ಕವನದ ಸಾಲುಗಳು
ಕಲ್ಪನೆಯಾದರೆ ಕೇವಲ
ಕನಸು ಮನಸ್ಸಿಗೆ
ಅಂದ ಚಂದವಷ್ಟೇ
ಕವನದ ಸಾಲುಗಳು
ಅಂಧಕಾರ ಮೂಢನಂಬಿಕೆ
ಕಡೆಗಣಿಸಿ ಕೊನೆಗಾಣಿಸಿ
ಉಳುಕು ತಳುಕು ಇಲ್ಲದ
ತಿರುಳು ತುಂಬಿದ
ಜ್ಞಾನದ ಸಾರವಾದರೆ
ಸಮಾಜ ತಿದ್ದುವ
ಆಯುಧವಾಗುವುದು
ಮೂರು ಹೊತ್ತಿನ ಅನ್ನಕ್ಕಾಗಿ
ಹಸಿದ ಹೊಟ್ಟೆಯ ಹಿಟ್ಟಿಗಾಗಿ
ದುಡಿದು ತಿನ್ನುವ
ಗಂಜಿ ಗೀರಕಿಗಳು ನಾವಾದರೂ
ಚಿಲ್ಲರೆ ಕಾಸಿಗೆ ಭಿಕ್ಷೆ ಬೇಡುವ
ಚಿಲ್ಲರೆ ಮನಸ್ಸಿನ ಗುಲಾಮರು
ಮನುವಾದಿ ಸಂತತಿಗಳು
ಅನ್ನ ತಿನ್ನುವ ಬಾಯಿಗೆ ಗಂಗ ಜಲವೆಂದು
ಪಂಚಮೃತವೆಂದು
ಗಂಜಲ ಕುಡಿಯುವ ಗಂಜಲ ಗೀರಕಿಗಳು
ಮನುವಾದಿ ಸಂಘಿಗಳು
ಮನುವಾದಿಗಳೇ ಏನಾದರೂ
ತಿಂದು ಕುಡಿದು ಸಾಯಿರಿ
ಮನುವಾದಿಗಳು ದೇಶ ಬಿಟ್ಟು ತೊಲಗಿ
ಮಸಣದ ಕಾಡಲು ಸೇರಿದರೆ
ಈ ದೇಶಕ್ಕೆ ಬಂದ ನಿಜವಾದ ವಿಜಯೋತ್ಸವ
ಹುಚ್ಚು ದೊರೆಯ ಹೆಸರು
ಇತಿಹಾಸ ಪುಸ್ತಕದ ಪುಟಗಳಲ್ಲಿ
ಓದಿದ್ದೆ ಕೇಳಿದ್ದೆ ಅಷ್ಟೇ
ಇಂದು ಕಂಡು ನೋಡಿದ್ದು ಆಯ್ತು
ಹುಚ್ಚು ದೊರೆ ಹುಚ್ಚಾಟಕ್ಕೆ
ದೇಶದ ಆರ್ಥಿಕತೆ ಕೊಚ್ಚಿಕೊಂಡು
ಹೋಗಿದ್ದು ಆಯ್ತು
ಮನುವಾದಿಗಳ ಮಂಗನ ಆಟಕ್ಕೆ
ದೇಶವೇ ಹೊತ್ತಿ ಉರಿದಿದ್ದು ಆಯ್ತು
ಹುಚ್ಚು ದೊರೆ ಹುಚ್ಚಾಟ್ಟ ಹೆಚ್ಚಾಗಿ
ದೇಶದ ಬಡತನ ಹೆಚ್ಚಾಗಿದೆ
ಸನಿಹವೇ ಬಂದಿದೆ ಅಂತ್ಯದ ಕಾಲ
ವಿನಾಶದ ಕೊನೆಗಾಲ
ಹುಚ್ಚು ದೊರೆಯ ಹುಚ್ಚಾಟಕ್ಕೆ
ತಿಲಾಂಜಲಿ ಹಾಡುವ ಕಾಲ
ಮಣ್ಣು ಮುಕ್ಕಿಸುವ ಕಾಲ
ದುಡ್ಡಿಗೆ ಬೆಲೆ ಇದ್ದರು
ಮಾನವಿಯತೆಗೆ ಬೆಲೆ
ಕಟ್ಟಲಾಗದು
ದುಡ್ಡು ದುಡಿದು
ದೊಡವನಾದರು
ದುಡ್ಡು ದೊಡ್ಡವನನ್ನು
ಉಳಿಸಿ ಬೆಳಸಿದ ದೇವರು
ದುಡಿಮೆಯ ದೇವರು
ಕಾರ್ಮಿಕ ದೇವರು
ಈ ದೇಶದ ಆಸ್ತಿ
ಆಸೆ ಕನಸುಗಳಿಗೆ
ಅಂತ್ಯವಿಲ್ಲದಿದ್ದರೂ
ಅಂತ್ಯವಿರುವ
ಅತ್ಮ ಜೀವಕ್ಕೆ ಹಣದ
ಮದಬೇಡ
ಸಿರಿ ಸಂಪತ್ತಿನ
ಜಂಬ ಬೇಡ
