ಇಡೀ ಜಗತ್ತೇ
ತಲೆ ತಗ್ಗಿಸಿ ಬಗ್ಗಿಸಿ
ಕಂಬನಿ ಮಿಡಿದ ದಿನ
ಬಡವ ಬಲ್ಲಿದ ಸ್ತ್ರೀ
ಶೋಷಿತ ಮಕ್ಕಳು
ಕಂಗೆಟ್ಟು ದಿಕ್ಕೆಟ್ಟು
ಗೊಳಾಡಿ ಮರುಗಿ
ಕಣ್ಣೀರಿಟ್ಟ ದಿನ
ಮಾನವ ಕುಲಕ್ಕೆ
ಬರಸಿಡಿಲು ಬಡಿದು
ಕಾರ್ಮೋಡವೇ
ಆವರಿಸಿದ ದಿನ
ಮಹಾ ಸಾಗರದಂತೆ
ಜನ ಸಾಗರವೇ
ತುಂಬಿ ತುಳುಕಿ
ಉಕ್ಕಿ ಹರಿದು
ಬಂದ ದಿನ
ನಮ್ಮ ನಿಮ್ಮೆಲ್ಲರ
ಜೀವಾ ಜೀವನದ
ಜೀವನಾಡಿ ಮಿಡಿತ
ದೀನ ದಲಿತರ
ನಾಯಕ ಬಂಧು
ಮಹಾ ನಾಯಕ
ನನ್ನ ಒಡಯ
ಬಾಬಾ ಸಾಹೇಬ್ ರ
ಪರಿನಿರ್ವಾಣ ದಿನ
ಹುಟ್ಟಿ ಬೆಳೆದು ಆಟವಾಡಿ
ಕುಡಿದು ತಿಂದು ಸೇವಿಸಿ
ಸತ್ತು ಸಮಾಧಿಯಾಗುವುದು
ಒಂದೇ ನೆಲದ ಜಲ
ಗಾಳಿ ಅನ್ನವಾದರು
ಭಿನ್ನ ಬಿಂಕ್ಕಣ ಯಾಕೆ
ಜಾತಿ ಧರ್ಮದ ಮಾದ ಯಾಕೆ
ಮೇಲು ಕೀಳಿನ ಅಂತರ ಯಾಕೆ
ಬಡವ ಶ್ರೀಮಂತನ ತಾರತಮ್ಯ ಯಾಕೆ
ಗಂಡು ಹೆಣ್ಣಿನ ಧೋರಣೆ ಯಾಕೆ
ಎಲ್ಲಾ ಬಿಟ್ಟು ಎಲ್ಲಾ ತೊರೆದು
ಮೊದಲು ಮಾನವನಾಗು
ಹಾದಿ ಬೀದಿ
ಊರು ಕೇರಿ
ಜಾತಿ ಜನಾಂಗ
ಮತ ಧರ್ಮದ
ನೂರೆಂಟು
ಸಾವಿರಾರು
ಮುಕ್ಕೋಟಿ
ದೇವರುಗಳಿದ್ದರು
ಕಟ್ಟಿ ಕೊಡುವುದಿಲ್ಲ
ನಿನ್ನಗೆ ಮನೆ ಮಠ
ಸೂರು ನೀರು
ಬದುಕು ಬಾಳು
ಆದರೂ ನಿಂತಿಲ್ಲ
ಕಲ್ಲು ಕಂಬವ
ದೇವರೆಂದು
ಪೂಜಿಸುವುದು
ಇದು ಎಂತಹ
ಮೂರ್ಖತನವೋ
ನಿನ್ನಂತೆ ನೀ
ನಿನ್ನ ಇಷ್ಟಕ್ಕೆ ನೀ
ಬದುಕಿ ಬಾಳಲು
ಸೂರು ನೀರು
ಮನೆ ಮಠ
ಕಟ್ಟಿ ಕೊಟ್ಟಿದ್ದು
ಗುಡಿಯೊಳಗಿನ
ಕಲ್ಲ ಕಂಬವಲ್ಲ
ಬಾಬಾ ಸಾಹೇಬ್ ರು
ಬರೆದ ಸಂವಿಧಾನ
