Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಆಶಿರ್ವಾದ

ವಿದ್ಯೆ ಬುದ್ಧಿ ಜ್ಞಾನ ಕೊಟ್ಟು
ಬದುಕು ಬಾಳು ಬೆಳಗಿಸಿ
ಛಲದ ಬಲ ಸ್ವಾಭಿಮಾನದ ಬಲ
ನನ್ನೆದೆಯಲಿ ತುಂಬಿದ
ಬಾಬಾ ಸಾಹೇಬ್
ಭೀಮ್ ರಾವ್ ರವರ ನೆರಳು
ನನ್ನ ನೆತ್ತಿಯ ಮೇಲೆ ಇರುವಾಗ
ಯಾವ ದೇವರ ದರ್ಶನ ಬೇಡ
ಕಲ್ಲು ಬಂಡೆಯ ಆಶಿರ್ವಾದವೂ ಬೇಡ
ಜೈ ಭೀಮ್ ಜೈ ಭೀಮ್ ಜೈ ಭೀಮ್

- ರಾಜು ಹಾಸನ

07 Jan 2021, 02:33 pm

ಅಕ್ಕಿ ಕಾಳು

ಸೊನೆಯೇ ಸುರಿಯಲಿ
ಚಳಿಯೇ ಕೋರೆಯಲಿ
ಬಿಸಿಲೇ ಮೈ ಸುಡಲಿ
ಏನೇ ಆಗಲಿ ಏನೇ ಬರಲಿ
ಏನೇ ಬಂದು ಹೋದರು
ಶ್ರಮದಿ ದುಡಿದು ದೇಶಕ್ಕೆ
ಅನ್ನ ಕೊಟ್ಟ ದೇವರು
ರೈತ ರೈತ ದೇವರು

ಸುರಿವ ಮಳೆಯಲ್ಲಿ
ಮನೆಗಳು ಮುಳುಗಿದರು
ಕೊರೆಯುವ ಚಳಿಗೆ
ಗಡ ಗಡ ನಡುಗಿ ನಲುಗಿದರು
ಬಿಸಿಲು ಬೆಂಕಿಗೆ ಬೆಂದು ಸುಟ್ಟರು
ಛಲ ಬಿಡದೆ ದುಡಿಯುವ
ಕಾಯಕ ಯೋಗಿ ನೇಗಿಲ ಯೋಗಿ
ದೇಶದ ಬೆನ್ನೆಲುಬು ರೈತ ದೇವರು

ತಟ್ಟೆ ತುಂಬಾ
ಹೊಟ್ಟೆ ತುಂಬಾ
ತಿಂದು ತೇಗುವುದು
ರೈತ ಬೆಳೆದ ಅನ್ನವಾದರು
ಪೊಜಿಸಿ ಆರಾಧಿಸಿ
ಬಿದ್ದು ಬೇಡುವುದು ಮಾತ್ರ
ಜನರೇ ಸೃಷ್ಟಿಸಿ
ನಿರ್ಮಿಸಿದ ಗುಡಿಯೊಳಗಿನ
ಕಲ್ಲು ಬಂಡೆಯ
ಇದು ಎಂತಹ ಲೋಕವಯ್ಯ

ರೈತನ ಗೋಳು
ದೇಶ ಆಳುವ
ನಾಯಕರಿಗಿಲ್ಲ
ಆದರೆ ರೈತರ ಬೆಳೆದ
ರಟ್ಟೆ ಬೇವರಿನ
ಅನ್ನ ಮಾತ್ರ ಇವರ
ಹೊಟ್ಟೆಗೆ ಬೇಕು
ಇವರು ಎಂತಹ ನಾಯಕರೋ
ಇದು ಯಾವ ಸೀಮೆಯ
ನ್ಯಾಯ ನೀತಿ ಧರ್ಮವೋ

ಕಷ್ಟವೇ ಇರಲಿ
ಸುಖವೇ ಇರಲಿ
ಬೆವರು ಸುರಿಸಿ
ಕಣ್ಣೀರು ಹರಿಸಿ
ಮೈ ಮೂಳೆ ಮುರಿದರು
ದುಡಿದು ಕೊಟ್ಟ ಅನ್ನವ
ಜೀವವಿಲ್ಲದ ಕಲ್ಲು
ಕಂಬಕ್ಕೆ ಎಡೆ ಇಟ್ಟು ತಿನ್ನುವ
ಜನರಿಗೇನು ಗೊತ್ತು
ರೈತನ ಕಷ್ಟ ಅನ್ನದ ಬೆಲೆ

