Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ನೀಲವರ್ಣ ಆಗಸದ ಕೆಳಗಡೆ
ಕಣ್ಣಾಮುಚ್ಚಾಲೆ ಆಡುತ್ತಿರುವ
ಕಪ್ಪು ಬಿಳಿಯ ಬಣ್ಣ ಹೊದ್ದ
ಮೋಡಗಳೆ ಹೇಳಿ ನೀವ್ಯಾರು
ಒಮ್ಮೆ ಮಗುವಾಗಿ ಕಾಣುತಲಿ
ಮತ್ತೆ ಗುರುವಾಗಿ ಕಾಣುತಲಿ
ಚಂದದ ಚಿತ್ತಾರ ಮೂಡಿಸುವ
ಬೆಳ್ಳಿಯ ಮೋಡಗಳೆ ನೀವ್ಯಾರು
ಕೃಷ್ಣನ ರಥ ಕುದುರೆಯ ತೋರಿ
ಬೆಟ್ಟ ಗುಡ್ಡಗಳ ಆಕೃತಿ ನಿರ್ಮಿಸಿ
ಸುರಿವ ಜಲಧಾರೆಯ ಮುದ್ರಿಸಿ
ಚಲಿಸುವ ಮೋಡಗಳೆ ನೀವ್ಯಾರು
ಸಾಗರದ ಮೇಲಿಂದೆದ್ದು ಬಂದು
ಸೂರ್ಯ ಚಂದ್ರಮರನು ಮುಚ್ಚಿ
ಬಿರುಗಾಳಿಗೆ ಬರಸಿಡಿಲು ಸಿಡಿಸಿ
ಮಳೆಯ ಸುರಿಸುವ ನೀವ್ಯಾರು
ಆಸ್ತಿಕರಿಗೆ ದೇವರಾಗಿ ಗೋಚರಿಸಿ
ನಾಸ್ತಿಕರ ಭಾವದಲಿ ಹೊಗೆಯಾಗಿ
ವಿಜ್ಞಾನಿಗಳಿಗೆ ನೀರಾವಿ ಎಂತೇನಿಸಿ
ಚಲಿಸುವ ಮೋಡಗಳೆ ನೀವ್ಯಾರು
ಕಲ್ಮೇಶ ಬಡಿಗೇರ
9743539657
.......ಬಾದಾಮಿ.....
- Kalmesh Badiger
18 Nov 2020, 05:27 pm
ಮಾನವನಾಗಿ
ಹುಟ್ಟಿ ಬೆಳೆದು
ನಾಗರಿಕನಾಗಿ ಬದುಕಿ
ಸಾಯುವ ಮಧ್ಯ
ಜಾತಿ ಧರ್ಮದ
ಬಿಂಕ ಬಿನ್ನಾಣವೇಕೆ
ಅನಾಗರಿಕನಾಗಿ ನೂರೆಂಟು
ಮುಖವಾಡ ಕಟ್ಟಿಕೊಂಡು
ಮೂಢನಂಬಿಕೆಯ
ತಲೆಗೆ ಸುತ್ತಿಕೊಂಡು
ಮನದಲ್ಲಿ ದ್ವೇಷ
ಅಸೂಯೆ ತುಂಬಿಕೊಂಡು
ಘರನೆ ಘರಘರನೆ
ಸುತ್ತಿ ತಿರುಗುವ ಹುಚ್ಚು
ಮನಸ್ಸು ನಿನಗೇಕೆ
