Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಮನಸನ್ನು ಆಳುತ್ತಿದೆ ಕಿಡಿಗೇಡಿ ಪ್ರೇಮ

ಕಾಲ್ ಎಳೆಯುತ್ತಿದೆ ಯವನವು
ಮನಸು ಕರುಗುವ ರೀತಿಯಲಿ
ಸುಮ್ ಸುಮ್ ನೇ ನಗುವುದು ಸುಮ್ ಸುಮ್ ನೇ ಅಳುವುದು
ಯಾರಬಳಿ ತಿಳಿಸಲಿ ಇದು ನನ್ನ ವ್ಯಥೆ ಉಂಟು
ಕೆರೆದು ಕೆರೆದು ಗಾಯವದಂತೆ ಕಿರಿಚುವುದು ಹೃದಯ
ನಾ ಕಂಡ ಕನಸಲ್ಲೆ ಮಾನಸಿಕ ಅಸ್ವಸ್ಥ ನಗಿರುವೆ
ಅವಳ ಮುಖದಲ್ಲಿ ನಾಚಿಕೆ
ಮರ ಸುತ್ತುವ ಆಸೆಯೂ ತಂದಿದೆ
ಬೆವರಿಳಿಸಿ ಬೆನ್ಮುರಿದು ನೆಂಗಡ್ಲೆ ಬೆಳೆದಂತೆ
ನನ್ನ ಪ್ರೀತಿಯ ಬೆಳೆಸಬೇಕೆಂಬ ಆಸೆಯೂ ಹೆಚ್ಚಿದೆ ಮನಸಲಿ
ಅವಳ ಮುಖದಲ್ಲಿ ಚಂದಿರನನ್ನು ಕಂಡು ನನ್ನ ಹೆದೆಯಲಿ ಅವಳ ಮಂದಿರವುಕಟ್ಟಿ ಪೂಜಿಸುವ ಸಂದರ್ಭ ನನ್ನದು
ಉಳಿಯುವುದೋ ಈ ಪ್ರೇಮ ಅಳಿಯುವುದೋ ಈಪ್ರೇಮ
ಮರಭೂಮಿಯಲ್ಲಿ ತಾವರೆಯ ಬಳ್ಳಿಯು ಚಿಗೂರಿರಲು
ಮನಸುಂಟು ಕನಸುಂಟು ಅದೇ ದಾರಿಯಲಿ ಚುಚ್ಚುವ ಮುಳುಂಟು
ಯಾರಿಗೂ ತಿಳಿಸದೆ ಕಾಣೆಯಾದಂತ್ತೆ ಮನಸು ಕಾಣೆಯಾಗಿರಲು...

ಎಂ.ನಾಗರಾಜ

- M.Nagaraja

25 Apr 2021, 09:47 pm

ಕೊರೋಣ

ಎಲ್ಲೆಲ್ಲೂ ಕೊರೋಣ...!!
ಜೀವನ ನಡೆಸಲು ತುಂಬಾ ಕಠಿಣ...!!
ಪ್ರತಿದಿನವು ಸಾವಿರ ದಾಟುತ್ತಿದೆ ಮರಣ...!!
ಹೀಗೆ ಮುಂದುವರೆದರೆ ಕ್ರಮೇಣ..!!
ಇಂದಲ್ಲಾ ನಾಳೆ ನಮ್ಮದು ಹೋಗಬಹುದು ಪ್ರಾಣ..!!
ಅದಕ್ಕೆ ಯಾವಾಗಲೂ ಹಾಕಿರಿ ಮಾಸ್ಕು..!!
ಇಲ್ಲವೆ ನಮ್ಮ ಜೀವಕೆ ತುಂಬಾ ರಿಸ್ಕು..!!

- Harish Gowda

25 Apr 2021, 10:47 am

ಸಾಲಗಾರ

ಸಾಲವೆಂಬ ರಾಕ್ಷಸ ಮನದೊಳಗಿರಲು..!!
ಸಾಧ್ಯವೆ ನಾ ನೆಮ್ಮದಿಯಿಂದರಲು..!!
ಅದಕಾಗಿ ಕುಡಿಯುವೆ ಬಾರಲ್ಲಿ ಬೀರು..!!
ನಾ ಎಷ್ಟೇ ಹರಿಸಿದರು ಮೈಯಲ್ಲಿ ಬೆವರು..!!
ನನ್ನಂತವರಿಗೆ ಸಿಕ್ಕಲ್ಲ ಆ ಲಕ್ಷ್ಮೀ ದೇವರು...!!

- Harish Gowda

24 Apr 2021, 09:51 pm

ಕೊರೋನಾ..

ಇಂದು ಮಾಡಲು ಉಸಿರಾಟ...!!
ಮೂಗು ಕಿವಿಗಳು ಮಾಡುತ್ತಿವೆ ಮಾಸ್ಕ್ ಜೊತೆ ಹೋರಾಟ!!
ಮಾಸ್ಕ್ ಇಲ್ಲದೆ ಮಾಡಿದರೆ ಓಡಾಟ..!!
ಮಾರ್ಸಲ್ ಗಳಿಗೆ ಏಣಿಸಬೇಕಾಗುತ್ತೆ ಗರಿಗರಿ ನೋಟ..!!

