Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ವರ್ಣನೆ

ಮುಸ್ಸಂಜೆ ಮಬ್ಬಿನಲಿ
ನಲ್ಲನ ನೆನೆಯುತ
ಕುಂತಿಹಳು ನಲ್ಲೆ ಮೇಜಿನಲಿ
ಕಾರ್ಗತ್ತಲಲಿ ಹೋಳೆವ
ಚುಕ್ಕಿ ಚಂದ್ರಮನಂತೆ
ನೈಜ ಪ್ರಪಂಚವ ಮರೆಮಾಚಿ
ಗಲ್ಲಕೆ ಕೈಯನ್ನೂರುಗೋಲಾಗಿಸಿ

ಮನದನ್ನನ ಜೊತೆಗೂಡಿ ಹಾಡಿ ಪಾಡಿ ವಿಹರಿಸುತ್ತಿಹಳು ಮನದನ್ನೆ
ಸಹಸ್ರ ಕನಸ್ಸುಗಳ ಲೋಕದಿ
ಕಲ್ಪನೆಯ ಭ್ರಮರವನ್ನೇರಿ

ಪ್ರಿಯ ಕರನ ನೆನಪುಗಳು
ರಂಗೀರಿಸಿವೆ ಮಬ್ಬುಗತ್ತಲೊಳಗೆ
ಪ್ರಿಯತಮೆಯ ವದಕ್ಕೆ
ನಭದಿ ಹಾಲ್ಗರೆವ ಚಂದ್ರಮನಂತೆ

- HarishKumarm

06 Dec 2020, 06:42 pm

ರಂಗ ಕಲಾವಿದ

ಹೊಸಬಣ್ಣ ಹಳೆ ರೂಪಗಳ ಹೊದ್ದು
ಸೂತ್ರಧಾರನು ಆಡಿಸುವ ನಾಟಕಗಳ
ಆಳ ಅಗಲಕ್ಕಿಳಿದು ಆಟವ ಆಡುವ
ರಂಗ ಕಲಾವಿದನೆ ನಿನಗೆ ಶರಣಯ್ಯ

ಬದುಕು ಕಟ್ಟಲು ಜಗವನು ನಗಿಸುವೆ
ಒಮ್ಮೊಮ್ಮೆ ಕಣ್ಣೀರ ಹರಿವಂತೆಯು
ಸುರ ಅಸುರರ ಪಾತ್ರಗಳ ನಿರ್ವಹಿಸಿ
ಬದುಕಿನಲಿ ನೈಜತೆಯ ಮೆರೆದಿರುವೆ

ಹುಟ್ಟು ಸಾವ ಗೆದ್ದು ಬಂದ ದೊರೆ
ಒಂದು ದೇಹದ ವಿವಿದ ಪಾತ್ರಧಾರಿ
ಆಳು ಅರಸ ನವರಸಗಳ ನಾಯಕ
ಅದೆಷ್ಟು ಹೊಗಳಿದರು ಕಡಿಮೆ ನಿನಗೆ

ಆದರೂ ಒಂದೋತ್ತಿನ ಊಟಕ್ಕಾಗಿ ಪರದಾಡಿ ಕಾಡಿ ಬೇಡಿ ಅಭಿನಯಿಸಿ
ಕೈ ಮುಗಿದು ಸಂಸಾರದ ತೇರೆಳೆದು
ಜೀವನದ ನೌಕೆಯನ್ನು ನುಕುತಿರುವೆ

ಕೋರೋಣ ಮಹಾಮಾರಿಯಿಂದಾಗಿ
ಕಂಗಾಲಾಗಿ ಜೀವನವ ಗಟ್ಟಿ ಮಾಡಿ
ಹೊಲ ಗದ್ದೆ ಗಳಲಿ ದುಡಿದು ಉಂಡ
ಸಾಕಾರ ಮೂರ್ತಿಯೇ ನಿನಗೆ ಶರಣು

ಕಲ್ಮೇಶ ಬಡಿಗೇರ
......... ಬದಾಮಿ......

