Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಹಬ್ಬ ಹರಿದಿನ

ಭೂಮಿ ಬರಡಗಿ
ಕೆರೆ ಕಟ್ಟೆ ಒಣಗಿ ಬತ್ತಿ ಬಾಡಿ
ಖಾಲಿಯಾಗಿ ಕಾದು ಕುಂತಿದೆ
ಮಳೆರಾಯನ ಮುತ್ತಿನ
ಮಳೆ ಹನಿಗಳ ಚುಂಬನಕ್ಕೆ
ಗಿಡ ಮರಗಳ ರೆಂಬೆ ಕೊಂಬೆ ಉರುಳಿ
ಹೂವು ಕಾಯಿಯಾಗಿ
ಎಲೆ ಚಿಗುರು ಹೊಡೆಯುವ ಮಾಸ
ಹಳೆ ಮಾಸ ಕಳೆದು
ನವ ಮಾಸ ಬಂದಿದೆ ವಸಂತ ಮಾಸ
ತಂದು ಬಂದು ಕೊಟ್ಟಿದೆ
ಮಾಸ ಮಾಸಗಳು ದುಡಿದು ಬೆಂದ
ದುಡಿಮೆಯ ಧಣಿಗೆ
ದಣಿವು ತಣಿಸುವ ಮಾಸ
ರೈತ ಮಿತ್ರ ಬಂಡಿ ಎತ್ತು
ಉಳುಮೆ ಎತ್ತುಗಳ ಮೈ ಬಾರ
ಮೈ ಬರೆ ಮಾಸುವ ಮಾಸ
ಕೊಬ್ಬು ಕರಗಿದ ದೇಹಕ್ಕೆ
ಕೊಬ್ಬರಿ ಎಳ್ಳು ಬೆಲ್ಲ
ಕಬ್ಬು ಜೀರಿಗೆ ಜಿಗಿಯುವ ಮಾಸ
ಉಳ್ಳವರು ಮಂದಿರ ಆಲಯ
ಕಲ್ಲು ಕಂಬ ಸುತ್ತಿ ತಿರುಗುವ ಮಾಸ
ಇಲ್ಲದವರು ದುಡಿಮೆ ಹರಸಿ
ಸುತ್ತಿ ತಿರುಗಿ ದುಡಿದು ಹೊಟ್ಟೆ ಬಟ್ಟೆ
ಜುಟ್ಟಿಗೆ ಹೊಂದಿಸುವ ಮಾಸ
ಉಳ್ಳವರಿಗೆ ಸಂಭ್ರಮ ಆಚಾರಣೆ
ಇಲ್ಲದವರಿಗೆ ಹಸಿವಿನ ಜಾಗರಣೆ
ಉಳ್ಳವರಿಗೆ ಹಬ್ಬ ಹರಿದಿನಗಳ ಚಿಂತೆ
ಇಲ್ಲದವರಿಗೆ ಹೊಟ್ಟೆ ಬಟ್ಟೆಯ
ಗಂಟ್ಟು ಹಿಟ್ಟು ಬಡತನದ ಚಿಂತೆ
**********ರಾಜು ಹಾಸನ*********

- ರಾಜು ಹಾಸನ

14 Jan 2021, 11:16 am

ಆಚಾರ ವಿಚಾರ

ಬಡತನಕ್ಕೆ ಮೂಲ ಕಾರಣ
ಮೂಢನಂಬಿಕೆ ಆಚಾರ
ಆಚಾರ ದಿಕ್ಕರಿಸಿ
ವಿಚಾರ ಸ್ವೀಕರಿಸಿ
ಆಚಾರಕ್ಕೆಇಲ್ಲದಿರಲಿ
ನೆಲೆ ಬೆಲೆ ಮೂಲ ಬೆಲೆ
ವಿಚಾರಕ್ಕೆ ಸಿಗಲಿ
ನೆಲೆ ಬೆಲೆ ಒಳ್ಳೆ ಬೆಲೆ
ಆಚಾರಗಳು ಇದ್ದರು
ಇರಲಿ ಸೀಮಿತವಾಗಿರಲಿ
ನಿಮ್ಮ ಮನೆ ಮಂದಿರ
ಹಟ್ಟಿಯ ಒಳಗಿರಲಿ
ವಿಚಾರಗಳು ಹುಟ್ಟಿ
ಬರಲಿ ಬಯಲಿಗೆ
ಊರು ಕೇರಿ ಜಗದ
ತುಂಬೆಲ್ಲ ಹರಡಲಿ

