Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಮರ

ಬಾವಿಯ ದಂಡೆಯ ಮೇಲೊಂದು
ಬಂಗಾರದ ಮರವೊಂದು ಬೆಳೆದು
ಹಾದಿ ಬೀದಿಗಳಿಗೆಲ್ಲ ನೆರಳಾಗಿ ನಿಂತು
ಹಾದೋಗೊ ಜನರಿಗೆ ದೊರೆಯಾಗಿ

ಧನ ಕಾಯೋ ಹುಡುಗರಿಗೆಲ್ಲರಿಗು
ಆಟವ ಆಡುವ ವೇದಿಕೆ ಯಾಗಿ
ಮರಕೊತಿಗಳಿಗೆಲ್ಲ ನೇರವಾದೆ ನೀ
ಊರ ಜನರಿಗೆ ಗುರು ವಾದೆ ನೀನು

ನ್ಯಾಯ ಅನ್ಯಾಯ ನೀಡುವಂತ
ನ್ಯಾಯ ದೇವತೆಯಾಗಿ ನಿಂತಿರುವೆ
ನಂಬಿಕೆ ಆಚರಣೆ ಗಳಿಂದಲೆ ನೀನು
ಮಹಾತಾಯಿ ದೇವರಾಗಿ ಕಾನಿಸುವೆ

ಹಸುಳೆಗಳಿಗೆಲ್ಲ ತೊಟ್ಟಿಲು ನೀನಾದೆ
ಬಾಣಂತಿಯರಿಗೆ ಹೊರಸು ನೀನಾದೆ
ನಾದಲಹರಿಯ ಹೊರಡಿಸುವಂತಹ
ನಗಾರಿ ಡೋಲು ಡೋಳ್ಳಾಗಿ ಕುಣಿದೆ

ಅಟ್ಟ ಮೆಟ್ಟಿಲು ಅರಮನೆ ಚತ್ತಾದೆ
ಉತ್ತಿ ಬಿತ್ತುವ ರೈತನಿಗೆ ನೆರಳಾದೆ
ಸಿದ್ಧ ಶರಣರ ಪಾದಕ್ಕೆ ಪಾದುಕೆಯಾಗಿ
ದೇವಮಂದೀರದಲ್ಲಿ ಪಲ್ಲಕ್ಕಿ ನೀನಾದೆ

ಕಲ್ಮೇಶ ಬಡಿಗೇರ
......ಬಾದಾಮಿ........

- Kalmesh Badiger

23 Dec 2020, 09:04 pm

ನೀ ಶಾಶ್ವತ

ಜೊತೆಗೆ ಹುಟ್ಟದಿದ್ದರೇನು
ಜೊತೆಗೆ ನಡೆದಿಲ್ಲವೇನು
ರಕ್ತ ಹಂಚಿಕೊಳ್ಳದಿದ್ದರೇನು
ರಕ್ತ ಸಂಬಂಧದಂತೆ ಹೊಂದಿಕೊಂಡಿಲ್ಲವೇನು
ನೀ ದೂರವಿದ್ದರೇನು
ನಿನ್ನ ಸ್ನೇಹ ದೂರಾದುದೇನು
ಅಂದು ಕಳೆದ ಸಮಯ‌
ಇಂದಿಗೂ ಸ್ಮರಣೀಯ
ನಿನ್ನೊಡನೆ ಇದ್ದ ಸಮಯ ಕಳೆದಿದೆ
ನಿನ್ನೊಡನೆ ಕಳೆದ ನೆನಪು ಅಳಿಯದು
ನೀ ಶಾಶ್ವತ
ನಿನ್ನ ಸ್ನೇಹ ಚಿರಪರಿಚಿತ.........
--ಕಲಾಕುಸುಮ






