Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಶರಣಾಗುವೇ

ಮನುವಾದಿಗಳೆ
ಕೇಳಿರಿ ಕೇಳಿರಿ
ಆರ್ಥಿಕ ರಾಜಕೀಯ
ಸಾಮಾಜಿಕ ಧಾರ್ಮಿಕ
ನ್ಯಾಯ ನೀತಿ
ನಿಯಮ ಬಡವ ಬಲ್ಲಿದ
ಸ್ತ್ರೀ ಶೋಷಿತರ ಮಕ್ಕಳ
ಹಕ್ಕುಗಳಿಗಾಗಿ ರಕ್ಷಣೆಗಾಗಿ
ಸಮಾನತೆಗಾಗಿ
ತಮ್ಮ ಜೀವನವನ್ನೇ
ಮುಡಿಪಾಗಿಟ್ಟ
ಏಕೈಕ ವ್ಯಕ್ತಿ ಬಾಬಾ ಸಾಹೇಬ್
ಭೀಮ್ ರಾವ್ ರವರನ್ನು
ಬಿಟ್ಟು ಇಡೀ ಜಗತ್ತಿನಲ್ಲಿ
ಮತ್ತೊಬ್ಬರು ಇದ್ದರೆ ತಿಳಿಸಿ
ಇಂದೆ ಈ ಕ್ಷಣವೇ ನಾ ಶರಣಾಗುವೇ
*********ರಾಜು ಹಾಸನ*********

- ರಾಜು ಹಾಸನ

16 Dec 2020, 02:30 pm

ಖಚಿತ

ಜಾತಿ ಧರ್ಮದಲ್ಲಿ
ನೀ ಮೇಲಾದರೂ
ನಾ ಕೀಳದರು
ನೀ ತಿನ್ನಬೇಕು
ನಾ ದುಡಿದು
ಬೆಳೆದು ಕೊಟ್ಟ ಅನ್ನ
ಇಲ್ಲದಿದ್ದರೆ ನೀ
ಹಸಿವಿನಿಂದ
ಬಾಳಲಿ ಬಾಳಲಿ
ನರಳಿ ನರಳಿ
ಸಾಯುವುದು
ಖಚಿತ ನಿಶ್ಚಿತ
*******ರಾಜು ಹಾಸನ*******

- ರಾಜು ಹಾಸನ

15 Dec 2020, 11:45 pm

ಬಂಗಾರದ ಮನುಷ್ಯ

ನಾ ಹೆಚ್ಚು ನಾ ಹೆಚ್ಚು
ನಾ ಮೇಲು ಮೇಲೆಂದು
ಗುದ್ದಾಡಿ ಕಿತ್ತಾಡಿ
ಕಚ್ಚಾಡಿ ಹೊಡೆದಾಡುವ
ಜಾತಿ ಧರ್ಮದ
ಮನುವಾದಿಗಳೇ
ಕೇಳಿರಿ ಕೇಳಿರಿ
ನಿವು ಏನೇ ಎಷ್ಟೇ
ಅರುಚಡಿ ಕಿರುಚಾಡಿ
ಕೂಗಾಡಿ ಪರದಾಡಿ
ಪರರ ಕೈ ಕಾಲಿಗೆ ಬಿದ್ದು
ತಿಪ್ಪರಲಾಗ ಹೊಡೆದು
ಮುಗಿಲೆತ್ತರಕ್ಕೆ ಬೆಳೆದು
ದೊಡ್ಡವರಾದರು
ವಿಶ್ವವೇ ಮೆಚ್ಚಿ ಒಪ್ಪಿ
ಅಪ್ಪಿ ಕೊಂಡಾಡಿದ
ಜಗ ಮೆಚ್ಚಿದ ಮಗ
ಬಂಗಾರದ ಮನುಷ್ಯ
ಬಾಬಾ ಸಾಹೇಬರ
ಕಾಲ ಧೂಳಿಗು ಸಮವಿಲ್ಲಾ
ಮತಾಂಧ ಮೂಢ
ಮನುವಾದಿಗಳೆ
ತಗ್ಗಿಸಬೇಕು ತಲೆ
ಬಾಬಾಸಾಹೇಬರ ಪಾದಕ್ಕೆ
*********ರಾಜು ಹಾಸನ*********

- ರಾಜು ಹಾಸನ

15 Dec 2020, 11:34 pm

ಬೇಡ ಬೇಕು

ದೇವರನ್ನ ಧಿಕ್ಕರಿಸಿ
ಬಾಬಾ ಸಾಹೇಬರನ್ನ
ಆರಾಧಿಸಿ ಪೂಜಿಸಿ
ಪುಂಗಿ ಪುರಾಣ
ಗ್ರಂಥ ಬೇಡ
ಸಂವಿಧಾನ ಗ್ರಂಥ
ಒಂದೇ ಸಾಕು
ಸಂವಿಧಾನ ಬೆಳೆಸಿ
ಜನರನ್ನ ಉಳಿಸಿ
ಜಾತಿ ಧರ್ಮವ ಕೊಂದು
ಜನರನ್ನ ರಕ್ಷಿಸಿ
ಮೂಢ ನಂಬಿಕೆಯ ಒದ್ದು
ನ್ಯಾಯ ನೀತಿಯ
ಒಪ್ಪಿ ಅಪ್ಪಿಕೊ