ರೈತರ ಗೋಳು
ಕೇಳದ ನಾಯಕರು
ಇದ್ದರೂ ಒಂದೇ
ಹೋದರು ಒಂದೇ
ಸತ್ತು ಬಿಟ್ಟರೆ
ಹಾಕಿಬಿಡುವೆನು ಅವರ
ಎದೆಯ ಮೇಲೆ
ಮೂರಿಡಿ ಮಣ್ಣು
ಬಾಯಿಗೆ ರೈತ
ರೈತರು ಬೆಳೆದ ಅಕ್ಕಿ ಕಾಳು

- ರಾಜು ಹಾಸನ

07 Jan 2021, 12:12 am

ಅರಿತು

ದೇವರು ದೇವರು
ಬೆಟ್ಟ ಗುಡ್ಡದ ಮೇಲಿನ
ಕರಿ ಕಲ್ಲ ದೇವರು
ಬಡವರ ಬದುಕು ಬರಿದಾಗಿಸಿದ
ಬಂಡೆ ದೇವರು
ಮನುವಾದಿಗಳಿಗೆ ಮನೆ ಮಠ
ಬಟ್ಟೆ ಕೊಟ್ಟ ಮಂತ್ರ ತಂತ್ರ
ಕುತಂತ್ರದ ಕಲ್ಲು ದೇವರು

ದೇವರು ದೇವರು
ನಸುಕಿನ ಮುಸುಕಿನ
ಬಿಸಿಲು ಬೆಂಕಿಯ ಝಳಕ್ಕೆ
ಮೈಯೊಡ್ಡಿ ಮೈ ಮೂಳೆ
ಮುರಿದರು ಮೈ ಬಗ್ಗಿಸಿ
ದುಡಿದು ತಿನ್ನುವವರಿಗೆ
ದುಡಿಮೆಯೇ ದೇವರು
ನೆಲ ಜಲ ಗಾಳಿ ಸೂರ್ಯ
ಚಂದ್ರರೇ ದಿಕ್ಕಾಪಾಲಾಕರು

ಕುಂತಲ್ಲಿಯೇ ಕುಂತು
ವಾಲಾಡಿ ತೂಕಡಿಸಿ
ದುಡಿಯದೇ ದುಡಿಸಿಕೊಂಡು
ತಿನ್ನುವವರಿಗೆ ಜನರಿಗೆ
ಕಲ್ಲು ಬಂಡೆಯೇ ದೇವರು
ಗುಡಿಯ ಸುತ್ತಲಿನ
ಕಲ್ಲು ಕಂಬ ಹೋಮ ಹವನ
ಮಂತ್ರ ತಂತ್ರವೇ
ಕುತಂತ್ರಿಗಳ ದಿಕ್ಕಪಾಲಾಕರು

ಮೂಢನಂಬಿಕೆಗೆ
ಬಲಿಯಾಗಿ ತಲೆ
ತಗ್ಗಿಸಿ ಬಗ್ಗಿಸಿ
ಮಾನುವಾದಿಗಳ
ಗುಲಾಮನಾಗಬೇಡ
ತಲೆ ಎತ್ತಿ ನಡೆ
ವಿದ್ಯೆ ಬುದ್ಧಿ ಕಲಿತು
ಸಂವಿಧಾನ ಅರಿತು

- ರಾಜು ಹಾಸನ

06 Jan 2021, 12:17 am

ಜೀವನಕ್ಕೊಂದು ಪಾಠ

ಪ್ರೀತಿ ಪ್ರೇಮದ ಚಿಟ್ಟೆ
ಹಾರಿ ಹೋಯಿತು ಬಿಟ್ಟು
ಪ್ರೀತಿ ಪ್ರೇಮವ ಕೊಟ್ಟು
ಮನಸಿಗೆ ಮನಸು ಕೊಟ್ಟು
ಹೃದಯಕ್ಕೆ ಹೃದಯ ಕೊಟ್ಟು
ಕಣ್ಣ್ ಗಳಿಗೆ ಕನಸು ಕಟ್ಟಿ
ಸಾವಿರಾರು ಆಸೆ ಇಟ್ಟು
ಬಿಟ್ಟು ಹೊರಟಿತ್ತು ಮರೆತು
ಎದೆಯಲ್ಲಿನಾ ಪ್ರೀತಿ
ಪ್ರೇಮವ ಉಳಿಸಿ ಬೆಳಸಿ
ಹೃದಯದ ಬಡಿತ ಹೆಚ್ಚಿಸಿ
ನನ್ನೆದೆಯೊಳಗಿನ ಪ್ರೀತಿ ಪ್ರೇಮವ
ಕೊಂದು ಸಾಯಿಸಿತು
ಬಿಟ್ಟು ಹೊರಟಿತ್ತು ಉಸಿರು ನಿಲ್ಲಿಸಿ
ಪ್ರೀತಿ ಪ್ರೇಮದ ಚಿಟ್ಟೆ
ಅಂತೂ ಇಂತೂ ಬಂದು
ಆಟವಾಡಿ ನಾಟಕವಾಡಿ
ಕಲಿಸಿತು ಜೀವನಕ್ಕೊಂದು ಪಾಠ