- Kalmesh Badiger

06 Dec 2020, 04:46 pm

ಮಹಾ ಪರಿನಿರ್ವಾಣ ದಿನ

ಇಡೀ ಜಗತ್ತೇ
ತಲೆ ತಗ್ಗಿಸಿ ಬಗ್ಗಿಸಿ
ಕಂಬನಿ ಮಿಡಿದ ದಿನ
ಬಡವ ಬಲ್ಲಿದ ಸ್ತ್ರೀ
ಶೋಷಿತ ಮಕ್ಕಳು
ಕಂಗೆಟ್ಟು ದಿಕ್ಕೆಟ್ಟು
ಗೊಳಾಡಿ ಮರುಗಿ
ಕಣ್ಣೀರಿಟ್ಟ ದಿನ
ಮಾನವ ಕುಲಕ್ಕೆ
ಬರಸಿಡಿಲು ಬಡಿದು
ಕಾರ್ಮೋಡವೇ
ಆವರಿಸಿದ ದಿನ
ಮಹಾ ಸಾಗರದಂತೆ
ಜನ ಸಾಗರವೇ
ತುಂಬಿ ತುಳುಕಿ
ಉಕ್ಕಿ ಹರಿದು
ಬಂದ ದಿನ
ನಮ್ಮ ನಿಮ್ಮೆಲ್ಲರ
ಜೀವಾ ಜೀವನದ
ಜೀವನಾಡಿ ಮಿಡಿತ
ದೀನ ದಲಿತರ
ನಾಯಕ ಬಂಧು
ಮಹಾ ನಾಯಕ
ನನ್ನ ಒಡಯ
ಬಾಬಾ ಸಾಹೇಬ್ ರ
ಪರಿನಿರ್ವಾಣ ದಿನ

- ರಾಜು ಹಾಸನ

06 Dec 2020, 12:59 pm

ಮೊದಲು ಮಾನವನಾಗು

ಹುಟ್ಟಿ ಬೆಳೆದು ಆಟವಾಡಿ
ಕುಡಿದು ತಿಂದು ಸೇವಿಸಿ
ಸತ್ತು ಸಮಾಧಿಯಾಗುವುದು
ಒಂದೇ ನೆಲದ ಜಲ
ಗಾಳಿ ಅನ್ನವಾದರು
ಭಿನ್ನ ಬಿಂಕ್ಕಣ ಯಾಕೆ
ಜಾತಿ ಧರ್ಮದ ಮಾದ ಯಾಕೆ
ಮೇಲು ಕೀಳಿನ ಅಂತರ ಯಾಕೆ
ಬಡವ ಶ್ರೀಮಂತನ ತಾರತಮ್ಯ ಯಾಕೆ
ಗಂಡು ಹೆಣ್ಣಿನ ಧೋರಣೆ ಯಾಕೆ
ಎಲ್ಲಾ ಬಿಟ್ಟು ಎಲ್ಲಾ ತೊರೆದು
ಮೊದಲು ಮಾನವನಾಗು

- ರಾಜು ಹಾಸನ

06 Dec 2020, 09:13 am

ಮೂರ್ಖತನ

ಹಾದಿ ಬೀದಿ
ಊರು ಕೇರಿ
ಜಾತಿ ಜನಾಂಗ
ಮತ ಧರ್ಮದ
ನೂರೆಂಟು
ಸಾವಿರಾರು
ಮುಕ್ಕೋಟಿ
ದೇವರುಗಳಿದ್ದರು
ಕಟ್ಟಿ ಕೊಡುವುದಿಲ್ಲ
ನಿನ್ನಗೆ ಮನೆ ಮಠ
ಸೂರು ನೀರು
ಬದುಕು ಬಾಳು
ಆದರೂ ನಿಂತಿಲ್ಲ
ಕಲ್ಲು ಕಂಬವ
ದೇವರೆಂದು
ಪೂಜಿಸುವುದು
ಇದು ಎಂತಹ
ಮೂರ್ಖತನವೋ


ನಿನ್ನಂತೆ ನೀ
ನಿನ್ನ ಇಷ್ಟಕ್ಕೆ ನೀ
ಬದುಕಿ ಬಾಳಲು
ಸೂರು ನೀರು
ಮನೆ ಮಠ
ಕಟ್ಟಿ ಕೊಟ್ಟಿದ್ದು
ಗುಡಿಯೊಳಗಿನ
ಕಲ್ಲ ಕಂಬವಲ್ಲ
ಬಾಬಾ ಸಾಹೇಬ್ ರು
ಬರೆದ ಸಂವಿಧಾನ
******ರಾಜು ಹಾಸನ******

- ರಾಜು ಹಾಸನ

05 Dec 2020, 11:57 pm

ಚೆಂದಾಮಾಮ

ಸದ್ದಿಲ್ಲದೆ ಬಾನಂಗಳದಲಿ ಉದಯಿಸುವನು ರವಿಮಾಮ
ಮುತ್ತಿನಚೆಂಡಿನಂತೆ ಹೊಳೆತಿಹನು ರವಿತೇಜ !

