ರೈತ ರೈತ ರೈತರು
ದೇಶಕ್ಕೆ ಅನ್ನ
ಕೊಟ್ಟ ದೇವರು
ಎಲ್ಲಾ ಜನರ
ಹಸಿವು ನೀಗಿಸಿದ
ಅನ್ನದಾತರು
ಚಳಿ ಗಾಳಿ ಮಳೆ
ಬಿಸಿಲು ಬೆಂಕಿ
ಬರಗಾಲ ಬಂದರು
ಅಂಜದೆ ಅಳುಕದೆ
ಕುಗ್ಗದೆ ಜಗ್ಗದೆ
ಜಾತಿ ಧರ್ಮದ
ಭಿನ್ನ ಬೇಧ
ಭಾವವಿಲ್ಲದೆ
ಯಾರ ಹಂಗು
ಹೋಂಗಿಲ್ಲದೆ
ದುಡಿದು ದೇಶಕ್ಕೆ
ಅನ್ನವನಿಟ್ಟ ಒಡೆಯರು
ಬಂಗಾರದ
ಮನುಷ್ಯರು
ರೈತ ಬೆಳೆದ
ಬಗೆ ಬಗೆಯ
ಅನ್ನವ ತಿಂದು
ತಿರುಗಿ ಬೊಗಳುವ
ನಾಯಿ ನರಿಗಳು
ಹೆದರಿಕೆ ಬೆದರಿಕೆ
ಒಡ್ಡುವ ಕುನ್ನಿಗಳು
ಹಸಿದ ಹೊಟ್ಟೆಗೆ
ತಿನ್ನುವರೇ
ಮಣ್ಣು ಇಲ್ಲ
ಹಾದಿ ಬೀದಿಯಲ್ಲಿ
ಬಿದ್ದಿರುವ ಕಸವೋ
ನಿಂತು ನಿಲ್ಲದೆ
ಕುಂತು ಕುರದೆ
ಬಿಸಿಲು ಬೆಂಕಿ
ಎನ್ನದೇ ದುಡಿಯುವ
ರೈತರ ಕಷ್ಟ
ನೆರಳಲ್ಲಿ ಕುಂತು
ನಿಂತು ತಿನ್ನುವ
ಜನರಿಗೆನು ಗೊತ್ತು
ಭೂಮಿಗೆ
ಬಂದು ದುಡಿಯಲ್ಲಿ
ತಿಳಿಯುವುದು
ರೈತರ ಕಷ್ಟ
ಪ್ರಾಣಿ ಪಕ್ಷಿಗಳಿಗೆ
ಇಲ್ಲದ ಜಾತಿ ಧರ್ಮ
ನೆಲ ಜಲ ಗಾಳಿಗೆ
ಇಲ್ಲದ ಮಡಿ ಮೈಲಿಗೆ
ಜನರ ಜನರ
ನಡುವೆ ಇರುವುದಯ್ಯ
ನೂರೆಂಟು
ಜಾತಿ ಧರ್ಮದ
ಮಡಿ ಮೈಲಿಗೆಯ
ಕೊಚ್ಚೆ ಗುಂಡಿ
ಮುಟ್ಟಿದರೆ
ಮಾಡಿ ಮೈಲಿಗೆ
ಎನ್ನುವ ಜನ
ಹೊಟ್ಟೆ ತುಂಬಾ
ರಾಶಿ ರಾಶಿ ರಾಶಿ
ಮಲ ಮೂತ್ರ
ತುಂಬಿಕೊಂಡು
ಅಜಗಜಾಂತರ
ದೂರ ಸರಿದು
ನಿಲ್ಲುವರಯ್ಯಾ
ನಿಂತು ಕುಂತು
ಇಡುವರೇ
ಬಂಗಾರದ ಮೊಟ್ಟೆ
ಚಿನ್ನದ ಮೊಟ್ಟೆ
ಹೊಟ್ಟೆ ತುಂಬಾ
ಹೊಲಸು ತುಂಬಿಕೊಂಡು
ಮಡಿ ಮೈಲಿಗೆ ಎಂದು
ಮೈ ಮೇಲೆ ತಣ್ಣೀರು
ಸುರಿದು ಕೊಂಡರೆ
ಹೋಗುವುದೇ
ಹೊಟ್ಟೆ ಒಳಗಿನ
ಕಸದ ಹೊಲಸು
ಹಣ್ಣು ಕಾಯಿ
ಹೋಳಿಗೆ ತುಪ್ಪ