******ರಾಜು ಹಾಸನ******
ನಿನ್ನ ಕಾಯುವುದು
ಗುಡಿಯೊಳಗಿನ
ಕಲ್ಲು ಕಂಬದ
ಮರದ ದಿಮ್ಮಿಯ
ಮಣ್ಣು ಮುದ್ದೆಯ
ಗೊಂಬೆ ದೇವರಲ್ಲ
ಬಾಬಾ ಸಾಹೇಬರು
ಬರೆದ ಸಂವಿಧಾನ
ಅವರೆ ನಮ್ಮ
ನಿಮ್ಮ ದೇವರು
ತಿಳಿದು ಬಾಳಿರಿ
ಮುಗ್ಧ ಮನಸಿನ
ಮುಗ್ಧ ಜನಗಳೇ
ವಿಶ್ವ ಮಾನವರೇ
******ರಾಜು ಹಾಸನ******
ಜಂಬ ಗಿಂಬ ಬೇಡ
ಅಹಂಕಾರ ಅಹಂ ಬೇಡ
ಹುಟ್ಟಿ ಸಾಯಬೇಕು
ಬದುಕಬೇಕು ಬಾಳಬೇಕು
ಸಂವಿಧಾನದ ಸೂರಿನಡಿ
ಬಾಬಾ ಸಾಹೇಬ್ ರ ಪಾದದಡಿ
ಯಾರೇ ಏನೇ ಎಷ್ಟೇ
ಸಂಪಾದನೆ ಮೇಲೆ
ಸಂಪಾದನೆ
ಮನೆ ಮೇಲೆ ಮನೆ
ಸಿರಿ ಸಂಪತ್ತಿನ ಮೇಲೆ
ಸಿರಿ ಸಂಪತ್ತು
ಕೂಡಿಟ್ಟು ಬಚ್ಚಿಟ್ಟು
ಹುತ್ತಿಟ್ಟು ಮುಚ್ಚಿಟ್ಟು
ಸಿರಿವಂತನಾದರು
ಬಾಬಾ ಸಾಹೇಬ್ ರ
ಕಾಲ ಧೂಳಿಗು
ಸರಿ ಸಮ ಯಾರು ಇಲ್ಲ
ಇಂದು ಇಲ್ಲ ಮುಂದೆನೂ
ಹುಟ್ಟಿ ಬರೋದು ಇಲ್ಲ
ಇದು ಏನು ದೇವರು
ಇದು ಎಂತಾ ದೇವರು
ಹಣ್ಣು ಕಾಯಿ
ಮುರಿದು ಹೊಡೆದು
ಕೊಟ್ಟರು ತಿನ್ನದ
ಮೂಸಿ ನೋಡದ ದೇವರು
ಕುರಿ ಕೋಳಿ ಹಂದಿ
ಎಮ್ಮೆಯ ಬಲಿ ಕೊಟ್ಟರೆ
ಕುಡಿದು ತಿನ್ನುವುದೇ
ಕುರಿ ಕೋಳಿ ಹಂದಿ
ಎಮ್ಮೆಯ ಮಾಂಸರಕ್ತ
ಕೂಗಿ ಗೋಗರೆದು
ಬೆಂಕಿ ಕೆಂಡವಾ
ತುಳಿದು ನೆಡೆದರು
ಗುಡಿಯ ಸುತ್ತ
ಬಿದ್ದು ಹೊರಳಾಡಿ
ತಲೆ ಚಚ್ಚಿ ಬೇಡಿದರು
ಬಾರದ ದೇವರು
ತಮಟೆ ಪೀಪಿ ಸದ್ದಿಗೆ
ವಾಲಾಡಿ ತೇಲಾಡಿ
ಕುಣಿದು ಕುಪ್ಪಳಿಸಿ
ಬೊಬ್ಬೆ ಹೊಡೆದು
ಕೇಕೆ ಹಾಕಿ ಬರುವುದು
ಜನರ ಮೈ ಮೇಲೆ
ಇದು ಏನು ದೇವರು
ಇದು ಎಂತಾ ದೇವರು
*******ರಾಜು ಹಾಸನ*******