Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಅ_ಉ_ಪಾಕಾರಿ

ಕೈ ಕೆಸರಾದರು
ಮೈ ಮಸಿಯಾದರು
ಅಡಿ ಮುಡಿ
ಮಣ್ಣಾದರು
ಗುಣ ದಾನದಲ್ಲಿ
ಅಪ್ಪಟ ಅಂಪರಂಜಿ
ಬಂಗಾರದ ಮನುಷ್ಯ
ಉಕ್ಕಿನ ಮನುಷ್ಯ ರೈತ

ಬೇವರು ಹರಿಸಿ
ಶ್ರಮವಹಿಸಿ
ಕಣ್ಣೀರ ವರೆಸಿ
ಹಸಿದ ಜನರ
ಹಸಿವು ನೀಗಿಸಿ
ದಣಿವು ತಣಿಸಿದ
ಅನ್ನದ ಧಣಿ
ರೈತ ಗಣಿ
ನಮ್ಮ ನಿಮ್ಮೆಲ್ಲರ
ಕಣ್ಣ್ ಮಣಿ

ಗಾಳಿ ಮಳೆಗೆ
ಬಿಸಿಲು ಬೆಂಕಿಗೆ
ಗುಡುಗು ಸಿಡಿಲಿಗೆ
ಬದುಕು ಬಂಡಿ
ಚಿಂದಿ ಚಿಂದಿ
ಚಿಂದಿಯಾದರು
ದೇಶದ ಜನರಿಗೆ
ಚಿನ್ನ ಚಿನ್ನ ಚಿತ್ರಾನ್ನ
ಹಿಟ್ಟು ಮುದ್ದೆ
ಗಂಟ್ಟು ಮೂಟೆ ಕೊಟ್ಟು
ಉಳಿಸಿ ಬೆಳಸಿದ
ಚಿನ್ನದ ಗುಣದವನು ರೈತ

ಚಿಂದೀ ಹಾಯ್ದರು
ಕೈ ಚಾಚಿ ಭಿಕ್ಷೆ ಬೇಡದೆ
ಪರರಿಗೆ ಉಪಾಕಾರಿಯಾಗಿ
ಹಿಂದೆ ಮುಂದೆ ಯಾರೇ
ಬಂದರು ಬರದಿದ್ದರು
ನನ್ನವರು ತನ್ನವರು ಯಾರೇ
ಇದ್ದರು ಇಲ್ಲದಿದ್ದರು
ಕುಂತು ಕುರದೆ ನಿಂತು
ನಿಲ್ಲದೆ ದುಡಿದು
ದೇಶಕ್ಕೆ ಅನ್ನವನಿಟ್ಟ
ಪರೋಪಾಕಾರಿ ಜೀವಿ
ಮಾನವ ಬಂಧು ರೈತ

ನಮ್ಮ ಜೀವಾ
ಬದುಕು ಕಾಣ್ಣೋ
ಈ ದೇಶದ ಆಸ್ತಿ
ಉಸಿರು ಕಾಣ್ಣೋ
ನಮ್ಮ ಬಂಧು ಮಿತ್ರ
ಆಪ್ತಮಿತ್ರ ಕಾಣ್ಣೋ
ಮಣ್ಣಿನ ಮಗ
ರೈತ ಕಾಣೋ