- ರಾಜು ಹಾಸನ

04 Jan 2021, 11:38 am

ದೀನ ದಲಿತರು

ಜಾತಿ ಧರ್ಮ
ಮೇಲು ಕೀಳು
ಮನುವಾದಿಗಳ
ಶೋಷಣೆಯ
ದ್ವೇಷಸುವುದರ
ಜೊತೆ ಜೊತೆಯಲಿ
ವಿದ್ಯೆ ಕಲಿತು
ಶಿಕ್ಷಿತರಾಗಿ
ಎಲ್ಲಾರು ಒಗ್ಗುಡಿ
ಸಂಘ ಸಂಘಟನೆ
ಕಟ್ಟಿಕೊಂಡು
ಹೋರಾಟ ನಡೆಸಿ
ಮುನ್ನೆಡೆದು
ದುಡಿದು ಮುಗಿಲೆತ್ತರಕ್ಕೆ
ಬೆಳೆದು ನಿಂತರೆ ಬೆಲೆ
ಇಲ್ಲದಿದ್ದರೆ ಬೆಲೆಯು ಇಲ್ಲ
ನೆಲೆಯು ಇಲ್ಲ
ಕಲೆ ಕಲೆ ಕಲೆ
ನಮ್ಮ ಬದುಕೇ
ಕೊಲೆ ಕೊಲೆ ಕೊಲೇ

- ರಾಜು ಹಾಸನ

02 Jan 2021, 11:56 pm

ಪ್ರೇಯಸಿ

ಆಸೆಗಳೇ ಇಲ್ಲದ
ಮರದ ಗೂಡಿಗೆ
ಬಂದಿತು ಹಕ್ಕಿಯು
ತಂದು ಕಟ್ಟಿತು
ಪ್ರೀತಿ ಪ್ರೇಮದ
ನೂರಾರು ಕನಸು
ಕನಸು ನನಸು ಆಗುವ
ಮುನ್ನವೇ ಬಿಟ್ಟು
ಹೊರಟಿತ್ತು ಬಾನಂಗಳಕ್ಕೆ
ಮತ್ತೆ ಮರಳಿ ನೆನೆದು
ಪ್ರೀತಿ ಹೊತ್ತ ಹಕ್ಕಿ
ಬರುವ ನಿರೀಕ್ಷೆ ಹೊತ್ತು
ಹೊತ್ತು ಕತ್ತಲಾದರು
ಮೋಡ ಕವಿದರು
ಕಾದು ಕುಳಿತಿದೆ
ಮರದ ಗೂಡು

- ರಾಜು ಹಾಸನ

02 Jan 2021, 11:19 pm

ನನ್ನ ದೇವರು

ಮನುವಾದಿ ಮೂಢರು
ದಿನಬೆಳಗಾದರೆ
ನೂರಾರು ಸಾವಿರಾರು
ಕಲ್ಲು ಬಂಡೆಯ
ದೇವರೆಂದು ಪೂಜಿಸಿ
ಆರಾಧಿಸಿದರು
ನಾ ಪೂಜಿಸಿ ಆರಾಧಿಸುವ
ದೇವರು ಒಬ್ಬರೇ ಒಬ್ಬರೇ
ಬಾಬಾ ಸಾಹೇಬ್
ಭೀಮ್ ರಾವ್
ಅವರೇ ಅವರೇ ನನ್ನ
ಎದೆಯೊಳಗಿನ ದೇವರು

- ರಾಜು ಹಾಸನ

02 Jan 2021, 02:30 pm

ಬಿಟ್ಟು ಹೋಗುವ ಬದುಕು

ನೀ ಸತ್ತು ಕೆಟ್ಟರೆ
ಬರುವುದಿಲ್ಲ ಹೋರುವುದಿಲ್ಲ
ನಿನ್ನ ಜಾತಿ ಧರ್ಮ
ನೀ ಸತ್ತು ಕೆಟ್ಟರೆ ಅತ್ತು ಕರೆದು
ಬಂದು ಹೋರುವರು
ನಿನ್ನ ನಂಬಿದ ಬಂಧು ಬಳಗ
ಇದ್ದಷ್ಟು ದಿನ ಮರವಾಗಿ
ನೆತ್ತಿಯ ಮೇಲಿನ ನೆರಳಾಗಿ
ಮರೆಯಾದೆ ನೆನೆಯುವ ಹೆಸರಾಗಿ
ಎಲ್ಲರೂ ನನ್ನವರು ತನ್ನವರೆಂಬ
ನಿನ್ನೆದೆಯ ಬಾವ
ಬದುಕಿನ ಪಯಣದಲ್ಲಿರಬೇಕು

