪಾಡು

ಜಾತಿ ಮತ ಧರ್ಮದ
ಹುಚ್ಚು ಹೆಚ್ಚು ಹೆಚ್ಚಾಗಿ
ಜಾತಿ ಧರ್ಮದ ಅಂಧ ಜನರ
ಮೆಚ್ಚಿಸಲೆಂದು ತಂದ ಕಾಯ್ದೆ
ಮಾರಕ ಮಾರಕ ಮಾರಕ
ಹಳ್ಳಿ ದಿಲ್ಲಿಗೆ ಹರಡಿದ ಕಾಯಿಲೆ
ದೇಶಕ್ಕೆ ಅಂಟಿಕೊಂಡಿರುವ
ಮಹಾಮಾರಿ ಕಾಯಿಲೆ
ಮನುವಾದಿಗಳ ಹುಚ್ಚು ಕಾಯ್ದೆ

ರೈತರ ಕಷ್ಟವೇ ತಿಳಿಯಾದ
ಕಳ್ಳ ಸುಳ್ಳ ಮನುವಾದಿಗಳಿಗೇನು ಗೋತ್ತು
ರೈತ ಬಂಧು ಗೋವಿನ ಕಷ್ಟ ಸುಖ ಗೋಳಾಟ
ಗೋವು ಸಾಕಿದವನಿಗೆ ಗೋತ್ತೇ ಹೊರೆತು
ಬೀದಿಯಲ್ಲಿ ನಾಯಿ ನರಿ ಹಿಡಿದು
ನಡೆದು ಸಾಗುವವನಿಗೇನು ಗೋತ್ತು

- ರಾಜು ಹಾಸನ

18 Jan 2021, 09:11 am

ಮೋಕ್ಷ

ಮೂರು ಮಕ್ಕಳ ಹಡೆದವ್ವ ತಾಯಿ
ಮುತ್ತಿನ ಚಂಡಿನ ಹಾಂಗ
ಮುಪ್ಪಿನ ಕಾಲಕ ಮಗ್ಗುಲಕ್ಕಿದ್ದ ನಿನ್ನ
ಜೋಪಾನ ಮಾಡಲಂತಾ

ಶಾಲೆ ಕಲಿಯಲಂತ ಉಪವಾಸ ಬಿದ್ದು
ಅವರಿಗೆ ವಿಧ್ಯ ಕೊಡಿಸಿದವ್ವ
ಕೂಲಿ ನಾಲಿ ಗದ್ದೆ ಕೆಲಸ ಮಾಡುತ
ಮಕ್ಕಳ ಹೊಟ್ಟೆ ತುಂಬಿಸಿದವ್ವ

ಪೊಲೀಸ್, ಲಾಯರ್,ರಾಜಕಾರಣಿ
ಮಾಡೋ ಕನಸನು ಕಂಡೆವ್ವ
ತವರ ಬಂಗಾರ ಮಾರಿ ಅವರಿಗೆಲ್ಲಾ
ಸಮಾಜದ ಮುಂದೆ ತಂದೆ ಅವ್ವ

ವಯಸ್ಸಿಗೆ ಬಂದಾರಂತ ಹೆಣ್ಣ ಹುಡುಕಿ ಮದುವೆಯ ಮಾಡಿದವ್ವ
ಕಂಡ ಕಲ್ಲಿಗೆ ಕೈಯನು ಮುಗಿಯುತ
ಕಾಯಕ ಮಾಡಿದೇವ್ವ

ಬಂದ ಸೊಸೆಯಂದಿರು ಕೂಡಿಬಾಳದ
ಮನೆಬಿಟ್ಟು ಹೋದರವ್ವ
ಸಾಯುವಾಗಲೂ ಬಾರದ ಮಕ್ಕಳ ನೆನೆದು
ಮೊಕ್ಷವ ಪಡೆದವ್ವ ಅವ್ವಾ.

ಕಲ್ಮೇಶ ಬಡಿಗೇರ
9743539657
.....ಬಾದಾಮಿ.....

- Kalmesh Badiger

16 Jan 2021, 06:02 pm

ಬೊಗಸೆ ನೀರು

ಕಲ್ಲು ಕಂಬದ ಗೊಂಬೆಗೆ
ಹಾಲು ಮೊಸರು
ಬೆಣ್ಣೆ ತುಪ್ಪ
ಸುರಿದು ಕಳೆಯುವ
ಮೂಢ ಜನರು
ದಣಿದ ಜನರು
ಜೀವ ತಣಿಸಲು
ನೀರು ಕೇಳಿದರೆ
ಮಡಿ ಮೈಲಿಗೆ ಎಂದು
ನಿರಾಕರಿಸಿ ದೂರಸರಿದು
ಬೊಗಸೆ ನೀರು
ಸುರಿದು ಎರಚುವರಯ್ಯಾ
ನೀಚ ಮನಸಿನ
ಮೂಢ ಜನಗಳು
ದಣಿದವರಿಗೆ ನೀರು
ಕೊಡದ ಮೂಢ ಜನರಿಗೆ
ದಣಿದ ವ್ಯಕ್ತಿ ಬೆವರು ಸುರಿಸಿ
ದುಡಿದು ಕೊಟ್ಟ ಅನ್ನ ಮಾತ್ರ
ಇವರ ಹೊಟ್ಟೆಗೆ ಬೇಕಯ್ಯಾ
ಇದು ಯಾವ ಧರ್ಮವೂ