- Kusuma Kusum

23 Dec 2020, 07:14 pm

ಜೈ ಭೀಮ್ ಸೈನಿಕರು

ಮನುವಾದಿಗಳ
ದಂಡೇ ಬರಲಿ
ದಾಳಿಯೇ ಬರಲಿ
ಗುಡುಗು ಬಂದರು
ಸಿಡಿಲೇ ಬಡಿದರು
ತಲೆ ತಗ್ಗಿಸಿ ಬಾಳಲ್ಲಾ
ಮಳೆಯೇ ಸುರಿಯಲಿ
ಚಳಿಯೇ ಕೊರೆಯಲಿ
ಬಿಸಿಲೇ ಸುಟ್ಟರು
ಹೆದರಿ ಬೆದರಿ ಓಡೋದಿಲ್ಲ
ಘರ್ಜಿಸಿ ಘರ್ಜಿಸಿ
ಆರ್ಭಟಿಸಿ ಆರ್ಭಟಿಸಿ
ಧೂಳ್ ಎಬ್ಬಿಸಿ
ಮುನ್ನುಗ್ಗಿ ನಡೆದರೆ
ಧೂಳಿಪಟವಾಗುವುದು
ಮನುವಾದಿಗಳ ಪಡೆ
ಎಚ್ಚರ ಎಚ್ಚರ
ನಾವು ಜೈ ಭೀಮ ಸೈನಿಕರು
********ರಾಜು ಹಾಸನ********

- ರಾಜು ಹಾಸನ

23 Dec 2020, 05:40 pm

ಉತ್ತುಂಗ

ಓದು ಬರಹ ಕಲಿತು
ಮನುವಾದಿಗಳ
ಗುಲಾಮನಾಗಬೇಡ
ಸ್ವಾಭಿಮಾನದ
ಕೂಡಿಯಾಗು
ಮೂಢನಂಬಿಕೆಯ
ಕಪಟ ಸೂತ್ರ
ತಿಳಿದು ತಿಳಿದು
ಕಂಡು ಕಂಡು
ಬೀಳಬೇಡ
ಹಗಲು ಕಂಡ ಬಾವಿಗೆ
ಶಾಶ್ವತವಲ್ಲದ ಕ್ಷಣಿಕವಾದ
ಮನುವಾದಿಗಳ
ಆಸೆ ಆಮಿಷಗಳಿಗೆ
ಜೋತು ಬಿದ್ದು
ಬಿಕ್ಷಕನಾಗಬೇಡ
ಜೊಲ್ಲು ಸುರಿಸಿ
ಸತ್ತು ಸಮಾಧಿಯಾಗಬೇಡ
ಸಂವಿಧಾನವಾ ಅರಿತು
ದಿಟ್ಟ ಹೆಜ್ಜೆ ಇಟ್ಟು
ನಡೆ ನಡೆ ನಿನ್ನ
ಬದುಕು ಬಾಳಿನ ಕಡೆ
ಗುರಿ ಸಾಧನೆಯ
ಉತ್ತುಂಗದ ಕಡೆ ಕಡೆ
*******ರಾಜು ಹಾಸನ*******

- ರಾಜು ಹಾಸನ

23 Dec 2020, 02:49 pm

ಕವಿತೆಯ ಸಾಲು

ಕವಿತೆಯ ಸಾಲು ಕಟ್ಟಲು
ನಾ ಹಿಡಿದೆ ಲೇಖನಿಯ
ಅದು ಗೀಚಿದ್ದು ಗೊಂದಲದ ಭಾವವ
ಎತ್ತಾ ಹೋದರೂ, ಲೇಖನಿ ಯೂ ಬಿಡದು ಭಾವನೆಗಳ ಸಂತೆಯ!!!

ಅದ ಬಿಟ್ಟು ಬರೆಯುವ ಆಸೆ ಕಂಡೆ ನಾ
ಮತ್ತೆ ಗೀಚಿದೆ ಲೇಖನಿಯ ತುದಿಯ,
ಆಗೂ ಅದು ಗೀಚಿತು
ಅರ್ಥ ವಿಲ್ಲದ ಭಾವವ!!!

- ರಮ್ಯ

23 Dec 2020, 01:28 pm

ಸದಾ ನಾ.!


