Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ರೈತ ದೇವರು

ರೈತ ರೈತ ರೈತರು
ದೇಶಕ್ಕೆ ಅನ್ನ
ಕೊಟ್ಟ ದೇವರು
ಎಲ್ಲಾ ಜನರ
ಹಸಿವು ನೀಗಿಸಿದ
ಅನ್ನದಾತರು
ಚಳಿ ಗಾಳಿ ಮಳೆ
ಬಿಸಿಲು ಬೆಂಕಿ
ಬರಗಾಲ ಬಂದರು
ಅಂಜದೆ ಅಳುಕದೆ
ಕುಗ್ಗದೆ ಜಗ್ಗದೆ
ಜಾತಿ ಧರ್ಮದ
ಭಿನ್ನ ಬೇಧ
ಭಾವವಿಲ್ಲದೆ
ಯಾರ ಹಂಗು
ಹೋಂಗಿಲ್ಲದೆ
ದುಡಿದು ದೇಶಕ್ಕೆ
ಅನ್ನವನಿಟ್ಟ ಒಡೆಯರು
ಬಂಗಾರದ
ಮನುಷ್ಯರು

ರೈತ ಬೆಳೆದ
ಬಗೆ ಬಗೆಯ
ಅನ್ನವ ತಿಂದು
ತಿರುಗಿ ಬೊಗಳುವ
ನಾಯಿ ನರಿಗಳು
ಹೆದರಿಕೆ ಬೆದರಿಕೆ
ಒಡ್ಡುವ ಕುನ್ನಿಗಳು
ಹಸಿದ ಹೊಟ್ಟೆಗೆ
ತಿನ್ನುವರೇ
ಮಣ್ಣು ಇಲ್ಲ
ಹಾದಿ ಬೀದಿಯಲ್ಲಿ
ಬಿದ್ದಿರುವ ಕಸವೋ

ನಿಂತು ನಿಲ್ಲದೆ
ಕುಂತು ಕುರದೆ
ಬಿಸಿಲು ಬೆಂಕಿ
ಎನ್ನದೇ ದುಡಿಯುವ
ರೈತರ ಕಷ್ಟ
ನೆರಳಲ್ಲಿ ಕುಂತು
ನಿಂತು ತಿನ್ನುವ
ಜನರಿಗೆನು ಗೊತ್ತು
ಭೂಮಿಗೆ
ಬಂದು ದುಡಿಯಲ್ಲಿ
ತಿಳಿಯುವುದು
ರೈತರ ಕಷ್ಟ

ರೈತರ ಗತ್ತು
ಗಮ್ಮತ್ತು ತಾಕತ್ತು
ಇಡೀ ಜಗತ್ತಿಗೆ ಗೊತ್ತು

- ರಾಜು ಹಾಸನ

08 Dec 2020, 09:26 pm

ಜಾಗರಣೆ

ಪ್ರಾಣಿ ಪಕ್ಷಿಗಳಿಗೆ
ಇಲ್ಲದ ಜಾತಿ ಧರ್ಮ
ನೆಲ ಜಲ ಗಾಳಿಗೆ
ಇಲ್ಲದ ಮಡಿ ಮೈಲಿಗೆ
ಜನರ ಜನರ
ನಡುವೆ ಇರುವುದಯ್ಯ
ನೂರೆಂಟು
ಜಾತಿ ಧರ್ಮದ
ಮಡಿ ಮೈಲಿಗೆಯ
ಕೊಚ್ಚೆ ಗುಂಡಿ

ಮುಟ್ಟಿದರೆ
ಮಾಡಿ ಮೈಲಿಗೆ
ಎನ್ನುವ ಜನ
ಹೊಟ್ಟೆ ತುಂಬಾ
ರಾಶಿ ರಾಶಿ ರಾಶಿ
ಮಲ ಮೂತ್ರ
ತುಂಬಿಕೊಂಡು
ಅಜಗಜಾಂತರ
ದೂರ ಸರಿದು
ನಿಲ್ಲುವರಯ್ಯಾ
ನಿಂತು ಕುಂತು
ಇಡುವರೇ
ಬಂಗಾರದ ಮೊಟ್ಟೆ
ಚಿನ್ನದ ಮೊಟ್ಟೆ

