Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಗೋವು

ದುಡ್ಡಿಗೆ ಬೆಲೆ ಇದ್ದರು
ಮಾನವಿಯತೆಗೆ ಬೆಲೆ
ಕಟ್ಟಲಾಗದು
ದುಡ್ಡು ದುಡಿದು
ದೊಡವನಾದರು
ದುಡ್ಡು ದೊಡ್ಡವನನ್ನು
ಉಳಿಸಿ ಬೆಳಸಿದ ದೇವರು
ದುಡಿಮೆಯ ದೇವರು
ಕಾರ್ಮಿಕ ದೇವರು
ಈ ದೇಶದ ಆಸ್ತಿ

ಆಸೆ ಕನಸುಗಳಿಗೆ
ಅಂತ್ಯವಿಲ್ಲದಿದ್ದರೂ
ಅಂತ್ಯವಿರುವ
ಅತ್ಮ ಜೀವಕ್ಕೆ ಹಣದ
ಮದಬೇಡ
ಸಿರಿ ಸಂಪತ್ತಿನ
ಜಂಬ ಬೇಡ
ಶಾಶ್ವತವಲ್ಲದ
ಹಣ ಗಂಟ್ಟಿದ್ದರು
ಬೆಲೆ ಕಟ್ಟಲಾಗದಯ್ಯಾ
ದುಡಿದು ಕೂಡಿಟ್ಟು
ಕೊಳ್ಳಲಾಗದಯ್ಯಾ
ಮನುಷ್ಯತ್ವದ ಗುಣ
ಮಾನವಿಯತೆ ಗುಣ




ಯಾರ ಖುಷಿಗೆ ಯಾರ ಒಲವಿಗೆ
ಗೋವು ಹತ್ಯೆ ನಿಷೇಧ ಕಾಯ್ದೆ
ಗೋವು ನಂಬಿ ಬದುಕು ನೆಡೆಸುವ
ಬಡ ಜನರ ರೈತ ಜನರ ಬಾಳು
ಗೋಳಾಗಿಸಿದ ಹುಚ್ಚು ಕಾಯ್ದೆ
ಮನುವಾದಿಗಳ ಮನ ಮೆಚ್ಚಿದ ಕಾಯ್ದೆ
ದೇಶಕ್ಕೆ ಬಂದು ಒದಗಿದ ದೊಡ್ಡ ಕಾಯಿಲೆ

ಧನ ಕಾಯುವವನಿಗೆ ಗೊತ್ತು
ಗೋವಿನ ಬಾಳು ಗೋಳು
ಜಾತಿ ಧರ್ಮದ ಕೊಚ್ಚೆ ಗುಂಡಿಗೆ
ಬಿದ್ದವನಿಗೇನು ಗೋತ್ತು
ಗೋವಿನ ಬದುಕು ಬಾಳು ಗೋಳು

ಗೋವಿನ ಹಾಲು ಕುಡಿದು
ವಿಷ ಕಕ್ಕವು ವಿಷ ಕಾರುವ
ಮನುವಾದಿಗಳಿಗೇನು ಗೋತ್ತು
ಗೋವು ಸಾಕುವ ಗೊಲ್ಲನ ಪಾಡು
ಬಡ ಜನರ ಹೊಟ್ಟೆ ಬಟ್ಟೆ
ಬದುಕು ಬಾಳಿನ ಪಾಡು

ಜಾತಿ ಮತ ಧರ್ಮದ
ಹುಚ್ಚು ಹೆಚ್ಚು ಹೆಚ್ಚಾಗಿ
ಜಾತಿ ಧರ್ಮದ ಅಂಧ ಜನರ
ಮೆಚ್ಚಿಸಲೆಂದು ತಂದ ಕಾಯ್ದೆ
ಮಾರಕ ಮಾರಕ ಮಾರಕ
ಹಳ್ಳಿ ದಿಲ್ಲಿಗೆ ಹರಡಿದ ಕಾಯಿಲೆ
ದೇಶಕ್ಕೆ ಅಂಟಿಕೊಂಡಿರುವ
ಮಹಾಮಾರಿ ಕಾಯಿಲೆ
ಮನುವಾದಿಗಳ ಹುಚ್ಚು ಕಾಯ್ದೆ