ಹೂವು ಕಡ್ಡಿ
ಗಂಧದ ಕಡ್ಡಿ
ಒಡವೆ ವೈಢೂರ್ಯ
ಬಂಗಾರದ ಒಡವೆ
ಕಾಸು ಗಿಸು
ಚಿಲ್ಲರೆ ನೋಟು
ಲಂಚ ಗಿಂಚ
ಮಂಚ ಇಲ್ಲದೆ
ಒಲಿಯುವುದಿಲ್ಲ
ಚಿತ್ರ ವಿಚಿತ್ರವಾದ
ಗೊಂಬೆ ದೇವರು
ಲಂಚ ಗಿಂಚ
ಮಂಚ ಕೊಟ್ಟರೆ
ಒಲಿಯುವುದೇ
ಕಳ್ಳ ದೇವರು
ಲಂಚ ದೇವರು
ಹಣ್ಣು ಕಾಯಿ ಇಲ್ಲದೆ
ದೇವರು ಒಲಿಯುವುದಿಲ್ಲ
ಚಿಲ್ಲರೆ ದಕ್ಷಿಣೆ ಇಲ್ಲಿದೆ
ಪೂಜೆ ಪುನಸ್ಕಾರವಿಲ್ಲ
ಲಂಚ ಮಂಚವಿಲ್ಲದೆ
ಅಧಿಕಾರವಿಲ್ಲ
ದೇವರು ದೇವರು
ಇದು ಎಂತಾ ಯಾವ
ಸೀಮೆಯ ದೇವರೋ
ಆರು ಮೂರು ಕಾಸಿಗೆ
ಚಳಿ ಗಾಳಿ ಮಳೆ
ಬಿಸಿಲು ಬೆಂಕಿ ಎನ್ನದೇ
ದುಡಿದು ಕೂಡಿಟ್ಟು
ಮುಚ್ಚಿಟ್ಟು ಅಡವಿಟ್ಟು
ಮಾಡುವರಯ್ಯ
ಹತ್ತಾರು ಕಾಸಿನ
ಮನೆ ಮುರುಕ
ದೇವರ ಹಬ್ಬ
ನೀ ಎಷ್ಟೇ ಏನೇ
ಜಾತ್ರೆ ಪಾತ್ರೆ
ಹಬ್ಬ ಹರಿದಿನ
ಮಾಡಿದರು
ಬರುವುದಿಲ್ಲ
ಬಂದು ಕಟ್ಟುವುದಿಲ್ಲ
ನಿನಗೊಂದು ಗುಡಿ
ನೀನೇ ದುಡಿದು
ಕಟ್ಟಬೇಕು
ಗುಡಿಯ ಮೇಲೆ ಗುಡಿ
ದೇವರಿಗೊಂದು
ದೇವರ ಗುಡಿ
ಬಿದ್ದು ಬೆಡಿದರು
ಉರುಳಿ ಹೊರಳಾಡಿ
ಜಪ ತಪ ಮಾಡಿ
ಉಪವಾಸ ಬಿದ್ದರು
ತುಂಬುವುದಿಲ್ಲ
ನಿನ್ನ ಜೇಬು ಚಡ್ಡಿ ಜೇಬು
ನೀನೇ ತುಂಬಿಸಬೇಕು
ಕೂಲಿ ನಾಲಿ ಮಾಡಿ
ದೇವರ ಮುಂದಿನ
ದೇವರ ಹುಂಡಿ
ಹೇಳಿ ಕೇಳಿ ಬಂದು
ಕೊಡುವುದಿಲ್ಲ
ಕುಡಿಯಲು ತಿನ್ನಲು
ಅನ್ನ ನೀರು ಹಣ್ಣು
ನೀನೇ ಹೋಗಿ
ಕೊಡಬೇಕು
ದೇವರಿಗೆ ಹಣ್ಣು
ಕಾಯಿ ನೀರು
ಬೆಳಗು ಬಾ
ಬೆಳಗು ಬಾ
ನನ್ನ ಮನೆ
ಮಠವಾ ತೊಳೆದು
ಹಚ್ಚು ಬಾ ದೀಪ
ಎಂದರು ಅಂದರು
ಬಂದು ಹಚ್ಚುವುದಿಲ್ಲ
ನಿನ್ನ ಮನೆಯ ದೀಪ
ನೀನೇ ಹೋಗಿ
ತೊಳೆದು ಹಚ್ಚಬೇಕು
