Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಓದು ಓದು

ಓದು ಓದು ಓದು
ಓದು ಬರಹ ಕಲಿತರೆ
ಜ್ಞಾನಿಯಾಗುವೇ
ಕಲಿಯದಿದ್ದರೆ
ಅಜ್ಞಾನಿಯಾಗುವೇ
ಓದು ಬರಹ ಕಲಿತು
ಜ್ಞಾನಿಯಾಗು
ಮನೆ ಬೆಳಗುವ
ದೀಪವಾಗು
ಓದು ಬರಹ ಕಲಿತರೆ
ಸ್ವಾಭಿಮಾನಿ
ಕಲಿಯದಿದ್ದರೆ ಗುಲಾಮ
ಓದು ಬರಹ ಕಲಿತರೆ
ರಾಜ ಮಹಾರಾಜನಾಗುವೆ
ಕಲಿಯದಿದ್ದರೆ
ಕಂಡವರ ಕೈ ಕಾಲಾಳಗುವೇ
******ರಾಜು ಹಾಸನ******

- ರಾಜು ಹಾಸನ

24 Dec 2020, 11:44 pm

ಜೈ ಭೀಮ್ ಜೈ ಭೀಮ್

ಜೈ ಭೀಮ್ ಎಂದರೆ ನನ್ನ ಛಲ
ಜೈ ಭೀಮ್ ಎಂದರೆ ನನ್ನ ಬಲ
ಜೈ ಭೀಮ್ ಎಂದರೆ ನನ್ನ ಜ್ಞಾನ
ಜೈ ಭೀಮ್ ಎಂದರೆ ನನ್ನ ಸೂರ್ಯ
ಜೈ ಭೀಮ್ ಎಂದರೆ ನನ್ನ ಪ್ರಾಣ
ಜೈ ಭೀಮ್ ಎಂದರೆ ನನ್ನ ಸ್ವಾಭಿಮಾನ
ಜೈ ಭೀಮ್ ಎಂದರೆ ನನ್ನ ನ್ಯಾಯ ನೀತಿ
ಜೈ ಭೀಮ್ ಎಂದರೆ ನನ್ನ ಬದುಕು
ಜೈ ಭೀಮ್ ಎಂದರೆ ನನ್ನ ಸ್ಪೂರ್ತಿ
ಜೈ ಭೀಮ್ ಎಂದರೆ ನನ್ನ ಶಾಂತಿ
ಜೈ ಭೀಮ್ ಎಂದರೆ ನನ್ನ ಕ್ರಾಂತಿ
ಜೈ ಭೀಮ್ ಎಂದರೆ ನನ್ನ ಗುರು
ಜೈ ಭೀಮ್ ಎಂದರೆ ನನ್ನ ದೇವರು
ಜೈ ಭೀಮ್ ಎಂದರೆ ನನ್ನ ತಂದೆ ತಾಯಿ

ಜೈ ಭೀಮ್ ಎಂದರೆ ಮನುವಾದಿಗಳಿಗೆ ಭಯ
ಜೈ ಭೀಮ್ ಎಂದರೆ ಮನುವಾದಿಗಳಿಗೆ ಭೀತಿ
ಜೈ ಭೀಮ್ ಎಂದರೆ ಮನುವಾದಿಗಳಿಗೆ ನಡುಕ
ಜೈ ಭೀಮ್ ಎಂದರೆ ಮನುವಾದಿಗಳಿಗೆ ಸಿಂಹ ಸ್ವಪ್ನ
ಜೈ ಭೀಮ್ ಎಂದರೆ ಮನುವಾದಿಗಳಿಗೆ ಪರದಾಟ
ಜೈ ಭೀಮ್ ಎಂದರೆ ಮನುವಾದಿಗಳು ಓಟ
ಜೈ ಭೀಮ್ ಎಂದರೆ ಮನುವಾದಿಗಳ ಎದೆಯಲ್ಲಿ ಢವ ಢವ
ಜೈ ಭೀಮ್ ಎಂದರೆ ಮನುವಾದಿಗಳ ಜೀವ ಫುಕಾ ಫುಕಾ
ಜೈ ಭೀಮ್ ಎಂದರೆ ಗತ್ತು ಗಮ್ಮತ್ತು ತಾಕತ್ತು
ಜೈ ಭೀಮ್ ಎಂದರೆ ಇಡೀ ವಿಶ್ವಕ್ಕೆ ಗೊತ್ತು ಅವರು ಜ್ಞಾನ

