ಹುಟ್ಟಿದಾಗ ಬರುವುದು ಜಾತಕ
ಸತ್ತಾಗ ಬರುವುದು ಸೂತಕ
ಹುಟ್ಟು ಸಾವಿನ ಮಧ್ಯೆ
ನೆಡೆಯುವುದು ಭರ್ಜರಿ ನಾಟಕ
ಹಸಿದವರಿಗೆ ಬಡತನದ ನರಕ
ಕೊಬ್ಬಿದವರಿಗೆ ಜೀವನ ಸಾರ್ಥಕ
ದುಡಿಮೆಯೇ ನಮ್ಮ ಕಾಯಕ
ಇಷ್ಟೆ ಮನುಜ ಜನ್ಮದ ಯಾಚಕ
ಬಣ್ಣ ಹಚ್ಚದೆ
ನೃತ್ಯ ನಾಟಕ ಮಾಡುವ
ನವರಂಗಿ ಆಟವಾಡುವ
ಮನುವಾದಿಗಳಿಗೆ
ಕಲಿಸಬೇಕಾಗಿದೆ
ಜೀವನದ ಪಾಠ ಪಾಠ
ಬಡವ ಶೋಷಿತರ
ತಂಟ್ಟೆಗೆ ಬಂದರೆ
ಕೈ ಕಾಲು ಮುರಿದು
ಹೋಗೆ ಆಡಿಸಿ
ಚಟ್ಟ ಪಟ್ಟ ಕಟ್ಟಿ
ತಮ್ಮಟೆ ಬರಿಸುವೆವು
ಮನುವಾದಿಗಳ
ಹೆಣದ ಹಿಂದೆ ಮುಂದೆ
ಸುಮ್ಮನಿದ್ದಾರೆ ಸರಿ ಸರಿ
ಕೆಣಕಿದರೆ ರುಂಡ ಮುಂಡ
ಬೀಳುವುದು ಗ್ಯಾರಂಟಿ
ನೊಂದ ಜನರ ಕಣ್ಣಲ್ಲಿ
ಕಣ್ಣೀರು ವರಿಸದಿದ್ದರು
ತರಿಸಬೇಡಿ ತರಿಸಿದರೆ
ಹರಿಯುವುದು ಮನುವಾದಿಗಳ
ರಕ್ತದ ಹೊಳೆ ಹೊಳೆ ಹೊಳೆ
ಕೆರಳಿಸಬೇಡಿ ಕೆರಳಿಸಬೇಡಿ
ಮಲಗಿದ ಮಾದ ಗಜಗಳ
ನೊಂದ ಬಡ ಜನರ
ಕೆರಳಿಸಿ ದಿಕ್ಕಾಪಾಲಾಗಿ
ಹಳ್ಳ ಕೊಳ್ಳ ಬಿದ್ದು
ಓಡೋಡಿ ಬಚ್ಚಿಕೊಂಡರು
ಮರೆಯಬೇಡಿ ಬರೆದು
ಇಟ್ಟುಕೊಳ್ಳಿ ಮನುವದಿಗಳೆ
ನಿಮ್ಮ ಹಣೆ ಎದೆಯ ಮೇಲೆ
ಕೆರಳಿದ ಮಾದ ಗಜಗಳು
ನೊಂದ ಬಡ ಜನರು
ಮುನಿದು ಕೈ ಕಾಲಿಟ್ಟರೆ
ಅಪ್ಪಚ್ಚಿ ಆಗಿ ಹೋಗುವಿರಿ
ತಾಳಾ ತಾಳಾ ಪಾತಾಳ ಲೋಕ
ದೊರೆ ದೊರೆ
ಊರು ಕೇರಿ
ರಾಜ್ಯ ದೇಶ
ಸರ್ಕಾರ ಆಳುವ
ಗಣಿ ಧಣಿ
ಚಿಕ್ಕ ದೊಡ್ಡ
ದೊರೆಯಾದರೆ
ದೊರೆ ದೊರೆ
ದೊರೆಗಳನ್ನಳುವಾ
ರಾಜ ಮಹಾರಾಜ
ದೊರೆ ದೊರೆ
ಬಾಬಾ ಸಾಹೇಬ್
ಭೀಮ್ ರಾವ್
ನನ್ನ ದೊರೆ ನನ್ನ ದೊರೆ
*******ರಾಜು ಹಾಸನ*******
ಹೆತ್ತವರನ್ನು
ಬಿಟ್ಟು ಬಂದ ಮೇಲೆ
ಮತ್ತೆನು ಬಿಡುವುದು ಬಾಕಿಯಿದೆ
ಆಗಿದ್ದು ಆಯ್ತು ಎದ್ದೆಳು ಕಂದ
ಹೊತ್ತಾಯಿತು ಹೋಗು ಮನೆಗೆ
ಮನೆಯ ಕಡೆಯಿಂದ ಬಂದಿದೆ
ಒಂದು ಕರೆಯ ಕೂಗು
ಅಪ್ಪ ಅವ್ವನ ಬೆಚ್ಚನೆ ಪ್ರೀತಿ
ಇಲ್ಲಿ ಸಿಗದು ನಿಂಗಿನ್ನು
ನಿನಗಿದು ಬೆಕಿತ್ತಾ ಕಂದ
ವಾಪಸ್ಸು ಹೊಂಟೊಗು ಮನೆಗೆ
ಬಟ್ಟೆ ತಕೋ ಗಂಟ್ಟು ಕಟ್ಟು
ದಾರಿ ನೋಡಿ ಮನೆಗೆ ನಡಿ