ರೈತರ ಕಷ್ಟವೇ ತಿಳಿಯಾದ
ಕಳ್ಳ ಸುಳ್ಳ ಮನುವಾದಿಗಳಿಗೇನು ಗೋತ್ತು
ರೈತ ಬಂಧು ಗೋವಿನ ಕಷ್ಟ ಸುಖ ಗೋಳಾಟ
ಗೋವು ಸಾಕಿದವನಿಗೆ ಗೋತ್ತೇ ಹೊರೆತು
ಬೀದಿಯಲ್ಲಿ ನಾಯಿ ನರಿ ಹಿಡಿದು
ನಡೆದು ಸಾಗುವವನಿಗೇನು ಗೋತ್ತು

- ರಾಜು ಹಾಸನ

18 Jan 2021, 09:11 am

ಮೋಕ್ಷ

ಮೂರು ಮಕ್ಕಳ ಹಡೆದವ್ವ ತಾಯಿ
ಮುತ್ತಿನ ಚಂಡಿನ ಹಾಂಗ
ಮುಪ್ಪಿನ ಕಾಲಕ ಮಗ್ಗುಲಕ್ಕಿದ್ದ ನಿನ್ನ
ಜೋಪಾನ ಮಾಡಲಂತಾ

ಶಾಲೆ ಕಲಿಯಲಂತ ಉಪವಾಸ ಬಿದ್ದು
ಅವರಿಗೆ ವಿಧ್ಯ ಕೊಡಿಸಿದವ್ವ
ಕೂಲಿ ನಾಲಿ ಗದ್ದೆ ಕೆಲಸ ಮಾಡುತ
ಮಕ್ಕಳ ಹೊಟ್ಟೆ ತುಂಬಿಸಿದವ್ವ

ಪೊಲೀಸ್, ಲಾಯರ್,ರಾಜಕಾರಣಿ
ಮಾಡೋ ಕನಸನು ಕಂಡೆವ್ವ
ತವರ ಬಂಗಾರ ಮಾರಿ ಅವರಿಗೆಲ್ಲಾ
ಸಮಾಜದ ಮುಂದೆ ತಂದೆ ಅವ್ವ

ವಯಸ್ಸಿಗೆ ಬಂದಾರಂತ ಹೆಣ್ಣ ಹುಡುಕಿ ಮದುವೆಯ ಮಾಡಿದವ್ವ
ಕಂಡ ಕಲ್ಲಿಗೆ ಕೈಯನು ಮುಗಿಯುತ
ಕಾಯಕ ಮಾಡಿದೇವ್ವ

ಬಂದ ಸೊಸೆಯಂದಿರು ಕೂಡಿಬಾಳದ
ಮನೆಬಿಟ್ಟು ಹೋದರವ್ವ
ಸಾಯುವಾಗಲೂ ಬಾರದ ಮಕ್ಕಳ ನೆನೆದು
ಮೊಕ್ಷವ ಪಡೆದವ್ವ ಅವ್ವಾ.

ಕಲ್ಮೇಶ ಬಡಿಗೇರ
9743539657
.....ಬಾದಾಮಿ.....

- Kalmesh Badiger

16 Jan 2021, 06:02 pm

ಬೊಗಸೆ ನೀರು

ಕಲ್ಲು ಕಂಬದ ಗೊಂಬೆಗೆ
ಹಾಲು ಮೊಸರು
ಬೆಣ್ಣೆ ತುಪ್ಪ
ಸುರಿದು ಕಳೆಯುವ
ಮೂಢ ಜನರು
ದಣಿದ ಜನರು
ಜೀವ ತಣಿಸಲು
ನೀರು ಕೇಳಿದರೆ
ಮಡಿ ಮೈಲಿಗೆ ಎಂದು
ನಿರಾಕರಿಸಿ ದೂರಸರಿದು
ಬೊಗಸೆ ನೀರು
ಸುರಿದು ಎರಚುವರಯ್ಯಾ
ನೀಚ ಮನಸಿನ
ಮೂಢ ಜನಗಳು
ದಣಿದವರಿಗೆ ನೀರು
ಕೊಡದ ಮೂಢ ಜನರಿಗೆ
ದಣಿದ ವ್ಯಕ್ತಿ ಬೆವರು ಸುರಿಸಿ
ದುಡಿದು ಕೊಟ್ಟ ಅನ್ನ ಮಾತ್ರ
ಇವರ ಹೊಟ್ಟೆಗೆ ಬೇಕಯ್ಯಾ
ಇದು ಯಾವ ಧರ್ಮವೂ

- ರಾಜು ಹಾಸನ

15 Jan 2021, 04:42 pm

ಸ್ನೇಹಿತ

ಆ ದೂರದ ತೀರವನು ಸೇರಲು ನಾನು
ಹರಿಗೋಲ ಅಂಬಿಗನು ನೀನಾಗಿ ನಿಂತೆ
ದಡಸೇರುತ್ತಿದ್ದಂತೆ ಕಣ್ಣೀರು ಹರಸುತಲಿ ಬೀಳ್ಕೊಟ್ಟು ಭಾವದಲಿ ಬಿಗಿದಪ್ಪಿ ನಿಂತೆ //