ಓ ಮನುಜ ವಿಶ್ವ ಮನುಜ
ಹುಟ್ಟಿದಾಗ ಯಾವ
ಜಾತಿ ಧರ್ಮದ ಅರಿವಿಲ್ಲ
ಸತ್ತಾಗ ಯಾವ
ಜಾತಿ ಧರ್ಮದ ಹಣೆಪಟ್ಟಿಯು
ಯಾರ ಹಣೆ ಯಾರು
ಎದೆಯ ಮೇಲು ಬರೆದಿಲ್ಲ
ಬದುಕಿದ್ದಾಗ ಮಾತ್ರ
ನೂರೆಂಟು ಜಾತಿ ಧರ್ಮವ
ಕಟ್ಟಿಕೊಂಡು ಹೊಡೆದಾಡಿ
ಬಡಿದಾಡಿ ಸಾಯುವಿರಿ ಏಕೆ
ಓ ಮೂಢ ಜನಗಳೇ
ಎಲ್ಲರೂ ಬದುಕು ಬಾಳಿರಿ
ಒಂದೇ ತಾಯಿಯ ಮಕ್ಕಳಂತೆ
ಓ ಮನುಜ ವಿಶ್ವ ಮನುಜ
- ರಾಜು ಹಾಸನ
18 Nov 2020, 11:01 am
ಧರೆ ಒಣಗಿ ದೂಳೆದ್ದು ಹಾರಿರಲು
ಉರಿಬಿಸಿಲು ಸೊರಗಿ ಕರಗಿರಲು
ಮೋಡಗಳು ಅಪ್ಪಿ ಮುತ್ತಿಕ್ಕಲು
ಧರೆಗೆ ಉದುರಿತು ಮೊದಲ ಮಳೆ
ತುಂತುರು ಮಳೆಹನಿಯ ಆಟದಲಿ
ತವಕದಲ್ಲಿ ಹೊರಬಂದು ಕುಣಿದು
ಕಣ್ಮನವ ತಣಿಸಿ ಕೇಕೆಯನು ಹಾಕಿ
ಕರುಣದಲಿ ಕೈ ಮುಗಿದರು ರೈತಜನ
ಸಂಗಾತಿಯ ಗುಂಗಿನಲಿ ಹುಚ್ಚಾದವ
ಇನಿಯನ ಬರುವಿಕೆಯ ಕಾದು ನಿಂತ
ಹಸಿ ಬಿಸಿಯ ಪ್ರೇಮಿಗಳ ಮನಸಿನಲಿ
ಹೊಸ ಗೀತೆ ಹಾಡಿಸಿದ ಮೊದಲ ಮಳೆ
ಕುಪ್ಪಳಿಸಿ ಕುಣಿದು ಧನಿದ ಚಿಣ್ಣರಿಗೆ
ಸಿಹಿ ನೀಡಿ ಅಮ್ಮ ಮುದ್ದಿಸುತಿರಲು
ಮೇಘರಾಜನೆ ಸೋತು ಮಗುವಾಗಿ
ಧೇರೆಗಿಳಿದು ಕರಗಿ ನೀರಾಗಿ ಹರೆದ
ಭುವಿಯ ಜೀವಗಳೆಲ್ಲ ಬಾಯ್ತೆರೆದು
ಮೊದಲ ಮಳೆಹನಿಯ ರುಚಿ ಸವೆದು
ತುಂತುರು ಮಳೆಹಾಡಿನಲಿ ನಲಿ ನಲಿದು
ದೇವನಲಿ ಧನ್ಯವಾದಗಳ ಅರ್ಪಿಸಿದವು
ಕಲ್ಮೇಶ ಬಡಿಗೇರ
9743539657
......ಬಾದಾಮಿ...