ಜಾತಿ ಧರ್ಮದ
ಕೋಟೆ ಕಟ್ಟಿ
ಮೇಲು ಕೀಳಿನ
ಗೋಡೆ ಕಟ್ಟಿ
ಆಚಾರ ವಿಚಾರದ
ಕಥೆಯ ಕಟ್ಟಿ
ದೇಶ ದ್ರೋಹದ
ಪಟ್ಟ ಕಟ್ಟಿ
ದ್ವೇಷ ಅಸೂಯೆ
ಜನರ ತಲೆಗೆ ಕಟ್ಟಿ
ದೇಶಕ್ಕೆ ಬೆಂಕಿ ಇಟ್ಟು
ಇಡೀ ದೇಶವನ್ನೇ
ದಗದಗನೇ ದಗದಗನೆ
ಹೊತ್ತಿ ಉರಿಸಿ
ಪಟ್ಟದಾಸೆಗೆ
ಚಟ್ಟಕ್ಕೇರಿದ
ಪುಂಡ ಪೋಕರಿ
ದಂಡ ಪಿಂಡ
ಮನುವಾದಿಗಳು
ಹಿಂದು ಮುಂದು
ಎಂದೆಂದಿಗೂ
ಮಾರಿ ಮಾರಿ
ಊರು ಕೇರಿಗೆ
ಮಹಾಮಾರಿ ಹೆಮ್ಮಾರಿ
ಅಪಕಾರಿ ಅಪಕಾರಿ
ದೇಶ ಕೋಶಕ್ಕೆ
ಅಪಾಯಕಾರಿ
ಎಚ್ಚರ ಎಚ್ಚರ ಎಚ್ಚರ

- ರಾಜು ಹಾಸನ

12 Jan 2021, 09:29 am

ಕಾಲ

ಹಿಂದೊಂದು ಕಾಲವಿತ್ತು
ವರ್ಣ ಬೇಧದ ಕಾಲ
ಇಂದೊಂದು ಕಾಲವಿದೆ
ಸಮಾನತೆಯ ಕಾಲ
ಹಿಂದೊಂದು ಕಾಲವಿತ್ತು
ನನ್ನವರು ತನ್ನವರೆಂದರೆ
ತಬ್ಬಿ ಅಪ್ಪಕೊಳ್ಳುವ ಕಾಲ
ಇಂದೊಂದು ಕಾಲವಿದೆ
ನನ್ನವರು ತನ್ನವರೆಂದರೆ
ತಳ್ಳಿ ತೆಗಳುವ ಕಾಲ
ಹಿಂದೊಂದು ಕಾಲವಿತ್ತು
ಸಂಬಂಧಗಳೆಂದರೆ
ಸಡಗರ ಸಂಭ್ರಮದ ಕಾಲ
ಇಂದೊಂದು ಕಾಲವಿದೆ
ಸಂಬಂಧಗಳೆಂದರೆ
ಸಪ್ಪೆ ಮೋರೆಯ ಕಾಲ
ಹಿಂದೊಂದು ಕಾಲವಿತ್ತು
ಬಂಧು ಬಳಗ ಬಂತ್ತೆಂದರೆ
ಬರಮಾಡಿಕೊಳ್ಳುವ ಕಾಲ
ಇಂದೊಂದು ಕಾಲವಿದೆ
ಬಂಧು ಬಳಗ ಬರುವರೆಂದು
ಬಾಗಿಲು ಮುಚ್ಚಿಕೊಳ್ಳುವ ಕಾಲ

ಹಿಂದೊಂದು ಕಾಲವಿತ್ತು
ಸಂಬಂಧಕ್ಕೆ ಬೆಲೆಕೊಟ್ಟು
ಸಿರಿ ಸಂಪತ್ತಿಗೆ
ಬೆಲೆಕೊಡದ ಕಾಲ
ಇಂದೊಂದು ಕಾಲವಿದೆ
ಸಂಬಂಧಕ್ಕೆ ಬೆಲೆ ಕೊಡದೆ
ಸಿರಿ ಸಂಪತ್ತಿಗೆ
ಬೆಲೆಕೊಡುವ ಕಾಲ
ಹಿಂದೊಂದು ಕಾಲವಿತ್ತು
ಪ್ರೀತಿ ಪ್ರೇಮ ಮಮತೆ
ತುಂಬಿದ ಕಾಲ
ಇಂದೊಂದು ಕಾಲವಿದೆ
ಮದ ಮತ್ಸರ ಮೋಹ
ತುಂಬಿದ ಕಾಲ
ಹಿಂದೊಂದು ಕಾಲವಿತ್ತು
ಜನರು ಬದಲಾದರೂ
ಭಾವನೆ ಒಂದೇ ಇದ್ದ ಕಾಲ
ಇಂದೊಂದು ಕಾಲವಿದೆ
ಜನರು ಬದಲಾದಂತೆ
ಭಾವನೆ ಬದಲಾಗುವ ಕಾಲ