ಹೊಟ್ಟೆ ತುಂಬಾ
ಹೊಲಸು ತುಂಬಿಕೊಂಡು
ಮಡಿ ಮೈಲಿಗೆ ಎಂದು
ಮೈ ಮೇಲೆ ತಣ್ಣೀರು
ಸುರಿದು ಕೊಂಡರೆ
ಹೋಗುವುದೇ
ಹೊಟ್ಟೆ ಒಳಗಿನ
ಕಸದ ಹೊಲಸು

ಇದು ಎಂತಹ
ಕಳ್ಳ ಖದೀಮರ
ಸುಳ್ಳ ನೀಚರ
ಆಚಾರಣೆನೋ
ಮೂಢನಂಬಿಕೆಯ
ಜಾಗರಣೆನೋ
******ರಾಜು ಹಾಸನ*******

- ರಾಜು ಹಾಸನ

08 Dec 2020, 12:49 am

ಹೆತ್ತವರು

ಹೆತ್ತು ಹೊತ್ತು
ಕೈ ತುತ್ತು ತಿನ್ನಿಸಿ
ಹೊತ್ತು ಗೊತ್ತು
ಸಾಕಿ ಸಲಹಿ
ಆಟ ಪಾಠ
ಜೀವನ ಪಾಠ ಕಲಿಸಿ
ಏಳು ಬೀಳಿನ
ಓಟ ಓಡಿಸಿ
ಉಳಿಸಿ ಬೆಳೆಸಿ
ಕಾಪಾಡಿದ ದೇವರು
ತಂದೆ ತಾಯಿಗೆ
ನಾ ಚಿರಋಣಿ

- ರಾಜು ಹಾಸನ

07 Dec 2020, 03:32 pm

ಲಂಚ

ಹಣ್ಣು ಕಾಯಿ
ಹೋಳಿಗೆ ತುಪ್ಪ
ಹೂವು ಕಡ್ಡಿ
ಗಂಧದ ಕಡ್ಡಿ
ಒಡವೆ ವೈಢೂರ್ಯ
ಬಂಗಾರದ ಒಡವೆ
ಕಾಸು ಗಿಸು
ಚಿಲ್ಲರೆ ನೋಟು
ಲಂಚ ಗಿಂಚ
ಮಂಚ ಇಲ್ಲದೆ
ಒಲಿಯುವುದಿಲ್ಲ
ಚಿತ್ರ ವಿಚಿತ್ರವಾದ
ಗೊಂಬೆ ದೇವರು
ಲಂಚ ಗಿಂಚ
ಮಂಚ ಕೊಟ್ಟರೆ
ಒಲಿಯುವುದೇ
ಕಳ್ಳ ದೇವರು
ಲಂಚ ದೇವರು

ಹಣ್ಣು ಕಾಯಿ ಇಲ್ಲದೆ
ದೇವರು ಒಲಿಯುವುದಿಲ್ಲ
ಚಿಲ್ಲರೆ ದಕ್ಷಿಣೆ ಇಲ್ಲಿದೆ
ಪೂಜೆ ಪುನಸ್ಕಾರವಿಲ್ಲ
ಲಂಚ ಮಂಚವಿಲ್ಲದೆ
ಅಧಿಕಾರವಿಲ್ಲ

