ಜ್ಞಾನದ ಬೆಳಕು ಚೆಲ್ಲಿ
ಛಲದ ಬಲ ತುಂಬಿ
ಶಿಕ್ಷಣ ಸಂಘಟನೆ ಕಟ್ಟಿ
ಹೋರಾಟ ಚಳುವಳಿ ನಡೆಸಿ
ಮನುವಾದಿಗಳ ಸಂಹಾರಕ್ಕೆ
ದಿನ ದಲಿತರ ಏಳಿಗೆಗೆ
ಸ್ತ್ರೀ ಶೋಷಿತರ ರಕ್ಷಣೆ
ಸಂರಕ್ಷಣೆಗೆ ಪ್ರಾಣ ಒತ್ತೆ ಇಟ್ಟು
ಜೀವನವನ್ನೇ ಮುಡಿಪಾಗಿಟ್ಟು
ಹೋರಾಡಿದ ಛಲವಾದಿ
ಛಲವಾ ಬಿಡದೆ ಹೆಜ್ಜೆ ಇಟ್ಟು
ನ್ಯಾಯ ನೀತಿಯ ಇಡಿದು
ಮುನ್ನುಗ್ಗಿ ನಡೆದು ಘರ್ಜಿಸಿದ
ಭೀಮ ರಾವ್ ಭೀಮ ರಾವ್
ಸಂವಿಧಾನವೇ ನನ್ನ ಶಕ್ತಿಯು
ನ್ಯಾಯ ನೀತಿಯೇ ನನ್ನ ಜೀವನ
ಬಾಬಾ ಸಾಹೇಬರೇ ನನ್ನ ಜೀವವೂ
ಸಿಡಿಲು ಗುಡುಗು ಭೀಮ ಘರ್ಜನೆ
ಬದುಕು ಬಾಳಿನಲ್ಲಿ ಬೇರೆತು ಹೋದ
ಜೀವಾ ಭಾವದಲ್ಲಿ ಕೂಡಿ ಹೋದ
ಜಗದ್ ಜ್ಯೋತಿಯೇ ನಿಮಗೆ ಶರಣು
ದಲಿತ ಸೂರ್ಯ ಮಹಾನಾಯಕ
ಬಾಬಾ ಸಾಹೇಬರೇ
ನಿಮಗೆ ಋಣಿ ಕೋಟಿ ನಮನ
ಮನುವಾದಿಗಳ ಮುಖವಾಡ ಕಳಚಿ
ಪುಸ್ತಕ ಲೇಖನಿ ಖಡ್ಗ ಹಿಡಿದು
ದುಷ್ಟರ ರುಂಡ ಮುಂಡ ಚೆಂಡಾಡಿ
ಸಮಾನತೆಯ ಬೆಳಕು ಚೆಲ್ಲಿ
ಮನುವಾದಿಗಳೇ ಮುಗಿಬಿಳಲಿ
ದುಷ್ಟ ಜನರೇ ಅಡ್ಡಿ ಬಂದರೂ
ಛಲವಾ ಬಿಡದೆ ಹೆಜ್ಜೆ ಇಟ್ಟು
ನ್ಯಾಯ ನೀತಿಯ ಇಡಿದು
ಮುನ್ನುಗ್ಗಿ ನಡೆದು ಘರ್ಜಿಸಿದ
ಭೀಮ ರಾವ್ ಭೀಮ ರಾವ್
ಸೂರ್ಯ ಚಂದ್ರರೇ
ಭೂಮಿಗೆ ಬೆಳಕಾದರೂ
ಜನರ ಮನದ
ಜ್ಞಾನದ ಬೆಳಕು
ಬಾಬಾ ಸಾಹೇಬ್
ಭೀಮ್ ರಾವ್ ರವರು
ಸೂರ್ಯ ಚಂದ್ರರೇ
ಮುಳುಗಿ ಉದಯಿಸಿದರು
ಕತ್ತಲು ಕರಗಿ ಹೊತ್ತಾದರೂ
ಹೊತ್ತು ಕರಗಿ ಕತ್ತಲಾದರೂ
ದಿನಬೆಳಗಾದರೂ
ವರುಷಗಳೆ ಉರುಳಿದರು