ಸದಾ ನಗು ಮುಖವಂತೆ ನನ್ನದು,
ಹೌದು ನನ್ನದು ನಗು ಮುಖವೇ....
ನನ್ನೊಳಗೆ ಎದ್ದಿರುವೆ ಸುನಾಮಿಗೆ
ನಾನೇ ಕಣ್ಣ ರೆಪ್ಪೆಗೆ ಒತ್ತೊತ್ತಾಗಿ ಕಟ್ಟಿಹ
ಅಣೆಕಟ್ಟು ಕಾಣದಂತ ನಗು ಮುಖ!

ಸದಾ ಚಟ-ಪಟ ಮಾತಂತೆ ನನ್ನದು,
ಹೌದು ನಾ ಸದಾ ಮಾತನಾಡುತ್ತಿರುವೆ...
ಬೇಡದ ಮೌನಗಳು ನನ್ನೊಳಗೆ ಬೇರೂರಿರಲು
ಮಾತನಾಡುವಂತೆ ನಟಿಸಿ ಮೌನಕ್ಕೆ
ನೀರ ಹಾಯಿಸದ ಮಾತು ನನ್ನದು!

ಸದಾ ಜಾಗರೂಕ ಹೆಣ್ಮನವಂತೆ ನನ್ನದು,
ಹೌದು ನಾ ಸದಾ ಜಾಗರೂಕತೆಯಿಂದಿರುವೆ..
ಒಂದಷ್ಟು ಅಜಾಗರೂಕತೆಗಳಿಂದ ತಿಂದ ಹೊಡೆತವ
ಮತ್ತೆ ಮರಳಿ ತಿನ್ನುವ ಶಕ್ತಿ ಇಲ್ಲದ
ಅಸಹಾಯಕ ಜಾಗರೂಕತೆ ನನ್ನದು!

- ಅಕ್ಷತ

23 Dec 2020, 08:54 am

ಜಗಜ್ಯೋತಿ ಜ್ಞಾನಜ್ಯೋತಿ

ಖಡ್ಗ ಗುರಾಣಿ ಹಿಡಿದು
ಮನುವಾದಿಗಳು
ಯಾತ್ರೆ ದಂಡಯಾತ್ರೆ
ತಂತ್ರ ಕುತಂತ್ರ ಮಾಡಿ
ಕಿತ್ತುಕೊಂಡರು
ಜನಗಳ ಜೀವಾ ಮಾನ
ಉರುಳಿಸಿದರು
ಜನಗಳ ಹೆಣ
ಬದುಕಿನ ಕಣ
ಜಗಜ್ಯೋತಿ ಜ್ಞಾನಜ್ಯೋತಿ
ಬಾಬಾ ಸಾಹೇಬರು
ಲೇಖನಿ ಹಿಡಿದು
ಸಂವಿಧಾನ ಗ್ರಂಥ
ಬರೆದು ಕೊಟ್ಟರು
ಕುಡಿಯಲು ನೀರು
ಜೀವಿಸಲು ಉಸಿರು
ಹೇಳಿ ತಿಳಿಸಿ ಕೊಟ್ಟರು
ಬದುಕವಾ ರೀತಿ ನಿಯಮ
ನ್ಯಾಯ ನೀತಿ ಸ್ವಾಭಿಮಾನ
ಓದು ಬರಹ ಕಲಿತು
ಸ್ವಾತಂತ್ರವಾಗಿ ಬದುಕಿ
ಬಾಳಲು ಬಿಟ್ಟರು
ಸಮಾನತೆಯ ಹಕ್ಕು ಕೊಟ್ಟು
ಭೀಮ ರಾವ್ ಭೀಮ ರಾವ್