- ರಾಜು ಹಾಸನ

10 Jan 2021, 08:24 am

ಓ ಕಂದ

ಓ ಕಂದ ಓ ಕಂದ
ಓ ನನ್ನ ಕಂದ
ನೀ ಊರು ಕೆರಿಗೆ
ಅಧಿಕಾರಿಯಾಗದಿದ್ದರು
ದುಡ್ಡಿನ ಮದ ತುಂಬಿದ
ದೊಡ್ಡವನಾಗದಿದ್ದರು
ನೀ ನಾಲ್ಕು ಅಕ್ಷರ
ಓದು ಬರಹ ಕಲಿತು
ಸ್ವಾಭಿಮಾನದ
ಮಗುವಾಗು
ಗಿಡವಾಗಿ ಬೆಳೆದು
ಮರವಾಗಿ ನಿಂತು
ದಣಿದು ಬಂದವರಿಗೆ
ದಣಿವು ನೀಗಿಸುವ
ಮರದ ನೆರಳಾಗು
ನಿನ್ನ ನಂಬಿದ ಜನರ
ಬದುಕು ಕಾಯುವ
ಕಾವಲುಗಾರನಾಗು
ಕೈ ಹಿಡಿದು ನಡೆಸುವ
ಮುನ್ನೆಡೆಸುವ ನಾಯಕನಾಗು
ಓ ಕಂದ ಓ ಕಂದ
ಓ ಕಂದ ನನ್ನ ಕಂದ

- ರಾಜು ಹಾಸನ

08 Jan 2021, 02:53 pm

ತಂದೆ ತಾಯಿ

ದೇವರು ದೇವರು
ನಿನ್ನ ಹೆತ್ತು ಹೊತ್ತು
ಸಾಕಿ ಸಲಹಿ ಬೆಳೆಸಿದ
ನಿನ್ನ ತಂದೆ ತಾಯಿಯೇ
ನಿನ್ನ ದೇವರು
ಗುಡಿ ಗೂಂಡಾಂತರ
ಸುತ್ತಿ ಸುಸ್ತಾಗಬೇಡ
ಆ ದೇವರು ಈ ದೇವರೆಂದು
ಕಲ್ಲು ಬಂಡೆಗೆ ತಲೆ ಚಚ್ಚಿ
ನಂಬಿ ಮೋಸ ಹೋಗಬೇಡ

ಮುಕ್ತಿ ಮೋಕ್ಷಕ್ಕಾಗಿ
ಕ್ಷೇತ್ರ ಕ್ಷೇತ್ರ ಪುಣ್ಯ ಕ್ಷೇತ್ರ
ಅಲೆದಾಡಿ ಪರದಾಡಿ
ಕಲ್ಲು ಗೊಂಬೆಯ ಮುಂದೆ
ಬಿದ್ದು ಬೆಡಬೇಡ
ನೀ ಹುಟ್ಟಿ ಬೆಳೆದು ಆಡಿ ಬಂದ
ಗುಡಿಯಲ್ಲಿರುವರು
ನಿನಗೆ ಜನ್ಮ ಕೊಟ್ಟ ದೇವರು
ನಿನ್ನ ತಂದೆ ತಾಯಿಯೇ
ನಿನ್ನ ದೇವರು ಮರೆಯಬೇಡ