- ರಾಜು ಹಾಸನ

15 Jan 2021, 04:42 pm

ಸ್ನೇಹಿತ

ಆ ದೂರದ ತೀರವನು ಸೇರಲು ನಾನು
ಹರಿಗೋಲ ಅಂಬಿಗನು ನೀನಾಗಿ ನಿಂತೆ
ದಡಸೇರುತ್ತಿದ್ದಂತೆ ಕಣ್ಣೀರು ಹರಸುತಲಿ ಬೀಳ್ಕೊಟ್ಟು ಭಾವದಲಿ ಬಿಗಿದಪ್ಪಿ ನಿಂತೆ //

ಹೋಗೋದು ಹೋಗ್ತಿಯ ಮಗನೆ ನೀನು
ಆಗಾಗ ಫೋನ್ ಮಾಡ್ಲೆ ಅಂತಂದೆ ನೀನು
ಬೆಂಕಿಯ ಇಟ್ಟಂಗೆ ಬೆನ್ನಿಗೆ ಹೊಡೆದೊಮ್ಮೆ
ಕೊನೆವರೆಗೂ ಸ್ನೇಹದ ನೆನಪಿರಲಿ ಎಂದೆ //

ಬಾಲ್ಯದ ಆಟ, ಹುಡುಗಾಟ ಗಳೆಲ್ಲವೂ
ಮರೆಯಲಾರದ ಸಿಹಿ ನೆನಪಾಗಿ ನಿಂತು
ಬದುಕು ಸಾಗಿಸಲು ಹೆಣಗುವ ಜನಕಿಂತ
ಆ ಬಾಲ್ಯ ದಾಟದ ಸುಖ ಚಂದ ವೆಂದೆ //

ತಿಂಗಳಲೊಮ್ಮೆ ಫೋನ್ ಮಾಡಿದ್ರೆ ಸಾಕು
ಮೊದಲು ಬೈಗುಳ ಸಾಲು ನಂತರ ಮಾತು
ಭಾವ ಪರವಶನಾಗಿ ಇಹಲೋಕ ಮರೆತು
ಪರಲೋಕ ಫೋನಲ್ಲಿ ಸುತ್ತಿಸಿನಗುವಾತ //

ಸ್ನೇಹದಲಿ ಅಡಗಿದ ಪ್ರೇಮವೆಂದು ಅಮರ
ಸಿರಿ, ಸಂಪತ್ತು ಗಳಿಗಿಂತಾ ಸ್ನೇಹವು ಮೇಲು
ಸ್ನೇಹಿತನ ಒಡನಾಟ ಕಹಿ,ಸಿಹಿ ಮಾತುಗಳು
ಮತ್ತೆ ಮತ್ತೆ ಕರೆಯುತ್ತಲಿರುವುದು ಕೂಗಿ //

ಕಲ್ಮೇಶ ಬಡಿಗೇರ
9743539657
........ಬಾದಾಮಿ.......

- Kalmesh Badiger

14 Jan 2021, 10:15 pm

ಮನವೆ

ಯಾಕಿಷ್ಟು ಮೌನಿ
ಒತ್ತಡದ ನಗುವೇಕೆ
ಆತುರದ ಮಾತೇಕೆ!
ಯಾರನ್ನೋ ಮೆಚ್ಚಿಸಲು ಸಹಸವೇಕೆ?

ನಡೆದಿರುವುದೆಲ್ಲವು ನಿಜವೇ
ಮರೆಮಾಚುವ ಪ್ರಯತ್ನಗಳೇಕೆ!
ಯಾರಿಲ್ಲದ ಊರಿನಲ್ಲಿ
ಹಾಡುಗಳ ಸಾಲೇಕೆ?

ಮದ್ಯಸ್ತಿಕೆಯ ಚಂದ್ರ
ಬರುವನೇ ನೋವ ಮರೆಸಲು!
ಭರವಸೆಯ ಬೆನ್ನತ್ತಿ
ಏನ ಸಾಧಿಸಲು ಹೊರಟಿರುವೆ?

ಅಲೆಗಳ ಮೊರೆತ
ಕೇಳುವುದೇ ಇಂದಿಗೂ?
ದಿಗಂತದಂಚಿನಲ್ಲಿ ಕುಳಿತು
ಭಾವಗಳ ಹೆಜ್ಜೆ ಗುರುತ
ಎಣಿಸುವುದೆ ಮುಂದಿನ ಬದುಕು!!!

@ವಿನಯ್






- ವಿನಯ್ ಪ್ರತಾಪ್

14 Jan 2021, 12:20 pm