ಜನರ ಏಳಿಗೆ ಬಯಸುವ
ದೇಶಕ್ಕೆ ಬೇಕು ವಿಚಾರವೇ
ಹೊರೆತು ಆಚಾರವಲ್ಲಾ
ಆಚಾರ ಹಣೆಗೆ ಅಂಟಿಸಿಕೊಂಡ
ಮೂಢನಂಬಿಕೆ ಮೈ ತುಂಬಿಕೊಂಡ
ದೇಶದ ಏಳಿಗೆ ಕುಂಠಿತ ಕುಂಠಿತ
ಹಾಗಾಗಿ ಆಧರಿಸಬೇಕು
ಸ್ವೀಕರಿಸಬೇಕು ಸಂವಿಧಾನದ ವಿಚಾರ
ಬಿಟ್ಟುಬಿಡಬೇಕು ತಿರಸ್ಕರಿಸಬೇಕು
ದಿಕ್ಕರಿಸಬೇಕು ಮೂಢನಂಬಿಕೆ ಆಚಾರ

- ರಾಜು ಹಾಸನ

14 Jan 2021, 09:58 am

ದುಡ್ಡು

ದುಡ್ಡೆಂದರೆ
ಹೆಣ ಬಾಯಿ
ಬಿಡುತ್ತೋ ಗೋತ್ತಿಲ್ಲ
ಆದರೆ ದುಡ್ಡೆಂದರೆ
ಜನ ಜೊಲ್ಲು
ಸುರಿಸಿ ದುಡ್ಡಿಗಾಗಿ
ಗುದ್ದಾಡಿ ಕಿತ್ತಾಡಿ
ಹೊಡೆದಾಡಿ
ಹೆಣವಾಗಿ
ಬಾಯಿ ಮುಚ್ಚಿ
ಮಲಗುವುದು
ಪಕ್ಕ ಪಕ್ಕ ಪಕ್ಕ
ದುಡ್ಡು ದುಡ್ಡು
ದುಡಿದರೂ
ದುಡ್ಡಿದವನು
ದೊಡ್ಡವನಾದರು
ದೊಡ್ಡವನಿಗೆ ದುಡ್ಡೇ
ದೊಡ್ಡಪ್ಪನಾದರು
ದುಡ್ಡು ದೊಡ್ಡವನಿಗೆ
ದುಡಿಯುವವನೇ
ಮೇಲು ಮೇಲು
ಮೇಲಪ್ಪ ಮೇಲಪ್ಪ

- ರಾಜು ಹಾಸನ

13 Jan 2021, 11:59 pm

ಒಡೆದುಹೋದ

ಒಡೆದು ಹೋದ ಮೋಡದ ಒಳಗಿಂದ ಮಳೆಯು ಸುರಿಯುತ್ತದೆ ! ಒಡೆದ ಹೋದ ಭತ್ತದಿಂದ ಉಣ್ಣೋ ಅಕ್ಕಿ ಸಿಗುತ್ತದೆ ! ಒಡೆದ ಹೋದ ಬೀಜದಿಂದ ಇನ್ನೊಂದು ಗಿಡ ಬೆಳೆಯುತ್ತದೆ ! ನಾವು ಮಾತ್ರವೇ ಒಡೆದುಹೋದರೆ ಚಿಂತೆಯ ಸಮುದ್ರದಲ್ಲಿ ಮುಳುಗಿ ಬಿಡುತ್ತೇವೆ! ಒಡೆದು ಹೋದ ಮನಸಿಗೆ ಪ್ರೀತಿಯೇ ಅಸ್ತ್ರ! ಒಡೆದು ಹೋದ ಬಾಳಿಗೆ ನಂಬಿಕೆಯೇ ಮಂತ್ರ! (ಹರಿಮಹೇಂದ್ರನ್)