ದೇವರ ಮನೆಯ ದೀಪ
ದೇವರು ದೇವರು
ಇದು ಯಾವ ಎಂತಾ
ಸೀಮೆಯ ದೇವರೋ
ಇಡೀ ಜಗತ್ತೇ
ತಲೆ ತಗ್ಗಿಸಿ ಬಗ್ಗಿಸಿ
ಕಂಬನಿ ಮಿಡಿದ ದಿನ
ಬಡವ ಬಲ್ಲಿದ ಸ್ತ್ರೀ
ಶೋಷಿತ ಮಕ್ಕಳು
ಕಂಗೆಟ್ಟು ದಿಕ್ಕೆಟ್ಟು
ಗೊಳಾಡಿ ಮರುಗಿ
ಕಣ್ಣೀರಿಟ್ಟ ದಿನ
ಮಾನವ ಕುಲಕ್ಕೆ
ಬರಸಿಡಿಲು ಬಡಿದು
ಕಾರ್ಮೋಡವೇ
ಆವರಿಸಿದ ದಿನ
ಮಹಾ ಸಾಗರದಂತೆ
ಜನ ಸಾಗರವೇ
ತುಂಬಿ ತುಳುಕಿ
ಉಕ್ಕಿ ಹರಿದು
ಬಂದ ದಿನ
ನಮ್ಮ ನಿಮ್ಮೆಲ್ಲರ
ಜೀವಾ ಜೀವನದ
ಜೀವನಾಡಿ ಮಿಡಿತ
ದೀನ ದಲಿತರ
ನಾಯಕ ಬಂಧು
ಮಹಾ ನಾಯಕ
ನನ್ನ ಒಡಯ
ಬಾಬಾ ಸಾಹೇಬ್ ರ
ಪರಿನಿರ್ವಾಣ ದಿನ
ಹುಟ್ಟಿ ಬೆಳೆದು ಆಟವಾಡಿ
ಕುಡಿದು ತಿಂದು ಸೇವಿಸಿ
ಸತ್ತು ಸಮಾಧಿಯಾಗುವುದು
ಒಂದೇ ನೆಲದ ಜಲ
ಗಾಳಿ ಅನ್ನವಾದರು
ಭಿನ್ನ ಬಿಂಕ್ಕಣ ಯಾಕೆ
ಜಾತಿ ಧರ್ಮದ ಮಾದ ಯಾಕೆ
ಮೇಲು ಕೀಳಿನ ಅಂತರ ಯಾಕೆ
ಬಡವ ಶ್ರೀಮಂತನ ತಾರತಮ್ಯ ಯಾಕೆ
ಗಂಡು ಹೆಣ್ಣಿನ ಧೋರಣೆ ಯಾಕೆ
ಎಲ್ಲಾ ಬಿಟ್ಟು ಎಲ್ಲಾ ತೊರೆದು
ಮೊದಲು ಮಾನವನಾಗು
ಹಾದಿ ಬೀದಿ
ಊರು ಕೇರಿ
ಜಾತಿ ಜನಾಂಗ
ಮತ ಧರ್ಮದ
ನೂರೆಂಟು
ಸಾವಿರಾರು
ಮುಕ್ಕೋಟಿ
ದೇವರುಗಳಿದ್ದರು
ಕಟ್ಟಿ ಕೊಡುವುದಿಲ್ಲ
ನಿನ್ನಗೆ ಮನೆ ಮಠ
ಸೂರು ನೀರು
ಬದುಕು ಬಾಳು
ಆದರೂ ನಿಂತಿಲ್ಲ
ಕಲ್ಲು ಕಂಬವ
ದೇವರೆಂದು
ಪೂಜಿಸುವುದು
ಇದು ಎಂತಹ
ಮೂರ್ಖತನವೋ
ನಿನ್ನಂತೆ ನೀ
ನಿನ್ನ ಇಷ್ಟಕ್ಕೆ ನೀ
ಬದುಕಿ ಬಾಳಲು
ಸೂರು ನೀರು
ಮನೆ ಮಠ
ಕಟ್ಟಿ ಕೊಟ್ಟಿದ್ದು
ಗುಡಿಯೊಳಗಿನ
ಕಲ್ಲ ಕಂಬವಲ್ಲ
ಬಾಬಾ ಸಾಹೇಬ್ ರು
ಬರೆದ ಸಂವಿಧಾನ
******ರಾಜು ಹಾಸನ******