ಜೀವವಿಲ್ಲದ
ತಿನ್ನಲಾಗದ ಕಲ್ಲಿಗೆ
ಗುಡಿಯ ಮೇಲೆ ಗುಡಿ ಕಟ್ಟಿ
ಹಣ್ಣು ಕಾಯಿ ಹೋಳಿಗೆ
ಕಡುಬಿನ ಎಡೆ ಇಟ್ಟು
ಹಾಲು ತುಪ್ಪ ಗಂಧದ
ಚಂದನದ ಅರಿಶಿಣದ
ಎಳೆನೀರು ಸುರಿದು
ಕಳೆಯಬೇಡ
ನಿನ್ನ ಹೆತ್ತು ಹೊತ್ತುವರಿಗೆ
ಅನ್ನ ನೀರು ಕೊಟ್ಟು
ಪ್ರೀತಿಸಿ ಪೂಜಿಸಿ ಆರಾಧಿಸು
ನಿನ್ನ ದೇಹದ ಕೊನೆ
ಉಸಿರು ಇರುವ ತನಕ
ಅಂದೇ ಸಿಗುವುದಯ್ಯಾ
ನಿನಗೆ ಸ್ವರ್ಗಕ್ಕಿಂತ ಮಿಗಿಲಾದ
ಬೆಲೆ ಕಟ್ಟಲಾಗದ
ಶ್ರೇಷ್ಠ ಸ್ವರ್ಗ ಸುಖವಯ್ಯಾ

- ರಾಜು ಹಾಸನ

08 Jan 2021, 08:57 am

ಬಾಲ್ಯದ ನೆನಪು

ಕಳೆದುಹೋದ ದಿನಗಳು
ಮರುಕಳಿಸುತ್ತಿದೆ ನೆನಪುಗಳು
ಒಮ್ಮೆ ಹೋಗಬೇಕು ಸವಿಬಾಲ್ಯ ದ ನೆನಪಿಗೆ
ಧನ್ಯವಾದಗಳು ನೆನಪನ್ನು ನೆನಪಿಸುವ ಸವಿಕನಸಿಗೆ!!

ಬಾಲ್ಯದ ಹಾದಿ ಅತಿ ಕಠಿಣ
ನಾಲ್ವರಿಗೆ ಅದೆ ಸುಂದರ
ತುಂಟಾಟದ ಆದಿನ ಮನೋಹರ
ಕೆಲವೊಂದು ಕ್ಷಣ ಭಯಂಕರ!!

ಅಪ್ಪನ ಕೈಯಲ್ಲಿ ಸ್ಕೇಲ್
ಅಮ್ಮನ ಕೈಯಲ್ಲಿ ಕೋಲು
ಸ್ಕೇಲ್ ಕೋಲು ಸೇರಿದಾಗ
ನಾವಾಗುತ್ತಿದ್ದೆವು ಅಡಿ ಮೇಲು!!

ಅಪ್ಪನ ಬೈಗುಳದ ಪಾಠ
ಅಮ್ಮನ ಪ್ರೀತಿಯ ಊಟ
ತಣಿಸುತ್ತಿತ್ತು ಉದರವ ಎಂದು
ಋಣಿಯಾಗಿರುವೆವು ಅವರಿಗೆ ಎಂದೆಂದೂ!!

ಬಾಲ್ಯಕ್ಕೆ ಹೋಗಬೇಕೆನಿಸುತ್ತಿದೆ ಈ ಯೌವ್ವನದಿ
ಮತ್ತೆ ಆಡಬೇಕು ನಾಲ್ವರ ಪುಟ್ಟ ಜಗದಿ
ಸಹೋದರರ ಚೇಷ್ಟೆ ಚಂದ
ಅಪ್ಪುವಿನ ನಗು ಚಂದ!!