- ರಾಜು ಹಾಸನ

24 Dec 2020, 11:17 pm

ಭಾವ ಸಂಗಮ

ಭಾವದೊಡೆಯ ಬಂದನಿಂತು
ಭುವಿಗೆ ಬೆಳಕು ಚೆಲ್ಲುತ್ತಾ
ಒಲವು ನಲಿವು ಚಿಗಿರಿಸುತಲಿ
ಭಾವ ವೀಣೆ ಮೀಟಿದಾ

ಹೊನ್ನಕಿರಣ ಹೊಮ್ಮಿಸುತಲಿ
ಸೂರ್ಯಕಾಂತಿ ನಗಿಸಿದ
ಹಸಿರು ಹೊದ್ದು ಉಸಿರ ನೀಡ್ವ
ಜಗವನಿವನು ಬೇಳಗಿದಾ

ಮನದ ದುಗುಡ ವೆಲ್ಲ ಅಳಿದು
ಸುಮದ ಕಂಪು ಸೂಸಿದ
ಧರೆಯ ದೊರೆಯ ಎಚ್ಚರಿಸುತ
ಕುಶಲೋಪರಿ ಕೇಳಿದಾ

ಪ್ರಾಣಿ ಪಕ್ಷಿ ಜೀವ ಜಂತು ಗಳಿಗೆ
ಮಂದಹಾಸ ಮೂಡಿಸಿದ
ಸುತ್ತ ಬೆಟ್ಟಗಳನು ಗಟ್ಟಿ ಮಾಡಿ
ತಾಯ ಕಾಯಲು ನಿಲ್ಲಿಸಿದ

ಭಾವಡೋಡೆಯ ನೀನು ಬರದೆ
ಭುವಿಯ ಆಟ ನಡೆಯದು
ಸುಖ ದುಃಖ ದುಮ್ಮಾನ ಮರೆಸಿ
ಮಗುವ ನಗುವು ನೀಡುವೆ

. ಕಲ್ಮೇಶ ಬಡಿಗೇರ
......ಬಾದಾಮಿ......

- Kalmesh Badiger

24 Dec 2020, 08:18 am

ಶಕ್ತಿ

ದೀನ ದಲಿತರ
ಶಕ್ತಿಯಾಗಿ
ನೊಂದ ಜನರ
ಉಸಿರಾಗಿ
ಭರವಸೆಯ
ಬೆಳಕಾಗಿ
ಜ್ಞಾನದ
ಕಿಡಿಯಾಗಿ
ಅಜ್ಞಾನವಾ
ತೊಲಗಿಸಿ
ದುಷ್ಟ ಜನರ
ಹೆಡೆಮುರಿ
ಕಟ್ಟಿದ
ಛಲ ಬಿಡದ
ಛಲವಾದಿ
ಧೀಮಂತ
ನಾಯಕ
ಭೀಮ್ ರಾವ್
******ರಾಜು ಹಾಸನ******

- ರಾಜು ಹಾಸನ

24 Dec 2020, 12:14 am

ಹುಟ್ಟೂರು

ಹತ್ತೂರು ಸುತ್ತಿಬಂದ ಮ್ಯಾಲಂತು
ಹೆತ್ತೂರು ಹಾದಿಯು ಹುವಾಯ್ತು
ಹುಟ್ಟೂರು ಬಿಟ್ಟೋದ ನೆನಪಿಸಿ
ಹಿತ್ತಲ ಗಿಳಿಮರಿ ಕೂಗಿ ಕರೀತಾ

ಕೆರೆ ಕಟ್ಟೆ ತೊರೆ ಭಾವಿಗಳ ಈಜುತ್ತಾ
ಚಿನ್ನಿ ದಾಂಡು ಗೋಲಿಗಳ ಆಡುತ್ತಾ
ಬರಿಗಾಲಲಿ ಬಿರುಬಿಸಿಲ ಎದುರಿಸುತ
ಸುಡುಗಾಡು ಬೆಟ್ಟವ ಸುತ್ತಿದ ನೆನಪು

ಹೊತ್ತಿನುಟಕ್ಕಾಗಿ ಅತ್ತು ಕರೆದ ನೆನಪು
ಕಷ್ಟದಲು ಕಾಡಿಸಿ ನಕ್ಕಂತಾ ನಗುವು
ಹಟಹಿಡಿದು ಹೊಡೆಸಿಕೊಂಡು ಹೋಗಿ
ಅಪ್ಪ ಅಮ್ಮನ ನೆನೆಸಿ ಓಡಿಬಂದ ನೆನಪು