- ರಾಜು ಹಾಸನ

07 Dec 2020, 02:13 pm

ಕಿಲಾಡಿ ದೇವರು

ದೇವರು ದೇವರು
ಇದು ಎಂತಾ ಯಾವ
ಸೀಮೆಯ ದೇವರೋ
ಆರು ಮೂರು ಕಾಸಿಗೆ
ಚಳಿ ಗಾಳಿ ಮಳೆ
ಬಿಸಿಲು ಬೆಂಕಿ ಎನ್ನದೇ
ದುಡಿದು ಕೂಡಿಟ್ಟು
ಮುಚ್ಚಿಟ್ಟು ಅಡವಿಟ್ಟು
ಮಾಡುವರಯ್ಯ
ಹತ್ತಾರು ಕಾಸಿನ
ಮನೆ ಮುರುಕ
ದೇವರ ಹಬ್ಬ

ನೀ ಎಷ್ಟೇ ಏನೇ
ಜಾತ್ರೆ ಪಾತ್ರೆ
ಹಬ್ಬ ಹರಿದಿನ
ಮಾಡಿದರು
ಬರುವುದಿಲ್ಲ
ಬಂದು ಕಟ್ಟುವುದಿಲ್ಲ
ನಿನಗೊಂದು ಗುಡಿ
ನೀನೇ ದುಡಿದು
ಕಟ್ಟಬೇಕು
ಗುಡಿಯ ಮೇಲೆ ಗುಡಿ
ದೇವರಿಗೊಂದು
ದೇವರ ಗುಡಿ

ಬಿದ್ದು ಬೆಡಿದರು
ಉರುಳಿ ಹೊರಳಾಡಿ
ಜಪ ತಪ ಮಾಡಿ
ಉಪವಾಸ ಬಿದ್ದರು
ತುಂಬುವುದಿಲ್ಲ
ನಿನ್ನ ಜೇಬು ಚಡ್ಡಿ ಜೇಬು
ನೀನೇ ತುಂಬಿಸಬೇಕು
ಕೂಲಿ ನಾಲಿ ಮಾಡಿ
ದೇವರ ಮುಂದಿನ
ದೇವರ ಹುಂಡಿ

ಹೇಳಿ ಕೇಳಿ ಬಂದು
ಕೊಡುವುದಿಲ್ಲ
ಕುಡಿಯಲು ತಿನ್ನಲು
ಅನ್ನ ನೀರು ಹಣ್ಣು
ನೀನೇ ಹೋಗಿ
ಕೊಡಬೇಕು
ದೇವರಿಗೆ ಹಣ್ಣು
ಕಾಯಿ ನೀರು

ಬೆಳಗು ಬಾ
ಬೆಳಗು ಬಾ
ನನ್ನ ಮನೆ
ಮಠವಾ ತೊಳೆದು
ಹಚ್ಚು ಬಾ ದೀಪ
ಎಂದರು ಅಂದರು
ಬಂದು ಹಚ್ಚುವುದಿಲ್ಲ
ನಿನ್ನ ಮನೆಯ ದೀಪ
ನೀನೇ ಹೋಗಿ
ತೊಳೆದು ಹಚ್ಚಬೇಕು
ದೇವರ ಮನೆಯ ದೀಪ
ದೇವರು ದೇವರು
ಇದು ಯಾವ ಎಂತಾ
ಸೀಮೆಯ ದೇವರೋ

- ರಾಜು ಹಾಸನ

07 Dec 2020, 08:46 am

ವರ್ಣನೆ

ಮುಸ್ಸಂಜೆ ಮಬ್ಬಿನಲಿ
ನಲ್ಲನ ನೆನೆಯುತ
ಕುಂತಿಹಳು ನಲ್ಲೆ ಮೇಜಿನಲಿ
ಕಾರ್ಗತ್ತಲಲಿ ಹೋಳೆವ
ಚುಕ್ಕಿ ಚಂದ್ರಮನಂತೆ
ನೈಜ ಪ್ರಪಂಚವ ಮರೆಮಾಚಿ
ಗಲ್ಲಕೆ ಕೈಯನ್ನೂರುಗೋಲಾಗಿಸಿ

