ಪ್ರೀತಿ ಎಂಬುದು ಸಕ್ಕರೆಯ ಸಿಹಿ ಬೆಲ್ಲ
ಸಿಹಿ ಇರುವ ತನಕ ಪ್ರೇಮಿಗಳ
ಹಾರಾಟ ತೂರಾಟ
ಆಗಸದೆತ್ತರಕ್ಕೆ ನಗುವಿನ ಸಾವರಿ
ಪ್ರೀತಿ ಪ್ರೇಮ ಮುರಿದು ಬಿದ್ದರೆ
ಕಾಣದ ಲೋಕಕ್ಕೆ ಪ್ರೇಮಿಗಳೆ ಪರಾರಿ
ನಿನ್ನ ತಿಟೆ ತೇವಲಿಗೆ
ಪ್ರೀತಿ ಕೊಂದು ನಗುತ್ತಿರುವಲ್ಲೆ ಗೆಳತಿ
ನಿನ್ನ ಮಾಯದ ಪ್ರೀತಿಗೆ
ಮರುಳಾಗಿ ಮಣ್ಣದನಲ್ಲೆ ಗೆಳತಿ
ಬಾರದಿರಲಿ ಮತ್ತೆವಾ ಪ್ರೇಮಿಗಳಿಗೆ
ಈ ನರಕದ ನೋವು ಕಾಡದಿರಲಿ
ನಗು ನಗುತ್ತಾ ಸುಖವಾಗಿ ಬಾಳು
ನೂರಾರು ಕಾಲ ನನ್ನ ಗೆಳತಿ
ಕಟ್ಟಿಕೊಂಡ ಗೆಳೆಯನಿಗೆ
ಮೋಸ ಮಾಡದಿರು ನನ್ನ ಗೆಳತಿ
ಜಿಂದಗಿ ಮೇಲೆ
ಬದುಕಲು ಬೇಕು
ನಯ ವಿನಯ
ಪ್ರೀತಿ ಪ್ರೇಮ ಸ್ನೇಹ ಹೋರೆತು
ಕರಗಿ ನೀರಾಗುವ
ಸಿರಿ ಸಂಪತ್ತು ಅಲ್ಲ
ಕೊಳೆತು ಮಣ್ಣಾಗುವ
ಹಣ ಅಂತಸ್ತು ಅಲ್ಲ
ಗುಡಿ ಗೋಪುರದೋಳಗಿನ
ಆಚಾರ ವಿಚಾರವಲ್ಲ
ಮನುವಾದಿಗಳ
ಗೊಡ್ಡು ಸಂಪ್ರದಾಯಗಳಲ್ಲ
ಅಣ್ಣನೆಂದರೆ ಅಣ್ಣ , ಅವನೇ ನಮ್ಮಣ್ಣ,
ನನ ಮನಸ್ಸಿಗೆ , ಇವನೇ ನಿಜವಾದ ದೊರೆಯಣ್ಣಾ,
ಅಣ್ಣನಿಲ್ಲದ ಒಂದು ಕ್ಷಣ , ಕಣ್ಣಿಲ್ಲದಂತಾಗುವುದು ನನ್ನ ಮನ ,
ಎಲ್ಲೆಲ್ಲೋ ದುಡುವನು , ಕಾಂಚಾಣ ತರುವನೋ ,
ಒಳಗೊಳಗೆ ಅಳುವನು , ನಮ್ಮನ್ನೊತ್ತು ಮೆರೆವನು,
ಅಣ್ಣನೆಂದರೆ ಅಣ್ಣ , ಅವನ ಮನ ಚಿನ್ನ.
ಅಣ್ಣನೆಂದರೆ ಅಣ್ಣ , ಅವನೇ ನಮ್ಮಣ್ಣ ,
ತಂದೆಯಂತೆ ಮನೆಯ ಕಾಯ್ದು ,
ಅಮ್ಮನಂತೆ ಮನಸ ನೇಯ್ದು ,
ಗುರುವಿನಂತೆ ಬುದ್ಧಿ ಕಲಿಸಿ ,ಎಲ್ಲ ಶಕ್ತಿ ಇಲ್ಲೆ ಸುರಿಸಿ,
ನನ್ನ ಕಾಯೋ ಸೈನಿಕ ,ಅದುವೇ ಅವನೇ ಕಾಯಕ,
ಅಣ್ಣನೆಂದರೆ ಅಣ್ಣ , ಅವನ ಮನ ಬಲು ಚನ್ನ .