ಮೇಲೆರುತ ಜಗಕೆ ಬೆಳಕನು ಮೊಡಗಳ ಮರೆಯಲಿ ನಾಚುತ ನಯನದಿ ಉತ್ತುಂಗಕ್ಕೆರುವನು ಮನ್ಮತರಾಜ !

ನಲಿಯುವ ಮಕ್ಕಳಿಗೆ ಚಂದಾಮಾಮನಾಗಿ ಎಷ್ಟು ದೂರಹೋದರೂ ನನ್ನ ಜೊತೆಗೆ ಬಂದಂತೆ ಭಾಸವಾಗುವ ಮಂದಹಾಸದಕಣಜ !

ನೆಸರದಲಿ ಇಳಯರಾಜ ಕುಮಾರನಾಗಿ ಹುಣ್ಣುಮೆಯ ದಿನ ಜಗಜಗಿಯವ ಜಗದೆಕಮಲ್ಲನಾಗಿ ಬೆಳಕನು ಪ್ರತಿಬಿಂಬಿಸುವ ಮದಗಜ !

ಯಲ್ಲಪ್ಪ ಎಸ್ ಮನ್ನಿಕಟ್ಟಿ
೯೫೯೧೨೦೦೦೪೨
........ಗುಳೇದಗುಡ್ಡ....

- Guru

05 Dec 2020, 04:26 pm

ಮುಗ್ಧರು

ನಿನ್ನ ಕಾಯುವುದು
ಗುಡಿಯೊಳಗಿನ
ಕಲ್ಲು ಕಂಬದ
ಮರದ ದಿಮ್ಮಿಯ
ಮಣ್ಣು ಮುದ್ದೆಯ
ಗೊಂಬೆ ದೇವರಲ್ಲ
ಬಾಬಾ ಸಾಹೇಬರು
ಬರೆದ ಸಂವಿಧಾನ
ಅವರೆ ನಮ್ಮ
ನಿಮ್ಮ ದೇವರು
ತಿಳಿದು ಬಾಳಿರಿ
ಮುಗ್ಧ ಮನಸಿನ
ಮುಗ್ಧ ಜನಗಳೇ
ವಿಶ್ವ ಮಾನವರೇ
******ರಾಜು ಹಾಸನ******

- ರಾಜು ಹಾಸನ

05 Dec 2020, 12:00 am

ಭೀಮ್ ರಾವ್

ಜಂಬ ಗಿಂಬ ಬೇಡ
ಅಹಂಕಾರ ಅಹಂ ಬೇಡ
ಹುಟ್ಟಿ ಸಾಯಬೇಕು
ಬದುಕಬೇಕು ಬಾಳಬೇಕು
ಸಂವಿಧಾನದ ಸೂರಿನಡಿ
ಬಾಬಾ ಸಾಹೇಬ್ ರ ಪಾದದಡಿ

ಯಾರೇ ಏನೇ ಎಷ್ಟೇ
ಸಂಪಾದನೆ ಮೇಲೆ
ಸಂಪಾದನೆ
ಮನೆ ಮೇಲೆ ಮನೆ
ಸಿರಿ ಸಂಪತ್ತಿನ ಮೇಲೆ
ಸಿರಿ ಸಂಪತ್ತು
ಕೂಡಿಟ್ಟು ಬಚ್ಚಿಟ್ಟು
ಹುತ್ತಿಟ್ಟು ಮುಚ್ಚಿಟ್ಟು
ಸಿರಿವಂತನಾದರು
ಬಾಬಾ ಸಾಹೇಬ್ ರ
ಕಾಲ ಧೂಳಿಗು
ಸರಿ ಸಮ ಯಾರು ಇಲ್ಲ
ಇಂದು ಇಲ್ಲ ಮುಂದೆನೂ
ಹುಟ್ಟಿ ಬರೋದು ಇಲ್ಲ

- ರಾಜು ಹಾಸನ

04 Dec 2020, 11:24 pm

ಅಂಚೆ ಪೆಟ್ಟಿಗೆ

ಕಾಲ ಕಾಲಕ್ಕೆ ಸುದ್ದಿಯ ಕೊಡುತ್ತಲಿ
ತನ್ನೊಳಗೆ ಒಂದು ರಹಸ್ಯವ ಹೊತ್ತು
ದೂರದ ತಂದೆ ತಾಯಿಗೆ ನೆನಪಿಸಿದೆ
ಸ್ನೇಹ ಪ್ರೀತಿಯ ಓಲೆಯ ಒದಗಿಸಿದೆ