ಹೊತ್ತಿ ಉರಿಯುತ್ತಿರುವ
ನಂದಾದೀಪ ಜ್ಞಾನ ಜ್ಯೋತಿ
ಬಾಬಾ ಸಾಹೇಬ್
ಭೀಮ್ ರಾವ್ ರವರು
********ರಾಜು ಹಾಸನ******
ನೀ ಪೂಜಿಸುವ ದೇವರು
ಆರಾಧಿಸಿದರು ಬರುವುದಿಲ್ಲ
ಬಂದು ಕೊಡುವುದಿಲ್ಲ
ಕೊಟ್ಟು ಕಾಯುವುದಿಲ್ಲ
ನಿನ್ನ ಬದುಕು ಬಾಳು
ನೀ ಸತ್ತಾಗ ಓಡಿ ಬರುವುದಿಲ್ಲ
ಬಂದು ಆಳುವುದಿಲ್ಲ
ಹೆಗಲಿಗೆ ಹೆಗಲು ಕೊಟ್ಟು
ಹೊರುವುದಿಲ್ಲ ನಿನ್ನ ದೇಹ
ನಿನ್ನ ಹೆಣದ ಹಿಂದೆ ಮುಂದೆ
ಬರುವುದಿಲ್ಲವಾದರು
ದೇವರು ದೇವರೆಂದು ಗುಲಾಮ
ದಾಸನಾಗುವ ಬದಲು
ನಿನ್ನ ರಕ್ಷಿಸಿ ಸಂರಕ್ಷಿಸಿ ಸುರಕ್ಷಿಸಿ
ಪೋಷಿಸಿ ಬೆಳೆಸಿದ ದೇವರು
ಬಾಬಾ ಸಾಹೇಬ್ ಭೀಮ್ ರಾವ್ ರವರ
ಜ್ಞಾನದ ಕಿಡಿಯಾಗು
ಸಮಾನತೆಯ ಮಗುವಾಗು
ಓ ನನ್ನ ಮನದ ನಲ್ಲೆ
ಪ್ರೀತಿ ತುಂಬಿದ
ಹೃದಯ ಬಿಟ್ಟು
ಹೊರಟಿರುವೆ ಎಲ್ಲಿಗೆ
ಬಿಟ್ಟಿರವಲ್ಲೇ ಬಿಟ್ಟಿರವಲ್ಲೆ
ನಿನ್ನ ಪ್ರೀತಿ ಪ್ರೇಮವ
ಬಿಟ್ಟು ಬದುಕಿರವಲ್ಲೆ
ನೀ ಎಲ್ಲಿಗೆ ನಡೆವಲ್ಲಿಗೆ
ನಡೆವಲ್ಲೆ ನಡೆವಲ್ಲೆ
ನಿನ್ನ ಹಿಂದೆ ಬಾರವಲ್ಲೆ
ನಗವಲ್ಲೇ ನಗವಲ್ಲೇ
ನನಿಷ್ಟಕೆ ನಾ ಅಳವಲ್ಲೇ
ಮನದ ಕಣ್ಣೀರು
ಕಡಲದರು ಕುರವಲ್ಲೇ
ಕುರವಲ್ಲೇ ನಿನ್ನ ಕಂಡು
ಕಣ್ಣೀರು ಹಾಕವಲ್ಲೆ
ಬಿಡವಲ್ಲೆ ಬಿಡವಲ್ಲೇ
ನಿನ್ನ ಪ್ರೀತಿಯ ಬಿಡವಲೇ
ಸಾಯವಲ್ಲೇ ಸಾಯವಲ್ಲೆ
ನಿನ್ನ ಮರೆತು ಸಾಯವಲ್ಲೆ
ನಾಗವಲ್ಲಿ ನಾಗವಲ್ಲಿ
ನೀನೇ ನನ್ನ ಹೂ ಮಲ್ಲಿ
ಬಾ ನಲ್ಲೆ ಬಾ ನಲ್ಲೆ
ನಿನ್ನ ಬಿಟ್ಟು ನಾ ಹೋಗವಲ್ಲೆ
