ಮನುವಾದಿಗಳೆ
ಕೇಳಿರಿ ಕೇಳಿರಿ
ಆರ್ಥಿಕ ರಾಜಕೀಯ
ಸಾಮಾಜಿಕ ಧಾರ್ಮಿಕ
ನ್ಯಾಯ ನೀತಿ
ನಿಯಮ ಬಡವ ಬಲ್ಲಿದ
ಸ್ತ್ರೀ ಶೋಷಿತರ ಮಕ್ಕಳ
ಹಕ್ಕುಗಳಿಗಾಗಿ ರಕ್ಷಣೆಗಾಗಿ
ಸಮಾನತೆಗಾಗಿ
ತಮ್ಮ ಜೀವನವನ್ನೇ
ಮುಡಿಪಾಗಿಟ್ಟ
ಏಕೈಕ ವ್ಯಕ್ತಿ ಬಾಬಾ ಸಾಹೇಬ್
ಭೀಮ್ ರಾವ್ ರವರನ್ನು
ಬಿಟ್ಟು ಇಡೀ ಜಗತ್ತಿನಲ್ಲಿ
ಮತ್ತೊಬ್ಬರು ಇದ್ದರೆ ತಿಳಿಸಿ
ಇಂದೆ ಈ ಕ್ಷಣವೇ ನಾ ಶರಣಾಗುವೇ
*********ರಾಜು ಹಾಸನ*********
ಜಾತಿ ಧರ್ಮದಲ್ಲಿ
ನೀ ಮೇಲಾದರೂ
ನಾ ಕೀಳದರು
ನೀ ತಿನ್ನಬೇಕು
ನಾ ದುಡಿದು
ಬೆಳೆದು ಕೊಟ್ಟ ಅನ್ನ
ಇಲ್ಲದಿದ್ದರೆ ನೀ
ಹಸಿವಿನಿಂದ
ಬಾಳಲಿ ಬಾಳಲಿ
ನರಳಿ ನರಳಿ
ಸಾಯುವುದು
ಖಚಿತ ನಿಶ್ಚಿತ
*******ರಾಜು ಹಾಸನ*******
ನಾ ಹೆಚ್ಚು ನಾ ಹೆಚ್ಚು
ನಾ ಮೇಲು ಮೇಲೆಂದು
ಗುದ್ದಾಡಿ ಕಿತ್ತಾಡಿ
ಕಚ್ಚಾಡಿ ಹೊಡೆದಾಡುವ
ಜಾತಿ ಧರ್ಮದ
ಮನುವಾದಿಗಳೇ
ಕೇಳಿರಿ ಕೇಳಿರಿ
ನಿವು ಏನೇ ಎಷ್ಟೇ
ಅರುಚಡಿ ಕಿರುಚಾಡಿ
ಕೂಗಾಡಿ ಪರದಾಡಿ
ಪರರ ಕೈ ಕಾಲಿಗೆ ಬಿದ್ದು
ತಿಪ್ಪರಲಾಗ ಹೊಡೆದು
ಮುಗಿಲೆತ್ತರಕ್ಕೆ ಬೆಳೆದು
ದೊಡ್ಡವರಾದರು
ವಿಶ್ವವೇ ಮೆಚ್ಚಿ ಒಪ್ಪಿ
ಅಪ್ಪಿ ಕೊಂಡಾಡಿದ
ಜಗ ಮೆಚ್ಚಿದ ಮಗ
ಬಂಗಾರದ ಮನುಷ್ಯ
ಬಾಬಾ ಸಾಹೇಬರ
ಕಾಲ ಧೂಳಿಗು ಸಮವಿಲ್ಲಾ
ಮತಾಂಧ ಮೂಢ
ಮನುವಾದಿಗಳೆ
ತಗ್ಗಿಸಬೇಕು ತಲೆ
ಬಾಬಾಸಾಹೇಬರ ಪಾದಕ್ಕೆ
*********ರಾಜು ಹಾಸನ*********
ದೇವರನ್ನ ಧಿಕ್ಕರಿಸಿ
ಬಾಬಾ ಸಾಹೇಬರನ್ನ
ಆರಾಧಿಸಿ ಪೂಜಿಸಿ
ಪುಂಗಿ ಪುರಾಣ
ಗ್ರಂಥ ಬೇಡ
ಸಂವಿಧಾನ ಗ್ರಂಥ
ಒಂದೇ ಸಾಕು
ಸಂವಿಧಾನ ಬೆಳೆಸಿ
ಜನರನ್ನ ಉಳಿಸಿ
ಜಾತಿ ಧರ್ಮವ ಕೊಂದು
ಜನರನ್ನ ರಕ್ಷಿಸಿ
ಮೂಢ ನಂಬಿಕೆಯ ಒದ್ದು