- mahendran h

12 Jan 2021, 11:28 pm

ಅಮ್ಮ

ಗರ್ಭದಲ್ಲಿ ಭ್ರೂಣವ ಬೆಳೆಸಿದಳು! ಕರುಳು ಬಳ್ಳಿಯ ಮೂಲಕ ಊಟವ ಉಣಿಸಿದಳು! ಗಂಡೋ ಹೆಣ್ಣೋ ಗೊತ್ತಿಲ್ಲದೆ ಪ್ರೀತಿಸಿದಳು! ಒಂಬತ್ತು ತಿಂಗಳು ಕಷ್ಟಪಟ್ಟು ರಕ್ಷಣೆ ಮಾಡಿದಳು! ಜನನವ ಕೊಟ್ಟು ಈ ಭೂಮಿಗೆ ಪರಿಚಯಿಸಿದಳು! ಹೆರಿಗೆಯ ನೋವು ನಮ್ಮೆಲ್ಲರ ಸೃಷ್ಟಿ! ಅಮ್ಮ ಎನ್ನುವ ಕೂಗೆ ಶಕ್ತಿ! (ಹರಿಮಹೇಂದ್ರನ್)

- mahendran h

12 Jan 2021, 11:20 pm

ಅ_ಉ_ಪಾಕಾರಿ

ಕೈ ಕೆಸರಾದರು
ಮೈ ಮಸಿಯಾದರು
ಅಡಿ ಮುಡಿ
ಮಣ್ಣಾದರು
ಗುಣ ದಾನದಲ್ಲಿ
ಅಪ್ಪಟ ಅಂಪರಂಜಿ
ಬಂಗಾರದ ಮನುಷ್ಯ
ಉಕ್ಕಿನ ಮನುಷ್ಯ ರೈತ

ಬೇವರು ಹರಿಸಿ
ಶ್ರಮವಹಿಸಿ
ಕಣ್ಣೀರ ವರೆಸಿ
ಹಸಿದ ಜನರ
ಹಸಿವು ನೀಗಿಸಿ
ದಣಿವು ತಣಿಸಿದ
ಅನ್ನದ ಧಣಿ
ರೈತ ಗಣಿ
ನಮ್ಮ ನಿಮ್ಮೆಲ್ಲರ
ಕಣ್ಣ್ ಮಣಿ

ಗಾಳಿ ಮಳೆಗೆ
ಬಿಸಿಲು ಬೆಂಕಿಗೆ
ಗುಡುಗು ಸಿಡಿಲಿಗೆ
ಬದುಕು ಬಂಡಿ
ಚಿಂದಿ ಚಿಂದಿ
ಚಿಂದಿಯಾದರು
ದೇಶದ ಜನರಿಗೆ
ಚಿನ್ನ ಚಿನ್ನ ಚಿತ್ರಾನ್ನ
ಹಿಟ್ಟು ಮುದ್ದೆ
ಗಂಟ್ಟು ಮೂಟೆ ಕೊಟ್ಟು
ಉಳಿಸಿ ಬೆಳಸಿದ
ಚಿನ್ನದ ಗುಣದವನು ರೈತ

ಚಿಂದೀ ಹಾಯ್ದರು
ಕೈ ಚಾಚಿ ಭಿಕ್ಷೆ ಬೇಡದೆ
ಪರರಿಗೆ ಉಪಾಕಾರಿಯಾಗಿ
ಹಿಂದೆ ಮುಂದೆ ಯಾರೇ
ಬಂದರು ಬರದಿದ್ದರು
ನನ್ನವರು ತನ್ನವರು ಯಾರೇ
ಇದ್ದರು ಇಲ್ಲದಿದ್ದರು
ಕುಂತು ಕುರದೆ ನಿಂತು
ನಿಲ್ಲದೆ ದುಡಿದು
ದೇಶಕ್ಕೆ ಅನ್ನವನಿಟ್ಟ
ಪರೋಪಾಕಾರಿ ಜೀವಿ
ಮಾನವ ಬಂಧು ರೈತ

ನಮ್ಮ ಜೀವಾ
ಬದುಕು ಕಾಣ್ಣೋ
ಈ ದೇಶದ ಆಸ್ತಿ
ಉಸಿರು ಕಾಣ್ಣೋ
ನಮ್ಮ ಬಂಧು ಮಿತ್ರ
ಆಪ್ತಮಿತ್ರ ಕಾಣ್ಣೋ
ಮಣ್ಣಿನ ಮಗ
ರೈತ ಕಾಣೋ