ಹಳ್ಳಿಯ ಜನರಿಗೆ ದೇವರೆ ನೀ ಆಗಿ
ರೈತನ ಜೊತೆಗೆ ನಿನ್ನಯ ಪೂಜಿಸಿ
ಮಳೆ ಚಳಿ ಬಿಸಿಲು ಗಾಳಿಗೆ ಹೆದರದೆ
ಮೈಯ್ಯನು ಒಡ್ಡಿ ಹೆದರದೆ ನಿಂತೆ

ಜನನ ಹಬ್ಬ ಹರಿದಿನಗಳ ತಿಳಿಸುತ್ತಾ
ಕಥೆ ಕವನ ಪುಸ್ತಕಗಳ ಒದಗಿಸುತ್ತಾ
ಪತ್ರಿಕೆ ಕಾಂಚಾಣ ಜನರಿಗೆ ನೀಡುತ್ತಾ
ಜಗದಲಿ ನೀನೆ ಮಹಾನಾಯಕ ನಾದೆ

ವೃದ್ದರಿಗೆಲ್ಲ ಪಿಂಚಣಿ ಒದಗಿಸುತ್ತಾ
ಅಂಗವಿಕಲರಿಗೆ ಜೀವನ ನೀಡುತ್ತಾ
ವಿಧವೆಯರ ಬಾಳಿಗೆ ದೀಪವು ಆದೆ
ಆಶಾಜ್ಯೋತಿ ಯೆ ಆಗಿರುವೆ ನೀನು

ಕೇಸರಿ ಇಂದಾ ಕೆಂಪಾಗಿರುವೆ ನೀನು
ಕಾಲನ ಹೊಡೆತಕ್ಕೆ ಮಂಕಾಗಿರುವೆ
ಮತ್ತೆ ಪುಟಿದೇಳು ಮೊದಲಿನ ಹಾಗೆ
ಅಂಚೆ ಪೆಟ್ಟಿಗೆ ಜನ ನೆನೆವರು ನಿನ್ನ

ಕಲ್ಮೇಶ ಬಡಿಗೇರ
೯೭೪೩೫೩೯೬೫೭
.......ಬಾದಾಮಿ.......

- Kalmesh Badiger

04 Dec 2020, 05:27 pm

ಹಳ್ಳಿ ಹಬ್ಬ

ಇದು ಏನು ದೇವರು
ಇದು ಎಂತಾ ದೇವರು
ಹಣ್ಣು ಕಾಯಿ
ಮುರಿದು ಹೊಡೆದು
ಕೊಟ್ಟರು ತಿನ್ನದ
ಮೂಸಿ ನೋಡದ ದೇವರು
ಕುರಿ ಕೋಳಿ ಹಂದಿ
ಎಮ್ಮೆಯ ಬಲಿ ಕೊಟ್ಟರೆ
ಕುಡಿದು ತಿನ್ನುವುದೇ
ಕುರಿ ಕೋಳಿ ಹಂದಿ
ಎಮ್ಮೆಯ ಮಾಂಸರಕ್ತ
ಕೂಗಿ ಗೋಗರೆದು
ಬೆಂಕಿ ಕೆಂಡವಾ
ತುಳಿದು ನೆಡೆದರು
ಗುಡಿಯ ಸುತ್ತ
ಬಿದ್ದು ಹೊರಳಾಡಿ
ತಲೆ ಚಚ್ಚಿ ಬೇಡಿದರು
ಬಾರದ ದೇವರು
ತಮಟೆ ಪೀಪಿ ಸದ್ದಿಗೆ
ವಾಲಾಡಿ ತೇಲಾಡಿ
ಕುಣಿದು ಕುಪ್ಪಳಿಸಿ
ಬೊಬ್ಬೆ ಹೊಡೆದು
ಕೇಕೆ ಹಾಕಿ ಬರುವುದು
ಜನರ ಮೈ ಮೇಲೆ
ಇದು ಏನು ದೇವರು
ಇದು ಎಂತಾ ದೇವರು
*******ರಾಜು ಹಾಸನ*******

- ರಾಜು ಹಾಸನ

03 Dec 2020, 11:35 pm