ಅಣ್ಣನೆಂದರೆ ಅಣ್ಣ , ಅವನೇ ನಮ್ಮಣ್ಣ ,
ಹಿರಿಯರ ಬೇರು , ಒಲುಮೆಯ ತೇರು ,
ಕಷ್ಟಗಳ ಅಂಗಿ , ಸದಾ ನಗುವ ಭಂಗಿ ,
ಶಾಂತಿಯ ಹೊಲದಲ್ಲಿ, ಬೆವರಿನ ಮಳೆ ಹರಸಿ ,
ಬಂಗಾರದ ಬೆಳಕು ಚೆಲ್ಲುವ ಮುಖ ಬಣ್ಣ ,
ಇರುವೆಯಂತೆ ಮನೆಯ ಮಾಡಿ , ನೆರೆಯವರೆಗೆ ಅದನ ನೀಡೊ ದಾನಿಗ ...
ಅವನೇ ನನ್ನ ತಾಯಿಯ ಹಿರಿಮಗ....
----- ಜಿ.ವೀರೇಶ ಸಿರಿಗೇರಿ
ಬದುಕಿದ್ದಾಗ ತಂದೆ ತಾಯಿಗೆ
ಒಂದು ಬೊಗಸೆ ನೀರು
ಒಂದು ಹಿಡಿ ಅನ್ನ ಕೊಡದೆ
ಗುಡಿಯ ಮುಂದೆ
ನಿಂತು ಕುಂತು ಬೆಡಿದರೆ
ಸಿಗುವುದೇ ಮೂಢ ನಿನಗೆ ಮುಕ್ತಿ
ನಿನ್ನ ಹಸಿದ ಒಡಲಿಗೆ
ಹಾಲೆರೆದ ಬೆಳೆಸಿ ಸಲಹಿದ
ತಂದೆ ತಾಯಿಯ ಒಡಲಿಗೆ
ಹಸಿವಿನ ವಿಷವನ್ನು ಉಣಬಡಿಸಿ
ದೇವರೆಂದು ಕಲ್ಲು ಗೊಂಬೆಗೆ
ರಾಶಿ ರಾಶಿ ಹಾಲು ಸುರಿದರೆ
ಫಲಿಸುವುದೇ ಓ ಮೂಢ ನಿನಗೆ
ಬಂಗಾರದ ಬಾಳು
ಮೂಢ ಜನಗಳು
ಓ ಮೂಢ ಜನಗಳೇ
ಮುಕ್ತಿ ಎಂಬುದು
ಕಾಯಕದ ಭಕುತಿಯೇ ಹೊರೆತು
ಮೂಢನಂಬಿಕೆಯ ಮಂತ್ರಚಾರಣೆಯ
ಅಂಧಕಾರದ ಮಭಕ್ತಿಯಲ್ಲ
ತಂದೆ ತಾಯಿಯ ಸೇವೆಯೇ ದೇವರು ಸೇವೆ
ತಿಳಿಯೋ ಮಂಕುತಿಮ್ಮ
*********ರಾಜು ಹಾಸನ**********
ಮೂಢರು ಪೂಜಿಸಿ ಆರಾಧಿಸಿಲಿ
ಚಿನ್ನ ಬೆಳ್ಳಿ ಕಲ್ಲು ಕಂಬದ ಮರದ
ಗೊಂಬೆಯ ಮೆರವಣಿಗೆ
ಹೊತ್ತು ಸಾಗಲಿ ಊರೂರು ಬೀದಿ ಬೀದಿ
ಘರನೆ ಘರಘರನೆ ಸುತ್ತಿ ತಿರುಗಿಲಿ
ಗುಡಿಯ ಮುಂದೆ ಬಿದ್ದು ಬೇಡಲಿ
ನಾ ಇಂದು ಮುಂದು ಎಂದೆಂದಿಗೂ
ಪೂಜಿಸಿ ಆರಾಧಿಸುವ ದೇವರು
ನನ್ನ ಹೆತ್ತು ಹೊತ್ತು ಬೇಳಸಿದ
ನನ್ನ ತಂದೆ ತಾಯಿ ನನ್ನ ದೇವರು
***********ರಾಜು ಹಾಸನ************