Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಭೀಮ ಕೋರೆಂಗವ್

ಭೀಮ್ ಭೀಮ್
ಭೀಮ ಕೋರೆಂಗವ್
ಧೂಳ್ ಧೂಳ್ ಧೂಳ್
ಮಾದಗಜಗಳ ಆರ್ಭಟಕ್ಕೆ
ಮನುವಾದಿಗಳು
ಧೂಳ್ ಧೂಳ್ ಧೂಳ್

ಝಳ ಝಳ ಝಳಪಿಸುವ
ಜೈ ಭೀಮ್ ಸೈನಿಕರ ಕೈ ಕತ್ತಿಗೆ
ಮನುವಾದಿಗಳ ಕೈ ಕಾಲು ತಲೆ
ಮೈ ಮೂಳೆ ಪುಡಿ ಪುಡಿ ಹುಡಿ ಹುಡಿ

ರಣ ರಣ ರಣಹೇಡಿಗಳ
ಸಾಲು ಹೆಣಗಳ ಉರುಳಿಸಿ
ಗೆದ್ದು ಜಯಭೇರಿ ಬಾರಿಸಿದ
ರಣ ರಣ ರಣರಂಗದ
ಕೆಚ್ಚೆದೆ ಗಂಡುಗಲಿಗಳು
ದಲಿತ ಸೈನಿಕರ ನೆನಪಿರಲಿ

ಹಾರಾಟ ತೂರಾಟ
ಮನುವಾದಿಗಳ ಕಪ್ಪಟನಾಟಕ
ಭೀಮ್ ಘರ್ಜನೆಯ
ಸಿಡಿಲಬ್ಬರಕ್ಕೆ ಧೂಳಿಪಟ

ಕಿಚ್ಚು ಕಿಚ್ಚು ಕಿಚ್ಚು
ಜಾತಿ ಧರ್ಮದ ಬೆಂಕಿ ಹಚ್ಚಿ
ದೇಶವನ್ನೇ ಹೊತ್ತಿ ಉರಿಸಿದ
ಮನುವಾದಿಗಳ ಸಾಲು ಸಾಲು
ಹೆಣದ ರಾಶಿಗೆ
ಬೆಂಕಿ ಕೊಳ್ಳಿ ಇಟ್ಟ ಶೂರರು
ಧೀರರು ಸಿಡಿಲ ಸಿಂಹದ ಮರಿಗಳು
ಭೀಮ್ ಕೋರೆಂಗವ್ ಸೈನಿಕರು
********ರಾಜು ಹಾಸನ*********

- ರಾಜು ಹಾಸನ

31 Dec 2020, 10:30 pm

ಮುನ್ನುಡಿ

ಕಂಡವರ ಮಾತಿಗೆ ಮರುಳಗಬೇಡ
ಕಂಡವರ ಕಾಸಿಗೆ ಕೈ ಚಾಚಬೇಡ
ಕಂಡವರ ಕನಸಿಗೆ ಮುಳ್ಳಾಗಬೇಡ
ಕಂಡವರ ಆಸೆಗೆ ತಣ್ಣೀರು ಎರಚ ಬೇಡ
ಕಂಡವರ ಕಾಲು ಹಿಡಿಯಾಬೇಡ
ಕೈ ಹಿಡಿದು ಮುನ್ನೆಡೆಸುವ ನಾಯಕನಾಗು

ನಿನ್ನ ಕನಸು ಮನಸ್ಸು ಆಸೆಗೆ
ನೀನೇ ಹೊಣೆಯಾದರು
ನಿನ್ನ ರಟ್ಟೆಯಾ ಅನ್ನ
ನೀನೇ ದುಡಿದು ತಿಂದ್ದರು
ನಿನಗೆ ನೀನೇ ರಾಜ ರಾಣಿಯಾದರು
ಸಮಾನತೆಗೆ ಪಟ್ಟ ಕಟ್ಟಿ
ಅಸಮಾನತೆಗೆ ಚಟ್ಟ ಕಟ್ಟಿ
ನಿನ್ನ ಜೀವನಕ್ಕೆ ಜೀವ ಕೊಟ್ಟು
ನಿನ್ನ ಬುದುಕಿಗೆ ನೆರಳಾದ
ರಾಜ ಮಹಾರಾಜ ನನ್ನೊಡೆಯ
ಬಾಬಾ ಸಾಹೇಬರ
ಮರೆತು ಬಾಳಬೇಡ ಜೈ ಭೀಮ್

