ಬಡತನಕ್ಕೆ ಮೂಲ ಕಾರಣ
ಮೂಢನಂಬಿಕೆ ಆಚಾರ
ಆಚಾರ ದಿಕ್ಕರಿಸಿ
ವಿಚಾರ ಸ್ವೀಕರಿಸಿ
ಆಚಾರಕ್ಕೆಇಲ್ಲದಿರಲಿ
ನೆಲೆ ಬೆಲೆ ಮೂಲ ಬೆಲೆ
ವಿಚಾರಕ್ಕೆ ಸಿಗಲಿ
ನೆಲೆ ಬೆಲೆ ಒಳ್ಳೆ ಬೆಲೆ
ಆಚಾರಗಳು ಇದ್ದರು
ಇರಲಿ ಸೀಮಿತವಾಗಿರಲಿ
ನಿಮ್ಮ ಮನೆ ಮಂದಿರ
ಹಟ್ಟಿಯ ಒಳಗಿರಲಿ
ವಿಚಾರಗಳು ಹುಟ್ಟಿ
ಬರಲಿ ಬಯಲಿಗೆ
ಊರು ಕೇರಿ ಜಗದ
ತುಂಬೆಲ್ಲ ಹರಡಲಿ
ಜನರ ಏಳಿಗೆ ಬಯಸುವ
ದೇಶಕ್ಕೆ ಬೇಕು ವಿಚಾರವೇ
ಹೊರೆತು ಆಚಾರವಲ್ಲಾ
ಆಚಾರ ಹಣೆಗೆ ಅಂಟಿಸಿಕೊಂಡ
ಮೂಢನಂಬಿಕೆ ಮೈ ತುಂಬಿಕೊಂಡ
ದೇಶದ ಏಳಿಗೆ ಕುಂಠಿತ ಕುಂಠಿತ
ಹಾಗಾಗಿ ಆಧರಿಸಬೇಕು
ಸ್ವೀಕರಿಸಬೇಕು ಸಂವಿಧಾನದ ವಿಚಾರ
ಬಿಟ್ಟುಬಿಡಬೇಕು ತಿರಸ್ಕರಿಸಬೇಕು
ದಿಕ್ಕರಿಸಬೇಕು ಮೂಢನಂಬಿಕೆ ಆಚಾರ
ಒಡೆದು ಹೋದ ಮೋಡದ ಒಳಗಿಂದ ಮಳೆಯು ಸುರಿಯುತ್ತದೆ ! ಒಡೆದ ಹೋದ ಭತ್ತದಿಂದ ಉಣ್ಣೋ ಅಕ್ಕಿ ಸಿಗುತ್ತದೆ ! ಒಡೆದ ಹೋದ ಬೀಜದಿಂದ ಇನ್ನೊಂದು ಗಿಡ ಬೆಳೆಯುತ್ತದೆ ! ನಾವು ಮಾತ್ರವೇ ಒಡೆದುಹೋದರೆ ಚಿಂತೆಯ ಸಮುದ್ರದಲ್ಲಿ ಮುಳುಗಿ ಬಿಡುತ್ತೇವೆ! ಒಡೆದು ಹೋದ ಮನಸಿಗೆ ಪ್ರೀತಿಯೇ ಅಸ್ತ್ರ! ಒಡೆದು ಹೋದ ಬಾಳಿಗೆ ನಂಬಿಕೆಯೇ ಮಂತ್ರ! (ಹರಿಮಹೇಂದ್ರನ್)
ಗರ್ಭದಲ್ಲಿ ಭ್ರೂಣವ ಬೆಳೆಸಿದಳು! ಕರುಳು ಬಳ್ಳಿಯ ಮೂಲಕ ಊಟವ ಉಣಿಸಿದಳು! ಗಂಡೋ ಹೆಣ್ಣೋ ಗೊತ್ತಿಲ್ಲದೆ ಪ್ರೀತಿಸಿದಳು! ಒಂಬತ್ತು ತಿಂಗಳು ಕಷ್ಟಪಟ್ಟು ರಕ್ಷಣೆ ಮಾಡಿದಳು! ಜನನವ ಕೊಟ್ಟು ಈ ಭೂಮಿಗೆ ಪರಿಚಯಿಸಿದಳು! ಹೆರಿಗೆಯ ನೋವು ನಮ್ಮೆಲ್ಲರ ಸೃಷ್ಟಿ! ಅಮ್ಮ ಎನ್ನುವ ಕೂಗೆ ಶಕ್ತಿ! (ಹರಿಮಹೇಂದ್ರನ್)