ಎಲ್ಲಿಗೆ ಹೋದ್ರು ಇದ್ದು ಸತ್ತಂಗೆ
ಮನೆಯಲ್ಲೇ ನಿನ್ನ ಉಸಿರಿದೆ
ಹುಟ್ಟಿ ಬೆಳೆದು ಆಡಿ ಬಂದ
ಕಟ್ಟಿದ ಮನೆಯಿದೆ
ಕಿತ್ತೋದ ಕನಸಿಗೆ ಹಳದ್ ಆಸೆಗೆ
ಪ್ರೀತಿಗೆ ಬಿದ್ದು ಬೀದಿಗೆ ಬಂದೆ
ಊರು ಬಿಟ್ಟು ಬಂದು
ತಿಪ್ಪೆ ಗುಂಡಿಯ ಮೇಲಿನ
ತೆಂಗಿನ ಮರದ ಎಳೆನೀರು ನಿನಾದೆ
ಮನೆಗೆ ತಂಗಿ ಬರುತ್ತಾಳೋ
ಮಗನಿಗೆ ಹೆಸರು ಇಟ್ಟಳೋ
ಈ ಸಲ ಬಾರಿ ಮಳೆಯಂತೆ
ಅತ್ತೆಯ ಮಗನ ಮದ್ವೆಯಂತೆ
ಮಾವ ಬಿಲ್ಡಿಂಗ್ ಕಟ್ನಂತೆ
ಚಿಕ್ಕ ತಾತಂಗೆ ಉಸರಿಲ್ವಿಂತೆ
ತಂಗಿಯ ಮಗಳು ಕೆಳ್ತಳೋ
ಆಗಾಗ ನಿನಗೆ ಬೈತಳೋ
ನಿನಗೂ ಸಂಸಾರ ಇದೆ
ವಾಪಾಸು ಹೊಂಟೊಗು ಮನೆಗೆ
ಅವರಿವರ ನೆನಪು ಕಣ್ಣ್ ಕಟ್ಟಿದಂಗೆ
ಕನಸು ಕಾಣಿಸಿಕೊಳ್ಳೋದ್ಯಾಕೆ
ಅಪ್ಪ ಅವ್ವ ಕನಸಿಗೆ ಬಂದು
ಕಣ್ಣೊರೆಸಿ ಅಪ್ಪಿ ಕರೆದು ಬಾ
ಅಂದಂಗೆ ಆಗೋದ್ಯಾಕೆ
ಮಾತು ಕೊಟ್ಟು ಕೆಟ್ಟವನು
ಎಲ್ಲಿಗೆ ಹೋದ್ರು ನಿಮ್ಮದೆ ಧ್ಯಾನ
ಬಂದೆ ಬರ್ತೀನಿ ಊರಿಗೆ
ಬಂದು ಸೇರುತ್ತಿನಿ ಮನೆಗೆ
ಚಡ್ಡಿ ದೋಸ್ತ್ ರೆಲ್ಲ ಕಾಯ್ತಾವರೊ
ಅಕ್ಕ ಪಕ್ಕದ ಜನ ಕೆಳತ್ತಾವರೊ
ಕಲಿಸಿದ ಮಿಸು ಸ್ಕೋಲ್ ಬಿಟ್ರು
ತಂಗಿಯ ಗಂಡ ಸರಿಯಾದ
ಹಾಳೆ ಮನೆ ಮುರ್ದೋಗಿದೆ
ಅವ್ವಂಗೆ ಕಾಯಿಲೆ ಮೊನ್ನೆ ಇಂದ
ಅಪ್ಪಂಗೆ ಕೆಲಸ ಸಾಕಗಿದೆ
ತಂಗಿಗೆ ನಿನ್ದೆ ಯೊಚ್ನೆ
ಅದಗೆಟ್ಟಿದೆ ಬದುಕು
ವಾಪಸ್ಸು ಹೊಂಟೊಗು ಮನೆಗೆ
ಹಾರುವೆ ಹಾರುವೆ
ಮುಗಿಲೆತ್ತರಕ್ಕೆ ಹಾರಿ
ಗುರಿ ಮುಟ್ಟುವೇ
ಒಂದಲ್ಲ ಒಂದು ದಿನ
ಸತ್ತು ಸಮಾಧಿ
ಮಣ್ಣಾಗುವ ಮುನ್ನ
ಕಿತ್ತು ತಿನ್ನುವ
ಕಡು ಬಡತನವಿದ್ದರೂ
ಕಾಸು ಇಲ್ಲದ
ಖಾಲಿ ಕಿಸೆ ಆದರೂ
ಛಲದ ಬಲ ಉಂಟು
ಜ್ಞಾನದ ಬೆಳಕೂಂಟು
ಸ್ವಾಭಿಮಾನದ
ಬದುಕೂಂಟು
ಓದು ಬರಹದ
ಅರಿವು ಉಂಟು
ಸಾಧನೆಯ ಸಾಧಿಸು
ಸಾವಲು ಉಂಟು
ಕನಸು ನನಸಿನಾ
ರೆಕ್ಕೆ ಪುಕ್ಕ ಕಟ್ಟಿ
ಹಾರುವ ಹಾರುವೇ
ಆಗಸಕ್ಕೆ ಹಾರುವ
ಮನಸ್ಸು ಉಂಟು
ಬೆಂಕಿ ಬಿರುಗಾಳಿ ಬಂದರು
ಎದುರಿಸಿ ದಡ ಸೇರುವ
ಭರವಸೆ ಉಂಟು
ಗುರಿ ಮುಟ್ಟುವ
ನಂಬಿಕೆ ಉಂಟು
*********ರಾಜು ಹಾಸನ*********