ಮನದನ್ನನ ಜೊತೆಗೂಡಿ ಹಾಡಿ ಪಾಡಿ ವಿಹರಿಸುತ್ತಿಹಳು ಮನದನ್ನೆ
ಸಹಸ್ರ ಕನಸ್ಸುಗಳ ಲೋಕದಿ
ಕಲ್ಪನೆಯ ಭ್ರಮರವನ್ನೇರಿ

ಪ್ರಿಯ ಕರನ ನೆನಪುಗಳು
ರಂಗೀರಿಸಿವೆ ಮಬ್ಬುಗತ್ತಲೊಳಗೆ
ಪ್ರಿಯತಮೆಯ ವದಕ್ಕೆ
ನಭದಿ ಹಾಲ್ಗರೆವ ಚಂದ್ರಮನಂತೆ

- HarishKumarm

06 Dec 2020, 06:42 pm

ರಂಗ ಕಲಾವಿದ

ಹೊಸಬಣ್ಣ ಹಳೆ ರೂಪಗಳ ಹೊದ್ದು
ಸೂತ್ರಧಾರನು ಆಡಿಸುವ ನಾಟಕಗಳ
ಆಳ ಅಗಲಕ್ಕಿಳಿದು ಆಟವ ಆಡುವ
ರಂಗ ಕಲಾವಿದನೆ ನಿನಗೆ ಶರಣಯ್ಯ

ಬದುಕು ಕಟ್ಟಲು ಜಗವನು ನಗಿಸುವೆ
ಒಮ್ಮೊಮ್ಮೆ ಕಣ್ಣೀರ ಹರಿವಂತೆಯು
ಸುರ ಅಸುರರ ಪಾತ್ರಗಳ ನಿರ್ವಹಿಸಿ
ಬದುಕಿನಲಿ ನೈಜತೆಯ ಮೆರೆದಿರುವೆ

ಹುಟ್ಟು ಸಾವ ಗೆದ್ದು ಬಂದ ದೊರೆ
ಒಂದು ದೇಹದ ವಿವಿದ ಪಾತ್ರಧಾರಿ
ಆಳು ಅರಸ ನವರಸಗಳ ನಾಯಕ
ಅದೆಷ್ಟು ಹೊಗಳಿದರು ಕಡಿಮೆ ನಿನಗೆ

ಆದರೂ ಒಂದೋತ್ತಿನ ಊಟಕ್ಕಾಗಿ ಪರದಾಡಿ ಕಾಡಿ ಬೇಡಿ ಅಭಿನಯಿಸಿ
ಕೈ ಮುಗಿದು ಸಂಸಾರದ ತೇರೆಳೆದು
ಜೀವನದ ನೌಕೆಯನ್ನು ನುಕುತಿರುವೆ

ಕೋರೋಣ ಮಹಾಮಾರಿಯಿಂದಾಗಿ
ಕಂಗಾಲಾಗಿ ಜೀವನವ ಗಟ್ಟಿ ಮಾಡಿ
ಹೊಲ ಗದ್ದೆ ಗಳಲಿ ದುಡಿದು ಉಂಡ
ಸಾಕಾರ ಮೂರ್ತಿಯೇ ನಿನಗೆ ಶರಣು

ಕಲ್ಮೇಶ ಬಡಿಗೇರ
......... ಬದಾಮಿ......