ಜಾತಿ ಧರ್ಮವ
ದ್ವೇಷಿಸು ಶಿಕ್ಷಿಸು
ಜನರ ಜನರನ್ನ
ಗೌರವಿಸು ಪ್ರೀತಿಸು
ಅಂಧ ಭಕ್ತಿ ಕಡೆಗಣಿಸಿ
ಮಾನವ ಭಕ್ತಿ ಪರಿಗಣಿಸಿ
ಆಚಾರ ತಿರಸ್ಕರಿಸಿ
ವಿಚಾರ ಸ್ವೀಕರಿಸಿ
ಮೇಲು ಕೀಳು ಬೇಡ
ಜಾತಿ ಭೇದ ಬೇಡ
ಎಲ್ಲಾರು ಒಂದೇ
ಎಂದು ಬದುಕಿ ಬಾಳಿ

- ರಾಜು ಹಾಸನ

15 Dec 2020, 09:33 am

ದೇಶ ಭಕ್ತಿ

ದೇಶ ಭಕ್ತಿ
ದೇಶ ಭಕ್ತಿ
ಜನರ ಜನರ
ಹೋಡೆದಾಳುವ
ದ್ವೇಷ ಭಕ್ತಿ
ದೇಶವನ್ನೇ ಕೊಳ್ಳೆ
ಹೊಡೆಯುವ
ಕಳ್ಳ ಖದೀಮರ
ಅಂಧ ಭಕ್ತಿ
ಜನರ ಜನರ
ನಡುವೇ
ಜಾತಿ ಧರ್ಮದ
ಬೆಂಕಿ ಹಚ್ಚಿ
ತಮ್ಮ ತಮ್ಮ ಬೆಳೆ
ಬೇಯಿಸಿಕೊಳ್ಳುವ
ಜನ ನಾಯಕರ
ಬೂಟು
ಬೂಟಾಟಿಕೆ ಭಕ್ತಿ
ಜಾತಿ ಧರ್ಮವ
ಎತ್ತಿ ಕಟ್ಟಿ ದೇಶವನ್ನೇ
ಅಲ್ಲೋಲ
ಕಲ್ಲೋಲ ಮಾಡಿ
ಸಮಾಜವನ್ನೆ
ಭುಗಿಲೆಬ್ಬಿಸುವ
ದುಷ್ಟ ಜನರ
ದುಷ್ಟ ಭಕ್ತಿ

- ರಾಜು ಹಾಸನ

14 Dec 2020, 09:54 pm

ಹಳ್ಳಿಚೆಲುವೆ

ಮುಂಜಾನೆ ಮಬ್ಬಿನಲಿ
ಇಬ್ಬನಿಯ ರತ್ನಗಂಬಳಿಯಾಸಿನಲಿ
ಹಾಲ್ಗನ್ನೆಯ ನಿಷ್ಕಲ್ಮಶೆ ಮುಗುಳ್ನಗುತ
ಬುಟ್ಟಿಯ ತಾನೊತ್ತು ನಡೆದುಬರುತ್ತಿರಲು
ಮನಸೋತ ಕಬ್ಮೇಘನು
ನಿದ್ರಾರತಿಯ ಸೆರಗಿನಿಂದ ಕೆಮ್ಮೊಗನ ಹೊರದೂಡಿಹನು
ಹಳ್ಳಿ ಹೂವಿಗೆ
ದಾರಿಬೆಳಕಾಗಲು
ಕಬ್ಮೇಘನು ಸ್ನೇಹ ಅಣತಿಯನ್ನ ಶಿರಸಾವಹಿಸಿ
ಗಿರಿ ಶಿಖರಗಳನ್ನೇರಿ
ಹೊನ್ಬೆಳಕು ಚಲ್ಲುತಿಹನು ನೇಸರನು (ಕೆಮ್ಮೊಗ) ಹಳ್ಳಿ ಮಿಂಚುಳ್ಳಿ ಯ ಬುಟ್ಟಯನ್ನೇರಿ
ದಿಗಂತಗಳಾಚೆಗುಾ ಮೀರಿ
ರೈತನ ಬದುಕನ್ನ ಅಸನಾಗಿಸಲು

- HarishKumarm

14 Dec 2020, 07:13 pm

ಕುತಂತ್ರ

ಎಚ್ಚರ ಎಚ್ಚರ
‌‌ ಎಚ್ಚರವಿರಲಿ
ಮೈ ಮರೆತು
ಮಲಗಬೇಡಿ
ಕುರಬೇಡಿ
ಮನುವಾದಿಗಳ
ಷಡ್ಯಂತ್ರವಿದೆ
ಜಾತಿ ಧರ್ಮದ
ಕುತಂತ್ರವಿದೆ
ದೀನ ದಲಿತರ
ಬಗ್ಗುಬಡಿಯುವ
ಹುನ್ನಾರವಿದೆ