ಕೈ ಕೆಸರಾದರು
ಮೈ ಮಸಿಯಾದರು
ಅಡಿ ಮುಡಿ
ಮಣ್ಣಾದರು
ಗುಣ ದಾನದಲ್ಲಿ
ಅಪ್ಪಟ ಅಂಪರಂಜಿ
ಬಂಗಾರದ ಮನುಷ್ಯ
ಉಕ್ಕಿನ ಮನುಷ್ಯ ರೈತ
ಬೇವರು ಹರಿಸಿ
ಶ್ರಮವಹಿಸಿ
ಕಣ್ಣೀರ ವರೆಸಿ
ಹಸಿದ ಜನರ
ಹಸಿವು ನೀಗಿಸಿ
ದಣಿವು ತಣಿಸಿದ
ಅನ್ನದ ಧಣಿ
ರೈತ ಗಣಿ
ನಮ್ಮ ನಿಮ್ಮೆಲ್ಲರ
ಕಣ್ಣ್ ಮಣಿ
ಗಾಳಿ ಮಳೆಗೆ
ಬಿಸಿಲು ಬೆಂಕಿಗೆ
ಗುಡುಗು ಸಿಡಿಲಿಗೆ
ಬದುಕು ಬಂಡಿ
ಚಿಂದಿ ಚಿಂದಿ
ಚಿಂದಿಯಾದರು
ದೇಶದ ಜನರಿಗೆ
ಚಿನ್ನ ಚಿನ್ನ ಚಿತ್ರಾನ್ನ
ಹಿಟ್ಟು ಮುದ್ದೆ
ಗಂಟ್ಟು ಮೂಟೆ ಕೊಟ್ಟು
ಉಳಿಸಿ ಬೆಳಸಿದ
ಚಿನ್ನದ ಗುಣದವನು ರೈತ
ಚಿಂದೀ ಹಾಯ್ದರು
ಕೈ ಚಾಚಿ ಭಿಕ್ಷೆ ಬೇಡದೆ
ಪರರಿಗೆ ಉಪಾಕಾರಿಯಾಗಿ
ಹಿಂದೆ ಮುಂದೆ ಯಾರೇ
ಬಂದರು ಬರದಿದ್ದರು
ನನ್ನವರು ತನ್ನವರು ಯಾರೇ
ಇದ್ದರು ಇಲ್ಲದಿದ್ದರು
ಕುಂತು ಕುರದೆ ನಿಂತು
ನಿಲ್ಲದೆ ದುಡಿದು
ದೇಶಕ್ಕೆ ಅನ್ನವನಿಟ್ಟ
ಪರೋಪಾಕಾರಿ ಜೀವಿ
ಮಾನವ ಬಂಧು ರೈತ
ನಮ್ಮ ಜೀವಾ
ಬದುಕು ಕಾಣ್ಣೋ
ಈ ದೇಶದ ಆಸ್ತಿ
ಉಸಿರು ಕಾಣ್ಣೋ
ನಮ್ಮ ಬಂಧು ಮಿತ್ರ
ಆಪ್ತಮಿತ್ರ ಕಾಣ್ಣೋ
ಮಣ್ಣಿನ ಮಗ
ರೈತ ಕಾಣೋ
ಜಾತಿ ಧರ್ಮದ
ಕೋಟೆ ಕಟ್ಟಿ
ಮೇಲು ಕೀಳಿನ
ಗೋಡೆ ಕಟ್ಟಿ
ಆಚಾರ ವಿಚಾರದ
ಕಥೆಯ ಕಟ್ಟಿ
ದೇಶ ದ್ರೋಹದ
ಪಟ್ಟ ಕಟ್ಟಿ
ದ್ವೇಷ ಅಸೂಯೆ
ಜನರ ತಲೆಗೆ ಕಟ್ಟಿ
ದೇಶಕ್ಕೆ ಬೆಂಕಿ ಇಟ್ಟು
ಇಡೀ ದೇಶವನ್ನೇ
ದಗದಗನೇ ದಗದಗನೆ
ಹೊತ್ತಿ ಉರಿಸಿ