ಹೋಗೋದು ಹೋಗ್ತಿಯ ಮಗನೆ ನೀನು
ಆಗಾಗ ಫೋನ್ ಮಾಡ್ಲೆ ಅಂತಂದೆ ನೀನು
ಬೆಂಕಿಯ ಇಟ್ಟಂಗೆ ಬೆನ್ನಿಗೆ ಹೊಡೆದೊಮ್ಮೆ
ಕೊನೆವರೆಗೂ ಸ್ನೇಹದ ನೆನಪಿರಲಿ ಎಂದೆ //

ಬಾಲ್ಯದ ಆಟ, ಹುಡುಗಾಟ ಗಳೆಲ್ಲವೂ
ಮರೆಯಲಾರದ ಸಿಹಿ ನೆನಪಾಗಿ ನಿಂತು
ಬದುಕು ಸಾಗಿಸಲು ಹೆಣಗುವ ಜನಕಿಂತ
ಆ ಬಾಲ್ಯ ದಾಟದ ಸುಖ ಚಂದ ವೆಂದೆ //

ತಿಂಗಳಲೊಮ್ಮೆ ಫೋನ್ ಮಾಡಿದ್ರೆ ಸಾಕು
ಮೊದಲು ಬೈಗುಳ ಸಾಲು ನಂತರ ಮಾತು
ಭಾವ ಪರವಶನಾಗಿ ಇಹಲೋಕ ಮರೆತು
ಪರಲೋಕ ಫೋನಲ್ಲಿ ಸುತ್ತಿಸಿನಗುವಾತ //

ಸ್ನೇಹದಲಿ ಅಡಗಿದ ಪ್ರೇಮವೆಂದು ಅಮರ
ಸಿರಿ, ಸಂಪತ್ತು ಗಳಿಗಿಂತಾ ಸ್ನೇಹವು ಮೇಲು
ಸ್ನೇಹಿತನ ಒಡನಾಟ ಕಹಿ,ಸಿಹಿ ಮಾತುಗಳು
ಮತ್ತೆ ಮತ್ತೆ ಕರೆಯುತ್ತಲಿರುವುದು ಕೂಗಿ //

ಕಲ್ಮೇಶ ಬಡಿಗೇರ
9743539657
........ಬಾದಾಮಿ.......

- Kalmesh Badiger

14 Jan 2021, 10:15 pm

ಮನವೆ

ಯಾಕಿಷ್ಟು ಮೌನಿ
ಒತ್ತಡದ ನಗುವೇಕೆ
ಆತುರದ ಮಾತೇಕೆ!
ಯಾರನ್ನೋ ಮೆಚ್ಚಿಸಲು ಸಹಸವೇಕೆ?

ನಡೆದಿರುವುದೆಲ್ಲವು ನಿಜವೇ
ಮರೆಮಾಚುವ ಪ್ರಯತ್ನಗಳೇಕೆ!
ಯಾರಿಲ್ಲದ ಊರಿನಲ್ಲಿ
ಹಾಡುಗಳ ಸಾಲೇಕೆ?

ಮದ್ಯಸ್ತಿಕೆಯ ಚಂದ್ರ
ಬರುವನೇ ನೋವ ಮರೆಸಲು!
ಭರವಸೆಯ ಬೆನ್ನತ್ತಿ
ಏನ ಸಾಧಿಸಲು ಹೊರಟಿರುವೆ?

ಅಲೆಗಳ ಮೊರೆತ
ಕೇಳುವುದೇ ಇಂದಿಗೂ?
ದಿಗಂತದಂಚಿನಲ್ಲಿ ಕುಳಿತು
ಭಾವಗಳ ಹೆಜ್ಜೆ ಗುರುತ
ಎಣಿಸುವುದೆ ಮುಂದಿನ ಬದುಕು!!!