ಶಾಶ್ವತವಲ್ಲದ
ಹಣ ಗಂಟ್ಟಿದ್ದರು
ಬೆಲೆ ಕಟ್ಟಲಾಗದಯ್ಯಾ
ದುಡಿದು ಕೂಡಿಟ್ಟು
ಕೊಳ್ಳಲಾಗದಯ್ಯಾ
ಮನುಷ್ಯತ್ವದ ಗುಣ
ಮಾನವಿಯತೆ ಗುಣ
ಯಾರ ಖುಷಿಗೆ ಯಾರ ಒಲವಿಗೆ
ಗೋವು ಹತ್ಯೆ ನಿಷೇಧ ಕಾಯ್ದೆ
ಗೋವು ನಂಬಿ ಬದುಕು ನೆಡೆಸುವ
ಬಡ ಜನರ ರೈತ ಜನರ ಬಾಳು
ಗೋಳಾಗಿಸಿದ ಹುಚ್ಚು ಕಾಯ್ದೆ
ಮನುವಾದಿಗಳ ಮನ ಮೆಚ್ಚಿದ ಕಾಯ್ದೆ
ದೇಶಕ್ಕೆ ಬಂದು ಒದಗಿದ ದೊಡ್ಡ ಕಾಯಿಲೆ
ಧನ ಕಾಯುವವನಿಗೆ ಗೊತ್ತು
ಗೋವಿನ ಬಾಳು ಗೋಳು
ಜಾತಿ ಧರ್ಮದ ಕೊಚ್ಚೆ ಗುಂಡಿಗೆ
ಬಿದ್ದವನಿಗೇನು ಗೋತ್ತು
ಗೋವಿನ ಬದುಕು ಬಾಳು ಗೋಳು
ಗೋವಿನ ಹಾಲು ಕುಡಿದು
ವಿಷ ಕಕ್ಕವು ವಿಷ ಕಾರುವ
ಮನುವಾದಿಗಳಿಗೇನು ಗೋತ್ತು
ಗೋವು ಸಾಕುವ ಗೊಲ್ಲನ ಪಾಡು
ಬಡ ಜನರ ಹೊಟ್ಟೆ ಬಟ್ಟೆ
ಬದುಕು ಬಾಳಿನ ಪಾಡು
ಜಾತಿ ಮತ ಧರ್ಮದ
ಹುಚ್ಚು ಹೆಚ್ಚು ಹೆಚ್ಚಾಗಿ
ಜಾತಿ ಧರ್ಮದ ಅಂಧ ಜನರ
ಮೆಚ್ಚಿಸಲೆಂದು ತಂದ ಕಾಯ್ದೆ
ಮಾರಕ ಮಾರಕ ಮಾರಕ
ಹಳ್ಳಿ ದಿಲ್ಲಿಗೆ ಹರಡಿದ ಕಾಯಿಲೆ
ದೇಶಕ್ಕೆ ಅಂಟಿಕೊಂಡಿರುವ
ಮಹಾಮಾರಿ ಕಾಯಿಲೆ
ಮನುವಾದಿಗಳ ಹುಚ್ಚು ಕಾಯ್ದೆ
ರೈತರ ಕಷ್ಟವೇ ತಿಳಿಯಾದ
ಕಳ್ಳ ಸುಳ್ಳ ಮನುವಾದಿಗಳಿಗೇನು ಗೋತ್ತು
ರೈತ ಬಂಧು ಗೋವಿನ ಕಷ್ಟ ಸುಖ ಗೋಳಾಟ
ಗೋವು ಸಾಕಿದವನಿಗೆ ಗೋತ್ತೇ ಹೊರೆತು
ಬೀದಿಯಲ್ಲಿ ನಾಯಿ ನರಿ ಹಿಡಿದು
ನಡೆದು ಸಾಗುವವನಿಗೇನು ಗೋತ್ತು
ಕಲ್ಲು ಕಂಬದ ಗೊಂಬೆಗೆ
ಹಾಲು ಮೊಸರು
ಬೆಣ್ಣೆ ತುಪ್ಪ
ಸುರಿದು ಕಳೆಯುವ
ಮೂಢ ಜನರು
ದಣಿದ ಜನರು
ಜೀವ ತಣಿಸಲು
ನೀರು ಕೇಳಿದರೆ
ಮಡಿ ಮೈಲಿಗೆ ಎಂದು
ನಿರಾಕರಿಸಿ ದೂರಸರಿದು
ಬೊಗಸೆ ನೀರು
ಸುರಿದು ಎರಚುವರಯ್ಯಾ
ನೀಚ ಮನಸಿನ
ಮೂಢ ಜನಗಳು
ದಣಿದವರಿಗೆ ನೀರು
ಕೊಡದ ಮೂಢ ಜನರಿಗೆ
ದಣಿದ ವ್ಯಕ್ತಿ ಬೆವರು ಸುರಿಸಿ
ದುಡಿದು ಕೊಟ್ಟ ಅನ್ನ ಮಾತ್ರ
ಇವರ ಹೊಟ್ಟೆಗೆ ಬೇಕಯ್ಯಾ
ಇದು ಯಾವ ಧರ್ಮವೂ