ಮುಗ್ದ ಮನಸ್ಸುಗಳ ಜೊತೆ ಸೇರುತ್ತಿದ್ದೆವು ಅಂದು
ಆದರೆ ಎಲ್ಲರೂ ಹಾದಿ ದೂರ ದೂರ ಇಂದು
ಅಂದು ಒಂದು ಕಪಿಯ ತರಹ
ಇಂದು ನೆನಪುಗಳನ್ನು ಮೂಡಿಸುತ್ತಿದೆ ನನ್ನ......ಬರಹ!!!

‌ ‌‌ರಚನೆ: ಮಾಲಾಶ್ರೀ

- Akshatha Shetty

07 Jan 2021, 03:08 pm

ಆಶಿರ್ವಾದ

ವಿದ್ಯೆ ಬುದ್ಧಿ ಜ್ಞಾನ ಕೊಟ್ಟು
ಬದುಕು ಬಾಳು ಬೆಳಗಿಸಿ
ಛಲದ ಬಲ ಸ್ವಾಭಿಮಾನದ ಬಲ
ನನ್ನೆದೆಯಲಿ ತುಂಬಿದ
ಬಾಬಾ ಸಾಹೇಬ್
ಭೀಮ್ ರಾವ್ ರವರ ನೆರಳು
ನನ್ನ ನೆತ್ತಿಯ ಮೇಲೆ ಇರುವಾಗ
ಯಾವ ದೇವರ ದರ್ಶನ ಬೇಡ
ಕಲ್ಲು ಬಂಡೆಯ ಆಶಿರ್ವಾದವೂ ಬೇಡ
ಜೈ ಭೀಮ್ ಜೈ ಭೀಮ್ ಜೈ ಭೀಮ್

- ರಾಜು ಹಾಸನ

07 Jan 2021, 02:33 pm

ಅಕ್ಕಿ ಕಾಳು

ಸೊನೆಯೇ ಸುರಿಯಲಿ
ಚಳಿಯೇ ಕೋರೆಯಲಿ
ಬಿಸಿಲೇ ಮೈ ಸುಡಲಿ
ಏನೇ ಆಗಲಿ ಏನೇ ಬರಲಿ
ಏನೇ ಬಂದು ಹೋದರು
ಶ್ರಮದಿ ದುಡಿದು ದೇಶಕ್ಕೆ
ಅನ್ನ ಕೊಟ್ಟ ದೇವರು
ರೈತ ರೈತ ದೇವರು

ಸುರಿವ ಮಳೆಯಲ್ಲಿ
ಮನೆಗಳು ಮುಳುಗಿದರು
ಕೊರೆಯುವ ಚಳಿಗೆ
ಗಡ ಗಡ ನಡುಗಿ ನಲುಗಿದರು
ಬಿಸಿಲು ಬೆಂಕಿಗೆ ಬೆಂದು ಸುಟ್ಟರು
ಛಲ ಬಿಡದೆ ದುಡಿಯುವ
ಕಾಯಕ ಯೋಗಿ ನೇಗಿಲ ಯೋಗಿ
ದೇಶದ ಬೆನ್ನೆಲುಬು ರೈತ ದೇವರು

ತಟ್ಟೆ ತುಂಬಾ
ಹೊಟ್ಟೆ ತುಂಬಾ
ತಿಂದು ತೇಗುವುದು
ರೈತ ಬೆಳೆದ ಅನ್ನವಾದರು
ಪೊಜಿಸಿ ಆರಾಧಿಸಿ
ಬಿದ್ದು ಬೇಡುವುದು ಮಾತ್ರ
ಜನರೇ ಸೃಷ್ಟಿಸಿ
ನಿರ್ಮಿಸಿದ ಗುಡಿಯೊಳಗಿನ
ಕಲ್ಲು ಬಂಡೆಯ
ಇದು ಎಂತಹ ಲೋಕವಯ್ಯ