ಊರ ಪುಂಡರಿಗೊಮ್ಮೆ ಬುದ್ದಿ ಕಲಿಸಿ
ಉದ್ಯೋಗ ಹುಡುಕುತ ಹೊರಬಂದು
ಸಾಧನೆಯ ಹಾದಿಯಲ್ಲಿ ಹಿಡಿದುಕೊಂಡು
ಸುಂದರ ಬದುಕ ಕಟ್ಟಿಕೊಂಡ ನೆನಪು

ಇಪ್ಪತ್ತು ವರುಷಗಳು ಉರುಳಿದ ಮೇಲೆ
ಹುಟ್ಟೂರು ಎಂತೆಂದು ಹಂಬಲಿಸಿ ಬಂದೆ
ಆದರೆ ನನ್ನೂರ ಪರಿಸರದಲ್ಲಿ ಅದೇಕೋ
ನಾನೊಬ್ಬ ಅಪರಿಚಿತನಾಗಿ ಹೋಗಿರುವೆ

. ಕಲ್ಮೇಶ ಬಡಿಗೇರ
ಬದಾಮಿ

- Kalmesh Badiger

23 Dec 2020, 09:22 pm

ಮರ

ಬಾವಿಯ ದಂಡೆಯ ಮೇಲೊಂದು
ಬಂಗಾರದ ಮರವೊಂದು ಬೆಳೆದು
ಹಾದಿ ಬೀದಿಗಳಿಗೆಲ್ಲ ನೆರಳಾಗಿ ನಿಂತು
ಹಾದೋಗೊ ಜನರಿಗೆ ದೊರೆಯಾಗಿ

ಧನ ಕಾಯೋ ಹುಡುಗರಿಗೆಲ್ಲರಿಗು
ಆಟವ ಆಡುವ ವೇದಿಕೆ ಯಾಗಿ
ಮರಕೊತಿಗಳಿಗೆಲ್ಲ ನೇರವಾದೆ ನೀ
ಊರ ಜನರಿಗೆ ಗುರು ವಾದೆ ನೀನು

ನ್ಯಾಯ ಅನ್ಯಾಯ ನೀಡುವಂತ
ನ್ಯಾಯ ದೇವತೆಯಾಗಿ ನಿಂತಿರುವೆ
ನಂಬಿಕೆ ಆಚರಣೆ ಗಳಿಂದಲೆ ನೀನು
ಮಹಾತಾಯಿ ದೇವರಾಗಿ ಕಾನಿಸುವೆ

ಹಸುಳೆಗಳಿಗೆಲ್ಲ ತೊಟ್ಟಿಲು ನೀನಾದೆ
ಬಾಣಂತಿಯರಿಗೆ ಹೊರಸು ನೀನಾದೆ
ನಾದಲಹರಿಯ ಹೊರಡಿಸುವಂತಹ
ನಗಾರಿ ಡೋಲು ಡೋಳ್ಳಾಗಿ ಕುಣಿದೆ

ಅಟ್ಟ ಮೆಟ್ಟಿಲು ಅರಮನೆ ಚತ್ತಾದೆ
ಉತ್ತಿ ಬಿತ್ತುವ ರೈತನಿಗೆ ನೆರಳಾದೆ
ಸಿದ್ಧ ಶರಣರ ಪಾದಕ್ಕೆ ಪಾದುಕೆಯಾಗಿ
ದೇವಮಂದೀರದಲ್ಲಿ ಪಲ್ಲಕ್ಕಿ ನೀನಾದೆ

ಕಲ್ಮೇಶ ಬಡಿಗೇರ
......ಬಾದಾಮಿ........

- Kalmesh Badiger

23 Dec 2020, 09:04 pm

ನೀ ಶಾಶ್ವತ

ಜೊತೆಗೆ ಹುಟ್ಟದಿದ್ದರೇನು
ಜೊತೆಗೆ ನಡೆದಿಲ್ಲವೇನು
ರಕ್ತ ಹಂಚಿಕೊಳ್ಳದಿದ್ದರೇನು
ರಕ್ತ ಸಂಬಂಧದಂತೆ ಹೊಂದಿಕೊಂಡಿಲ್ಲವೇನು
ನೀ ದೂರವಿದ್ದರೇನು
ನಿನ್ನ ಸ್ನೇಹ ದೂರಾದುದೇನು
ಅಂದು ಕಳೆದ ಸಮಯ‌
ಇಂದಿಗೂ ಸ್ಮರಣೀಯ
ನಿನ್ನೊಡನೆ ಇದ್ದ ಸಮಯ ಕಳೆದಿದೆ
ನಿನ್ನೊಡನೆ ಕಳೆದ ನೆನಪು ಅಳಿಯದು
ನೀ ಶಾಶ್ವತ
ನಿನ್ನ ಸ್ನೇಹ ಚಿರಪರಿಚಿತ.........
--ಕಲಾಕುಸುಮ