ಜಾತಿ ಧರ್ಮದ
ಕೋಟೆ ಕಟ್ಟಿ
ಮೇಲು ಕೀಳಿನ
ಗೋಡೆ ಕಟ್ಟಿ
ಆಚಾರ ವಿಚಾರದ
ಕಥೆಯ ಕಟ್ಟಿ
ದೇಶ ದ್ರೋಹದ
ಪಟ್ಟ ಕಟ್ಟಿ
ದ್ವೇಷ ಅಸೂಯೆ
ಜನರ ತಲೆಗೆ ಕಟ್ಟಿ
ದೇಶಕ್ಕೆ ಬೆಂಕಿ ಇಟ್ಟು
ಇಡೀ ದೇಶವನ್ನೇ
ದಗದಗನೇ ದಗದಗನೆ
ಹೊತ್ತಿ ಉರಿಸಿ
ಪಟ್ಟದಾಸೆಗೆ
ಚಟ್ಟಕ್ಕೇರಿದ
ಪುಂಡ ಪೋಕರಿ
ದಂಡ ಪಿಂಡ
ಮನುವಾದಿಗಳು
ಹಿಂದು ಮುಂದು
ಎಂದೆಂದಿಗೂ
ಮಾರಿ ಮಾರಿ
ಊರು ಕೇರಿಗೆ
ಮಹಾಮಾರಿ ಹೆಮ್ಮಾರಿ
ಅಪಕಾರಿ ಅಪಕಾರಿ
ದೇಶ ಕೋಶಕ್ಕೆ
ಅಪಾಯಕಾರಿ
ಎಚ್ಚರ ಎಚ್ಚರ ಎಚ್ಚರ

- ರಾಜು ಹಾಸನ

12 Jan 2021, 09:29 am

ಕಾಲ

ಹಿಂದೊಂದು ಕಾಲವಿತ್ತು
ವರ್ಣ ಬೇಧದ ಕಾಲ
ಇಂದೊಂದು ಕಾಲವಿದೆ
ಸಮಾನತೆಯ ಕಾಲ
ಹಿಂದೊಂದು ಕಾಲವಿತ್ತು
ನನ್ನವರು ತನ್ನವರೆಂದರೆ
ತಬ್ಬಿ ಅಪ್ಪಕೊಳ್ಳುವ ಕಾಲ
ಇಂದೊಂದು ಕಾಲವಿದೆ
ನನ್ನವರು ತನ್ನವರೆಂದರೆ
ತಳ್ಳಿ ತೆಗಳುವ ಕಾಲ
ಹಿಂದೊಂದು ಕಾಲವಿತ್ತು
ಸಂಬಂಧಗಳೆಂದರೆ
ಸಡಗರ ಸಂಭ್ರಮದ ಕಾಲ
ಇಂದೊಂದು ಕಾಲವಿದೆ
ಸಂಬಂಧಗಳೆಂದರೆ
ಸಪ್ಪೆ ಮೋರೆಯ ಕಾಲ
ಹಿಂದೊಂದು ಕಾಲವಿತ್ತು
ಬಂಧು ಬಳಗ ಬಂತ್ತೆಂದರೆ
ಬರಮಾಡಿಕೊಳ್ಳುವ ಕಾಲ
ಇಂದೊಂದು ಕಾಲವಿದೆ
ಬಂಧು ಬಳಗ ಬರುವರೆಂದು
ಬಾಗಿಲು ಮುಚ್ಚಿಕೊಳ್ಳುವ ಕಾಲ