- ರಾಜು ಹಾಸನ

23 Dec 2020, 12:18 am

ಮನುವಾದಿಗಳೇ

ದೀನ ದಲಿತರ ಸೂರ್ಯ
ಜೈ ಭೀಮ್ ಜೈ ಭೀಮ್
ಝೇಂಕಾರ ಜೈಕಾರ
ಹೊತ್ತಿ ಉರಿಸುವುದು
ಮನುವಾದಿಗಳ ಹೊಟ್ಟೆ
ಉರಿದೂರಿದು ಸಾಯಲಿ
ಸತ್ತು ಬಿದ್ದು ಬೀಳಲಿ
ಮನುಷ್ಯತ್ವ ಇಲ್ಲದ
ಮನುವಾದಿಗಳ ಹೆಣ
ದುಷ್ಟ ನೀಚ ಮನುವಾದಿಗಳೆ
ಹೊಟ್ಟೆ ಉರಿದುಕೊಂಡು
ಸಾಯುವ ಬದಲು ತಿದ್ದಿಕೊಳ್ಳಿ
ನಿಮ್ಮ ಕೆಟ್ಟ ನಡೆ ನುಡಿ
ಎಚ್ಚರ ಎಚ್ಚರವಿರಲಿ
ಮನುವಾದಿಗಳೇ ಅಂಕು
ಡೊಂಕಿನ ತಳುಕು ಬಳುಕಿನ
ನಡೆ ನುಡಿ ಹೆಜ್ಜೆ ಇಟ್ಟರೇ
ಹೊಟ್ಟೆ ಬುರುಡೆ ಹೊಡೆದು
ಕಟ್ಟಿಬಿಡುವೆವು
ನಿಮ್ಮ ಸತ್ತ ಹೆಣದ ಮೇಲೆ
ಅರಾಡಿ ಮೂರಾಡಿ ಕಟ್ಟೆ
ಎಚ್ಚರ ಎಚ್ಚರ ಮನುವಾದಿಗಳೇ
***********ರಾಜು ಹಾಸನ***********

- ರಾಜು ಹಾಸನ

21 Dec 2020, 11:53 pm

ಮಡಿಲಲಿ...