**********ರಾಜು ಹಾಸನ**********
ದೇವರು ಇದ್ದಿದ್ದರೆ
ನಿನಗೆಕೆ ಬೇಕಿತ್ತು
ಸಂಸಾರದ ಹೊಣೆ
ದೇವರು ಸರ್ವಾಂತರ್ಯಾಮಿ
ಆಗಿದ್ದಾರೆ ನೀ ಏಕೆ ಸುತ್ತುತ್ತಿದೆ
ಆ ಕ್ಷೇತ್ರ ಈ ಕ್ಷೇತ್ರ ಪುಣ್ಯ ಕ್ಷೇತ್ರ
ದೇವರು ನಿನ್ನ ತಾನು ಮನ
ಧನ ಕಾಯುವುದೇ ಆಗಿದ್ದಾರೆ
ನೀನೇಕೆ ಕಾಯುತ್ತಿದೆ
ಗುಡಿಯ ಮೇಲೆ ಗುಡಿ ಕಟ್ಟಿ
ದೇವರ ಹುಂಡಿ
ಹಸಿದ ಹೊಟ್ಟೆಗೆ ಅನ್ನವ
ದೇವರೇ ದುಡಿದು
ಕೊಡುವುದಾದರೆ
ನೀನೇಕೆ ದುಡುಯುತ್ತಿದೆ
ಬಿಸಿಲು ಬೆಂಕಿ ಎನ್ನದೇ
ದೇವರೇ ಬಂದು ಕಾಯಿಲೆ
ಕಸಲೆಗೆ ಮದ್ದು ಕೊಡುವುದಾದರೆ
ಮದ್ದು ಚುಚ್ಚುಮದ್ದು
ಕೊಡುವ ವೈದ್ಯರು ಏಕೆ ಬೇಕಿತ್ತು
ಏನನ್ನು ಕೊಡದ ನೀಡದ
ಪರಿಹಾರಿಸದ ಕಲ್ಲನ್ನು ದೇವರೆಂದು
ಪೂಜಿಸುವುದು ಏತಕೆ
ಆರಾಧಿಸುವುದು ಏತಕೆ ಮೂಢರೇ
ಸಂಸಾರದ ಗಾಳಿ
ಗಂಧವೇ ತಿಳಿಯದ
ಬಡತನದ ಕಷ್ಟ ಅರಿಯದ
ರೈತರ ಗೋಳು ಕೇಳದ
ಸಮಾಜಕ್ಕೆ ಉತ್ತಮ
ಸಂದೇಶ ಕೊಡುಗೆ ಕೊಡದ
ದ್ವೇಷ ಅಸೂಯೆಯ
ಬೇಧ ಭಾವದ ಬೆಂಕಿ ಹಚ್ಚಿ
ಸಮಾಜವನ್ನೇ ಕಿತ್ತು
ತಿನ್ನುವ ಗುಲಾಮರು
ತಮ್ಮ ತಮ್ಮ ಕಳ್ಳ
ಖಜಾನೆಯ ತುಂಬಿಸಿಕೊಂಡು
ತಮ್ಮ ತಮ್ಮವರ ಏಳಿಗೆಗಾಗಿ
ಪರರ ಅಪರಾಧಿ ಮಾಡುವ
ರಣ ಹದ್ದು ನಾಲಾಯಕ್
ಸ್ವಾರ್ಥದ ಜನ ನಾಯಕರು
ದೇಶದ ಜನರ ಕಷ್ಟ ಸುಖ
ನೋವು ನಲಿವು ಏಳು
ಬೀಳು ತಿಳಿಯಲು ಸಾಧ್ಯವೇ
ಎಲ್ಲಾ ಜನ ಸಮುದಾಯದ
ಏಳಿಗೆ ಬಯಸುವರೇ
ಸಹಿಸಿ ಬಾಳುವರೇ.....?
********ರಾಜು ಹಾಸನ*********