Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಭೀಮ್ ರಾವ್

ಜ್ಞಾನದ ಬೆಳಕು ಚೆಲ್ಲಿ
ಛಲದ ಬಲ ತುಂಬಿ
ಶಿಕ್ಷಣ ಸಂಘಟನೆ ಕಟ್ಟಿ
ಹೋರಾಟ ಚಳುವಳಿ ನಡೆಸಿ
ಮನುವಾದಿಗಳ ಸಂಹಾರಕ್ಕೆ
ದಿನ ದಲಿತರ ಏಳಿಗೆಗೆ
ಸ್ತ್ರೀ ಶೋಷಿತರ ರಕ್ಷಣೆ
ಸಂರಕ್ಷಣೆಗೆ ಪ್ರಾಣ ಒತ್ತೆ ಇಟ್ಟು
ಜೀವನವನ್ನೇ ಮುಡಿಪಾಗಿಟ್ಟು
ಹೋರಾಡಿದ ಛಲವಾದಿ
ಛಲವಾ ಬಿಡದೆ ಹೆಜ್ಜೆ ಇಟ್ಟು
ನ್ಯಾಯ ನೀತಿಯ ಇಡಿದು
ಮುನ್ನುಗ್ಗಿ ನಡೆದು ಘರ್ಜಿಸಿದ
ಭೀಮ ರಾವ್ ಭೀಮ ರಾವ್

ಸಂವಿಧಾನವೇ ನನ್ನ ಶಕ್ತಿಯು
ನ್ಯಾಯ ನೀತಿಯೇ ನನ್ನ ಜೀವನ
ಬಾಬಾ ಸಾಹೇಬರೇ ನನ್ನ ಜೀವವೂ
ಸಿಡಿಲು ಗುಡುಗು ಭೀಮ ಘರ್ಜನೆ
ಬದುಕು ಬಾಳಿನಲ್ಲಿ ಬೇರೆತು ಹೋದ
ಜೀವಾ ಭಾವದಲ್ಲಿ ಕೂಡಿ ಹೋದ
ಜಗದ್ ಜ್ಯೋತಿಯೇ ನಿಮಗೆ ಶರಣು
ದಲಿತ ಸೂರ್ಯ ಮಹಾನಾಯಕ
ಬಾಬಾ ಸಾಹೇಬರೇ
ನಿಮಗೆ ಋಣಿ ಕೋಟಿ ನಮನ

ಮನುವಾದಿಗಳ ಮುಖವಾಡ ಕಳಚಿ
ಪುಸ್ತಕ ಲೇಖನಿ ಖಡ್ಗ ಹಿಡಿದು
ದುಷ್ಟರ ರುಂಡ ಮುಂಡ ಚೆಂಡಾಡಿ
ಸಮಾನತೆಯ ಬೆಳಕು ಚೆಲ್ಲಿ
ಮನುವಾದಿಗಳೇ ಮುಗಿಬಿಳಲಿ
ದುಷ್ಟ ಜನರೇ ಅಡ್ಡಿ ಬಂದರೂ
ಛಲವಾ ಬಿಡದೆ ಹೆಜ್ಜೆ ಇಟ್ಟು
ನ್ಯಾಯ ನೀತಿಯ ಇಡಿದು
ಮುನ್ನುಗ್ಗಿ ನಡೆದು ಘರ್ಜಿಸಿದ
ಭೀಮ ರಾವ್ ಭೀಮ ರಾವ್

- ರಾಜು ಹಾಸನ

21 Dec 2020, 10:42 am

ಬಾನಂಗಳದಲ್ಲಿ ಚಂದಿರ

ಬಾನಂಗಳದ ಚಂದಿರನಲ್ಲಿ ನಾ ಕಂಡೆ
ಸುಂದರ ಚಿಕ್ಕ ಬಿಂಬವನು !!
ಆ ಬಿಂಬದಲಿ ಮೂಡಿವೆ
ಎಣಿಕೆಯಿಲ್ಲದ ಅಂದವಾದ ನಕ್ಷತ್ರಗಳು !!

ಆ ನಕ್ಷತ್ರಗಳಲ್ಲಿಯೂ ಹೊಳೆಯುತ್ತಿತು
ಒಂದು ಅಂದವಾದ ನಕ್ಷತ್ರ, ಎಷ್ಟೊಂದು ಸುಂದರ !!
ಎನ್ನುವುದೇ ನಿಜಕ್ಕೂ ಅದ್ಭುತ !!

ಆ ಅದ್ಭುತ ನಕ್ಷತ್ರದಲ್ಲಿ ನಾ ಕಂಡೆ ನನ್ನದೇ ಬಿಂಬವನು
ಆ ಬಿಂಬವನು ನೋಡಿ ಮೃೆಮರೆತೆ ನನ್ನೊಲಮೆಯ ಲೋಕವನು.