- ರಾಜು ಹಾಸನ

30 Dec 2020, 11:02 pm

ತನಕ

ನೂರು ಜನರ ಮಾತು
ಹೊತ್ತಾಗುವ ತನಕ
ಎದೆಯಲ್ಲಿನ ಪ್ರೀತಿ
ಮಣ್ಣಾಗುವ ತನಕ
ಮನದ ನೆನಪುಗಳು
ಕಣ್ಣ್ಮರೆಯಾಗುವ ತನಕ
ಓದಿ ಬರೆದು ಕಲಿತ ಜ್ಞಾನ
ಬದುಕಿರುವ ತನಕ
ಹೆಸರು ಗಳಿಸಿ ಊಸಿರದರೆ
ಅಚ್ಚಳಿಯದೆ ಉಳಿಯುವುದು
ಸೂರ್ಯ ಚಂದ್ರರು ಇರುವ ತನಕ
ಜೈ ಭೀಮ್ ಜೈ ಭೀಮ್

- ರಾಜು ಹಾಸನ

29 Dec 2020, 11:43 pm

ದೊಡ್ಡವರು

ದೊಡ್ಡವರು ದೊಡ್ಡವರು
ದುಡ್ಡೆಂದರೆ ಬಾಯಿಬಿಡುವಾ
ದಡ್ಡ ಜನಗಳು
ಕೋಟಿ ಕೋಟಿ ಕೊಡಿಟ್ಟರು
ಬಿಡುವುದಿಲ್ಲ ಚಿಕ್ಕವರ
ಚಿಲ್ಲರೆ ಕಾಸಿಗೆ ಕೈ ಚಾಚುವ
ದೊಡ್ಡ ಜನರು ದಡ್ಡ‌ ಜನರು
ಏನೇ ಬರಲಿ ಏನೇ ಆಗಲಿ
ದೊಡ್ಡವರಿಗೆ ಬೇಕು
ಕೊಟು ಬೂಟು ನೋಟು
ಜನರ ತಲೆ ಹೊಟ್ಟೆ ಹೊಡೆದು
ಸುಲಿಗೆ ವಸುಲಿ ಮಾಡುವ
ದೊಡ್ಡ ಜನರು ದಡ್ಡ ಜನರು
ಚಿಕ್ಕವರು ಬೆಳೆದ ಅನ್ನ ತಿಂದು
ಬದುಕು ನಡೆಸುವ
ದೊಡ್ಡವರು ಜನರು ದಡ್ಡ ಜನರು
ಚಿಕ್ಕವರು ದುಡಿದರೆ
ದೊಡ್ಡವರ ಜೀವನ
ದುಡಿಯದಿದ್ದರೇ ದೊಡ್ಡವರ
ಪಯಣ ಕಾಣದ ಕಡಲಿನತ್ತಾ
ಚಿಕ್ಕವರಿಲ್ಲದೆ ದೊಡ್ಡವರಿಲ್ಲಾ
ತಿಳಿಯೋ ಮಂಕುತಿಮ್ಮಣ್ಣ

- ರಾಜು ಹಾಸನ

29 Dec 2020, 02:57 pm

ದ್ರಾವಿಡರು

ಗುಲಾಮಗಿರಿ ಗುಲಾಮಗಿರಿ
ದಶ ಶತ ಶತಮಾನಗಳ
ಕೆಂಪು ಕೋತಿಗಳ
ಕಪ್ಪಿ ಮುಷ್ಟಿಯ
ಗುಲಾಮಗಿರಿ ಉರುಳಿ
ಸೂರುವಾಗಿದೆ ಸೂರುವಾಗಿದೆ
ಹುಟ್ಟಿನ ಅರಿವೇ ಇಲ್ಲದ
ನೆಲದ ಪರಿವೆಯೇ ಇಲ್ಲದ
ಮನುವಾದಿಗಳ ಮಂತ್ರ
ತಂತ್ರ ಕುತಂತ್ರದ ಗುಲಾಮಗಿರಿ

ಹೋರಾಡುವ ಛಲವಿಲ್ಲದಿದ್ದರು
ಛತ್ರಿ ಹಿಡಿದು ಪಟ್ಟಕ್ಕೇರಿ
ಚಟ್ಟ ಕಟ್ಟಿಸಿಕೊಂಡ
ಮನುವಾದಿಗಳ ಗುಲಾಮಗಿರಿ