ನಗು ನಗುತಾ ಬಾಳಬೇಕು
ಸಾಗಬೇಕು ಕಲ್ಲು ಮುಳ್ಳು ದಾಟಿ
ಎಡವಿ ನಡೆಯಬೇಕು
ಒಂಟಿ ಒಂಟಿ ಒಬ್ಬಂಟಿಯಾಗಿ
ಉಸಿರು ಬಿಟ್ಟು
‌‌ ದೇಹ ಬಿಟ್ಟು ಹೋಗಬೇಕು
ಎಲ್ಲ ಬಿಟ್ಟು ಎಲ್ಲ ಮರೆತು
ನಾಲ್ಕಾರು ದಿನ ಬದುಕಿ ಬಾಳಿ
ಬಿಟ್ಟು ಹೋಗುವ ಬದುಕಿಗೆ
ಜಾತಿ ಧರ್ಮದ ಪಟ್ಟ ಬೇಡ
ಮೇಲು ಕೀಳಿನ ಚಟ್ಟ ಬೇಡ
ಸ್ನೇಹ ಪ್ರೀತಿಯ ಚಪ್ಪರವಿರಲಿ

- ರಾಜು ಹಾಸನ

02 Jan 2021, 12:51 am

ಸಂಗಾತಿ

ಕ್ಷಣ ಕ್ಷಣದ ಕಷ್ಟಗಳನ್ನು
ಎದುರಿಸಲು ಸಿದ್ದ
ಜೊತೆಯಲ್ಲಿ ಇದ್ದವಳ
ಬಿಟ್ಟು ಬದುಕುವುದು
ತುಂಬಾ ಕಷ್ಟ
ಬದುಕಿ ಉಳಿದಿದ್ದು
ಸುಮ್ಮನೆ ನಷ್ಟ
ಯಾರಿಗೆ ಹೇಳೋದು
ಮನಸ್ಸು ಹೃದಯ
ಬಯಸಿದ ಇಷ್ಟ

ದಿನ ಬೆಳಗಾದರೆ ಕಣ್ಣ್
ತುಂಬಿಕೊಳ್ಳುವ ಆಸೆ
ನಗು ತುಂಬಿದ
ಕೆಂದಾವರೆ ಹೂವೆ
ಮುದ್ದು ಮುದ್ದು
ಮುದ್ದಿನ ಅರಗಿಣಿ
ಅರಳಿದ ಹೂ ಮಲ್ಲಿಗೆ
ಚಂದಿರನನ್ನೆ ನಾಚಿಸಿದ
ವೈಯಾರದ ಗೊಂಬೆ
ದಂತದ ಬೊಂಬೆ
***********ರಾಜು ಹಾಸನ********

- ರಾಜು ಹಾಸನ

01 Jan 2021, 11:33 pm

ಹೊಸ ವರುಷ

ಹಾಳೆ ಹಾಳೆ ಹಾಳೆ
ವರುಷ ಕಳೆದು
ಹೊಸ ವರುಷ ಬಂದಿದೆ
ಹರುಷವ ತಂದಿದೆ
ಎಲ್ಲರ ಮನೆ ಮನದಲ್ಲೂ
ಖುಷಿಯ ತಂದಿದೆ
ಚಿಲಿಪಿಲಿ ಚಿಣ್ಣರ
ಮೊಗದಲ್ಲಿ ಸಡಗರ
ಸಂಭ್ರಮ ತುಂಬಿದೆ
ಹದಿಹರೆಯದವರ
ಸದ್ದು ಗದ್ದಲ
ಮುಗಿಲು ಮುಟ್ಟಿಸಿದೆ

ಕಿಸೆ ಕಿಸೆ ಕಿಸೆ ತುಂಬಾ ಕಾಸಿದ್ದರೆ
ಹೊಸ ಹಾಡು ಹೊಸ ರಾಗ
ಹೊಸ ವರುಷ
ಕಿಸೆ ಕಿಸೆ ಖಾಲಿ ಕಿಸೆ ಇದ್ದರೆ
ಆದೇ ಹಾಡು ಆದೇ ರಾಗ
ಆದೇ ವರುಷ ಹಳೆ ವರುಷ

- ರಾಜು ಹಾಸನ

01 Jan 2021, 12:22 am