- Harish Gowda

24 Apr 2021, 09:38 pm

೧೦೦೦%

ಮೋಸ ಮಾಡುವ
ಜನಗಳ ನಂಬಿದರು
ದೇವರನ್ನ ನಂಬಬೇಡ
ಏಕೆಂದರೆ ಮೋಸ
ಮಾಡಿದವನು
ಒಂದಲ್ಲ ಒಂದು ದಿನ
ಸಿಗುತ್ತಾನೆ ಆದರೆ
ದೇವರು ಮಾತ್ರ
ಸತ್ತರು ಸಿಗೋದಿಲ್ಲ

- ರಾಜು ಹಾಸನ

22 Apr 2021, 10:25 pm

ನಂಬು

ನಾ ದೇವರನ್ನ
ನಂಬುವುದಿಲ್ಲ
ಜನರನ್ನ ನಂಬುವೇ
ಏಕೆಂದರೆ
ನಾ ಸತ್ತಾಗ ಬಂದು
ಹೊರುವುದು ದೆವರಲ್ಲ
ನಾಲ್ಕೇ ನಾಲ್ಕು
ಜನರು ಬಂಧು ಮಿತ್ರರು
********ರಾಜು ಹಾಸನ********

- ರಾಜು ಹಾಸನ

22 Apr 2021, 12:51 pm

ಬದಲಾಗಿರುವುದು ನೀಜಾನೆ!

ನೀವು ಹೇಳುತ್ತಿರುವುದು ನಿಜಾನೆ
ನಾನು ಬದಲಾಗಿದ್ದೇನೆ.
ಅದ್ಯಾರೋ ತೀರಿಹೋದರು ಮರಗುತ್ತಿದ್ದೆ
ಹೀಗೀಗಾ ಹೆಚ್ಚು ಮರೆಯುತ್ತಿದ್ದೇನೆ,
ಎಲ್ಲಾ ನಮ್ಮದು, ನಮ್ಮವರು ಎಂಬ ಭ್ರಮೇಲಿ ಬದುಕುತ್ತಿದ್ದೆ..
ಹೀಗಿಗಾ ಎಲ್ಲವೂ ಕ್ಷಣಿಕ ಅನ್ನೋ ಸತ್ತ್ಯವನ್ನು ಅರಿತಿದ್ದೇನೆ..

ನಾನು ಬದಲಾಗಿರೋದೂ ನಿಜಾನೆ!
ಹಾಗಾಗ ಮೂಡುತ್ತಿದ್ದ ನೋವಿನ ಕಂಬನಿಯನ್ನ..
ಮುಗುಳುನಗೆಯೊಂದಿಗೆ ಮರೆಮಾಚಿರುವೆ..
ನೋವನ್ಯಾರು ಕೇಳುವರು ಹೇಳಿ! ನಗುವಿದ್ದರೆ ಮುಖದಲ್ಲಿ ..

ಪರಿಚಿತವಾದರು ಅಪರಿಚಿತ
ನನ್ನದೇ ಇದ್ದರೂ ನನ್ನದಲ್ಲದ ಭಾವ..
ದಾರಿ ಗೊತ್ತಿದ್ದರೂ ನಕ್ಷೆಯ ಹುಡುಕಾಟ
ನನ್ನದೇ ಬದುಕು ನನ್ನದಲ್ಲದ ಪಯಣ
ಗುರಿಯಿದ್ದರೆ ಗುರು ಹುಡುಕುವ ಯತ್ನ
ಗುರು ಸಿಕ್ಕರೂ ಗುರಿಯನ್ನೆ ಬದಲಾಯಿಸುವ ಆತುರ
ಬದುಕಿನ ದಾಹಕ್ಕೆ ಮನಸ್ಸಿನ ಕುಣಿತಕ್ಕೆ
ಬೇಕೇನಿಸುವುದು ಬೇಡಗಳೆಲ್ಲವೂ
ಮರುಭೂಮಿಯಲ್ಲಿ ನೀರು ಇದ್ದಂತೆ/ಸಿಕ್ಕಂತೆ..
ಕಾಲಾ ಎಲ್ಲವನ್ನೂ ಎಲ್ಲರಿಗೂ ಕಲಿಸುತ್ತದೆ
ಕಾಯಬೇಕಷ್ಟೇ...

ಏನೇ ಹೇಳಿ
ನಾ ಬದಲಾಗಿರುವುದು ನಿಜಾನೆ!
ಇದು ನಿಮಗೂ ಗೊತ್ತು
ಯಾಕಂದ್ರೆ ಬದಲಾವಣೆಗೆ
ಕಾರಣ ನೀವೇ ತಾನೇ!..