ಕಚ್ಚುವುದು ಕಚ್ಚುವುದು
ಕಚ್ಚಿ ಸಾಯುಸುವುದು
ಹಾಲೆರೆದ ವಿಷ ಸರ್ಪ
ರೈತ ಬೆಳೆದ ಅನ್ನ ತಿಂದು
ಕಕ್ಕುವುದು ವಿಷ
ವಿಷ ವಿಷ ಕುಕ್ಕುವ
ಮನುವಾದಿಗಳ
ವಿಷದ ಗುಲಾಮಗಿರಿ

ಕಥೆ ಕಟ್ಟು ಕಥೆ
ಜನರಿಗೆ ತಲೆ ಕಟ್ಟಿ
ಪುಂಗಿ ಊದಿ
ಪಂಗನಾಮ ಹಾಕುವ
ದುಷ್ಟರ ಜನರ
ಗುಲಾಮಗಿರಿ

ದೇವರು ದೇವರೆಂದು
ಗುಡಿ ಗೋಪುರ ಕಲ್ಲು
ಕಂಬದ ಸುತ್ತ ಸುತ್ತಿಸಿ
ಆಚಾರ ವಿಚಾರವೆಂದು
ಸ್ತ್ರೀಯರ ಅಪಚಾರ
ಅವಮಾನ ಮಾಡಿದ
ನೀಚರಾ ಗುಲಾಮಗಿರಿ
ಹೊರ ಬನ್ನಿ ಹೊರ ಬನ್ನಿ
ನೀಚ ದುಷ್ಟ ಮನುವಾದಿಗಳ
ಗುಲಾಮಗಿರಿಯಿಂದ
ಹೊರ ಬಂದು ಹೋರಾಡಿ
ಹೊಡೆದು ಒದ್ದು ಓಡಿಸಿ
ಗೆದ್ದು ಜಯಸಿ ನಿಲ್ಲಿರಿ
ನನ್ನ ದಲಿತ ದ್ರಾವಿಡ ಬಂಧುಗಳೇ

- ರಾಜು ಹಾಸನ

28 Dec 2020, 11:08 pm

ಪಾಠ ಪಾಠ

ಹುಟ್ಟಿದಾಗ ಬರುವುದು ಜಾತಕ
ಸತ್ತಾಗ ಬರುವುದು ಸೂತಕ
ಹುಟ್ಟು ಸಾವಿನ ಮಧ್ಯೆ
ನೆಡೆಯುವುದು ಭರ್ಜರಿ ನಾಟಕ
ಹಸಿದವರಿಗೆ ಬಡತನದ ನರಕ
ಕೊಬ್ಬಿದವರಿಗೆ ಜೀವನ ಸಾರ್ಥಕ
ದುಡಿಮೆಯೇ ನಮ್ಮ ಕಾಯಕ
ಇಷ್ಟೆ ಮನುಜ ಜನ್ಮದ ಯಾಚಕ


ಬಣ್ಣ ಹಚ್ಚದೆ
ನೃತ್ಯ ನಾಟಕ ಮಾಡುವ
ನವರಂಗಿ ಆಟವಾಡುವ
ಮನುವಾದಿಗಳಿಗೆ
ಕಲಿಸಬೇಕಾಗಿದೆ
ಜೀವನದ ಪಾಠ ಪಾಠ

- ರಾಜು ಹಾಸನ

28 Dec 2020, 06:58 pm

ನಿಟ್ಟುಸಿರು

ಬಡವ ಶೋಷಿತರ
ತಂಟ್ಟೆಗೆ ಬಂದರೆ
ಕೈ ಕಾಲು ಮುರಿದು
ಹೋಗೆ ಆಡಿಸಿ
ಚಟ್ಟ ಪಟ್ಟ ಕಟ್ಟಿ
ತಮ್ಮಟೆ ಬರಿಸುವೆವು
ಮನುವಾದಿಗಳ
ಹೆಣದ ಹಿಂದೆ ಮುಂದೆ

ಸುಮ್ಮನಿದ್ದಾರೆ ಸರಿ ಸರಿ
ಕೆಣಕಿದರೆ ರುಂಡ ಮುಂಡ
ಬೀಳುವುದು ಗ್ಯಾರಂಟಿ
ನೊಂದ ಜನರ ಕಣ್ಣಲ್ಲಿ
ಕಣ್ಣೀರು ವರಿಸದಿದ್ದರು
ತರಿಸಬೇಡಿ ತರಿಸಿದರೆ
ಹರಿಯುವುದು ಮನುವಾದಿಗಳ
ರಕ್ತದ ಹೊಳೆ ಹೊಳೆ ಹೊಳೆ