ಮಡಿಲಲಿ ತಲೆಯೂ
ಹೀಗೆ ಇರಲಿ
ಕವಿದ‌ ಇರುಳು
ಸರಿದು ಬಿಡಲಿ

ತಲೆಯ ನೇವರಿಸಿತಿರು
ಮನವೂ ಮಲಗಲಿ
ಕತ್ತಲಿಗೂ ನಿದ್ರೆಯತ್ತಿ
ಹೊಂಬೆಳಕಾಗಲಿ

ತಟ್ಟು ತಟ್ಟು ತನುವ
ಮನವು ಹಗುರಾಗಲಿ
ಕಾಡುವ ನೋವುಗಳಿಗೆ
ಕೊಂಚ ಭಯ ತರಲಿ

ಸಿಹಿ ಮುತ್ತೊಂದು
ನೊಸಲಿನ‌ ಪಾಲಿಗಿರಲಿ
ತುಟಿಯಂಚಲಿ ನಸುನಗೆ
ಮಳೆ ಹನಿಯಲಿ

ಜಾರುವ ಮುಂಗುರುಳ
ಕೈ ನಯವಾಗಿ ಸರಿಸಲಿ
ಮುಚ್ಚಿದ ಕಣ್ಣ ತುಂಬಾ
ಕನಸ ಫಸಲಾಗಲಿ

ಕಾಡಿಸುವ ಗೆಳತಿಗೆ
ಲಾಲಿ ಹಾಡೊಂದಿರಲಿ
ಪ್ರೇಮದ‌ ಪರಿಗೆ
ಜಗವೇ ಮಡಿಲಾಗಲಿ

- ಶ್ರೀಕಾವ್ಯ

21 Dec 2020, 11:26 pm

ಒಲಿದರೆ ನಾರಿ ಮುನಿದರೆ ಮಾರಿ

ಓ ಹೆಣ್ಣೆ ಓ ಹೆಣ್ಣೆ
ದೇವರು ದೇವರೆಂದು
ಕಲ್ಲ ಕಂಬವ ಸುತ್ತಿ
ಪೂಜಿಸಿ ಆರಾಧಿಸುವೇಕೆ
ನಿನಗೆ ಓದು ಬರಹದ
ಹಕ್ಕು ಕೊಟ್ಟ ದೇವರು
ಬಾಬಾ ಸಾಹೇಬರ
ಅರಿಯದೆ ಅಜ್ಞಾನದ
ಗುಂಡಿಗೆ ಬೀಳುವೇ ಏಕೆ
ಓ ಹೆಣ್ಣೆ ಓ ಹೆಣ್ಣೆ ಓ ನನ್ನ ಹೆಣ್ಣೆ

ದೇವರು ದೇವರು
ದೇವರೇನ್ನುವಾ ನಿನ್ನ
ದೇವರು ಬಂದು ಕೊಡಲಿಲ್ಲ
ನಿನಗೆ ಸ್ವಾತಂತ್ರ ಸಮಾನತೆ
ಆಚಾರ ವಿಚಾರದ ಹಗ್ಗ ಕಟ್ಟಿ
ಮೂಢನಂಬಿಕೆಯ ಮೂಗುದಾರ
ಬಿಗಿದು ಉಸಿರುಗಟ್ಟಿಸಿ
ಕೈ ಕಾಲು ಮೈ ಮೂಳೆ ಮುರಿದು
ನಾಲ್ಕು ಗೋಡೆಗಳ
ಮಧ್ಯೆ ಕುರಿಸಿ ಬಂಧಿಸಿದ ದೇವರ
ಹಾಡಿ ಹೊಗಳುವೇ ಏಕೆ
ಓ ನನ್ನ ನಾರಿಮಣಿಯೇ

ಗಂಡು ಹೆಣ್ಣಿನ
ಬೇಧ ಭಾವ ಬೀಜ ಬಿತ್ತಿ
ಶೋಷಿಸಿದಾ ದೇವರ
ಪೋಷಿಸಿ ಕೊಂಡಾಡುವೇ ಏಕೆ
ಓ ನನ್ನ ಮರುಳೆ
ಗಂಡು ಹೆಣ್ಣು ಲಿಂಗ
ಬೇರೆಯಾದರು
ಕನಸು ಮನಸು ಜೀವಾ
ಒಂದೇ ಒಂದೇ ಎಂದು
ಸಮಾನತೆ ಬೆಳಕು ಚೆಲ್ಲಿ
ಸ್ವಾತಂತ್ರ ತಂದುಕೊಟ್ಟ
ಬಾಬಾಸಾಹೇಬರ ಮರೆಯಬೇಡ
ಮರೆತು ಬಾಳಬೇಡ
ಆರಾಧಿಸಿ ಪೂಜಿಸು ಓ ನನ್ನ ಹೆಣ್ಣೆ

ಬಾಬಾ ಸಾಹೇಬರ
ಜ್ಞಾನದ ಕಿಡಿ ಹೊತ್ತಿಸಿ
ಸಂವಿಧಾನವ ಅರಿತು
ನೀ ಓದು ಬರಹ ಕಲಿತು
ಅಧಿಕಾರದ ಚುಕ್ಕಾಣಿ ಹಿಡಿದು
ಮುಗಿಲೆತ್ತರಕ್ಕೆ ಬೆಳೆದು ನಿಂತರೆ
ಮನುವಾದಿಗಳ ಕುತಂತ್ರ
ಅಲ್ಲೋಲ ಕಲ್ಲೋಲ
ದುಷ್ಟ ರಾಕ್ಷಸರ ಹುನ್ನಾರ
ಅತಂತ್ರ ಅತಂತ್ರ ಅತಂತ್ರ
ತಿಳಿದು ಬಾಳಿ ಬದುಕಿ
ಪೂಜಿಸಿ ಆರಾಧಿಸು ಓ ಹೆಣ್ಣೆ
*********ರಾಜು ಹಾಸನ*********

- ರಾಜು ಹಾಸನ

21 Dec 2020, 06:49 pm