Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನನ್ನ ಜನಗಳು

ಜನರ ಮತ ಪಡೆದು
ಕೊಂದಿದ್ದು ಆಯ್ತು ಜನರ ಬದುಕು
ಊರು ರಾಜ್ಯ ದೇಶದ
ಆಸ್ತಿ ಪಾಸ್ತಿ ಕೊಳ್ಳೆ ಹೊಡೆದು
ಮಾರಿದ್ದು ಆಯ್ತು
ಬಡ ಜನರ ಬದುಕು ಮೂರಾಬಟ್ಟೆ
ಮಾಡಿದ್ದು ಆಯ್ತು
ದೇಶದ ಬೆನ್ನೆಲುಬು ರೈತರ
ಬೆನ್ನು ಮೂಳೆ ಮುರಿದಿದ್ದು ಆಯ್ತು
ಸುಳ್ಳು ಹೇಳಿ ಕಥೆಯ ಕಟ್ಟಿ
ಜನರ ನಂಬಿಸಿ
ಜನರ ದಿಕ್ಕು ತಪ್ಪಿಸಿದ್ದು ಆಯ್ತು
ರಾಜ್ಯ ದೇಶವೇ ಬಂಡವಾಳ
ಶಾಹಿಗಳ ಕೈ ಸೇರಿದ್ದು ಆಯ್ತು
ಬಡವನ ಉದ್ಯೋಗದ
ಕನಸಿಗೆ ತಣ್ಣೀರು ಹಾಕಿದ್ದು ಆಯ್ತು
ದೇಶವನ್ನೇ ದೇವರು
ಧರ್ಮವೆಂದು ಹೊಡೆದು
ಸಾಯಿಸಿದ್ದು ಆಯ್ತು
ಇನ್ನು ಉಳಿದಿರುವುದು ಒಂದೇ
ಈ ದೇಶದ ಜನರ
ಕಂಡವರ ದೇಶಕ್ಕೆ ಮಾರುವುದು
ಒಂದು ಬಾಕಿಯಿದೆ
ಎಚ್ಚರ ಎಚ್ಚರ ನನ್ನ ಜನಗಳೇ
ಮನುವಾದಿ ಗುಲಾಮಗಿರಿಗೆ
ಬುದ್ದಿ ಕಲಿಸಿ ಊರು ದೇಶದಿಂದ
ಒದ್ದು ಓಡಿಸಿದರೇ
ಈ ದೇಶದ ಮೂಲ ನಿವಾಸಿಗಳಿಗೆ
ಉಳಿಗಾಲ ಇಲ್ಲದಿದ್ದರೆ
ಮೂಲ ನಿವಾಸಿಗಳಿಗೆ ಕೊನೆಗಾಲ

- ರಾಜು ಹಾಸನ

31 Jan 2021, 12:36 am

ಭರವಸೆ

ಕಳೆದ ನಿನ್ನೆಯ ಮರೆತು
ಹೊಸ ಕ್ಷಣಗಳ ಜೊತೆ ಬೆರೆತು
ಬಾಳೋಣ ನಾವು- ನೀವೆಲ್ಲ...

ಕಹಿ ನೆನಪನ್ನು ಮರೆತು
ಹೊಸ ದಿನಗಳ ಜೊತೆ ಬೆರೆತು
ಸಾಗಿದರೆ ಬಾಳಲ್ಲಿ ನೋವೇ ಇಲ್ಲ.....

ಕೃಷ್ಣ ಬಿಲ್ಲಾಡಿ ಮೇಲ್ ಬೈಲು

- krishna Billadi melbailu

23 Jan 2021, 11:27 am

ಮೊದಲ ಪ್ರೀತಿಯ ನೆನಪಲಿ

ಮರೆಯಲಾಗದವಳ ಬಗ್ಗೆ
ಬರೆಯಬಾರದು ಕವಿತೆ
ಹಳೆಯ ನೆನಪುಗಳ ಜೊತೆ
ನಾ ಮೌನಿಯಾಗಿ ಕುಳಿತೆ...

ಮೊದಲ ಪ್ರೀತಿಯ ನೆನಪಲ್ಲಿ
ಕಳೆದ ದಿನಗಳು ಅದೆಷ್ಟೋ
ಅರ್ಥವಾಗದ ಈ ಪ್ರೀತಿಯಲ್ಲಿ
ಉಳಿದಿರುವುದು ನೆನಪುಗಳು ಒಂದಿಷ್ಟು..,,
.
ಕೃಷ್ಣ ಬಿಲ್ಲಾಡಿ ಮೇಲ್ ಬೈಲು

- krishna Billadi melbailu

23 Jan 2021, 11:23 am

ನೆನಪು

ಬದಲಾಗುವ ಮನಸ್ಸಿನ
ನಿಷ್ಕಲ್ಮಶ ಪರಿಧಿಯಲ್ಲಿ
ಮತ್ತೆ ಮತ್ತೆ ಮಿನುಗುವ
ಬೆಳ್ಳಿ ಚುಕ್ಕಿ.....