- Shilpa G

20 Dec 2020, 04:56 pm

ಜ್ಞಾನದ ಬೆಳಕು

ಸೂರ್ಯ ಚಂದ್ರರೇ
ಭೂಮಿಗೆ ಬೆಳಕಾದರೂ
ಜನರ ಮನದ
ಜ್ಞಾನದ ಬೆಳಕು
ಬಾಬಾ ಸಾಹೇಬ್
ಭೀಮ್ ರಾವ್ ರವರು

ಸೂರ್ಯ ಚಂದ್ರರೇ
ಮುಳುಗಿ ಉದಯಿಸಿದರು
ಕತ್ತಲು ಕರಗಿ ಹೊತ್ತಾದರೂ
ಹೊತ್ತು ಕರಗಿ ಕತ್ತಲಾದರೂ
ದಿನಬೆಳಗಾದರೂ
ವರುಷಗಳೆ ಉರುಳಿದರು
ಹೊತ್ತಿ ಉರಿಯುತ್ತಿರುವ
ನಂದಾದೀಪ ಜ್ಞಾನ ಜ್ಯೋತಿ
ಬಾಬಾ ಸಾಹೇಬ್
ಭೀಮ್ ರಾವ್ ರವರು
********ರಾಜು ಹಾಸನ******

- ರಾಜು ಹಾಸನ

20 Dec 2020, 02:40 pm

ನನ್ನಾಸೆ....

ಬರಬಹುದು ನನಗು ಕನಸು
ನಾಳೆ ನನ್ನದೆನ್ನುವ ಬದುಕು
ಆದರು ನಾ ಮರೆತು ಬಿಡುವೆ
ಆ ಕನಸು ನೆನ್ನೆಯದೆಂದು....


ಸುಳಿದಾಡಬಹುದು
ನನ್ನಲ್ಲೆ ಬಂಧವು
ನನ್ನೊಡನೆ ನನಗಾಗಿ ಅಲ್ಲದಿದ್ದರು
ಆದರು ನಾ ಸುಳಿದಾಡುವೆ
ನನ್ನವರು ನನಗಾಗಿ ಎಂದು.....


ಇರಬಹುದು ನನ್ನೊಳಗೆ
ನನ್ನ ನಾನೆ ಮರೆತು ಎಲರಿಗಾಗಿ
ಆದರು ನಾ ಅಲೆದಾಡುವೆ
ತನ್ನ ತನವ ಅರಿಯಲೆಂದು........


ಬದುಕು ನನ್ನದೆ ಇರಬಹುದು
ಆದರು ಬದುಕಿನೊಳಗೆ ನಾನೆ
ಮರೆಯಾಗಿರುವೆ ನಾನೆಂದು
ನನ್ನೆ ಹುಡುಕದೆ ಹಾಗೆ.......

ಅರಿಯದೆ ಇರಬಹುದು
ನನ್ನವನ ಅಂತರಾಳ
ಆದರು ನಾ ಇದ್ದು ಬಿಡುವೆ
ಅವನಂತೆ ಎಂದಿಗು ಅವನೊಂದಿಗೆ.....





- ರಾಗಸಿರಿ....

19 Dec 2020, 07:44 pm

ಮಗು

ನೀ ಪೂಜಿಸುವ ದೇವರು
ಆರಾಧಿಸಿದರು ಬರುವುದಿಲ್ಲ
ಬಂದು ಕೊಡುವುದಿಲ್ಲ
ಕೊಟ್ಟು ಕಾಯುವುದಿಲ್ಲ
ನಿನ್ನ ಬದುಕು ಬಾಳು
ನೀ ಸತ್ತಾಗ ಓಡಿ ಬರುವುದಿಲ್ಲ
ಬಂದು ಆಳುವುದಿಲ್ಲ
ಹೆಗಲಿಗೆ ಹೆಗಲು ಕೊಟ್ಟು
ಹೊರುವುದಿಲ್ಲ ನಿನ್ನ ದೇಹ
ನಿನ್ನ ಹೆಣದ ಹಿಂದೆ ಮುಂದೆ
ಬರುವುದಿಲ್ಲವಾದರು
ದೇವರು ದೇವರೆಂದು ಗುಲಾಮ
ದಾಸನಾಗುವ ಬದಲು
ನಿನ್ನ ರಕ್ಷಿಸಿ ಸಂರಕ್ಷಿಸಿ ಸುರಕ್ಷಿಸಿ
ಪೋಷಿಸಿ ಬೆಳೆಸಿದ ದೇವರು
ಬಾಬಾ ಸಾಹೇಬ್ ಭೀಮ್ ರಾವ್ ರವರ
ಜ್ಞಾನದ ಕಿಡಿಯಾಗು
ಸಮಾನತೆಯ ಮಗುವಾಗು