@ವಿನಯ್






- ವಿನಯ್ ಪ್ರತಾಪ್

14 Jan 2021, 12:20 pm

ಹಬ್ಬ ಹರಿದಿನ

ಭೂಮಿ ಬರಡಗಿ
ಕೆರೆ ಕಟ್ಟೆ ಒಣಗಿ ಬತ್ತಿ ಬಾಡಿ
ಖಾಲಿಯಾಗಿ ಕಾದು ಕುಂತಿದೆ
ಮಳೆರಾಯನ ಮುತ್ತಿನ
ಮಳೆ ಹನಿಗಳ ಚುಂಬನಕ್ಕೆ
ಗಿಡ ಮರಗಳ ರೆಂಬೆ ಕೊಂಬೆ ಉರುಳಿ
ಹೂವು ಕಾಯಿಯಾಗಿ
ಎಲೆ ಚಿಗುರು ಹೊಡೆಯುವ ಮಾಸ
ಹಳೆ ಮಾಸ ಕಳೆದು
ನವ ಮಾಸ ಬಂದಿದೆ ವಸಂತ ಮಾಸ
ತಂದು ಬಂದು ಕೊಟ್ಟಿದೆ
ಮಾಸ ಮಾಸಗಳು ದುಡಿದು ಬೆಂದ
ದುಡಿಮೆಯ ಧಣಿಗೆ
ದಣಿವು ತಣಿಸುವ ಮಾಸ
ರೈತ ಮಿತ್ರ ಬಂಡಿ ಎತ್ತು
ಉಳುಮೆ ಎತ್ತುಗಳ ಮೈ ಬಾರ
ಮೈ ಬರೆ ಮಾಸುವ ಮಾಸ
ಕೊಬ್ಬು ಕರಗಿದ ದೇಹಕ್ಕೆ
ಕೊಬ್ಬರಿ ಎಳ್ಳು ಬೆಲ್ಲ
ಕಬ್ಬು ಜೀರಿಗೆ ಜಿಗಿಯುವ ಮಾಸ
ಉಳ್ಳವರು ಮಂದಿರ ಆಲಯ
ಕಲ್ಲು ಕಂಬ ಸುತ್ತಿ ತಿರುಗುವ ಮಾಸ
ಇಲ್ಲದವರು ದುಡಿಮೆ ಹರಸಿ
ಸುತ್ತಿ ತಿರುಗಿ ದುಡಿದು ಹೊಟ್ಟೆ ಬಟ್ಟೆ
ಜುಟ್ಟಿಗೆ ಹೊಂದಿಸುವ ಮಾಸ
ಉಳ್ಳವರಿಗೆ ಸಂಭ್ರಮ ಆಚಾರಣೆ
ಇಲ್ಲದವರಿಗೆ ಹಸಿವಿನ ಜಾಗರಣೆ
ಉಳ್ಳವರಿಗೆ ಹಬ್ಬ ಹರಿದಿನಗಳ ಚಿಂತೆ
ಇಲ್ಲದವರಿಗೆ ಹೊಟ್ಟೆ ಬಟ್ಟೆಯ
ಗಂಟ್ಟು ಹಿಟ್ಟು ಬಡತನದ ಚಿಂತೆ
**********ರಾಜು ಹಾಸನ*********

- ರಾಜು ಹಾಸನ

14 Jan 2021, 11:16 am

ಆಚಾರ ವಿಚಾರ

ಬಡತನಕ್ಕೆ ಮೂಲ ಕಾರಣ
ಮೂಢನಂಬಿಕೆ ಆಚಾರ
ಆಚಾರ ದಿಕ್ಕರಿಸಿ
ವಿಚಾರ ಸ್ವೀಕರಿಸಿ
ಆಚಾರಕ್ಕೆಇಲ್ಲದಿರಲಿ
ನೆಲೆ ಬೆಲೆ ಮೂಲ ಬೆಲೆ
ವಿಚಾರಕ್ಕೆ ಸಿಗಲಿ
ನೆಲೆ ಬೆಲೆ ಒಳ್ಳೆ ಬೆಲೆ
ಆಚಾರಗಳು ಇದ್ದರು
ಇರಲಿ ಸೀಮಿತವಾಗಿರಲಿ
ನಿಮ್ಮ ಮನೆ ಮಂದಿರ
ಹಟ್ಟಿಯ ಒಳಗಿರಲಿ
ವಿಚಾರಗಳು ಹುಟ್ಟಿ
ಬರಲಿ ಬಯಲಿಗೆ
ಊರು ಕೇರಿ ಜಗದ
ತುಂಬೆಲ್ಲ ಹರಡಲಿ