ರೈತನ ಗೋಳು
ದೇಶ ಆಳುವ
ನಾಯಕರಿಗಿಲ್ಲ
ಆದರೆ ರೈತರ ಬೆಳೆದ
ರಟ್ಟೆ ಬೇವರಿನ
ಅನ್ನ ಮಾತ್ರ ಇವರ
ಹೊಟ್ಟೆಗೆ ಬೇಕು
ಇವರು ಎಂತಹ ನಾಯಕರೋ
ಇದು ಯಾವ ಸೀಮೆಯ
ನ್ಯಾಯ ನೀತಿ ಧರ್ಮವೋ

ಕಷ್ಟವೇ ಇರಲಿ
ಸುಖವೇ ಇರಲಿ
ಬೆವರು ಸುರಿಸಿ
ಕಣ್ಣೀರು ಹರಿಸಿ
ಮೈ ಮೂಳೆ ಮುರಿದರು
ದುಡಿದು ಕೊಟ್ಟ ಅನ್ನವ
ಜೀವವಿಲ್ಲದ ಕಲ್ಲು
ಕಂಬಕ್ಕೆ ಎಡೆ ಇಟ್ಟು ತಿನ್ನುವ
ಜನರಿಗೇನು ಗೊತ್ತು
ರೈತನ ಕಷ್ಟ ಅನ್ನದ ಬೆಲೆ

ರೈತರ ಗೋಳು
ಕೇಳದ ನಾಯಕರು
ಇದ್ದರೂ ಒಂದೇ
ಹೋದರು ಒಂದೇ
ಸತ್ತು ಬಿಟ್ಟರೆ
ಹಾಕಿಬಿಡುವೆನು ಅವರ
ಎದೆಯ ಮೇಲೆ
ಮೂರಿಡಿ ಮಣ್ಣು
ಬಾಯಿಗೆ ರೈತ
ರೈತರು ಬೆಳೆದ ಅಕ್ಕಿ ಕಾಳು

- ರಾಜು ಹಾಸನ

07 Jan 2021, 12:12 am

ಅರಿತು

ದೇವರು ದೇವರು
ಬೆಟ್ಟ ಗುಡ್ಡದ ಮೇಲಿನ
ಕರಿ ಕಲ್ಲ ದೇವರು
ಬಡವರ ಬದುಕು ಬರಿದಾಗಿಸಿದ
ಬಂಡೆ ದೇವರು
ಮನುವಾದಿಗಳಿಗೆ ಮನೆ ಮಠ
ಬಟ್ಟೆ ಕೊಟ್ಟ ಮಂತ್ರ ತಂತ್ರ
ಕುತಂತ್ರದ ಕಲ್ಲು ದೇವರು

ದೇವರು ದೇವರು
ನಸುಕಿನ ಮುಸುಕಿನ
ಬಿಸಿಲು ಬೆಂಕಿಯ ಝಳಕ್ಕೆ
ಮೈಯೊಡ್ಡಿ ಮೈ ಮೂಳೆ
ಮುರಿದರು ಮೈ ಬಗ್ಗಿಸಿ
ದುಡಿದು ತಿನ್ನುವವರಿಗೆ
ದುಡಿಮೆಯೇ ದೇವರು
ನೆಲ ಜಲ ಗಾಳಿ ಸೂರ್ಯ
ಚಂದ್ರರೇ ದಿಕ್ಕಾಪಾಲಾಕರು

ಕುಂತಲ್ಲಿಯೇ ಕುಂತು
ವಾಲಾಡಿ ತೂಕಡಿಸಿ
ದುಡಿಯದೇ ದುಡಿಸಿಕೊಂಡು
ತಿನ್ನುವವರಿಗೆ ಜನರಿಗೆ
ಕಲ್ಲು ಬಂಡೆಯೇ ದೇವರು
ಗುಡಿಯ ಸುತ್ತಲಿನ
ಕಲ್ಲು ಕಂಬ ಹೋಮ ಹವನ
ಮಂತ್ರ ತಂತ್ರವೇ
ಕುತಂತ್ರಿಗಳ ದಿಕ್ಕಪಾಲಾಕರು

