ನಿನ್ನ ಕಾಯುವುದು
ಗುಡಿಯೊಳಗಿನ
ಕಲ್ಲು ಕಂಬದ
ಮರದ ದಿಮ್ಮಿಯ
ಮಣ್ಣು ಮುದ್ದೆಯ
ಗೊಂಬೆ ದೇವರಲ್ಲ
ಬಾಬಾ ಸಾಹೇಬರು
ಬರೆದ ಸಂವಿಧಾನ
ಅವರೆ ನಮ್ಮ
ನಿಮ್ಮ ದೇವರು
ತಿಳಿದು ಬಾಳಿರಿ
ಮುಗ್ಧ ಮನಸಿನ
ಮುಗ್ಧ ಜನಗಳೇ
ವಿಶ್ವ ಮಾನವರೇ
******ರಾಜು ಹಾಸನ******
ಜಂಬ ಗಿಂಬ ಬೇಡ
ಅಹಂಕಾರ ಅಹಂ ಬೇಡ
ಹುಟ್ಟಿ ಸಾಯಬೇಕು
ಬದುಕಬೇಕು ಬಾಳಬೇಕು
ಸಂವಿಧಾನದ ಸೂರಿನಡಿ
ಬಾಬಾ ಸಾಹೇಬ್ ರ ಪಾದದಡಿ
ಯಾರೇ ಏನೇ ಎಷ್ಟೇ
ಸಂಪಾದನೆ ಮೇಲೆ
ಸಂಪಾದನೆ
ಮನೆ ಮೇಲೆ ಮನೆ
ಸಿರಿ ಸಂಪತ್ತಿನ ಮೇಲೆ
ಸಿರಿ ಸಂಪತ್ತು
ಕೂಡಿಟ್ಟು ಬಚ್ಚಿಟ್ಟು
ಹುತ್ತಿಟ್ಟು ಮುಚ್ಚಿಟ್ಟು
ಸಿರಿವಂತನಾದರು
ಬಾಬಾ ಸಾಹೇಬ್ ರ
ಕಾಲ ಧೂಳಿಗು
ಸರಿ ಸಮ ಯಾರು ಇಲ್ಲ
ಇಂದು ಇಲ್ಲ ಮುಂದೆನೂ
ಹುಟ್ಟಿ ಬರೋದು ಇಲ್ಲ
ಇದು ಏನು ದೇವರು
ಇದು ಎಂತಾ ದೇವರು
ಹಣ್ಣು ಕಾಯಿ
ಮುರಿದು ಹೊಡೆದು
ಕೊಟ್ಟರು ತಿನ್ನದ
ಮೂಸಿ ನೋಡದ ದೇವರು
ಕುರಿ ಕೋಳಿ ಹಂದಿ
ಎಮ್ಮೆಯ ಬಲಿ ಕೊಟ್ಟರೆ
ಕುಡಿದು ತಿನ್ನುವುದೇ
ಕುರಿ ಕೋಳಿ ಹಂದಿ
ಎಮ್ಮೆಯ ಮಾಂಸರಕ್ತ
ಕೂಗಿ ಗೋಗರೆದು
ಬೆಂಕಿ ಕೆಂಡವಾ
ತುಳಿದು ನೆಡೆದರು
ಗುಡಿಯ ಸುತ್ತ
ಬಿದ್ದು ಹೊರಳಾಡಿ
ತಲೆ ಚಚ್ಚಿ ಬೇಡಿದರು
ಬಾರದ ದೇವರು
ತಮಟೆ ಪೀಪಿ ಸದ್ದಿಗೆ
ವಾಲಾಡಿ ತೇಲಾಡಿ
ಕುಣಿದು ಕುಪ್ಪಳಿಸಿ
ಬೊಬ್ಬೆ ಹೊಡೆದು
ಕೇಕೆ ಹಾಕಿ ಬರುವುದು
ಜನರ ಮೈ ಮೇಲೆ
ಇದು ಏನು ದೇವರು
ಇದು ಎಂತಾ ದೇವರು
*******ರಾಜು ಹಾಸನ*******
ದ್ವೇಷ ಅಸೂಯೆ
ಮಾದ ಮತ್ಸರ ತಾರತಮ್ಯ
ಅಧರ್ಮ ಅನ್ಯಾಯವೇ
ತುಂಬಿ ತುಳುಕುವ
ಕಟ್ಟು ಕಥೆಗಳ
ಚಿತ್ರ ವಿಚಿತ್ರವಾದ
ಪುಂಗಿ ಪುರಾಣಗಳೇ
ಮನುವಾದಿಗಳ
ಜಾತಿ ಧರ್ಮದ
ಗ್ರಂಥಗಳದರೆ
ಸ್ನೇಹ ಪ್ರೀತಿ ವಾತ್ಸಲ್ಯ
ಮಮತೆ ಸಮಾನತೆ
ನ್ಯಾಯ ನೀತಿ
ಧರ್ಮ ಪಾಠ ಕಲಿಸಿ
ಅನ್ಯಾಯ ಮೆಟ್ಟಿ
ನಿಂತು ಧೈರ್ಯದ
ಕಿಡಿ ಹೊತ್ತಿಸಿ
ಜ್ಞಾನ ದಿವ್ಯಜ್ಯೋತಿ
ಬೆಳಕು ಚೆಲ್ಲಿ
ಸ್ತ್ರೀ ಶೋಷಿತರ
ಬಡವ ಬಲ್ಲಿದರ
ರಕ್ಷಿಸಿದ ರಕ್ಷ ಕವಚ
ವಿಶ್ವದ ಏಕೈಕ ಗ್ರಂಥ
ಮಾನವ ಧರ್ಮ ಗ್ರಂಥ
ಬಾಬಾಸಾಹೇಬರು
ರಚಿಸಿದ ನಮ್ಮ ನಿಮ್ಮೆಲ್ಲರ
ಹೆಮ್ಮೆಯ ಧರ್ಮ ಗ್ರಂಥ
ಭಾರತದ ಸಂವಿಧಾನ