ಕೆರಳಿಸಬೇಡಿ ಕೆರಳಿಸಬೇಡಿ
ಮಲಗಿದ ಮಾದ ಗಜಗಳ
ನೊಂದ ಬಡ ಜನರ
ಕೆರಳಿಸಿ ದಿಕ್ಕಾಪಾಲಾಗಿ
ಹಳ್ಳ ಕೊಳ್ಳ ಬಿದ್ದು
ಓಡೋಡಿ ಬಚ್ಚಿಕೊಂಡರು
ಮರೆಯಬೇಡಿ ಬರೆದು
ಇಟ್ಟುಕೊಳ್ಳಿ ಮನುವದಿಗಳೆ
ನಿಮ್ಮ ಹಣೆ ಎದೆಯ ಮೇಲೆ
ಕೆರಳಿದ ಮಾದ ಗಜಗಳು
ನೊಂದ ಬಡ ಜನರು
ಮುನಿದು ಕೈ ಕಾಲಿಟ್ಟರೆ
ಅಪ್ಪಚ್ಚಿ ಆಗಿ ಹೋಗುವಿರಿ
ತಾಳಾ ತಾಳಾ ಪಾತಾಳ ಲೋಕ

ಹೆದರಿಸಿ ಬೆದರಿಸಿ
ಓಡಿಸಲು ಬರಬೇಡಿ ಬಂದರೆ
ಬಡವರ ನಿಟ್ಟುಸಿರು
ಬೆಂಕಿ ಬಿರುಗಾಳಿಯಾಗಿ
ಸುಂಟರಗಾಳಿಯಾಗಿ
ಬಡಿದೆದ್ದು ಸಿಡಿದೆದ್ದು
ಸುಟ್ಟಾಕುವುದು
ಮನುವಾದಿಗಳ ಹೆಣ
*********ರಾಜು ಹಾಸನ*********

- ರಾಜು ಹಾಸನ

28 Dec 2020, 01:11 pm

ದೊರೆ ದೊರೆ

ದೊರೆ ದೊರೆ
ಊರು ಕೇರಿ
ರಾಜ್ಯ ದೇಶ
ಸರ್ಕಾರ ಆಳುವ
ಗಣಿ ಧಣಿ
ಚಿಕ್ಕ ದೊಡ್ಡ
ದೊರೆಯಾದರೆ
ದೊರೆ ದೊರೆ
ದೊರೆಗಳನ್ನಳುವಾ
ರಾಜ ಮಹಾರಾಜ
ದೊರೆ ದೊರೆ
ಬಾಬಾ ಸಾಹೇಬ್
ಭೀಮ್ ರಾವ್
ನನ್ನ ದೊರೆ ನನ್ನ ದೊರೆ
*******ರಾಜು ಹಾಸನ*******

- ರಾಜು ಹಾಸನ

28 Dec 2020, 10:46 am

ಗೀತೆ ರಚನೆ ಪ್ರಯತ್ನ

ಹೆತ್ತವರನ್ನು
ಬಿಟ್ಟು ಬಂದ ಮೇಲೆ
ಮತ್ತೆನು ಬಿಡುವುದು ಬಾಕಿಯಿದೆ
ಆಗಿದ್ದು ಆಯ್ತು ಎದ್ದೆಳು ಕಂದ
ಹೊತ್ತಾಯಿತು ಹೋಗು ಮನೆಗೆ

ಮನೆಯ ಕಡೆಯಿಂದ ಬಂದಿದೆ
ಒಂದು ಕರೆಯ ಕೂಗು
ಅಪ್ಪ ಅವ್ವನ ಬೆಚ್ಚನೆ ಪ್ರೀತಿ
ಇಲ್ಲಿ ಸಿಗದು ನಿಂಗಿನ್ನು

ನಿನಗಿದು ಬೆಕಿತ್ತಾ ಕಂದ
ವಾಪಸ್ಸು ಹೊಂಟೊಗು ಮನೆಗೆ

ಬಟ್ಟೆ ತಕೋ ಗಂಟ್ಟು ಕಟ್ಟು
ದಾರಿ ನೋಡಿ ಮನೆಗೆ ನಡಿ

ಎಲ್ಲಿಗೆ ಹೋದ್ರು ಇದ್ದು ಸತ್ತಂಗೆ
ಮನೆಯಲ್ಲೇ ನಿನ್ನ ಉಸಿರಿದೆ
ಹುಟ್ಟಿ ಬೆಳೆದು ಆಡಿ ಬಂದ
ಕಟ್ಟಿದ ಮನೆಯಿದೆ