ಅದುವೇ ನಮ್ಮ ನಿಮ್ಮೆಲ್ಲರ
ಮನದಲ್ಲಿ ಕುಳಿತಿರುವ
ನೆನಪೆಂಬ ಹಕ್ಕಿ.....

ಕೃಷ್ಣ ಬಿಲ್ಲಾಡಿ ಮೇಲ್ ಬೈಲು

- krishna Billadi melbailu

23 Jan 2021, 11:21 am

(ಸೋಲೇ ಗೆಲುವಿನ ಮೆಟ್ಟಿಲು)

ಮರುಕಳಿಸುವ ಮಧುರ
ಸಿಹಿ ನೆನಪುಗಳು,..
ಕಮರಿಹೋದ ನಿನ್ನೆಯ
ಕಹಿ ಕನಸುಗಳು...

ಎಲ್ಲವೂ ಈಗ ಮರೆತು
ಹೋಗುವ ಹೊತ್ತು..
ಮತ್ತೆ ನೆನಪಾಯ್ತು ನನಗೆ..
ಸೋಲೇ ಗೆಲುವಿನ ಮೆಟ್ಟಿಲು
ಎನ್ನುವ ನುಡಿಮುತ್ತು...

ಕೃಷ್ಣ ಬಿಲ್ಲಾಡಿ ಮೇಲ್ ಬೈಲು

- krishna Billadi melbailu

21 Jan 2021, 11:36 pm

ಜನುಮದಿನದ ಶುಭಾಶಯ

ಶುಭಾಶಯ ನಮ್ಮ ಹೃದಯದಿಂದ
ನಿಮ್ಮ ಜನುಮದಿನದ ಶುಭಾಶಯ
ನೂರಾರು ವರುಷ ಸುಖವಾಗಿ ನೀವು
ನಗು ನಗುತ ಇರಿರೆಂದು ಶುಭಾಶಯ //ಪ//

ಮೃದು ಮನಸು ಸಿಹಿ ಮಾತು ಆಡ್ವ
ಮಂಜುನಾಥ ಗುರುವೆ ಶುಭಾಶಯ
ಪ್ರಾಣಿಗಳನು ಸಾಕಿ ಪೋಷಿಸುವಂತ
ಮಹಾಪುರುಷ ನಿಮಗೆ ಶುಭಾಶಯ //೧//

ಅಸಹಾಯಕ ಜನಗಳ ಸಲಹುತಲಿ
ಅನ್ನದಾನ ಮಾಡಿ ದೀನದಲಿತರಿಗೆಲ್ಲಾ ಆಶಾಕಿರಣವಾಗಿ ನಿಂತ ಮಹಾಗುರುವೆ
ನಿಮಗೆ ನಾವು ಕೋರುವ ಶುಭಾಶಯ //೨//

ದಲಿತೋದ್ದಾರಕರಾಗಿ ಬಂದ ಗುರುವೆ
ಸಮಾಜದ ಸೇವೆಯಲ್ಲಿ ಮುಂದೆ ನೀವೆ
ಆದಿ ಕರ್ನಾಟಕ ಮೂಲ ದೊಡೆಯ ನೀವು
ಅನ್ನದಾನ ಗುರುವೆ ನಿಮಗೆ ಶುಭಾಶಯ //೩//

ಶುಭಾಶಯ ನಿಮಗೆ ಶುಭಾಶಯಗಳು
ನಿಮ್ಮ ಜನುಮದಿನದ ಹಾರ್ಧಿಕವಾದ
ನೂರು ನೂರಾರು ಶುಭಾಶಯಗಳು
ಮತ್ತೊಮ್ಮೆ ನಿಮಗೆ ಶುಭಾಶಯಗಳು //೪//

ಕಲ್ಮೇಶ ಬಡಿಗೇರ
.........ಬಾದಾಮಿ.......
...........9743539657........

