ಪ್ರೀತಿ ಮಾಡಲು ಕನಸೇ ಕಾವಲು.
ಪ್ರೀತಿ ಉಳಿಯಲು ಮನಸೇ ಮೀಸಲು.
ನನ್ನ ಹೃದಯದರಮನೆಗೆ ಒಡತಿಯು ನೀನೆ.
ಸದಾ ನಿನ್ನ ಪ್ರೀತಿ ಬಯಸುವ ಗೆಳೆಯನು ನಾನೆ.
ಕ್ಷಣಕಾಲ ತೆರೆದಿಡುವೆ ನನ್ನ ಎದೆಯನ್ನ.
ನೊಡು ಬಾ ನನ್ನೊಳಗೆ ನಿನ್ನ.
ಅಲ್ಲಲ್ಲಿ ಬಿದ್ದಿರುವುದು ನೀ ಬಿಟ್ಟ ಪ್ರೀತಿಯ ಹೂ ಬಾಣ.
ಕಿತ್ತೊಗೆದು ಅಪ್ಪಿಕೋ ನನ್ನ.
ನಾ ಕಣ್ಮುಚುವ ಮುನ್ನ.
ಹಗಲು ರಾತ್ರಿ ಇಲ್ಲದ
ದಿನಗಳು ಇಲ್ಲ
ಮಾನವರೆ ಇಲ್ಲದ
ನಾಡು ನುಡಿ ಇಲ್ಲ
ಸಂಬಂಧಗಳು ಇಲ್ಲದ
ಸಂಸಾರ ಇಲ್ಲ
ಕನಸುಗಳು ಇಲ್ಲದ
ಮನಸುಗಳು ಇಲ್ಲ
ಪ್ರೀತಿ ಪ್ರೇಮ ಇಲ್ಲದ
ಹೃದಯಗಳು ಇಲ್ಲ
ತಂದೆ ತಾಯಿ ಇಲ್ಲದ
ಪ್ರಪಂಚವೇ ಇಲ್ಲ
ಮತ್ತೆ ಮರುಕಳಿಸಲಾಗದ ಆ ದಿನಗಳು,
ಯಾವುದೇ ಕಲ್ಮಶವೇ ಗೊತ್ತಿಲ್ಲದ ಆ ದಿನಗಳು,
ಸ್ವಲ್ಪ ಮುನಿಸು, ಸ್ವಲ್ಪ ಕೋಪ,
ಜಾಸ್ತಿ ಸಂತೋಷ ವಾಗಿದ್ದ ಆ ಕ್ಷಣಗಳು,
ನೆನಪುಗಳನ್ನಷ್ಟೇ ಉಳಿಸಿ ಮರೆಮಾಚಿ
ಹೋಗಿವೆ ಆ ಬಾಲ್ಯದ ದಿನಗಳು...!
ಸಮಾಜದ ಉಡುಗೊರೆಯಾಗಿ ಜನಿಸಿದ ನೀವು
ಸಾವಿರ ಕಷ್ಟಗಳ ನಡುವೆ ದೃತಿಗೆಡದೆ ಅರಳಿ ಕಂಪಿಸುತ್ತಿರುವ ಚೈತನ್ಯದ ಹೂವು
ನೀವು ನೋವ್ ಇರದಂತೆ ನಟಿಸಿ
ತನ್ನವರ ದುಃಖದಲ್ಲಿ ನಗುವ ಬೇಡುವ ಸ್ವಚ್ಛಂದದ ಮನಸ್ಸು ನಿಮ್ಮದು ಇರುವಾಗ ಬಯಸಿದಂತೆ ಇರುವುದೇ ಜಗವು ನಿಮ್ಮಂತ ಜೀವವ
ನಿಮ್ಮ ಕರ್ತವ್ಯದ ಹಾದಿಯಲ್ಲಿ ಮುಳ್ಳಿನ ಪರದೆಯ ಸರಿಸಿ
ನೈಜತೆಯ ಬೆಳಕಿನಲ್ಲಿ ಭವ್ಯ ಭಾರತದ ಹೆಸರ ಬೆಳಗಿಸುವ ನಿಮ್ಮ ಸಂಕಲ್ಪವ ಹೇಗೆ ಬಣ್ಣಿಸಲಿ ನಾ ಶ್ರಮಭರಿತ ನಿಮ್ಮ ಜೀವನವ
ನಿಮ್ಮ ಹೃದಯದ ಕನಸು ಸಂತಸದಿ ಪುಟಿದೆದ್ದು ಪರಿಶ್ರಮದ ಪತದೊಳಗೆ ಸಹಕರಿಸಿ ಸಂಭ್ರಮಿಸಿ ಸಂಧಿಸಲಿ ನಿಮ್ಮ ಸಾಧನೆಯ ಯಶಸ್ವಿ ಯೊಳಗೆ
ನಿಮ್ಮ ಸರಳತೆಯ ಬದುಕಿನೊಳಗೆ ಮೂಡಬೇಕು ಸದಾ ಮುಗುಳ್ನಗೆ
ನಿಮ್ಮನ್ನು ಸಂತೈಸುವ ಅವಕಾಶ ಬೇಕು ನನಗೆ ಮರೆಯಲ್ಲ ನಾನೆಂದು ಆ ದಿನದ ಗಳಿಗೆ