- Kusuma Kusum

23 Dec 2020, 07:14 pm

ಜೈ ಭೀಮ್ ಸೈನಿಕರು

ಮನುವಾದಿಗಳ
ದಂಡೇ ಬರಲಿ
ದಾಳಿಯೇ ಬರಲಿ
ಗುಡುಗು ಬಂದರು
ಸಿಡಿಲೇ ಬಡಿದರು
ತಲೆ ತಗ್ಗಿಸಿ ಬಾಳಲ್ಲಾ
ಮಳೆಯೇ ಸುರಿಯಲಿ
ಚಳಿಯೇ ಕೊರೆಯಲಿ
ಬಿಸಿಲೇ ಸುಟ್ಟರು
ಹೆದರಿ ಬೆದರಿ ಓಡೋದಿಲ್ಲ
ಘರ್ಜಿಸಿ ಘರ್ಜಿಸಿ
ಆರ್ಭಟಿಸಿ ಆರ್ಭಟಿಸಿ
ಧೂಳ್ ಎಬ್ಬಿಸಿ
ಮುನ್ನುಗ್ಗಿ ನಡೆದರೆ
ಧೂಳಿಪಟವಾಗುವುದು
ಮನುವಾದಿಗಳ ಪಡೆ
ಎಚ್ಚರ ಎಚ್ಚರ
ನಾವು ಜೈ ಭೀಮ ಸೈನಿಕರು
********ರಾಜು ಹಾಸನ********

- ರಾಜು ಹಾಸನ

23 Dec 2020, 05:40 pm

ಉತ್ತುಂಗ

ಓದು ಬರಹ ಕಲಿತು
ಮನುವಾದಿಗಳ
ಗುಲಾಮನಾಗಬೇಡ
ಸ್ವಾಭಿಮಾನದ
ಕೂಡಿಯಾಗು
ಮೂಢನಂಬಿಕೆಯ
ಕಪಟ ಸೂತ್ರ
ತಿಳಿದು ತಿಳಿದು
ಕಂಡು ಕಂಡು
ಬೀಳಬೇಡ
ಹಗಲು ಕಂಡ ಬಾವಿಗೆ
ಶಾಶ್ವತವಲ್ಲದ ಕ್ಷಣಿಕವಾದ
ಮನುವಾದಿಗಳ
ಆಸೆ ಆಮಿಷಗಳಿಗೆ
ಜೋತು ಬಿದ್ದು
ಬಿಕ್ಷಕನಾಗಬೇಡ
ಜೊಲ್ಲು ಸುರಿಸಿ
ಸತ್ತು ಸಮಾಧಿಯಾಗಬೇಡ
ಸಂವಿಧಾನವಾ ಅರಿತು
ದಿಟ್ಟ ಹೆಜ್ಜೆ ಇಟ್ಟು
ನಡೆ ನಡೆ ನಿನ್ನ
ಬದುಕು ಬಾಳಿನ ಕಡೆ
ಗುರಿ ಸಾಧನೆಯ
ಉತ್ತುಂಗದ ಕಡೆ ಕಡೆ
*******ರಾಜು ಹಾಸನ*******

- ರಾಜು ಹಾಸನ

23 Dec 2020, 02:49 pm

ಕವಿತೆಯ ಸಾಲು

ಕವಿತೆಯ ಸಾಲು ಕಟ್ಟಲು
ನಾ ಹಿಡಿದೆ ಲೇಖನಿಯ
ಅದು ಗೀಚಿದ್ದು ಗೊಂದಲದ ಭಾವವ
ಎತ್ತಾ ಹೋದರೂ, ಲೇಖನಿ ಯೂ ಬಿಡದು ಭಾವನೆಗಳ ಸಂತೆಯ!!!

ಅದ ಬಿಟ್ಟು ಬರೆಯುವ ಆಸೆ ಕಂಡೆ ನಾ
ಮತ್ತೆ ಗೀಚಿದೆ ಲೇಖನಿಯ ತುದಿಯ,
ಆಗೂ ಅದು ಗೀಚಿತು
ಅರ್ಥ ವಿಲ್ಲದ ಭಾವವ!!!

- ರಮ್ಯ

23 Dec 2020, 01:28 pm