ಮೂಢನಂಬಿಕೆಗೆ
ಬಲಿಯಾಗಿ ತಲೆ
ತಗ್ಗಿಸಿ ಬಗ್ಗಿಸಿ
ಮಾನುವಾದಿಗಳ
ಗುಲಾಮನಾಗಬೇಡ
ತಲೆ ಎತ್ತಿ ನಡೆ
ವಿದ್ಯೆ ಬುದ್ಧಿ ಕಲಿತು
ಸಂವಿಧಾನ ಅರಿತು

- ರಾಜು ಹಾಸನ

06 Jan 2021, 12:17 am

ಜೀವನಕ್ಕೊಂದು ಪಾಠ

ಪ್ರೀತಿ ಪ್ರೇಮದ ಚಿಟ್ಟೆ
ಹಾರಿ ಹೋಯಿತು ಬಿಟ್ಟು
ಪ್ರೀತಿ ಪ್ರೇಮವ ಕೊಟ್ಟು
ಮನಸಿಗೆ ಮನಸು ಕೊಟ್ಟು
ಹೃದಯಕ್ಕೆ ಹೃದಯ ಕೊಟ್ಟು
ಕಣ್ಣ್ ಗಳಿಗೆ ಕನಸು ಕಟ್ಟಿ
ಸಾವಿರಾರು ಆಸೆ ಇಟ್ಟು
ಬಿಟ್ಟು ಹೊರಟಿತ್ತು ಮರೆತು
ಎದೆಯಲ್ಲಿನಾ ಪ್ರೀತಿ
ಪ್ರೇಮವ ಉಳಿಸಿ ಬೆಳಸಿ
ಹೃದಯದ ಬಡಿತ ಹೆಚ್ಚಿಸಿ
ನನ್ನೆದೆಯೊಳಗಿನ ಪ್ರೀತಿ ಪ್ರೇಮವ
ಕೊಂದು ಸಾಯಿಸಿತು
ಬಿಟ್ಟು ಹೊರಟಿತ್ತು ಉಸಿರು ನಿಲ್ಲಿಸಿ
ಪ್ರೀತಿ ಪ್ರೇಮದ ಚಿಟ್ಟೆ
ಅಂತೂ ಇಂತೂ ಬಂದು
ಆಟವಾಡಿ ನಾಟಕವಾಡಿ
ಕಲಿಸಿತು ಜೀವನಕ್ಕೊಂದು ಪಾಠ

- ರಾಜು ಹಾಸನ

04 Jan 2021, 11:38 am

ದೀನ ದಲಿತರು

ಜಾತಿ ಧರ್ಮ
ಮೇಲು ಕೀಳು
ಮನುವಾದಿಗಳ
ಶೋಷಣೆಯ
ದ್ವೇಷಸುವುದರ
ಜೊತೆ ಜೊತೆಯಲಿ
ವಿದ್ಯೆ ಕಲಿತು
ಶಿಕ್ಷಿತರಾಗಿ
ಎಲ್ಲಾರು ಒಗ್ಗುಡಿ
ಸಂಘ ಸಂಘಟನೆ
ಕಟ್ಟಿಕೊಂಡು
ಹೋರಾಟ ನಡೆಸಿ
ಮುನ್ನೆಡೆದು
ದುಡಿದು ಮುಗಿಲೆತ್ತರಕ್ಕೆ
ಬೆಳೆದು ನಿಂತರೆ ಬೆಲೆ
ಇಲ್ಲದಿದ್ದರೆ ಬೆಲೆಯು ಇಲ್ಲ
ನೆಲೆಯು ಇಲ್ಲ
ಕಲೆ ಕಲೆ ಕಲೆ
ನಮ್ಮ ಬದುಕೇ
ಕೊಲೆ ಕೊಲೆ ಕೊಲೇ

- ರಾಜು ಹಾಸನ

02 Jan 2021, 11:56 pm