ಹಿಂದೊಂದು ಕಾಲವಿತ್ತು
ಸಂಬಂಧಕ್ಕೆ ಬೆಲೆಕೊಟ್ಟು
ಸಿರಿ ಸಂಪತ್ತಿಗೆ
ಬೆಲೆಕೊಡದ ಕಾಲ
ಇಂದೊಂದು ಕಾಲವಿದೆ
ಸಂಬಂಧಕ್ಕೆ ಬೆಲೆ ಕೊಡದೆ
ಸಿರಿ ಸಂಪತ್ತಿಗೆ
ಬೆಲೆಕೊಡುವ ಕಾಲ
ಹಿಂದೊಂದು ಕಾಲವಿತ್ತು
ಪ್ರೀತಿ ಪ್ರೇಮ ಮಮತೆ
ತುಂಬಿದ ಕಾಲ
ಇಂದೊಂದು ಕಾಲವಿದೆ
ಮದ ಮತ್ಸರ ಮೋಹ
ತುಂಬಿದ ಕಾಲ
ಹಿಂದೊಂದು ಕಾಲವಿತ್ತು
ಜನರು ಬದಲಾದರೂ
ಭಾವನೆ ಒಂದೇ ಇದ್ದ ಕಾಲ
ಇಂದೊಂದು ಕಾಲವಿದೆ
ಜನರು ಬದಲಾದಂತೆ
ಭಾವನೆ ಬದಲಾಗುವ ಕಾಲ

- ರಾಜು ಹಾಸನ

10 Jan 2021, 08:24 am

ಓ ಕಂದ

ಓ ಕಂದ ಓ ಕಂದ
ಓ ನನ್ನ ಕಂದ
ನೀ ಊರು ಕೆರಿಗೆ
ಅಧಿಕಾರಿಯಾಗದಿದ್ದರು
ದುಡ್ಡಿನ ಮದ ತುಂಬಿದ
ದೊಡ್ಡವನಾಗದಿದ್ದರು
ನೀ ನಾಲ್ಕು ಅಕ್ಷರ
ಓದು ಬರಹ ಕಲಿತು
ಸ್ವಾಭಿಮಾನದ
ಮಗುವಾಗು
ಗಿಡವಾಗಿ ಬೆಳೆದು
ಮರವಾಗಿ ನಿಂತು
ದಣಿದು ಬಂದವರಿಗೆ
ದಣಿವು ನೀಗಿಸುವ
ಮರದ ನೆರಳಾಗು
ನಿನ್ನ ನಂಬಿದ ಜನರ
ಬದುಕು ಕಾಯುವ
ಕಾವಲುಗಾರನಾಗು
ಕೈ ಹಿಡಿದು ನಡೆಸುವ
ಮುನ್ನೆಡೆಸುವ ನಾಯಕನಾಗು
ಓ ಕಂದ ಓ ಕಂದ
ಓ ಕಂದ ನನ್ನ ಕಂದ

- ರಾಜು ಹಾಸನ

08 Jan 2021, 02:53 pm

ತಂದೆ ತಾಯಿ

ದೇವರು ದೇವರು
ನಿನ್ನ ಹೆತ್ತು ಹೊತ್ತು
ಸಾಕಿ ಸಲಹಿ ಬೆಳೆಸಿದ
ನಿನ್ನ ತಂದೆ ತಾಯಿಯೇ
ನಿನ್ನ ದೇವರು
ಗುಡಿ ಗೂಂಡಾಂತರ
ಸುತ್ತಿ ಸುಸ್ತಾಗಬೇಡ
ಆ ದೇವರು ಈ ದೇವರೆಂದು
ಕಲ್ಲು ಬಂಡೆಗೆ ತಲೆ ಚಚ್ಚಿ
ನಂಬಿ ಮೋಸ ಹೋಗಬೇಡ

ಮುಕ್ತಿ ಮೋಕ್ಷಕ್ಕಾಗಿ
ಕ್ಷೇತ್ರ ಕ್ಷೇತ್ರ ಪುಣ್ಯ ಕ್ಷೇತ್ರ
ಅಲೆದಾಡಿ ಪರದಾಡಿ
ಕಲ್ಲು ಗೊಂಬೆಯ ಮುಂದೆ
ಬಿದ್ದು ಬೆಡಬೇಡ
ನೀ ಹುಟ್ಟಿ ಬೆಳೆದು ಆಡಿ ಬಂದ
ಗುಡಿಯಲ್ಲಿರುವರು
ನಿನಗೆ ಜನ್ಮ ಕೊಟ್ಟ ದೇವರು
ನಿನ್ನ ತಂದೆ ತಾಯಿಯೇ
ನಿನ್ನ ದೇವರು ಮರೆಯಬೇಡ