- Kalmesh Badiger

20 Jan 2021, 08:05 pm

ಕವನ

ಕವನದ ಸಾಲುಗಳು
ಕಲ್ಪನೆಯಾದರೆ ಕೇವಲ
ಕನಸು ಮನಸ್ಸಿಗೆ
ಅಂದ ಚಂದವಷ್ಟೇ
ಕವನದ ಸಾಲುಗಳು
ಅಂಧಕಾರ ಮೂಢನಂಬಿಕೆ
ಕಡೆಗಣಿಸಿ ಕೊನೆಗಾಣಿಸಿ
ಉಳುಕು ತಳುಕು ಇಲ್ಲದ
ತಿರುಳು ತುಂಬಿದ
ಜ್ಞಾನದ ಸಾರವಾದರೆ
ಸಮಾಜ ತಿದ್ದುವ
ಆಯುಧವಾಗುವುದು

- ರಾಜು ಹಾಸನ

19 Jan 2021, 11:17 am

ವಿಜಯೋತ್ಸವ

ಮೂರು ಹೊತ್ತಿನ ಅನ್ನಕ್ಕಾಗಿ
ಹಸಿದ ಹೊಟ್ಟೆಯ ಹಿಟ್ಟಿಗಾಗಿ
ದುಡಿದು ತಿನ್ನುವ
ಗಂಜಿ ಗೀರಕಿಗಳು ನಾವಾದರೂ
ಚಿಲ್ಲರೆ ಕಾಸಿಗೆ ಭಿಕ್ಷೆ ಬೇಡುವ
ಚಿಲ್ಲರೆ ಮನಸ್ಸಿನ ಗುಲಾಮರು
ಮನುವಾದಿ ಸಂತತಿಗಳು
ಅನ್ನ ತಿನ್ನುವ ಬಾಯಿಗೆ ಗಂಗ ಜಲವೆಂದು
ಪಂಚಮೃತವೆಂದು
ಗಂಜಲ ಕುಡಿಯುವ ಗಂಜಲ ಗೀರಕಿಗಳು
ಮನುವಾದಿ ಸಂಘಿಗಳು
ಮನುವಾದಿಗಳೇ ಏನಾದರೂ
ತಿಂದು ಕುಡಿದು ಸಾಯಿರಿ
ಮನುವಾದಿಗಳು ದೇಶ ಬಿಟ್ಟು ತೊಲಗಿ
ಮಸಣದ ಕಾಡಲು ಸೇರಿದರೆ
ಈ ದೇಶಕ್ಕೆ ಬಂದ ನಿಜವಾದ ವಿಜಯೋತ್ಸವ

- ರಾಜು ಹಾಸನ

19 Jan 2021, 12:27 am

ಹುಚ್ಚು ದೊರೆ

ಹುಚ್ಚು ದೊರೆಯ ಹೆಸರು
ಇತಿಹಾಸ ಪುಸ್ತಕದ ಪುಟಗಳಲ್ಲಿ
ಓದಿದ್ದೆ ಕೇಳಿದ್ದೆ ಅಷ್ಟೇ
ಇಂದು ಕಂಡು ನೋಡಿದ್ದು ಆಯ್ತು
ಹುಚ್ಚು ದೊರೆ ಹುಚ್ಚಾಟಕ್ಕೆ
ದೇಶದ ಆರ್ಥಿಕತೆ ಕೊಚ್ಚಿಕೊಂಡು
ಹೋಗಿದ್ದು ಆಯ್ತು
ಮನುವಾದಿಗಳ ಮಂಗನ ಆಟಕ್ಕೆ
ದೇಶವೇ ಹೊತ್ತಿ ಉರಿದಿದ್ದು ಆಯ್ತು
ಹುಚ್ಚು ದೊರೆ ಹುಚ್ಚಾಟ್ಟ ಹೆಚ್ಚಾಗಿ
ದೇಶದ ಬಡತನ ಹೆಚ್ಚಾಗಿದೆ
ಸನಿಹವೇ ಬಂದಿದೆ ಅಂತ್ಯದ ಕಾಲ
ವಿನಾಶದ ಕೊನೆಗಾಲ
ಹುಚ್ಚು ದೊರೆಯ ಹುಚ್ಚಾಟಕ್ಕೆ
ತಿಲಾಂಜಲಿ ಹಾಡುವ ಕಾಲ
ಮಣ್ಣು ಮುಕ್ಕಿಸುವ ಕಾಲ

- ರಾಜು ಹಾಸನ

19 Jan 2021, 12:04 am

ಗೋವು

ದುಡ್ಡಿಗೆ ಬೆಲೆ ಇದ್ದರು
ಮಾನವಿಯತೆಗೆ ಬೆಲೆ
ಕಟ್ಟಲಾಗದು
ದುಡ್ಡು ದುಡಿದು
ದೊಡವನಾದರು
ದುಡ್ಡು ದೊಡ್ಡವನನ್ನು
ಉಳಿಸಿ ಬೆಳಸಿದ ದೇವರು
ದುಡಿಮೆಯ ದೇವರು
ಕಾರ್ಮಿಕ ದೇವರು
ಈ ದೇಶದ ಆಸ್ತಿ