ಜನರ ಏಳಿಗೆ ಬಯಸುವ
ದೇಶಕ್ಕೆ ಬೇಕು ವಿಚಾರವೇ
ಹೊರೆತು ಆಚಾರವಲ್ಲಾ
ಆಚಾರ ಹಣೆಗೆ ಅಂಟಿಸಿಕೊಂಡ
ಮೂಢನಂಬಿಕೆ ಮೈ ತುಂಬಿಕೊಂಡ
ದೇಶದ ಏಳಿಗೆ ಕುಂಠಿತ ಕುಂಠಿತ
ಹಾಗಾಗಿ ಆಧರಿಸಬೇಕು
ಸ್ವೀಕರಿಸಬೇಕು ಸಂವಿಧಾನದ ವಿಚಾರ
ಬಿಟ್ಟುಬಿಡಬೇಕು ತಿರಸ್ಕರಿಸಬೇಕು
ದಿಕ್ಕರಿಸಬೇಕು ಮೂಢನಂಬಿಕೆ ಆಚಾರ

- ರಾಜು ಹಾಸನ

14 Jan 2021, 09:58 am

ದುಡ್ಡು

ದುಡ್ಡೆಂದರೆ
ಹೆಣ ಬಾಯಿ
ಬಿಡುತ್ತೋ ಗೋತ್ತಿಲ್ಲ
ಆದರೆ ದುಡ್ಡೆಂದರೆ
ಜನ ಜೊಲ್ಲು
ಸುರಿಸಿ ದುಡ್ಡಿಗಾಗಿ
ಗುದ್ದಾಡಿ ಕಿತ್ತಾಡಿ
ಹೊಡೆದಾಡಿ
ಹೆಣವಾಗಿ
ಬಾಯಿ ಮುಚ್ಚಿ
ಮಲಗುವುದು
ಪಕ್ಕ ಪಕ್ಕ ಪಕ್ಕ
ದುಡ್ಡು ದುಡ್ಡು
ದುಡಿದರೂ
ದುಡ್ಡಿದವನು
ದೊಡ್ಡವನಾದರು
ದೊಡ್ಡವನಿಗೆ ದುಡ್ಡೇ
ದೊಡ್ಡಪ್ಪನಾದರು
ದುಡ್ಡು ದೊಡ್ಡವನಿಗೆ
ದುಡಿಯುವವನೇ
ಮೇಲು ಮೇಲು
ಮೇಲಪ್ಪ ಮೇಲಪ್ಪ

- ರಾಜು ಹಾಸನ

13 Jan 2021, 11:59 pm

ಒಡೆದುಹೋದ

ಒಡೆದು ಹೋದ ಮೋಡದ ಒಳಗಿಂದ ಮಳೆಯು ಸುರಿಯುತ್ತದೆ ! ಒಡೆದ ಹೋದ ಭತ್ತದಿಂದ ಉಣ್ಣೋ ಅಕ್ಕಿ ಸಿಗುತ್ತದೆ ! ಒಡೆದ ಹೋದ ಬೀಜದಿಂದ ಇನ್ನೊಂದು ಗಿಡ ಬೆಳೆಯುತ್ತದೆ ! ನಾವು ಮಾತ್ರವೇ ಒಡೆದುಹೋದರೆ ಚಿಂತೆಯ ಸಮುದ್ರದಲ್ಲಿ ಮುಳುಗಿ ಬಿಡುತ್ತೇವೆ! ಒಡೆದು ಹೋದ ಮನಸಿಗೆ ಪ್ರೀತಿಯೇ ಅಸ್ತ್ರ! ಒಡೆದು ಹೋದ ಬಾಳಿಗೆ ನಂಬಿಕೆಯೇ ಮಂತ್ರ! (ಹರಿಮಹೇಂದ್ರನ್)

- mahendran h

12 Jan 2021, 11:28 pm

ಅಮ್ಮ

ಗರ್ಭದಲ್ಲಿ ಭ್ರೂಣವ ಬೆಳೆಸಿದಳು! ಕರುಳು ಬಳ್ಳಿಯ ಮೂಲಕ ಊಟವ ಉಣಿಸಿದಳು! ಗಂಡೋ ಹೆಣ್ಣೋ ಗೊತ್ತಿಲ್ಲದೆ ಪ್ರೀತಿಸಿದಳು! ಒಂಬತ್ತು ತಿಂಗಳು ಕಷ್ಟಪಟ್ಟು ರಕ್ಷಣೆ ಮಾಡಿದಳು! ಜನನವ ಕೊಟ್ಟು ಈ ಭೂಮಿಗೆ ಪರಿಚಯಿಸಿದಳು! ಹೆರಿಗೆಯ ನೋವು ನಮ್ಮೆಲ್ಲರ ಸೃಷ್ಟಿ! ಅಮ್ಮ ಎನ್ನುವ ಕೂಗೆ ಶಕ್ತಿ! (ಹರಿಮಹೇಂದ್ರನ್)

- mahendran h

12 Jan 2021, 11:20 pm