- Kalmesh Badiger
17 Nov 2020, 05:35 pm
ಕಂಡವರ ಹೆಂಡತಿಯರ
ಚುಡಾಯಿಸಿದರೆ
ಚುಚ್ಚಿಬಿಡುವರು
ಕೊಚ್ಚಿ ಬಿಡುವರು
ಉಸಿರಾಡದ ಹಾಗೆ
ಈ ಮೂಢ ಜನರು
ಪೂಜಿಸುವರಯ್ಯ
ಪರಸ್ತ್ರೀಯರ ಪೀಡಿಸುವ
ನೀಚನನ್ನು ಪರಮಾತ್ಮನೆಂದು
ಎಂತಹ ಕರ್ಮಕಾಂಡವಯ್ಯ
ಕಂಡವರ ಹೆಂಡತಿಗೆ
ಘಳ ಹಾಕುವ ನಮರ್ದ
ನಪುಂಸಕ ಶಂಡ ದೇವರು
ಪರಮಾತ್ಮನಂತೆ
ಏನು ಕರ್ಮವೂ
ಎಂತಹ ಧರ್ಮವೂ
ಪ್ರೀತಿಸಿ ಮದುವೆಯಾಗಲು
ಎದೆ ಗುಂಡಿಗೆಯಲ್ಲಿ ತಾಕತ್ತು
ನರವಿಲ್ಲದ ಪೀಡೆಯು
ಮೋಸ ಮಾಡಿ ಸುತ್ತುತ್ತಿದೆ
ಗಾಳಿ ನಾಯಿಯಂತೆ
ಪರ ಪತ್ನಿಯರ ಬೆನ್ನ ಹಿಂದೆ
ಇದು ಒಂದು ದೇವರಂತೆ
ಇದು ಎಂತಹ ದೇವರೋ
ಯಾವ ಸೀಮೆಯ ದೇವರೋ
ನಾ ಎಲ್ಲೂ ಕಾಣೆನು
ಈ ಕರ್ಮಕಾಂಡವ
ಅಂಧ ಭಕ್ತರ ಅಂಧಭಕ್ತಿಯ
- ರಾಜು ಹಾಸನ
17 Nov 2020, 12:45 am
ತನ್ನ ಮಗಳನ್ನೇ
ಮದುವೆಯಾದ
ನೀಚ ದೇವರು
ತನ್ನ ಹಣೆಬರಹವನ್ನೆ
ತಾನೇ ನೆಟ್ಟಗೆ
ಬರೆದುಕೊಳ್ಳಲಾಗದ
ಅನಿಷ್ಠ ದೇವರು
ಗೀಚಿರುವುದಂತೆ
ಜನರ ಹಣೆಬರಹ
ಯಾವನೋ ಅವನು
ಎಂತಾ ಮುಟ್ಟಳನಿರಬೇಕು
ಹಾಗೇ ಹೀಗೆಂದು
ಕಾಗಕ್ಕ ಗುಬ್ಬಕ್ಕನ
ಕಥೆಯ ಕಟ್ಟಿದವನು
ಅದನ್ನೇ ನಂಬಿದವನು
ಇನ್ನೆಂತಹ ಮುಟ್ಟಳ
ಮೂರ್ಖನಿರಬೇಕಯ್ಯ
ಯಾರ ಹಣೆಬರಹವನ್ನು
ಯಾರು ಬರೆಯುವುದಿಲ್ಲ
ಎಲ್ಲರ ಹಣೆಬರಹವು
ಯಾವ ದೇವರ ಕೈಯಲ್ಲಿಲ್ಲ
ಅವರವರ ಹಣೆಬರಹ
ಅವರವರ ನಡೆ ನುಡಿ
ಕಾಯಕದಲ್ಲಿರುವುದು
ತಿಳಿಯೋ ಮನುಜ
- ರಾಜು ಹಾಸನ
16 Nov 2020, 11:30 pm
ದೀಪ ಬೆಳಗುವಂತ ದೀಪಾವಳಿ
ಕತ್ತಲೆ ಕಳೆಯುವಂತ ದೀಪಾವಳಿ
ಅಜ್ಞಾನ ಅಳಿಸುವಂತ ದೀಪಾವಳಿ
ಸುಜ್ಞಾನ ದರ್ಶನದ ದೀಪಾವಳಿ
ಶೃಂಗರಿಸಿ ತಳಿರು ತೋರಣ ದಿಂದ
ಬಣ್ಣದ ಆಕಾಶ ಬುಟ್ಟಿಯನು ಕಟ್ಟಿ
ಸಿಹಿ ತಿಂಡಿ ಹೋಳಿಗೆ ಹೂರಣವಿಟ್ಟು
ದೀಪವನು ಬೆಳಗಿಸುವ ದೀಪಾವಳಿ
ಹೂವುಗಳ ಸಾಲಲ್ಲಿ ಸುಗಂಧ ಸೂಸಿ
ಧೂಪ ದೀಪಗಳನ್ನು ಜಗಮಗಿಸುವ
ಕರ್ಪೂರ ಕಾಯಿ ಮೊಂಬತ್ತಿ ಅರ್ಪಿಸಿ
ಪೂಜಿಸುವ ನಮ್ಮ ಹಬ್ಬ ದೀಪಾವಳಿ
ಹೊಸ ಉಡುಗೆ ಹೊಸ ನಡಿಗೆ ಇಂದ
ಹೊಸ ಮಾತು ಹೊಸ ಬೆಸುಗೆಗಳಾಗಿ
ತುಸು ಆಸೆ ಇಂದ ತಾಯೆ ಕಾಯೆಂದು
ಲಕುಮಿಯ ಪಾರ್ಥಿಸುವ ದೀಪಾವಳಿ
ಮಗಳನ್ನು ಕರೆಸಿ ಅಳಿಯನಿಗೆ ತಿನಿಸಿ
ಮೊಮ್ಮಕಳ ಜೊತೆಗೆ ಆಡ್ವ ದೀಪಾವಳಿ
ತವರು ಮನೆ ಪ್ರೀತಿ ಹಬ್ಬದಲಿ ಕಣ್ತುಂಬಿ
ಒಂದಾಗಿ ಆಚರಿಸುವ ಹಬ್ಬ ದೀಪಾವಳಿ
ಕಲ್ಮೇಶ ಬಡಿಗೇರ
9743539657
.....ಬಾದಾಮಿ.......