ಪಟ್ಟದಾಸೆಗೆ
ಚಟ್ಟಕ್ಕೇರಿದ
ಪುಂಡ ಪೋಕರಿ
ದಂಡ ಪಿಂಡ
ಮನುವಾದಿಗಳು
ಹಿಂದು ಮುಂದು
ಎಂದೆಂದಿಗೂ
ಮಾರಿ ಮಾರಿ
ಊರು ಕೇರಿಗೆ
ಮಹಾಮಾರಿ ಹೆಮ್ಮಾರಿ
ಅಪಕಾರಿ ಅಪಕಾರಿ
ದೇಶ ಕೋಶಕ್ಕೆ
ಅಪಾಯಕಾರಿ
ಎಚ್ಚರ ಎಚ್ಚರ ಎಚ್ಚರ
ಹಿಂದೊಂದು ಕಾಲವಿತ್ತು
ವರ್ಣ ಬೇಧದ ಕಾಲ
ಇಂದೊಂದು ಕಾಲವಿದೆ
ಸಮಾನತೆಯ ಕಾಲ
ಹಿಂದೊಂದು ಕಾಲವಿತ್ತು
ನನ್ನವರು ತನ್ನವರೆಂದರೆ
ತಬ್ಬಿ ಅಪ್ಪಕೊಳ್ಳುವ ಕಾಲ
ಇಂದೊಂದು ಕಾಲವಿದೆ
ನನ್ನವರು ತನ್ನವರೆಂದರೆ
ತಳ್ಳಿ ತೆಗಳುವ ಕಾಲ
ಹಿಂದೊಂದು ಕಾಲವಿತ್ತು
ಸಂಬಂಧಗಳೆಂದರೆ
ಸಡಗರ ಸಂಭ್ರಮದ ಕಾಲ
ಇಂದೊಂದು ಕಾಲವಿದೆ
ಸಂಬಂಧಗಳೆಂದರೆ
ಸಪ್ಪೆ ಮೋರೆಯ ಕಾಲ
ಹಿಂದೊಂದು ಕಾಲವಿತ್ತು
ಬಂಧು ಬಳಗ ಬಂತ್ತೆಂದರೆ
ಬರಮಾಡಿಕೊಳ್ಳುವ ಕಾಲ
ಇಂದೊಂದು ಕಾಲವಿದೆ
ಬಂಧು ಬಳಗ ಬರುವರೆಂದು
ಬಾಗಿಲು ಮುಚ್ಚಿಕೊಳ್ಳುವ ಕಾಲ
ಹಿಂದೊಂದು ಕಾಲವಿತ್ತು
ಸಂಬಂಧಕ್ಕೆ ಬೆಲೆಕೊಟ್ಟು
ಸಿರಿ ಸಂಪತ್ತಿಗೆ
ಬೆಲೆಕೊಡದ ಕಾಲ
ಇಂದೊಂದು ಕಾಲವಿದೆ
ಸಂಬಂಧಕ್ಕೆ ಬೆಲೆ ಕೊಡದೆ
ಸಿರಿ ಸಂಪತ್ತಿಗೆ
ಬೆಲೆಕೊಡುವ ಕಾಲ
ಹಿಂದೊಂದು ಕಾಲವಿತ್ತು
ಪ್ರೀತಿ ಪ್ರೇಮ ಮಮತೆ
ತುಂಬಿದ ಕಾಲ
ಇಂದೊಂದು ಕಾಲವಿದೆ
ಮದ ಮತ್ಸರ ಮೋಹ
ತುಂಬಿದ ಕಾಲ
ಹಿಂದೊಂದು ಕಾಲವಿತ್ತು
ಜನರು ಬದಲಾದರೂ
ಭಾವನೆ ಒಂದೇ ಇದ್ದ ಕಾಲ
ಇಂದೊಂದು ಕಾಲವಿದೆ
ಜನರು ಬದಲಾದಂತೆ
ಭಾವನೆ ಬದಲಾಗುವ ಕಾಲ
ಓ ಕಂದ ಓ ಕಂದ
ಓ ನನ್ನ ಕಂದ
ನೀ ಊರು ಕೆರಿಗೆ
ಅಧಿಕಾರಿಯಾಗದಿದ್ದರು