- saahithi

19 Apr 2021, 09:56 pm

ಅಮ್ಮನ ನೋವು

ನನ್ನ ಅಮ್ಮ ಕೇಳಿದಳು
ಎಲ್ಲರ ನೋವು-ನಲಿವು,ಆಸೆಗಳನ್ನ
ಆದರೆ ಹೇಳಲಿಲ್ಲ ಯಾರಲ್ಲೂ
ತನ್ನ ಆಸೆ ನೋವುಗಳನ್ನ.

ಮನಸ್ಸಿನ ತುಂಬಾ ಇದ್ದರೂ ನೋವು,
ತೋರಿಸುವಳು ಮುಖದ ತುಂಬಾ ನಗು.
ತನ್ನ ಜೀವನವು ಆಗಿದೆ ಚಿಂದಿಬಟ್ಟೆ
ಅದನ್ನು ಲೆಕ್ಕಿಸದೆ ಹೊಲಿದು ಕೊಡುವಳು ನಮೂನೆಯ ಬಟ್ಟೆ.

ಅವಳು ಜೀವನದ ಪೆಡಲ್ಲನ್ನು ತುಳಿಯುತ್ತ,
ಸಾಗಿಸುತ್ತಿದ್ದಾಳೆ ಬದುಕನ್ನ,
ಊರುಳಿಸುತ್ತಿದ್ದಾಳೆ ಇತಿಹಾಸದ ಚಕ್ರವನ್ನ.

ಅಮ್ಮನನ್ನು ನಂಬಿ ಬದುಕುತ್ತಿರುವ ಮಕ್ಕಳು,
ಅವರನ್ನು ನೋಡಿ ನೋವನ್ನು ಮರೆತು ನಕ್ಕಳು.
ಆದರೆ ಆ ಮಕ್ಕಳ ಬಗ್ಗೆ ಹುಟ್ಟಿತು ಚಿಂತೆ
ಮುಂದೆ ಅವರ ಬದುಕು ಹೇಗೆ ನಾ ಸತ್ರೆ.

ಅಮ್ಮನೇ ಕುಟುಂಬದ ಕಣ್ಣು.
ಎಲ್ಲರಿಗೂ ದೊರೆಯುವ ಹಲಸಿನ ಹಣ್ಣು.
ಮರಭೂಮಿಯಲ್ಲು ಸಿಗುವ ಹಸಿರು ಮಣ್ಣು.

- saahithi

19 Apr 2021, 09:55 pm

ಮನಕ್ಕೊಂದು ಪತ್ರ

Hey ಹುಚ್ಚು ಮನವೇ
ಯಾಕಿಷ್ಟು ನೊಂದಿರುವೆ...
ನೀ ಆಸೆಪಟ್ಟಿದ್ದೆಲ್ಲ ಸಿಗೋದಿಲ್ಲ,
ಕಾಣೋ ಕನಸ್ಸುಗಳೆಲ್ಲ ನನಸಾಗೊಲ್ಲ,
ಅವನ ಕೈ ಮೀರಿ ಏನು ನಡೆಯೊಲ್ಲ.

ಈ ಬದುಕ ಪಯಣದಲ್ಲಿ,
ನೋವು-ನಲಿವು ಕಾಳಗದಲ್ಲಿ....
ಸೋಲೇನೋ- ಗೆಲುವೇನೋ,
ಆಸ್ತಿನೋ-ಪಾಸ್ತಿನೋ,
ನೆಮ್ಮದಿ ಹೊರತು ಎನಿದ್ದರೇನು...?

ನಗುತಿರು ನೋವೇ ಇಲ್ಲ ಅನ್ನೋ ತರ
ಜೀವಿಸು ಕಷ್ಟಗಳೇ ಇಲ್ಲ ಅನ್ನೋತರ...
ಅವರವರ ಕಷ್ಟಗಳೇ ಅವರಿಗೆ ಅಪಾರ,
ನಿನ್ನ ನೋವು ಕೇಳುವವರು ಯಾರ....?

ನೊಂದ ಮನ, ಸೋತ ಮನ ಅದಷ್ಟೇ ನಿನ್ನದು!!
ತಿಳಿದುಕೊಂಡು ತಿಳಿಸಿಕೊಂಡು ಸಾಗುತಿರು....
ನಗುವುದ, ನಗಿಸುವುದ ಮರೆಯದಿರು!!!!!!

- saahithi

19 Apr 2021, 09:51 pm

ವ್ಯತ್ಯಾಸ

ಸಾರಾಯಿ ಕುಡಿದ ಕುಡುಕ
ಕುಡಿದ ಮತ್ತಿನಲ್ಲಿ ಹಾರಾಡಿ
ತೂರಾಡಿ ಪಲ್ಟಿ ಹೊಡೆದರೆ
ಅಂಧ ಭಕ್ತರು ಮೂಢ ಜನಗಳು
ದೇವರೆಂಬ ಭ್ರಮೆಯಲ್ಲಿ
ಕಂಡ ಕಂಡಲ್ಲಿ ಕಲ್ಲು ಕಂಡಲ್ಲಿ
ಪಲ್ಟಿ ಹೊಡೆಯುವರಯ್ಯ

- ರಾಜು ಹಾಸನ

19 Apr 2021, 10:23 am