ಕಿತ್ತೋದ ಕನಸಿಗೆ ಹಳದ್ ಆಸೆಗೆ
ಪ್ರೀತಿಗೆ ಬಿದ್ದು ಬೀದಿಗೆ ಬಂದೆ
ಊರು ಬಿಟ್ಟು ಬಂದು
ತಿಪ್ಪೆ ಗುಂಡಿಯ ಮೇಲಿನ
ತೆಂಗಿನ ಮರದ ಎಳೆನೀರು ನಿನಾದೆ

ಮನೆಗೆ ತಂಗಿ ಬರುತ್ತಾಳೋ
ಮಗನಿಗೆ ಹೆಸರು ಇಟ್ಟಳೋ
ಈ ಸಲ ಬಾರಿ ಮಳೆಯಂತೆ
ಅತ್ತೆಯ ಮಗನ ಮದ್ವೆಯಂತೆ
ಮಾವ ಬಿಲ್ಡಿಂಗ್ ಕಟ್ನಂತೆ
ಚಿಕ್ಕ ತಾತಂಗೆ ಉಸರಿಲ್ವಿಂತೆ
ತಂಗಿಯ ಮಗಳು ಕೆಳ್ತಳೋ
ಆಗಾಗ ನಿನಗೆ ಬೈತಳೋ
ನಿನಗೂ ಸಂಸಾರ ಇದೆ
ವಾಪಾಸು ಹೊಂಟೊಗು ಮನೆಗೆ

ಅವರಿವರ ನೆನಪು ಕಣ್ಣ್ ಕಟ್ಟಿದಂಗೆ
ಕನಸು ಕಾಣಿಸಿಕೊಳ್ಳೋದ್ಯಾಕೆ
ಅಪ್ಪ ಅವ್ವ ಕನಸಿಗೆ ಬಂದು
ಕಣ್ಣೊರೆಸಿ ಅಪ್ಪಿ ಕರೆದು ಬಾ
ಅಂದಂಗೆ ಆಗೋದ್ಯಾಕೆ
ಮಾತು ಕೊಟ್ಟು ಕೆಟ್ಟವನು
ಎಲ್ಲಿಗೆ ಹೋದ್ರು ನಿಮ್ಮದೆ ಧ್ಯಾನ
ಬಂದೆ ಬರ್ತೀನಿ ಊರಿಗೆ
ಬಂದು ಸೇರುತ್ತಿನಿ ಮನೆಗೆ

ಚಡ್ಡಿ ದೋಸ್ತ್ ರೆಲ್ಲ ಕಾಯ್ತಾವರೊ
ಅಕ್ಕ ಪಕ್ಕದ ಜನ ಕೆಳತ್ತಾವರೊ
ಕಲಿಸಿದ ಮಿಸು ಸ್ಕೋಲ್ ಬಿಟ್ರು
ತಂಗಿಯ ಗಂಡ ಸರಿಯಾದ
ಹಾಳೆ ಮನೆ ಮುರ್ದೋಗಿದೆ
ಅವ್ವಂಗೆ ಕಾಯಿಲೆ ಮೊನ್ನೆ ಇಂದ
ಅಪ್ಪಂಗೆ ಕೆಲಸ ಸಾಕಗಿದೆ
ತಂಗಿಗೆ ನಿನ್ದೆ ಯೊಚ್ನೆ
ಅದಗೆಟ್ಟಿದೆ ಬದುಕು
ವಾಪಸ್ಸು ಹೊಂಟೊಗು ಮನೆಗೆ

ಬಟ್ಟೆ ತಕೋ ಗಂಟ್ಟು ಕಟ್ಟು
ದಾರಿ ನೋಡಿ ಮನೆಗೆ ನಡಿ

- ರಾಜು ಹಾಸನ

28 Dec 2020, 12:45 am

ಒಲವು

ವನದೋಳು ಹಕ್ಕಿಗಳ ಜೇಂಕಾರ,
ಬಳ್ಳಿಗಳಿಗೆ ಮರಗಳ ಸಹಕಾರ,
ಇದು ಪ್ರಕೃತಿಯ ವಲವಿನ ಮಹಪೂರ,
ಎರಡು ಹೃದಯಗಳು ಬೆರೆತಾಗ ಪ್ರೀತಿಯ ಸಾಕ್ಷಾತ್ಕಾರ, (ಸತೀಶ್ ಸಾರಗೋಡು )

- sathish

27 Dec 2020, 01:39 pm