- Kalmesh Badiger
16 Nov 2020, 05:26 pm
ಬದುಕಿನಲ್ಲಿ
ಹಣ ಅಂತಸ್ತು ಇಲ್ಲದ
ಬಡವನು ನಾನಾದರೂ
ಅಪ್ಪ ಅಮ್ಮನ ಪ್ರೀತಿಯಲ್ಲಿ
ನಾ ಶ್ರೀಮಂತ
ಕುಬೇರ ಕುಬೇರನಯ್ಯ
ಅಪ್ಪ ಅಮ್ಮನ
ಪ್ರೀತಿಯ ಮುಂದೆ
ಕರಗಿ ನೀರಾಗುವ
ಸಿರಿ ಸಂಪತ್ತು ಇಲ್ಲದಿದ್ದರೂ
ಚಿಂತೆಯಿಲ್ಲ ನನಗೆ
ಅಪ್ಪ ಅಮ್ಮನ ನಗು
ಖುಷಿ ಒಂದೇ
ನನಗೆ ಸಿರಿ ಸಂಪತ್ತು
ಹಣ ಬಲ
ಜನ ಬಲ ಇಲ್ಲದಿದ್ದರೂ
ನನ್ನ ತೋಳ್ ಬಲ
ಉಸಿರು ಇರುವ ತನಕ
ಸೇವೆ ಮಾಡುವೆನು
ನನ್ನ ಹಡೆದವರ ನನ್ನೆದೆಯ
ಗುಡಿಯಲ್ಲಿಟ್ಟು
ಪೂಜಿಸಿ ಆರಾಧಿಸುವೆನು
- ರಾಜು ಹಾಸನ
15 Nov 2020, 11:55 pm
ಆಡು ಮುಟ್ಟದ ಸೊಪ್ಪಿಲ್ಲ
ಜನರು ಮುಟ್ಟದ ಅನ್ನವಿಲ್ಲ
ಗಾಳಿ ಮುಟ್ಟದ ಜಗತ್ತಿಲ್ಲ
ಪ್ರೀತಿ ಮುಟ್ಟದ ಮನವಿಲ್ಲ
ಸೂರ್ಯ ಚಂದ್ರರು
ಇಲ್ಲದ ಭೂಮಿ ಇಲ್ಲ
ಬಾಬಾಸಾಹೇಬರು
ಓದದೆ ಇರುವ ಪುಸ್ತಕವಿಲ್ಲ
ಬಾಬಾಸಾಹೇಬರು
ಇಲ್ಲದೆ ಸಂವಿಧಾನವಿಲ್ಲ
ಸಂವಿಧಾನವಿಲ್ಲದೆ
ಈ ದೇಶ ನಾವು ನಿವು
ಯಾರು ಇಲ್ಲ
ಯಾರೂ ಇರೋದು ಇಲ್ಲ
- ರಾಜು ಹಾಸನ
14 Nov 2020, 11:17 pm
ಎಲ್ಲಿದೆ ಧರ್ಮ
ಎಲ್ಲಿದೆ ನ್ಯಾಯ ನೀತಿ
ಉಳ್ಳವರ
ಕಂಡರೆ ಜೈಕಾರ
ಇಲ್ಲದವರ
ಕಂಡರೆ ಧಿಕ್ಕಾರ
ಬಡವರ
ಕಂಡರೆ ತಿರಸ್ಕಾರ
ಉಳ್ಳವರಿಗೆ
ಇಲ್ಲ ಒಂದೇ ಒಂದು
ನೀತಿ ನಿಯಮ
ಜನ ಸಾಮಾನ್ಯರಿಗೆ
ಇರುವುದು ನೂರೆಂಟು