ನ್ಯಾಯ ನೀತಿಯ
ಒಪ್ಪಿ ಅಪ್ಪಿಕೊ
ಜಾತಿ ಧರ್ಮವ
ದ್ವೇಷಿಸು ಶಿಕ್ಷಿಸು
ಜನರ ಜನರನ್ನ
ಗೌರವಿಸು ಪ್ರೀತಿಸು
ಅಂಧ ಭಕ್ತಿ ಕಡೆಗಣಿಸಿ
ಮಾನವ ಭಕ್ತಿ ಪರಿಗಣಿಸಿ
ಆಚಾರ ತಿರಸ್ಕರಿಸಿ
ವಿಚಾರ ಸ್ವೀಕರಿಸಿ
ಮೇಲು ಕೀಳು ಬೇಡ
ಜಾತಿ ಭೇದ ಬೇಡ
ಎಲ್ಲಾರು ಒಂದೇ
ಎಂದು ಬದುಕಿ ಬಾಳಿ
ದೇಶ ಭಕ್ತಿ
ದೇಶ ಭಕ್ತಿ
ಜನರ ಜನರ
ಹೋಡೆದಾಳುವ
ದ್ವೇಷ ಭಕ್ತಿ
ದೇಶವನ್ನೇ ಕೊಳ್ಳೆ
ಹೊಡೆಯುವ
ಕಳ್ಳ ಖದೀಮರ
ಅಂಧ ಭಕ್ತಿ
ಜನರ ಜನರ
ನಡುವೇ
ಜಾತಿ ಧರ್ಮದ
ಬೆಂಕಿ ಹಚ್ಚಿ
ತಮ್ಮ ತಮ್ಮ ಬೆಳೆ
ಬೇಯಿಸಿಕೊಳ್ಳುವ
ಜನ ನಾಯಕರ
ಬೂಟು
ಬೂಟಾಟಿಕೆ ಭಕ್ತಿ
ಜಾತಿ ಧರ್ಮವ
ಎತ್ತಿ ಕಟ್ಟಿ ದೇಶವನ್ನೇ
ಅಲ್ಲೋಲ
ಕಲ್ಲೋಲ ಮಾಡಿ
ಸಮಾಜವನ್ನೆ
ಭುಗಿಲೆಬ್ಬಿಸುವ
ದುಷ್ಟ ಜನರ
ದುಷ್ಟ ಭಕ್ತಿ
ಕಷ್ಟವೇ ಇರಲಿ
ಸುಖವೇ ಇರಲಿ
ಹಸಿವೇ ಇರಲಿ
ಬಡತನವೇ ಇರಲಿ
ಗುರಿ ಮುಟ್ಟುವ
ಛಲ ನಿನ್ನಲ್ಲಿರಲಿ
ಯಾರೇ ಏನೇ
ಅಡ್ಡಡ್ಡ ಉದ್ದುದ್ದ
ಅಡ್ಡ ಬಂದರು
ಮುನ್ನುಗ್ಗಿ ನಡೆ
ಬದಿಲಿಸಬೇಡ
ನಿನ್ನ ನಡೆ ನುಡಿ
ಗುರಿ ಮುಟ್ಟುವ
ದಾರಿ ಒಂದೇ ಆಗಿರಲಿ
******ರಾಜು ಹಾಸನ******
ತಂದೆ ತಾಯಿಗೆ
ಅನ್ನ ಕೊಡದ ಮಕ್ಕಳು
ಜನರ ಕಷ್ಟ
ಆಲಿಸಿದ ನಾಯಕರು
ಇದ್ದರೂ ಒಂದೇ
ಮಣ್ಣಲ್ಲಿ ಮಣ್ಣಾದರು ಒಂದೇ
ಇದ್ದಷ್ಟು ದಿನ ಇರಬೇಕು
ಎಲ್ಲಾರು ಒಂದೇ ಎಂದು
ಇಲ್ಲದಿದ್ದರೆ ಸತ್ತು
ಸಮಾಧಿಯಾಗಬೇಕು
ಮಸಣದ ಹೆಣವಾಗಿ
ಹಾಗೆ ಸುಮ್ಮನೆ
ಜಾತಿ ಧರ್ಮದ
ನಾಲ್ಕು ಗೋಡೆಗಳ
ಮಧ್ಯೆ ನಿಂತು
ನೀ ನಿನ್ನ ಸಮಾಜ
ಜನ ಸಮುದಾಯದ
ನಾಲ್ಕೇ ನಾಲ್ಕು ಜನರಿಗೆ
ನೀ ನಾಯಕನಾದರು
ಇಡೀ ದೇಶ ವಿಶ್ವಕ್ಕೆ
ಎಲ್ಲಾ ಸಮಾಜದ
ಜನ ಸಮುದಾಯದ
ನಾಯಕ ಮಹಾನಾಯಕ
ನನ್ನ ಒಡೆಯ ಭೀಮರಾವ್