- ರಾಜು ಹಾಸನ

18 Dec 2020, 10:32 pm

ಆಕಾಶ ಪ್ರೀತಿ

ನನ್ನ ಮನಸ್ಸೆಲ್ಲ ತುಂಬಿತ್ತು ಕಗ್ಗತ್ತಲೆ
ಕಿರುನೋಟದಲ್ಲಿ ಕೆಣಕಿದಲು ಆ ಬಾಲೆ
ಪಿಸು ನಗೆಯಲ್ಲಿ ಹೆಬ್ಬಿಸಿದಲು ಅಲೆ

ಮೊಗ ಸಿರಿಯದು ಅದು ನೈದಿಲೆ
ವರ್ಣಿಸಲು ಪದಗಳಿಗೆ ಬಾರದು ಬೆಲೆ
ನಿನ್ನ ಕಂಡ ಕ್ಷಣವೇ ಮರೆಯಾದೆ ನನ್ನಲೆ

ನಿಜ ಪ್ರೇಮಿ ಆಗೊ ಆಸೆ ಆಗಲೆ
ಅಮರವಾದೆ ನಿನು ನನ್ನ ಮನದಲೆ
ಹೇಗೆ ಹಾಕಿದಿಯೊ ಮನಸ್ಸಿಗೆ ಬಲೆ
ತುಸು ನಗೆಯಲ್ಲೆ ಕೊಂದೆಯ ಒ ನನ್ನ ನಲ್ಲೆ

ನಿತ್ಯ ಕಳೆಯುವೆನೂ ನಿನ್ನ ಗುಗ್ಗಲೆ
ಭಾವನೆಗಳು ಮೂಡಿರುವವು ಕನಸ್ಸಿನಲೆ
ಬದುಕಿನ ಬವಣೆ ಅದು ನಿನ್ನ ನೆನಪಿನಲೆ

- Shivakumara S

18 Dec 2020, 09:59 pm

ಹೋಗವಲ್ಲೆ

ಓ ನನ್ನ ಮನದ ನಲ್ಲೆ
ಪ್ರೀತಿ ತುಂಬಿದ
ಹೃದಯ‌ ಬಿಟ್ಟು
ಹೊರಟಿರುವೆ ಎಲ್ಲಿಗೆ
ಬಿಟ್ಟಿರವಲ್ಲೇ ಬಿಟ್ಟಿರವಲ್ಲೆ
ನಿನ್ನ ಪ್ರೀತಿ ಪ್ರೇಮವ
ಬಿಟ್ಟು ಬದುಕಿರವಲ್ಲೆ
ನೀ ಎಲ್ಲಿಗೆ ನಡೆವಲ್ಲಿಗೆ
ನಡೆವಲ್ಲೆ ನಡೆವಲ್ಲೆ
ನಿನ್ನ ಹಿಂದೆ ಬಾರವಲ್ಲೆ
ನಗವಲ್ಲೇ ನಗವಲ್ಲೇ
ನನಿಷ್ಟಕೆ ನಾ ಅಳವಲ್ಲೇ
ಮನದ ಕಣ್ಣೀರು
ಕಡಲದರು ಕುರವಲ್ಲೇ
ಕುರವಲ್ಲೇ ನಿನ್ನ ಕಂಡು
ಕಣ್ಣೀರು ಹಾಕವಲ್ಲೆ
ಬಿಡವಲ್ಲೆ ಬಿಡವಲ್ಲೇ
ನಿನ್ನ ಪ್ರೀತಿಯ ಬಿಡವಲೇ
ಸಾಯವಲ್ಲೇ ಸಾಯವಲ್ಲೆ
ನಿನ್ನ ಮರೆತು ಸಾಯವಲ್ಲೆ
ನಾಗವಲ್ಲಿ ನಾಗವಲ್ಲಿ
ನೀನೇ ನನ್ನ ಹೂ ಮಲ್ಲಿ
ಬಾ ನಲ್ಲೆ ಬಾ ನಲ್ಲೆ
ನಿನ್ನ ಬಿಟ್ಟು ನಾ ಹೋಗವಲ್ಲೆ
**********ರಾಜು ಹಾಸನ**********