ನೀತಿ ನಿಯಮಗಳು
ನೀತಿ ನಿಯಮ
ಪಾಲಿಸದೆ ಇರುವ
ಜನ ಪ್ರತಿನಿಧಿಗೆ ಕಟ್ಟುವರು
ನಾಯಕನ ಹಣೆಪಟ್ಟಿ
ಭ್ರಷ್ಟಾಚಾರಿಗಳ
ಭ್ರಷ್ಟಾಚಾರದ ವಿರುದ್ಧ
ಧ್ವನಿ ಎತ್ತುವ
ನೀತಿ ನಿಯಮ ಪಾಲಿಸುವ
ಜನ ಸಾಮಾನ್ಯರಿಗೆ
ಕಟ್ಟುವರು ನಾಡ ದ್ರೋಹಿ
ದೇಶ ದ್ರೋಹಿ
ಧರ್ಮ ದ್ರೋಹಿ ಹಣೆಪಟ್ಟಿ
ಇವರು ಎಂತಾ
ಕೆಟ್ಟ ಸಮಾಜದ
ಎಂತಾ ಕೆಟ್ಟ ಜನರಯ್ಯ
ಅಧರ್ಮವೇ ತುಂಬಿ
ತುಳುಕುವ
ಈ ಕೆಟ್ಟ ಸಮಾಜದಲ್ಲಿ
ಎಲ್ಲಿದೆ ಧರ್ಮ
ಎಲ್ಲಿದೆ ನ್ಯಾಯ ನೀತಿ
*******ರಾಜು ಹಾಸನ******
- ರಾಜು ಹಾಸನ
14 Nov 2020, 02:46 pm
ಉಳ್ಳವರಿಗೆ
ದೀಪಗಳ ಹಬ್ಬ
ಬೆಳಕಿನ ಹಬ್ಬ
ಹರುಷದ ಹಬ್ಬ
ಬಡವರಿಗೆ
ಹಸಿವಿನ ಹಬ್ಬ
ಕತ್ತಲ ಹಬ್ಬ
ಕಣ್ಣೀರ ಹಬ್ಬ
ಹಬ್ಬ ಹರಿದಿನವೆಂದು
ಕುಣಿದು ಕುಪ್ಪಳಿಸಿ
ಮೋಜು ಮಸ್ತಿ
ಮಾಡುವ ಬದಲು
ಕಣ್ಣೀರ ಒರೆಸಿ
ಹಸಿದ ಹೊಟ್ಟೆಗೆ
ಅನ್ನ ಕೊಟ್ಟರೆ
ಬದುಕುಳಿಯುವುದು
ಬಡಪಾಯಿ ಜೀವಾ
ನಗು ನಗುತಾ ಬಾಳುವುದು
ನೊಂದು ಬೆಂದ ಜೀವಾ
ದೊರಕುವುದಯ್ಯ
ನಿನಗೆ ಮುಕುತಿ
ಬರುವುದಯ್ಯ ಪುಣ್ಯ
ಸಿಗುವುದಯ್ಯ
ಜನರ ಆಶಿರ್ವಾದ
ಹಬ್ಬ ಹರಿದಿನಗಳ
ಆಚರಣೆಯಿಂದ ಸಿಗುವ
ಖುಷಿ ಸಂತೋಷಕ್ಕಿಂತ
ಜನರ ಸೇವೆ ಮಾಡಿದಾಗ
ಸಿಗುವ ಖುಷಿ ನೆಮ್ಮದಿಯೇ
ನನಗೆ ಶ್ರೇಷ್ಠ ಮಿಗಿಲಯ್ಯ
*******ರಾಜು ಹಾಸನ*******
- ರಾಜು ಹಾಸನ
14 Nov 2020, 12:02 am