ದುಡ್ಡಿನ ಮದ ತುಂಬಿದ
ದೊಡ್ಡವನಾಗದಿದ್ದರು
ನೀ ನಾಲ್ಕು ಅಕ್ಷರ
ಓದು ಬರಹ ಕಲಿತು
ಸ್ವಾಭಿಮಾನದ
ಮಗುವಾಗು
ಗಿಡವಾಗಿ ಬೆಳೆದು
ಮರವಾಗಿ ನಿಂತು
ದಣಿದು ಬಂದವರಿಗೆ
ದಣಿವು ನೀಗಿಸುವ
ಮರದ ನೆರಳಾಗು
ನಿನ್ನ ನಂಬಿದ ಜನರ
ಬದುಕು ಕಾಯುವ
ಕಾವಲುಗಾರನಾಗು
ಕೈ ಹಿಡಿದು ನಡೆಸುವ
ಮುನ್ನೆಡೆಸುವ ನಾಯಕನಾಗು
ಓ ಕಂದ ಓ ಕಂದ
ಓ ಕಂದ ನನ್ನ ಕಂದ
ದೇವರು ದೇವರು
ನಿನ್ನ ಹೆತ್ತು ಹೊತ್ತು
ಸಾಕಿ ಸಲಹಿ ಬೆಳೆಸಿದ
ನಿನ್ನ ತಂದೆ ತಾಯಿಯೇ
ನಿನ್ನ ದೇವರು
ಗುಡಿ ಗೂಂಡಾಂತರ
ಸುತ್ತಿ ಸುಸ್ತಾಗಬೇಡ
ಆ ದೇವರು ಈ ದೇವರೆಂದು
ಕಲ್ಲು ಬಂಡೆಗೆ ತಲೆ ಚಚ್ಚಿ
ನಂಬಿ ಮೋಸ ಹೋಗಬೇಡ
ಮುಕ್ತಿ ಮೋಕ್ಷಕ್ಕಾಗಿ
ಕ್ಷೇತ್ರ ಕ್ಷೇತ್ರ ಪುಣ್ಯ ಕ್ಷೇತ್ರ
ಅಲೆದಾಡಿ ಪರದಾಡಿ
ಕಲ್ಲು ಗೊಂಬೆಯ ಮುಂದೆ
ಬಿದ್ದು ಬೆಡಬೇಡ
ನೀ ಹುಟ್ಟಿ ಬೆಳೆದು ಆಡಿ ಬಂದ
ಗುಡಿಯಲ್ಲಿರುವರು
ನಿನಗೆ ಜನ್ಮ ಕೊಟ್ಟ ದೇವರು
ನಿನ್ನ ತಂದೆ ತಾಯಿಯೇ
ನಿನ್ನ ದೇವರು ಮರೆಯಬೇಡ
ಜೀವವಿಲ್ಲದ
ತಿನ್ನಲಾಗದ ಕಲ್ಲಿಗೆ
ಗುಡಿಯ ಮೇಲೆ ಗುಡಿ ಕಟ್ಟಿ
ಹಣ್ಣು ಕಾಯಿ ಹೋಳಿಗೆ
ಕಡುಬಿನ ಎಡೆ ಇಟ್ಟು
ಹಾಲು ತುಪ್ಪ ಗಂಧದ
ಚಂದನದ ಅರಿಶಿಣದ
ಎಳೆನೀರು ಸುರಿದು
ಕಳೆಯಬೇಡ
ನಿನ್ನ ಹೆತ್ತು ಹೊತ್ತುವರಿಗೆ
ಅನ್ನ ನೀರು ಕೊಟ್ಟು
ಪ್ರೀತಿಸಿ ಪೂಜಿಸಿ ಆರಾಧಿಸು
ನಿನ್ನ ದೇಹದ ಕೊನೆ
ಉಸಿರು ಇರುವ ತನಕ
ಅಂದೇ ಸಿಗುವುದಯ್ಯಾ
ನಿನಗೆ ಸ್ವರ್ಗಕ್ಕಿಂತ ಮಿಗಿಲಾದ
ಬೆಲೆ ಕಟ್ಟಲಾಗದ
ಶ್ರೇಷ್ಠ ಸ್ವರ್ಗ ಸುಖವಯ್ಯಾ