- Kalmesh Badiger

06 Dec 2020, 04:46 pm

ಮಹಾ ಪರಿನಿರ್ವಾಣ ದಿನ

ಇಡೀ ಜಗತ್ತೇ
ತಲೆ ತಗ್ಗಿಸಿ ಬಗ್ಗಿಸಿ
ಕಂಬನಿ ಮಿಡಿದ ದಿನ
ಬಡವ ಬಲ್ಲಿದ ಸ್ತ್ರೀ
ಶೋಷಿತ ಮಕ್ಕಳು
ಕಂಗೆಟ್ಟು ದಿಕ್ಕೆಟ್ಟು
ಗೊಳಾಡಿ ಮರುಗಿ
ಕಣ್ಣೀರಿಟ್ಟ ದಿನ
ಮಾನವ ಕುಲಕ್ಕೆ
ಬರಸಿಡಿಲು ಬಡಿದು
ಕಾರ್ಮೋಡವೇ
ಆವರಿಸಿದ ದಿನ
ಮಹಾ ಸಾಗರದಂತೆ
ಜನ ಸಾಗರವೇ
ತುಂಬಿ ತುಳುಕಿ
ಉಕ್ಕಿ ಹರಿದು
ಬಂದ ದಿನ
ನಮ್ಮ ನಿಮ್ಮೆಲ್ಲರ
ಜೀವಾ ಜೀವನದ
ಜೀವನಾಡಿ ಮಿಡಿತ
ದೀನ ದಲಿತರ
ನಾಯಕ ಬಂಧು
ಮಹಾ ನಾಯಕ
ನನ್ನ ಒಡಯ
ಬಾಬಾ ಸಾಹೇಬ್ ರ
ಪರಿನಿರ್ವಾಣ ದಿನ

- ರಾಜು ಹಾಸನ

06 Dec 2020, 12:59 pm

ಮೊದಲು ಮಾನವನಾಗು

ಹುಟ್ಟಿ ಬೆಳೆದು ಆಟವಾಡಿ
ಕುಡಿದು ತಿಂದು ಸೇವಿಸಿ
ಸತ್ತು ಸಮಾಧಿಯಾಗುವುದು
ಒಂದೇ ನೆಲದ ಜಲ
ಗಾಳಿ ಅನ್ನವಾದರು
ಭಿನ್ನ ಬಿಂಕ್ಕಣ ಯಾಕೆ
ಜಾತಿ ಧರ್ಮದ ಮಾದ ಯಾಕೆ
ಮೇಲು ಕೀಳಿನ ಅಂತರ ಯಾಕೆ
ಬಡವ ಶ್ರೀಮಂತನ ತಾರತಮ್ಯ ಯಾಕೆ
ಗಂಡು ಹೆಣ್ಣಿನ ಧೋರಣೆ ಯಾಕೆ
ಎಲ್ಲಾ ಬಿಟ್ಟು ಎಲ್ಲಾ ತೊರೆದು
ಮೊದಲು ಮಾನವನಾಗು

- ರಾಜು ಹಾಸನ

06 Dec 2020, 09:13 am

ಮೂರ್ಖತನ

ಹಾದಿ ಬೀದಿ
ಊರು ಕೇರಿ
ಜಾತಿ ಜನಾಂಗ
ಮತ ಧರ್ಮದ
ನೂರೆಂಟು
ಸಾವಿರಾರು
ಮುಕ್ಕೋಟಿ
ದೇವರುಗಳಿದ್ದರು
ಕಟ್ಟಿ ಕೊಡುವುದಿಲ್ಲ
ನಿನ್ನಗೆ ಮನೆ ಮಠ
ಸೂರು ನೀರು
ಬದುಕು ಬಾಳು
ಆದರೂ ನಿಂತಿಲ್ಲ
ಕಲ್ಲು ಕಂಬವ
ದೇವರೆಂದು
ಪೂಜಿಸುವುದು
ಇದು ಎಂತಹ
ಮೂರ್ಖತನವೋ


ನಿನ್ನಂತೆ ನೀ
ನಿನ್ನ ಇಷ್ಟಕ್ಕೆ ನೀ
ಬದುಕಿ ಬಾಳಲು
ಸೂರು ನೀರು
ಮನೆ ಮಠ
ಕಟ್ಟಿ ಕೊಟ್ಟಿದ್ದು
ಗುಡಿಯೊಳಗಿನ
ಕಲ್ಲ ಕಂಬವಲ್ಲ
ಬಾಬಾ ಸಾಹೇಬ್ ರು
ಬರೆದ ಸಂವಿಧಾನ
******ರಾಜು ಹಾಸನ******

- ರಾಜು ಹಾಸನ

05 Dec 2020, 11:57 pm