- ರಾಜು ಹಾಸನ

18 Dec 2020, 03:28 pm

ಸತ್ಯಕ್ಕೆ ಬೆಲೆ ಇಲ್ಲ

ದೇವರು ಇದ್ದಿದ್ದರೆ
ನಿನಗೆಕೆ ಬೇಕಿತ್ತು
ಸಂಸಾರದ ಹೊಣೆ
ದೇವರು ಸರ್ವಾಂತರ್ಯಾಮಿ
ಆಗಿದ್ದಾರೆ ನೀ ಏಕೆ ಸುತ್ತುತ್ತಿದೆ
ಆ ಕ್ಷೇತ್ರ ಈ ಕ್ಷೇತ್ರ ಪುಣ್ಯ ಕ್ಷೇತ್ರ
ದೇವರು ನಿನ್ನ ತಾನು ಮನ
ಧನ ಕಾಯುವುದೇ ಆಗಿದ್ದಾರೆ
ನೀನೇಕೆ ಕಾಯುತ್ತಿದೆ
ಗುಡಿಯ ಮೇಲೆ ಗುಡಿ ಕಟ್ಟಿ
ದೇವರ ಹುಂಡಿ
ಹಸಿದ ಹೊಟ್ಟೆಗೆ ಅನ್ನವ
ದೇವರೇ ದುಡಿದು
ಕೊಡುವುದಾದರೆ
ನೀನೇಕೆ ದುಡುಯುತ್ತಿದೆ
ಬಿಸಿಲು ಬೆಂಕಿ ಎನ್ನದೇ
ದೇವರೇ ಬಂದು ಕಾಯಿಲೆ
ಕಸಲೆಗೆ ಮದ್ದು ಕೊಡುವುದಾದರೆ
ಮದ್ದು ಚುಚ್ಚುಮದ್ದು
ಕೊಡುವ ವೈದ್ಯರು ಏಕೆ ಬೇಕಿತ್ತು
ಏನನ್ನು ಕೊಡದ ನೀಡದ
ಪರಿಹಾರಿಸದ ಕಲ್ಲನ್ನು ದೇವರೆಂದು
ಪೂಜಿಸುವುದು ಏತಕೆ
ಆರಾಧಿಸುವುದು ಏತಕೆ ಮೂಢರೇ

- ರಾಜು ಹಾಸನ

17 Dec 2020, 11:04 pm

ಲೇಖನಿ

ಮನುವಾದಿಗಳ
ಆಯುಧ ಕತ್ತಿ ಕೊಡ್ಲಿ
ದೊಣ್ಣೆಯಾದರೇ
ನನ್ನ ಆಯುಧ
ಒಂದೇ ಒಂದೇ
ಬಾಬಾ ಸಾಹೇಬರು
ಕೊಟ್ಟ ಓದು ಬರಹ
ಲೇಖನಿ ಲೇಖನಿ

ಮಾನುವಾದಿಗಳ
ಏಟು ಮೈಮೇಲಿನ
ಗಾಯ ಬಾಸುಂಡೆ
ಕ್ಷಣಿಕವಾದರೂ
ನಾ ಬರೆದ ಲೇಖನಿ
ಮನುವಾದಿಗಳ ಜೀವಕ್ಕೆ
ಉರುಳಗುವುದು
ಜೀವನ ಪರಿಯಂತಾ
*******ರಾಜು ಹಾಸನ*******

- ರಾಜು ಹಾಸನ

17 Dec 2020, 02:29 pm

ನಿಜಾಂಶ

ಸಂಸಾರದ ಗಾಳಿ
ಗಂಧವೇ ತಿಳಿಯದ
ಬಡತನದ ಕಷ್ಟ ಅರಿಯದ
ರೈತರ ಗೋಳು ಕೇಳದ
ಸಮಾಜಕ್ಕೆ ಉತ್ತಮ
ಸಂದೇಶ ಕೊಡುಗೆ ಕೊಡದ
ದ್ವೇಷ ಅಸೂಯೆಯ
ಬೇಧ ಭಾವದ ಬೆಂಕಿ ಹಚ್ಚಿ
ಸಮಾಜವನ್ನೇ ಕಿತ್ತು
ತಿನ್ನುವ ಗುಲಾಮರು
ತಮ್ಮ ತಮ್ಮ ಕಳ್ಳ
ಖಜಾನೆಯ ತುಂಬಿಸಿಕೊಂಡು
ತಮ್ಮ ತಮ್ಮವರ ಏಳಿಗೆಗಾಗಿ
ಪರರ ಅಪರಾಧಿ ಮಾಡುವ
ರಣ ಹದ್ದು ನಾಲಾಯಕ್
ಸ್ವಾರ್ಥದ ಜನ ನಾಯಕರು
ದೇಶದ ಜನರ ಕಷ್ಟ ಸುಖ
ನೋವು ನಲಿವು ಏಳು
ಬೀಳು ತಿಳಿಯಲು ಸಾಧ್ಯವೇ
ಎಲ್ಲಾ ಜನ ಸಮುದಾಯದ
ಏಳಿಗೆ ಬಯಸುವರೇ
ಸಹಿಸಿ ಬಾಳುವರೇ.....?
********ರಾಜು ಹಾಸನ*********

- ರಾಜು ಹಾಸನ

16 Dec 2020, 11:47 pm