ಆಸೆ ಕನಸುಗಳಿಗೆ
ಅಂತ್ಯವಿಲ್ಲದಿದ್ದರೂ
ಅಂತ್ಯವಿರುವ
ಅತ್ಮ ಜೀವಕ್ಕೆ ಹಣದ
ಮದಬೇಡ
ಸಿರಿ ಸಂಪತ್ತಿನ
ಜಂಬ ಬೇಡ
ಶಾಶ್ವತವಲ್ಲದ
ಹಣ ಗಂಟ್ಟಿದ್ದರು
ಬೆಲೆ ಕಟ್ಟಲಾಗದಯ್ಯಾ
ದುಡಿದು ಕೂಡಿಟ್ಟು
ಕೊಳ್ಳಲಾಗದಯ್ಯಾ
ಮನುಷ್ಯತ್ವದ ಗುಣ
ಮಾನವಿಯತೆ ಗುಣ




ಯಾರ ಖುಷಿಗೆ ಯಾರ ಒಲವಿಗೆ
ಗೋವು ಹತ್ಯೆ ನಿಷೇಧ ಕಾಯ್ದೆ
ಗೋವು ನಂಬಿ ಬದುಕು ನೆಡೆಸುವ
ಬಡ ಜನರ ರೈತ ಜನರ ಬಾಳು
ಗೋಳಾಗಿಸಿದ ಹುಚ್ಚು ಕಾಯ್ದೆ
ಮನುವಾದಿಗಳ ಮನ ಮೆಚ್ಚಿದ ಕಾಯ್ದೆ
ದೇಶಕ್ಕೆ ಬಂದು ಒದಗಿದ ದೊಡ್ಡ ಕಾಯಿಲೆ

ಧನ ಕಾಯುವವನಿಗೆ ಗೊತ್ತು
ಗೋವಿನ ಬಾಳು ಗೋಳು
ಜಾತಿ ಧರ್ಮದ ಕೊಚ್ಚೆ ಗುಂಡಿಗೆ
ಬಿದ್ದವನಿಗೇನು ಗೋತ್ತು
ಗೋವಿನ ಬದುಕು ಬಾಳು ಗೋಳು

ಗೋವಿನ ಹಾಲು ಕುಡಿದು
ವಿಷ ಕಕ್ಕವು ವಿಷ ಕಾರುವ
ಮನುವಾದಿಗಳಿಗೇನು ಗೋತ್ತು
ಗೋವು ಸಾಕುವ ಗೊಲ್ಲನ ಪಾಡು
ಬಡ ಜನರ ಹೊಟ್ಟೆ ಬಟ್ಟೆ
ಬದುಕು ಬಾಳಿನ ಪಾಡು

ಜಾತಿ ಮತ ಧರ್ಮದ
ಹುಚ್ಚು ಹೆಚ್ಚು ಹೆಚ್ಚಾಗಿ
ಜಾತಿ ಧರ್ಮದ ಅಂಧ ಜನರ
ಮೆಚ್ಚಿಸಲೆಂದು ತಂದ ಕಾಯ್ದೆ
ಮಾರಕ ಮಾರಕ ಮಾರಕ
ಹಳ್ಳಿ ದಿಲ್ಲಿಗೆ ಹರಡಿದ ಕಾಯಿಲೆ
ದೇಶಕ್ಕೆ ಅಂಟಿಕೊಂಡಿರುವ
ಮಹಾಮಾರಿ ಕಾಯಿಲೆ
ಮನುವಾದಿಗಳ ಹುಚ್ಚು ಕಾಯ್ದೆ

ರೈತರ ಕಷ್ಟವೇ ತಿಳಿಯಾದ
ಕಳ್ಳ ಸುಳ್ಳ ಮನುವಾದಿಗಳಿಗೇನು ಗೋತ್ತು
ರೈತ ಬಂಧು ಗೋವಿನ ಕಷ್ಟ ಸುಖ ಗೋಳಾಟ
ಗೋವು ಸಾಕಿದವನಿಗೆ ಗೋತ್ತೇ ಹೊರೆತು
ಬೀದಿಯಲ್ಲಿ ನಾಯಿ ನರಿ ಹಿಡಿದು
ನಡೆದು ಸಾಗುವವನಿಗೇನು ಗೋತ್ತು

- ರಾಜು ಹಾಸನ

18 Jan 2021, 09:11 am