ಜೀವವಿಲ್ಲದ
ತಿನ್ನಲಾಗದ ಕಲ್ಲಿಗೆ
ಗುಡಿಯ ಮೇಲೆ ಗುಡಿ ಕಟ್ಟಿ
ಹಣ್ಣು ಕಾಯಿ ಹೋಳಿಗೆ
ಕಡುಬಿನ ಎಡೆ ಇಟ್ಟು
ಹಾಲು ತುಪ್ಪ ಗಂಧದ
ಚಂದನದ ಅರಿಶಿಣದ
ಎಳೆನೀರು ಸುರಿದು
ಕಳೆಯಬೇಡ
ನಿನ್ನ ಹೆತ್ತು ಹೊತ್ತುವರಿಗೆ
ಅನ್ನ ನೀರು ಕೊಟ್ಟು
ಪ್ರೀತಿಸಿ ಪೂಜಿಸಿ ಆರಾಧಿಸು
ನಿನ್ನ ದೇಹದ ಕೊನೆ
ಉಸಿರು ಇರುವ ತನಕ
ಅಂದೇ ಸಿಗುವುದಯ್ಯಾ
ನಿನಗೆ ಸ್ವರ್ಗಕ್ಕಿಂತ ಮಿಗಿಲಾದ
ಬೆಲೆ ಕಟ್ಟಲಾಗದ
ಶ್ರೇಷ್ಠ ಸ್ವರ್ಗ ಸುಖವಯ್ಯಾ

- ರಾಜು ಹಾಸನ

08 Jan 2021, 08:57 am

ಬಾಲ್ಯದ ನೆನಪು

ಕಳೆದುಹೋದ ದಿನಗಳು
ಮರುಕಳಿಸುತ್ತಿದೆ ನೆನಪುಗಳು
ಒಮ್ಮೆ ಹೋಗಬೇಕು ಸವಿಬಾಲ್ಯ ದ ನೆನಪಿಗೆ
ಧನ್ಯವಾದಗಳು ನೆನಪನ್ನು ನೆನಪಿಸುವ ಸವಿಕನಸಿಗೆ!!

ಬಾಲ್ಯದ ಹಾದಿ ಅತಿ ಕಠಿಣ
ನಾಲ್ವರಿಗೆ ಅದೆ ಸುಂದರ
ತುಂಟಾಟದ ಆದಿನ ಮನೋಹರ
ಕೆಲವೊಂದು ಕ್ಷಣ ಭಯಂಕರ!!

ಅಪ್ಪನ ಕೈಯಲ್ಲಿ ಸ್ಕೇಲ್
ಅಮ್ಮನ ಕೈಯಲ್ಲಿ ಕೋಲು
ಸ್ಕೇಲ್ ಕೋಲು ಸೇರಿದಾಗ
ನಾವಾಗುತ್ತಿದ್ದೆವು ಅಡಿ ಮೇಲು!!

ಅಪ್ಪನ ಬೈಗುಳದ ಪಾಠ
ಅಮ್ಮನ ಪ್ರೀತಿಯ ಊಟ
ತಣಿಸುತ್ತಿತ್ತು ಉದರವ ಎಂದು
ಋಣಿಯಾಗಿರುವೆವು ಅವರಿಗೆ ಎಂದೆಂದೂ!!

ಬಾಲ್ಯಕ್ಕೆ ಹೋಗಬೇಕೆನಿಸುತ್ತಿದೆ ಈ ಯೌವ್ವನದಿ
ಮತ್ತೆ ಆಡಬೇಕು ನಾಲ್ವರ ಪುಟ್ಟ ಜಗದಿ
ಸಹೋದರರ ಚೇಷ್ಟೆ ಚಂದ
ಅಪ್ಪುವಿನ ನಗು ಚಂದ!!

ಮುಗ್ದ ಮನಸ್ಸುಗಳ ಜೊತೆ ಸೇರುತ್ತಿದ್ದೆವು ಅಂದು
ಆದರೆ ಎಲ್ಲರೂ ಹಾದಿ ದೂರ ದೂರ ಇಂದು
ಅಂದು ಒಂದು ಕಪಿಯ ತರಹ
ಇಂದು ನೆನಪುಗಳನ್ನು ಮೂಡಿಸುತ್ತಿದೆ ನನ್ನ......ಬರಹ!!!

‌ ‌‌ರಚನೆ: ಮಾಲಾಶ್ರೀ

- Akshatha Shetty

07 Jan 2021, 03:08 pm