ಏಳಿರಿ ಏಳಿರಿ
ಎದ್ದೇಳಿರಿ
ನಿಲ್ಲಿರಿ ನಿಲ್ಲಿರಿ
ಮೈ ಕೊಡವಿ
ಎದ್ದು ನಿಲ್ಲಿರಿ
ಹೆದರಬೇಡಿ
ಭಯಪಡಬೇಡಿ
ನಿಟ್ಟುಸಿರು ಬಿಡಬೇಡಿ
ಮನುವಾದಿಗಳ
ದಂಡು ದಂಡು
ದಂಡು ದಾಳಿಯೇ
ಬಂದರು ಬಗ್ಗಬೆಡಿ
ಜಗ್ಗಬೇಡಿ ಕುಗ್ಗಬೆಡಿ
ಚಿಂತಿಸಬೇಡ

ನಿನ್ನೊಂದಿಗೆ
ನಿಮ್ಮೊಂದಿಗೆ
ಬಾಬಾ ಸಾಹೇಬರ
ಬಲ ಛಲವಿದೆ
ಸಂವಿಧಾನದ
ಬೆಳಕಿದೆ
ಆರ್ಭಟಿಸು
ಆರ್ಭಟಿಸಿ
ಘರ್ಜಸಿ
ಮುನ್ನುಗ್ಗಿ ನಡೆ
ಧೂಳಿಪಟವಾಗುವುದು
ಮನುವಾದಿಗಳ ಪಡೆ

- ರಾಜು ಹಾಸನ

14 Dec 2020, 02:24 pm

ಸಾಧನೆ

ತೆಗಳಿಕೆಗೆ
ಒಳಗಾಗಿ
ತಗ್ಗಿ ಕುಗ್ಗಿ
ಕುರಬೇಡ
ನಡೆ ನಡೆ
ಸಾಧನೆಯ
ಮೆಟ್ಟಿ ನಡೆ
ಓಡೋಡಿ
ಬರುವುದು
ಹೊಗಳಿಕೆಯ
ಹೂವು ಮಾಲೆ
ನಿನ್ನ ಹಿಂದೆ ಹಿಂದೆ
****ರಾಜು ಹಾಸನ****

- ರಾಜು ಹಾಸನ

14 Dec 2020, 12:07 pm

ದಾರಿ

ಕಷ್ಟವೇ ಇರಲಿ
ಸುಖವೇ ಇರಲಿ
ಹಸಿವೇ ಇರಲಿ
ಬಡತನವೇ ಇರಲಿ
ಗುರಿ ಮುಟ್ಟುವ
ಛಲ ನಿನ್ನಲ್ಲಿರಲಿ
ಯಾರೇ ಏನೇ
ಅಡ್ಡಡ್ಡ ಉದ್ದುದ್ದ
ಅಡ್ಡ ಬಂದರು
ಮುನ್ನುಗ್ಗಿ ನಡೆ
ಬದಿಲಿಸಬೇಡ
ನಿನ್ನ ನಡೆ ನುಡಿ
ಗುರಿ ಮುಟ್ಟುವ
ದಾರಿ ಒಂದೇ ಆಗಿರಲಿ
******ರಾಜು ಹಾಸನ******

- ರಾಜು ಹಾಸನ

14 Dec 2020, 08:48 am

ನನ್ನ ಒಡೆಯ

ತಂದೆ ತಾಯಿಗೆ
ಅನ್ನ ಕೊಡದ ಮಕ್ಕಳು
ಜನರ ಕಷ್ಟ
ಆಲಿಸಿದ ನಾಯಕರು
ಇದ್ದರೂ ಒಂದೇ
ಮಣ್ಣಲ್ಲಿ ಮಣ್ಣಾದರು ಒಂದೇ

ಇದ್ದಷ್ಟು ದಿನ ಇರಬೇಕು
ಎಲ್ಲಾರು ಒಂದೇ ಎಂದು
ಇಲ್ಲದಿದ್ದರೆ ಸತ್ತು
ಸಮಾಧಿಯಾಗಬೇಕು
ಮಸಣದ ಹೆಣವಾಗಿ
ಹಾಗೆ ಸುಮ್ಮನೆ

ಜಾತಿ ಧರ್ಮದ
ನಾಲ್ಕು ಗೋಡೆಗಳ
ಮಧ್ಯೆ ನಿಂತು
ನೀ ನಿನ್ನ ಸಮಾಜ
ಜನ ಸಮುದಾಯದ
ನಾಲ್ಕೇ ನಾಲ್ಕು ಜನರಿಗೆ
ನೀ ನಾಯಕನಾದರು
ಇಡೀ ದೇಶ ವಿಶ್ವಕ್ಕೆ
ಎಲ್ಲಾ ಸಮಾಜದ
ಜನ ಸಮುದಾಯದ
ನಾಯಕ ಮಹಾನಾಯಕ
ನನ್ನ ಒಡೆಯ ಭೀಮರಾವ್

- ರಾಜು ಹಾಸನ

13 Dec 2020, 11:51 pm