ಇಂದಿನ ನಿಮ್ಮ ಜನ್ಮದಿನವೂ ಸಾಕ್ಷಿಯಾಗಲಿ ಸರ್ವರು ಹಾರೈಸುವ ಪ್ರಶಂಸೆಯ ಹಿರಿಮೆಗೆ
ಹರ್ಷದಿ ಶುಭ ಕೋರುವ ನಾನು ಆಗ ನನ್ನ ಪ್ರೀತಿಯ ಮನಸ್ಸಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳೊಂದಿಗೆ
ಜಾತಿ ಧರ್ಮ
ಯಾರಿಗೆ ಬೇಕು
ಯಾತಕ್ಕೆ ಬೇಕು
ಮನುಷ್ಯ ಮನುಷ್ಯರ
ಕೊಂದು ತಿನ್ನುವ
ರಕ್ತ ಹೀರುವ
ಬದುಕಲು ಬಿಡದ
ಜಾತಿ ಧರ್ಮ
ಯಾರಿಗೆ ಬೇಕು
ಯಾತಕ್ಕೆ ಬೇಕು
ಮನುವಾದಿಗಳ
ಷಡ್ಯಂತ್ರದ ಉದ್ದರದ
ಕಳ್ಳ ಖಜಾನೆಯ ಕೋಟೆ
ಸುಖದ ಸುಪ್ಪತ್ತಿಗೆಯ
ಜಾತಿ ಧರ್ಮದ
ಮತ ಕೋಟೆ
ಯಾರಿಗು ಬೇಡ
ಯಾತಕ್ಕೂ ಬೇಡ
ಯಾವ ಜಾತಿ
ಧರ್ಮದ ಮತ ಕೋಟೆ
ಉಳಿದು ಬೆಳಯಲಿ
ಜನರ ಪ್ರೀತಿಯ
ಮಾನವ ಧರ್ಮದ
ಮಹಾ ಕೋಟೆ
ಜಾತಿ ಧರ್ಮ
ತಲೆ ಎತ್ತಿದಾಗ
ಸತ್ತು ಹೋಗುವುದು
ಮಾನವ ಕುಲ ಕುಲ
ಬೀಳುವುದು
ಸತ್ತ ಹೆಣಗಳ ರಾಶಿ
ಹರಿಯುವುದು
ರಕ್ತ ಕಣ್ಣೀರಿನ ಕೋಡಿ
ಸತ್ತು ಕೆಟ್ಟರೆ ಯಾವ
ಜಾತಿ ಧರ್ಮದವು
ಬರುವುದಿಲ್ಲ
ಹೋರುವುದಿಲ್ಲ
ಹೋಗುವುದಿಲ್ಲ
ಸತ್ತವರ ಹಿಂದೆ ಹಿಂದೆ
ಆದರು ಕಟ್ಟುವರು
ನೂರೆಂಟು ಜಾತಿ ಧರ್ಮವ
ಸತ್ತು ಸಮಾಧಿ
ಆಗುವ ತನಕ
ಸುಟ್ಟು ಬೂದಿ
ಆಗುವ ತನಕ
ಜನರ ಜನರ
ನಡುವೆ ಜಾತಿ ಧರ್ಮದ
ವಿಷ ಬೀಜ ಬಿತ್ತಿ
ಜಾತಿ ಧರ್ಮದ ಅಡ್ಡಗೋಡೆ
ಕಟ್ಟಿರುವರು ದುಷ್ಟ
ಮನುವಾದಿ ಕುನ್ನಿ ಮರಿಗಳು
ಕೆಡವಿ ಉರುಳಿಸಬೇಕು
ಮನುವಾದಿಗಳ ಜಾತಿ
ಧರ್ಮದ ಅಡ್ಡಗೋಡೆ
ಅಧರ್ಮದ ಮತ ಕೋಟೆ
ಬದುಕಿ ಬಾಳಬೇಕು
ಮನುವಾದಿಗಳ
ಎಡೆಮುರಿ ಕಟ್ಟಿ
ಹೊಡೆದು ಕಟ್ಟಬೇಕು
ಮಾನವ ಧರ್ಮದ
ಮಹಾ ಕೋಟೆ
ಓ ಹೆಣ್ಣೆ ಓ ಹೆಣ್ಣೆ
ತಿಳಿದು ಬಾಳು
ಓ ನನ್ನ ಹೆಣ್ಣೆ
ಹೆಣ್ಣಿಗೆ ಶೀಲವೇ
ಬಂಗಾರ
ವಜ್ರದ ಕವಚ
ನೀ ಮೈ ಮರೆತು
ಹೋಗಬೇಡ
ಕಂಡ ಕಂಡವರ
ಜೊತೆಗೂಡಿ
ಸಂಬಂಧ
ಭಾವನೆಗಳ ಮರೆತು
ಆಚಾರ ವಿಚಾರ
ದಿಕ್ಕರಿಸಿ ಚುಡಾಯಿಸಿ
ಅಪಚಾರ ಮಾಡುವ
ನೀಚಾರು ಇರುವರು
ಎಚ್ಚರ ಎಚ್ಚರ
ಓ ಹೆಣ್ಣೆ ಓ ಹೆಣ್ಣೆ
ತಿಳಿದು ಬಾಳು
ಓ ನನ್ನ ಹೆಣ್ಣೆ
*****ರಾಜು ಹಾಸನ*****